Tag: ಅವಾಜ್

  • ಮನೆಯನ್ನು ಒಂದಿಂಚು ಜಾಸ್ತಿ ಒಡೆದ್ರೂ ಕಲ್ಲೇಟು- ಅಧಿಕಾರಿಗಳಿಗೆ ಮನೆ ಮಾಲೀಕ ಅವಾಜ್

    ಮನೆಯನ್ನು ಒಂದಿಂಚು ಜಾಸ್ತಿ ಒಡೆದ್ರೂ ಕಲ್ಲೇಟು- ಅಧಿಕಾರಿಗಳಿಗೆ ಮನೆ ಮಾಲೀಕ ಅವಾಜ್

    ಮಂಡ್ಯ: ಬೆಂಗಳೂರು-ಮೈಸೂರು (Bengaluru- Mysuru) ದಶಪಥ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಮನೆ ತೆರವುಗೊಳಿಸಲು ಮುಂದಾದ ಅಧಿಕಾರಿಗೆ ಕಲ್ಲು ತೋರಿಸಿ ಎಚ್ಚರಿಕೆ ನೀಡಿರುವ ಪ್ರಸಂಗವೊಂದು ಮಂಡ್ಯದ ಇಂಡುವಾಳು ಗ್ರಾಮದಲ್ಲಿ ನಡೆದಿದೆ.

    ನನ್ನ ಮನೆ ಒಂದಿಂಚು ಜಾಸ್ತಿ ಹೊಡೆದರೂ ಕಲ್ಲಲ್ಲಿ ಹೊಡಿತೀನಿ ಎಂದು ಮಾಲೀಕ ಅವಾಜ್ ಹಾಕಿದ್ದಾರೆ. ನಿಗದಿಯಾದ ಕಟ್ಟಡವನ್ನಷ್ಟೇ ಹೊಡೆಯಬೇಕು. ಒಂದಿಂಚು ಜಾಸ್ತಿ ಕೆಡವಿದರೂ ನಾನು ನಿನಗೆ ಹೊಡೆಯುತ್ತೇನೆ ಎಂದು ಮನೆ ಮಾಲೀಕ ರಾಜೇಗೌಡ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಬ್ರೋ, ನಾನು ನಿಮ್ಮ ಲ್ಯಾಪ್‍ಟಾಪ್ ಕದ್ದಿದ್ದೇನೆ- ಇಮೇಲ್ ಮಾಡಿ ಕ್ಷಮೆ ಕೋರಿದ ಕಳ್ಳ

    ಹೆದ್ದಾರಿ ಪ್ರಾಧಿಕಾರವು ದಶಪಥ ರಸ್ತೆ ನಿರ್ಮಾಣಕ್ಕಾಗಿ ಹಲವು ಮನೆಗಳನ್ನು ಸ್ವಾಧೀನ ಪಡಿಸಿಕೊಂಡಿದೆ. ಪರಿಹಾರ ತಾರತಮ್ಯ ಆರೋಪ, ಮನೆ ಕೆಡವಲು ಕೆಲ ಮಾಲೀಕರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಲೆ ಬಾಳುವ ಜಾಗಕ್ಕೆ ಕಡಿಮೆ ಪರಿಹಾರ ನೀಡಿದ್ದಾರೆಂದು ಕೆಲ ಮಾಲೀಕರು ಆರೋಪಿಸಿದ್ದಾರೆ. ಕೆಲದಿನಗಳ ಹಿಂದೆ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಪ್ರತಿಭಟನೆ ಕೂಡ ನಡೆದಿತ್ತು.

    ಇಂದು ಬೆಳ್ಳಂಬೆಳ್ಳಗ್ಗೆ ಮನೆ ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ಆಗಮಿಸಿ ಮನೆ ತೆರವುಗೊಳಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಮನೆ ಕೆಡವಲು ಬಿಡಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪೊಲೀಸರು ಗ್ರಾಮಸ್ಥರನ್ನು ಬಂಧಿಸಿ ತೆರವು ಕಾರ್ಯಕ್ಕೆ ಅನುವು ಮಾಡಿಕೊಟ್ಟರು.

    Live Tv
    [brid partner=56869869 player=32851 video=960834 autoplay=true]

  • ಪೊಲೀಸರೇನು ಹುಚ್ಚರಾ? ಪ್ರತಿಭಟನಾಕಾರರ ಮೇಲೆ ಯಾದಗಿರಿ ಎಸ್.ಪಿ ಗರಂ

    ಪೊಲೀಸರೇನು ಹುಚ್ಚರಾ? ಪ್ರತಿಭಟನಾಕಾರರ ಮೇಲೆ ಯಾದಗಿರಿ ಎಸ್.ಪಿ ಗರಂ

    ಯಾದಗಿರಿ: ಪೊಲೀಸರೇನು ಹುಚ್ಚರಾ ಎಂದು ಪ್ರತಿಭಟನಾ ನಿರತರರಿಗೆ ಸಿನಿಮಾ ಸ್ಟೈಲ್‍ನಲ್ಲಿ ಯಾದಗಿರಿ ಎಸ್.ಪಿ ಋಷಿಕೇಶ್ ಭಗವಾನ್ ಗರಂ ಆಗಿದ್ದಾರೆ.

    ಇಂದು ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಅಂಬೇಡ್ಕರ್ ಭಾವಚಿತ್ರ ಸಹಿತ ನಾಮಫಲಕ ಹಾಕುವ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಸಂರ್ಘಷ ಏರ್ಪಟಿತ್ತು. ಹೀಗಾಗಿ ಸ್ಥಳಕ್ಕೆ ಎಸ್.ಪಿ ಋಷಿಕೇಶ್ ಭಗವಾನ್ ಭೇಟಿ ನೀಡಿದ್ದರು.

    ಈ ಸಂದರ್ಭದಲ್ಲಿ ಪ್ರತಿಭಟನೆ ಮಾಡುತ್ತಿದ್ದವರು ಪೊಲೀಸರ ವಿರುದ್ಧ ಘೋಷಣೆ ಕೂಗಲು ಮುಂದಾದರು. ಇದರಿಂದ ಸಿಡಿಮಿಡಿಗೊಂಡ ಎಸ್.ಪಿ ಋಷಿಕೇಶ್ ಪೊಲೀಸರು ನಿಮಗೆ ಹಚ್ಚಾರ ತರ ಕಾಣುತ್ತೇವಾ? ನಾವು ಏನ್ ಮಾಡಿದ್ದೀವಿ ನಿಮಗೆ ಎಂದು ಪ್ರತಿಭಟನಾಕಾರರ ವಿರುದ್ಧ ಗರಂ ಆದರು.

    ಇದೇ ತಿಂಗಳ 8ರಂದು ವಡಗೇರಾ ಪಟ್ಟಣದ ಹಳೆ ಪೊಲೀಸ್ ಠಾಣೆ ಮುಂದೆ ದಲಿತ ಸಮುದಾಯದಿಂದ ಅಂಬೇಡ್ಕರ್ ನಾಮಫಲಕ ಅಳವಡಿಕೆ ಮಾಡಲಾಗಿತ್ತು. ಆದರೆ ನಾಮ ಫಲಕ ಅಳವಡಿಕೆಗೆ ಅನುಮತಿ ಇಲ್ಲವೆಂದು ಪೊಲೀಸರು ಅದನ್ನು ತೆರವುಗೊಳಿಸಿದ್ದರು. ನಾಮ ಫಲಕವನ್ನು ಅನಧಿಕೃತವಾಗಿ ಅಳವಡಿಸಲಾಗಿದೆ ಎಂಬ ಆರೋಪದ ಮೇಲೆ 8 ಜನರ ಮೇಲೆ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.

    ಈ ವಿಚಾರದಲ್ಲಿ ಪೊಲೀಸರಿಗೆ ಕುರುಬ ಸಮುದಾಯದ ಕುಮ್ಮಕ್ಕಿದೆ. ಅದ್ದರಿಂದ ನಾಮಫಲಕ ತೆರವುಗೊಳಿಸಿದ್ದಾರೆಂದು ದಲಿತ ಸಂಘಟನೆಗಳು ಆರೋಪಿಸಿ, ತೆರವುಗೊಳಿಸಿದ ಜಾಗದಲ್ಲಿಯೇ ನಾಮಫಲಕ ಹಾಕಬೇಕೆಂದು ಹಳೆ ಠಾಣೆ ಹಿಂಭಾಗದ ರಸ್ತೆ ತಡೆದು ದಲಿತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದಾರೆ.

  • ರಜೆ ಕೊಡದ ಸಿಪಿಐಗೆ ಶಾಪ ಹಾಕಿದ ಮಹಿಳಾ ಪೇದೆ – ವಿಡಿಯೋ ವೈರಲ್

    ರಜೆ ಕೊಡದ ಸಿಪಿಐಗೆ ಶಾಪ ಹಾಕಿದ ಮಹಿಳಾ ಪೇದೆ – ವಿಡಿಯೋ ವೈರಲ್

    ಹುಬ್ಬಳ್ಳಿ: ರಜೆ ಕೊಡಲು ನಿರಾಕರಿಸಿದ ಮೇಲಾಧಿಕಾರಿಗೆ ಮಹಿಳಾ ಪೇದೆ(ಡಬ್ಲ್ಯೂಪಿಸಿ) ಫುಲ್ ಅವಾಜ್ ಹಾಕಿರುವ ಘಟನೆ ಹುಬ್ಬಳ್ಳಿಯ ಉಪ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಸಿಪಿಐ ಡಿಸೋಜಾ ಅವರಿಗೆ ಮಹಿಳಾ ಪೇದೆಯೊಬ್ಬರು ಅವಾಜ್ ಹಾಕಿದ್ದಾರೆ. ರಜೆ ಕೊಡಲಿಲ್ಲ ಎನ್ನುವ ಕಾರಣಕ್ಕೆ ಸಿಪಿಐ ಅವರನ್ನ ವಾಚಾಮಗೋಚರವಾಗಿ ನಿಂದಿಸಿ, ಶಾಪ ಹಾಕಿದ್ದಾರೆ.

    ಮೊದಲು ರಜೆ ಬೇಕು ಎಂದು ಸಿಪಿಐ ಬಳಿ ವಿನಯದಿಂದ ಕೇಳಿದ್ದಾರೆ. ಈ ಮನವಿಯನ್ನು ತಿರಸ್ಕರಿಸಿದ್ದಕ್ಕೆ ಸಿಟ್ಟಿಗೆದ್ದಿದ್ದಾರೆ. ಅಷ್ಟೇ ಅಲ್ಲದೇ ಸಿಪಿಐ ಕ್ಯಾಬಿನ್ ಗೆ ನುಗ್ಗಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಈ ವೇಳೆ ಠಾಣೆಯ ಸಿಬ್ಬಂದಿ ಸಮಾಧಾನ ಮಾಡಿದರೂ ಶಾಂತವಾಗದ ಡಬ್ಲ್ಯೂಪಿಸಿ ಸಂಜೆಯೊಳಗೆ ನಿನಗೇನಾದರೂ ಆಗಲಿ ಎಂದು ಸಿಪಿಐಗೆ ಶಾಪ ಹಾಕಿ ಕೋಪ ತೋರಿಸಿದ್ದಾರೆ. ಮಹಿಳಾ ಪೇದೆಯ ಈ ಆರ್ಭಟದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಉಪ ನಗರ ಠಾಣೆಯ ಸಿಪಿಐ ಡಿಸೋಜಾ ಒಬ್ಬ ಸಜ್ಜನ ಅಧಿಕಾರಿ. ಅವರ ವಿರುದ್ಧವೇ ಈ ರೀತಿ ಕಿರುಚಾಡಿದ್ದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಪೇದೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

  • ನಾನು ಜೈಲೂಟ ತಿಂದು ಬಂದವನು, ನನ್ನನ್ನೇ ಎದುರು ಹಾಕೋತೀರಾ – ಲ್ಯಾಬ್ ಟೆಕ್ನಿಷಿಯನ್‍ಗೆ ರಾಮನಗರ ಡಿಎಚ್‍ಓ ಧಮ್ಕಿ

    ನಾನು ಜೈಲೂಟ ತಿಂದು ಬಂದವನು, ನನ್ನನ್ನೇ ಎದುರು ಹಾಕೋತೀರಾ – ಲ್ಯಾಬ್ ಟೆಕ್ನಿಷಿಯನ್‍ಗೆ ರಾಮನಗರ ಡಿಎಚ್‍ಓ ಧಮ್ಕಿ

    ರಾಮನಗರ: ನಾನು ಜೈಲಿಗೆ ಹೋಗಿ ಬಂದವನು. ನನ್ನನ್ನೇ ಎದುರು ಹಾಕೋತೀರಾ ಎಂದು ರಾಮನಗರ ಡಿಎಚ್‍ಓ ಅಮರ್‌ನಾಥ್‌ ರೌಡಿಗಳ ರೀತಿ ಲ್ಯಾಬ್ ಟೆಕ್ನಿಷಿಯನ್ ಗೆ ಅವಾಜ್ ಹಾಕಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

    ಆಸ್ಪತ್ರೆಯಲ್ಲಿ ಸಿಸಿಟಿವಿ ಅಳವಡಿಕೆ ಬಗ್ಗೆ ನಡೆದ ಅಕ್ರಮವನ್ನು ಕೇಳಲು ಬಂದವರ ಮೇಲೆ ಡಿಎಚ್‍ಓ ತಮ್ಮ ಪೌರುಷ ತೋರಿದ್ದಾರೆ. ಕಳೆದ 6 ತಿಂಗಳ ಹಿಂದೆ ರಾಮನಗರ ಡಿಎಚ್‍ಓ ಕಚೇರಿಯಲ್ಲಿಯೇ ಚನ್ನಪಟ್ಟಣ ತಾಲೂಕಿನ ನಂಜಾಪುರ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್‍ ಗೆ ಅಮರ್‌ನಾಥ್‌ ಅವರು ಅವಾಜ್ ಹಾಕಿದ್ದಾರೆ.

    ನಂಜಾಪುರದ ಆಸ್ಪತ್ರೆಗೆ ಸಿಸಿಟಿವಿಯನ್ನ ಟೆಂಡರ್ ನೀಡದೇ ಅಳವಡಿಸಲಾಗುತಿತ್ತು. ಇದನ್ನು ಆಸ್ಪತ್ರೆಯ ವೈದ್ಯರು ಹಾಗೂ ಲ್ಯಾಬ್ ಟೆಕ್ನಿಷಿಯನ್ ಪುಟ್ಟಸ್ವಾಮಿಗೌಡ ವಿರೋಧಿಸಿದ್ದರು. ಇದರಿಂದ ವೈದ್ಯರ ಸಭೆ ದಿನದಂದು ಪುಟ್ಟಸ್ವಾಮಿಗೌಡರನ್ನ ಕರೆದು ಅಮರ್‌ನಾಥ್‌ ಧಮ್ಕಿ ಹಾಕಿದ್ದಾರೆ.

    ನಾನು ಅರೆಸ್ಟ್ ಆಗಿ 10 ದಿನ ಪರಪ್ಪನ ಅಗ್ರಹಾರದಲ್ಲಿ ಇದ್ದು, ಜೈಲೂಟ ತಿಂದು ಬಂದವನು. ಒಂದು ಮರ್ಡರ್ ಮಾಡಿದರೂ ಅಷ್ಟೇ 10 ಮರ್ಡರ್ ಮಾಡಿದರೂ ಅಷ್ಟೇ ನಾನು ಏನು, ನನ್ನ ಹಿನ್ನೆಲೆ ಏನು ಅಂತ ತಿಳ್ಕೊಳ್ಳಿ. ನನ್ನನ್ನ ಯಾರೂ ಕೆಣಕಬೇಡಿ ಎಂದು ಡಾಕ್ಟರ್ ಗಳ ಮುಂದೆಯೇ ರೌಡಿಗಳ ರೀತಿ ಲ್ಯಾಬ್ ಟೆಕ್ನಿಷಿಯನ್ ಗೆ ಅವಾಜ್ ಹಾಕಿದ್ದಾರೆ. ಈ ದೃಶ್ಯವನ್ನು ಕೆಲವರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು, ಸದ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ನನಗೆ ಡಿಸ್ಮಿಸ್, ಸಸ್ಪೆನ್ಸನ್ ಅನ್ನೋದು ಪುಟ್ಕೋಸಿ. ಜೈಲಿಗೆ ಹೋಗಿ ಬಂದವನಿಗೆ ಇದೆಲ್ಲ ಯಾವ ಲೆಕ್ಕ. ನಾನ್ ಏನೂ, ನನ್ನ ಹಿನ್ನೆಲೆ ಏನೂ ಅನ್ನೊದನ್ನ ತಿಳ್ಕೋಬೇಕಿತ್ತು. ಡಿಎಚ್‍ಓ ಪೊಸ್ಟ್ ಕತ್ತೆ ಬಾಲ, ಇವತ್ತೇ ಬೇಕಾದರೆ ರಿಸೈನ್ ಮಾಡುತ್ತೇನೆ ಎಂದು 60 ಜನ ಡಾಕ್ಟರ್ ಮುಂದೆಯೇ ಅವಾಜ್ ಹಾಕಿದ್ದಾರೆ.

    https://www.youtube.com/watch?v=qa6yVMlKBhQ

  • ಸಚಿವ ರೇವಣ್ಣಗೆ ಜೆಡಿಎಸ್ ಶಾಸಕ ಅವಾಜ್..!

    ಸಚಿವ ರೇವಣ್ಣಗೆ ಜೆಡಿಎಸ್ ಶಾಸಕ ಅವಾಜ್..!

    ಹಾಸನ: ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರಿಗೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ಇಂದು ಅವಾಜ್ ಹಾಕಿದ್ದಾರೆ.

    ಹಾಸನ ಕೆಡಿಪಿ ಸಭೆಯಲ್ಲಿ ರೇವಣ್ಣ ಹಾಗೂ ಶಿವಲಿಂಗೇ ಗೌಡ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಕುಡಿಯುವ ನೀರಿನ ಟ್ಯಾಂಕರ್ ಗೆ ಬಿಲ್ ಮಂಜೂರು ವಿಚಾರದಲ್ಲಿ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ.

    ಬಿಲ್ ಮಂಜೂರಿಗೂ ಮುನ್ನ ರೇವಣ್ಣ ಅವರು ಥರ್ಡ್ ಪಾರ್ಟಿ ವಿಚಾರಣೆ ಮಾಡಿ ಟ್ಯಾಂಕರ್ ಗಳಲ್ಲಿ ನೀರು ಕೊಟ್ಟು ಬಿಲ್ ಮಾಡಬೇಡಿ. ಬೋರ್ ವೆಲ್ ತೆಗೆಸಿ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ಶಾಸಕರು, ಅಣ್ಣೋ.. ನನ್ನ ಮೇಲೆ ಅನುಮಾನ ಪಡುತ್ತಿದ್ದೀರಾ. ನಾನು 227 ಹಳ್ಳಿಗಳೀಗೆ ಟ್ಯಾಂಕರ್ ಗಳಲ್ಲಿ ನೀರು ಕೊಡಿಸಿದ್ದೀನಿ ಎಂದು ಯಾವನೋ ಹೇಳಿದ್ದು ಎಂದು ಏರು ಧ್ವನಿಯಲ್ಲೇ ಪ್ರಶ್ನಿಸಿದ್ದಾರೆ.

    ಅಲ್ಲದೆ ನಾನು ಒಂದು ರೂಪಾಯಿ ಹಣ ದುರುಪಯೋಗ ಮಾಡಿಲ್ಲ. ಅಧಿಕಾರಿಗಳೇನು ದನ ಕಾಯೋಕೆ ಹೋಗಿದ್ದೀರಾ. ಎಂದು ಮತ್ತೆ ಪ್ರಶ್ನಿಸಿದ ಶಾಸಕರು ಯಾರು ಹಣ ದುರುಪಯೋಗ ಮಾಡಿದ್ದಾರೆ ಅವರನ್ನು ಸೆಂಟ್ರಲ್ ಜೈಲಿಗೆ ಕಳುಹಿಸಿ ಎಂದು ಅವಾಜ್ ಹಾಕಿದ್ದಾರೆ. ಶಿವಲಿಂಗೇಗೌಡ ಮಾತಿಗೆ ಸಚಿವ ರೇವಣ್ಣ ಅವರು ಒಂದು ಬಾರಿ ತಬ್ಬಿಬ್ಬಾಗಿದ್ದಾರೆ. ಬಳಿಕ ಆಯ್ತು ಶಿವಲಿಂಗಣ್ಣ ಪಾಪ ನಾಲ್ಕು ವರ್ಷದಿಂದ ಕಷ್ಟಪಟ್ಟಿದ್ದಾನೆ ಬಿಲ್ ಕೊಡಿ ಎಂದು ಅಧಿಕಾರಿಗಳಿಗೆ ರೇವಣ್ಣ ಅವರು ಸೂಚಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅರಣ್ಯ ಅಧಿಕಾರಿಗಳ ಜೊತೆ ಗೂಂಡಾವರ್ತನೆ ತೋರಿದ ಮೂಡಿಗೆರೆ ಶಾಸಕ!

    ಅರಣ್ಯ ಅಧಿಕಾರಿಗಳ ಜೊತೆ ಗೂಂಡಾವರ್ತನೆ ತೋರಿದ ಮೂಡಿಗೆರೆ ಶಾಸಕ!

    ಚಿಕ್ಕಮಗಳೂರು: ಅಧಿಕಾರಿಗಳ ಮೇಲೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಗೂಂಡಾವರ್ತನೆ ತೋರಿಸಿದ್ದು, ಈ ಮೂಲಕ ಹುಲಿ ಉಗುರು ಮಾರಾಟಗಾರರ ಬೆಂಬಲಕ್ಕೆ ಬಿಜೆಪಿ ಶಾಸಕರು ನಿಂತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಅರಣ್ಯ ಅಧಿಕಾರಿಗಳು ಹುಲಿ ಉಗುರು ಮಾರುತ್ತಿದ್ದ ವೆಂಕಟೇಶ್, ರಂಜಿತ್ ಹಾಗೂ ಶಿವಕುಮಾರ್ ಅವರನ್ನು ಬಂಧಿಸಿದ್ದರು. ಇದರಿಂದ ಕೋಪಗೊಂಡು ತನ್ನ ಹಿಂಬಾಲಕರನ್ನ ಬಂಧಿಸಿದಕ್ಕೆ ಶಾಸಕ ಎಂ.ಪಿ ಕುಮಾರಸ್ವಾಮಿ ಫುಲ್ ಗರಂ ಆಗಿ ಅರಣ್ಯಾಧಿಕಾರಿಗಳ ಜೊತೆ ಜಗಳ ಮಾಡಿ ಅವರಿಗೆ ಅವಾಜ್ ಹಾಕಿದ್ದಾರೆ.

    ರಂಪಾಟ ಮಾಡಿಬಿಡುತ್ತೇನೆ. ನನಗೆ ಏನು ಸಮಸ್ಯೆ ಆಗಲ್ಲ. ನನ್ನ ಫೋನ್ ರಿಸೀವ್ ಮಾಡದೇ ಇದ್ದರೆ ಆಫೀಸ್ ಬಾಗಿಲು ಹಾಕಿಸುತ್ತೇನೆ ಎಂದು ಮೂಡಿಗೆರೆ ಅರಣ್ಯ ಇಲಾಖೆ ಕಚೇರಿಯಲ್ಲಿ ಕುಮಾರಸ್ವಾಮಿ ರಂಪಾಟ ಮಾಡಿ ಕಿರುಚಾಟ ಮಾಡಿದ್ದಾರೆ. ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಈಗ ಹರಿದಾಡುತ್ತಿದ್ದು, ಎಂ.ಪಿ.ಕುಮಾರಸ್ವಾಮಿ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ಕೇಳಿ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏಯ್ ಬಾಯಿ ಮುಚ್ಚಿ ಕೂತ್ಕೋ 40 ನಿಮಿಷ ವ್ಯಾ ವ್ಯಾ ಎಂದು ಕಿರುಚೋದು ಸಾಕು- ಟೀಚರ್​ಗೆ ವಿದ್ಯಾರ್ಥಿ ಅವಾಜ್

    ಏಯ್ ಬಾಯಿ ಮುಚ್ಚಿ ಕೂತ್ಕೋ 40 ನಿಮಿಷ ವ್ಯಾ ವ್ಯಾ ಎಂದು ಕಿರುಚೋದು ಸಾಕು- ಟೀಚರ್​ಗೆ ವಿದ್ಯಾರ್ಥಿ ಅವಾಜ್

    ಬೆಂಗಳೂರು: ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿಗೆ ಅವಾಜ್ ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಉತ್ತರ ಕರ್ನಾಟಕ ಭಾಗದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿ ಎಲ್ಲರ ಮುಂದೆ ತನ್ನ ಟೀಚರ್ ಮೇಲೆ ಗೂಂಡಾಗಿರಿ ತೋರಿದ ವಿಡಿಯೋವನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

    ಕ್ಲಾಸ್ ರೂಮಿನಲ್ಲಿ ಶಿಕ್ಷಕಿ ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿ ಏಯ್ ಬಾಯಿ ಮುಚ್ಚಿ ಕೂತ್ಕೋ ನಲವತ್ತು ನಿಮಿಷ ವ್ಯಾ ವ್ಯಾ ಅಂತಾ ಕಿರುಚೋದು ಸಾಕು ಎಂದು ಅವಾಜ್ ಹಾಕಿದ್ದಾನೆ. ಅಲ್ಲದೇ ಸೌಂಡ್ ಜಾಸ್ತಿ ಮಾಡಬೇಡ, ಸೈಲೆಂಟ್ ಆಗಿರು ಎಂದು ಗೂಂಡಾಗಿರಿ ಮಾಡಿದ್ದಾನೆ.

    ವಿದ್ಯಾರ್ಥಿ ತನ್ನ ಶಿಕ್ಷಕಿಗೆ ಅವಾಜ್ ಹಾಕುತ್ತಿದ್ದ ವೇಳೆ ಆತನ ಸಹಪಾಠಿಗಳು ಜೋರಾಗಿ ನಗುತ್ತಿದ್ದರು. ವಿದ್ಯಾರ್ಥಿ ತನ್ನ ಶಿಕ್ಷಕಿಯ ಜೊತೆ ನಡೆದುಕೊಂಡ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಅಲ್ಲದೇ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೂ ವಿಡಿಯೋ ರವಾನಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೂಜೆ ಆಗಿದೆ, ಇನ್ನು ಅಡ್ಡ ಬಂದ್ರೆ ಕೈ-ಕಾಲು ಕಡೀತಿನಿ- ಅಧಿಕಾರಿಗೆ ಶಾಸಕ ಅವಾಜ್

    ಪೂಜೆ ಆಗಿದೆ, ಇನ್ನು ಅಡ್ಡ ಬಂದ್ರೆ ಕೈ-ಕಾಲು ಕಡೀತಿನಿ- ಅಧಿಕಾರಿಗೆ ಶಾಸಕ ಅವಾಜ್

    ಶಿವಮೊಗ್ಗ: ಅರಣ್ಯಧಿಕಾರಿಗೆ ಕಾಂಗ್ರೆಸ್ ಶಾಸಕರೊಬ್ಬರು ಅವಾಜ್ ಹಾಕಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ. ಫೋನ್ ಮೂಲಕ ಅರಣ್ಯಾಧಿಕಾರಿ ಸೀನಪ್ಪ ಶೆಟ್ಟಿಗೆ ಭದ್ರಾವತಿ ಕ್ಷೇತ್ರದ ಶಾಸಕ ಸಂಗಮೇಶ್ ಅವಾಜ್ ಹಾಕಿದ್ದಾರೆ.

    ಶಿವಮೊಗ್ಗ ಭದ್ರಾವತಿ ತಾಲೂಕು ಕೊಡ್ಲಿಗೇರೆ ಸಮೀಪ ಅರಣ್ಯದಲ್ಲಿ ದೇವಾಸ್ಥಾನ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಈ ಬೆದರಿಕೆ ಹಾಕಲಾಗಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಅರಣ್ಯ ಸ್ಥಳವನ್ನು ಆಕ್ರಮಿಸಿ ದೇವಾಸ್ಥಾನ ನಿರ್ಮಾಣ ಮಾಡದಂತೆ ಅರಣ್ಯಾಧಿಕಾರಿ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದಾರೆ. ಹೀಗಾಗಿ ದೇವಾಸ್ಥಾನ ವಿಚಾರಕ್ಕೆ ಬರದಂತೆ ಸಂಗಮೇಶ್ ಬೆದರಿಕೆ ಹಾಕಿದ್ದಾರೆ.

    ಅವಾಜ್ ಏನು..?
    ಡಿಎಫ್‍ಈ ಓಕೆ ಅಂತಿದ್ದಾರೆ. ನೀನು ಓಕೆ ಅಂತೀದ್ದಿಯಾ. ಮತ್ಯಾಕೇ ನೋಟಿಸ್ ಕೊಟ್ಟೆ..? ಒಂದು ಚದರ ಜಾಗವನ್ನಷ್ಟೇ ಬಳಕೆ ಮಾಡುತ್ತಾರೆ. ಅರ್ಜಿ ಸಹ ಕೊಟ್ಟಿದ್ದಾರೆ. ಅಯಿತು ಇವತ್ತು ಪೂಜೆ ಮಾಡಿದ್ದೇವೆ. ಇನ್ಮೇಲೆ ಇಲ್ಲಿ ಯಾರು ಅಡ್ಡಪಡಿಸಬಾರದು. ಅಡ್ಡಬಂದರೆ ಕೈ-ಕಾಲು ಕಡೀತಿನಿ. ನೀವು ಹಂಗ್ ಹೇಳಿದರೆ ಕೇಳುವುದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟಚ್ ಮಾಡ್ಬೇಡ: ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಿಂದ ಬಿಜೆಪಿ ಶಾಸಕನಿಗೆ ಅವಾಜ್

    ಟಚ್ ಮಾಡ್ಬೇಡ: ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಿಂದ ಬಿಜೆಪಿ ಶಾಸಕನಿಗೆ ಅವಾಜ್

    ಹುಬ್ಬಳ್ಳಿ: ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್, ಬಿಜೆಪಿ ಶಾಸಕ ಅರವಿಂದ ಬೆಲ್ಲದ್‍ಗೆ ಆವಾಜ್ ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಇಎಸ್‍ಐ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಕಾರ್ಯಕ್ರಮದಲ್ಲಿ ಆದಿತ್ಯ ಬಿಸ್ವಾಸ್ ಶಾಸಕರಿಗೆ ಅವಾಜ್ ಹಾಕಿದ್ದಾರೆ. ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಬರ್ತಾಯಿದ್ದಾರೆ ಸೈಡ್ ಸರಿಯುವಂತೆ ಬಿಜೆಪಿ ಶಾಸಕ ಅರವಿಂದ ಬೆಲ್ಲದವರು ಆದಿತ್ಯ ಬಿಸ್ವಾಸ್ ಅವರಿಗೆ ಭುಜ ಹಿಡಿದು ಸರಿಸಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಬಿಸ್ವಾಸ್ ಟಚ್ ಮಾಡಬೇಡ ಅಂತ ಏರು ಧ್ವನಿಯಲ್ಲಿ ಹೇಳಿದ್ದಾರೆ. ಆಗ ಕಾರ್ಮಿಕ ಸಚಿವ ವೆಂಕಟರಮಣಪ್ಪ ಅರವಿಂದ ಬೆಲ್ಲದ್ ಅವರಿಗೆ ಸಮಾಧಾನ ಮಾಡಿದರು. ಈ ವೇಳೆ ಸಂಸದ ಪ್ರಲ್ಹಾದ ಜೋಶಿ ಸೇರಿದಂತೆ ಹಲವು ಗಣ್ಯವ್ಯಕ್ತಿಗಳು ಇದ್ದರು.

    ಇದೇ ವೇಳೆ ಹುಬ್ಬಳ್ಳಿಯಲ್ಲಿ ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವ ಸಂತೋಷ್‍ಕುಮಾರ್ ಗಂಗ್ವಾರ್ ಅವರು ಕೇಂದ್ರ ಸರ್ಕಾರ ಸಕಾರಾತ್ಮಕ ಮಾರ್ಗದಲ್ಲಿ ಕೆಲಸ ಮಾಡುತ್ತಿದೆ. ಅನಾರೋಗ್ಯ ಪೀಡಿತರಿಗೆ ಸೂಕ್ತ ಸಂದರ್ಭದಲ್ಲಿ ಔಷಧೋಪಚಾರ ಸಿಗಬೇಕು. ರಾಜ್ಯ ಸರ್ಕಾರ ಔಷಧ ಮತ್ತು ಸೌಲಭ್ಯಗಳ ಕೊರತೆಯಾದರೆ ಕೂಡಲೇ ಕೇಂದ್ರದ ಗಮನಕ್ಕೆ ತರಬೇಕು. ನಾವು ಕಾರ್ಮಿಕರ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದೇವೆ. ಕಾರ್ಮಿಕರ ಹಿತಕ್ಕಾಗಿ ನಾಲ್ಕು ಕೋಡ್‍ಗಳ ಸಮಗ್ರ ಕಾನೂನು ಜಾರಿಗೆ ತರಲಾಗುತ್ತಿದೆ. ದೇಶದ ನಲವತ್ತು ಕೋಟಿ ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದು ಇಎಸ್‍ಐ ಆಸ್ಪತ್ರೆಯ ಶಂಕುಸ್ಥಾಪನೆ ಸಮಾರಂಭದಲ್ಲಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಮ್ಮ ತಂಟೆಗೆ ಬಂದ್ರೆ ನಿನ್ ಕಥೆ ಅಷ್ಟೆ – ಸುರೇಶ್‍ಗೌಡಗೆ ಚನ್ನಿಗಪ್ಪ ಅವಾಜ್

    ನಮ್ಮ ತಂಟೆಗೆ ಬಂದ್ರೆ ನಿನ್ ಕಥೆ ಅಷ್ಟೆ – ಸುರೇಶ್‍ಗೌಡಗೆ ಚನ್ನಿಗಪ್ಪ ಅವಾಜ್

    ತುಮಕೂರು: ಮಾಜಿ ಸಚಿವ ಚನ್ನಿಗಪ್ಪ ಅವರು ಪರಾಜಿತ ಅಭ್ಯರ್ಥಿ ಸುರೇಶ್ ಗೌಡಗೆ ಆವಾಜ್ ಹಾಕಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಎಲೆಕ್ಷನ್‍ನಲ್ಲಿ ಸೋತಿದ್ದಿಯಾ. ಮುಚ್ಕೊಂಡು ನಡಿಯಲೋ ಕಂಡಿದ್ದೀನಿ. ಏಯ್ ಹುಷಾರ್. ನಮ್ಮ ತಂಟೆಗೆ ಬಂದರೆ ಬಂದ್ರೆ ಅಷ್ಟೇ ನಿನ್ ಕಥೆ ಅಂತ ಧಮ್ಕಿ ಹಾಕಿದ್ದಾರೆ. ಇದೀಗ ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.

    ಸುರೇಶ್ ಗೌಡರನ್ನ ಮೆಂಟಲ್ ಸುರೇಶ್ ಗೌಡ ಅಂತಾರೇ. ಸುರೇಶ್ ಗೌಡನಂತ ದಬ್ಬಾಳಿಕೆ ನಾನೂ ಮಾಡಿಲ್ಲ. ಯೂನಿವರ್ಸಿಟಿಯಲ್ಲಿ ನಕಲಿ ಅಂಕಪಟ್ಟಿ, ನಕಲಿ ಟಿಸಿ ಮಾರಾಟ ಮಾಡಿಸಿದವರು. ಸರ್ಕಾರಿ ಮೈದಾನಕ್ಕೆ ಬರ್ಲಿ. ನಾನು ಮಾತಾಡ್ತೆನೆ, ಅವನು ಮಾತಾಡಲಿ. ಅವನ ತಾಕತ್ ಪ್ರದರ್ಶನ ಮಾಡಲಿ ಅಂತ ಸುರೇಶ್‍ಗೌಡಗೆ ಚೆನ್ನಿಗಪ್ಪ ಓಪನ್ ಚಾಲೆಂಜ್ ಹಾಕಿದ್ದಾರೆ.