Tag: ಅವಿನಾಶ್

  • ರಾಜ್ ಭಾರದ್ವಾಜ್ ಕನಸಿನ `ಹಗ್ಗ’ ಈ ವಾರ ತೆರೆಗೆ!

    ರಾಜ್ ಭಾರದ್ವಾಜ್ ಕನಸಿನ `ಹಗ್ಗ’ ಈ ವಾರ ತೆರೆಗೆ!

    ನ್ನಡ ಚಿತ್ರರಂಗದಲ್ಲೀಗ (Sandalwood) ಮತ್ತೊಂದು ಸುತ್ತಿನ ಹೊಸ ಗಾಳಿ ಬೀಸಲಾರಂಭಿಸಿದೆ. ಹೊಸ ಬಗೆಯ, ಭಿನ್ನ ಕಥನಗಳೆಲ್ಲ ದೃಶ್ಯರೂಪ ಪಡೆದುಕೊಳ್ಳುತ್ತಿವೆ. ಈ ಸಾಲಿಗೆ ಸೇರ್ಪಡೆಗೊಳ್ಳುವ ಲಕ್ಷಣಗಳನ್ನು ಹೊಂದಿರುವ ಚಿತ್ರ `ಹಗ್ಗ’ (Hagga Movie) . ಈಗಾಗಲೇ ಸಾಕಷ್ಟು ಕುತೂಹಲ ಹುಟ್ಟು ಹಾಕಿ, ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಈ ಚಿತ್ರ ಇದೇ ಶುಕ್ರವಾರ ಸೆ.20ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

    ಅಷ್ಟಕ್ಕೂ ಆರಂಭಿಕವಾಗಿ ಈ ಚಿತ್ರ ಸೆಳೆದಿದ್ದದ್ದು ಶೀರ್ಷಿಕೆಯ ಮೂಲಕ. ಆ ನಂತರದಲ್ಲಿ ಟೀಸರ್, ಟ್ರೈಲರ್ ಬಿಡುಗಡೆಗೊಂಡಾಗ ಪ್ರೇಕ್ಷಕರೆಲ್ಲ ತಾನೇ ತಾನಾಗಿ ಇದರತ್ತ ಆಕರ್ಷಿತರಾಗಿದ್ದರು. ಇದೀಗ ಹಗ್ಗದ ಸುತ್ತ ಗಾಢ ನಿರೀಕ್ಷೆ ಮೂಡಿಕೊಂಡಿದೆ. ಒಂದು ರಾತ್ರಿ ಮಗುಚಿಕೊಂಡೇಟಿಗೆ ಹಗ್ಗ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಲಿದೆ. ವಸಂತ ಸಿನಿ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ರಾಜ್ ಭಾರದ್ವಾಜ್ (Raj Bhardwaj) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅವಿನಾಶ್ (Avinash N) ನಿರ್ದೇಶನ ಹಗ್ಗ ಚಿತ್ರದಲ್ಲಿ ಅನು ಪ್ರಭಾಕರ್ (Anu Prabhakar) ವಿಭಿನ್ನ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈಗಾಗಲೇ ಅವರ ಪಾತ್ರದ ಸುತ್ತ ಒಂದಷ್ಟು ಚರ್ಚೆಗಳು ನಡೆಯುತ್ತಿವೆ. ಅಂಥಾದ್ದೊಂದು ವಿಶೇಷವಾದ ಲುಕ್ಕಿನ ಝಲಕ್ಕುಗಳು ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇನ್ನುಳಿದಂತೆ ವೇಣು ಮತ್ತು ಹರ್ಷಿಕಾ ಪುಣಚ್ಚ ಕೂಡಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಧ್ರುವ ಸರ್ಜಾ ಪುತ್ರ

    ಹಗ್ಗ ಎಂಬುದು ನಿರ್ಮಾಪಕರಾದ ರಾಜ್ ಭಾರದ್ವಾಜ್ ಕನಸಿನ ಕೂಸು. ಅತೀವ ಸಿನಿಮಾ ವ್ಯಾಮೋಹಿಯಾದ ರಾಜ್ ಭಾರದ್ವಾಜ್ ಇಪ್ಪತ್ತು ವರ್ಷಗಳ ಹಿಂದೆಯೇ ಏನಾದರೊಂದು ಸಾಧಿಸಬೇಕೆಂಬ ಉತ್ಸಾಹದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಒಂದಷ್ಟು ಸಾಹಸಗಳ ಬಳಿಕವೂ ಅದೃಷ್ಟ ಕೈ ಹಿಡಿದಿರಲಿಲ್ಲ. ಎರಡ್ಮೂರು ವರ್ಷ ಪ್ರಯತ್ನಿಸಿ ಕಡೆಗೂ ರಾಜ್ ಬ್ಯುಸಿನೆಸ್‌ನತ್ತ ವಾಲಿಕೊಂಡಿದ್ದರು. ಇವತ್ತಿಗೆ ಇಡೀ ಕರ್ನಾಟಕದ ತುಂಬಾ ನೆಟ್ ವರ್ಕ್ ಹೊಂದಿರುವ ಜಿಮ್ ಸಲಕರಣೆ ಪೂರೈಸುವ ಉದ್ಯಮವನ್ನು ರಾಜ್ ಭಾರದ್ವಾಜ್ ನಡೆಸುತ್ತಿದ್ದಾರೆ. ಇದನ್ನೂ ಓದಿ: ‘ವೆಟ್ಟೈಯಾನ್‌’ಗೆ ಪೈಪೋಟಿ ಕೊಡಲ್ಲ- ‘ಕಂಗುವ’ ಪೋಸ್ಟ್‌ಪೋನ್..!

    ಸಾಮಾನ್ಯವಾಗಿ ನಿರ್ಮಾಪಕರಾದವರಿಗೆ ಕ್ರಿಯೇಟಿವ್ ಸೆಕ್ಷನ್ನಿನ ಗಂಧ ಗಾಳಿ ಇರೋದಿಲ್ಲ ಎಂಬ ಮಾತಿದೆ. ಆದರೆ, ರಾಜ್ ಭಾರದ್ವಾಜ್ ಅದಕ್ಕೆ ಅಪವಾದದಂತಿದ್ದಾರೆ. ಈಗೊಂದಷ್ಟು ವರ್ಷಗಳ ಹಿಂದೆಯೇ ಹಗ್ಗದ ಒಂದೆಳೆ ಅವರೊಳಗೆ ಊಟೆಯೊಡೆಯಲಾರಂಭಿಸಿತ್ತು. ಅದನ್ನು ವರ್ಷಗಟ್ಟಲೆ ಚೆಂದಗೊಳಿಸಿ, ತಯಾರಿ ನಡೆಸಿದ್ದರ ಫಲವಾಗಿಯೇ ಹಗ್ಗ ದೃಶ್ಯ ರೂಪ ಧರಿಸಿದೆ. ಈ ಚಿತ್ರಕ್ಕೆ ಕಥೆ ಬರೆದಿರೋದಲ್ಲದೇ ಅವರೇ ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆಯಲ್ಲಿಯೂ ಭಾಗಿಯಾಗಿದ್ದಾರೆ. ಸಿನಿಟೆಕ್ ಸೂರಿ ಛಾಯಾಗ್ರಹಣ, ಮ್ಯಾಥ್ಯೂ ಮನು ಸಂಗೀತ ನಿರ್ದೇಶನ, ವಿಕ್ರಮ್ ಮೋರ್, ಡಿಫರೆಂಟ್ ಡ್ಯಾನಿ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮತ್ತು ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಚ (Harshika Poonacha), ತಬಲಾ ನಾಣಿ (Tabla Nani), ಅವಿನಾಶ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯಾ ಹೆಗ್ಡೆ, ಮೈಕೋ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಇದನ್ನೂ ಓದಿ: ಬಳೆ ಶಾಸ್ತ್ರ ಮಾಡಿಕೊಂಡ ಸೋನಲ್ ಮೊಂಥೆರೋ

  • ಹಿರಿಯ ನಟ ಅವಿನಾಶ್ ಗೆ ಸಿಗ್ತು ಪಶ್ಚಿಮ ಘಟ್ಟದ ಸ್ಥಳೀಯ ಎಂಎಲ್ಎ ಪಟ್ಟ

    ಹಿರಿಯ ನಟ ಅವಿನಾಶ್ ಗೆ ಸಿಗ್ತು ಪಶ್ಚಿಮ ಘಟ್ಟದ ಸ್ಥಳೀಯ ಎಂಎಲ್ಎ ಪಟ್ಟ

    ಹೆಡ್ಡಿಂಗ್ ನೋಡಿದ್ಮೇಲೆ ಹಿರಿಯ ನಟ ಅವಿನಾಶ್ (Avinash) ಯಾವಾಗ ಖಾದಿ ತೊಟ್ಟು ಕಣಕ್ಕಿಳಿದಿದ್ದರು? ಯಾರ ವಿರುದ್ದ ಸ್ಪರ್ಧೆ ಮಾಡಿದ್ದರು? ನಮಗೆ ಗೊತ್ತಿಲ್ಲದೇ ಅದ್ಯಾವಾಗ ಪಶ್ವಿಮ ಘಟ್ಟದ ಸ್ಥಳೀಯ ಎಂಎಲ್ಎ (MLA) ಸ್ಥಾನಕ್ಕೇರಿದರು ? ಹೀಗೊಂದಿಷ್ಟು ಕುತೂಹಲದ ಪ್ರಶ್ನೆಗಳು ಒಮ್ಮೆಲೆ ದಾಂಗುಡಿ ಇಡುವುದು ಸಹಜ. ಆ ಪ್ರಶ್ನೆಗೆ ಉತ್ತರಿಸಬೇಕು ಅಂದರೆ ಅಸಲಿಯತ್ತು ಹರವಿಡಬೇಕು. ರಿಯಲ್ ಅಲ್ಲ ರೀಲ್ ಎನ್ನುವ ಸತ್ಯ ಒಪ್ಪಿಕೊಳ್ಳಬೇಕು

    ರೀಲ್ ಲೈಫ್ ನಲ್ಲಿ ಅಂದರೆ ಸಿನಿಮಾಗಳಲ್ಲಿ ಸಾಕಷ್ಟು ಭಾರಿ ಎಂಎಲ್ಎ ಆಗಿದ್ದಾರೆ. ಸದ್ಯ ಸಂದೇಶ್ ಶೆಟ್ಟಿ ಆಜ್ರಿ (Sandesh Shetty Azri) ನಿರ್ದೇಶಿಸಿರುವ ಇನಾಮ್ದಾರ್ (Inamdar) ಚಿತ್ರದಲ್ಲಿ   ಪಶ್ಚಿಮ ಘಟ್ಟದ ಸ್ಥಳೀಯ ಎಂಎಲ್ಎ ಸುಕುಮಾರ್ ಪಾತ್ರ ನಿರ್ವಹಿಸಿದ್ದಾರೆ.ಇದೊಂದು ಕ್ಲೀನ್ ಹ್ಯಾಂಡ್ ಎಂಎಲ್ಎ ಪಾತ್ರವಾಗಿದ್ದು ಖುದ್ದು ಅವಿನಾಶ್ ಅವರೇ ತಮ್ಮ ರೋಲ್ ಬಗ್ಗೆ ಎಕ್ಸೈಟ್ ಆಗಿದ್ದಾರೆ.  ಅಭಯಾರಣ್ಯದಲ್ಲಿ  ವಾಮಮಾರ್ಗದಲ್ಲಿ ನಡೆಯುವ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತಹ ಕ್ಯಾರೆಕ್ಟರ್ ಅವ್ರದ್ದು ಎಂದು ಹೇಳುವ ನಿರ್ದೇಶಕರು, ಥ್ರಿಲ್ಲರ್ ಮಂಜು ಸರ್ ಹಾಗೂ ಅವಿನಾಶ್ ಸರ್ ಮುಖಾಮುಖಿಯಾಗುವ ಸೀಕ್ವೆನ್ಸ್ ಹಾಗೂ ಡೈಲಾಗ್ಸ್ ಪ್ರೇಕ್ಷಕರಿಗೆ ವಾವ್ ಫೀಲ್ ಕೊಡುತ್ತೆ ಎಂದಿದ್ದಾರೆ.

    ಡಾ. ರಾಜ್ ಕುಮಾರ್, ರಜನಿಕಾಂತ್, ವಿಷ್ಣುವರ್ಧನ್ ರಂತಹ ಲೆಜೆಂಡರಿ ಆ್ಯಕ್ಟರ್ ಗಳಿಂದ ಹಿಡಿದು ಈಗೀನ ಬಡ್ಡಿಂಗ್ ಆರ್ಟಿಸ್ಟ್ ಗಳ ತನಕ ಎಲ್ಲರ ಸಿನಿಮಾಗಳಲ್ಲೂ ನಟ ಅವಿನಾಶ್ ಅವರು ಮೇಜರ್ ರೋಲ್ ಪ್ಲೇ ಮಾಡುತ್ತಾ ಬರುತ್ತಿದ್ದಾರೆ. ನಾನಾ ತರಹದ ಪಾತ್ರಗಳಿಗೆ ಜೀವತುಂಬಿ ವರ್ಸಟೈಲ್ ಆ್ಯಕ್ಟರ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.  3 ದಶಕಗಳಿಂದ ಮಾಯಾಲೋಕದಲ್ಲಿ ಸಕ್ರಿಯರಾಗಿರೋ ಮೈಸೂರಿನ ಹೀರೋ, ಇವತ್ತಿಗೂ ಡಿಮ್ಯಾಂಡ್ ಕಳೆದುಕೊಳ್ಳದೇ ಪೋಷಕ ನಟನಾಗಿ ಬ್ಯುಸಿಯಾಗಿದ್ದಾರೆ. ಕನ್ನಡ ,ತೆಲುಗು, ತಮಿಳು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಈಗ ಇನಾಮ್ದಾರ್ ಹೆಸರಿನ ಸಿನಿಮಾದಲ್ಲಿ ಎಂಎಲ್ಎ ಸುಕುಮಾರ್ ಆಗಿ ನಿಮ್ಮೆಲ್ಲರ ಮುಂದೆ ಬರಲು ರೆಡಿಯಾಗಿದ್ದಾರೆ

    ಇನಾಮ್ದಾರ್ ಪಶ್ಚಿಮ ಘಟ್ಟ ಹಾಗೂ ಬಯಲು ಸೀಮೆಯ ಎರಡು ಜನಾಂಗದ ನಡುವಿನ ವರ್ಣ ಸಂಘರ್ಷದ ಕಥೆಯುಳ್ಳ ಸಿನಿಮಾ. ಬೆಳಗಾವಿ, ಕುಂದಾಪುರ, ಚಿಕ್ಕಮಗಳೂರು ಒಳಗೊಂಡಂತೆ ಬಹುತೇಕ ಚಿತ್ರೀಕರಣ ನಡೆದಿರುವುದು ಕಾಡಲ್ಲೇ. ಕರಡಿ ಗುಡ್ಡ,  ನಾಗನಕಲ್ಲು ಬರೆ, ಮುದೂರು, ಬೆಳಕಲ್ಲು ಆಸುಪಾಸಿಲ್ಲಿ ಶೂಟಿಂಗ್ ಮಾಡಿದ್ದು ಚಿತ್ರತಂಡಕ್ಕೆ ಸವಾಲ್ ಆಗಿತ್ತು. ಆದರೆ, ಎಲ್ಲವೂ ಸುಸೂತ್ರವಾಗಿ ಸಾಗೋದಕ್ಕೆ ಹಿರಿಯ ಕಲಾವಿದರಾದ ಅವಿನಾಶ್ ಕೂಡ ಸಾಥ್ ಕೊಟ್ಟರು. ಹೊಸ ತಂಡವಾದರೂ ಸಿನಿಮಾ ಮೇಲಿರುವ ಬದ್ದತೆ ಹಾಗೂ ಪ್ಯಾಷನ್ ನೋಡಿ ಇನಾಮ್ದಾರ್ ಗೆ ಬೆಂಬಲವಾಗಿ ನಿಂತರು. ಫೈನಲೀ ಶೂಟಿಂಗ್ ಕಂಪ್ಲೀಟ್ ಆಗಿದೆ, ಸಿನಿಮಾ ಅದ್ಭುತವಾಗಿ ಮೂಡಿಬಂದಿದ್ದು ಇದೇ ಅಕ್ಟೋಬರ್ 27ರಂದು ತೆರೆಗೆ ಬರಲು ಸಜ್ಜಾಗಿದೆ. ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣದ ಈ ಸಿನಿಮಾದಲ್ಲಿ ವರ್ಸಟೈಲ್ ಆ್ಯಕ್ಟರ್ ಅವಿನಾಶ್ ಜೊತೆಗೆ ಶರತ್ ಲೋಹಿತಾಶ್ವ, ಥ್ರಿಲ್ಲರ್ ಮಂಜು, ಪ್ರಮೋದ್ ಶೆಟ್ಟಿ, ಎಂಕೆ ಮಠ ಸೇರಿದಂತೆ ಕಿರಿಯ ಪ್ರತಿಭಾನ್ವಿತ ಕಲಾವಿದರ ಸಮಾಗಮವೂ ಆಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada: ವಾಪಸ್ಸು ಮನೆಗೆ ಹೊರಟ ಬಿಗ್ ಬಾಸ್ ಸ್ಪರ್ಧಿ ಸುರಸುಂದರ ಅವಿನಾಶ್

    Bigg Boss Kannada: ವಾಪಸ್ಸು ಮನೆಗೆ ಹೊರಟ ಬಿಗ್ ಬಾಸ್ ಸ್ಪರ್ಧಿ ಸುರಸುಂದರ ಅವಿನಾಶ್

    ಬಿಗ್ ಬಾಸ್ ನಿಯಮದಲ್ಲಿ ಈ ಬಾರಿ ಕೆಲವು ಬದಲಾವಣೆಗಳು ಆಗಿವೆ. ಸ್ಪರ್ಧಿಗಳಿಗೆ ಮೊದಲು ವೇದಿಕೆಯ ಮೇಲೆ ಕರೆಯಲಾಗುತ್ತದೆ. ಆನಂತರ ಅವರನ್ನು ಸುದೀಪ್ (Sudeep) ಮಾತನಾಡಿಸುತ್ತಾರೆ. ಸ್ಪರ್ಧಿಗಳ ಪರಿಚಯದ ವಿಡಿಯೋ ಕೂಡ ಪ್ರಸಾರವಾಗುತ್ತದೆ. ಆನಂತರ ತಾವು ಯಾಕೆ ಮನೆಗೆ ಹೋಗಬೇಕು ಎಂದು ಸ್ಪರ್ಧಿಗಳು ಹೇಳಬೇಕು. ಸ್ಪರ್ಧಿಗಳ ಮಾತು ಕೇಳಿದ ಆಡಿಯನ್ಸ್ ವೋಟು ಹಾಕುತ್ತಾರೆ. ಅದರಲ್ಲಿ ಮೂರು ಹಂತಗಳಲ್ಲಿ ಶೇಕಡವಾರು ಫಲಿತಾಂಶ ಪ್ರಕಟವಾಗುತ್ತದೆ. 40ಕ್ಕಿಂತ ಕಡಿಮೆ ವೋಟ ಬಂದವರನ್ನು ಮನೆಗೆ ಕಳುಹಿಸಲಾಗುತ್ತದೆ. ಈ ಬಾರಿ ವೇದಿಕೆಯವರೆಗೂ ಬಂದಿದ್ದ ಯುಟ್ಯೂಬರ್ ಸುರಸುಂದರ ಅವಿನಾಶ್ ಕಡಿಮೆ ಅಂಕ ತಗೆದುಕೊಂಡು ಮನೆಗೆ ವಾಪಸ್ಸಾದರು.

    ಜ್ಯೂನಿಯರ್ ಆರ್ಟಿಸ್ ಆಗಿ ನೂರಾರು ಸಿನಿಮಾಗಳನ್ನು ಮಾಡಿದ್ದ ಅವಿನಾಶ್ (Avinash), ನಂತರ ತಮ್ಮದೇ ಆದ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ಶುರು ಮಾಡಿದ್ದರು. ಈ ಮೂಲಕ ಮನರಂಜಿಸುವ ಪ್ರಯತ್ನ ಮಾಡುತ್ತಿದ್ದರು. ಆದರೆ, ವೋಟು ಪಡೆದುಕೊಳ್ಳುವಲ್ಲಿ ವಿಫಲರಾಗಿ, ಬಿಗ್ ಬಾಸ್ ಮನೆಗೆ ಹೋಗುವ ಬದಲು ತಮ್ಮ ಸ್ವಂತ ಮನೆಗೆ ವಾಪಸ್ಸಾಗಿದ್ದಾರೆ.

    5ನೇ ಸ್ಪರ್ಧಿ

    ಕಾಮಿಡಿ ಕಲಾವಿದ, ತುಕಾಲಿ ಸಂತೋಷ್ ಖ್ಯಾತಿಯ ಸಂತೋಷ್ ಅತೀ ಹೆಚ್ಚು ವೋಟ್ ಪಡೆಯುವ ಮೂಲಕ ಬಿಗ್ ಬಾಸ್ ಮನೆ 5ನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದರು. ಹೆಂಡತಿಯೊಂದಿಗೆ ವೇದಿಕೆಯ ಮೇಲೆ ಬಂದ ಸಂತೋಷ್ ಸಾಕಷ್ಟು ಮನರಂಜನೆಯನ್ನು ಬಿಗ್ ಬಾಸ್ ವೇದಿಕೆಯ ಮೇಲೆ ಕೊಟ್ಟರು. ಗಂಡ ಹೆಂಡತಿ ಮಾತುಕತೆ ವೇದಿಕೆಯ ಮೇಲೆ ಸಖತ್ ಮನರಂಜನೆಯನ್ನೇ ನೀಡಿತು.

    ಈವರೆಗೂ ಬಿಗ್ ಬಾಸ್ ಮನೆಯಲ್ಲಿ ನಾಲ್ವರು ಸ್ಪರ್ಧಿಗಳು ಇದ್ದಾರೆ. ಅವರೆಲ್ಲರಿಗೂ ಅತೀ ಹೆಚ್ಚು ಅಂದರೆ, ಶೇಕಡಾ 93ರಷ್ಟು ವೋಟ್ ಪಡೆದು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದರು ಸಂತೋಷ್. ಕಾಮಿಡಿ ಶೋಗಳು ಮೂಲಕ ಸಂತೋಷ್ ಮನೆಮಾತಾದವರು.

    ನಾಲ್ಕನೇ ಸ್ಪರ್ಧಿ

    ಹರಹರ ಮಹಾದೇವ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ಮಾಡಿರುವ ಹಾಗೂ ಅನೇಕ ಸಿನಿಮಾಗಳಲ್ಲಿ ನಟಿಸಿರುವ ವಿನಯ್ ಗೌಡ (Vinay Gowda), 4ನೇ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಬಯಸದೇ ಬಳಿ ಬಂದೆ ಹಾಡಿನ ಮೂಲಕ ವೇದಿಕೆಗೆ ಬಂದ ವಿನಯ್ ಗೌಡ, ತಮ್ಮ ತಂದೆಯೊಂದಿಗಿನ ನೋವಿನ ಸಂಗತಿಯನ್ನು ಹಂಚಿಕೊಂಡರು.

    14 ವರ್ಷದ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಹೋಗುತ್ತಿರುವುದಕ್ಕೆ ಕ್ಷಣ ಭಾವುಕರಾದರು. ಪತ್ನಿ ಮತ್ತು ಮಗ ಕೂಡ ಈ ಕ್ಷಣದಲ್ಲಿ ಭಾವುಕತೆಯಿಂದಲೇ ವಿನಯ್ ಗೌಡ ಅವರನ್ನು ದೊಡ್ಮನೆಗೆ ಕಳುಹಿಸಿ ಕೊಟ್ಟರು. ವಿನಯ್ ಗೌಡ ಈವರೆಗೂ ಮನೆಗೆ ಹೋದವರ ಪೈಕಿ ಅತೀ ಹೆಚ್ಚು ಅಂದರೆ, ಶೇಕಡಾ 84ರಷ್ಟು ವೋಟು ಪಡೆದುಕೊಂಡು ಆಯ್ಕೆಯಾದರು.

    ಮೂರನೇ ಸ್ಪರ್ಧಿ

    ಬಿಗ್ ಬಾಸ್ ಮನೆಗೆ ಮೂರನೇ ಸ್ಪರ್ಧಿಯಾಗಿ ಆಯ್ಕೆಯಾದವರು ರ‍್ಯಾಪರ್‌ ಇಶಾನಿ (Ishani). ಮೈಸೂರು ಮೂಲದ ಈ ಹುಡುಗಿ ಹುಟ್ಟಿದ್ದು ದುಬೈನಲ್ಲಿ ಆನಂತರ ಲಾಸ್ ಏಂಜಲಿಸ್‌ನಲ್ಲಿ ಬೆಳೆದವರು. ರ‍್ಯಾಪರ್‌ ಆಗಿ ಅನೇಕ ಗೀತೆಗಳನ್ನು ಇವರು ಹಾಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಕಳುಹಿಸಲು ತಂದೆ ತಾಯಿ ಇಬ್ಬರೂ ಬಂದಿದ್ದರು. ಮನೆಗೆ ಕಾಲಿಡುವಾಗ ಕಣ್ಣೀರಿಡುತ್ತಲೇ ಇಶಾನಿ ಮನೆ ಪ್ರವೇಶ ಮಾಡಿದರು.

     

    ಇಶಾನಿ ಮತ್ತು ಮಂಜು ಪಾವಗಡ ವೇದಿಕೆಯ ಮೇಲೆ ಒಂದಷ್ಟು ಹೊತ್ತು ರಂಜಿಸಿದರು. ನಾಲ್ವರು ನಿರ್ಣಾಯಕರು ಇಶಾನಿಗೆ ಶೇಕಡಾ 83 ರಷ್ಟು ವೋಟು ಹಾಕುವ ಮೂಲಕ ಇಶಾನಿಯನ್ನು ಆಯ್ಕೆ ಮಾಡಿದರು. ತಂದೆ ತಾಯಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಇಶಾನಿ ಮನೆ ಪ್ರವೇಶ ಮಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶತಮಾನಕೊಬ್ಬ ಹಾಸ್ಯಚಕ್ರವರ್ತಿ: ವರ್ಷಪೂರ್ತಿ ನರಸಿಂಹರಾಜು ಶತಮಾನೋತ್ಸವ

    ಶತಮಾನಕೊಬ್ಬ ಹಾಸ್ಯಚಕ್ರವರ್ತಿ: ವರ್ಷಪೂರ್ತಿ ನರಸಿಂಹರಾಜು ಶತಮಾನೋತ್ಸವ

    ಜುಲೈ 24 ಕರುನಾಡ ಕಂಡ ಹೆಮ್ಮೆಯ ಹಾಸ್ಯನಟ ಟಿ.ಆರ್ ನರಸಿಂಹರಾಜು (T.R. Narasimharaju) ಅವರ ಹುಟ್ಟುಹಬ್ಬ. ಈ ಬಾರಿ ವಿಶೇಷವೆಂದರೆ, ಇದು ನರಸಿಂಹರಾಜು ಅವರ ನೂರನೇ ಹುಟ್ಟುಹಬ್ಬ. ಈ ಸಂಭ್ರಮವನ್ನು  ‘ಶತಮಾನಕೊಬ್ಬ ಹಾಸ್ಯಚಕ್ರವರ್ತಿಯ ಶತಮಾನೋತ್ಸವ’ (Birth Centenary) ಎಂಬ ಹೆಸರಿನಿಂದ ವಿವಿಧ ಕಾರ್ಯಕ್ರಮಗಳ ಜೊತೆಗೆ ವರ್ಷಪೂರ್ತಿ ಆಚರಿಸಲು ನರಸಿಂಹರಾಜು ಅವರ ಕುಟುಂಬದವರು ಹಾಗೂ ಅಭಿಮಾನಿಗಳು ನಿಶ್ಚಯಿಸಿದ್ದಾರೆ.

    ನರಸಿಂಹರಾಜು ಅವರ ಹುಟ್ಟುಹಬ್ಬದಂದೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ ಆರ್ ಕೆ ವಿಶ್ವನಾಥ್, ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಎನ್ ಸುಬ್ರಹ್ಮಣ್ಯ ಹಾಗೂ ಹಿರಿಯನಟ ಬೆಂಗಳೂರು ನಾಗೇಶ್ ಸೇರಿದಂತೆ ವಿವಿಧ ಗಣ್ಯರು ಜನ್ಮ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು ಹಾಗೂ ನರಸಿಂಹರಾಜು ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು.

    ನರಸಿಂಹರಾಜು ಅವರ ಶತಮಾನೋತ್ಸವ ಸಮಾರಂಭ ಬರೀ ಕುಟುಂಬದವರಲ್ಲ. ಎಲ್ಲರೂ ಸೇರಿ ಮಾಡಬೇಕಾದ ಕಾರ್ಯಕ್ರಮ ಎಂದು ಆಗಮಿಸಿದ್ದ ಎಲ್ಲಾ ಗಣ್ಯರು ತಿಳಿಸಿದರು. ನರಸಿಂಹರಾಜು ಅವರ ಮೊಮ್ಮಕ್ಕಳಾದ ಅರವಿಂದ್ ಹಾಗೂ ಅವಿನಾಶ್ ಸಹ ಉಪಸ್ಥಿತರಿದ್ದರು. ನರಸಿಂಹರಾಜು ಅವರ ನೂರನೇ ಹುಟ್ಟುಹಬ್ಬವನ್ನು ‘ಶತಮಾನಕ್ಕೊಬ್ಬ ಹಾಸ್ಯಚಕ್ರವರ್ತಿಯ ಶತಮಾನೋತ್ಸವ’ ಎಂಬ ಹೆಸರಿನಿಂದ ವರ್ಷಪೂರ್ತಿ ಆಚರಿಸಲಾಗುವುದು. ನರಸಿಂಹರಾಜು ಅವರ ಹೆಸರಿನಲ್ಲಿ ಮೂರು ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದೆ. ದೊಡ್ಡಮಟ್ಟದ ಸಮಾರಂಭ ಆಯೋಜಿಸಿ ಈ ಪ್ರಶಸ್ತಿಗಳನ್ನು ನೀಡಲಾಗುವುದು.

    ಮೊದಲು ನರಸಿಂಹರಾಜು ಅವರನ್ನು ಯುವಜನತೆಗೆ  ತಲುಪಿಸುವ ಪ್ರಯತ್ನ. ಹಾಗಾಗಿ ಹನ್ನೆರಡು ಜನರ ತಂಡ ಎರಡು ಟ್ರಕ್ ಗಳ ಮೂಲಕ ಕರ್ನಾಟಕದ ಮೂವತ್ತೆರಡು ಜಿಲ್ಲೆಗಳ ಆಯ್ದ ಕಾಲೇಜುಗಳಿಗೆ ಭೇಟಿ ನೀಡುತ್ತಾರೆ. ಆ ಟ್ರಕ್ ನಲ್ಲಿ ಎಲ್ ಇ ಡಿ ಅಳವಡಿಸಿ, ಆ ಮೂಲಕ ವಿದ್ಯಾರ್ಥಿಗಳಿಗೆ ನರಸಿಂಹರಾಜು ಅವರ ಬಗೆಗಿನ ತುಣುಕುಗಳನ್ನು ತೋರಿಸಲಾಗುತ್ತದೆ. ಆನಂತರ ನರಸಿಂಹರಾಜು ಅವರ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸಹ ಕೇಳಲಾಗುತ್ತದೆ.

    ಆನಂತರ ಪ್ಯಾನ್ ಇಂಡಿಯಾ ಕಿರುಚಿತ್ರೋತ್ಸವ (ಹಾಸ್ಯದ ಕುರಿತು) ಆಯೋಜಿಸಲಾಗುವುದು.  ಕರ್ನಾಟಕದಾದ್ಯಂತ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಯನಾಟಕಗಳನ್ನು (ನರಸಿಂಹರಾಜು ಅವರ ಅಭಿನಯದ ನಾಟಕಗಳು ಮಾತ್ರ) ಆಯೋಜಿಸಲಾಗುವುದು. ಕರ್ನಾಟಕದ ಸುಮಾರು ಎಂಟು ಜಲ್ಲೆಗಳಲ್ಲಿ ಸಕ್ರಿಯವಾಗಿರುವ  ನಾಟಕ ಕಂಪನಿಗಳಿವೆ.  ಆ ಪ್ರಸಿದ್ದ ನಾಟಕ ಕಂಪನಿಗಳ ಮೂಲಕ ನರಸಿಂಹರಾಜು ಅವರ ಜನಪ್ರಿಯ ನಾಟಕಗಳನ್ನು ಅಹೋರಾತ್ರಿ ಆಯೋಜಿಸುವ ಯೋಜನೆ ಇದೆ. ಆಗಸ್ಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೃಹತ್ ಸಮಾರಂಭ ನಡೆಸುವ ಸಿದ್ದತೆ ಕೂಡ ನಡೆಯುತ್ತಿದೆ.

     

    ಈ ಎಲ್ಲಾ ಕಾರ್ಯಕ್ರಮಗಳು ಮುಂದಿನ ಆರು ತಿಂಗಳಲ್ಲಿ ಮೊದಲನೇ ಭಾಗಿ ನಡೆಯಲಿದೆ. ಮುಂದಿನ ಆರು ತಿಂಗಳ ಕಾರ್ಯಕ್ರಮಗಳನ್ನು ಮುಂಬರುವ ದಿನಗಳಲ್ಲಿ ತಿಳಿಸುವುದಾಗಿ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ (Avinash) ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತಿ ಜೊತೆ ವಿದೇಶಕ್ಕೆ ಹಾರಿದ ‘ಬಿಗ್ ಬಾಸ್’ ಬೆಡಗಿ ಅಕ್ಷತಾ ಕುಕಿ

    ಪತಿ ಜೊತೆ ವಿದೇಶಕ್ಕೆ ಹಾರಿದ ‘ಬಿಗ್ ಬಾಸ್’ ಬೆಡಗಿ ಅಕ್ಷತಾ ಕುಕಿ

    ಬಿಗ್ ಬಾಸ್ (Bigg Boss Kannada) ಬೆಡಗಿ ಅಕ್ಷತಾ ಕುಕಿ (Akshatha Kuki) ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಇದೀಗ ಪತಿ ಜೊತೆ ಅಕ್ಷತಾ ಕುಕಿ ವಿದೇಶಕ್ಕೆ ಹಾರಿದ್ದಾರೆ.

    ಈ ವರ್ಷ ಮಾರ್ಚ್ ಅಂತ್ಯದಲ್ಲಿ ಅಕ್ಷತಾ ಹುಟ್ಟೂರು ಬೆಳಗಾವಿಯಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಅಕ್ಷತಾ- ಅವಿನಾಶ್ ಅರೆಂಜ್ ಮ್ಯಾರೇಜ್ ಆಗಿದ್ದರು. ಮದುವೆ ಕೂಡ ಅದ್ದೂರಿಯಾಗಿ ನಡೆದಿತ್ತು.

    ಇದೀಗ ಅಕ್ಷತಾ ಕುಕಿ ಅವರು ಮದುವೆಯಾಗಿ ಅಮೆರಿಕ ಸೇರಿದ್ದಾರೆ.  ಸಾಫ್ಟ್‌ವೇರ್‌ ಇಂಜಿನಿಯರ್ ಆಗಿರುವ ಅವಿನಾಶ್ ಅವರು ಅಮೆರಿಕದಲ್ಲಿ (America) ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪತ್ನಿ ಅಕ್ಷತಾ ಕೂಡ ವಿದೇಶಕ್ಕೆ ತೆರಳಿದ್ದಾರೆ. ಈಗ ಅಕ್ಷತಾ ಅವರು ಅಮೆರಿಕದಲ್ಲಿನ ಹೊಸ ಮನೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ

    ಅಮೆರಿಕದಲ್ಲಿ ಹೊಸ ಮನೆಗೆ ಅಕ್ಷತಾ ಅವರನ್ನು ಸ್ವಾಗತಿಸಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ ಹಂಚಿಕೊಂಡಿದ್ದರು. ಅಮೆರಿಕದಲ್ಲಿ ಹೊಸ ಹೊಸ ಸ್ಥಳಗಳಿಗೆ ಭೇಟಿ ಕೊಡುತ್ತಿರುವ ಅಕ್ಷತಾ ಭರ್ಜರಿ ಎಂಜಾಯ್ ಮಾಡುತ್ತಿದ್ದಾರೆ.

  • ರಜನಿಕಾಂತ್ ಜೊತೆ ನಟಿಸುವ ಚಾನ್ಸ್ ಸಿಕ್ಕಿದ್ದು ಹೇಗೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ ಅವಿನಾಶ್

    ರಜನಿಕಾಂತ್ ಜೊತೆ ನಟಿಸುವ ಚಾನ್ಸ್ ಸಿಕ್ಕಿದ್ದು ಹೇಗೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ ಅವಿನಾಶ್

    ಕಿರುತೆರೆ ಜನಪ್ರಿಯ ಶೋ ‘ವೀಕೆಂಡ್ ವಿತ್ ರಮೇಶ್’ (Weekend With Ramesh) ಕಾರ್ಯಕ್ರಮದಲ್ಲಿ ಖ್ಯಾತ ನಟ ಅವಿನಾಶ್ ಅವರ ಯಶೋಗಾಥೆಯನ್ನ ತಿಳಿಸಿದ್ದಾರೆ. ಈ ವಾರದ ಅತಿಥಿಯಾಗಿ ಸಾಧಕರ ಸಾಲಿನಲ್ಲಿ ನಟ ಅವಿನಾಶ್ ಅಲಂಕರಿಸಿದ್ದಾರೆ. 37 ವರ್ಷಗಳ ಸಿನಿ ಜರ್ನಿಯಲ್ಲಿ ಬಹುಭಾಷಾ ನಟನಾಗಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವಿನಾಶ್ ನಟಿಸಿದ್ದಾರೆ. ಕಾಲಿವುಡ್‌ನಲ್ಲಿ ರಜನಿಕಾಂತ್ (Rajanikanth) ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ಹೇಗೆ? ಎಂದು ಅವಿನಾಶ್ (Actor Avinash) ಬಿಚ್ಚಿಟ್ಟಿದ್ದಾರೆ.

    ಬಹುಭಾಷೆಗಳಲ್ಲಿ ನಟ, ಖಳನಟ, ಪೋಷಕ ಪಾತ್ರ ಸೇರಿದಂತೆ ನಾನಾ ಪಾತ್ರಗಳಲ್ಲಿ ಅವಿನಾಶ್ ನಟಿಸಿ ಗಮನ ಸೆಳೆದಿದ್ದಾರೆ. ‘ಚಂದ್ರಮುಖಿ’ ಚಿತ್ರದ ಮೂಲಕ ರಜನಿಕಾಂತ್ ಜೊತೆಗೆ ಅವಿನಾಶ್ ನಟಿಸಿದರು. ಅಸಲಿಗೆ, ಕನ್ನಡದ ‘ಆಪ್ತಮಿತ್ರ’ (Apthamitra Film) ಚಿತ್ರದ ರೀಮೇಕ್ ‘ಚಂದ್ರಮುಖಿ’ ಸಿನಿಮಾದಲ್ಲಿ ಅವಿನಾಶ್‌ಗೆ ಚಾನ್ಸ್ ಸಿಕ್ಕಿತ್ತು.

    ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ‘ಆಪ್ತಮಿತ್ರ’ ಚಿತ್ರದಲ್ಲಿ ಅವಿನಾಶ್ ಅವರು ಆಚಾರ್ಯ ರಾಮಚಂದ್ರ ಶಾಸ್ತ್ರಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದರು. ಅವರ ಈ ಪಾತ್ರ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಅವಿನಾಶ್ ಅವರ ಖಡಕ್ ನಟನೆ ಮೆಚ್ಚಿ, ‘ಆಪ್ತಮಿತ್ರ’ ಚಿತ್ರವನ್ನ ತಮಿಳಿನಲ್ಲಿ ‘ಚಂದ್ರಮುಖಿ’ (Chandramukhi) ಆಗಿ ರೀಮೇಕ್ ಮಾಡುವ ಸಂದರ್ಭದಲ್ಲಿ ಶಾಸ್ತ್ರಿಗಳ ಪಾತ್ರಕ್ಕೆ ಅವಿನಾಶ್ ಅವರೇ ಬೇಕು ಅಂತ ರಜನಿಕಾಂತ್ ಸೂಚಿಸಿದರಂತೆ. ಇದನ್ನೂ ಓದಿ:ಕುಟುಂಬ ಸಮೇತ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ

    ರಜನಿಕಾಂತ್ (Rajanikanth) ಜೊತೆಗೆ ಆಕ್ಟ್ ಮಾಡ್ತೀನಿ ಅಂತ ನಾನು ಕನಸು ಕೂಡ ಕಂಡಿರಲಿಲ್ಲ. ‘ಆಪ್ತಮಿತ್ರʼ ಆದ್ಮೇಲೆ ಅದರ ರೀಮೇಕ್‌ನಲ್ಲಿ ಅವಿನಾಶ್ ಅವರೇ ನಟಿಸಬೇಕು ಅಂತ ರಜನಿಕಾಂತ್ ಹೇಳ್ತಿದ್ದಾರೆ ಅಂತಲೇ ಸುದ್ದಿ ಬಂತು. ಆಮೇಲೆ ಪಿ.ವಾಸು ಅವರೂ ಕೂಡ ರಜನಿಕಾಂತ್ ಹೇಳ್ತಿದ್ದಾರೆ ನೀವೇ ಮಾಡಿ ಎಂದರು. ಈ ವಿಚಾರ ಕೇಳಿ ನನಗೆ ಸರ್ಪ್ರೈಸ್ ಆಯ್ತು. ಮೊದಲನೇ ದಿನ ಶೂಟಿಂಗ್‌ಗೆ ಹೋದೆ. ‌’ಚಂದ್ರಮುಖಿ’ ಸೆಟ್‌ನಲ್ಲೇ ನಾನು ಮೊದಲನೇ ಬಾರಿಗೆ ರಜನಿಕಾಂತ್ ಅವರನ್ನ ನೋಡಿದ್ದು ಎಂದು ಅವಿನಾಶ್ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದಾರೆ.

    ರಜನಿಕಾಂತ್‌, ಜ್ಯೋತಿಕಾ, ನಯನತಾರಾ, ಅವಿನಾಶ್‌ ನಟನೆಯ ಚಂದ್ರಮುಖಿ ಸಿನಿಮಾ ಕೂಡ ಸೂಪರ್‌ ಡೂಪರ್‌ ಹಿಟ್‌ ಆಗಿತ್ತು. ಅಲ್ಲೂ ಅವಿನಾಶ್‌ ಅವರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

  • ದಾಂಪತ್ಯ ಜೀವನ, ಮಗನ ಆರೋಗ್ಯದ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ಟ ಅವಿನಾಶ್‌ ದಂಪತಿ

    ದಾಂಪತ್ಯ ಜೀವನ, ಮಗನ ಆರೋಗ್ಯದ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ಟ ಅವಿನಾಶ್‌ ದಂಪತಿ

    ಕಿರುತೆರೆ ಜನಪ್ರಿಯ Weekend With Ramesh-5 ಕಾರ್ಯಕ್ರಮಕ್ಕೆ ಖ್ಯಾತ ನಟ ಅವಿನಾಶ್ (Actor Avinash) ಅತಿಥಿಯಾಗಿ ಸಾಧಕರ ಸೀಟ್ ಅಲಂಕರಿಸಿದ್ದಾರೆ. ಈ ವಾರ ಅವಿನಾಶ್ ಅವರ ಬಾಲ್ಯ, ಕೆರಿಯರ್, ನಟಿ ಮಾಳವಿಕಾ ಜೊತೆಗಿನ ಮದುವೆ, ಪುತ್ರ ಗಾಲವ್ ಬಗ್ಗೆ ಅವಿನಾಶ್ ಮನಬಿಚ್ಚಿ ಮಾತನಾಡಿದ್ದಾರೆ.

    ಸ್ಯಾಂಡಲ್‌ವುಡ್‌ನ ಸ್ಟಾರ್ ಜೋಡಿಗಳಲ್ಲಿ ಒಂದಾಗಿರುವ ಅವಿನಾಶ್- ಮಾಳವಿಕಾ (Actress Malavika) ಅವರದ್ದು ಪಕ್ಕಾ ಅರೇಂಜ್ ಮ್ಯಾರೇಜ್ ಆಗಿದ್ದು, ಮೊದಲು ಭೇಟಿಯಾಗಿದ್ದು, ಮದುವೆ ಪ್ರಸ್ತಾಪ ಬಂದಿದ್ದು ಯಾರಿಂದ ಎಂಬ ಮಾಹಿತಿಯನ್ನ ನಟ ರಮೇಶ್ ಅರವಿಂದ್ (Ramesh Aravind) ಜೊತೆ ಅವಿನಾಶ್ ದಂಪತಿ ಹಂಚಿಕೊಂಡಿದ್ದಾರೆ. ಹಾಗೆಯೇ ದೇವರ ಮಗು ಗಾಲವ್ ಬಗ್ಗೆ ಭಾವುಕರಾಗಿದ್ದಾರೆ. ಇದನ್ನೂ ಓದಿ:‘ಅಗ್ನಿಸಾಕ್ಷಿ’ ಸೀರಿಯಲ್‌ ನಟ ಸಂಪತ್‌ ಜಯರಾಮ್‌ ಆತ್ಮಹತ್ಯೆ

    ಕಿರುತೆರೆಯ ‘ಮಾಯಾಮೃಗ’ (Mayamruga) ಧಾರಾವಾಹಿಯಲ್ಲಿ ನಾವಿಬ್ಬರು ಒಟ್ಟಿಗೆ ಅಭಿನಯಿಸಿದ್ವಿ. ಸ್ನೇಹಿತರಾಗಿದ್ವಿ. ನಮ್ಮಿಬ್ಬರ ಮಧ್ಯೆ ವಯಸ್ಸಿನ ಅಂತರವಿತ್ತು. ಆದರೆ, ಇಬ್ಬರೂ ಯೋಚನೆ ಮಾಡುವ ರೀತಿ ಒಂದೇ ಇತ್ತು. ಒಟ್ಟಿಗೆ ಇರಬಹುದೇನೋ ಅಂತ ನನಗೆ ಅನಿಸಿತ್ತು. ಆದರೆ, ಕೇಳುವ ಧೈರ್ಯ ನನಗೆ ಇರಲಿಲ್ಲ ಎಂದರು ಅವಿನಾಶ್. ಮಾಳವಿಕಾ ಹಾಗೂ ಅವಿನಾಶ್ ಮಧ್ಯೆ ವಯಸ್ಸಿನ ಅಂತರ ಎಷ್ಟಿದೆ ಅಂದ್ರೆ. ಮಾಳವಿಕಾ 9 ವರ್ಷ ವಯಸ್ಸಿನಲ್ಲಿದ್ದಾಗ ಅವಿನಾಶ್ ಆಗಲೇ ಲೆಕ್ಚರರ್ ಆಗಿದ್ದರು. ಇವರಿಬ್ಬರು ಭೇಟಿಯಾಗಿದ್ದು ‘ಮಾಯಾಮೃಗ’ ಧಾರಾವಾಹಿಯ ಸೆಟ್‌ನಲ್ಲಿ.

    ಮಾಯಾಮೃಗ ಶುರು ಆದ್ಮೇಲೆ ಇಬ್ಬರೂ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಒಂದು ದಿನ ಅವಿನಾಶ್ ಮನೆಗೆ ಮಾಳವಿಕಾ ಮನೆಗೆ ಬಂದಿದ್ದರು. ನನ್ನ ಮನಸ್ಸಿನಲ್ಲಿ ಬಂತು.. ನಮ್ಮ ಹುಡುಗಿನ ಮದುವೆ ಆಗ್ತೀಯಾ ಅಂತಾ ಮಾಳವಿಕಾ ತಾಯಿ ನೇರವಾಗಿ ಕೇಳಿದಾಗ ಅವಿನಾಶ್ ಶಾಕ್ ಆಗ್ಬಿಟ್ಟರು. ಮನೆಗೆ ಹೋಗಿ ಅಣ್ಣಂದಿರ ಜೊತೆ ಮಾತನಾಡಬೇಕು ಎಂದರು. ಹಾಂಗ್ ಕಾಂಗ್‌ನಿಂದ ಅಣ್ಣನನ್ನ ಕರೆಯಿಸಿ ಮಾಳವಿಕಾಳನ್ನ ನೋಡಿದರು. ನಾವು ಎಂಗೇಜ್‌ಮೆಂಟ್ ಮಾಡಲಿಲ್ಲ. ಫೆಬ್ರವರಿ 26ರಂದು ಮದುವೆ ಮಾಡಿಬಿಟ್ವಿ ಎಂದು ಮಾಳವಿಕಾ ತಾಯಿ ಸಾವಿತ್ರಿ ಮಾತನಾಡಿದರು.

    ನಮ್ಮ ಮಗ ಗಾಲವ್. ದೈವ ಸಂಕಲ್ಪ ಇತ್ತು. ಅದಕ್ಕೆ ಗಾಲವ್ (Gaalav) ಹುಟ್ಟಿದ. ಗಾಲವ್ ಎಲ್ಲರಂತೆ ಅಲ್ಲ. ಅದು ಗೊತ್ತಾಗೋಕೆ ಒಂದಷ್ಟು ವರ್ಷ ಆಯ್ತು. 14 ವರ್ಷಗಳಲ್ಲಿ ಇದೇ ಮೊದಲ ಬಾರಿ ಗಾಲವ್ ಯಾವುದಾದರೂ ಸೆಟ್‌ಗೆ ಬಂದಿರೋದು. ಗಾಲವ್ ಹುಟ್ಟಿದಾಗ ಎಲ್ಲಾ ಮಕ್ಕಳ ತರಹ ಇರಲಿಲ್ಲ. ಒಬ್ಬೊಬ್ಬರು ಒಂದೊಂಥರ ಅವನ ಬಗ್ಗೆ ಮಾತನಾಡಿದರು. ಒಬ್ಬರು ಯಾವುದೋ ಯೋಗಿ ತರಹ ಇದ್ದಾನೆ ಅಂದರು. ಇನ್ನೊಬ್ಬರು ನಾರ್ಮಲ್ ಅಲ್ಲವೇ ಅಲ್ಲ ಎಂದರು. ಸುಮಾರು 50 ದಿನ ಐಸಿಯುನಲ್ಲಿದ್ದ. ನಂತರ ವಾಪಸ್ ಮನೆಗೆ ಬಂದ. ನಂತರ ಯಾವ ಅಪ್ಪ-ಅಮ್ಮನೂ ಮಾಡಿಸದೇ ಇರುವ ಒಂದು ಟೆಸ್ಟ್ ಮಾಡಿಸಿದ್ವಿ. ಯಾವ ಕಾರಣಕ್ಕೆ ಮಗು ಹೀಗೆ ಹುಟ್ಟತ್ತೆ ಅಂತ ತಿಳಿಯೋಕೆ. ಜೆನೆಟಿಕ್ ಟೆಸ್ಟ್ ಮಾಡಿದಾಗ ಗೊತ್ತಾಯಿತು Wolf Hirschhorn Syndrome ಇದೆ ಅಂತ. ಅದು ಯಾರಿಗೂ ಗೊತ್ತೇ ಇಲ್ಲ. ಯಾವ ನ್ಯೂರಾಲಜಿಸ್ಟ್ ಕೂಡ ನಮಗೆ ಹೇಳಲಿಲ್ಲ. ಈ ಸಿಂಡ್ರೋಮ್‌ನಲ್ಲಿ ಬುದ್ಧಿ ಮಾಂದ್ಯತೆ ಇದೆ. ಮಾತು ಬರೋದಿಲ್ಲ. ನಡಿಗೆ ಸ್ವಲ್ಪ ಮಟ್ಟಿಗೆ ಬರಬಹುದು. ಆಯಸ್ಸಿನ ಬಗ್ಗೆ ನಿಶ್ಚಿಯ ಇಲ್ಲ. ಜೆನೆಟಿಕ್ ಟೆಸ್ಟ್ ಬಳಿಕ ನಿಮ್ಮ ಕಾರಣಕ್ಕೂ ಮಗ ಹೀಗಿಲ್ಲ. ಅವಿನಾಶ್ ಕಾರಣಕ್ಕೂ ಮಗ ಹೀಗಿಲ್ಲ. ಯು ಆರ್ ಜಸ್ಟ್ ಅನ್‌ಲಕ್ಕಿ ಎಂದರು ಡಾಕ್ಟರ್. ಜಗತ್ತಿನಲ್ಲಿ 2000 ಮಕ್ಕಳು ಹೀಗಿದ್ದಾರೆ ಎಂದು ಡಾಕ್ಟರ್ ತಿಳಿಸಿದ್ದರು ಎಂದು ನಟಿ ಮಾಳವಿಕಾ ಮಾತನಾಡಿದ್ದಾರೆ.

    ಗಾಲವ್‌ನ ನೋಡಿಕೊಳ್ಳೋದು ಕಾಳಿ ಎಂಬುವರು. ಅವರ ಬಗ್ಗೆ ಮಾತನಾಡಿದ ಮಾಳವಿಕಾ, ಕಾಳಿ ನಮ್ಮನೆ ಯಶೋದಾ. ನಾನು ಹೆತ್ತವಳು ಅಷ್ಟೇ. ಹುಟ್ಟಿದಾಗಿನಿಂದ ಗಾಲವ್‌ನ ನೋಡಿಕೊಂಡಿರುವುದು ಕಾಳಿ ಅವರು. ಇನ್ನೂ ಮಗನ ಬಗ್ಗೆ ಮಾತನಾಡಿದ ಅವಿನಾಶ್, ದೇವರು ನಮ್ಮ ಜೊತೆ ಇದ್ದಾನೆ. ಒಂದು ದಿನ ಇವನು ದೇವರ ಜೊತೆ ಹೋಗ್ತಾನೆ ಎಂದು ಮಾತನಾಡಿದ್ದಾರೆ.

  • Weekend With Ramesh ಕಾರ್ಯಕ್ರಮದಲ್ಲಿ ಈ ವಾರದ ಗೆಸ್ಟ್ ಯಾರು?

    Weekend With Ramesh ಕಾರ್ಯಕ್ರಮದಲ್ಲಿ ಈ ವಾರದ ಗೆಸ್ಟ್ ಯಾರು?

    ಕಿರುತೆರೆಯ ಜನಪ್ರಿಯ ಶೋ ‘ವೀಕೆಂಡ್ ವಿತ್ ರಮೇಶ್’ (Weekend With Ramesh) ಕಾರ್ಯಕ್ರಮದಲ್ಲಿ ಈಗಾಗಲೇ ರಮ್ಯಾ(Ramya), ಪ್ರಭುದೇವ, ದತ್ತಣ್ಣ, ಡಾ.ಮಂಜುನಾಥ್, ಡಾಲಿ (Daali) ಸಾಧಕರ ಸೀಟ್ ಅಲಂಕರಿಸಿ ತಮ್ಮ ಜೀವನದ ಕಥೆಯನ್ನ ಹಂಚಿಕೊಂಡಿದ್ದಾರೆ. ಈ ವಾರ ವೀಕೆಂಡ್ ಟೆಂಟ್‌ನಲ್ಲಿ ಯಾರು ಅತಿಥಿಯಾಗಿ ಬರುತ್ತಾರೆ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.

    ರಮೇಶ್ ಅರವಿಂದ್ (Ramesh Aravind) ಅವರ ನಿರೂಪಣೆಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ. ಕಳೆದ 4 ಸೀಸನ್‌ಗಳಿಂದ ಹಲವು ಸಾಧಕರ ಕಥೆಯನ್ನ ಟಿವಿ ಪರದೆಯಲ್ಲಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಹೊಸ ಸೀಸನ್ ಕೂಡ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    ‘ವೀಕೆಂಡ್ ವಿತ್ ರಮೇಶ್’ (Weekend With Ramesh 5) ಕಾರ್ಯಕ್ರಮ 5ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಅತಿಥಿಯಾಗಿ ಮಂಡ್ಯ ರಮೇಶ್- ಹಿರಿಯ ನಟ ಅವಿನಾಶ್ ಭಾಗಿಯಾಗಿದ್ದಾರೆ. ತಮ್ಮ ಜೀವನದ ಸವಾಲುಗಳು, ಏಳು-ಬೀಳಿನ ಕಥೆಯನ್ನ ಈ ನಟರು ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ರಾಕಿ ಭಾಯ್ ಲೆಜೆಂಡ್ ಎಂದು ಹಾಡಿ ಹೊಗಳಿದ ಪೂಜಾ ಹೆಗ್ಡೆ

    ನಟ ಮಂಡ್ಯ ರಮೇಶ್ (Mandya Ramesh) ಅವರು ಸಾಕಷ್ಟು ಸಿನಿಮಾ, ಸೀರಿಯಲ್ ಮತ್ತು ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಯುವ ನಟ-ನಟಿಯರಿಗೆ ನಟನೆ ಕಲಿಸಿ, ಚಿತ್ರರಂಗದಲ್ಲಿ ನೆಲೆ ನಿಲ್ಲಲು ದಾರಿ ಮಾಡಿ ಕೊಟ್ಟಿದ್ದಾರೆ.

    ಹಿರಿಯ ನಟ ಅವಿನಾಶ್ (Avinash) ಅವರು ನಟ, ಪೋಷಕ ನಟನಾಗಿ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪಾತ್ರ ಯಾವುದೇ ಇರಲಿ, ಆ ಪಾತ್ರವೇ ತಾವಾಗಿ ನಟಿಸಿದ್ದಾರೆ. ಪೋಷಕ ಕಲಾವಿದನಾಗಿ ಗುರುತಿಸಿಕೊಂಡಿರುವ ಅವಿನಾಶ್ ಅವರು ವೀಕೆಂಡ್ ಟೆಂಟ್‌ನಲ್ಲಿ ಭಾಗಿಯಾಗಿದ್ದಾರೆ.

  • `ಬಿಗ್ ಬಾಸ್’ ಅಕ್ಷತಾ ಕುಕಿ ವೆಡ್ಡಿಂಗ್ ಫೋಟೋಸ್

    `ಬಿಗ್ ಬಾಸ್’ ಅಕ್ಷತಾ ಕುಕಿ ವೆಡ್ಡಿಂಗ್ ಫೋಟೋಸ್

    ಕಿರುತೆರೆಯ ಬಿಗ್ ಬಾಸ್ (Bigg Boss Kannada) ಮೂಲಕ ಮೋಡಿ ಮಾಡಿದ್ದ ಚೆಲುವೆ ಅಕ್ಷತಾ ಕುಕಿ (Akshatha Kukki) ಅವರು ಸೋಮವಾರ (ಮಾ.27)ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಅವಿನಾಶ್ ಎಂಬುವವರ ಜೊತೆ ಅರೆಂಜ್ ಮ್ಯಾರೇಜ್ ಆಗಿದ್ದಾರೆ. ಇದೀಗ ಈ ಜೋಡಿಯ ಮದುವೆಯ ಸುಂದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    ಬಿಗ್ ಬಾಸ್ ಒಟಿಟಿಗೆ ಕಾಲಿಡುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಸ್ಪರ್ಧಿ ಅಕ್ಷತಾ ಕುಕಿ ಅವರು ಸೀರಿಯಲ್ ಮತ್ತು ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. `ಮಾರ್ಟಿನ್’ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ಅಕ್ಷತಾ ಕುಕಿ ನಟಿಸಿದ್ದಾರೆ.

    ಅಕ್ಷತಾ ಕುಕಿ ಅವರು ಹಸೆಮಣೆ ಏರಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ವರನ ಜೊತೆ ಎರಡು ತಿಂಗಳ ಹಿಂದೆ ಎಂಗೇಜ್‌ಮೆಂಟ್ ಆಗಿತ್ತು. ಅವಿನಾಶ್ ಜೊತೆ ಮಾರ್ಚ್ 27ರಂದು ಅಕ್ಷತಾ ಸಪ್ತಪದಿ ತುಳಿದುದ್ದಾರೆ. ಬೆಳಗಾವಿಯಲ್ಲಿ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ನಡೆದಿದೆ. ಗೋಲ್ಡನ್‌ ಬಣ್ಣದ ಸೀರೆಯಲ್ಲಿ ನಟಿ ಅಕ್ಷತಾ ಮಿಂಚಿದ್ದಾರೆ.

    ಅಕ್ಷತಾ ಮದುವೆಯಾಗಿರುವ ವರ ಅವಿನಾಶ್, ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ಷತಾ ಅವರ ಮದುವೆಯಲ್ಲಿ ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದಾರೆ. ನವಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.