Tag: ಆನೆಗಳು

  • ಮೈಸೂರಿನತ್ತ ಪ್ರಯಾಣ ಬೆಳೆಸಿದ ದಸರಾ ಗಜಪಡೆ

    ಮೈಸೂರಿನತ್ತ ಪ್ರಯಾಣ ಬೆಳೆಸಿದ ದಸರಾ ಗಜಪಡೆ

    ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲೆಂದು ಇಂದು ಐದು ಆನೆಗಳು ಕೊಡಗಿನಿಂದ ಮೈಸೂರಿನತ್ತ ಪ್ರಯಾಣ ಬೆಳೆಸಿದವು.

    ಚಿತ್ತಾಕರ್ಶಕ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲೆಂದು ದುಬಾರೆ ಸಾಕಾನೆ ಶಿಬಿರದಿಂದ ಪಟ್ಟದ ಆನೆ ವಿಕ್ರಮ, ಕಾವೇರಿ ಹಾಗೂ ಧನಂಜಯ ಆನೆಗಳು ಹೊರಟರೆ ವಿರಾಜಪೇಟೆ ತಾಲೂಕಿನ ಮತ್ತಿಗೋಡು ಶಿಬಿರದಿಂದ ಅಭಿಮನ್ಯು ಹಾಗೂ ಗೋಪಾಲಸ್ವಾಮಿ ಆನೆಗಳು ಮೈಸೂರಿನತ್ತ ಪ್ರಯಾಣ ಬೆಳೆಸಿದವು. ಇಂದು ಬೆಳಗ್ಗೆ ಕುಶಾಲನಗರ ಸಮೀಪದ ದುಬಾರೆಯಲ್ಲಿ ಸಾಕಾನೆಗಳಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ಹಾಗೂ ವಿಶೆಷ ಆಹಾರ ನೀಡಿ ಬೀಳ್ಕೊಡಲಾಯಿತು. ಇದನ್ನೂ ಓದಿ: ಮುಳ್ಳಯ್ಯನಗಿರಿಯಲ್ಲಿ ಜನಜಾತ್ರೆ- ಫುಲ್ ಟ್ರಾಫಿಕ್, ಪೊಲೀಸರ ಜೊತೆ ಪ್ರವಾಸಿಗರ ವಾಗ್ವಾದ

    ಕೊಡಗು ಜಿಲ್ಲೆಯ ವಿವಿಧ ಸಾಕಾನೆ ಶಿಬಿರಗಳಿಂದ ಪ್ರತಿ ವರ್ಷ 5ಕ್ಕೂ ಹೆಚ್ಚು ಆನೆಗಳು ಮೈಸೂರು ದಸರಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಈಗಾಗಲೆ ಹಲವಾರು ಬಾರಿ ಜಂಬೂಸವಾರಿಯಲ್ಲಿ ಹೆಜ್ಜೆಹಾಕಿದ ಅನುಭವ ಇರುವ ಅಭಿಮನ್ಯು ಹಾಗೂ ಗೋಪಾಲಸ್ವಾಮಿಗಳ ಜೊತೆಗೆ ಕಾವೇರಿ, ವಿಕ್ರಮ ಹಾಗೂ ಧನಂಜಯ ಆನೆಗಳು ಕೂಡ ಇಂದು ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.

    ಇಂದು ಸಂಜೆ ವೇಳೆಗೆ ವೀರನಹೋಸಹಳ್ಳಿಗೆ ಎಲ್ಲ ದಸರಾ ಆನೆಗಳು ತಲುಪಲಿದ್ದು, ನಾಳೆ ಬೆಳಗ್ಗೆ ಮೈಸೂರಿನತ್ತ ಪ್ರಯಾಣ ಬೆಳಸಲಿವೆ. ಮೈಸೂರಿನಲ್ಲಿ ಒಂದು ತಿಂಗಳು ಭರ್ಜರಿ ತಾಲೀಮಿನ ನಂತರ ಆನೆಗಳು ಜಂಬೂಸವಾರಿಗೆ ರೆಡಿಯಾಗಲಿವೆ. ಈ ಬಾರಿ ಸರಳ ದಸರಾ ಆಗುತ್ತಿರುವುದರಿಂದ ಆನೆಗಳ ಮಾವುತ ಹಾಗೂ ಕಾವಾಡಿಗಳು ಮಾತ್ರ ಮೈಸೂರಿನತ್ತ ತೆರಳಿದ್ದು, ದಸರಾ ಆನೆಗಳನ್ನು ಜಂಬೂಸವಾರಿಗೆ ಸನ್ನದ್ಧಗೊಳಿಸಲು ಹೊರಟಿದ್ದಾರೆ. ಈಗಾಗಲೇ ತಮ್ಮ ಆನೆಗಳಿಗೆ ವಿಶೇಷ ಆಹಾರ ಹಾಗೂ ಮೆರವಣಿಗೆ ತಾಲೀಮು ನೀಡಿ ಸಜ್ಜುಗೊಳಿಸಿಕೊಂಡಿರುವ ಮಾವುತರು, ಇದೀಗ ಮೈಸೂರಿನತ್ತ ಹೊರಟಿದ್ದು, ಅಲ್ಲಿಯೂ ಆನೆಗಳಿಗೆ ಮತ್ತಷ್ಟು ಪೌಷ್ಟಿಕ ಆಹಾರ ನೀಡಿ, ಆನೆಗಳನ್ನು ಮತ್ತಷ್ಟು ಸಬಲಗೊಳಿಸಲಿದ್ದಾರೆ.

  • ದಸರೆಗೆ ಹೊರಡುವ ಉತ್ಸಾಹದಲ್ಲಿದೆ ವಿಕ್ರಮ, ಧನಂಜಯ, ಕಾವೇರಿ ಆನೆಗಳು

    ದಸರೆಗೆ ಹೊರಡುವ ಉತ್ಸಾಹದಲ್ಲಿದೆ ವಿಕ್ರಮ, ಧನಂಜಯ, ಕಾವೇರಿ ಆನೆಗಳು

    ಮಡಿಕೇರಿ: ಕೊರೊನಾ ಆತಂಕದ ನಡುವೆಯೇ ಈ ಬಾರಿ ಸರಳ ರೀತಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ತಯಾರಿಗಳು ಗರಿಗೆದರಿವೆ. ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗಳು ರಾಜ್ಯದ ತಮ್ಮ ವಿವಿಧ ಬಿಡಾರಗಳಲ್ಲಿ ಭರ್ಜರಿಯಾಗಿ ತಯಾರಾಗುತ್ತಿವೆ. ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಆನೆಕಾಡು ಸಾಕಾನೆ ಶಿಬಿರದಲ್ಲಿ ಮೈಸೂರು ದಸರಾದ ಪಟ್ಟದ ಆನೆ ವಿಕ್ರಮ ಹಾಗೂ ಮುಂಚೂಣಿ ಆನೆಗಳಾದ ಧನಂಜಯ, ಕಾವೇರಿ ದಸರೆಗೆ ಹೊರಡುವ ಉತ್ಸುಕದಲ್ಲಿವೆ.

    ನಾಡಹಬ್ಬ ದಸರಾಕ್ಕೆ ಭರ್ಜರಿ ತಯಾರಿ ಶುರುವಾಗಿದೆ, ಕೊರೊನಾ ಆತಂಕದ ಮಧ್ಯೆಯೇ ಕಳೆದ ಬಾರಿಯಂತೆ ಈ ಬಾರಿಯು ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗಾಗಿ ಆನೆಗಳ ತಂಡ ಮೈಸೂರಿನತ್ತ ಹೊರಡಲು ಉತ್ಸುಕವಾಗಿವೆ. ದಸರಾದ ಸಾಂಪ್ರದಾಯಿಕ ಗಜಪಯಣಕ್ಕಾಗಿ ಆನೆಗಳ ತಂಡ ರೆಡಿಯಾಗುತ್ತಿದ್ದು, ಅರಮನೆ ನಗರಿಗೆ ಹೊರಡಲು ತಯಾರಿ ಮಾಡಿಕೊಳ್ಳುತ್ತಿವೆ. ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ದುಬಾರೆಯಿಂದ ಹಾಗೂ ಆನೆಕಾಡಿನಲ್ಲಿರುವ ಸಾಕಾನೆ ಶಿಬಿರದಲ್ಲಿರುವ ಮೈಸೂರು ದಸರಾದ ಪಟ್ಟದ ಆನೆ ವಿಕ್ರಮ(58) ಸೇರಿದಂತೆ ಮುಂಚೂಣಿ ಆನೆಗಳಾದ ಧನಂಜಯ(43), ಕಾವೇರಿ(44) ದಸರೆ ಜಂಬುಸವಾರಿಗೆ ತಯಾರಿ ನಡೆಸುತ್ತಿವೆ. ಗಾಂಭೀರ್ಯದ ನಡೆಯ ಗಜಗಳು ಶಿಬಿರದಲ್ಲಿ ಮಾವುತ ಹಾಗೂ ಕಾವಾಡಿಗಳ ಆಜ್ಞೆಯಂತೆ ತಾಲೀಮಿನಲ್ಲಿ ತೊಡಗಿವೆ. ಇದನ್ನೂ ಓದಿ: ಕೊಡಗಿಗೆ ಕಾಶ್ಮೀರದ ರೀತಿಯ ಹೆದ್ದಾರಿ ನಿರ್ಮಿಸಿಕೊಡಿ ಗಡ್ಕರಿಗೆ ಬೊಮ್ಮಾಯಿ ಮನವಿ

    ಪ್ರತಿ ವರ್ಷ ದುಬಾರೆ ಸಾಕಾನೆ ಶಿಬಿರದಿಂದ ಮೈಸೂರು ದಸರಾಗೆ ಆರು ಅನೆಗಳು ಮೈಸೂರಿನತ್ತ ಪ್ರಯಾಣ ಬೆಳಸುತ್ತಿದವು. ಅದರೆ ಈ ಬಾರಿ ಕೊರೊನಾ ಆರ್ಭಟ ಮತಷ್ಟು ಹೆಚ್ಚು ಆಗಿರುವುದರಿಂದ ಈ ಬಾರಿ ಶಿಬಿರದಿಂದ ಮೂರು ಸಾಕಾನೆಗಳು ಭಾಗಿಯಾಗುತ್ತಿವೆ. ಶಿಬಿರದಲ್ಲಿ ಇರುವ ಆನೆಗಳಿಗೆ ನಿತ್ಯವೂ ಬೆಳಗ್ಗೆ 6 ಕೆ.ಜಿ. ಭತ್ತದ ಹುಲ್ಲು, 6 ಕೆ.ಜಿ. ಭತ್ತ, ಬೆಲ್ಲ ಜೊತೆಗೆ ವಿಶೆಷ ಆಹಾರವಾಗಿ ಜೋಳ, ಕುಚಲಕ್ಕಿ, ರಾಗಿ ಮುದ್ದೆ ಸಿದ್ಧಪಡಿಸಿದ ಆಹಾರವನ್ನು ನೀಡಿ ತಯಾರು ಮಾಡಲಾಗಿದೆ. ಮೈಸೂರಿಗೆ ತೆರಳುವ ಆನೆಗಳ ತಂಡ ಅಲ್ಲಿ ದಸರಾಕ್ಕಾಗಿ ವಿಶೇಷ ಸಿದ್ಧತೆಯಲ್ಲಿ ತೊಡಗಲಿವೆ. ಸದ್ಯ ಶಿಬಿರದಲ್ಲಿ ಈಗಾಗಲೇ ಸಾಕಾನೆಗಳಿಗೆ ವಿಶೇಷ ಆರೈಕೆ ನಂತರ ಅಗತ್ಯ ತಾಲೀಮು ನಡೆಸಿ ನಾಡಹಬ್ಬದಲ್ಲಿ ಪಾಲ್ಗೊಳಲು ಆನೆಗಳು ಹೊರಡಲು ತಯಾರಿ ನಡೆಸಿದೆ. ಈ ಬಾರಿ ಪ್ರತಿ ಆನೆಯೊಂದಿಗೆ ಮಾವುತ ಕಾವಾಡಿಗಳು ಮಾತ್ರ ತೆರಳಲಿದ್ದು, ನಾಡಹಬ್ಬದ ಯಶಸ್ವಿಯಾಗಿ ಆನೆಗಳನ್ನು ತಯಾರು ಮಾಡಲಿದ್ದಾರೆ.

    ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗಾಗಿ ಆನೆಗಳ ತಂಡ ರಾಜ್ಯದ ವಿವಿಧೆಡೆಯಿಂದ ವೀರನಹೊಸಹಳ್ಳಿ ಶಿಬಿರಕ್ಕೆ ತೆರಳಿ ಅಲ್ಲಿಂದ ಮೈಸೂರಿನತ್ತ ಪ್ರಯಾಣ ಬೆಳೆಸಲಿದ್ದು, ಸಂಪ್ರದಾಯದಂತೆ ಗಜಪಯಣ ನಡೆಯಲಿದೆ. ಇದೇ ಸೆಪ್ಟೆಂಬರ್ 13 ರಂದು ಮೈಸೂರಿನತ್ತ ಎಲ್ಲ ಅನೆಗಳು ಪ್ರಯಾಣ ಬೆಳಸಲ್ಲಿವೆ.

  • ಆನೆಗಳಿಗೂ ಸ್ವಿಮ್ಮಿಂಗ್ ಪೂಲ್

    ಆನೆಗಳಿಗೂ ಸ್ವಿಮ್ಮಿಂಗ್ ಪೂಲ್

    ಮೈಸೂರು: ಮೈಸೂರು ಮೃಗಾಲಯ ನೂತನ ಪ್ರಯೋಗ ಮಾಡಿದ್ದು, ಆನೆಗಳ ಆರೋಗ್ಯದ ದೃಷ್ಟಿಯಿಂದ ಆನೆಗಳಿಗಾಗಿಯೇ ಈಜುಕೊಳ ನಿರ್ಮಾಣ ಮಾಡಿದೆ.

    ವಯಸ್ಸಾದ ಆನೆಗಳಿಗೆ ಸಾಮಾನ್ಯವಾಗಿ ಕಂಡು ಬರುವ ಸಂದಿವಾತ ನೋವು ನಿವಾರಣೆ ಚಿಕಿತ್ಸೆಗಾಗಿ ಈಜುಕೊಳ ನಿರ್ಮಾಣ ಮಾಡಿದ್ದು, ರಾಜ್ಯದಲ್ಲೇ ಮೊದಲ ಪ್ರಯತ್ನ ಇದಾಗಿದೆ. ಮೈಸೂರು ಮೃಗಾಲಯದ ವ್ಯಾಪ್ತಿಯ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಈಜುಕೊಳ ನಿರ್ಮಾಣವಾಗಿದ್ದು, ಪ್ರಾಯೋಗಿಕವಾಗಿ ಯಶಸ್ವಿಯಾಗಿ ಕಾರ್ಯನಿರ್ವಹಣೆವಾಗುತ್ತಿದೆ.

    ಆನೆಗಳ ಆರೋಗ್ಯ ಹಿತದೃಷ್ಟಿಯಿಂದ ಸ್ವಿಮ್ಮಿಂಗ್ ಪೂಲ್ ನಿರ್ಮಿಸಲಾಗಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆನೆಗಳು ಸ್ವಿಮ್ಮಿಂಗ್ ಪೂಲ್‍ನಲ್ಲಿ ಕಾಲ ಕಳೆಯುತ್ತಿವೆ. ಆನೆಗಳಿಗೆ ಬರುವ ಸಂದಿವಾತವನ್ನು ತಪ್ಪಿಸಲು ಈ ಮಾಸ್ಟರ್ ಪ್ಲ್ಯಾನ್ ಮಾಡಲಾಗಿದೆ.

  • ಒಂದು ಗಿಡ ಬಿಟ್ಟು ಇಡೀ ಬಾಳೆ ತೋಟ ನಾಶಗೊಳಿಸಿದ ಆನೆಗಳು

    ಒಂದು ಗಿಡ ಬಿಟ್ಟು ಇಡೀ ಬಾಳೆ ತೋಟ ನಾಶಗೊಳಿಸಿದ ಆನೆಗಳು

    – ಅಚ್ಚರಿಯ ವೀಡಿಯೋ ವೈರಲ್

    ಚೆನ್ನೈ: ಸಾಮಾನ್ಯವಾಗಿ ಆನೆಗಳನ್ನು ದೈತ್ಯ ಜೀವಿಗಳು ಎಂದು ಕರೆಯಲಾಗುತ್ತದೆ. ಏಕೆಂದರೆ ಅವುಗಳು ಮರಗಳನ್ನು ಉರುಳಿಸಬಹುದು ಮತ್ತು ಒಂದೇ ಬಾರಿಗೆ ಎಲ್ಲವನ್ನು ವಿನಾಶ ಮಾಡುತ್ತದೆ. ಇತರ ಪ್ರಾಣಿಗಳಿಗೆ ಹೋಲಿಸಿದರೆ ಆನೆಗಳಿಗೆ ಹೆಚ್ಚು ಬುದ್ಧಿ, ಸಮಯಪ್ರಜ್ಞೆ, ಹೃದಯವಂತಿಕೆ ಹೊಂದಿದೆ ಎಂದೇ ಹೇಳಬಹುದು.

    ಸದ್ಯ ಇದಕ್ಕೆ ಸಾಕ್ಷಿ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು, ತಮಿಳುನಾಡಿನ ಹಳ್ಳಿಯೊಂದರಲ್ಲಿ ಕಾಡು ಆನೆಗಳ ಗುಂಪು ಬಾಳೆ ತೋಟದ ಮೇಲೆ ದಾಳಿ ನಡೆಸಿ 300ಕ್ಕೂ ಅಧಿಕ ಬಾಳೆ ಗಿಡಗಳನ್ನು ನೆಲಕ್ಕುರುಳಿಸಿವೆ. ಇಡೀ ತೋಟವನ್ನು ಸಂಪೂರ್ಣ ನಾಶ ಪಡಿಸಿದ ಆನೆಗಳು ಅಲ್ಲಿಯೇ ಇದ್ದ ಪುಟ್ಟ ಪುಟ್ಟ ಪಕ್ಷಿಗಳ ಗೂಡಿನ ಮರವನ್ನು ಮಾತ್ರ ಹಾಗೆಯೇ ಬಿಟ್ಟು ಹೋಗಿದೆ. ಇದನ್ನು ನೋಡಿ ಗ್ರಾಮಸ್ಥರು ಬೆರಗಾಗಿದ್ದಾರೆ.

    ಈ ವೀಡಿಯೋವನ್ನು ಅರಣ್ಯ ಸೇವೆ(ಐಎಫ್‍ಎಸ್) ಅಧಿಕಾರಿ ಸುಸಂತಾ ನಂದಾರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಕಾಡು ಆನೆಗಳು ಬಾಳೆ ತೋಟವನ್ನು ನಾಶಪಡಿಸಿದ್ದು, ಪುಟ್ಟ ಪುಟ್ಟ ಪಕ್ಷಿಗಳ ಮರಿಗಳಿದ್ದ, ಹಕ್ಕಿಯ ಗೂಡಿಗೆ ಮಾತ್ರ ಯಾವುದೇ ಹಾನಿಗೊಳಿಸದಿರುವುದನ್ನು ಕಾಣಬಹುದಾಗಿದೆ.

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅನೇಕ ಮಂದಿ ವೀಕ್ಷಿಸಿದ್ದು, ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿ ಮಳೆಯೇ ಹರಿದುಬರುತ್ತಿದೆ.

  • ಮೈಸೂರಿಗೆ ಕ್ಯಾಪ್ಟನ್ ಅಭಿಮನ್ಯು ಟೀಂ ಎಂಟ್ರಿ – ಇಂದು ಅರಮನೆ ಪ್ರವೇಶ

    ಮೈಸೂರಿಗೆ ಕ್ಯಾಪ್ಟನ್ ಅಭಿಮನ್ಯು ಟೀಂ ಎಂಟ್ರಿ – ಇಂದು ಅರಮನೆ ಪ್ರವೇಶ

    ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಅಧಿಕೃತವಾಗಿ ಗುರುವಾರ ಚಾಲನೆ ಸಿಕ್ಕಿದ್ದು, ದಸರಾದ ಮೊದಲ ಕಾರ್ಯಕ್ರಮವಾದ ಗಜಪಯಣ ಸಾಂಪ್ರದಾಯಿಕವಾಗಿ ನೇರವೇರಿದೆ.

    ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ನೇರವೇರಿಸಲಾಗಿದ್ದು, ಗುರುವಾರ ಮೈಸೂರಿನ ಅರಣ್ಯ ಭವನಕ್ಕೆ ಗಜಪಡೆ ಎಂಟ್ರಿ ಕೊಟ್ಟಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ನೇರವೇರಿದೆ. ಶುಭ ಲಗ್ನದಲ್ಲಿ ಗಜಪಡೆಗೆ ಪುಷ್ಪಾರ್ಚನೆ ಮೂಲಕ ಪೂಜೆ ನೇರವೇರಿಸಿದ ಜಿಲ್ಲಾಡಳಿತ ಬಳಿಕ ಗಜಪಯಣಕ್ಕೆ ಚಾಲನೆ ನೀಡಿತು.

    ಸಿಂಗಾರಗೊಂಡ ಅಭಿಮನ್ಯು, ವಿಕ್ರಂ, ಗೋಪಿ, ವಿಜಯ, ಕಾವೇರಿ ಆನೆಗಳಿಗೆ ಫಲತಾಂಬೂಲ ನೀಡಿದರು. ಬಳಿಕ ಜಿಲ್ಲಾಡಳಿತದ ವತಿಯಿಂದ ಆನೆ ಮಾವುತರಿಗೆ ಸನ್ಮಾನ ಮಾಡಿ ಆತ್ಮೀಯವಾಗಿ ಗೌರವಿಸಿದರು. ನಂತರ ಅರಣ್ಯ ಇಲಾಖೆಯ ಟ್ರಕ್‍ಗಳ ಮೂಲಕ ಗಜಪಡೆ ಮೈಸೂರಿನ ಅರಣ್ಯ ಭವನಕ್ಕೆ ಎಂಟ್ರಿ ಕೊಟ್ಟಿದೆ. ನಿನ್ನೆಯೇ ಮೈಸೂರಿಗೆ ಗಜಪಡೆ ಬಂದರು ಸಹ ಇಂದು ಆನೆಗಳು ಅರಮನೆ ಪ್ರವೇಶ ಮಾಡಲಿವೆ.

    ಸದ್ಯಕ್ಕೆ ಮೈಸೂರಿನ ಅಶೋಕಪುರಂನ ಅರಣ್ಯ ಭವನದಲ್ಲೇ ಅಭಿಮನ್ಯು ತಂಡವನ್ನು ಇರಿಸಲಾಗಿದೆ. ಇಂದು ಅರಣ್ಯ ಭವನದಲ್ಲೂ ವಿಶೇಷ ಪೂಜೆ ನೇರವೇರಿಸಿ, ಮಧ್ಯಾಹ್ನ 12.18 ನಿಮಿಷದ ಶುಭ ಲಗ್ನದಲ್ಲಿ ಅರಮನೆಯಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಸಿಗಲಿದೆ. ಈ ಕಾರ್ಯಕ್ರಮಕ್ಕೂ ಸಹ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಗಜಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಅರಮನೆಗೆ ಗಜಪಡೆಯನ್ನ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಿದ್ದಾರೆ.

  • ದಸರಾಗೆ ಐದು ಗಜಪಡೆಯ ಆಯ್ಕೆ ಅಂತಿಮ – ಅಂಬಾರಿ ಆನೆಯಾಗಿ ಅಭಿಮನ್ಯು ಆಯ್ಕೆ

    ದಸರಾಗೆ ಐದು ಗಜಪಡೆಯ ಆಯ್ಕೆ ಅಂತಿಮ – ಅಂಬಾರಿ ಆನೆಯಾಗಿ ಅಭಿಮನ್ಯು ಆಯ್ಕೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಆರಂಭವಾಗಿದ್ದು, ಅರಣ್ಯ ಇಲಾಖೆ ದಸರಾಗೆ ಐದು ಆನೆಗಳ ಆಯ್ಕೆಯನ್ನು ಅಂತಿಮಗೊಳಿಸಿದೆ. ಇದನ್ನೂ ಓದಿ: ಮೈಸೂರು ದಸರಾಕ್ಕೆ ದುಬಾರೆಯಿಂದ ನಾಲ್ಕೇ ಆನೆಗಳು

    ದಸರಾ ಗಜಪಡೆಯ ಕ್ಯಾಪ್ಟನ್ ಸ್ಥಾನದಿಂದ ಅರ್ಜುನ ಆನೆಗೆ ನಿವೃತ್ತಿ ಸಿಕ್ಕಿದ್ದು, ಈ ಬಾರಿಯ ದಸರಾದಿಂದ ಅಭಿಮನ್ಯು ಗಜಪಡೆಯ ಕ್ಯಾಪ್ಟನ್ ಆಗಿದ್ದಾನೆ. ಹೀಗಾಗಿ ಈ ಬಾರಿ ಅಂಬಾರಿ ಆನೆಯಾಗಿ ಅಭಿಮನ್ಯು ಆಯ್ಕೆಯಾಗಿದ್ದಾನೆ. ಇನ್ನೂ ಉಳಿದಂತೆ ವಿಕ್ರಮ, ಗೋಪಿ, ಕಾವೇರಿ ಮತ್ತು ವಿಜಯ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಈ ಐದು ಆನೆಗಳನ್ನ ಕಾಡಿನಿಂದ ಕರೆತರಲು ಅನುಮತಿ ಕೂಡ ಸಿಕ್ಕಿದೆ.

    ಸದ್ಯಕ್ಕೆ ಆನೆಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮತ್ತಿಗೋಡು ಶಿಬಿರದಲ್ಲಿವೆ. ಅಕ್ಟೋಬರ್ 1ಕ್ಕೆ ಮೈಸೂರಿನ ಅರಣ್ಯ ಭವನಕ್ಕೆ ಆನೆಗಳು ಬರಲಿದೆ. ಮರುದಿನ ಅಂದರೆ ಅಕ್ಟೋಬರ್ 2ಕ್ಕೆ ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಗಜಪಡೆಗೆ ಸ್ವಾಗತ ಮಾಡಲಾಗುತ್ತದೆ.

    ಗಜಪಡೆಗೆ ಕಳೆದ ಐದು ವರ್ಷಗಳಿಂದ ಅರ್ಜುನ ಕ್ಯಾಪ್ಟನ್ ಆಗಿದ್ದ. ಅರ್ಜುನಿಗೆ ಈಗ 60 ವರ್ಷ. ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ 60 ವರ್ಷ ತುಂಬಿದ ಆನೆಗಳ ಮೇಲೆ ಹೆಚ್ಚು ಒತ್ತಡ ಹೇರುವಂತಿಲ್ಲ. ಹೀಗಾಗಿ ಅರ್ಜನನ್ನು ಕ್ಯಾಪ್ಟನ್ ಶಿಪ್‍ನಿಂದ ಕೆಳಗೆ ಇಳಿಸುವುದು ಅನಿವಾರ್ಯವಾಗಿತ್ತು. 20 ವರ್ಷಗಳಿಂದ ನಿರಂತರವಾಗಿ ದಸರಾ ಗಜಪಡೆಯ ಸದಸ್ಯನಾಗಿರುವ ಅಭಿಮನ್ಯುಗೆ ಕ್ಯಾಪ್ಟನ್ ಪಟ್ಟ ಕಟ್ಟಿ ಅಂಬಾರಿ ಹೊರಿಸೋಕೆ ಅರಣ್ಯ ಇಲಾಖೆ ನಿರ್ಧರಿಸಿದೆ.

  • ಅಂಬಾರಿ ಹೊರುವ ಗಜಪಡೆಯ ಜೊತೆ ನಿಖಿಲ್-ರೇವತಿ

    ಅಂಬಾರಿ ಹೊರುವ ಗಜಪಡೆಯ ಜೊತೆ ನಿಖಿಲ್-ರೇವತಿ

    ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಮದುವೆಯಾದ ನಂತರ ತಮ್ಮ ಪತ್ನಿಯ ಜೊತೆಗಿನ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ನಿಖಿಲ್ ತಮ್ಮ ಪತ್ನಿಯನ್ನು ವಿಶೇಷವಾದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು.

    ನಟ ನಿಖಿಲ್ ಹಬ್ಬದ ದಿನ ಅಥವಾ ವಿಶೇಷ ದಿನಗಳಲ್ಲಿ ಪತ್ನಿ ರೇವತಿಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ನಿಖಿಲ್ ಪತ್ನಿ ರೇವತಿಯನ್ನು ನಾಗರಹೊಳೆ ಅಭಯಾರಣ್ಯಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲದೇ ದಸರಾದಲ್ಲಿ ಅಂಬಾರಿ ಹೊರುವ ಗಜಪಡೆಯನ್ನು ಕೂಡ ಭೇಟಿ ಮಾಡಿಸಿದ್ದಾರೆ.

    “ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾದ ಅಂಬಾರಿ ಹೊರುವ ಗಜಪಡೆಯ ನಾಯಕ ಅರ್ಜುನ ಹಾಗೂ ದುರ್ಗಾಪರಮೇಶ್ವರಿಯೊಂದಿಗೆ” ಎಂದು ಇನ್‍ಸ್ಟಾಗ್ರಾಂನಲ್ಲಿ ನಿಖಿಲ್ ಬರೆದುಕೊಂಡಿದ್ದಾರೆ. ಜೊತೆಗೆ ಗಜಪಡೆಯ ಜೊತೆ ದಂಪತಿ ಫೋಟೋ ತೆಗೆಸಿಕೊಂಡಿದ್ದು, ಆ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

    ನಿಖಿಲ್ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ದಸರಾದ ಎಲ್ಲಾ ಆನೆಗಳು ಮೈಸೂರಿಗೆ ಆಗಮಿಸಿ, ದಸರಾ ಉತ್ಸವದ ತಾಲೀಮಿನಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ ಕೊರೊನಾ ಇರುವ ಕಾರಣ ಎಲ್ಲಾ ಆನೆಗಳು ಇನ್ನೂ ಶಿಬಿರದಲ್ಲಿಯೇ ಇದೆ. ಹೀಗಾಗಿ ನಿಖಿಲ್ ಪತ್ನಿಯೊಂದಿಗೆ ಶಿಬಿರಕ್ಕೆ ಭೇಟಿ ಕೊಟ್ಟಿದ್ದರು.

    https://www.instagram.com/p/CEvyTlspo9p/?igshid=i8frrrtsrlaq

  • ಗಜರಾಜನ ಸದ್ದಿಗೆ ಓಟಕಿತ್ತ ಹುಲಿಗಳು

    ಗಜರಾಜನ ಸದ್ದಿಗೆ ಓಟಕಿತ್ತ ಹುಲಿಗಳು

    ಮೈಸೂರು: ಈ ವಿಡಿಯೋ ನೋಡಿದರೆ ಆನೆಗಳಿಗೆ ಹುಲಿಗಳು ಹೆದುರುತ್ತವಾ ಎಂಬ ಪ್ರಶ್ನೆ ಕಾಡದೆ ಇರದು. ಅಷ್ಟೊಂದು ರೋಮಾಂಚನಕಾರಿಯಾದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

    ಕಾಡಿನಲ್ಲಿ ಹುಲಿ ಹಾಗೂ ಆನೆಗಳ ನಡುವಿನ ಸಂಘರ್ಷದಿಂದಾಗಿ ಆನೆಗಳಿಗೆ ಹುಲಿಗಳು ಹೆದರುತ್ತಿವೆ ಎನ್ನಲಾಗಿದೆ. ಹುಲಿಗಳನ್ನು ಆನೆಗಳು ಹೆದರಿಸಿ ಓಡಿಸುತ್ತಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಂಡೀಪುರ, ನಾಗರಹೊಳೆ ಅರಣ್ಯದಲ್ಲಿ ಸಫಾರಿಗೆ ತೆರಳಿದವರಿಗೆ ಈ ಅಪರೂಪದ ದೃಶ್ಯಗಳು ಸಿಗುತ್ತಿವೆ.

    ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಹುಲಿಗಳು ಆನೆಗಳನ್ನು ಬೇಟೆಯಾಡಿರುವ ಸಾಕಷ್ಟು ಪ್ರಕರಣಗಳು ನಡೆದಿವೆ. ಆದರೆ ಇದೀಗ ಆನೆಗಳೇ ರಾಜ ಗಾಂಭೀರ್ಯದಿಂದ ಹುಲಿಗಳನ್ನು ಓಡಿಸಿವೆ. ಈ ದೃಶ್ಯಗಳು ಎಂತಹವನ್ನಾದರೂ ರೋಮಾಂಚಿತವಾಗಿಸುತ್ತವೆ. ಪ್ರವಾಸಿಗರು ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

  • ಕಾಡಾನೆ ಓಡಿಸುವಾಗ ಬಂದೂಕಿನಿಂದ ಹಾರಿದ ಗುಂಡು ತಗುಲಿ ಫಾರೆಸ್ಟ್ ವಾಚರ್ ಸಾವು

    ಕಾಡಾನೆ ಓಡಿಸುವಾಗ ಬಂದೂಕಿನಿಂದ ಹಾರಿದ ಗುಂಡು ತಗುಲಿ ಫಾರೆಸ್ಟ್ ವಾಚರ್ ಸಾವು

    ಮಂಡ್ಯ: ಕಾಡಾನೆ ಓಡಿಸುವ ವೇಳೆ ಬಂದೂಕಿನಿಂದ ಹಾರಿದ ಗುಂಡು ತಗುಲಿ ಫಾರೆಸ್ಟ್ ವಾಚರ್ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೂನನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಶಿವನಂಜಯ್ಯ (30) ಮೃತ ಫಾರೆಸ್ಟ್ ವಾಚರ್. ಕೂನನಕೊಪ್ಪಲು ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಓಡಿಸುವ ವೇಳೆ ಈ ಘಟನೆ ನಡೆದಿದೆ. ಫಾರೆಸ್ಟ್ ಗಾರ್ಡ್ ಪ್ರಕಾಶ್ ಅಡಚದ ಎಂಬುವರ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡು ತಗುಲಿ ಶಿವನಂಜಯ್ಯ ಸಾವನ್ನಪ್ಪಿದ್ದಾರೆ.

    ಮೃತ ಶಿವನಂಜಯ್ಯ ಗುತ್ತಿಗೆ ಅಧಾರದ ಮೇಲೆ ಫಾರೆಸ್ಟ್ ವಾಚರ್ ಆಗಿ ಕೆಲಸ ಮಾಡುತ್ತಿದ್ದರು. ಶಿಂಷಾ ಅರಣ್ಯಪ್ರದೇಶದಿಂದ ಬಂದಿದ್ದ ಹತ್ತು ಕಾಡಾನೆಗಳು ಗ್ರಾಮದ ತೋಪೊಂದರಲ್ಲಿ ಬೀಡುಬಿಟ್ಟಿದ್ದವು. ಹೀಗಾಗಿ ಅರಣ್ಯ ಸಿಬ್ಬಂದಿ ಆನೆಗಳನ್ನು ಬಂದೂಕು ಶಬ್ದದಿಂದ ಬೆದರಿಸಿ ವಾಪಸ್ ಕಾಡಿಗಟ್ಟಲು ಮುಂದಾಗಿದ್ದರು.

    ಆದರೆ ಆನೆಗಳು ಜನರ ಕಿರುಚಾಟಕ್ಕೆ ಹೆದರಿ ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗಿದ್ದವು. ಈ ವೇಳೆ ಭಯದಿಂದ ಓಡುವ ವೇಳೆ ಫಾರೆಸ್ಟ್ ಗಾರ್ಡ್ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದೆ. ಪರಿಣಾಮ ಶಿವನಂಜಯ್ಯ ಬೆನ್ನಿಗೆ ಗುಂಡು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಈ ಕುರಿತು ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗಳ ಹಿಂಡು

    ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗಳ ಹಿಂಡು

    ಚಾಮರಾಜನಗರ: ಕೊರೊನಾ ಎಪೆಕ್ಟ್ ಸರಕು ಸಾಗಣೆ ವಾಹನಗಳ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಹೀಗಾಗಿ ಖಾಲಿ ಖಾಲಿ ಆಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವನ್ಯಜೀವಿಗಳು ನಿರ್ಭೀತಿಯಿಂದ ಓಡಾಟ ಮಾಡುತ್ತಿವೆ.

    ಬೆಂಗಳೂರು-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗಳು ಹಿಂಡು ರಸ್ತೆಯಲ್ಲಿ ನಡೆದುಕೊಂಡು ಹೋಗಿವೆ. 8ಕ್ಕೂ ಹೆಚ್ಚು ಆನೆಗಳು ಸುಮಾರು 2 ಕಿಲೋ ಮೀಟರ್ ತನಕ ರಸ್ತೆಯಲ್ಲೇ ನಡೆದು ಹೋಗಿವೆ. ಸ್ಥಳದಲ್ಲಿದ್ದವರು ಆನೆಗಳು ನಡೆದುಕೊಂಡು ಹೋಗುತ್ತಿದ್ದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ.

    ತಮಿಳುನಾಡಿನಲ್ಲಿ ಕೊರೊನಾ ಕಡಿಮೆಯಾಗದ ಕಾರಣ ಸರಕು ಸಾಗಣೆ ವಾಹನಗಳ ಸಂಖ್ಯೆಯಲ್ಲೂ ಇಳಿಮುಖ ಆಗಿದೆ. ಇದರಿಂದ ಖಾಲಿ ಖಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವನ್ಯಜೀವಿಗಳು ಓಡಾಟ ಮಾಡುತ್ತಿವೆ.

    ಅಷ್ಟೇ ಅಲ್ಲದೇ ರಾಜ್ಯದ ಗಡಿಭಾಗವಾದ ಹಾಸನೂರು ರಸ್ತೆಯ ಸಮೀಪದಲ್ಲಿ ಮರವೊಂದರ ಮೇಲೆ ಚಿರತೆ ಒಂದೂವರೆ ತಾಸಿಗೂ ಹೆಚ್ಚು ಕಾಲ ಕುಳಿತಿತ್ತು. ಇನ್ನೂ ಕಾಡು ಹಂದಿಗಳ ಹಾವಳಿ ಈಗ ಜಮೀನಿಗಿಂತ ರಸ್ತೆಯಲ್ಲೇ ಹೆಚ್ಚಾಗಿದೆ. ಕೇವಲ ರಾತ್ರಿ ವೇಳೆಯಲ್ಲಿ ಕಾಣಬಹುದಾಗಿದ್ದ ಆನೆಗಳ ಹಿಂಡು, ಚಿರತೆಗಳು ಇದೀಗ ಮಧ್ಯಾಹ್ನವೇ ರಸ್ತೆಯಲ್ಲಿ ಓಡಾಡುತ್ತಿವೆ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ.