Tag: ಆಂಟೋನಿ

  • ಮಾಡ್ರನ್ ಡ್ರೆಸ್ ಹಾಕಿದ್ರು ಮಾಂಗಲ್ಯ ಧರಿಸಿ ಸಿನಿಮಾ ಪ್ರಚಾರಕ್ಕೆ ಬಂದ ಕೀರ್ತಿ ಸುರೇಶ್

    ಮಾಡ್ರನ್ ಡ್ರೆಸ್ ಹಾಕಿದ್ರು ಮಾಂಗಲ್ಯ ಧರಿಸಿ ಸಿನಿಮಾ ಪ್ರಚಾರಕ್ಕೆ ಬಂದ ಕೀರ್ತಿ ಸುರೇಶ್

    ಸೌತ್ ಬ್ಯೂಟಿ ಕೀರ್ತಿ ಸುರೇಶ್ (Keerthy Suresh) ಮದುವೆಯಾದ ಏಳೇ ದಿನಕ್ಕೆ ಕೆಲಸಕ್ಕೆ ಹಾಜರಾಗಿದ್ದಾರೆ. ಮದುವೆಯ ನಂತರ ರಿಲೀಸ್ ಆಗಿರುವ ಬಾಲಿವುಡ್‌ನ ಮೊದಲ ಸಿನಿಮಾದ ಪ್ರಚಾರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ಮಾಡ್ರನ್ ಡ್ರೆಸ್ ಹಾಕಿದ್ರು ಮಾಂಗಲ್ಯ ಧರಿಸಿ ಬಂದ ನಟಿಯ ನಡೆಗೆ ಪರ ವಿರೋಧದ ಚರ್ಚೆ ನಡೆಯುತ್ತಿದೆ.

    ಡಿ.12ರಂದು ನಟಿ ಆಂಟೋನಿ ತಟ್ಟಿಲ್ ಜೊತೆ ಹಸೆಮಣೆ ಏರಿದರು. ಈ ಬೆನ್ನಲ್ಲೇ ಸಿನಿಮಾ ಕೆಲಸದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ವರುಣ್ ಧವನ್ ಜೊತೆಗಿನ ‘ಬೇಬಿ ಜಾನ್’ (Baby John) ಚಿತ್ರದ ಪ್ರಮೋಷನ್ ಜೋರಾಗಿ ನಡೆಯುತ್ತಿದೆ. ಈ ವೇಳೆ, ಕೀರ್ತಿ ಮಾಡ್ರನ್ ಬಟ್ಟೆ ತೊಟ್ಟು ಮಾಂಗಲ್ಯ ಧರಿಸಿ ಬಂದಿರೋದು ಅನೇಕರ ಗಮನ ಸೆಳೆದಿದೆ. ಇನ್ನೂ ಕೆಲವರು ನಟಿಗೆ ಟೀಕೆ ಕೂಡ ಮಾಡಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಮಾಂಗಲ್ಯ ಧರಿಸಿದ ಮೇಲೆ ಲಕ್ಷಣವಾಗಿ ಸೀರೆ ಉಡಬಾರದಿತ್ತಾ? ಇಷ್ಟೊಂದು ಎಕ್ಸ್‌ಪೋಸ್ ಬೇಕಿತ್ತಾ? ಎಂದೆಲ್ಲಾ ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಅಂದಹಾಗೆ, ನಟಿಯ ಮದುವೆಯಲ್ಲಿ ದಳಪತಿ ವಿಜಯ್ ಭಾಗಿಯಾಗಿ ಹಾರೈಸಿದ್ದಾರೆ. ವಿವಾಹ ಸಂಭ್ರಮದಲ್ಲಿ ಭಾಗಿಯಾಗಿದ್ದ ನಟನ ಫೋಟೋ ಶೇರ್ ಮಾಡಿ ಡ್ರೀಮ್ ಐಕಾನ್ ಎಂದು ಕೀರ್ತಿ ಬಣ್ಣಿಸಿದ್ದಾರೆ.

  • ನಟ ದರ್ಶನ್ ಗೆಳೆಯ ಆಂಟೋನಿ ಭವಿಷ್ಯ ಇಂದು ನಿರ್ಧಾರ

    ನಟ ದರ್ಶನ್ ಗೆಳೆಯ ಆಂಟೋನಿ ಭವಿಷ್ಯ ಇಂದು ನಿರ್ಧಾರ

    ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಅಪಘಾತ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಅವರ ಸ್ನೇಹಿತ ಆಂಟೋನಿ ಭವಿಷ್ಯ ನಿರ್ಧಾರವಾಗಲಿದೆ.

    ಆರ್ ಟಿಓ ಹಾಗೂ ಬ್ರೇಕ್ ಇನ್‍ಸ್ಪೆಕ್ಟರ್ ವರದಿಗಳು ಇಂದು ಸಂಚಾರಿ ಪೊಲೀಸರ ಕೈ ಸೇರಲಿದೆ. ಈ ವರದಿಯಲ್ಲಿ ಅಪಘಾತದ ನಿಖರ ಕಾರಣ ಸ್ಪಷ್ಟವಾಗಲಿದೆ. ಕಾರಿನಲ್ಲಿ ದೋಷ ಇಲ್ಲ ಎಂದಾದರೆ ಆಂಟೋನಿ ಈ ಕೇಸ್‍ನಲ್ಲಿ ತಳುಕು ಹಾಕಿಕೊಳ್ಳುವುದು ಖಂಡಿತ ಎಂದು ಹೇಳಲಾಗುತ್ತಿದೆ.

    ಈಗಾಗಲೇ ಅಜಾಗರೂಕತೆ ಹಾಗೂ ಅತಿವೇಗದ ಚಾಲನೆ ಎಂದು ದರ್ಶನ್ ತಮ್ಮ ಡ್ರೈವರ್ ಲಕ್ಷ್ಮಣ್ ಮೂಲಕ ದೂರು ನೀಡಿದರು. ಒಂದು ವೇಳೆ ಕಾರಿನಲ್ಲಿ ತಾಂತ್ರಿಕ ದೋಷ ಇದ್ದರೆ ಮಾತ್ರ ಆಂಟೋನಿ ಬಚಾವ್. ಸದ್ಯ ಆರ್ ಟಿಓ ವರದಿ ಈ ಅಪಘಾತದ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕಾರಿನ ಶಕ್ತಿ, ಇಂಜಿನ್ ಆಯಸ್ಸು, ಬ್ರೇಕ್ ಮತ್ತು ಕ್ಲಚ್ ಪರಿಶೀಲನೆ ನಡೆಸಿ ವರದಿ ನೀಡಲಿದೆ.

    ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇಫ್ ಆಗಿದ್ದು, ತನ್ನ ಸ್ನೇಹಿತನ ವಿರುದ್ಧವೇ ದೂರು ದಾಖಲಿಸಿದರು ಎಂದು ಹೇಳಲಾಯಿತು. ಪ್ರಕರಣದಲ್ಲಿ ರಾಯ್ ಆಂಟೋನಿ ಮಾತ್ರ ಏಕೈಕ ಆರೋಪಿಯಾಗಿದ್ದು, ಸ್ನೇಹಿತನ ವಿರುದ್ಧವೇ ದರ್ಶನ್ ಖಾಸಗಿ ಗನ್‍ಮ್ಯಾನ್ ಮತ್ತು ಡ್ರೈವರ್ ಆಗಿರುವ ಲಕ್ಷ್ಮಣ್ ಮೂಲಕ ದೂರು ಕೊಡಿಸಿದ್ದಾರೆ. ಲಕ್ಷ್ಮಣ್ ನೀಡಿದ ದೂರಿನ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಸೋಮವಾರ ಬೆಳಗ್ಗಿನ ಜಾವ ಸುಮಾರು 2.30 ಗಂಟೆ ಕಾರಿನ ಚಾಲಕ ರಾಯ್ ಆಂಟೋನಿ ಅವರು ಕಾರಿನಲ್ಲಿ ನಟರಾದ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರನ್ನು ಕೂರಿಸಿಕೊಂಡು ರಿಂಗ್ ರಸ್ತೆ ಜಂಕ್ಷನ್ ತಿರುವಿನಲ್ಲಿ ಕಾರನ್ನು ನಿರ್ಲಕ್ಷ್ಯತೆ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಇದರಿಂದ ದರ್ಶನ್ ಅವರ ಬಲಗೈ ಮೂಳೆ ಮುರಿದಿದೆ. ಅಲ್ಲದೇ ದೇವರಾಜ್ ಅವರ ಎದೆಯ ಭಾಗ ಹಾಗೂ ಎಡಗೈ ಬೆರಳಿಗೆ ಪೆಟ್ಟಾಗಿದ್ದು, ಪ್ರಜ್ವಲ್ ಅವರಿಗೆ ಸಣ್ಣಪುಟ್ಟ ಪೆಟ್ಟಾಗಿದೆ. ಸದ್ಯ ಮೂವರು ನಟರು ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಪಘಾತದ ವಿಚಾರ ತಿಳಿದು ನಾನು ಆಸ್ಪತ್ರೆಗೆ ಬಂದು ಗಾಯಗೊಂಡಿದ್ದ ನಟರನ್ನು ನೋಡಿದೆ. ಹೀಗಾಗಿ ಈ ಅಪಘಾತಕ್ಕೆ ಕಾರಣನಾದ ಕಾರು ಚಾಲಕ ರಾಯ್ ಆಂಟೋನಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.

    ಆದರೆ ಈಗ ಈ ಘಟನೆಗೆ ಸಂಬಂಧಿಸಿದಂತೆ ನಾನು ಆಂಟೋನಿ ವಿರುದ್ಧ ಯಾವುದೇ ದೂರು ನೀಡಿಲ್ಲ ಎಂದು ದರ್ಶನ್ ಅವರ ಗನ್‍ಮ್ಯಾನ್ ಹಾಗೂ ಡ್ರೈವರ್ ಲಕ್ಷ್ಮಣ್ ಹೇಳಿದ್ದಾರೆ. ಹಾಗಾದರೆ ಆಂಟೋನಿ ವಿರುದ್ಧ ದೂರು ನೀಡಿದ ವ್ಯಕ್ತಿ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಆದ್ರೆ ಎಫ್‍ಐಆರ್ ನಲ್ಲಿ ಪಿರ್ಯಾದುದಾರರ ಹೆಸರು ಲಕ್ಷ್ಮಣ್ ಅಂತಾನೇ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv