Tag: ಆದರ್ಶ್

  • ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಪ್ಪಟ ಅಭಿಮಾನಿ ಇನ್ನಿಲ್ಲ

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಪ್ಪಟ ಅಭಿಮಾನಿ ಇನ್ನಿಲ್ಲ

    ಬಳ್ಳಾರಿ: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಪುಟ್ಟ ಅಭಿಮಾನಿ ನಿಧನ ಹೊಂದಿದ್ದಾನೆ.

    ಹೌದು. ನೂತನ ವಿಜಯನಗರ ಜಿಲ್ಲೆ ಹೊಸಪೇಟೆಯ 17 ವರ್ಷದ ವಿಕಲಚೇತನ ಬಾಲಕ ಆದರ್ಶ್ ಬುಧವಾರ ಮೃತಪಟ್ಟಿದ್ದಾನೆ. ಈತ ಪುನೀತ್ ರಾಜ್‍ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದು, ನಾನಾ ಕಾಯಿಲೆಗಳಿಂದ ಬಳಲುತ್ತಿದ್ದನು. ಇದೀಗ ನಿನ್ನೆ ಇಹಲೋಕ ತ್ಯಜಿಸಿದ್ದಾನೆ.

    ಆದರ್ಶ್, ಅಪ್ಪು ಅಭಿನಯದ ಸಿನಿಮಾ, ಹಾಡು ಡ್ಯಾನ್ಸ್ ನೋಡಿಯೇ ಬೆಳೆದಿದ್ದಾನೆ. ಈ ಹಿಂದೆ ಪುನೀತ್ ನೋಡಲೇ ಬೇಕು ಎಂದು ಹಠ ಹಿಡಿದು ಕುಳಿತಿದ್ದ. ಹೀಗಾಗಿ ಆದರ್ಶ್ ನನ್ನು ಹೊಸಪೇಟೆಯಿಂದ ಬೆಂಗಳೂರಿನ ತಮ್ಮ ನಿವಾಸಕ್ಕೆ ಪುನೀತ್ ಕರೆಸಿಕೊಂಡಿದ್ದರು. ನಂತರ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದ ಬಾಲಕನ ಚಿಕಿತ್ಸೆಗೆಂದು ಆಸ್ಪತ್ರೆಯ ಆಡಳಿತ ಮಂಡಳಿಯ ಜೊತೆ ಅಪ್ಪು ಮಾತನಾಡಿದ್ದರು. ಇದಲ್ಲದೆ ಅಮೆರಿಕ ಮೂಲದ ವೈದ್ಯರಿಗೂ ಪುನೀತ್ ಚಿಕಿತ್ಸೆಗೆ ಮನವಿ ಮಾಡಿದ್ದರು.  ಇದನ್ನೂ ಓದಿ: ಪುಟ್ಟ ಬಾಲಕನ ಆಸೆ ಈಡೇರಿಸಿ ಆಸ್ಪತ್ರೆ ಖರ್ಚು ಭರಿಸಿದ ಅಪ್ಪು

    ಬಳ್ಳಾರಿ ಜಿಲ್ಲೆಯ ಹೊಸಪೇಟ್ ನಗರದ ಇಂದಿರ ನಗರ ನಿವಾಸಿಗಳಾದ ಹನಮಂತ್ ಮತ್ತು ರೇಖಾ ದಂಪತಿಯ ಹಿರಿಯ ಮಗನಾಗಿರುವ ಆದರ್ಶ್ ಹುಟ್ಟಿದ್ದಾಗಿನಿಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದನು. ಬೇರೆ ಮಕ್ಕಳ ಹಾಗೆ ಈತನಿಗೂ ಆಟ ಆಡಬೇಕು ಶಾಲೆಗೆ ಹೋಗಬೇಕು ಎನ್ನುವ ಆಸೆಯಿತ್ತು. ಆದರೆ ಆದರ್ಶ್ ದೇಹದ ಎಲ್ಲಾ ಮೂಳೆಗಳ ಬೆಳವಣಿಗೆ ಆಗುತ್ತಿದೆ ಹೊರತು ದೇಹದಲ್ಲಿ ಮಾಂಸ ಖಂಡಗಳ ಬೆಳವಣಿಗೆ ಆಗುತ್ತಿರಲಿಲ್ಲ. ಹೀಗಾಗಿ ಈ ಪುಟ್ಟ ಬಾಲಕ ಸ್ವತಂತ್ರವಾಗಿ ಏನನ್ನು ಮಾಡಲು ಸಾಧ್ಯವೇ ಇಲ್ಲವಾಗಿತ್ತು. ಆದರೆ ಈತನ ಬುದ್ಧಿ ಮಾತ್ರ ಅತೀ ತೀಕ್ಷ್ಣವಾಗಿತ್ತು. ಇದನ್ನೂ ಓದಿ: ಪುನೀತ್‌ರನ್ನು ನೋಡಲು ಅಂಗೈಯಲ್ಲಿ ಜೀವ ಹಿಡಿದುಕೊಂಡು ಕುಳಿತಿದ್ದಾನೆ ಬಾಲಕ

    ಆದರ್ಶ್ ಅವರ ತಂದೆ ಕಡು ಬಡವರಾಗಿದ್ದು, ಜೀವನ ನಡೆಸಲು ಆಟೋ ಇದೆ. ಇದರ ಸಂಪಾದನೆಯಿಂದಲೇ ಕುಟುಂಬ ಸಾಗಿಸುತ್ತಿದ್ದಾರೆ. ಆದರೆ ಹುಟ್ಟಿದಾಗಿನಿಂದಲೇ ಮಗನ ಕಾಯಿಲೆ ಕಂಡು ರಾಜ್ಯದ ಹೆಸರಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಮಗನ ಕಾಯಿಲೆ ಮಾತ್ರ ವಾಸಿ ಆಗಿಲ್ಲ. ಹೀಗಾಗಿ ತಂದೆ-ತಾಯಿ ಸಹ ಕೈ ಚೆಲ್ಲಿದ್ದರು. ಇನ್ನು ಮಗನಿಗೆ ಪುನೀತ್ ಎಂದರೆ ಬಹಳ ಅಚ್ಚುಮೆಚ್ಚು. ಹೀಗಾಗಿ ಪುನೀತ್ ಸಿನಿಮಾ ಬಿಡುಗಡೆ ಆದರೆ ಸಾಕು ಈ ಬಾಲಕನನ್ನು ಕರೆದುಕೊಂಡು ಚಿತ್ರ ನೋಡಿಕೊಂಡು ಬರುತ್ತಿದ್ದರು.

  • ದರ್ಶನ್ ಗೆ ವಿನೂತನ ಗಿಫ್ಟ್ ನೀಡಿದ ಟೆಕ್ಕಿ – ಯಾರಿದು ಸಚಿನ್ ಸಂಘೆ?

    ದರ್ಶನ್ ಗೆ ವಿನೂತನ ಗಿಫ್ಟ್ ನೀಡಿದ ಟೆಕ್ಕಿ – ಯಾರಿದು ಸಚಿನ್ ಸಂಘೆ?

    – ಚಾಕೃತಿಯ ಮೇಕಿಂಗ್ ವಿಡಿಯೋ ರಿಲೀಸ್

    ಚಿಕ್ಕಬಳ್ಳಾಪುರ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನೀಡಿರುವ ಅಪರೂಪದ ಗಿಫ್ಟೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಗಿಫ್ಟ್ ನ ಹರಿಕಾರ ಚಾಕೃತಿ ಕರಕುಶಲ ಕಲಾವಿದ ಸಚಿನ್ ಸಂಘೆ ಎಂಬುದಾಗಿ ತಿಳಿದುಬಂದಿದೆ.

    ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ಮುದುಗೆರೆ ಗ್ರಾಮದ ಕಲಾವಿದ ಸಚಿನ್ ಸಂಘೆ ಅವರು ಸುಮಾರು 15 ಗಂಟೆ ಕೆಲಸ ಮಾಡಿ ದರ್ಶನ್ ಗೆ ಈ ಚಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಅವರು ಇದರ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ.

    ಸುಣ್ಣದ ಬಳಪ (ಚಾಕ್ ಪೀಸ್) ನಲ್ಲಿ ಅರಳಿರುವ ದರ್ಶನ್ ರ ಭಾವಚಿತ್ರ ನೋಡುಗರ ಗಮನ ಸೆಳೆಯುವಂತಿದೆ. ಈಗ ಮೇಕಿಂಗ್ ವಿಡಿಯೋ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಸಲಿಗೆ ದರ್ಶನ್ ರ ಈ ಚಾಕೃತಿ ಆರಳಿಸೋಕೆ ಸಚಿನ್ ಸಂಘೆ 15 ಗಂಟೆಗಳ ಕಾಲ ತಮ್ಮ ಪರಿಶ್ರಮ ಹಾಕಿ ತುಂಬಾ ಸೊಗಸಾಗಿ ಮೂಡಿ ಬರುವಂತೆ ಮಾಡಿದ್ದಾರೆ. ಇನ್ನೂ 15 ಗಂಟೆಗಳ ತಮ್ಮ ಕಾರ್ಯವನ್ನ ಸ್ಲೋ ಮೋಷನ್ ವಿಡಿಯೋ ಮೂಲಕ 30 ಸೆಕೆಂಡ್ ಗೆ ಇಳಿಸಿ ಅದನ್ನ ತಮ್ಮ ಫೇಸ್ ಬುಕ್ ಸೇರಿದಂತೆ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಯಾರು ಈ ಸಚಿನ್ ಸಂಘೆ…?:
    ಗೌರಿಬಿದನೂರು ತಾಲೂಕಿನ ಮುದುಗೆರೆ ಗ್ರಾಮದ ರೈತ ಕುಟುಂಬವರು. ಸದ್ಯ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಸಚಿನ್ ಸಂಘೆ, ಸಿಸ್ಕೋ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದ ಹಾಗೆ ತಮ್ಮ ಬಿಡುವಿನ ವೇಳೆಯಲ್ಲಿ ಆಯಾ ಸಮಯದ ಟ್ರೆಂಡ್ ಗೆ ತಕ್ಕಂತೆ ಚಾಕೃತಿ ಗಳನ್ನ ಬಿಡಿಸೋದು ಇವರ ಹವ್ಯಾಸ.

    ತಮ್ಮ ಶಾಲಾ ದಿನಗಳಿಂದಲೇ ಇಂತಹ ನೂರಾರು ಚಾಕೃತಿಗಳನ್ನ ಬಿಡಿಸಿರುವ ಸಚಿನ್ ಸಂಘೆ, ಅವುಗಳಿಂದಲೇ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಬಾಲಿವುಡ್ ನಟ ಅಮಿತಾಬ್‍ಬಚ್ಚನ್ ರ ಚಾಕೃತಿಯನ್ನೂ ಕೂಡ ಮಾಡಿದ್ದರು. ತನ್ನದೇ ಚಾಕೃತಿಯನ್ನ ಕಂಡ ಅಮಿತಾಬ್‍ಬಚ್ಚನ್ ಸಚಿನ್ ಸಂಘೆ ಕೌಶಲ್ಯಕ್ಕೆ ಟ್ವಿಟ್ಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರಧಾನಿ ಮಂತ್ರಿ ನರೇಂದ್ರ ಮೋದಿಯ ಚಾಕೃತಿ ಬಿಡಿಸಿದ್ದ ಸಚಿನ್ ಸಂಘೆ ಅದನ್ನ ನೇರವಾಗಿ ಮೋದಿಯವರಿಗೆ ತಲುಪಿಸಿ ಅವರಿಂದಲೂ ಮೆಚ್ಚುಗೆ ಪಡೆದಿದ್ದರು.

    ಮೋದಿಯವರು ಸಹ ಅದನ್ನ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟ ಮಾಡಿ ಸಚಿನ್ ಸಂಘೆಯವರ ಕಾರ್ಯಕ್ಕೆ ಶಹಬ್ಬಾಸ್ ಅಂದಿದ್ದರು. ಸಚಿನ್ ಹೆಸರಿಟ್ಟಿಕೊಂಡಿರುವ ಈ ಸಚಿನ್ ಸಂಘೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಚಾಕೃತಿ ಸಹ ಬಿಡಿಸಿ ಅವರನ್ನ ಭೇಟಿಯಾಗಿ ಉಡುಗೊರೆ ನೀಡಿದ್ದರು. ಇಷ್ಟು ಮಾತ್ರವಲ್ಲದೇ ಇತ್ತೀಚೆಗೆ ಲೋಕಾರ್ಪಣೆಗೊಂಡ ಸರ್ದಾರ್ ವಲ್ಲಭಾಯ್ ಪಟೇಲರ ಬೃಹತ್ ಪ್ರತಿಮೆಯ ಚಾಕೃತಿಯನ್ನ ಸಹ ಸಚಿನ್ ಸಂಘೆ ಬಿಡಿಸಿದ್ದಾರೆ. 

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv