Tag: ಆಟೋರಿಕ್ಷಾ

  • ಬೆಂಗಳೂರಿನಲ್ಲಿ ಆಟೋ ದರ ಏರಿಕೆ: ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

    ಬೆಂಗಳೂರಿನಲ್ಲಿ ಆಟೋ ದರ ಏರಿಕೆ: ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

    ಬೆಂಗಳೂರು: ಪೆಟ್ರೋಲ್, ಡಿಸೇಲ್ ದರ ಏರಿಕೆಯಿಂದ ಕಂಗೆಟ್ಟು ಸ್ವಂತ ವಾಹನಗಳಿಗೆ ಗುಡ್ ಬಾಯ್ ಹೇಳಿ ಆಟೋಗಳ ಮೊರೆಹೋಗಿದ್ದ ಪ್ರಯಾಣಿಕರಿಗೆ ನಾಳೆಯಿಂದ ಆಟೋದವರು ದರ ಏರಿಕೆಯ ಶಾಕ್ ನೀಡಲಿದ್ದಾರೆ.

    ಈ ಹಿಂದೆ ಕನಿಷ್ಠ ಚಾರ್ಜ್ 25 ರೂ. ಇತ್ತು. ಸದ್ಯ ಈ ದರಕ್ಕೆ ಈಗ ಹೆಚ್ಚುವರಿಯಾಗಿ 5 ರೂ. ಸೇರ್ಪಡೆಯಾಗಲಿದ್ದು, ನಾಳೆಯಿಂದ ಮಿನಿಮಮ್ ಚಾರ್ಜಸ್ 30 ರೂ.ಗೆ ಏರಿಕೆಯಾಗಲಿದೆ. ಜೊತೆಗೆ ಹಿಂದೆ ಒಂದು ಕಿ.ಮೀಗೆ 13 ರೂ. ಮೀಟರ್ ಮುಖಾಂತರ ಪಡೆದುಕೊಳ್ಳಲಾಗುತ್ತಿದ್ದು, ಸದ್ಯ ಮೀಟರ್ ದರವನ್ನು ಏರಿಕೆ ಮಾಡಿದ್ದು, ಒಂದು ಕಿಮೀಗೆ ಇನ್ಮುಂದೆ 15 ರೂ. ಆಗಲಿದೆ.

    ಕಳೆದ ಕೆಲ ದಿನಗಳಿಂದಲೂ ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗುತ್ತಲೆ ಇದೆ. ಇಂಧನ, ಆಟೋ ಗ್ಯಾಸ್, ಆಟೋ ಬಿಡಿ ಭಾಗಗಳು, ಇನ್ಸೂರೆನ್ಸ್ ಸೇರಿದಂತೆ ಎಲ್ಲಾ ಬೆಲೆಗಳು ಗಗನಕ್ಕೇರಿದೆ.

    ಇದರಿಂದಾಗಿ ಆಟೋ ಚಾಲಕರು ಜೀವನ ನಡೆಸಬೇಕಾದರೆ ಬಹಳ ಕಷ್ಟವಾಗಿತ್ತು. ಇದರಿಂದ ಕಂಗೆಟ್ಟು ಕುಳಿತಿದ್ದ ಆಟೋ ಚಾಲಕರಿಗೆ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಇದನ್ನೂ ಓದಿ: ಜನಪದರ ಬಾಯಲ್ಲಿ ಹಾಡಾದ ಪುನೀತ್ – ತಾಯಂದಿರ ಕಣ್ಣಲ್ಲಿ ನೀರು ತರಿಸ್ತಿದೆ ಹಾಡು

    ಇದೇ ವೇಳೆ ಬೆಲೆ ಏರಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನುಳಿದವರು ತೊಂದರೆಯಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಪರಿಷ್ಕೃತ ಆಟೋ ದರ :  ಮೊದಲ 2 ಕಿಮೀಗೆ 30 ರೂಪಾಯಿ ನಿಗದಿಗೊಳಿಸಿದ್ದು, ನಂತರದ ಪ್ರತಿ ಕಿಮೀಗೆ 15 ರೂಪಾಯಿ ನೀಡಬೇಕು.  ಮೊದಲ ಐದು ನಿಮಿಷ ಉಚಿತ ಕಾಯುತ್ತಾರೆ. ನಂತರದಲ್ಲಿ ಪ್ರತಿ ನಿಮಿಷಕ್ಕೆ 5 ರೂ. ನೀಡಬೇಕಾಗುತ್ತದೆ.

    20 ಕೆಜಿ ವರೆಗೆ ಲಗೇಜ್ ಸಾಗಣೆ ಉಚಿತವಾಗಿದ್ದು, 21 ಕೆಜಿಯಿಂದ 50 ಕೆಜಿವರೆಗೆ 5 ರೂ. ದರ ನಿಗದಿಗೊಳಿಸಲಾಗಿದೆ. ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು (30+15) ಪಡೆಯಲು ಅವಕಾಶ ನೀಡಲಾಗಿದೆ.ಇದನ್ನೂ ಓದಿ: ಓಮಿಕ್ರಾನ್ ರೂಪಾಂತರಿ ನಮ್ಮ ದೇಶದಲ್ಲೂ ಇರಬಹುದು: ಡಾ.ಸಿ.ಎಸ್ ಮಂಜುನಾಥ್

  • ದಿನಕ್ಕೆ 18 ಗಂಟೆ ಓದು – 21ನೇ ವಯಸ್ಸಿನಲ್ಲಿ ಆಟೋ ಚಾಲಕನ ಪುತ್ರ ಐಎಎಸ್ ಅಧಿಕಾರಿ

    ದಿನಕ್ಕೆ 18 ಗಂಟೆ ಓದು – 21ನೇ ವಯಸ್ಸಿನಲ್ಲಿ ಆಟೋ ಚಾಲಕನ ಪುತ್ರ ಐಎಎಸ್ ಅಧಿಕಾರಿ

    ಲಕ್ನೋ: ಉತ್ತರ ಪ್ರದೇಶದ ವಾರಣಾಸಿಯ ಬಡ ರಿಕ್ಷಾ ಚಾಲಕರೊಬ್ಬರ ಮಗನೊಬ್ಬ ದಿನಕ್ಕೆ 18 ಗಂಟೆಗಳ ಓದಿ ಚಿಕ್ಕವಯಸ್ಸಿನಲ್ಲಿಯೇ ಐಎಎಸ್ ಅಧಿಕಾರಿಯಾಗಿ ವಿಶೇಷ ಸಾಧನೆ ನಿರ್ಮಿಸಿದ್ದಾರೆ.

    ಗೋವಿಂದ್ ಜೈಸ್ವಾಲ್ ತಮ್ಮ 21 ವಯಸ್ಸಿಗೆ ತುಂಬಾ ಪರಿಶ್ರಮದಿಂದ ಓದಿ ತಂದೆ-ತಾಯಿ ಆಶೀರ್ವಾದಿಂದ ತಮ್ಮ ಕನಸನ್ನು ಬೇಗ ತಲುಪಿದ್ದಾರೆ. ಪೋಷಕರಿಗೆ ಗೋವಿಂದ್ ಸೇರಿ ಮೂವರು ಹೆಣ್ಣುಮಕ್ಕಳಿದ್ದಾರೆ. ಮಕ್ಕಳಲ್ಲಿ ಕಿರಿಯವನಾದ ಗೋವಿಂದ್ ಕಡುಬಡತನದಲ್ಲಿಯೂ ದಿನಕ್ಕೆ 18 ಗಂಟೆಗಳ ಸಮಯ ಓದಿ ಈಗ ಉನ್ನತ ಹುದ್ದೆಗೆ ಆಯ್ಕೆ ಆಗಿದ್ದಾರೆ.

    ಗೋವಿಂದ್ ಅವರ ಕುಟುಂಬ 12×8 ಅಳತೆಯ ರೂಮಿನಲ್ಲಿ ವಾಸವಾಗಿತ್ತು. ಉಸ್ಮಾನಪುರ ಸರ್ಕಾರಿ ಶಾಲೆಯಲ್ಲಿ ಓದಿದ ಬಳಿಕ ವಾರಣಾಸಿಯ ಸರ್ಕಾರಿ ಕಾಲೇಜಿನಲ್ಲಿ ಗಣಿತದಲ್ಲಿ ಪದವಿ ಪಡೆದಿದ್ದರು. ನಂತರ ಓದಿನಲ್ಲಿ ಆಸಕ್ತಿ ಹೊಂದಿದ್ದ ಗೋವಿಂದ್ ಯುಪಿಎಸ್‍ಸಿ ಪರೀಕ್ಷೆಯಲ್ಲಿ 48ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.

    ಗೋವಿಂದ್ ಅವರ ತಂದೆ ಒಬ್ಬ ಆಟೋರಿಕ್ಷಾ ಚಾಲಕನಾಗಿದ್ದು, ಕುಟುಂಬ ನಿರ್ವಹಣೆ ಮಾತ್ರ ನೋಡಿಕೊಳ್ಳುತ್ತಿದ್ದರು. ಐಎಎಸ್ ಪರೀಕ್ಷೆಗೆ ಅಧ್ಯಯನ ಮಾಡುವಾಗ ದಿನಕ್ಕೊಂದು ಸಮಸ್ಯೆಯನ್ನು ಎದುರಿಸುತ್ತಿದ್ದರು. ಗೋವಿಂದ್ ಅಧ್ಯಯನ ಮಾಡುವಾಗ ಹಲವು ಸಲ ವಿದ್ಯುತ್ ಕೈ ಕೊಡುತಿತ್ತು. ಒಮ್ಮೆ ಹೋದರೆ ಒಂದೊಂದು ದಿನ ಮತ್ತೆ ಕರೆಂಟ್ ಬರುತ್ತಿರಲಿಲ್ಲ. ಅಷ್ಟೇ ಅಲ್ಲದೇ ಪವರ್ ಹೋದರೆ ನೆರೆಮನೆಯಲ್ಲಿ ಜನರೇಟರ್ ಆನ್ ಆಗುತ್ತಿತ್ತು. ಇದರಿಂದ ಅಧಿಕ ಶಬ್ಧ ಬರುತ್ತಿತ್ತು. ಹೀಗಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಧೃತಿಗೆಡದ ಗೋವಿಂದ ಕೊನೆಗೆ ಮನೆಯ ಕಿಟಕಿಗಳನ್ನು ಮುಚ್ಚಿ ಕಿವಿಗೆ ಹತ್ತಿ ಹಾಕಿಕೊಂಡು ಓದುತ್ತಿದ್ದರು.

    ಗೋವಿಂದ್ ಪದವಿ ಮುಗಿಸಿ ಬಳಿಕ ಸಿವಿಲ್ ಸರ್ವಿಸ್ ಪರೀಕ್ಷೆಯ ಸಿದ್ಧತೆಗಾಗಿ ವಾರಣಾಸಿಯಿಂದ ದೆಹಲಿಗೆ ಬಂದಿದ್ದರು. ಕೆಲವು ದಿನಗಳ ನಂತರ ಮೆಟ್ರೋ ಜೀವನ ಶೈಲಿನಿಂದ ಗೋವಿಂದ್ ಗೆ ಆರ್ಥಿಕ ಸಮಸ್ಯೆ ಎದುರಾಯಿತು. ಆಗ ಅವರ ತಂದೆ ನಾರಾಯಣ ಜೈಸ್ವಾಲ್ ಅವರು ಊರಲ್ಲಿದ್ದ ಸ್ವಲ್ಪ ಜಮೀನನ್ನು ಮಾರಿ ಅದರಲ್ಲಿ ಬಂದಂತಹ ಕೇವಲ 4 ಸಾವಿರ ರೂ. ನೀಡಿ ಮಗನ ಓದಿಗೆ ಸಹಾಯ ಮಾಡಿದ್ದರು.

    ಗೋವಿಂದ್ ದಿನಕ್ಕೆ ಬರೋಬ್ಬರಿ 18 ರಿಂದ 20 ಗಂಟೆಯ ಸಮಯ ಓದುತ್ತಿದ್ದರು. ನಂತರ 2006ರಲ್ಲಿ ಮೊದಲ ಬಾರಿಗೆ ಯುಪಿಎಸ್‍ಸಿ ಪರೀಕ್ಷೆ ಬರೆದರು. ಪರೀಕ್ಷೆ ಬರೆದ ನಂತರ ಗೋವಿಂದ್ ಅವರು ಫಲಿತಾಂಶ ಬರುವತನಕ ಸರಿಯಾಗಿ ನಿದ್ದೆಯೇ ಮಾಡದೆ ಕಾಯುತ್ತಿದ್ದರು. ಕೊನೆಗೂ 48ನೇ ರ್‍ಯಾಂಕ್ ಪಡೆದು ಪಾಸಾಗಿದ್ದರು. ಫಲಿತಾಂಶ ಬಂದಾಗ ಗೋವಿಂದ್ ಅವರೇ ವಿಸ್ಮಿತರಾಗಿದ್ದರು. ನಂತರ ಸಂತೋಷ ಪಟ್ಟು ಮನೆಯ ಸದಸ್ಯರಿಗೆ ಫೋನ್ ಮಾಡಿ ಸಂತಸ ಹಂಚಿಕೊಂಡಿದ್ದರು.

  • ಆಟೋರಿಕ್ಷಾಗಿಂತ ವಿಮಾನಯಾನ ಅಗ್ಗ- ಕೇಂದ್ರ ಸಚಿವ ಜಯಂತ್ ಸಿನ್ಹಾ ಲೆಕ್ಕಾಚಾರ ಓದಿ

    ಆಟೋರಿಕ್ಷಾಗಿಂತ ವಿಮಾನಯಾನ ಅಗ್ಗ- ಕೇಂದ್ರ ಸಚಿವ ಜಯಂತ್ ಸಿನ್ಹಾ ಲೆಕ್ಕಾಚಾರ ಓದಿ

    ನವದೆಹಲಿ: ಭಾರತದಲ್ಲಿ ಆಟೋರಿಕ್ಷಾಗಳಿಗಿಂತ ವಿಮಾನಯಾನ ದರವೇ ಅಗ್ಗ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.

    ಉತ್ತರ ಪ್ರದೇಶ ಗೋರಖ್‍ಪುರದಲ್ಲಿ ಮಾತನಾಡಿದ ಅವರು, ತಮ್ಮ ಹೇಳಿಕೆಗೆ ಸಮರ್ಥನೆಯನ್ನು ನೀಡಿದ್ದಾರೆ ಆಟೋ ಪ್ರಯಾಣದಲ್ಲಿ ಪ್ರತಿ ಕಿಮೀ ಗೆ ಕನಿಷ್ಟ 5 ರೂ. ತೆಗೆದುಕೊಳ್ಳಲಾಗುತ್ತದೆ. ಆದರೆ ವಿಮಾನಯಾನದಲ್ಲಿ ಪ್ರತಿ ಪ್ರಯಾಣಿಕನಿಗೆ 1 ಕಿಮೀಗೆ 4 ರೂ. ಮಾತ್ರ ತೆಗೆದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.

    ತಮ್ಮ ಹೇಳಿಕೆ ಕುರಿತು ದೇಶಾದ್ಯಂತ ಚರ್ಚೆ ಆರಂಭವಾಗುತ್ತಿದಂತೆ ಸ್ಪಷ್ಟನೆ ನೀಡಿರುವ ಸಿನ್ಹಾ, ಭಾರತದ ವಿಮಾನಯಾನ ಸೇವೆಗಳು ಎಷ್ಟು ಅಗ್ಗ ಎಂಬುವುದನ್ನು ವಿವರಿಸಲು ಈ ಹೋಲಿಕೆ ಮಾಡಲಾಗಿದೆ. ವಿಶ್ವ ವಿಮಾನಯಾನ ಸೇವೆಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕಡಿಮೆ ದರ ನಿಗದಿಯಾಗಿದೆ. ಆದರೆ ನಾನು ನಿಮಗೇ ಕಡಿಮೆ ದೂರದ ಪ್ರಯಾಣಕ್ಕೆ ಈ ಸೇವೆ ಬಳಸಿ ಎಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.

    ಭಾರತ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿದ್ದರೂ, ವಿಮಾನಯಾನ ಸೇವೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಭಾರತದ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ಜೆಟ್ ಏರ್‍ವೇಸ್ ಸಂಸ್ಥೆಗಳು ನಷ್ಟ ಅನುಭವಿಸಿದ ಸಂದರ್ಭದಲ್ಲೇ ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv