Tag: ಆಕಾಶ್ ಚೋಪ್ರಾ

  • 20 ಕೋಟಿಗೆ ರಾಹುಲ್‌ ಹರಾಜು: ಆಕಾಶ್‌ ಚೋಪ್ರಾ ಭವಿಷ್ಯ

    20 ಕೋಟಿಗೆ ರಾಹುಲ್‌ ಹರಾಜು: ಆಕಾಶ್‌ ಚೋಪ್ರಾ ಭವಿಷ್ಯ

    ಮುಂಬೈ: ಐಪಿಎಲ್‌ ಹರಾಜಿನಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆಎಲ್‌ ರಾಹುಲ್‌ ದುಬಾರಿ ಬೆಲೆಗೆ ಮಾರಾಟವಾಗಬಹುದು ಎಂದು ಭಾರತದ ಮಾಜಿ ಆಟಗಾರ ಆಕಾಶ್‌ ಚೋಪ್ರಾ ಹೇಳಿದ್ದಾರೆ.

    ಮೆಗಾ ಹರಾಜಿನ ಸಮಯದಲ್ಲಿ ಆಟಗಾರನ ಸಂಭಾವನೆಗೆ ಯಾವುದೇ ಮಿತಿಯಿಲ್ಲದಿದ್ದರೆ, ಕೆಎಲ್ ರಾಹುಲ್ 20 ಕೋಟಿಗೂ ಹೆಚ್ಚು ಮೊತ್ತಕ್ಕೆ ಹರಾಜು ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಮುಂದಿನ ಐಪಿಎಲ್‍ನಲ್ಲಿ ಕನ್ನಡಿಗ ರಾಹುಲ್ ಆರ್​ಸಿಬಿ ಕ್ಯಾಪ್ಟನ್?

    ಐಪಿಎಲ್ 2022 ಕ್ಕೆ ಮುಂಚಿತವಾಗಿ ರಾಹುಲ್ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಾಯಕತ್ವವನ್ನು ತೊರೆಯಲು ಮುಂದಾಗುತ್ತಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಲಕ್ನೋ ಮತ್ತು ಅಹಮದಾಬಾದ್‌ ತಂಡಗಳು ಸೇರ್ಪಡೆಯಾಗಿದ್ದು ಹರಾಜು ಪ್ರಕ್ರಿಯೆ ಜೋರಾಗಿ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಚಿನ್ನದ ಮೊಟ್ಟೆ ಇಟ್ಟ ಐಪಿಎಲ್‌ – 2008ರಲ್ಲಿ ಬಿಡ್‌ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

    ರಾಹುಲ್‌ ಉತ್ತಮ ಬ್ಯಾಟ್ಸ್‌ಮನ್‌ ಮತ್ತು ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಇರುವ ಕಾರಣ ಫ್ರಾಂಚೈಸಿಗಳು ಅವರನ್ನು ದುಬಾರಿ ಬೆಲೆ ನೀಡಿ ಖರೀದಿಸಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

  • ಕೊಹ್ಲಿ ಬಳಿಕ ಟೀಂ ಇಂಡಿಯಾ ಕ್ಯಾಪ್ಟನ್ ಕೆಎಲ್ ರಾಹುಲ್- ಆಕಾಶ್ ಚೋಪ್ರಾ ಭವಿಷ್ಯ

    ಕೊಹ್ಲಿ ಬಳಿಕ ಟೀಂ ಇಂಡಿಯಾ ಕ್ಯಾಪ್ಟನ್ ಕೆಎಲ್ ರಾಹುಲ್- ಆಕಾಶ್ ಚೋಪ್ರಾ ಭವಿಷ್ಯ

    ನವದೆಹಲಿ: ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾ ನಾಯಕತ್ವವನ್ನು ಕೆಎಲ್ ರಾಹುಲ್ ವಹಿಸಿಕೊಳ್ಳುವ ಅವಕಾಶವಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

    ಫೇಸ್‍ಬುಕ್‍ನಲ್ಲಿ ಅಭಿಮಾನಿಗಳೊಂದಿಗೆ ಚಾಟ್ ನಡೆಸಿದ ಆಕಾಶ್ ಚೋಪ್ರಾ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಟೀಂ ಇಂಡಿಯಾ ನಾಯಕತ್ವ ಸ್ಥಾನದಿಂದ ಕೊಹ್ಲಿ ಕೆಳಗಿಳಿಯುವ ವೇಳೆಗೆ ಜವಾಬ್ದಾರಿ ವಹಿಸಿಕೊಳ್ಳಲು ರಾಹುಲ್ ಸಿದ್ಧರಾಗಿರುತ್ತಾರೆ ಎಂದಿದ್ದಾರೆ.

    ಐಪಿಎಲ್ 2020ರ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕ್ಯಾಪ್ಟನ್ ಆಗಿ ಹೇಗೆ ಮುನ್ನಡೆಸಲಿದ್ದಾರೆ. ಭವಿಷ್ಯದಲ್ಲಿ ಭಾರತದ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಚೋಪ್ರಾ, ರಾಹುಲ್ ನಾಯಕನಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂಬ ನಂಬಿಕೆ ಇದೆ. ಆತನ ನಾಯಕತ್ವದ ಭವಿಷ್ಯ ಬಗ್ಗೆ ಈ ಬಾರಿಯ ಟೂರ್ನಿಯಲ್ಲಿ ಸ್ಪಷ್ಟತೆ ಸಿಗಲಿದೆ. ಈ ಟೂರ್ನಿಯಿಂದ ರಾಹುಲ್‍ಗೆ ನಾಯಕತ್ವದ ಕುರಿತು ಹೆಚ್ಚಿನ ಜಾಗೃತಿ ಮೂಡಲಿದೆ. ಎದುರಾಳಿ ತಂಡದ ವಿರುದ್ಧ ಎಂತಹ ವ್ಯೂಹ ರಚಿಸಲಿದ್ದಾರೆ, ಹೇಗೆ ರನ್ ಗಳಿಸಲಿದ್ದಾರೆ ಎಂಬುವುದು ತಿಳಿಯಲಿದೆ ಎಂದಿದ್ದಾರೆ.

    ಕೊಹ್ಲಿ, ರೋಹಿತ್ ಅವರನ್ನು ಗಮನಿಸಿದರೆ ಒಂದು ಅಂಶ ನಮಗೇ ಸ್ಪಷ್ಟವಾಗುತ್ತದೆ. ಇಬ್ಬರೂ ಒಂದೇ ವಯಸ್ಸಿನವರಾಗಿದ್ದು, ಒಂದು ಹಂತಕ್ಕೆ ಬಂದ ಬಳಿಕ ನಾಯಕರಾಗಿ ಗುರುತಿಸಿಕೊಂಡಿದ್ದರು. ಧೋನಿರಂತೆ ಕೊಹ್ಲಿ ಕೂಡ ಒಂದು ದಿನ ನಾಯಕತ್ವದ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ನೀಡಬೇಕಾಗುತ್ತದೆ. ಆ ಸಂದರ್ಭದಲ್ಲಿ ರಾಹುಲ್ ಮೊದಲ ಸ್ಥಾನದಲ್ಲಿರುತ್ತಾರೆ. ಇದುವರೆಗೂ ಆತನ ಆಟದ ಶೈಲಿ, ವ್ಯವಹಾರದ ಶೈಲಿಯನ್ನು ಗಮನಿಸಿದ ಸಂದರ್ಭದಲ್ಲಿ ಆತ ಕ್ಯಾಪ್ಟನ್ ಆಗಿ ಅತ್ಯುತ್ತಮ ರೀತಿಯಲ್ಲಿ ತಂಡವನ್ನು ಮುನ್ನಡೆಸುವ ನಂಬಿಕೆ ಇದೆ ಎಂದರು.

    ಕಳೆದ 12 ಐಪಿಎಲ್ ಆವೃತ್ತಿಗಳಲ್ಲಿ ಪಂಜಾಬ್ ಒಮ್ಮೆಯೂ ಟೈಟಲ್ ಗೆಲುವು ಪಡೆದಿಲ್ಲ. ಟೂರ್ನಿಯಲ್ಲಿ ಒಮ್ಮೆ ಫೈನಲ್ ಪ್ರವೇಶ ಮಾಡಿದ್ದ ಪಂಜಾಬ್ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಬಾರಿ ಕೆಎಲ್ ರಾಹುಲ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದು, ಕೋಚ್ ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಟೈಟಲ್ ಗೆಲ್ಲುವ ಗುರಿ ಹೊಂದಿದೆ. ಉಳಿದಂತೆ ಪಂಜಾಬ್ ತಂಡ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದೊಂದಿಗೆ 2020ರ ಜರ್ನಿಯನ್ನು ಆರಂಭಿಸಲಿದೆ.

  • ಅನುಭವ ಮಾರ್ಕೆಟಿನಲ್ಲಿ ಸಿಗಲ್ಲ – ಧೋನಿಯನ್ನು ಹಾಡಿಹೊಗಳಿದ ಆಕಾಶ್ ಚೋಪ್ರಾ

    ಅನುಭವ ಮಾರ್ಕೆಟಿನಲ್ಲಿ ಸಿಗಲ್ಲ – ಧೋನಿಯನ್ನು ಹಾಡಿಹೊಗಳಿದ ಆಕಾಶ್ ಚೋಪ್ರಾ

    – ಧೋನಿ ಇರುವವರೆಗೂ ಚೆನ್ನೈ ತಂಡ ಉಸಿರಾಡುತ್ತಿರುತ್ತದೆ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿಯವರು ಐಪಿಎಲ್-2020ಯನ್ನು ಆಳುತ್ತಾರೆ ಎಂದು ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

    ಐಪಿಎಲ್ ಆರಂಭಕ್ಕೆ ಕೇವಲ ಇನ್ನು ಒಂದು ವಾರ ಬಾಕಿಯಿದೆ. ಎಲ್ಲ ತಂಡಗಳು ಯುಎಇ ಮೈದಾನದಲ್ಲಿ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿವೆ. ತಡವಾದರೂ ಚೆನ್ನೈ ತಂಡ ಕೂಡ ಅಭ್ಯಾಸವನ್ನು ಆರಂಭಿಸಿದೆ. ಈ ನಡುವೆ ಅವರದ್ದೇ ವಾಹಿನಿಯ ಯುಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, ಎಂಎಸ್ ಧೋನಿಯನ್ನು ಹಾಡಿ ಹೊಗಳಿದ್ದಾರೆ.

    ಧೋನಿ ಚೆನ್ನೈ ತಂಡದ ಅತಿದೊಡ್ಡ ಶಕ್ತಿ, ಇಡೀ ಫ್ರಾಂಚೈಸಿಯೇ ಅವರ ಮೇಲೆ ಅವಲಂಬಿತವಾಗಿದೆ. ಆತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆತ್ಮವಿದ್ದಂತೆ. ಧೋನಿ ತಂಡದಲ್ಲಿ ಇರುವವರೆಗೂ ಚೆನ್ನೈ ತಂಡ ನಿರಳವಾಗಿ ಉಸಿರಾಡುತ್ತದೆ. ಜೊತೆಗೆ ಟೂರ್ನಿಯಲ್ಲಿ ಉತ್ತಮವಾಗಿ ಆಡುತ್ತಾರೆ. ಎಂಎಸ್ ಧೋನಿ ಓರ್ವ ಆಟಗಾರನಾಗಿ ಮತ್ತು ತಂಡದ ನಾಯಕನಾಗಿ ತಂಡದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತಾರೆ ಎಂದು ಚೋಪ್ರಾ ಹೇಳಿದ್ದಾರೆ.

    ಧೋನಿ ಕಳೆದ ಕೆಲ ದಿನಗಳಿಂದ ಕ್ರಿಕೆಟ್ ಆಡಿಲ್ಲ. ಇದು ಕೆಲವರಿಗೆ ಧೋನಿ ಮುಂಚೆಯಂತೆಯೇ ಮೈದಾನದಲ್ಲಿ ಬ್ಯಾಟ್ ಬೀಸುತ್ತಾರಾ, ಓಡುತ್ತಾರಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆದರೆ ನಾವೆಲ್ಲರೂ ಗಮನದಲ್ಲಿ ಇಟ್ಟುಕೊಳ್ಳಬೇಕು ಆತ ಬಹಳ ಅನುಭವವುಳ್ಳ ಆಟಗಾರ, ಅನುಭವವನ್ನು ನಾವು ಸೂಪರ್ ಮಾರ್ಕೆಟಿನಲ್ಲಿ ಕೊಂಡುಕೊಳ್ಳಲು ಆಗುವುದಿಲ್ಲ. ಈ ಬಾರಿ ಧೋನಿ ಉತ್ತಮವಾಗಿ ಆಡುತ್ತಾರೆ ಎಂದು ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಧೋನಿಯವರು ನಮ್ಮ ತಂಡದ ಜೀವನ ಮತ್ತು ಆತ್ಮ ಎಂದು ಈ ಹಿಂದೆಯೇ ಚೆನ್ನೈ ತಂಡ ಹೇಳಿಕೊಂಡಿದೆ. ಹೀಗಾಗಿ ಧೋನಿ ಈ ಬಾರಿ ಎಲ್ಲರಿಗಿಂತ ಬಹಳ ಚೆನ್ನಾಗಿ ಆಡುತ್ತಾರೆ. ಧೋನಿ ಬ್ಯಾಟ್ಸ್ ಮ್ಯಾನ್ ಆಗಿ ಹೆಚ್ಚು ಪ್ರಭಾವ ಬೀರುತ್ತಾರೆ. ಯಾವಾಗ ಸ್ಪಿನ್ನರ್ ಗಳು ಬೌಲ್ ಮಾಡುತ್ತಾರೋ ಆಗ ಧೋನಿ ಉತ್ತಮವಾಗಿ ಆಡುತ್ತಾರೆ. ನನಗೆ ನಂಬಿಕೆ ಇದೆ ಎಂಎಸ್ ಧೋನಿ ಈ ಬಾರಿಯ ಐಪಿಎಲ್ ಅನ್ನು ಆಳುತ್ತಾರೆ ಎಂದು ಅಂತಾ ಆಕಾಶ್ ಚೋಪ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಚೆನ್ನೈ ತಂಡದ ಪ್ರಮುಖ ಇಬ್ಬರು ಆಟಗಾರಾದ ರೈನಾ ಮತ್ತು ಹರ್ಭಜನ್ ವೈಯಕ್ತಿಕ ಕಾರಣದಿಂದ ಐಪಿಎಲ್‍ನಿಂದ ಹೊರೆಗೆ ಬಂದಿದ್ದಾರೆ. ಅದರೂ ಚೆನ್ನೈ ತಂಡ ಬಲಿಷ್ಠವಾಗಿದೆ ಎಂದು ಚೋಪ್ರಾ ಹೇಳಿದ್ದಾರೆ. ಯುಎಇ ಮೈದಾನಗಳು ಸ್ಪಿನ್ನರ್ ಗೆ ಹೆಚ್ಚು ಸಹಾಯಕವಾಗಲಿದ್ದು, ಜಡೇಜಾ, ತಾಹೀರ್, ಚಾವ್ಲಾ ಉತ್ತಮವಾಗಿ ಸ್ಪಿನ್ ಮಾಡಲಿದ್ದಾರೆ ಎಂದು ಚೋಪ್ರಾ ತಿಳಿಸಿದ್ದಾರೆ.

  • ‘ಒಂದು ಫೋನ್ ಕಾಲ್ ದೂರದಲ್ಲಿ ಧೋನಿ ರೀ ಎಂಟ್ರಿ’

    ‘ಒಂದು ಫೋನ್ ಕಾಲ್ ದೂರದಲ್ಲಿ ಧೋನಿ ರೀ ಎಂಟ್ರಿ’

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಂಡಕ್ಕೆ ರೀ ಎಂಟ್ರಿ ಪಡೆಯಲು ಒಂದು ಫೋನ್ ಕಾಲ್ ದೂರದಲ್ಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯ ಪಟ್ಟಿದ್ದಾರೆ.

    2019ರ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಕಳೆದ 8 ತಿಂಗಳಿನಿಂದ ಧೋನಿ ಕ್ರಿಕೆಟ್‍ನಿಂದ ದೂರವಿದ್ದಾರೆ. ಪರಿಣಾಮ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯನ್ನು ಧೋನಿ ಆಡುವುದಿಲ್ಲ ಎಂಬ ಅನುಮಾನ ಮೂಡಿದೆ. ಒಂದೊಮ್ಮೆ ಐಪಿಎಲ್ 2020 ಆವೃತ್ತಿ ನಡೆದರೆ ಧೋನಿ ಪತ್ತೆ ತಂಡಕ್ಕೆ ಕಮ್‍ಬ್ಯಾಕ್ ಮಾಡುತ್ತಾರೆ ಎಂಬ ಲೆಕ್ಕಾಚಾರವಿತ್ತು. ಆದರೆ ಕೊರೋನಾ ಕಾರಣದಿಂದ ಐಪಿಎಲ್ ಮುಂದೂಡಿರುವುದರಿಂದ ಟೂರ್ನಿ ನಡೆಯವುದೇ ಅನುಮಾನವಾಗಿದೆ. ಇದರಿಂದ ಧೋನಿ ರೀ ಎಂಟ್ರಿ ಕುರಿತು ಸಂದಿಗ್ಧತೆ ಎದುರಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ, ಬಿಸಿಸಿಐನ ಮೂವರಲ್ಲಿ ಯಾರಾದರೂ ಒಬ್ಬರು ಒಂದು ಫೋನ್ ಕರೆ ಮಾಡಿದರು ಧೋನಿ ಕಮ್ ಬ್ಯಾಕ್ ಸಾಧ್ಯವಾಗಲಿದೆ. ಬಿಸಿಸಿಐ ಅಧ್ಯಕ್ಷರಾದ ಗಂಗೂಲಿ, ಕ್ಯಾಪ್ಟನ್ ಕೊಹ್ಲಿ, ಕೋಚ್ ರವಿಶಾಸ್ತ್ರಿ ಅವರು ಧೋನಿ ಕಮ್‍ಬ್ಯಾಕ್ ಮಾಡಲು ನೆರವಾಗಬಹುದು ಎಂದಿದ್ದಾರೆ.

    ವಿಶ್ವಕಪ್ ಬಳಿಕ 2 ತಿಂಗಳು ಭಾರತೀಯ ಸೈನ್ಯದೊಂದಿಗೆ ಕೆಲಸ ಮಾಡಿದ್ದ ಧೋನಿ, ಬಿಸಿಸಿಐ ಅನುಮತಿಯನ್ನು ಪಡೆದುಕೊಂಡಿದ್ದರು. ಆ ಬಳಿಕ ಧೋನಿ ಯಾವುದೇ ಪಂದ್ಯವನ್ನು ಆಡಲಿಲ್ಲ. ಈ ನಡುವೆ ಹಲವು ಬಾರಿ ಟೀಂ ಇಂಡಿಯಾ ಆಯ್ಕೆ ಸಮಿತಿ ಸದಸ್ಯರು ಧೋನಿ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಆದರೆ ಟೀಂ ಸೆಲೆಕ್ಷನ್ ವೇಳೆಯಲ್ಲಿ ಪರಿಗಣೆಗೆ ತೆಗೆದುಕೊಂಡಿರಲಿಲ್ಲ. ಇತ್ತ ಧೋನಿ ಕೂಡ ತಮ್ಮ ರೀ ಎಂಟ್ರಿ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ.

    ಧೋನಿ ಸಹ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಜಾರ್ಖಂಡ್ ತಂಡದ ಪರ ಆಡುವ ಅವಕಾಶವಿದ್ದರೂ ಆಡಲಿಲ್ಲ. ಪರಿಣಾಮ ಧೋನಿ ಅವರನ್ನು ಬಿಸಿಸಿಐ ತನ್ನ ಕಾಂಟ್ರಾಕ್ಟ್ ನಿಂದ ದೂರವಿಟ್ಟಿತ್ತು. ಧೋನಿ ಕ್ರಿಕೆಟ್ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದ ಬಳಿಕ ಮೊದಲ ಬಾರಿಗೆ ಬಿಸಿಸಿಐ ಕಾಂಟ್ರಾಕ್ಟ್ ಕಳೆದುಕೊಂಡಿದ್ದರು. ಸದ್ಯ ಅವರ ರೀ ಎಂಟ್ರಿ ಕುರಿತು ಅಭಿಮಾನಿಗಳು ತೀವ್ರ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

    ಟೀಂ ಇಂಡಿಯಾದಿಂದ ದೂರವೇ ಉಳಿದಿದ್ದರು ಕೋಚ್ ರವಿಶಾಸ್ತ್ರಿ, ಧೋನಿ ಅವರು ಕಮ್ ಬ್ಯಾಕ್ ಕುರಿತು ಪ್ರತಿಕ್ರಿಯೆ ನೀಡಿದ್ದರು. ಐಪಿಎಲ್‍ನಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡಿದರೆ ಮತ್ತೆ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ ಎಂದಿದ್ದರು. ಇತ್ತ ತಮ್ಮ ಕಮ್‍ಬ್ಯಾಕ್ ಐಪಿಎಲ್ ಟೂರ್ನಿಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಧೋನಿ, ಮಾರ್ಚ್ ಮೊದಲ ವಾರದಲ್ಲೇ ಚೆನ್ನೈ ತಂಡದ ತರಬೇತಿ ಶಿಬಿರಕ್ಕೆ ಹಾಜರಾಗಿದ್ದರು. ಸದ್ಯ ಐಪಿಎಲ್ ಟೂರ್ನಿ ಮುಂದೂಡಲಾಗಿರುವುದರಿಂದ ಧೋನಿ ಕೆರಿಯರ್ ಕುರಿತು ಬಹುದೊಡ್ಡ ಪ್ರಶ್ನೆ ಮೂಡಿದೆ. ಐಪಿಎಲ್ ರದ್ದಾದರೆ ಧೋನಿ ಕಮ್‍ಬ್ಯಾಕ್ ಮಾಡೋ ಮಾರ್ಗಗಳು ಬಹುತೇಕ ಮುಚ್ಚಿ ಹೋಗಲಿದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.