Tag: ಆಪರೇಷನ್ ಅಲಮೇಲಮ್ಮ

  • ತಾತನ ಅಗಲಿಕೆಯ ನೋವಿನಲ್ಲಿ ‘ಆಪರೇಷನ್‌ ಅಲಮೇಲಮ್ಮ’ ನಟ ರಿಷಿ

    ತಾತನ ಅಗಲಿಕೆಯ ನೋವಿನಲ್ಲಿ ‘ಆಪರೇಷನ್‌ ಅಲಮೇಲಮ್ಮ’ ನಟ ರಿಷಿ

    ಸ್ಯಾಂಡಲ್‌ವುಡ್ (Sandalwood) ನಟ ರಿಷಿ (Rishi) ಅವರ ಮನೆಯಲ್ಲಿ ಸೂತಕದ ಛಾಯೆ ಮನೆ ಮಾಡಿದೆ.  ತಾತನ (Grand Father) ಅಗಲಿಕೆಯ ನೋವಿನಲ್ಲಿದ್ದಾರೆ ರಿಷಿ. ತಾತನ ಬಗ್ಗೆ ಭಾವನಾತ್ಮಕ ಸಾಲುಗಳನ್ನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Rishi (@rishi_actor)

    ರಿಷಿ ಅವರ ತಾತ ಬೋರಯ್ಯ ಅವರು ಅಕ್ಟೋಬರ್ 8ರಂದು ನಿಧನರಾಗಿದ್ದಾರೆ. ನನ್ನ ಹೀರೋ, ನನ್ನ ತಾತ ಶಾಂತಿಯುತವಾಗಿ ನಿನ್ನೆ ನಮ್ಮನ್ನು ದೈಹಿಕವಾಗಿ ಅಗಲಿದ್ದಾರೆ ಎಂದು ನಟ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ನಾನು ‘ಹಿಟ್ ಅಂಡ್ ರನ್’ ಮಾಡಿಲ್ಲ: ನಟ ನಾಗಭೂಷಣ್

    ಆಪರೇಷನ್ ಅಲಮೇಲಮ್ಮ, ಕವಲುದಾರಿ, ನೋಡಿ ಸ್ವಾಮಿ ಇವನು ಇರೋದೇ ಹೀಗೆ, ರಾಮನ ಅವತಾರ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ರಿಷಿ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಭರತ ಬಾಹುಬಲಿ’ಯಲ್ಲಿ ರಿಷಿಗೇನು ಕೆಲಸ?

    ‘ಭರತ ಬಾಹುಬಲಿ’ಯಲ್ಲಿ ರಿಷಿಗೇನು ಕೆಲಸ?

    ‘ಮಾಸ್ಟರ್ ಪೀಸ್’ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಮಂಜು ಮಾಂಡವ್ಯ ನಾಯಕರಾಗಿ ‘ಭರತ ಬಾಹುಬಲಿ’ಯಾಗಿ ತೆರೆಮೇಲೆ ಬರ್ತಿರೋದು ಗೊತ್ತಿರೋ ವಿಚಾರ. ಈಗಾಗಲೇ ಚಿತ್ರವು ಭರ್ಜರಿ ಮೇಕಿಂಗ್ ಸೆಟ್‍ನಿಂದ ಸೆಂಟರ್ ಆಫ್ ಅಟ್ಯ್ರಾಕ್ಷನ್ ಆಗ್ತಿದೆ. ರಿಲೀಸ್ ಆದ ಟ್ರೈಲರ್ ಹಾಗೂ ವೀಡಿಯೋ ಸಾಂಗ್ ನೋಡಿದ ಪ್ರೇಕ್ಷಕ ಸಿನೆಮಾ ನೋಡೋಕೆ ಕಾತುರನಾಗಿದ್ದಾನೆ.

    ಚಿತ್ರದಲ್ಲಿ ಹಲವು ವಿಶೇಷತೆಗಳಿದ್ದು, ‘ಆಪರೇಷನ್ ಅಲಮೇಲಮ್ಮ’ ಹಾಗೂ ಕವಲು ದಾರಿ ಚಿತ್ರ ಖ್ಯಾತಿಯ ರಿಷಿ ಸಹ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಮಂಜು ಮಾಂಡವ್ಯ ಹಾಗೂ ರಿಷಿ ನಡುವಿನ ಫ್ರೆಂಡ್ ಶಿಪ್ ಗಾಗಿ ವಿಶೇಷ ಪಾತ್ರವೊಂದನ್ನ ಮಾಡಿದ್ದಾರಂತೆ. ಇನ್ನುಳಿದಂತೆ ಮಂಜು ಅವರಿಗೆ ಸಾರಾ ಮಹೇಶ್ ನಾಯಕಿಯಾಗಿದ್ದು, ಚಿಕ್ಕಣ್ಣನ ಕಾಮಿಡಿ ತೆರೆಮೇಲೆ ಮೋಡಿ ಮಾಡೋದ್ರ ಜೊತೆ, ಶೃತಿ ಪ್ರಕಾಶ್ ಅವರ ಡ್ಯಾನ್ಸ್ ನಿದ್ದೆಕೆಡಿಸತ್ತೆ.

    ಇನ್ನು ಸದ್ಯ ಬ್ಯುಸಿಯಾಗಿರೋ ರಿಷಿ, ಭರತ ಬಾಹುಬಲಿಯಲ್ಲಿ ಏನ್ ಮಾಡಿದ್ದಾರೆ ಅನ್ನೋ ಪ್ರಶ್ನೆಗೆ 17 ರಂದು ಚಿತ್ರ ರಿಲೀಸ್ ಆದ್ಮೇಲೇನೇ ಉತ್ತರ ಸಿಗಲಿದೆ. ಇದನ್ನು ಓದಿ: ‘ಭರತ ಬಾಹುಬಲಿ’ ನೋಡಿದ್ರೆ ಒಂದು ಕೋಟಿ ರೂಪಾಯಿ ಸಿಗುತ್ತೆ!

  • ರಾಜ್ ಶೆಟ್ಟಿ, ರಿಷಿ, ಡ್ಯಾನಿಶ್ ಮತ್ತು ರಾಮನ ಅವತಾರ!

    ರಾಜ್ ಶೆಟ್ಟಿ, ರಿಷಿ, ಡ್ಯಾನಿಶ್ ಮತ್ತು ರಾಮನ ಅವತಾರ!

    ಬೆಂಗಳೂರು: ಕನ್ನಡದಲ್ಲೀಗ ಮಲ್ಟಿ ಸ್ಟಾರ್ ಚಿತ್ರಗಳ ಜಮಾನ ಶುರುವಾಗಿದೆ. ಈ ಹೊತ್ತಿನಲ್ಲಿಯೇ ನಿಧಾನಕ್ಕೆ ತಮ್ಮದೇ ಆದ ಶೈಲಿಯಲ್ಲಿ ಹೆಸರಾಗುತ್ತಿರುವ ನಟರನ್ನು ಒಂದೇ ಚಿತ್ರದಲ್ಲಿ ನಟಿಸುವಂತೆ ಮಾಡೋ ಪ್ರಯತ್ನಕ್ಕೂ ಶ್ರೀಕಾರ ಬಿದ್ದಿದೆ. ಇಂಥಾದ್ದೊಂದು ನವೀನ ಪ್ರಯತ್ನಕ್ಕೆ ರಾಮನ ಅವತಾರ ಚಿತ್ರವೇ ಮೊದಲ ಹೆಜ್ಜೆಯಿಟ್ಟಿದೆ.

    ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಇದೀಗ ಕವಲು ದಾರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಆ ಚಿತ್ರವಿನ್ನೂ ಬಿಡುಗಡೆಯ ಹಂತದಲ್ಲಿರುವಾಗಲೇ ಅವರು ರಾಮನ ಅವತಾರ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ಈ ಚಿತ್ರತಂಡ ದೀಪಾವಳಿ ಹಬ್ಬಕ್ಕೆ ಏಕಾಏಕಿ ಟೀಸರ್ ಬಿಡುಗಡೆ ಮಾಡಿ ಸರ್ ಪ್ರೈಸ್ ಕೊಟ್ಟಿದೆ. ರಿಷಿ ಈ ಚಿತ್ರದಲ್ಲಿ ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

    ರಾಜ್ ಬಿ ಶೆಟ್ಟಿ ಮತ್ತು ಡ್ಯಾನಿಶ್ ಸೇಠ್ ಮತ್ತೆರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾಸ್ಯ ಪ್ರಧಾನ ಚಿತ್ರ. ಆದರೆ ಇದರಲ್ಲಿ ಮಾಮೂಲಿ ಜಾಡನ್ನು ಮೀರಿದ ಶೈಲಿಯ ಹಾಸ್ಯ ಇರಲಿದೆಯಂತೆ. ಅಂತೂ ದೀಪಾವಳಿಯಂದು ಹೊರ ಬಂದಿರೋ ಈ ಟೀಸರ್ ಮೂಲಕ ರಿಷಿ, ಡ್ಯಾನಿಶ್ ಮತ್ತು ರಾಜ್ ಶೆಟ್ಟಿ ಸೇರಿದಂತೆ ಮೂವರು ಒಂದೇ ಚಿತ್ರದಲ್ಲಿ ನಟಿಸೋದು ಪಕ್ಕಾ ಆಗಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅಲಮೇಲಮ್ಮನ ‘ರಿಶಿ’ ಈಗ ಭರತ ಬಾಹುಬಲಿ!

    ಅಲಮೇಲಮ್ಮನ ‘ರಿಶಿ’ ಈಗ ಭರತ ಬಾಹುಬಲಿ!

    ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದ ಆಪರೇಷನ್ ಅಲಮೇಲಮ್ಮ ಚಿತ್ರದ ನಾಯಕನಾಗಿ ನಟಿಸಿದ್ದ ರಿಶಿ ಆ ನಂತರದಲ್ಲಿ ಒಂದಷ್ಟು ಅವಕಾಶಗಳನ್ನು ಪಡೆದುಕೊಂಡಿದ್ದರು. ಆದರೆ ಶಶಾಂಕ್ ಬ್ಯಾನರಿನಲ್ಲಿನ ಚಿತ್ರವೂ ಸೇರಿದಂತೆ ರಿಶಿಯ ಸಿನಿ ಕೆರಿಯರ್ ಅದೇಕೋ ಥಂಡಾ ಹೊಡೆದಂತಿತ್ತು. ಹೀಗಿರುವಾಗಲೇ ಆತ ಹೊಸಾ ಚಿತ್ರವೊಂದರ ಮೂಲಕ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ!

    ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದ ಮಾಸ್ಟರ್ ಪೀಸ್ ಚಿತ್ರದ ನಿರ್ದೇಶಕ ಮಂಜು ಮಾಂಡವ್ಯ ಅವರ ಹೊಸಾ ಚಿತ್ರಕ್ಕೆ ರಿಶಿ ನಾಯಕನಾಗಿ ಆಯ್ಕೆಯಾಗಿದ್ದಾನೆ. ಈ ಚಿತ್ರಕ್ಕೆ ಭರತ ಬಾಹುಬಲಿ ಎಂಬ ಟೈಟಲ್ ಅನ್ನೂ ಫೈನಲ್ ಮಾಡಲಾಗಿದೆ. ಇದರ ಜೊತೆಗೇ ಸಾರಾ ಹರೀಶ್ ರಿಶಿಗೆ ನಾಯಕಿಯಾಗಿಯೂ ಆಯ್ಕೆಯಾಗಿದ್ದಾಳೆ!

     

    ಶೀರ್ಷಿಕೆ, ನಾಯಕಿ ಸೇರಿದಂತೆ ಎಲ್ಲ ಆಯ್ಕೆಗಳೂ ಪೂರ್ಣಗೊಂಡಿರೋ ‘ಭರತ ಬಾಹುಬಲಿ’ ಮಂಜು ಮಾಂಡವ್ಯ ಸಾರಥ್ಯದಲ್ಲಿ ಇಷ್ಟರಲ್ಲಿಯೇ ಚಿತ್ರೀಕರಣಕ್ಕೆ ತೆರಳಲಿದ್ದಾನೆ. ಮಾಸ್ಟರ್ ಪೀಸ್ ನಂಥಾ ಹಿಟ್ ಚಿತ್ರ ಕೊಟ್ಟಿದ್ದ ಮಂಜು ಮಾಂಡವ್ಯ ಅವರ ಈ ಹೊಸ ಚಿತ್ರದ ಬಗ್ಗೆ ಪ್ರೇಕ್ಷಕರೂ ಕೂಡಾ ಕಣ್ಣಿಟ್ಟು ಕಾಯುತ್ತಿದ್ದಾರೆ. ಆಪರೇಷನ್ ಅಲಮೇಲಮ್ಮ ಚಿತ್ರದಲ್ಲಿ ತನ್ನ ವಿಶಿಷ್ಟವಾದ ನಟನೆಯ ಮೂಲಕ ಗಮನ ಸೆಳೆದಿದ್ದ ರಿಶಿ ಈ ಮೂಲಕ ಮತ್ತೊಂದು ಹಿಟ್ ಚಿತ್ರ ಕೊಡುವ ಹುಮ್ಮಸ್ಸಿನಿಂದ ರೆಡಿಯಾಗುತ್ತಿದ್ದಾನೆ.

    ಆದರೆ ಶಶಾಂಕ್ ಬ್ಯಾನರಿನ ಚಿತ್ರದ ಕಥೆ ಏನಾಯಿತೆಂಬ ಪ್ರಶ್ನೆಯೊಂದು ಪ್ರೇಕ್ಷಕರ ಮನಸಲ್ಲಿದೆ. ಹೊಸಬರಿಗೆ ಅವಕಾಶ ಕೊಡುವ ಸದುದ್ದೇಶದಿಂದ ಶಶಾಂಕ್ ಸ್ವಂತ ಬ್ಯಾನರ್ ತೆರೆದಿದ್ದರಲ್ಲಾ? ಅದರಲ್ಲಿ ರಿಶಿ ನಾಯಕನಾಗಿರೋ ಒಂದು ಚಿತ್ರವನ್ನೂ ಘೋಷಣೆ ಮಾಡಲಾಗಿತ್ತು. ಆ ಚಿತ್ರವೂ ಬಂದರೆ ರಿಶಿ ಪಾಲಿಗೆ ಈ ವರ್ಷ ಡಬಲ್ ಧಮಾಕಾ ಎಂಬುದರಲ್ಲಿ ಯಾವುದೇ ಸಂಶಯಗಳಿಲ್ಲ!