Tag: ಅಶ್ರಫ್ ಘನಿ

  • ಲೀಕ್ ಆಯ್ತು ಜೋ ಬೈಡನ್- ಅಶ್ರಫ್ ಘನಿ ಫೋನ್ ಸಂಭಾಷಣೆ

    ಲೀಕ್ ಆಯ್ತು ಜೋ ಬೈಡನ್- ಅಶ್ರಫ್ ಘನಿ ಫೋನ್ ಸಂಭಾಷಣೆ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅಫ್ಘಾನಿಸ್ತಾನದ ಮಾಜಿ ಪ್ರಧಾನಿ ಅಶ್ರಫ್ ಘನಿ ನಡುವಿನ 14 ನಿಮಿಷದ ಸಂಭಾಷಣೆಯ ಮಾಹಿತಿ ಹೊರ ಬಂದಿದೆ. ಕಾಬೂಲ್ ನಗರವನ್ನು ತಾಲಿಬಾನಿಗಳು ವಶಕ್ಕೆಪಡೆಯುವ 23 ದಿನ ಮೊದಲು ಈ ಮಾತುಕತೆ ನಡೆದಿತ್ತು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    23 ಜುಲೈ 2021 ರಂದು ಘನಿ ಮತ್ತು ಬೈಡನ್ ನಡುವೆ ಫೋನ್ ಸಂಭಾಷಣೆ ನಡೆದಿತ್ತು. ಅಂದು ಜೋ ಬೈಡನ್ ತಾಲಿಬಾನಿಗಳನ್ನು ತಡೆಯುವ ಪ್ಲಾನ್ ನೀಡುವಂತೆ ಅಶ್ರಫ್ ಘನಿಗೆ ಸೂಚಿಸಿದ್ದರು. ನಾವು ಸಹಾಯ ಮಾಡಲು ಸಿದ್ಧರಿದ್ದು, ನಿಮ್ಮ ಯೋಜನೆಯ ರೂಪರೇಷಗಳನ್ನು ಮೊದಲು ತಿಳಿಸಬೇಕು ಎಂದು ಷರತ್ತು ಹಾಕಿದ್ದರು. ಜೊತೆಗೆ ತಾಲಿಬಾನಿಗಳ ವಿರುದ್ಧದ ನಡೆಯುವ ಹೋರಾಟ ಅಫ್ಘಾನಿಸ್ತಾನದ ಜನರಲ್ ಬಿಸ್ಮಿಲ್ಲಾಹ ನೇತೃತ್ವದಲ್ಲಿ ಮುನ್ನಡೆಯಬೇಕು ಎಂದು ಹೇಳಿದ್ದರು.

    ತಾಲಿಬಾನಿಗಳನ್ನು ತಡೆಯಲು ಅಮೆರಿಕ ಸಂಪೂರ್ಣ ಸಹಾಯಕ್ಕೆ ಮುಂದಾಗಿತ್ತು ಎಂಬುವುದು ಸಂಭಾಷಣೆಯಲ್ಲಿ ತಿಳಿದು ಬಂದಿದೆ. ಅಫ್ಘಾನಿಸ್ತಾನದ ರಕ್ಷಣೆಗಾಗಿಯೇ ಅಮೆರಿಕ ಏರ್ ಸ್ಟ್ರೈಕ್ ನಡೆಸಿತ್ತು ಸಹ ಎಂದು ವರದಿಗಳು ಪ್ರಕಟವಾಗುತ್ತಿವೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

    ಇದೇ ಸಂಭಾಷಣೆಯಲ್ಲಿ ಅಶ್ರಫ್ ಘನಿ ಪಾಕಿಸ್ತಾನದ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ತಾಲಿಬಾನಿಗಳ ಸಪೋರ್ಟ್ ಗಾಗಿ ಪಾಕಿಸ್ತಾನ ತನ್ನ ದೇಶದ 10 ರಿಂದ 15 ಸಾವಿರ ಜನರನ್ನು ಅವರೊಂದಿಗೆ ಕಳುಹಿಸುತ್ತಿದೆ. ಅಫ್ಘಾನಿಸ್ತಾನದ ಹೋರಾಟದಲ್ಲಿ ಪಾಕ್ ಬೆಂಬಲ ಪಡೆದಿರುವ ತಾಲಿಬಾನಿಗಳು ಪ್ರಬಲವಾಗಿ ದಾಳಿ ಮಾಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು

    ಜುಲೈ 23ರಂದು ಇಬ್ಬರು ನಾಯಕರು ನಡೆದಿದೆ ಎನ್ನಲಾದ ಫೋನ್ ಸಂಭಾಷಣೆಯ ಮಾಹಿತಿಯನ್ನು ನ್ಯೂಸ್ ಏಜೆನ್ಸಿ ಹಂಚಿಕೊಂಡಿದೆ. ಈ ವರದಿ ಬಗ್ಗೆ ಜೋ ಬೈಡನ್ ಅಥವಾ ಶ್ವೇತ ಭವನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇತ್ತ ಅಶ್ರಫ್ ಘನಿ ಸಹ ಈ ವರದಿ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆಗೊಳಿಸಿಲ್ಲ. ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ

    ಆಗಸ್ಟ್ 15ರಂದು ಅಶ್ರಫ್ ಘನಿ ದೇಶ ತೊರೆದ ನಂತರ ಫುಲ್ ಆ್ಯಕ್ಟಿವ್ ಆದ ತಾಲಿಬಾನಿಗಳು ಇಡೀ ನಗರವನ್ನು ತಮ್ಮ ತೆಕ್ಕಗೆ ತೆಗೆದುಕೊಂಡರು. ಆಗಸ್ಟ್ 31ರ ರಾತ್ರಿ ಅಮೆರಿಕ ಸೇನೆ ಹಿಂದಿರುಗುತ್ತಿದ್ದಂತೆ ಸ್ವತಂತ್ರ ಸಿಕ್ಕಿತು ಎಂದು ಗುಂಡಿನ ಮಳೆಗೈದು ಸಂಭ್ರಮಾಚರಣೆ ಮಾಡಿದ್ದವು. ನಂತರ ಅಮೆರಿಕ ಸೇನೆಯ ಹೆಲಿಕಾಪ್ಟರ್ ಗೆ ಶವ ಕಟ್ಟಿ ಹಾರಾಟಿ ನಡೆಸಿ ವಿಕೃತಿಯನ್ನು ಮೆರದಿದ್ದವು. ಇದೀಗ ಭಾರತ ಸೇರಿದಂತೆ ಹಲವು ದೇಶಗಳ ಜೊತೆ ತಾಲಿಬಾನಿಗಳು ಔಪಚಾರಿಕ ಮಾತುಕತೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದಿದ್ದು ಅಮೆರಿಕಾ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ

  • 1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ

    1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ

    ಕಾಬೂಲ್: ತಾಲಿಬಾನ್ ಉಗ್ರರ ದಾಳಿಯಿಂದ ತಪ್ಪಿಸಿಕೊಂಡು ದೇಶ ತೊರೆದಿರುವ ಅಘ್ಘನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

    ಮಾಜಿ ಅಧ್ಯಕ್ಷ ಘನಿ ಕುಟುಂಬದ ಸದಸ್ಯರ ಜೊತೆ ಯುಎಇಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಕುಟುಂಬ ಸಮೇತ ಆಗಮಿಸಿದ್ದನ್ನು ಯುಎಇ ವಿದೇಶಾಂಗ ಸಚಿವಾಲಯ ಖಚಿತ ಪಡಿಸಿಕೊಂಡಿದೆ. ಮಾನವೀಯತೆ ದೃಷ್ಟಿಯಿಂದ ಆಶ್ರಯ ನೀಡಲಾಗಿದೆ ಎಂದು ಯುಎಇ ಹೇಳಿದೆ.

    ಆಗಸ್ಟ್ 15 ರಂದು ಘನಿ ದೇಶ ಬಿಡುವ ಸಮಯದಲ್ಲಿ 4 ಕಾರು, ಭಾರೀ ಹಣದೊಂದಿಗೆ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪಕ್ಕೆ ಪೂರಕ ಎಂಬಂತೆ ತಜಕಿಸ್ತಾನದಲ್ಲಿರುವ ಅಫ್ಘಾನ್ ರಾಯಭಾರಿ, ಅಶ್ರಫ್ ಘನಿ 16.9 ಕೋಟಿ ಡಾಲರ್(1,250 ಕೋಟಿ ರೂ.) ಹಣದ ಜೊತೆ ಪರಾರಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಸಾರ್ವಜನಿಕ ಸಂಪತ್ತನ್ನು ಕದ್ದ ಆರೋಪದ ಮೇಲೆ ಅಶ್ರಫ್ ಘನಿ, ಹಮ್ದಲ್ಲಾ ಮೊಹೀಬ್ ಮತ್ತು ಫಜಲ್ ಮೊಹಮ್ಮದ್ ಫಜ್ಲಿಯನ್ನು ಬಂಧಿಸಿಸುವಂತೆ ಇಂಟರ್ ಪೋಲ್ ಬಳಿ ಬಳಿ ತಜಕಿಸ್ತಾನದಲ್ಲಿರುವ ಅಫ್ಘಾನ್ ರಾಯಭಾರಿ ಮನವಿ ಮಾಡಿದ್ದಾರೆ ಎಂದು ಅಫ್ಘಾನಿಸ್ತಾನದ ಟೋಲೋ ನ್ಯೂಸ್ ವಾಹಿನಿ ವರದಿ ಮಾಡಿದೆ.

    ಈ ಆರೋಪಕ್ಕೆ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಘನಿ, ನಾನು ದೇಶ ಬಿಟ್ಟು ಓಡಿ ಹೋಗಿಲ್ಲ. ಅಫ್ಘಾನಿಸ್ತಾನಕ್ಕೆ ಮತ್ತೆ ಮರಳಲು ಸಿದ್ಧನಿದ್ದೇನೆ. ಯಾವುದೇ ಹಣವನ್ನು ಕದ್ದುಕೊಂಡು ಹೋಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ: ಅಫ್ಘಾನಿಸ್ತಾನದ ಮಹಿಳಾ ಮೇಯರ್

    ಉಗ್ರರು ಕಾಬೂಲ್ ನಗರ ಪ್ರವೇಶಿಸುತ್ತಿದ್ದಂತೆಯೇ ಜೀವಭಯದಲ್ಲಿದ್ದ ಅಧ್ಯಕ್ಷ ಘನಿ ಅವರು ಆತಂಕಕ್ಕೆ ಒಳಗಾದರು. ಮತ್ತಷ್ಟು ಸಮಯ ಇಲ್ಲಿದ್ದರೆ ನನ್ನನ್ನೇ ಉಗ್ರರು ಹತ್ಯೆ ಮಾಡಬಹುದು ಎಂದು ಭಾವಿಸಿ ಕುಟುಂಬ ಸಮೇತ ಘನಿ ವಿಶೇಷ ವಿಮಾನದ ಮೂಲಕ ಅಜ್ಞಾತ ಸ್ಥಳಕ್ಕೆ ತೆರಳಿದ್ದರು.

    ಅಫ್ಘಾನಿಸ್ತಾನ ತೊರೆಯುವ ವೇಳೆ 4 ಕಾರಿನಲ್ಲಿ ಭಾರೀ ಪ್ರಮಾಣದ ದುಡ್ಡನ್ನು ತುಂಬಿದರು. ಉಳಿದ ಹಣವನ್ನು ಹೆಲಿಕಾಪ್ಟರ್ ನಲ್ಲಿ ಇರಿಸಿದರು. ಹಣವಿದ್ದ ಕಾರುಗಳನ್ನು ವಿಶೇಷ ವಿಮಾನದಲ್ಲಿ ಏರಿಸಿಕೊಂಡು ಪ್ರಯಾಣ ಬೆಳೆಸಿದರು. ಘನಿ ಅವರ ನಂಬಿಕಸ್ಥ ವ್ಯಕ್ತಿ ಇದ್ದ ಹೆಲಿಕಾಪ್ಟರ್ ಕೂಡ ಅದೇ ದಿಕ್ಕಿನಲ್ಲಿ ಹಿಂಬಾಲಿಸಿತು ಎಂದು ವರದಿಯಾಗಿತ್ತು. ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ 

    ಕಾಬೂಲ್‍ನಿಂದ ಪರಾರಿಯಾದ ಅಶ್ರಫ್ ಘನಿ ತಜಕಿಸ್ತಾನದಲ್ಲಿ ಇದ್ದಾರೆ ಎಂದು ಮೊದಲು ವರದಿಯಾಗಿತ್ತು. ಆದರೆ ತಜಕಿಸ್ತಾನ ಸರ್ಕಾರ ಅಶ್ರಫ್ ತಮ್ಮ ದೇಶದಲ್ಲಿ ಇಲ್ಲ ಎಂದು ಹೇಳಿತ್ತು. ಬಳಿಕ ಒಮನ್ ದೇಶಕ್ಕೆ ಹಾರಿ ಅಲ್ಲಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿರಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

  • ಅಘ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ – ಅಫ್ಘನ್ ದೇಶವನ್ನುದ್ದೇಶಿಸಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಭಾಷಣ

    ಅಘ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ – ಅಫ್ಘನ್ ದೇಶವನ್ನುದ್ದೇಶಿಸಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಭಾಷಣ

    ಕಾಬೂಲ್: ಅಘ್ಘಾನಿಸ್ತಾನದಲ್ಲಿ ತಾಲಿಬಾನಿ ಆಡಳಿತ ನಿನ್ನೆಯಿಂದ ಆರಂಭವಾಗಿದೆ. ನಿನ್ನೆ ರಾಜಧಾನಿ ಕಾಬೂಲ್ ನಗರವನ್ನು ತಾಲಿಬಾನ್ ಉಗ್ರರು ನಿಯಂತ್ರಣಕ್ಕೆ ತೆಗೆದುಕೊಂಡರು. ಇದಕ್ಕೂ ಮೊದಲೇ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ತನ್ನ ಆಪ್ತರೊಂದಿಗೆ ಉಜ್ಭೇಕಿಸ್ಥಾನದ ತಾಷ್ಕೆಂಟ್‍ಗೆ ಓಡಿ ಹೋಗಿ ತಲೆ ಮರೆಸಿಕೊಂಡಿದ್ದಾರೆ. ಈ ಎಲ್ಲದರ ನಡುವೆ ಅಘ್ಘಾನಿಸ್ಥಾನವನ್ನುದ್ದೇಶಿಸಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಇಂದು ರಾತ್ರಿ ಭಾಷಣ ಮಾಡಲಿದ್ದಾರೆ ಎಂದು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

    ತಾಲಿಬಾನಿಗಳ ಅಟ್ಟಹಾಸ ಅಘ್ಘಾನಿಸ್ತಾನದಲ್ಲಿ ಆರಂಭವಾಗುತ್ತಿದ್ದಂತೆ ಅಲ್ಲಿನ ನಾಗರೀಕರು ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಸಿಕ್ಕ, ಸಿಕ್ಕ ವಿಮಾನವೇರಿ ದೇಶ ತೊರೆಯುತ್ತಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ನೇತೃತ್ವದಲ್ಲಿ ತಾಲಿಬಾನ್‍ಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ. ಈ ಬೆಳವಣಿಗೆ ನಡುವೆ ಜೊ ಬೈಡನ್ ಅಘ್ಫಾನ್ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವುದಾಗಿ ತಿಳಿಸಿರುವುದು ಬಾರಿ ಕೂತುಹಲ ಮೂಡಿಸಿದೆ. ಇದನ್ನೂ ಓದಿ: ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ

    ತಾಲಿಬಾನಿಗಳ ವಶಕ್ಕೆ ಅಫ್ಘಾನಿಸ್ತಾನ ಒಳಪಡುತ್ತಿದ್ದಂತೆ. ಅಮೆರಿಕಾದಲ್ಲಿ ಅಫ್ಘಾನ್ ಪ್ರಜೆಗಳಿಂದ ಪ್ರತಿಭಟನೆ ನಡೆಯಿತು. ವೈಟ್ ಹೌಸ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಅಘ್ಘಾನ್ ಪ್ರಜೆಗಳು ಅಲ್ಲಿ ನಡೆಯುತ್ತಿರುವ ಘಟನೆಗೆ ಅಮೆರಿಕ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿ, ಜೊ ಬೈಡನ್ ವಿರುದ್ಧ ಘೋಷಣೆ ಕೂಗಿದರು. ಇದನ್ನೂ ಓದಿ: ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು

    ಅಫ್ಘಾನ್ ನಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚೀನಾ ತನ್ನ ಕುತಂತ್ರ ಬುದ್ಧಿ ತೋರಿಸಲು ಮುಂದಾಗಿದೆ. ತಾಲಿಬಾನ್ ಸರ್ಕಾರದ ಜೊತೆಗೆ ಕೈಜೊಡಿಸಲು ಮುಂದಾಗಿರುವ ಚೀನಾ, ತಾಲಿಬಾನ್ ಜೊತೆ ಸ್ನೇಹ ಸಂಬಂಧ ಬೆಳೆಸಲು ಸಿದ್ಧ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.

  • ಅಫ್ಘಾನಿಸ್ತಾನದಲ್ಲಿ ಶಾಲೆ, ಕಾಲೇಜು ಬಂದ್ – ಬುರ್ಖಾ ಅಂಗಡಿ ಓಪನ್

    ಅಫ್ಘಾನಿಸ್ತಾನದಲ್ಲಿ ಶಾಲೆ, ಕಾಲೇಜು ಬಂದ್ – ಬುರ್ಖಾ ಅಂಗಡಿ ಓಪನ್

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಆತಂಕದಲ್ಲಿರುವ ಜನರು ದೇಶ ತೊರೆದು ಪ್ರಾಣ ಉಳಿಸಿಕೊಳ್ಳುತ್ತಿದ್ದಾರೆ. ತಾಲಿಬಾನಿಗಳ ಪ್ರವೇಶದಿಂದ ಕಾಬೂಲ್ ನಲ್ಲಿ ಶಾಲಾ, ಕಾಲೇಜು ಸೇರಿದಂತೆ ವ್ಯವಹಾರ ಚಟುವಟಿಕೆಗಳು ಬಂದ್ ಆಗಿವೆ. ಆದ್ರೆ ಬುರ್ಖಾ ಅಂಗಡಿಗಳು ತೆರೆದಿದ್ದು, ಖರೀದಿಗೆ ಜನ ಮುಗಿಬೀಳುತ್ತಿದ್ದಾರೆ. ಅದರಲ್ಲಿಯೂ ದಪ್ಪ ಬಟ್ಟೆಯ ಬುರ್ಖಾಗಳಿಗೆ ಹೆಚ್ಚು ಬೇಡಿಕೆಯುಂಟಾಗಿದೆ.

    2018ರಲ್ಲಿ ಯುನೈಟೆಡ್ ನೇಷನ್ ನಲ್ಲಿ ಅಫ್ಘಾನಿಸ್ತಾನ ಪ್ರತಿನಿಧಿಸಿದ್ದ ಯುವತಿ ಆಯೇಶಾ ಖುರ್ರಮ್ ಈ ಕುರಿತು ಬರೆದುಕೊಂಡಿದ್ದಾರೆ. ತಾಲಿಬಾನಿಗಳ ಎಂಟ್ರಿಯಿಂದಾಗಿ ಬುರ್ಖಾ ವಹಿವಾಟು ಜೋರಾಗಿದ್ದು, ದೇಶದ ವಿವಿಧ ಪ್ರಾಂತ್ಯಗಳಲ್ಲಿ ಈ ದೃಶ್ಯ ಕಾಣಬಹುದಾಗಿದೆ. ತಾಲಿಬಾನಿಗಳ ದೃಷ್ಟಿ ತಮ್ಮ ಮೇಲೆ ಬೀಳದಿರಲಿ ಎಂದು ಮಹಿಳೆಯರು ದಪ್ಪ ಬಟ್ಟೆ ಮತ್ತು ನೀಲಿ ಬಣ್ಣದ ಬುರ್ಖಾ ಖರೀದಿಗೆ ಮುಂದಾಗುತ್ತಿದ್ದಾರೆ. ಬೇಡಿಕೆ ಹೆಚ್ಚಾದ ಹಿನ್ನೆಲೆ ಮಾರುಕಟ್ಟೆಯಲ್ಲಿ ಬುರ್ಖಾ ಬೆಲೆ ಸಹ ಏರಿಕೆ ಕಂಡಿದೆ. ಈ ಹಿಂದೆ ತಾಲಿಬಾನಿಗಳ ನಲುಗಿದ ಮಹಿಳೆಯರು ಎಲ್ಲ ಯುವತಿಯರಿಗೆ ಬುರ್ಖಾ ಧರಿಸುವಿಕೆಯ ಸಲಹೆ ನೀಡುತ್ತಿದ್ದಾರೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

    22 ವರ್ಷದ ಆಯೇಶಾ ಕಾಬೂಲ್ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ವ್ಯವಹಾರಿಕ ಸಂಬಂಧಗಳ ಕುರಿತ ವಿಷಯದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅಂತಿಮ ವರ್ಷದ ಪರೀಕ್ಷೆಗೆ ಇನ್ನೂ ಎರಡು ತಿಂಗಳು ಇರುವಾಗಲೇ ತಾಲಿಬಾನಿಗಳ ಪ್ರವೇಶವಾಗಿದೆ. ನಾನು ಪದವಿ ಪಡೆಯುವ ಕನಸು ಕನಸಾಗಿಯೇ ಉಳಿಯಲಿದೆ ಎಂದು ಆಯೇಶಾ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ

    ಇನ್ನೂ ಕೆಲ ದಿಟ್ಟ ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ತಾಲಿಬಾನಿಗಳಿಗೆ ತಲುಪಿಸುವ ಪ್ರಯತ್ನದಲ್ಲಿದ್ದಾರೆ. ಕಾಬೂಲ್ ವಿಶ್ವವಿದ್ಯಾಲಯದ ಅಧ್ಯಾಪಕಿ ಮುಸ್ಕಾ ದಸ್ತಗೀರ್ ಸೋಶಿಯಲ್ ಮೀಡಿಯಾದಲ್ಲಿ ತಾಲಿಬಾನಿಗಳನ್ನು ಉದ್ದೇಶಿಸಿ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ಅಫ್ಘಾನಿಸ್ತಾನದ ಜನರನ್ನ ಬೇಟೆಯಂತೆ ಕಂಡು ಕೊಲ್ಲಲಾಗುತ್ತಿದೆ. ಆದ್ರೆ ಈ ದೇಶದ ಮಹಿಳೆಯರು ಮನೆಯಲ್ಲಿ ಅವಿತುಕೊಳ್ಳಲ್ಲ ಮತ್ತು ನಾವುಗಳು ಹೆದರಲ್ಲ ಎಂದು ಬರೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ

  • ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ

    ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ

    – ಏರ್ ಪೋರ್ಟ್ ನಲ್ಲಿಯೇ ಉಳಿದ ಅರ್ಧ ಹಣ

    ಕಾಬೂಲ್: ತಾಲಿಬಾನಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾಜಿ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆಯುವಾಗ ನಾಲ್ಕು ಕಾರ್ ಮತ್ತು ಒಂದು ಹೆಲಿಕಾಪ್ಟರ್ ನಲ್ಲಿ ಅಪಾರ ಪ್ರಮಾಣದ ನಗದು ತೆಗೆದುಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ. ಆದ್ರೆ ಎಲ್ಲವೂ ಹಣ ತೆಗೆದುಕೊಂಡ ಹೋಗಲಾಗದೇ ಕೆಲ ನಗದನ್ನು ಕಾಬೂಲ್ ವಿಮಾನ ನಿಲ್ದಾಣದಲ್ಲಿಯೇ ಬಿಟ್ಟುಹೋಗಿರೋದು ರಷ್ಯಾದ ರಾಯಭಾರಿ ಕಚೇರಿ ದೃಢಪಡಿಸಿದೆ.

    ತಾಲಿಬಾನಿಗಳು ಸಹ ವಿಮಾನ ನಿಲ್ದಾಣದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿರೋದನ್ನು ಹೇಳಿಕೊಂಡಿದ್ದರು. ಇದು ಸುಮಾರು 50 ಲಕ್ಷ ಡಾಲರ್ ಎಂದು ಹೇಳಲಾಗುತ್ತಿದ್ದು, ಆದ್ರೆ ಈ ವರದಿಯನ್ನು ದೃಢಪಡಿಸಿರಲಿಲ್ಲ. ಇದೀಗ ಕಾಬೂಲ್ ನಲ್ಲಿರುವ ರಷ್ಯಾದ ರಾಯಭಾರಿ ಕಚೇರಿ ಈ ಸುದ್ದಿಯನ್ನು ಖಚಿತಪಡಿಸಿದೆ. ಅಫ್ಘಾನಿಸ್ತಾನ ತಾಲಿಬಾನಿಗಳ ಕೈ ವಶವಾದ್ರೂ ತನ್ನ ರಾಯಭಾರಿ ಕಚೇರಿಯನ್ನು ಮುಚ್ಚದಿರಲು ರಷ್ಯಾ ನಿರ್ಧರಿಸಿದೆ. ನಾವು ತಾಲಿಬಾನಿಗಳ ಚಲನವಲನಗಳನ್ನು ಇಲ್ಲಿಂದಲೇ ಗಮನಿಸುತ್ತೇವೆ. ಅಂದ್ರೆ ಅವರ ಸರ್ಕಾರವನ್ನು ಒಪ್ಪಿಕೊಂಡಂತೆ ಅಲ್ಲ ಎಂದು ಸ್ಪಷ್ಟಪಡಿಸಿದೆ.

    ಈ ಕುರಿತು ಮಾಹಿತಿ ನೀಡಿರುವ ಕಾಬೂಲ್ ನಲ್ಲಿರುವ ದೂತವಾಸ ಕಚೇರಿಯ ವಕ್ತಾರೆ ನಿಕಿತಾ ಐಚಿಂಕೋ, ಭಾನುವಾರವೇ ಘನಿ ದೇಶ ತೊರೆದಿದ್ದಾಯ್ತು. ಹೋಗುವಾಗ ನಾಲ್ಕು ಕಾರ್ ಮತ್ತು ಹೆಲಿಕಾಪ್ಟರ್ ನಲ್ಲಿ ನಗದು ರವಾನಿಸಲಾಗಿತ್ತು. ಆದ್ರೆ ಏಕಕಾಲದಲ್ಲಿ ಅಷ್ಟು ನಗದು ತೆಗೆದುಕೊಂಡ ಹೋಗಲಾರದ ಘಣಿ ಕೆಲ ಹಣವನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ

    ಅಶ್ರಫ್ ಘನಿ ಮತ್ತು ಮಾಜಿ ಉಪಾಧ್ಯಕ್ಷ ಸಾಲೇಹ ಭಾನುವಾರವೇ ತಮ್ಮ ದೇಶದ ಜನತೆಯನ್ನು ಬಿಟ್ಟು ಅಫ್ಘಾನಿಸ್ತಾನ ತೊರೆದಿದ್ದರು. ಈ ವೇಳೆ ಇಬ್ಬರ ಜೊತೆ ಆಪ್ತರು ಮಾತ್ರ ಪ್ರಯಾಣಿಸಿದ್ದಾರೆ ಎನ್ನಲಾಗಿದೆ. ಆದ್ರೆ ಕಾಬೂಲ್ ನಿಂದ ಯಾವ ವಿಮಾನದಿಂದ ಎಲ್ಲಿಗೆ ಹೋದ್ರು ಎಂಬುದರ ಬಗ್ಗೆ ಇದುವರೆಗೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಕೆಲ ಮಾಧ್ಯಮಗಳ ಪ್ರಕಾರ ಘನಿ ತಜಕೀಸ್ತಾನ ಎಂದು ಹೇಳುತ್ತಿದ್ರೆ, ಕೆಲವರ ಪ್ರಕಾರ ಅಮೆರಿಕ ತಲುಪಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

    ಅಶ್ರಫ್ ಘನಿ ಹೇಳಿದ್ದೇನು?:
    ನನಗೆ ಕಠಿಣ ಸವಾಲು ಎದುರಾಗಿತ್ತು. ತಾಲಿಬಾನಿಗಳನ್ನು ಎದುರಿಸಲು ನಿಂತಿದ್ದೆ. ಅವರೆಲ್ಲರೂ ಶಸ್ತ್ರಸಜ್ಜಿ ತರಾಗಿ ರಾಷ್ಟ್ರಪತಿ ಭವನ ಪ್ರವೇಶಿಸಲು ಸಿದ್ಧರಾಗಿದ್ದರು. ನಾನು ಅಫ್ಘಾನಿಸ್ತಾನದಿಂದ ದೂರ ಹೋಗಬೇಕೆಂಬುವುದು ಅವರ ಡಿಮ್ಯಾಂಡ್ ಆಗಿತ್ತು. ಕಳೆದ 20 ವರ್ಷಗಳಿಂದ ದೇಶದ ಜನರ ರಕ್ಷಣೆಯಲ್ಲಿ ತೊಡಗಿಕೊಂಡಿದ್ದೇನೆ. ಒಂದು ವೇಳೆ ಅವರ ಡಿಮ್ಯಾಂಡ್ ಒಪ್ಪದಿದ್ರೆ ಯುದ್ಧವೇ ನಡೆಯತ್ತಿತ್ತು. ಈ ಯುದ್ಧದಲ್ಲಿ ನೂರಾರು ಜನ ಪೊಲೀಸರು ಹುತಾತ್ಮರಾಗುತ್ತಿದ್ದರು. ರಕ್ತ ಹರಿಸೋದು ನನಗೆ ಇಷ್ಟವಿರಲಿಲ್ಲ. ಅವರ ಬೇಡಿಕೆಯಂತೆ ಆಧಿಕಾರ ಹಸ್ತಾಂತರಿಸಿ ದೇಶ ತೊರೆದೆ. ಇಲ್ಲವಾದಲ್ಲಿ 60 ಲಕ್ಷ ಜನಸಂಖ್ಯೆಯುಳ್ಳು ಈ ನಗರ ದೊಡ್ಡ ದುರಂತಕ್ಕೆ ಸಾಕ್ಷಿಯಾಗುತ್ತಿತ್ತು ಎಂದು ಹೇಳಿದ್ದಾರೆ.  ಇದನ್ನೂ ಓದಿ: ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು

    https://www.youtube.com/watch?v=ckd3p_Ra2VI

  • ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

    ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

    ಕಾಬೂಲ್: ತಾಲಿಬಾನಿಗಳು ಕಾಬೂಲ್ ನಗರ ಮತ್ತು ರಾಷ್ಟ್ರಪತಿ ಭವನ ವಶಕ್ಕೆ ಪಡೆದ ನಂತರ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದ ಬಳಿಕ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅಫ್ಘಾನಿಸ್ತಾನದ ಜನರಿಗೆ ಅಶ್ರಫ್ ಘನಿ ಸಂದೇಶ ರವಾನಿಸಿದ್ದು, ನಿಮ್ಮೆಲ್ಲರ ಹಿತ ಮತ್ತು ರಕ್ತಪಾತ ನಿಲ್ಲಿಸಲು ದೇಶದಿಂದ ಹೊರ ಬಂದಿದ್ದೇನೆ ಎಂದು ಹೇಳಿದ್ದಾರೆ.

    ನನ್ನ ಪ್ರೀತಿಯ ದೇಶವಾಸಿಗಳೇ,
    ನನಗೆ ಕಠಿಣ ಸವಾಲು ಎದುರಾಗಿತ್ತು. ತಾಲಿಬಾನಿಗಳನ್ನು ಎದುರಿಸಲು ನಿಂತಿದ್ದೆ. ಅವರೆಲ್ಲರೂ ಶಸ್ತ್ರಸಜ್ಜಿ ತರಾಗಿ ರಾಷ್ಟ್ರಪತಿ ಭವನ ಪ್ರವೇಶಿಸಲು ಸಿದ್ಧರಾಗಿದ್ದರು. ನಾನು ಅಫ್ಘಾನಿಸ್ತಾನದಿಂದ ದೂರ ಹೋಗಬೇಕೆಂಬುವುದು ಅವರ ಡಿಮ್ಯಾಂಡ್ ಆಗಿತ್ತು. ಕಳೆದ 20 ವರ್ಷಗಳಿಂದ ದೇಶದ ಜನರ ರಕ್ಷಣೆಯಲ್ಲಿ ತೊಡಗಿಕೊಂಡಿದ್ದೇನೆ. ಒಂದು ವೇಳೆ ಅವರ ಡಿಮ್ಯಾಂಡ್ ಒಪ್ಪದಿದ್ರೆ ಯುದ್ಧವೇ ನಡೆಯತ್ತಿತ್ತು. ಈ ಯುದ್ಧದಲ್ಲಿ ನೂರಾರು ಜನ ಪೊಲೀಸರು ಹುತಾತ್ಮರಾಗುತ್ತಿದ್ದರು. ರಕ್ತ ಹರಿಸೋದು ನನಗೆ ಇಷ್ಟವಿರಲಿಲ್ಲ. ಅವರ ಬೇಡಿಕೆಯಂತೆ ಆಧಿಕಾರ ಹಸ್ತಾಂತರಿಸಿ ದೇಶ ತೊರೆದೆ. ಇಲ್ಲವಾದಲ್ಲಿ 60 ಲಕ್ಷ ಜನಸಂಖ್ಯೆಯುಳ್ಳು ಈ ನಗರ ದೊಡ್ಡ ದುರಂತಕ್ಕೆ ಸಾಕ್ಷಿಯಾಗುತ್ತಿತ್ತು.

    ತಮ್ಮ ರಸ್ತೆಗೆ ಅಡ್ಡಲಾಗಿರುವ ನನ್ನನ್ನು ತೆಗೆದುಹಾಕಲು ತಾಲಿಬಾಲಿನಿಗಳು ನಿರ್ಧರಿಸಿದ್ದರು. ಇದಕ್ಕಾಗಿ ಕಾಬೂಲ್ ಮತ್ತು ಕಾಬೂಲ್ ಜನತೆಯ ಮೇಲೆ ದಾಳಿಯ ಕುರಿತು ಪ್ಲಾನ್ ಮಾಡಿಕೊಂಡಿದ್ದರು. ಹಾಗಾಗಿ ಇದೆಲ್ಲವನ್ನು ತಡೆಯಲು ನನ್ನ ಮುಂದಿದ ದಾರಿ ಇದು ಒಂದೇ ಆಗಿತ್ತು. ಬಂದೂಕು, ಬಾಂಬ್ ಗಳಿಂದ ತಾಲಿಬಾನಿಗಳು ಯುದ್ಧ ಗೆದ್ದಿರಬಹುದು. ಈಗ ದೇಶ ಮತ್ತು ಅಲ್ಲಿಯ ಜನತೆಯ ಮಾನ ಹಾಗೂ ಪ್ರಾಣವನ್ನು ರಕ್ಷಿಸುವ ಜವಾಬ್ದಾರಿ ಅವರ ಮೇಲಿದೆ.

    ದೇಶವನ್ನು ತಮ್ಮ ವಶಕ್ಕೆ ಪಡೆದಿರುವ ತಾಲಿಬಾನಿಗಳು ಅಲ್ಲಿಯ ಜನರ ಮನಸ್ಸು ಗೆದ್ದಿಲ್ಲ. ಕೇವಲ ಶಕ್ತಿಪ್ರದರ್ಶನ ತೋರಿದವರನ್ನು ಜನರು ಒಪ್ಪಿಕೊಳ್ಳಲು ಅನ್ನೋ ಉದಾಹರಣೆಗಳು ನಮ್ಮ ಮುಂದಿವೆ. ಸದ್ಯ ತಾಲಿಬಾನಿಗಳ ಮುಂದೆ ಸವಾಲುಗಳಿದ್ದು, ಅಲ್ಲಿಯ ಜನರನ್ನು ರಕ್ಷಣೆ ಮಾಡ್ತಾರೋ ಅಥವಾ ಮತ್ತೆ ಸಾಮ್ರಾಜ್ಯ ವಿಸ್ತರಣೆಯತ್ತ ಹೋಗ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

    ಹಲವು ಜನ ಆತಂಕದಲ್ಲಿದ್ದು, ಮನೆಯಿಂದ ಹೊರ ಬರಲಾರದ ಸ್ಥಿತಿಯಲ್ಲಿದ್ದಾರೆ. ದೇಶದ ಜನತೆಗೆ ತಾಲಿಬಾನಿಗಳ ನಂಬಿಕೆ ಇಲ್ಲ. ದೇಶದ ಮಹಿಳೆ, ಮಕ್ಕಳು, ಪುರುಷರು, ವೃದ್ಧರು ಸೇರಿದಂತೆ ಎಲ್ಲ ರನ್ನೂ ಒಗ್ಗೂಡಿಸಿಕೊಂಡು ತಾಲಿಬಾನಿಗಳು ಮುಂದೆ ಹೆಜ್ಜೆ ಇರಿಸಬೇಕಿದೆ. ನಾನು ನಿಮ್ಮ ಸೇವೆಯಲ್ಲಿರುತ್ತೇನೆ. ಅಫ್ಘಾನಿಸ್ತಾನ ಜಿಂದಾಬಾದ್.

    ವಿಮಾನ ಹತ್ತಲು ನೂಕು ನುಗ್ಗಲು:
    ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಜನರ ದೇಶ ತೊರೆಯಲು ಆರಂಭಿಸಿದ್ದಾರೆ. ಉಗ್ರರಿಗೆ ಎಷ್ಟು ಭಯಗೊಂಡಿದ್ದಾರೆ ಎಂದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಒಂದು ವಿಮಾನಕ್ಕೆ ಹತ್ತಲು ನೂರಾರು ಜನ ಮುಗಿಬಿದ್ದಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ವಿಮಾನ ಹತ್ತಲು ನಿಯಮಗಳು ಇರುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿಮಾನ ಹತ್ತಲು ಅನುಮತಿ ನೀಡಲಾಗುತ್ತದೆ. ಆದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಸ್ ಹತ್ತಲು ಪ್ರಯಾಣಿಕರು ಹೇಗೆ ಮುಗಿ ಬೀಳುತ್ತಾರೋ ಆ ರೀತಿಯಾಗಿ ಒಂದು ಏಣಿ ಮೂಲಕ ವಿಮಾನ ಹತ್ತಲು ಪ್ರಯತ್ನಿಸಿದ್ದಾರೆ.

    ಈ ನಾಲ್ವರಲ್ಲಿ ಯಾರು ಅಂತಿಮ?:
    ತಾಲಿಬಾನಿಗಳು ಹೇಳುವಂತೆ ಈಗಾಗಲೇ ಅಲ್ಲಿಯ ಪೊಲೀಸರು ಶರಣಾಗಿದ್ದು, ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸುತ್ತಿದ್ದಾರೆ. ಈ ನಡುವೆ ಅಫ್ಘಾನಿಸ್ತಾನದ ಮುಂದಿನ ಅಧ್ಯಕ್ಷ ಅಥವಾ ರಾಷ್ಟ್ರಪತಿ ಯಾರು ಅನ್ನೋ ಚರ್ಚೆಗಳು ಮುನ್ನಲೆಗೆ ಬಂದಿದ್ದು, ಮುಲ್ಲಾ ಬರಾದರ್ ಹೆಸರು ಕೇಳಿ ಬರುತ್ತಿದೆ. ಸದ್ಯ ಈ ಮುಲ್ಲಾ ಬರದಾರ್ ಕತಾರ್ ನಲ್ಲಿದ್ದಾನೆ. ಕತಾರ್ ನಲ್ಲಿರುವ ತಾಲಿಬಾನ್ ಕಚೇರಿಯ ರಾಜಕೀಯ ಮುಖ್ಯಸ್ಥನಾಗಿರೋದರಿಂದ, ಮುಲ್ಲಾ ಬರಾದರ್ ಹೆಸರು ಸ್ಪರ್ಧೆಯಲ್ಲಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆಯ ಸಹ ಸ್ಥಾಪಕನಾಗಿದ್ದಾನೆ. ಇದನ್ನೂ ಓದಿ: ಅಫ್ಘಾನಿಸ್ತಾನ ತೊರೆದ ಅಧ್ಯಕ್ಷ ಅಶ್ರಫ್ ಘನಿ, ಉಪಾಧ್ಯಕ್ಷ ಸಾಲೇಹ

    ಮುಲ್ಲಾ ಬರಾದರ್ ಹೆಸರಿನ ಜೊತೆ ಹೆಬತುಲ್ಲಾಹ ಅಖುಂದಜಾದ್, ಸಿರಾಜುದ್ದೀನ್ ಹಕ್ಕನಿ ಮತ್ತು ಮುಲ್ಲಾ ಯಾಕೂಬ್ ಸಹ ಗದ್ದುಗೆಯ ಸ್ಪರ್ಧೆಯಲ್ಲಿದ್ದಾರೆ. ಹೆಬತುಲ್ಲಾಹ ತಾಲಿಬಾನಿಗಳ ಸುಪ್ರೀಂ ನಾಯಕನಾದ್ರೆ, ಸಿರಾಜುದ್ದೀನ್ ಎರಡನೇ ಸ್ಥಾನದಲ್ಲಿರುವ ಲೀಡರ್. ಈತ ಹಕ್ಕಾನಿ ನೆಟ್‍ವರ್ಕ್ ಸಂಚಾಲಕನಾಗಿದ್ದು, ಹಲವು ಸಂಘಟನೆಗಳ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಇನ್ನೂ ಮುಲ್ಲಾ ಯಾಕೂಬ್ ತಾಲಿಬಾನ್ ಸ್ಥಾಪಕರಲ್ಲೊಬ್ಬರಾದ ಮುಲ್ಲಾ ಉಮರ್ ಪುತ್ರನಾಗಿದ್ದಾನೆ. ತಾಲಿಬಾನ್ ದ ಜಂಗಜೂ ಯುನಿಟಿ ಈತನ ಕೈ ವಶದಲ್ಲಿದೆ. ಇದನ್ನೂ ಓದಿ: ತಾಲಿಬಾನಿಗಳ ಅಟ್ಟಹಾಸ, ನರಕವಾದ ಅಫ್ಘಾನಿಸ್ತಾನ- ರಾಜ್ಯಪಾಲ, ಸರ್ಕಾರಿ ಅಧಿಕಾರಿಗಳು ಶರಣಾಗತಿ

  • ಅಫ್ಘಾನಿಸ್ತಾನ ತೊರೆದ ಅಧ್ಯಕ್ಷ ಅಶ್ರಫ್ ಘನಿ, ಉಪಾಧ್ಯಕ್ಷ ಸಾಲೇಹ

    ಅಫ್ಘಾನಿಸ್ತಾನ ತೊರೆದ ಅಧ್ಯಕ್ಷ ಅಶ್ರಫ್ ಘನಿ, ಉಪಾಧ್ಯಕ್ಷ ಸಾಲೇಹ

    – ಭಾರತ ತಲುಪಿದ ಅಫ್ಘಾನಿಸ್ತಾನದಲ್ಲಿದ 129 ಜನರು
    – ತಾಲಿಬಾನಿಗಳಿಗೆ ಶಸ್ತ್ರಾಸ್ತ್ರ ಹಸ್ತಾಂತರಿಸಿದ ಪೊಲೀಸರು
    – ದೆಹಲಿ ತಲುಪಿದ ಬಳಿಕ ಕಣ್ಣೀರಿಟ್ಟ ಮಹಿಳೆ

    ಕಾಬುಲ್: ಅಫ್ಘಾನಿಸ್ತಾನ ತಾಲಿಬಾಲಿಗಳ ಕೈ ವಶವಾಗಿದ್ದು, ಅಧ್ಯಕ್ಷ ಅಶ್ರಫ್ ಘನಿ ಮತ್ತು ಉಪಾಧ್ಯಕ್ಷ ಅಮಿರೂಲ್ಲಾಹ ಸಾಲೇಹ ದೇಶ ತೊರೆದಿದ್ದಾರೆ ಎಂದು ವರದಿಯಾಗಿದೆ. ಅಶ್ರಫ್ ಗನಿ ಅಮೆರಿಕಾದತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದ್ದು, ಸಾಲೇಹ ಅವರ ನಡೆ ಬಗ್ಗೆ ತಿಳಿದು ಬಂದಿಲ್ಲ. ಈಗಾಗಲೇ ಅಫ್ಘಾನಿಸ್ತಾನದ ರಾಷ್ಟ್ರಪತಿ ಭವನದ ವಶಕ್ಕೆ ಪಡೆದುಕೊಂಡಿರುವ ತಾಲಿಬಾನಿಗಳು ತಮ್ಮ ಧ್ವಜ ಹಾರಿಸಿದ್ದಾರೆ.

    ತಾಲಿಬಾನಿಗಳು ಹೇಳುವಂತೆ ಈಗಾಗಲೇ ಅಲ್ಲಿಯ ಪೊಲೀಸರು ಶರಣಾಗಿದ್ದು, ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸುತ್ತಿದ್ದಾರೆ. ಈ ನಡುವೆ ಅಫ್ಘಾನಿಸ್ತಾನದ ಮುಂದಿನ ಅಧ್ಯಕ್ಷ ಅಥವಾ ರಾಷ್ಟ್ರಪತಿ ಯಾರು ಅನ್ನೋ ಚರ್ಚೆಗಳು ಮುನ್ನಲೆಗೆ ಬಂದಿದ್ದು, ಮುಲ್ಲಾ ಬರಾದರ್ ಹೆಸರು ಕೇಳಿ ಬರುತ್ತಿದೆ.

    ಯಾರು ಈ ಮುಲ್ಲಾ ಬರಾದರ್?:
    ಸದ್ಯ ಈ ಮುಲ್ಲಾ ಬರದಾರ್ ಕತಾರ್ ನಲ್ಲಿದ್ದಾನೆ. ಕತಾರ್ ನಲ್ಲಿರುವ ತಾಲಿಬಾನ್ ಕಚೇರಿಯ ರಾಜಕೀಯ ಮುಖ್ಯಸ್ಥನಾಗಿರೋದರಿಂದ, ಮುಲ್ಲಾ ಬರಾದರ್ ಹೆಸರು ಸ್ಪರ್ಧೆಯಲ್ಲಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆಯ ಸಹ ಸ್ಥಾಪಕನಾಗಿದ್ದಾನೆ.

    ಮುಲ್ಲಾ ಬರಾದರ್ ಜೊತೆ ನಾಲ್ಕು ಹೆಸರು:
    ಮುಲ್ಲಾ ಬರಾದರ್ ಹೆಸರಿನ ಜೊತೆ ಹೆಬತುಲ್ಲಾಹ ಅಖುಂದಜಾದ್, ಸಿರಾಜುದ್ದೀನ್ ಹಕ್ಕನಿ ಮತ್ತು ಮುಲ್ಲಾ ಯಾಕೂಬ್ ಸಹ ಗದ್ದುಗೆಯ ಸ್ಪರ್ಧೆಯಲ್ಲಿದ್ದಾರೆ. ಹೆಬತುಲ್ಲಾಹ ತಾಲಿಬಾನಿಗಳ ಸುಪ್ರೀಂ ನಾಯಕನಾದ್ರೆ, ಸಿರಾಜುದ್ದೀನ್ ಎರಡನೇ ಸ್ಥಾನದಲ್ಲಿರುವ ಲೀಡರ್. ಈತ ಹಕ್ಕಾನಿ ನೆಟ್‍ವರ್ಕ್ ಸಂಚಾಲಕನಾಗಿದ್ದು, ಹಲವು ಸಂಘಟನೆಗಳ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಇನ್ನೂ ಮುಲ್ಲಾ ಯಾಕೂಬ್ ತಾಲಿಬಾನ್ ಸ್ಥಾಪಕರಲ್ಲೊಬ್ಬರಾದ ಮುಲ್ಲಾ ಉಮರ್ ಪುತ್ರನಾಗಿದ್ದಾನೆ. ತಾಲಿಬಾನ್ ದ ಜಂಗಜೂ ಯುನಿಟಿ ಈತನ ಕೈ ವಶದಲ್ಲಿದೆ.

    ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಭಾರತೀಯರನ್ನು ಏರ್ ಲಿಫ್ಟ್ ಮಾಡಲಾಗಿತ್ತು. ಇಂದು ರಾತ್ರಿ ಸುಮಾರು 10 ಗಂಟೆಗೆ 129 ಪ್ರಯಾಣಿಕರಿದ್ದ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಿದೆ. ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ದೇಶದ ಜನರನ್ನು ಏರ್ ಲಿಫ್ಟ್ ಮೂಲಕ ಕರೆಸಿಕೊಳ್ಳುತ್ತಿವೆ. ಇದನ್ನೂ ಓದಿ: ತಾಲಿಬಾನಿಗಳ ಅಟ್ಟಹಾಸ, ನರಕವಾದ ಅಫ್ಘಾನಿಸ್ತಾನ- ರಾಜ್ಯಪಾಲ, ಸರ್ಕಾರಿ ಅಧಿಕಾರಿಗಳು ಶರಣಾಗತಿ

    ಇದು ಅಶ್ರಫ್ ಘನಿ ದ್ರೋಹ:
    ಇಂದು ದೆಹಲಿ ತಲುಪಿರುವ ಅಫ್ಘಾನಿಸ್ತಾನದ ಮಾಜಿ ಸಂಸದ ಜಮೀಲ್ ಕರ್ಜಾಯಿ, ನಾವು ಕಾಬುಲ್ ತೊರೆದಾಗ ಇಡೀ ನಗರ ತಾಲಿಬಾನಿಗಳ ವಶದಲ್ಲಿತ್ತು. ಇಂದಿನ ಸ್ಥಿತಿಗೆ ಅಶ್ರಫ್ ಘನಿ ಕಾರಣ. ಆತ ಮಾಡಿದ ದ್ರೋಹವನ್ನು ಜನ ಮರೆಯಲ್ಲ. ಮುಂದೆ ಏನು ಆಗುತ್ತೆ ಅನ್ನೋದು ತಿಳಿಯುತ್ತಿಲ್ಲ. ತಾಲಿಬಾನಿಗಳು ಬದಲಾಗಿದ್ದಾರಾ ಅಥವಾ ಮೊದಲಿನಂತೆಯೇ ಇದ್ದಾರೆ ಅನ್ನೋದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಬೂಲ್ ವಶ – ತಾಲಿಬಾನ್‍ಗೆ ಶರಣಾದ ಅಫ್ಘನ್ ಸರ್ಕಾರ

    ಕಣ್ಣೀರಿಟ್ಟ ಮಹಿಳೆ:
    ದೆಹಲಿ ತಲುಪಿದ ಜನರು ಅಲ್ಲಿಯ ಕರಾಳತೆಯನ್ನು ಹೇಳುತ್ತಿದ್ದಾರೆ. ತಾಲಿಬಾನಿಗಳ ಕ್ರೌರ್ಯ ಹೇಳುತ್ತಿರುವ ಜನರು ಇನ್ನೂ ಆತಂಕದಲ್ಲಿರೋದು ಕಾಣಿಸುತ್ತಿದೆ. ಮಾಧ್ಯಮಗಳ ಮುಂದೆ ಬಂದ ಓರ್ವ ಮಹಿಳೆ, ಅಲ್ಲಿ ನಮ್ಮ ಮೇಲಿನ ದೌರ್ಜನ್ಯ ಯಾರೂ ಪ್ರಶ್ನೆ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸಂಪೂರ್ಣ ಸ್ವಾತಂತ್ರದ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂದು ಕಣ್ಣೀರಿಟ್ಟರು.