Tag: ಆಫರ್ ಆಡಿಯೋ

  • ಮತ್ತೆ ನಮ್ಮ ಪಕ್ಷಕ್ಕೆ ಬಾ, ಮಂತ್ರಿ ಮಾಡ್ತೀನಿ: ಬಿ.ಸಿ.ಪಾಟೀಲ್‍ಗೆ ಬಿಎಸ್‍ವೈ ಬಿಗ್ ಆಫರ್

    ಮತ್ತೆ ನಮ್ಮ ಪಕ್ಷಕ್ಕೆ ಬಾ, ಮಂತ್ರಿ ಮಾಡ್ತೀನಿ: ಬಿ.ಸಿ.ಪಾಟೀಲ್‍ಗೆ ಬಿಎಸ್‍ವೈ ಬಿಗ್ ಆಫರ್

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರ ಬಂದಿದ್ದು, ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಆರೋಪಗಳನ್ನು ಕಾಂಗ್ರೆಸ್ ಮಾಡುತ್ತಿದೆ.

    ಇತ್ತ ಕಾಂಗ್ರೆಸ್‍ನ ಕೆಲ ಶಾಸಕರಿಗೆ ಬಿಜೆಪಿ ನಾಯಕರು ಆಫರ್ ಮಾಡಿದ್ದಾರೆ ಎನ್ನಲಾದ ಆಡಿಯೋಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಅವ್ರಿಗೆ ಆಫರ್ ಕೊಟ್ಟಿರುವ ವಿ.ಎಸ್.ಉಗ್ರಪ್ಪ ಆಡಿಯೋವನ್ನು ಬಿಡುಗಡೆ ಮಾಡಿದ್ರು. ಕೆಲವು ಗಂಟೆಗಳ ಹಿಂದೆಯೇ ಆಫರ್ ಆಡಿಯೋ ಬಿಡುಗಡೆ ಮಾಡ್ತಿದ್ದು, ಬಿಜೆಪಿ ನಾಯಕರು ಅದು ನಮ್ಮ ಧ್ವನಿ ಅಲ್ಲ ಅಂತಾ ಹೇಳಿ ಆರೋಪವನ್ನು ಅಲ್ಲಗಳೆಯುತ್ತಿದ್ದಾರೆ.

    ನನ್ನ ಮೇಲೆ ನಿನಗೆ ವಿಶ್ವಾಸವಿದೆ ತಾನೇ, ಕೊಚ್ಚಿನ್ ಗೆ ಹೋಗುವುದನ್ನು ಬಿಟ್ಟು ಹಿಂದಕ್ಕೆ ಬಾ. ಒಂದು ವೇಳೆ ನೀನು ಕೊಚ್ಚಿನ್ ಗೆ ಹೋದ್ರೆ ನೀನು ನಮ್ಮ ಕೈಗೆ ಸಿಗಲ್ಲ ಅಂತಾ ಬಿಎಸ್ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ ರಿವೀಲ್ ಮಾಡಿದೆ.

    ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಗೆ ಸಚಿವ ಸ್ಥಾನದ ಆಮಿಷ ಒಡ್ಡುತ್ತಿರುವ ಆಡಿಯೋ ಕ್ಲಿಪ್ ಮತ್ತು ವಿವರ ಇಲ್ಲಿದೆ.

    ಬಿಎಸ್ ವೈ ಆಪ್ತ (ಬಿ.ಸಿ. ಪಾಟೀಲರಿಗೆ): ಸಾರ್ ಒಂದುನಿಮಿಷ ಸಾಹೇಬರು ಮಾತನಾಡುತ್ತಾರೆ
    ಬಿಎಸ್ ವೈ: ಹಲೋ?ಹಲೋ..
    ಬಿ.ಸಿ.ಪಾಟೀಲ್: ಅಣ್ಣಾ ಕಂಗ್ರಾಜುಲೇಶನ್ ? ಹೇಳಿ? ನಮಸ್ಕಾರ…
    ಬಿಎಸ್ ವೈ: ಹಲೋ? ಹಲೋ?ಎಲ್ಲಿದ್ದೀಯಪ್ಪಾ??
    ಬಿ.ಸಿ. ಪಾಟೀಲ್: ಅಣ್ಣಾ ನಾವು ಕೊಚ್ಚಿನ್ ಗೆ ಹೋಗುತ್ತಿದ್ದೇವೆ?. ಕೊಚ್ಚಿನ್ ಗೆ ಹೋಗುತ್ತಿದ್ದೇವೆ? ಬಸ್ ನಲ್ಲಿದ್ದೇನೆ.

    ಬಿಎಸ್‍ವೈ: ಹೋಗಬಾರದಿತ್ತು..! ಬಾರಯ್ಯ ನೀನು ನಿನಗೇನು ಹೆಲ್ಪ್ ಬೇಕೋ ಮಾಡುತ್ತೇನೆ! ಮಂತ್ರಿಯಾಗುವಂತೆ ಬಾ? ನಿನಗೇನು ಬೇಕೋ ಅದನ್ನು ಮಾಡುತ್ತೇನೆ.
    ಬಿ.ಸಿ. ಪಾಟೀಲ್: ಆಯಿತು ಅಣ್ಣಾ?ನೀವು ಮೊದಲೇ ಒಂದೂ ಚೂರು ಹೇಳಿದ್ದರೇ?
    ಬಿ.ಎಸ್. ವೈ: ಟೈಮ್ ಕರೆಕ್ಟಾಗಿ ತಾನೇ ಹೇಳಬೇಕು!
    ಬಿ.ಸಿ. ಪಾಟೀಲ್: ಹೌದು?
    ಬಿ.ಎಸ್.ವೈ: ನೀನು ಹೋಗಬೇಡ? ಬಂದು ಬಿಡು?
    ಬಿ.ಸಿ. ಪಾಟೀಲ್: ಬಸ್ ನಲ್ಲಿ ಇದೀವಿ ಈಗ..

    ಬಿ.ಎಸ್.ವೈ: ಮನೆವ್ರು? ಏನಾದರು ಒಂದು ಕಾರಣ ಹೇಳಿಕೊಂಡು ವಾಪಾಸ್ ಬಾ!
    ಬಿ.ಸಿ. ಪಾಟೀಲ್: ನನ್ನ ಪೊಸಿಶನ್ ಏನ್ ಅಂತಾ?
    ಬಿ.ಎಸ್. ವೈ: ಯು ವಿಲ್ ಬಿಕಂ ದ ಮಿನಿಸ್ಟರ್ ದಟ್ಸ್ ಆಲ್!
    ಬಿ.ಸಿ. ಪಾಟೀಲ್: ಓ.ಕೆ. ಓ.ಕೆ. ಅಣ್ಣಾ? ನನ್ನ ಜತೆ ಇಬ್ಬರು ಮೂವರು ಇದ್ದಾರೆ!
    ಬಿ.ಎಸ್. ವೈ: ನನ್ನ ಮೇಲೆ ವಿಶ್ವಾಸವಿದೆ ತಾನೇ?? ಕರೆದು ಕೊಂಡು ಬಾ
    ಬಿ.ಸಿ. ಪಾಟೀಲ್ : ಖಂಡಿತ? ಖಂಡಿತ
    ಬಿ.ಎಸ್. ವೈ: ಹಾಗಾದರೆ ಹೋಗ ಕೂಡದು ನೀನು ವಾಪಾಸ್ ಬಾ

    ಬಿ.ಸಿ. ಪಾಟೀಲ್ : ಆಯ್ತಣ್ಣಾ?ಆಯ್ತಣ್ಣಾ!
    ಬಿ.ಎಸ್. ವೈ: ಒಂದು ಸಾರ್ತಿ ನೀನು ಕೊಚ್ಚಿನ್ ಗೆ ಹೋದರೆ ನೀನು ಸಿಗಲ್ಲ. ಅದು ಸಿಗದೇ ಇರುವ ವಿಷಯ
    ಬಿ.ಸಿ. ಪಾಟೀಲ್: ಆಯ್ತಣ್ಣಾ? ಆಯ್ತಣ್ಣಾ?
    ಬಿ.ಎಸ್. ವೈ: ಈಗೇನು ಮಾಡ್ತೀಯಾ? ಹೇಳು
    ಬಿ.ಸಿ. ಪಾಟೀಲ್: ತಾವು ಈಗ ಹೇಳಿದ್ದೀರಿ? ನಾನು ಐದು ನಿಮಿಷದಲ್ಲಿ ಹೇಳ್ತೀನಿ ಅಣ್ಣಾ
    ಬಿ.ಎಸ್. ವೈ: ಶ್ರೀರಾಮುಲುಗೆ ಫೋನ್ ಮಾಡಿ ಹೇಳು
    ಬಿ.ಸಿ. ಪಾಟೀಲ್: ಆಯ್ತಣ್ಣಾ? ಆಯ್ತಣ್ಣಾ