Tag: ಆಂಬುಲೆನ್ಸ್

  • ನಾಲ್ಕು ಅಂತಸ್ತಿನ ಕಟ್ಟಡ ಕುಸಿದು 5 ಸಾವು, 8 ಮಂದಿಗೆ ಗಾಯ

    ನಾಲ್ಕು ಅಂತಸ್ತಿನ ಕಟ್ಟಡ ಕುಸಿದು 5 ಸಾವು, 8 ಮಂದಿಗೆ ಗಾಯ

    ಮುಂಬೈ: ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದು 5 ಮಂದಿ ಸಾವನಪ್ಪಿ, 8 ಮಂದಿಗೆ ಗಾಯಗಳಾದ ಘಟನೆ ಇಲ್ಲಿನ ಘೊಟಕ್ ಪುರದಲ್ಲಿ ನಡೆದಿದೆ.

    ಈ ಘಟನೆ ಘೊಟಕ್ ಪುರದ ದಾಮೋದರ್ ಪಾರ್ಕ್ ಪ್ರದೇಶಲ್ಲಿ ಇಂದು ಬೆಳಗ್ಗೆ 10:43ರ ಸುಮಾರಿಗೆ ನಡೆದಿದ್ದು, ಘಟನೆಯ ಬಳಿಕ ಕಾರ್ಯಾಚರಣೆ ನಡೆಸಿ 12 ಮಂದಿಯನ್ನು ಅಪಾಯದಿಂದ ಪಾರು ಮಾಡಲಾಗಿದೆ. ಬಿಎಂಸಿ ಮೇಯರ್, 8 ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ 108 ಆಂಬುಲೆನ್ಸ್ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

    ಕಟ್ಟಡ ಸಂಪೂರ್ಣ ನೆಲಸಮವಾಗಿದೆ. ಸುಮಾರು 30 ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅಪಾಯದಿಂದ ಪಾರಾದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಅಗ್ನಿಶಾಮಕ ದಳದ ಅಧಿಕಾರಿ ಪ್ರಭಾತ್ ರಹಾಂಗ್ಡೇಲ್ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನಿಡಿದ್ದಾರೆ.

    ಈ ಕಟ್ಟಡದಲ್ಲಿ ನರ್ಸಿಂಗ್ ಹೋಮ್ ಕೂಡ ಇದ್ದು, ಸದ್ಯ ಅದನ್ನು ರಿಪೇರಿ ಮಾಡಲಾಗುತ್ತಿತ್ತು. ಹೀಗಾಗಿ ಹೆಚ್ಚಿನ ಸಂಖ್ಯೆ ರೋಗಿಗಳು ಅದರಲ್ಲಿ ಇರಲಿಲ್ಲ. ಇಸರಿಂದ ದೊಡ್ಡ ಮಟ್ಟದ ದುರಂತವೊಂದು ತಪ್ಪಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಚರಣೆ ಮುಂದುವರೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂಬುವುದಾಗಿ ವರದಿಯಾಗಿದೆ.

  • ಚಿಕಿತ್ಸೆಯೂ ಇಲ್ಲ, ಆಂಬುಲೆನ್ಸ್ ಇಲ್ಲ- ಮಗುವಿನ ಶವವನ್ನ ಹೆಗಲ ಮೇಲೆ ಹೊತ್ತುಕೊಂಡೇ ನಡೆದ ತಂದೆ

    ಚಿಕಿತ್ಸೆಯೂ ಇಲ್ಲ, ಆಂಬುಲೆನ್ಸ್ ಇಲ್ಲ- ಮಗುವಿನ ಶವವನ್ನ ಹೆಗಲ ಮೇಲೆ ಹೊತ್ತುಕೊಂಡೇ ನಡೆದ ತಂದೆ

    ಜೈಪುರ: ಸೂಕ್ತ ಸಮಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಯದ ಕಾರಣ ಮಗುವೊಂದು ಸಾವನ್ನಪ್ಪಿದ್ದು, ಮಗುವಿನ ಶವವನ್ನು ಸಾಗಿಸಲು ಆಂಬುಲೆನ್ಸ್ ನೀಡದ ಕಾರಣ ಪೋಷಕರು ಮಗುವಿನ ಶವವನ್ನು ಸುಮಾರು 6 ಕಿಮೀ ವರೆಗೆ ಹೆಗಲ ಮೇಲೆ ಹೊತ್ತಿಕೊಂಡು ನಡೆದಿದ್ದಾರೆ.

    ಹೌದು, ರಾಜಸ್ಥಾನ ರಾಜ್ಯದ ಬಾರಾ ಜಿಲ್ಲೆಯ ಶಾಹಬಾದ್ ಹೋಬಳಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಶಾಹಬಾದ್ ಹೋಬಳಿಯ ವ್ಯಾಪ್ತಿಯಲ್ಲಿ ಬುಡಕಟ್ಟು ಜನಾಂಗ ವಾಸವಾಗಿದೆ. ಈ ಬುಡಕಟ್ಟು ಜನಾಂಗದ ಕೌಂಸಾ ಬಾಯಿ ಎಂಬವರ ಮೊಮ್ಮಗ ರವಿವಾರ ತೀವ್ರ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದನು. ಸೋಮವಾರ ಬೆಳಗ್ಗೆ ಮಗುವಿನ ತಂದೆ ಹಾಗು ತಾಯಿ ಮಗುವನ್ನು ಚಿಕಿತ್ಸೆಗಾಗಿ ಶಾಹಬಾದ್ ಆಸ್ಪತ್ರೆಗೆ ತೆರಳಿದ್ದಾರೆ. ಇವರುಗಳು ಹೋದಾಗ ಆಸ್ಪತ್ರೆಯಲ್ಲಿ ಸಿಬ್ಬಂದಿಯೇ ಇರಲಿಲ್ಲ.

    ಕೊನೆಗೆ ಪೋಷಕರು ವೈದ್ಯರ ವಸತಿ ನಿಲಯಕ್ಕೆ ಹೋಗಿ ಮಗುವಿಗೆ ಚಿಕಿತ್ಸೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ರೋಗಿಗಳ ಕಷ್ಟಕ್ಕೆ ಸ್ಪಂದಿಸದೇ ಡಾಕ್ಟರ್ ಸಂಜೆ 5 ಗಂಟೆಗೆ ಬರುವಂತೆ ತಿಳಿಸಿದ್ದಾರೆ. ಕೊನೆಗೇ ಬಾರಾ ಜಲ್ಲಾಸ್ಪತ್ರೆಗೆ ತೆರಳುವಂತೆ ಉಚಿತ ಸಲಹೆಯನ್ನ ನೀಡಿದ್ದಾರೆ. ವೈದ್ಯರು ಶಿಫಾರಸ್ಸು ಪತ್ರ ನೀಡುವ ಸಮುದಲ್ಲಿ ಮಗುವಿಗೆ ಪ್ರಥಮ ಚಿಕಿತ್ಸೆಯನ್ನು ಸಹ ನೀಡಲಿಲ್ಲ. ಕೊನೆಗೆ ಆಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಿಲಿಲ್ಲ ಎಂದು ಮಗುವಿನ ಅಜ್ಜಿ ಕೌಂಸಾ ಬಾಯಿ ಹೇಳಿದ್ದಾರೆ.

    ಕೊನೆಗೆ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲು ಹಣ ಹೊಂದಾಯಿಸಲು ನಾವು ಮನೆಗೆ ತೆರಳುವ ಮಾರ್ಗ ಮಧ್ಯೆಯೇ ಮಗು ಸಾವನ್ನಪ್ಪಿದೆ. ಕೊನೆಗೆ ತಂದೆ ತನ್ನ ಮಗುವನ್ನು ಸುಮಾರು 6 ಕಿಮೀ ವರೆಗೆ ಹೊತ್ತುಕೊಂಡು ನಡೆದಿದ್ದಾರೆ. ಅದೇ ಮಾರ್ಗವಾಗಿ ಹೊರಟಿದ್ದ ಕಾರ ಚಾಲಕರೊಬ್ಬರು ಅವರನ್ನು ಮನೆಯವರೆಗೂ ತಲುಪಿಸಿದ್ದಾರೆ.

    ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ, ಶಾಹಬಾದ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಅಟಲರಾಜ್ ಮೆಹ್ತಾ, ಮಗುವಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿತ್ತು ಮತ್ತು ಹೆಚ್ಚಿನ ಚಿಕಿತ್ಸೆಗೆ ಬಾರಾ ಜಿಲ್ಲಾಸ್ಪತ್ರೆಗೆ ತೆರಳುವಂತೆ ಶಿಫಾರಸ್ಸು ಮಾಡಲಾಗಿತ್ತು. ಪೋಷಕರು ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸದೇ ಹೊರ ಹೋಗಿದ್ದಾರೆ. ಮಗು ಸಾವನ್ನಪ್ಪಿರುವ ಮಾಹಿತಿ ನನಗಿಲ್ಲ ಎಂದು ತಿಳಿಸಿದ್ದಾರೆ.

     

  • ವಾಹನ ಸುತ್ತುವರಿದ 12 ಸಿಂಹಗಳು- ಮಧ್ಯರಾತ್ರಿ ಅಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

    ವಾಹನ ಸುತ್ತುವರಿದ 12 ಸಿಂಹಗಳು- ಮಧ್ಯರಾತ್ರಿ ಅಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

    ಅಹಮದಾಬಾದ್: 32 ವರ್ಷದ ಮಹಿಳೆಯೊಬ್ಬರು ಗುಜರಾತ್‍ನ ಗಿರ್ ಅರಣ್ಯಪ್ರದೇಶದಲ್ಲಿ ಆಂಬುಲೆನ್ಸ್ ನೊಳಗೆ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಅಷ್ಟೆ ಅಲ್ಲ ಅಂದು ಅಮ್ರೇಲಿ ಜಿಲ್ಲೆಯ ಗ್ರಾಮವೊಂದರಲ್ಲಿ ನಿಲ್ಲಿಸಲಾಗಿದ್ದ ಈ ಆಂಬುಲೆನ್ಸ್ ಬಳಿ ಹತ್ತಿರದ ಕಾಡಿನಿಂದ 12 ಸಿಂಹಗಳು ಬಂದು ವಾಹನವನ್ನ ಸುತ್ತುವರಿದಿದ್ದವು ಎಂದರೆ ನೀವು ನಂಬಲೇಬೇಕು.

    ಹೌದು. ಗುರುವಾರದಂದು ಮಧ್ಯರಾತ್ರಿ ಸುಮಾರು 2.30ರ ವೇಳೆಯಲ್ಲಿ ಇಲ್ಲಿನ ಲುನಾಸಾಪುರ್ ನಿವಾಸಿಯಾದ ಮಂಗುಬೆನ್ ಮಕ್ವಾನಾ ಅವರನ್ನ ಹೆರಿಗೆಗಾಗಿ ಜಾಫರ್‍ಬಾದ್ ಟೌನ್‍ನ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕೊಂಡೊಯ್ಯಲಾಗ್ತಿತ್ತು. ಈ ವೇಳೆ ಮಹಿಳೆಗೆ ಹೆರಿಗೆ ನೋವು ತೀವ್ರವಾಗಿದ್ದು ಮಗುವಿನ ತಲೆ ಹೊರಗೆ ಬರ್ತಿದ್ರಿಂದ ಯಾವ ಕ್ಷಣದಲ್ಲಾದ್ರೂ ಹೆರಿಗೆಯಾಗುವ ಸಂಭವವಿತ್ತು. ಹೀಗಾಗಿ 108 ಆಂಬುಲೆನ್ಸ್ ನ ತುರ್ತು ನಿರ್ವಹಣಾ ತಂತ್ರಜ್ಞರಾದ ಅಶೋಕ್ ಮಕ್ವಾನಾ ಚಾಲಕ ರಾಜು ಅವರಿಗೆ ವಾಹನವನ್ನ ಅರ್ಧ ದಾರಿಯಲ್ಲೇ ನಿಲ್ಲಿಸಲು ಹೇಳಿದ್ರು ಎಂದು ಅಮ್ರೇಲಿಯ 108 ಆಂಬುಲೆನ್ಸ್ ನ ತುರ್ತು ನಿರ್ವಹಣಾ ಕಾರ್ಯನಿರ್ವಾಹಕ ಅಧಿಕಾರಿ ಚೇತನ್ ಗಾದೆ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಬಳಿಕ ತಂತ್ರಜ್ಞ ಅಶೋಕ್, ಹೆರಿಗೆ ಮಾಡಿಸಲು ಸಲಹೆಗಾಗಿ ವೈದ್ಯರಿಗೆ ಕರೆ ಮಾಡಿದ್ರು. ಈ ವೇಳೆ ಮನುಷ್ಯರು ಇದ್ದಿದ್ದನ್ನು ಗ್ರಹಿಸಿದ ಸಿಂಹಗಳ ಹಿಂಡು ಹತ್ತಿರದ ಪೊದೆಗಳಿಂದ ಹೊರಬಂದು ಆಂಬುಲೆನ್ಸ್ ಸುತ್ತುವರಿದವು. ಸ್ಥಳೀಯರಾಗಿದ್ದ ಆಂಬುಲೆನ್ಸ್ ಚಾಲಕ ರಾಜು ಸಿಂಹಗಳ ವರ್ತನೆ ಬಗ್ಗೆ ತಿಳಿದುಕೊಂಡಿದ್ದರಿಂದ ಅವುಗಳನ್ನ ಬೆದರಿಸಲು ಪ್ರಯತ್ನಿಸಿದ್ರು. ಆದ್ರೆ ಸಿಂಗಹಳು ಮಾತ್ರ ಅಲ್ಲಿಂದ ಕದಲಲಿಲ್ಲ. ಕೆಲವು ಸಿಂಹಗಳು ವಾಹನದ ಮುಂದೆಯೇ ಕುಳಿತುಕೊಂಡು ರಸ್ತೆಯನ್ನ ಅಡ್ಡಗಟ್ಟಿದ್ವು ಎಂದು ಅವರು ಹೇಳಿದ್ದಾರೆ.

    ಇಷ್ಟೆಲ್ಲಾ ಆಗ್ತಿದ್ರೂ ಆಂಬುಲೆನ್ಸ್ ಒಳಗೆ ತಂತ್ರಜ್ಞ ಅಶೋಕ್ ವೈದ್ಯರ ನಿರ್ದೇಶನದಂತೆ ಮಹಿಳೆಯ ಹೆರಿಗೆಗೆ ಸಹಾಯ ಮಾಡಿದ್ರು. ನಂತರ ಚಾಲಕ ರಾಜು ಗಾಡಿಯನ್ನ ಸ್ಟಾರ್ಟ್ ಮಾಡಿ ನಿಧಾನವಾಗಿ ಮುಂದೆ ಸಾಗಿದ್ರು. ಗಾಡಿ ಚಲಿಸಲು ಶುರು ಮಾಡಿದ್ದರಿಂದ ಹಾಗೂ ಆಂಬುಲೆನ್ಸ್ ಲೈಟ್‍ನ ಬೆಳಕಿನಿಂದಾಗಿ ಸಿಂಹಗಳು ರಸ್ತೆಯ ಪಕ್ಕಕ್ಕೆ ಹೋಗಿದ್ದು ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟವು ಎಂದು ಚೇತನ್ ವಿವರಿಸಿದ್ದಾರೆ.

    ಸದ್ಯ ಮಹಿಳೆ ಹಾಗೂ ನವಜಾತ ಶಿಶುವನ್ನ ಜಫರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

  • ಆಂಬುಲೆನ್ಸ್ ಸಿಗದೆ ತಾಯಿಯನ್ನ ಮಗ ಹೊತ್ತೊಯ್ದ ಪ್ರಕರಣ: ತೀವ್ರ ಗಾಯಗೊಂಡಿದ್ದ ಅಜ್ಜಿ ಸಾವು

    ಆಂಬುಲೆನ್ಸ್ ಸಿಗದೆ ತಾಯಿಯನ್ನ ಮಗ ಹೊತ್ತೊಯ್ದ ಪ್ರಕರಣ: ತೀವ್ರ ಗಾಯಗೊಂಡಿದ್ದ ಅಜ್ಜಿ ಸಾವು

    ಕಲಬುರಗಿ: ಆಂಬುಲೆನ್ಸ್ ಸಿಗದೇ ತಾಯಿಯನ್ನು ಮಗ ಹೊತ್ತೊಯ್ದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀವ್ರ ಗಾಯಗೊಂಡಿದ್ದ ಅಜ್ಜಿ ಮೃತಪಟ್ಟಿದ್ದಾರೆ.

    ಕಲಬುರಗಿಯ ಉದನೂರ ಕ್ರಾಸ್ ಬಳಿ ಸಿದ್ದಮ್ಮ ಎಂಬ ಅಜ್ಜಿಗೆ ಪಲ್ಸರ್ ಬೈಕ್ ಡಿಕ್ಕಿ ಹೊಡೆದಿತ್ತು. ಘಟನೆಯ ನಂತರ ಆಕೆಯ ಮಗ ಮಹಾಂತೇಷ 108 ಆಂಬುಲೆನ್ಸ್ ಗೆ ಕರೆ ಮಾಡಿದ್ರು ಸಕಾಲಕ್ಕೆ ಬರಲಿಲ್ಲ.

    ನಂತರ ಸ್ಥಳೀಯರ ಬಳಿ ನೆರವು ಕೇಳಿದ್ರು ಮಾನವಿಯತೆ ಮರೆತ ಜನ ಯಾರು ಸಹಾಯ ಮಾಡಿರಲಿಲ್ಲ. ಕೊನೆಗೆ ಮಗ ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ತಾಯಿಯನ್ನು ಹೊತ್ತು 45 ನಿಮಿಷಗಳ ಕಾಲ ಹೊತ್ತು ಸಾಗಿದ್ದರು. ನಂತರ ಇದನ್ನು ಗಮನಿಸಿದ ಪೊಲೀಸರು ಎಸ್ಕಾರ್ಟ್ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು.

    ಮೃತ ಸಿದ್ದಮ್ಮಳ ಕಡು ಬಡವರಾಗಿದ್ದು, ಈ ಕುರಿತು ಸುದ್ದಿ ಪಬ್ಲಿಕ್ ಟಿವಿ ಪ್ರಸಾರ ಮಾಡಿದ ನಂತರ ಯುನೈಟೆಡ್ ಆಸ್ಪತ್ರೆಯವರು ಉಚಿತ ಚಿಕಿತ್ಸೆ ಕೊಟ್ಟು ಮಾನವಿಯತೆ ಮೆರೆದಿದ್ದಾರೆ. ಆದ್ರೆ ಘಟನೆ ನಂತರ ಅಜ್ಜಿಗೆ ತೀವ್ರ ರಕ್ತ ಆದ ಕಾರಣ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ಅಪಘಾತವಾಗಿ ಗಾಯಗೊಂಡಿದ್ದ ತಾಯಿಯನ್ನು ಹೊತ್ತುಕೊಂಡು ಆಸ್ಪತ್ರೆಗೆ ಸಾಗಿದ ಮಗ

    https://www.youtube.com/watch?v=_FXNSRP_ceg

  • ಅಪಘಾತಕ್ಕೀಡಾಗಿ ಅಯ್ಯಯ್ಯೋ ಸಹಾಯ ಮಾಡಿ ಅಂತಾ ನರಳಾಡಿದ್ರೂ ಸಹಾಯಕ್ಕೆ ಜನ ಬರಲೇ ಇಲ್ಲ

    ಅಪಘಾತಕ್ಕೀಡಾಗಿ ಅಯ್ಯಯ್ಯೋ ಸಹಾಯ ಮಾಡಿ ಅಂತಾ ನರಳಾಡಿದ್ರೂ ಸಹಾಯಕ್ಕೆ ಜನ ಬರಲೇ ಇಲ್ಲ

    ಹಾವೇರಿ: ಇತ್ತೀಚೆಗೆ ಅಪಘಾತಗಳು ನಡೆದ ಸಂದರ್ಭದಲ್ಲಿ ಜನರು ಅಪಘಾತಕ್ಕೀಡಾದವರನ್ನು ರಕ್ಷಿಸುವ ಬದಲು ತಮ್ಮ ಮೊಬೈಲ್ ಫೋನಿನಲ್ಲಿ ವಿಡಿಯೋ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಇಂತದ್ದೇ ಒಂದು ಘಟನೆ ಇದೀಗ ಹಾವೇರಿಯಲ್ಲೂ ನಡೆದಿದೆ.

    ಹೌದು. ಶುಕ್ರವಾರ ಸಂಜೆ ಹಾವೇರಿ ತಾಲೂಕಿನ ತೋಟದ ಯಲ್ಲಾಪುರ ಗ್ರಾಮದ ಬಳಿ ಟಾಟಾ ಅಪೆ ಮತ್ತು ಟಂಟಂ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ನೆಲೋಗಲ್ ಗ್ರಾಮದ 70 ವರ್ಷದ ದಸ್ತಗೀರಸಾಬ ನರಳಾಡುತ್ತಿದ್ರು. ಆದ್ರೂ ಜನ ಅವರ ಸಹಾಯಕ್ಕೆ ಬರದೇ ಕಾಲಹರಣ ಮಾಡುವ ಮೂಲಕ ಮಾನವೀಯತೆ ಮರೆತಿದ್ದರು.

    ಅಯ್ಯಯ್ಯೋ… ಯಪ್ಪಾ… ಎಂದು ಗೋಗರೆಯುತ್ತಿದ್ದರೂ ಜನ ನೋಡ್ತಾ ನಿಂತಿದ್ರೇ ಹೊರತು, ಆಸ್ಪತ್ರೆಗೆ ಸೇರಿಸಲಿಲ್ಲ. ಒಂದು ಗಂಟೆ ನರಳಾಡಿದ್ಮೇಲೆ ಆಂಬುಲೆನ್ಸ್ ಬಂದಿದೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಳಿಕ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಯಿತು.

    ಸದ್ಯಕ್ಕೆ ದಸ್ತಗಿರಸಾಬ್ ಪ್ರಾಣಾಪಾಯದಿಂದ ಪಾರಾಗಿದ್ದು, ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=9HAc3AWyIBg&feature=youtu.be

  • ಸಿಎಂಗಾಗಿ ರೋಗಿಯಿದ್ದ ಆಂಬುಲೆನ್ಸ್ ತಡೆಹಿಡಿದ ಪೊಲೀಸರು

    ಸಿಎಂಗಾಗಿ ರೋಗಿಯಿದ್ದ ಆಂಬುಲೆನ್ಸ್ ತಡೆಹಿಡಿದ ಪೊಲೀಸರು

    ಬೆಂಗಳೂರು: ಕೆಂಪು ದೀಪ ಹೋದ್ರೂ ವಿವಿಐಪಿಗಳ ಸಂಸ್ಕೃತಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ ಎಂಬುದು ಸ್ಪಷ್ಟವಾಗಿದೆ. ಪೊಲೀಸರು ಸಿಎಂಗಾಗಿ ರೋಗಿಯಿದ್ದ  ಆಂಬುಲೆನ್ಸ್ ತಡೆ ಹಿಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಮಂಗಳವಾರ ಸಂಜೆ ಬೆಂಗಳೂರಿನ ಜೆಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದ ಎದುರು ಈ ಘಟನೆ ನಡೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಬರುವಿಕೆಗಾಗಿ ಪೊಲೀಸರು ವಾಹನಗಳನ್ನ ತಡೆ ಹಿಡಿದಿದ್ದರು. ಈ ವೇಳೆ ರೋಗಿ ಇದ್ದ ಆಂಬುಲೆನ್ಸ್ ಕೂಡ ವಾಹನಗಳ ಮಧ್ಯೆ ಸಿಲುಕಿತ್ತು. ಸುಮಾರು 10 ನಿಮಿಷ ಆಂಬುಲೆನ್ಸ್ ರಸ್ತೆಯಲ್ಲಿಯೇ ನಿಂತಿತ್ತು.

    ವಿವಿಐಪಿ ಸಂಪ್ರದಾಯಕ್ಕೆ ಬ್ರೇಕ್ ಹಾಕುವ ಸಲುವಾಗಿ ಗಣ್ಯ ವ್ಯಕ್ತಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ವಾಹನಗಳ ಮೇಲೆ ಕೆಂಪು ದೀಪ ಬಳಕೆಯನ್ನ ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ. ಆಂಬುಲೆನ್ಸ್ ಹಾಗೂ ಅಗ್ನಿಶಮಕ ವಾಹನಗಳಂತಹ ತುರ್ತು ಸೇವೆ ಒದಗಿಸುವಂತಹ ವಾಹನಗಳು ಮಾತ್ರ ಕೆಂಪು ದೀಪ ಬಳಸಬಹುದು ಎಂದು ಹೇಳಿದೆ.

  • ಆನೇಕಲ್ ವೈದ್ಯರ ಬೇಜವಾಬ್ದಾರಿ – ದ್ವಿಚಕ್ರ ವಾಹನದಲ್ಲಿ ಕಂದನ ಶವ ಹೊತ್ತು ಹೊರಟ ತಂದೆ

    ಆನೇಕಲ್ ವೈದ್ಯರ ಬೇಜವಾಬ್ದಾರಿ – ದ್ವಿಚಕ್ರ ವಾಹನದಲ್ಲಿ ಕಂದನ ಶವ ಹೊತ್ತು ಹೊರಟ ತಂದೆ

    ಬೆಂಗಳೂರು: ವೈದ್ಯರ ಬೇಜವಾಬ್ದಾರಿ ನಡೆಯಿಂದ ಆನೇಕಲ್‍ನಲ್ಲಿ ತಂದೆಯೊಬ್ಬರು ದ್ವಿಚಕ್ರ ವಾಹನದಲ್ಲಿ ಕಂದನ ಶವವನ್ನು ಹೊತ್ತುಕೊಂಡು ಹೋದ ಅಮಾನವೀಯ ಘಟನೆ ನಡೆದಿದೆ.

    ಅಸ್ಸಾಂನಿಂದ ಕೂಲಿ ಕೆಲಸಕ್ಕಾಗಿ ಬಂದಿದ್ದ ದಂಪತಿಯ 3 ವರ್ಷದ ಮಗ ರಹೀಂ ಇಂದು ಸಂಜೆ ಮನೆಯ ಮುಂದೆ ಆಟವಾಡುತ್ತಿದ್ದ. ಈ ವೇಳೆ ಬೈಕಿನಲ್ಲಿ ಬಂದ ಸವಾರನೊಬ್ಬ ರಹೀಂಗೆ ಗುದ್ದಿ ಪರಾರಿಯಾಗಿದ್ದಾನೆ.

    ಗಾಯಗೊಂಡಿದ್ದ ಮಗನನ್ನು ಚಿಕಿತ್ಸೆ ನೀಡಲು ತಂದೆ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ಮಗು ಸಾವನ್ನಪ್ಪಿದೆ ಎಂದು ತಿಳಿಸಿದ ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್ ನೀಡಲು ನಿರಾಕರಿಸಿ ಅಮಾನವೀಯತೆ ಪ್ರದರ್ಶಿಸಿದ್ದಾರೆ.

    ಅಪಘಾತ ನಡೆದು ವ್ಯಕ್ತಿ ಮೃತಪಟ್ಟರೆ ಮರಣೋತ್ತರ ಪರೀಕ್ಷೆ ನಡೆಸುವುದು ವೈದ್ಯರ ಕರ್ತವ್ಯ. ಆದರೆ ಮರಣೋತ್ತರ ಪರೀಕ್ಷೆ ನಡೆಸದೇ ಮೃತದೇಹವನ್ನು ಪೋಷಕರಿಗೆ ನೀಡಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವಹಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.

    ಅಂಬುಲೆನ್ಸ್ ನೀಡದ ಹಿನ್ನೆಲೆಯಲ್ಲಿ ಆಳುತ್ತಿದ್ದ ತಂದೆಯನ್ನು ಸಮಾಧಾನ ಪಡಿಸಿದ ಸ್ಥಳೀಯರು ತಮ್ಮ ದ್ವಿಚಕ್ರವಾಹನದಲ್ಲಿ ಕುಳ್ಳಿರಿಸಿ ಮನೆಗೆ ಅವರನ್ನು ತಲುಪಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=GnVn5L5_50w

  • ರೋಗಿಯಿಂದಲೇ 108 ವಾಹನ ಜಖಂ

    ರೋಗಿಯಿಂದಲೇ 108 ವಾಹನ ಜಖಂ

    ತುಮಕೂರು: ರೋಗಿಯಿಂದಲೇ 108 ವಾಹನ ಜಖಂ ಆದ ಘಟನೆ ಜಿಲ್ಲಾಸ್ಪತ್ರೆ ಮುಂಭಾಗ ತಡರಾತ್ರಿ ನಡೆದಿದೆ.

    26 ವರ್ಷದ ಗಿರೀಶ್ ತಡರಾತ್ರಿ ಗುಬ್ಬಿ ತಾಲೂಕಿನ ಕೆ.ಜಿ.ಟೆಂಪಲ್ ಬಳಿ ಬೈಕ್‍ನಿಂದ ಬಿದ್ದು ಗಾಯಗೊಂಡಿದ್ದರು. ಅವರನ್ನ ಗುಬ್ಬಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. 108 ವಾಹನದಲ್ಲಿ ಗಿರೀಶ್ ಹಾಗೂ ಅವರ ಸ್ನೇಹಿತರಿಬ್ಬರನ್ನ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಗಿರೀಶ್ ಒತ್ತಾಯಿಸಿದ್ದರು. ಇದಕ್ಕೆ 108 ಸಿಬ್ಬಂದಿ ಒಪ್ಪದಿರುವುದಕ್ಕೆ ಗಲಾಟೆ ನಡೆದಿದೆ.

    ಕುಪಿತಗೊಂಡ ಮೂವರು 108 ಸಿಬ್ಬಂದಿಯ ಮುಂದೆಯೇ ವಾಹನ ಜಖಂಗೊಳಿಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗಿರೀಶ್ ಹಾಗು ಸ್ನೇಹಿತರಾದ ರಾಕೇಶ್ ಹಾಗೂ ನಟರಾಜುನನ್ನು ಪೊಲೀಸರು ತಡರಾತ್ರಿಯೇ ವಶಕ್ಕೆ ಪಡೆದಿದ್ದಾರೆ. ಬಳಿಕ ಗಿರೀಶ್‍ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಅಂಬುಲೆನ್ಸ್ ಗೆ ಎಕ್ಸ್ ಪ್ರೆಸ್ ರೈಲು ಡಿಕ್ಕಿ – ಬಾಣಂತಿ ಸೇರಿ ನಾಲ್ವರು ದುರ್ಮರಣ

    ಅಂಬುಲೆನ್ಸ್ ಗೆ ಎಕ್ಸ್ ಪ್ರೆಸ್ ರೈಲು ಡಿಕ್ಕಿ – ಬಾಣಂತಿ ಸೇರಿ ನಾಲ್ವರು ದುರ್ಮರಣ

    – ಪವಾಡಸದೃಶವಾಗಿ 7 ದಿನಗಳ ಮಗು ಪಾರು

    ಚಿತ್ರದುರ್ಗ: ಆಂಬುಲೆನ್ಸ್ ಗೆ ರೈಲು ಡಿಕ್ಕಿಹೊಡೆದ ಪರಿಣಾಮ ಬಾಣಂತಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ ನಡೆದಿದೆ.

    ಸರ್ಕಾರಿ ಆಸ್ಪತ್ರೆಗೆ ಸೇರಿದ ಅಂಬುಲೆನ್ಸ್ ನಲ್ಲಿ 7 ದಿನಗಳ ಮಗುವಿನೊಂದಿಗೆ ಬಾಣಂತಿ ಚಂದ್ರಕಲಾ ಬಂಡೆ ತಿಮ್ಮಾಪುರ ಗ್ರಾಮಕ್ಕೆ ತೆರಳುತ್ತಿದ್ರು. ಈ ವೇಳೆ ಹೊಸಪೇಟೆಯಿಂದ ಬೆಂಗಳೂರಿಗೆ ಹೊರಟಿದ್ದ ರೈಲು ತಳಕು ಗ್ರಾಮದ ರೈಲ್ವೆಗೇಟ್ ಬಳಿ ಆಂಬುಲೆನ್ಸ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಂಬುಲೆನ್ಸ್ 50 ಮೀಟರ್ ದೂರದ ಹಳ್ಳಕ್ಕೆ ಹೋಗಿ ಬಿದ್ದಿದೆ. ದುರಂತದಲ್ಲಿ ಬಾಣಂತಿ ಚಂದ್ರಕಲಾ ಸಾವನ್ನಪ್ಪಿದ್ದು, 7 ದಿನಗಳ ಮಗು ಪವಾಡಸದೃಶವಾಗಿ ಪಾರಾಗಿದೆ.

    ಇನ್ನು ಸಾವಿತ್ರಮ್ಮ, ಗಂಗಮ್ಮ, ಸ್ಥಳದಲ್ಲೇ ಮೃತಪಟ್ಟರೆ, ಲಕ್ಷ್ಮಮ್ಮ ಎಂಬವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

    ಗಾಯಗೊಂಡಿರುವ ಆಂಬುಲೆನ್ಸ್ ಚಾಲಕ ಶಿವರೆಡ್ಡಿ, ಚಂದ್ರಕಲಾ ತಾಯಿ ಕದಿರಮ್ಮ ಮತ್ತು ಮಗುವಿಗೆ ಚಿಕಿತ್ಸೆ ನೀಡಲಾಗ್ತಿದೆ. ಘಟನೆಗೆ ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯವೇ ಕಾರಣವೆಂದು ಹೇಳಲಾಗಿದೆ. ಮಾನವ ರಹಿತ ರೈಲ್ವೆ ಲೆವೆಲ್ ಕ್ರಾಸಿಂಗ್‍ನಲ್ಲಿ ರೈಲು ಬರುತ್ತಿದ್ದುದನ್ನು ಗಮನಿಸಿದ್ರೂ ಬೇಗ ದಾಟುವ ಭರದಲ್ಲಿ ವಾಹನವನ್ನ ಅತಿ ವೇಗವಾಗಿ ಚಲಾಯಿಸಿದ್ದಾನೆ. ಈ ಬಗ್ಗೆ ತಳಕು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಎಲ್ಲೇ ಶವ ಸಿಕ್ಕರೂ ತುಮಕೂರು ಜನ ಇವರಿಗೇ ಫೋನ್ ಮಾಡ್ತಾರೆ!

    ತುಮಕೂರು: ಎಲ್ಲಾದರೂ ಅನಾಥ ಶವ ಕಂಡುಬಂದರೆ, ಸಾರ್ವಜನಿಕರು ನೇರವಾಗಿ ಪೊಲೀಸರಿಗೆ ಫೋನ್ ಮಾಡ್ತಾರೆ. ಆದರೆ ತುಮಕೂರು ನಗರದಲ್ಲಿ ಇಂತಹ ವಿಷಯ ತಿಳಿದ ಕೂಡಲೇ ಪೊಲೀಸರು ಫೋನ್ ಮಾಡೋದು ಸುಹೇಲ್ ಪಾಷಾ ಅನ್ನೋ ವ್ಯಕ್ತಿಗೆ. ಯಾಕಂದ್ರೆ ಸುಹೇಲ್ ಸಹಾಯದಿಂದ ಅನಾಥ ಶವಗಳ ಸಂಸ್ಕಾರ ನಡೆಯುತ್ತದೆ.

    ಬರೀ ಶವ ಅಂದ್ರೆ ಸಾಕು ನಾವು ಹತ್ತಿರಕ್ಕೂ ಸುಳಿಯಲ್ಲ. ಆದರೆ ಕೊಳೆತು ನಾರುವ, ಕಣ್ಣಿಂದ ನೋಡಲೂ ಆಗದ ಶವಗಳ ಹತ್ತಿರಕ್ಕೆ ಹೋಗ್ತಾರೆ ನಮ್ಮ ಪಬ್ಲಿಕ್ ಹೀರೋ ಸುಹೇಲ್ ಪಾಷಾ. ಆತ್ಮಹತ್ಯೆ ಮಾಡಿಕೊಂಡ, ಬೆಂಕಿ ಹಚ್ಚಿಕೊಂಡ, ವಿಷ ಕುಡಿದ, ಕೊಲೆಯಾದ ಹೀಗೆ ಯಾವುದೇ ಶವಗಳಿದ್ದರೂ ಅವುಗಳನ್ನು ತಮ್ಮ ಆಂಬುಲೆನ್ಸ್‍ನಲ್ಲಿ ಜಿಲ್ಲಾಸ್ಪತ್ರೆಗೆ ತಂದು ಪೋಸ್ಟ್ ಮಾರ್ಟಮ್ ಮಾಡಲು ವೈದ್ಯರಿಗೆ ನೆರವಾಗುತ್ತಾರೆ. ಹಾಗಾಗಿ ಎಲ್ಲೇ ಅನಾಥ ಶವ ಸಿಕ್ಕರೂ ತುಮಕೂರಿನ ಜನ ಫೋನ್ ಮಾಡೋದು ಈ ಸುಹೇಲ್ ಪಾಷಾಗೆ. ಸದ್ಯ ತುಮಕೂರು ಜಿಲ್ಲೆಯ ಪೊಲೀಸರ ಪಾಲಿಗೆ ಸುಹೇಲ್ ಸ್ನೇಹಜೀವಿಯಾಗಿದ್ದಾರೆ.

    ಸುಹೇಲ್ ಪಾಷಾ ಈ ಕೆಲಸ ಮಾಡಲೂ ಒಂದು ಕಾರಣವಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿಯೇ ಸುಹೇಲ್ ತಂದೆ ಆಂಬುಲೆನ್ಸ್ ಚಾಲಕರಾಗಿದ್ದರು. ಆಗ ಶವಗಳ ಸಾಗಾಣೆಗೆ ಖಾಸಗಿ ಆಂಬುಲೆನ್ಸ್‍ಗಳ ಚಾಲಕರು ಮನಬಂದಂತೆ ಹಣ ಕೇಳುತ್ತಿದ್ದರಂತೆ. ಇದನ್ನು ನೋಡಿದ್ದ ಸುಹೇಲ್ ತಂದೆ, ಸಾಧ್ಯವಾದರೆ ನೀನೊಂದು ಆಂಬುಲೆನ್ಸ್ ಖರೀದಿಸಿ ಮೃತದೇಹಗಳ ಸಾಗಾಣಿಗೆ ಸಹಾಯ ಮಾಡು ಅಂತಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸುಹೇಲ್ ಅನಾಥ ಶವಗಳಿಗೆ ಮುಕ್ತಿ ತೋರಿಸುತ್ತಿದ್ದಾರೆ.

    ಎಲ್ಲಾ ಪೊಲಿಸ್ ಠಾಣೆಗಳಲ್ಲಿ ಸುಹೇಲ್ ಪಾಷಾ ಅನ್ನೋರಾ ಸೇವೆ ಮತ್ತು ವಾಹನವನ್ನು ಅನೇಕ ಬಾರಿ ಉಪಯೋಗಿಸಿಕೊಂಡಿದ್ದೀವಿ. ನಿಜವಾಗಿಯೂ ಇದೊಂದು ಮಾದರಿ ಸೇವೆ ಅಂತಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಹೇಳುತ್ತಾರೆ.

    ಸುಹೇಲ್ ಕಳೆದ 19 ವರ್ಷಗಳಿಂದ ಇದೇ ಕೆಲಸ ಮಾಡ್ತಿದ್ದಾರೆ. ಪೊಲೀಸ್ ಇಲಾಖೆಗೆ ಆಪತ್ಬಾಂಧವನಾಗಿ ದಿನದ 24 ಗಂಟೆಯೂ ಕೆಲಸ ಮಾಡೋ ಸುಹೇಲ್‍ಗೆ ನಮ್ಮದೊಂದು ಸಲಾಂ.

    https://www.youtube.com/watch?v=qYZ-nDK-OLY