Tag: ಆಕಾಶ್ ಅಂಬಾನಿ

  • ಗುಜರಾತ್‍ನ ಸೋಮನಾಥ ದೇವಸ್ಥಾನಕ್ಕೆ ಮುಖೇಶ್ ಅಂಬಾನಿ ಭೇಟಿ- 1.51 ಕೋಟಿ ರೂ. ದೇಣಿಗೆ

    ಗುಜರಾತ್‍ನ ಸೋಮನಾಥ ದೇವಸ್ಥಾನಕ್ಕೆ ಮುಖೇಶ್ ಅಂಬಾನಿ ಭೇಟಿ- 1.51 ಕೋಟಿ ರೂ. ದೇಣಿಗೆ

    ಅಹಮದಾಬಾದ್: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ (Mukesh Ambani) ಗುಜರಾತ್‍ನ (Gujarat) ಸೋಮನಾಥ ದೇವಾಲಯದ (Somnath Temple) ಟ್ರಸ್ಟ್‌ಗೆ 1.51 ಕೋಟಿ ರೂ. ದೇಣಿಗೆ ನೀಡಿದ್ದಾರೆ.

    ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ ಮುಖೇಶ್ ಅಂಬಾನಿ ದೇವರ ದರ್ಶನ ಪಡೆದರು. ಈ ವೇಳೆ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಭಾಗಿಯಾಗಿದ್ದರು. ಅವರನ್ನು ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸ್ವಾಗತಿಸಿದರು. ಈ ವೇಳೆ ಮುಖೇಶ್ ಅಂಬಾನಿ ಹಾಗೂ ಆಕಾಶ್ ಅಂಬಾನಿ ಶಿವಲಿಂಗಕ್ಕೆ ಅಭಿಷೇಕ ಮಾಡಿ ಪ್ರಾರ್ಥಿಸಿದರು. ಇದನ್ನೂ ಓದಿ: ಪೊಲೀಸ್‌ ಸರ್ಪಗಾವಲು – ಆಳಂದ ದರ್ಗಾದಲ್ಲಿ ನಡೆಯಿತು ಉರುಸ್, ಶಿವಲಿಂಗ ಪೂಜೆ

    ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮುಖೇಶ್ ಅಂಬಾನಿ ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ 1.5 ಕೋಟಿ ರೂ. ಕಾಣಿಕೆ ಸಲ್ಲಿಸಿದ್ದರು. ಈ ವೇಳೆ ರಾಧಿಕಾ ಮರ್ಚೆಂಟ್ ಮತ್ತು ರಿಲಯನ್ಸ್ ರಿಟೇಲ್ ಲಿಮಿಟೆಡ್ ನಿರ್ದೇಶಕ ಮನೋಜ್ ಮೋದಿ ಜೊತೆಗಿದ್ದರು. ಇದನ್ನೂ ಓದಿ: ಹೆಚ್‌ಡಿಕೆ ಸಿಎಂ ಮಾಡಿದ್ದು ನಾನು: ಸಿದ್ದರಾಮಯ್ಯ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಕೆಳಗಿಳಿದ ಮುಖೇಶ್ ಅಂಬಾನಿ – ಮಗ ಆಕಾಶ್‌ಗೆ ಪಟ್ಟ

    ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಕೆಳಗಿಳಿದ ಮುಖೇಶ್ ಅಂಬಾನಿ – ಮಗ ಆಕಾಶ್‌ಗೆ ಪಟ್ಟ

    ಮುಂಬೈ: ರಿಲಯನ್ಸ್ ಜಿಯೋ ನಿರ್ದೇಶಕರಾಗಿದ್ದ ಮುಖೇಶ್ ಅಂಬಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ಹಿರಿಯ ಮಗ ಆಕಾಶ್‌ಗೆ ನಿರ್ದೇಶಕ ಸ್ಥಾನವನ್ನು ಹಸ್ತಾಂತರಿಸಿದ್ದಾರೆ.

    ಕಂಪನಿಯ ನಿರ್ದೇಶಕರ ಮಂಡಳಿ ಸೋಮವಾರ ನಡೆದ ಸಭೆಯಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಕಾಶ್ ಅಂಬಾನಿ ಅವರನ್ನು ಕಂಪನಿಯ ಅಧ್ಯಕ್ಷರನ್ನಾಗಿ ನೇಮಿಸಲು ಅನುಮೋದನೆ ನೀಡಿದೆ. ಈ ಬಗ್ಗೆ ರಿಲಯನ್ಸ್ ಇನ್ಫೋಕಾಮ್ ಭಾರತೀಯ ಷೇರು ಮಾರುಕಟ್ಟೆಗಳಿಗೆ ಮಾಹಿತಿ ನೀಡಿದೆ. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – ಕೆಎಸ್‌ಆರ್‌ಟಿಸಿ ವಿದ್ಯಾರ್ಥಿ ಬಸ್ ಪಾಸ್ ಅವಧಿ ವಿಸ್ತರಣೆ

    ಆಕಾಶ್ ಅಂಬಾನಿ ಅಮೆರಿಕದ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಪದವೀಧರರಾಗಿದ್ದು, ಅವರು ಹೊಸ ತಂತ್ರಜ್ಞಾನಗಳು ಹಾಗೂ ಸಾಮರ್ಥ್ಯಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಡೇಟಾ ಮತ್ತು ತಂತ್ರಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಲುಪಿಸಲು ಕೆಲಸ ಮಾಡುವುದಾಗಿ ಕಂಪನಿ ತಿಳಿಸಿದೆ.

    ಇದರೊಂದಿಗೆ ಮಂಡಳಿ ತನ್ನ ಸಭೆಯಲ್ಲಿ ಪಂಕಜ್ ಮೋಹನ್ ಪವಾರ್ ಅವರನ್ನು 5 ವರ್ಷಗಳ ಅವಧಿಗೆ ರಿಲಯನ್ಸ್ ಜಿಯೋ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲು ಅನುಮೋದಿಸಿದೆ. ರಮಿಂದರ್ ಸಿಂಗ್ ಗುಜ್ರಾಲ್ ಹಾಗೂ ಕೆ.ವಿ ಚೌಧರಿ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಿದೆ. ಇದನ್ನೂ ಓದಿ: ದಿಢೀರ್ ಭಾರೀ ಇಳಿಕೆಯಾಗಲಿದೆ ಫೋನ್ ಬೆಲೆ

    ರಾಜೀನಾಮೆ ನೀಡಿದ್ದರೂ ರಿಲಯನ್ಸ್ ಜಿಯೋ ಸೇರಿದಂತೆ ಎಲ್ಲಾ ಜಿಯೋ ಡಿಜಿಟಲ್ ಬ್ರ್ಯಾಂಡ್‌ಗಳ ಕಂಪನಿ ಜಿಯೋ ಪ್ಲಾಟ್‌ಫಾರ್ಮ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಮುಖೇಶ್ ಅಂಬಾನಿಯೇ ಮುಂದುವರಿಯಲಿದ್ದಾರೆ. ಅಂಕಿ ಅಂಶಗಳ ಪ್ರಕಾರ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಜಿಯೋ ಏಪ್ರಿಲ್‌ನಲ್ಲಿ 16.8 ಲಕ್ಷ ಮೊಬೈಲ್ ಚಂದಾದಾರರನ್ನು ಗಳಿಸಿದೆ. ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ ಟೆಲಿಕಾಂ ನೆಟ್‌ವರ್ಕ್ ಪೈಕಿ ಮೊದಲ ಸ್ಥಾನದಲ್ಲಿದೆ.

    Live Tv

  • ಈ ವರ್ಷ ಆಡದೇ ಇದ್ದರೂ ಆರ್ಚರ್‌ಗೆ ಮುಂಬೈ 8 ಕೋಟಿ ನೀಡಿದ್ದು ಯಾಕೆ: ರಿವೀಲ್‌ ಮಾಡಿದ ಆಕಾಶ್‌ ಅಂಬಾನಿ

    ಈ ವರ್ಷ ಆಡದೇ ಇದ್ದರೂ ಆರ್ಚರ್‌ಗೆ ಮುಂಬೈ 8 ಕೋಟಿ ನೀಡಿದ್ದು ಯಾಕೆ: ರಿವೀಲ್‌ ಮಾಡಿದ ಆಕಾಶ್‌ ಅಂಬಾನಿ

    ಬೆಂಗಳೂರು: ಈ ವರ್ಷ ಐಪಿಎಲ್‌ ಆಡದೇ ಇದ್ದರೂ ಜೋಫ್ರಾ ಆರ್ಚರ್‌ ಅವರನ್ನು ಮುಂಬೈ ಇಂಡಿಯನ್ಸ್‌ 8 ಕೋಟಿ ರೂ. ಖರೀದಿಸಿದ್ದು ಯಾಕೆ ಎಂಬ ಪ್ರಶ್ನೆಗೆ ಮಾಲಕಿ ನೀತಾ ಅಂಬಾನಿ ಪುತ್ರ ಆಕಾಶ್‌ ಅಂಬಾನಿ ತಿಳಿಸಿದ್ದಾರೆ.

    ವರ್ಚುಯಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ದಿನದ ಹರಾಜಿನ ನಂತರ ಉಳಿದಿರುವ ವೇಗದ ಬೌಲರ್‌ಗಳ ಪೈಕಿ ಜೋಫ್ರಾ ಆರ್ಚರ್ ಖರೀದಿಸುವ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡಿದೆವು. ಈ ವರ್ಷ ಅವರು ಲಭ್ಯ ಇರುವುದಿಲ್ಲ. ಫಿಟ್‌ ಆದಾಗ ಬುಮ್ರಾ, ಆರ್ಚರ್‌ ಜೋಡಿ ಬೌಲಿಂಗ್‌ನಲ್ಲಿ ನಮಗೆ ಬಲ ತುಂಬಬಹುದು ಎಂದು ಹೇಳಿದ್ದಾರೆ.

    ಶನಿವಾರ ರಾತ್ರಿಯೇ ಆರ್ಚರ್‌ ಅವರನ್ನು ಖರೀದಿಸುವ ಬಗ್ಗೆ ನಿರ್ಧಾರ ಮಾಡಲಾಯಿತು. ತಂಡಕ್ಕೆ ವೇಗದ ಬೌಲರ್‌ ಬೇಕು ಎಂದಾಗ ನಮ್ಮ ಆಯ್ಕೆ ಆರ್ಚರ್‌ ಆಗಿತ್ತು. ಈ ಕಾರಣಕ್ಕೆ ಬಜೆಟ್‌ ಅನ್ನು ಮೊದಲೇ ಸಿದ್ಧಪಡಿಸಿ ಶನಿವಾರ ರಾತ್ರಿಯೇ ಫೈನಲ್‌ ಮಾಡಿದ್ದೆವು ಎಂದು ತಿಳಿಸಿದರು. ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

    ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಸಮತೋಲನ ಹೊಂದಿರುವ ಮುಂಬೈ 5 ಬಾರಿ ಚಾಂಪಿಯನ್‌ ಆಗಿದೆ. ಹೀಗಾಗಿ 2023ರ ಐಪಿಎಲ್‌ ಅನ್ನು ಗಮನದಲ್ಲಿಟ್ಟುಕೊಂಡು ಆರ್ಚರ್‌ ಅವರನ್ನು ಖರೀದಿ ಮಾಡಿದೆ.

    ಲಸಿತ್ ಮಲಿಂಗ ವಿದಾಯದ ಬಳಿಕ ಮುಂಬೈ ಇಂಡಿಯನ್ಸ್ ಹಲವು ವಿದೇಶಿ ಬೌಲರ್‌ಗಳನ್ನು ಖರೀದಿ ಮಾಡಿದೆ. ಆದರೆ ಯಾರೂ ಅಷ್ಟೊಂದು ಯಶಸ್ವಿಯಾಗಿಲ್ಲ. ಹೀಗಾಗಿ ಬುಮ್ರಾ, ಆರ್ಚರ್‌ ಜೋಡಿ ಒಂದಾದರೆ ಬೌಲಿಂಗ್‌ನಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಬಹುದು ಎಂಬ ಲೆಕ್ಕಾಚಾರವನ್ನು ಮುಂಬೈ ಹಾಕಿಕೊಂಡಿದೆ.  ಇದನ್ನೂ ಓದಿ: ಮೋದಿಯಿಂದ ದೀಪ ಹಚ್ಚುವಂತೆ ಕರೆ – ವೈರಲ್ ಆಯ್ತು ಜೋಫ್ರಾ ಆರ್ಚರ್ ನುಡಿದಿದ್ದ ಭವಿಷ್ಯ

    ಗಾಯಗೊಂಡಿರುವ ಜೋಫ್ರಾ ಆರ್ಚರ್ 2021ರ ಐಪಿಎಲ್ ಟೂರ್ನಿಯಿಂದಲೂ ಹೊರಗುಳಿದಿದ್ದರು. ಟಿ20 ವಿಶ್ವಕಪ್ ಟೂರ್ನಿ ಕಾರಣ ಜೋಫ್ರಾ ಐಪಿಎಲ್ ಟೂರ್ನಿಯಿಂದ ದೂರ ಉಳಿದಿದ್ದರು. ಇದು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಭಾರೀ ಹೊಡೆತ ನೀಡಿತ್ತು.

    ಐಪಿಎಲ್ ಟೂರ್ನಿಯಲ್ಲಿ ಒಟ್ಟು 35 ಪಂದ್ಯಗಳನ್ನು ಆಡಿರುವ ಜೋಫ್ರಾ ಆರ್ಚರ್ 46 ವಿಕೆಟ್ ಪಡೆದಿದ್ದಾರೆ. 15 ರನ್ ನೀಡಿ 3 ವಿಕೆಟ್ ಕಬಳಿಸಿರುವುದು ಜೋಫ್ರಾ ಅತ್ಯುತ್ತಮ ಸಾಧನೆಯಾಗಿದೆ. ಇಂಗ್ಲೆಂಡ್ ಪರ 12 ಟಿ20 ಪಂದ್ಯ ಆಡಿರುವ ಜೋಫ್ರಾ ಆರ್ಚರ್ 14 ವಿಕೆಟ್ ಉರುಳಿಸಿದ್ದಾರೆ. 13 ಟೆಸ್ಟ್ ಪಂದ್ಯ ಹಾಗೂ 17 ಏಕದಿನ ಪಂದ್ಯವನ್ನೂ ಆಡಿದ್ದಾರೆ.  ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

  • ಅಜ್ಜನಾಗಿ ಬಡ್ತಿ ಪಡೆದ ಉದ್ಯಮಿ ಮುಖೇಶ್ ಅಂಬಾನಿ

    ಅಜ್ಜನಾಗಿ ಬಡ್ತಿ ಪಡೆದ ಉದ್ಯಮಿ ಮುಖೇಶ್ ಅಂಬಾನಿ

    -ಶ್ಲೋಕಾ, ಆಕಾಶ್ ದಂಪತಿಗೆ ಗಂಡು ಮಗು

    ನವದೆಹಲಿ: ಆಕಾಶ್ ಮತ್ತು ಶ್ಲೋಕಾ ದಂಪತಿಗೆ ಇಂದು ಗಂಡು ಮಗು ಜನಿಸಿದೆ. ಈ ಮೂಲಕ ಖ್ಯಾತ ಉದ್ಯಮಿ ರಿಲಾಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅಜ್ಜನಾಗಿ ಬಡ್ತಿ ಪಡೆದಿದ್ದಾರೆ.

    ಮುಂಬೈನ ಆಸ್ಪತ್ರೆಯಲ್ಲಿ ಶ್ಲೋಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಧೀರೂಬಾಯಿ ಹಾಗೂ ಕೋಕಿಲಾಬೆನ್ ಅಂಬಾನಿ ಕುಟುಂಬದ ಮರಿಮೊಮ್ಮಗನನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ಮೂಲಕ ನೀತಾ ಮತ್ತು ಮುಕೇಶ್ ಅಂಬಾನಿ ಅಜ್ಜ, ಅಜ್ಜಿಯಾಗಿದ್ದಾರೆ.

    ಕೃಷ್ಣ ಪರಮಾತ್ಮನ ದಯೆ ಮತ್ತು ಆಶೀರ್ವಾದದಿಂದ ಶ್ಲೋಕಾ ಹಾಗೂ ಆಕಾಶ್ ಅಂಬಾನಿ ಅವರಿಗೆ ಗಂಡು ಸಂತಾನವಾಗಿದೆ. ನೀತಾ ಮತ್ತು ಮುಕೇಶ್ ಅಂಬಾನಿ ಅವರು ಮೊದಲ ಬಾರಿ ಅಜ್ಜ-ಅಜ್ಜಿಯಾದ ಬಗ್ಗೆ ಸಂತಸ ಪಟ್ಟಿದ್ದಾರೆ ಎಂದು ವರದಿಯಾಗಿದೆ.

    2019 ಮಾರ್ಚ್‍ನಲ್ಲಿ ಹಸೆಮಣೆ ಏರಿದ್ದ ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೇಹ್ತಾ ವಿವಾಹ ಅದ್ದೂರಿಯಾಗಿ ನೆರವೆರಿತ್ತು. ಮದುವೆ ಸಮಾರಂಭದಲ್ಲಿ ಟೋನಿ ಬ್ಲೇರ್, ಸಚಿನ್ ತೆಂಡೂಲ್ಕರ್, ಅಮಿರ್ ಖಾನ್ ಹೀಗೆ ಹಲವಾರು ಗಣ್ಯಾತೀಗಣ್ಯರು ಭಾಗವಹಿಸಿದ್ದರು. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ವಿವಾಹವಾಗಿದ್ದ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹತಾ ಇದೀಗ ಸಂತಾನ ಪಡೆದಿದ್ದಾರೆ.

  • ಸೊಸೆಗೆ ನೀತಾ ಅಂಬಾನಿ ಗಿಫ್ಟ್ ಮಾಡಿದ್ರು ಬರೋಬ್ಬರಿ 300 ಕೋಟಿಯ ವಜ್ರದ ಹಾರ!

    ಸೊಸೆಗೆ ನೀತಾ ಅಂಬಾನಿ ಗಿಫ್ಟ್ ಮಾಡಿದ್ರು ಬರೋಬ್ಬರಿ 300 ಕೋಟಿಯ ವಜ್ರದ ಹಾರ!

    ಮುಂಬೈ: ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪುತ್ರ ಆಕಾಶ್ ಅಂಬಾನಿ ತಮ್ಮ ಬಾಲ್ಯ ಸ್ನೇಹಿತೆ, ವಜ್ರ ವ್ಯಾಪಾರಿಯಾಗಿರುವ ರುಸ್ಸೆಲ್ ಮೆಹ್ತಾ ಅವರ ಪುತ್ರಿ ಶ್ಲೋಕಾ ಮೆಹ್ತಾರನ್ನು ಮಾರ್ಚ್ 9ರಂದು ವಿವಾಹವಾಗಿದ್ದಾರೆ. ಆದ್ದರಿಂದ ತಮ್ಮ ಪ್ರೀತಿಯ ಸೊಸೆಗೆ ನೀತಾ ಅಂಬಾನಿ ಬರೋಬ್ಬರಿ 300 ಕೋಟಿ ರೂ. ಬೆಲೆಬಾಳುವ ವಜ್ರದ ಹಾರವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಹೌದು, ಸದ್ಯ ನೀತಾ ಅಂಬಾನಿ ತಮ್ಮ ಸೊಸೆ ಶ್ಲೋಕಾ ಅವರಿಗೆ ನೀಡಿರುವ ಈ ದುಬಾರಿ ಗಿಫ್ಟ್ ವಿಷಯ ಕೇಳಿದವರು ಒಂದು ಕ್ಷಣ ಅಚ್ಚರಿಪಡುತ್ತಾರೆ. ಮಗ ಆಕಾಶ್ ಕೈ ಹಿಡಿದು ಬಂದಿರುವ ಶ್ಲೋಕಾಗೆ ನೀತಾ ಅವರು ಸಖತ್ ದುಬಾರಿ ವಜ್ರದ ಹಾರ ಕೊಟ್ಟು ಸಪ್ರ್ರೈಸ್ ನೀಡಿದ್ದಾರೆ.

    ಅತ್ತೆಯ ಒಡವೆಗಳನ್ನು ಸೊಸೆಗೆ ನೀಡುವುದು ಅಂಬಾನಿ ಕುಟುಂಬದ ಸಂಪ್ರದಾಯವಾಗಿದೆ. ಆದರಿಂದ ನೀತಾ ಅಂಬಾನಿಯ ಅತ್ತೆ ತಮಗೆ ನೀಡಿದ್ದ ಒಡವೆಗಳನ್ನು ತಮ್ಮ ಸೊಸೆ ಶ್ಲೋಕಾರಿಗೆ ನೀಡಲು ನಿರ್ಧರಿಸಿದ್ದರು. ಆದರೆ ಆಕಾಶ್ ಹಾಗೂ ಶ್ಲೋಕಾ ಅವರ ಮದುವೆಯ ಬಳಿಕ ಸಂಪ್ರದಾಯದ ಪ್ರಕಾರ ಪರಂಪರೆಯಿಂದ ಬಂದ ಚಿನ್ನದ ಹಾರನ್ನು ಸೊಸೆಗೆ ನೀಡುವ ಬದಲಿಗೆ ದುಬಾರಿ ವಜ್ರದ ಹಾರವನ್ನು ನೀಡಿದ್ದಾರೆ.

    ಅಷ್ಟೇ ಅಲ್ಲದೆ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರು ತಮ್ಮ ಪ್ರೀತಿಯ ಅಣ್ಣ ಅತ್ತಿಗೆಗೆ ಮದುವೆ ಉಡುಗೊರೆಯಾಗಿ ಒಂದು ಐಶಾರಾಮಿ ಬಂಗಲೆಯನ್ನು ನೀಡಿದ್ದಾರೆ.

    ಅಕಾಶ್ ಶ್ಲೋಕಾ ಐಶಾರಾಮಿ ವಿವಾಹದಲ್ಲಿ ಬಾಲಿವುಡ್‍ನ ಸ್ಟಾರ್ ನಟ-ನಟಿಯರಿಂದ ಹಿಡಿದು ಹೆಸರಾಂತ ರಾಜಕಾರಿಗಳು, ಉದ್ಯಮಿಗಳು, ಅಂತರಾಷ್ಟ್ರಿಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಗಣ್ಯರು ಭಾಗಿಯಾಗಿದ್ದರು. ಈ ಮೂಲಕ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಅವರ ಮದುವೆ ಸಮಾರಂಭ ದುಬಾರಿ ಉಡುಗೊರೆ ಹಾಗೂ ಹೆಸರಾಂತ ಗಣ್ಯರಿಂದ ಇನ್ನಷ್ಟು ಅದ್ದೂರಿಯಾಗಿ ನೆರವೇರಿತ್ತು.

  • ಅಂಬಾನಿ ಪುತ್ರನ ನಿಶ್ಚಿತಾರ್ಥದಲ್ಲಿ ಬಲೂನ್ ಟ್ರೇಯಲ್ಲಿ ಅತಿಥಿಗಳಿಗೆ ಭಕ್ಷ್ಯ- ವಿಡಿಯೋ ನೋಡಿ

    ಅಂಬಾನಿ ಪುತ್ರನ ನಿಶ್ಚಿತಾರ್ಥದಲ್ಲಿ ಬಲೂನ್ ಟ್ರೇಯಲ್ಲಿ ಅತಿಥಿಗಳಿಗೆ ಭಕ್ಷ್ಯ- ವಿಡಿಯೋ ನೋಡಿ

    ಮುಂಬೈ: ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ ನಿಶ್ಚಿತಾರ್ಥ ಸಮಾರಂಭದಲ್ಲಿ ಆಕಾಶದಿಂದ ಬಲೂನ್ ಟ್ರೇಗಳ ಮೂಲಕ ಊಟ ಬರುವ ವ್ಯವಸ್ಥೆ ಮಾಡಲಾಗಿತ್ತು.

    ಗುರುವಾರ ಮುಂಬೈನಲ್ಲಿ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮಹ್ತಾ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ. ನಿಶ್ಚಿತಾರ್ಥದಲ್ಲಿ ವರ್ಣ ರಂಜಿತವಾದ ಪುಷ್ಪಾಲಂಕಾರವನ್ನು ಮಾಡಲಾಗಿತ್ತು. ಇದು ಎಲ್ಲರ ಕಣ್ಮನವನ್ನು ಸೆಳೆಯುತ್ತಿತ್ತು. ಇದರ ಜೊತೆಗೆ ಬಂದಿದ್ದ ಅತಿಥಿಗಳಿಗೆ ಬಲೂನ್ ಗಳ ಮೂಲಕ ಆಹಾರದ ಟ್ರೇಗಳು ಗಾಳಿಯಲ್ಲಿ ಬಂದು ಅವರ ಕೈಗೆ ಸೇರುತ್ತಿದ್ದವು.

    ಈ ಆಹಾರದ ಟ್ರೇಗಳು ಗಾಳಿಯಲ್ಲಿ ಬಂದು ಬೀಳುತ್ತಿದ್ದ ವಿಡಿಯೋ ಬೆಳಕಿಗೆ ಬಂದಿದ್ದು, ಈಗ ವಿಡಿಯೋ ವೈರಲ್ ಆಗಿದೆ. ನಿಶ್ಚಿತಾರ್ಥದಲ್ಲಿ ಫ್ರೆಂಚ್ ಐಷಾರಾಮಿ ಆಹಾರದ ಬ್ರಾಂಡ್ `ಲಡುರೀ’ ಯನ್ನು ಪಾರ್ಟಿಯಲ್ಲಿದ್ದ ಅತಿಥಿಗಳಿಗೆ ನೀಡಲಾಯಿತು.

    ಇನ್ನು ನಿಶ್ಚಿತಾರ್ಥ ನಡೆದ ವೇದಿಕೆಯನ್ನು ವಿವಿಧ ರೀತಿಯ ವರ್ಣ ರಂಜಿತವಾದ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ನಿಶ್ಚಿತಾರ್ಥದ ಕೇಕ್ ಕೂಡ ಆಕರ್ಷಕವಾಗಿ ವಿನ್ಯಾಸ ಮಾಡಿಸಲಾಗಿತ್ತು. ಪಾರ್ಟಿಯಲ್ಲಿ ಎಲ್ಲೆಲ್ಲೂ ಹೂಗಳಿಂದ ಅಲಂಕೃತಗೊಂಡಿತ್ತು.

    ಆಕಾಶ್ ಹಾಗೂ ಶ್ಲೋಕಾ ನಿಶ್ಚಿತಾರ್ಥ ಮುಕೇಶ್ ಅಂಬಾನಿ ನಿಶ್ಚಿತಾರ್ಥದಲ್ಲಿ ಬಾಲಿವುಡ್ ತಾರೆಯರು, ಕ್ರಿಕೆಟರ್ ಹಾಗೂ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಚಿನ್ ತೆಂಡೂಲ್ಕರ್ ಹಾಗೂ ಅವರ ಪತ್ನಿ ಅಂಜಲಿ ಭಾಗಿಯಾಗಿದ್ದರು. ಇನ್ನೂ ಬಾಲಿವುಡ್ ತಾರೆಗಳಾದ ಶಾರೂಖ್ ಖಾನ್, ಪ್ರಿಯಂಕಾ ಚೋಪ್ರಾ, ನಿಕ್ ಜೋನಸ್, ಕರಣ್ ಜೋಹರ್, ಅಲಿಯಾ ಭಟ್ ಹಾಗೂ ರಣ್‍ಬೀರ್ ಕಪೂರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

    ಕಾರ್ಯಕ್ರಮಕ್ಕೆ ಅಭಿಷೇಕ್ ಬಚ್ಚನ್ ಪತ್ನಿ ಐಶ್ಚರ್ಯಾ ರೈ ಬಚ್ಚನ್ ಮತ್ತು ಮಗಳು ಆರಾಧ್ಯಳೊಂದಿಗೆ ಆಗಮಿಸಿದ್ದರು. ಅಮೀರ್ ಖಾನ್, ಕಿರಣ್ ರಾವ್, ಹಿರಿಯ ನಟಿ ರೇಖಾ, ಪರಿಣೀತಿ ಚೋಪ್ರಾ, ಆದಿತ್ಯ ರಾಯ್ ಕಪೂರ್, ಸಿದ್ದಾರ್ಥ್ ಮತ್ತು ಶ್ರದ್ಧಾ ಕಪೂರ್ ಇನ್ನು ಅನೇಕ ಇನ್ನು ಗಣ್ಯರು ಪಾಲ್ಗೊಂಡಿದ್ದರು.

    ಮುಕೇಶ್ ಹಾಗೂ ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ನಿಶ್ಚಿತಾರ್ಥ ಕೂಡ ಉದ್ಯಮಿ ಅಜಯ್ ಪಿರಾಮಲ್ ಅವರ ಪುತ್ರ ಆನಂದ್ ಜೊತೆ ಮೇ ತಿಂಗಳಲ್ಲಿ ನಡೆದಿತ್ತು. ಸದ್ಯ ಈಗ ಆಕಾಶ್- ಶ್ಲೋಕಾ, ಇಶಾ ಹಾಗೂ ಆನಂದ್ ಮದುವೆ ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

    https://www.youtube.com/watch?v=opEIKlOe6CM

  • ಮಗನ ನಿಶ್ಚಿತಾರ್ಥದಲ್ಲಿ ನೀತಾ ಅಂಬಾನಿ ಡ್ಯಾನ್ಸ್- ವಿಡಿಯೋ ವೈರಲ್

    ಮಗನ ನಿಶ್ಚಿತಾರ್ಥದಲ್ಲಿ ನೀತಾ ಅಂಬಾನಿ ಡ್ಯಾನ್ಸ್- ವಿಡಿಯೋ ವೈರಲ್

    ಮುಂಬೈ: ಮಗನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ ನಿಶ್ಚಿತಾರ್ಥ ಗುರುವಾರ ಮುಂಬೈನಲ್ಲಿ ನಡೆದಿದೆ. ಮಗನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಹೆಜ್ಜೆ ಹಾಕಿದ್ದಾರೆ.

    ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮಹ್ತಾ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಕಾರ್ಯಕ್ರಮದಲ್ಲಿ ನೀತಾ ಅಬು ಜಾನಿ ಸಂದೀಪ್ ಕೋಸ್ಲಾ ಅವರ ಮರೂನ್ ಬಣ್ಣದ ಸೀರೆಯನ್ನು ಗುಜರಾತಿ ಸ್ಟೈಲ್‍ನಲ್ಲಿ ಧರಿಸಿ ಮಿಂಚಿದ್ದರು.

    ನೀತಾ ಅಂಬಾನಿ ಭರತನಾಟ್ಯ ನೃತ್ಯಗಾರ್ತಿ ಆಗಿದ್ದು, ‘ಕಾಯ್ ಪೋ ಚೇ’ ಸಿನಿಮಾದ ‘ಶುಭಾರಂಭ್’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ನೀತಾ ಅಂಬಾನಿ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಮತ್ತೊಂದು ವಿಡಿಯೋದಲ್ಲಿ ಆಕಾಶ್ ಅವರ ಅವಳಿ ಸಹೋದರಿ ಇಶಾ ಗುಜರಾತಿನ ಸಾಂಪ್ರದಾಯಿಕ ಹಾಡು ಹಾಡಿ ನವಜೋಡಿಗೆ ಆರತಿ ಮಾಡಿದ್ದಾರೆ. ಆರತಿ ಆದ ನಂತರ ಶ್ಲೋಕಾ ತನ್ನ ನಾದಿನಿ ಇಶಾ ಕಾಲು ಮುಟ್ಟಿ ಆರ್ಶಿವಾದ ಪಡೆದಿದ್ದಾರೆ. ನಂತರ ಒಬ್ಬರಿಗೊಬ್ಬರು ತಬ್ಬಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದೆ.

    ಆಕಾಶ್ ಹಾಗೂ ಶ್ಲೋಕಾ ನಿಶ್ಚಿತಾರ್ಥ ಮುಕೇಶ್ ಅಂಬಾನಿ ಮನೆಯಾದ ಅಂಟಿಲ್ಲಾದ 27ನೇ ಮಹಡಿಯಲ್ಲಿ ನಡೆದಿದೆ. ಬಾಲಿವುಡ್ ತಾರೆಯರು, ಕ್ರಿಕೆಟರ್ ಹಾಗೂ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಕಾರ್ಯಕ್ರಮದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಅವರ ಪತ್ನಿ ಅಂಜಲಿ ಭಾಗಿಯಾಗಿದ್ದರು. ಇನ್ನೂ ಬಾಲಿವುಡ್ ತಾರೆಗಳಾದ ಶಾರೂಖ್ ಖಾನ್, ಪ್ರಿಯಂಕಾ ಚೋಪ್ರಾ, ನಿಕ್ ಜೋನಸ್, ಕರಣ್ ಜೋಹರ್, ಅಲಿಯಾ ಭಟ್ ಹಾಗೂ ರಣ್‍ಬೀರ್ ಕಪೂರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

    ಮುಕೇಶ್ ಹಾಗೂ ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ನಿಶ್ಚಿತಾರ್ಥ ಕೂಡ ಉದ್ಯಮಿ ಅಜಯ್ ಪಿರಾಮಲ್ ಅವರ ಪುತ್ರ ಆನಂದ್ ಜೊತೆ ಮೇ ತಿಂಗಳಲ್ಲಿ ನಡೆದಿತ್ತು. ಸದ್ಯ ಈಗ ಆಕಾಶ್- ಶ್ಲೋಕಾ, ಇಶಾ ಹಾಗೂ ಆನಂದ್ ಮದುವೆ ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

    ಯಾರು ಶ್ಲೋಕಾ ಮೆಹ್ತಾ?
    ಶ್ಲೋಕಾ ಮೆಹ್ತಾ ಈಗಾಗಲೇ ಉದ್ಯಮಿಯಾಗಿದ್ದು, ರೊಸಿ ಬ್ಲೂ ಡೈಮಾಂಡ್ ಹೆಸರಿನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ರೊಸಿ ಬ್ಲೂ ಡೈಮಾಂಡ್ ಸಂಸ್ಥೆ ಪ್ರಪಂಚದ ಪ್ರಮುಖ ವಜ್ರದ ಕಂಪೆನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಆಕಾಶ್ ಹಾಗೂ ಶ್ಲೋಕಾ ಇಬ್ಬರು ಬಾಲ್ಯದ ಗೆಳೆಯರಾಗಿದ್ದು, ಮುಂಬೈನ ಧೀರೂಬಾಯಿ ಅಂಬಾನಿ ಅಂತರಾಷ್ಟ್ರೀಯ ಶಾಲೆಯಲ್ಲಿ ಓದಿದ್ದರು. ಶ್ಲೋಕಾ ಮೆಹ್ತಾ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್ ನಲ್ಲಿ ಪದವಿ ಪಡೆದಿದ್ದು, ಕುಟುಂಬದ ಉದ್ಯಮಗಳನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಆಕಾಶ್ ರಿಲಯನ್ಸ್ ಉದ್ಯಮ ಸಂಸ್ಥೆಗಳ ಬೋರ್ಡ್ ಆಫ್ ಡೈರೆಕ್ಟರ್ ಆಗಿ ನೇಮಕವಾಗಿದ್ದಾರೆ.

    ಈ ಹಿಂದೆ ರಾಷ್ಟ್ರೀಯ ಸುದ್ದಿ ಮಾಧ್ಯಮಮೊಂದು ಆಯೋಜಿಸಿದ್ದ ಸಂವಾದ ಕಾಯಕ್ರಮದಲ್ಲಿ ಭಾಗವಹಿಸಿದ್ದ ನೀತಾ ಅಂಬಾನಿ, ತಮ್ಮ ಮಕ್ಕಳ ಜೀವನ ಸಂಗಾತಿಗಳ ಆಯ್ಕೆಯಲ್ಲಿ ಸ್ವಾತಂತ್ರ್ಯ ನೀಡಿರುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಮಗ 118 ಕೆಜಿ ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನೀತಾ ಅಂಬಾನಿ

  • ಅಂಬಾನಿ ಪುತ್ರನ ನಿಶ್ಚಿತಾರ್ಥಕ್ಕೆ ದಿನಾಂಕ ಫಿಕ್ಸ್

    ಅಂಬಾನಿ ಪುತ್ರನ ನಿಶ್ಚಿತಾರ್ಥಕ್ಕೆ ದಿನಾಂಕ ಫಿಕ್ಸ್

    ಮುಂಬೈ: ಭಾರತದ ಖ್ಯಾತ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರ ಪುತ್ರ ಆಕಾಶ್ ಅಂಬಾನಿಯವರ ನಿಶ್ಚಿತಾರ್ಥ ಜೂನ್ 30 ರಂದು ನಿಗದಿಯಾಗಿದೆ.

    ಭಾರತದ ರೋಸಿ ಬ್ಲೂ ಡೈಮಂಡ್ ಕಂಪನಿಯ ಮುಖ್ಯಸ್ಥರಾದ ರಸೆಲ್ ಮೆಹ್ತಾ ಮಗಳು ಶ್ಲೋಕಾರ ಜೊತೆ ನಿಶ್ಚಿತಾರ್ಥ ನಡೆಯಲಿದ್ದು, ನಿಶ್ಚಿತಾರ್ಥ ಕಾರ್ಯಕ್ರಮವನ್ನು ಅಂಟಿಲಾದಲ್ಲಿರುವ ಅಂಬಾನಿಯವರ ನಿವಾಸದಲ್ಲಿ ಅದ್ಧೂರಿಯಾಗಿ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ನಿಶ್ಚಿತಾರ್ಥ ಹಿನ್ನೆಲೆಯಲ್ಲಿ ಈ ನವ ಜೋಡಿಯು ಫೋಟೋ ಶೂಟ್ ನಡೆಸಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

    ಮಾರ್ಚ್ 24ರಂದು ಮುಕೇಶ್ ಅಂಬಾನಿ ಹಾಗೂ ಅಜ್ಜಿ ಕೋಕಿಲಬೇನ್ ಸಮ್ಮುಖದಲ್ಲಿ ಗೋವಾದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಆಕಾಶ್‍ರವರು ಶ್ಲೋಕಾ ಮೆಹ್ತಾಗೆ ಪ್ರೇಮ ನಿವೇದನೆ ಮಾಡಿದ್ದರು.

    ಮುಕೇಶ್ ಅಂಬಾನಿ ಮತ್ತು ರಸ್ಸೆಲ್ ಮೆಹ್ತಾ ಇಬ್ಬರು ಹಳೆಯ ಸ್ನೇಹಿತರಾಗಿದ್ದು, ಈ ಮದುವೆಯಿಂದ ಮುಂಬೈ ಖ್ಯಾತ ಕುಟುಂಬಗಳು ಒಂದಾಗಿವೆ. ಮುಕೇಶ್ ಮತ್ತು ನೀತಾ ಅಂಬಾನಿಯ ಮೂವರು ಮಕ್ಕಳಲ್ಲಿ ಆಕಾಶ್ ಮೊದಲನೇ ಮಗನಾಗಿದ್ದಾನೆ. ತಂಗಿ ಇಶಾ ಮತ್ತು ತಮ್ಮ ಅನಂತ್ ಆಗಿದ್ದಾರೆ. ಸದ್ಯ ಇವರು ಜಿಯೋದ ಪ್ರಮುಖ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.


    ಅಕಾಶ್ ಹಾಗೂ ಶ್ಲೋಕಾ ಇಬ್ಬರು ಬಾಲ್ಯದಿಂದಲೂ ಸ್ನೇಹ ಹೊಂದಿದ್ದು, ಮುಂಬೈನ ಧೀರೂಬಾಯಿ ಅಂಬಾನಿ ಅಂತರಾಷ್ಟ್ರೀಯ ಶಾಲೆಯಲ್ಲಿ ಓದಿದ್ದರು. ಶ್ಲೋಕಾ ಮೆಹ್ತಾ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್ ನಲ್ಲಿ ಪದವಿ ಪಡೆದಿದ್ದು, ಕುಟುಂಬದ ಉದ್ಯಮಗಳನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಅಕಾಶ್ ರಿಲಯನ್ಸ್ ಉದ್ಯಮ ಸಂಸ್ಥೆಗಳ ಬೋರ್ಡ್ ಆಫ್ ಡೈರೆಕ್ಟರ್ ಆಗಿ ನೇಮಕವಾಗಿದ್ದಾರೆ. ಇದನ್ನು ಓದಿ: ವಜ್ರ ಉದ್ಯಮಿಯ ಮಗಳನ್ನು ವರಿಸಲಿದ್ದಾರೆ ಮುಕೇಶ್ ಅಂಬಾನಿ ಪುತ್ರ – ಫೋಟೋಗಳಲ್ಲಿ ನೋಡಿ

    ರಸೆಲ್ ಮೆಹ್ತಾ ಅವರಿಗೆ ಮೊನಾ, ಶ್ಲೋಕ ಮೆಹ್ತಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಶ್ಲೋಕ ಮೆಹ್ತಾ ಈಗಾಗಲೇ ಉದ್ಯಮಿಯಾಗಿದ್ದು, ರೊಸಿ ಬ್ಲೂ ಡೈಮಾಂಡ್ ಹೆಸರಿನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ರೊಸಿ ಬ್ಲೂ ಡೈಮಾಂಡ್ ಸಂಸ್ಥೆ ಪ್ರಪಂಚದ ಪ್ರಮುಖ ವಜ್ರದ ಕಂಪೆನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. 2014ರಿಂದ ರೋಸಿ ಬ್ಲೂ ಫೌಂಡೇಶನ್‍ನ ನಿರ್ದೇಶಕಿಯಾಗಿ ಶ್ಲೋಕ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ಓದಿ: ಮಗ 118 ಕೆಜಿ ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನೀತಾ ಅಂಬಾನಿ

    https://www.instagram.com/p/Bjm-gGMlsOV/?utm_source=ig_embed