Tag: ಅರ್ಮಾನ್ ಮಲಿಕ್

  • ಹಸೆಮಣೆ ಏರಿದ ‘ಸರಿಯಾಗಿ ನೆನಪಿದೆ ನನಗೆ’ ಗಾಯಕ Armaan Malik

    ಹಸೆಮಣೆ ಏರಿದ ‘ಸರಿಯಾಗಿ ನೆನಪಿದೆ ನನಗೆ’ ಗಾಯಕ Armaan Malik

    ‘ಮುಂಗಾರು ಮಳೆ 2′ (Mungarumale 2) ಚಿತ್ರದ ‘ಸರಿಯಾಗಿ ನೆನಪಿದೆ ನನಗೆ’ ಖ್ಯಾತಿಯ ಗಾಯಕ ಅರ್ಮಾನ್ ಮಲಿಕ್ (Armaan Malik) ಇಂದು (ಜ.2) ಹಸೆಮಣೆ ಏರಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ಗಾಯಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಕುಟುಂಬಸ್ಥರ ಸಮ್ಮುಖದಲ್ಲಿ ಬಹುಕಾಲದ ಗೆಳತಿ ಆಶ್ನಾ ಶ್ರಾಫ್ (Aashna Shroff) ಜೊತೆ ಅರ್ಮಾನ್ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಗುಟ್ಟಾಗಿ ಮದುವೆಯಾಗುವ ಮೂಲಕ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ. ಆಶ್ನಾ ಜೊತೆಗಿನ ಫೋಟೋ ಶೇರ್ ಮಾಡಿ ‘ನೀನೇ ನನ್ನ ಮನೆ’ ಎಂದು ಗಾಯಕ ಅಡಿಬರಹ ನೀಡಿದ್ದಾರೆ.

     

    View this post on Instagram

     

    A post shared by ARMAAN MALIK (@armaanmalik)

    ಆಶ್ನಾ ಕೇಸರಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ರೆ, ಅರ್ಮಾನ್‌ ಲೈಟ್‌ ಬಣ್ಣ ಶೆರ್ವಾನಿಯಲ್ಲಿ ಧರಿಸಿದ್ದಾರೆ. ಖುಷಿ ಖುಷಿಯಾಗಿ ಹೊಸ ಬಾಳಿಗೆ ಕಾಲಿಟ್ಟಿರುವ ಅರ್ಮಾನ್ ದಂಪತಿಯ ಫೋಟೋ ನೋಡಿ ಫ್ಯಾನ್ಸ್, ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ. ಅಂದಹಾಗೆ, ಕಳೆದ ವರ್ಷ ಆಶ್ನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ರಿಲೇಷನ್‌ಶಿಪ್‌ನಲ್ಲಿ ಇರೋದಾಗಿ ಸಿಂಗರ್ ರಿವೀಲ್ ಮಾಡಿದರು.

    ಇನ್ನೂ ಬಹುಭಾಷೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿರುವ ಗಾಯಕ ಅರ್ಮಾನ್ ಕನ್ನಡದಲ್ಲಿ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಡಿದ್ದಾರೆ.

  • ಗೆಳತಿಗೆ ರಿಂಗ್ ಹಾಕಿ ಲಿಪ್‌ಲಾಕ್ ಮಾಡಿದ ಸಿಂಗರ್ ಅರ್ಮಾನ್ ಮಲಿಕ್

    ಗೆಳತಿಗೆ ರಿಂಗ್ ಹಾಕಿ ಲಿಪ್‌ಲಾಕ್ ಮಾಡಿದ ಸಿಂಗರ್ ಅರ್ಮಾನ್ ಮಲಿಕ್

    ‘ಮುಂಗಾರು ಮಳೆ 2′ ಚಿತ್ರದ ‘ಸರಿಯಾಗಿ ನೆನಪಿದೆ ನನಗೆ’ ಎಂದು ಹಾಡಿನ ಮೂಲಕ ಮೋಡಿ ಮಾಡಿರುವ ಅರ್ಮಾನ್ ಮಲಿಕ್ (Armaan Mallik) ಮತ್ತೆ ಸುದ್ದಿಯಲ್ಲಿದ್ದಾರೆ. ಗೆಳತಿ ಆಶ್ನಾಗೆ (Aashna Shroff) ರಿಂಗ್ ಹಾಕಿ ಲಿಪ್‌ಗೆ ಕಿಸ್ ಕೊಟ್ಟಿದ್ದಾರೆ. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    ಅಫಿಷಿಯಲ್ ಆಗಿ ರಿಂಗ್ ತೊಡಿಸಿರುವ ಬಗ್ಗೆ ಸಿಂಗರ್ ಅರ್ಮಾನ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅದರಲ್ಲಿ ಭಾವಿ ಪತ್ನಿಗೆ ರಿಂಗ್ ಹಾಕಿ, ಸಿಹಿ ಮುತ್ತು ಕೊಟ್ಟಿರುವ ಎಂಗೇಜ್‌ಮೆಂಟ್ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹೊಸ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ:‘ಮಗ್ಗಿ ಪುಸ್ತಕ’ದ ಫಸ್ಟ್ ಲುಕ್ ಲಾಂಚ್ ಮಾಡಿದ ಯದುವೀರ ಒಡೆಯರ್

    ಕೆಲ ತಿಂಗಳುಗಳ ಹಿಂದೆ ಗೆಳತಿ ಆಶ್ನಾಗೆ ಪ್ರಪೋಸ್ ಮಾಡುತ್ತಿರುವ ಫೋಟೋಗಳನ್ನ ಶೇರ್ ಮಾಡಿ ರಿಲೇಷನ್‌ಶಿಪ್ ಬಗ್ಗೆ ಅರ್ಮಾನ್ ತಿಳಿಸಿದ್ದರು. ಮೂಲಗಳ ಪ್ರಕಾರ, ಸದ್ಯದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಕದ್ದು ಮುಚ್ಚಿ ನಿಶ್ಚಿತಾರ್ಥ: ದೀಪಿಕಾ-ರಣವೀರ್ ಸ್ಪೋಟಕ ಹೇಳಿಕೆ

    ಅರ್ಮಾನ್ ಮಲಿಕ್ ಬಹುಭಾಷೆಗಳಲ್ಲಿ ತಮ್ಮ ಗಾಯನದ ಮೂಲಕ ಗಮನ ಸೆಳೆದಿದ್ದಾರೆ. ಮುಂಗಾರು ಮಳೆ 2, ಸಿದ್ಧಾರ್ಥ್, ಯುವರತ್ನ, ಬಾನದಾರಿಯಲಿ, ಸೇರಿದಂತೆ ಹಲವು ಸಿನಿಮಾಗಳಿಗೆ ಹಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಹುಕಾಲದ ಗೆಳತಿ ಜೊತೆ ಎಂಗೇಜ್‌ ಆದ ಸಿಂಗರ್ ಅರ್ಮಾನ್ ಮಲಿಕ್

    ಬಹುಕಾಲದ ಗೆಳತಿ ಜೊತೆ ಎಂಗೇಜ್‌ ಆದ ಸಿಂಗರ್ ಅರ್ಮಾನ್ ಮಲಿಕ್

    ನ್ನಡ ಮತ್ತು ಬಹುಭಾಷೆಗಳಲ್ಲಿ ತಮ್ಮ ಸುಮಧುರ ಹಾಡಿನ ಮೂಲಕ ಮೋಡಿ ಮಾಡ್ತಿರುವ ಸಿಂಗರ್ ಅರ್ಮಾನ್ ಮಲಿಕ್ (Armaan Malik) ಎಂಗೇಜ್ ಆಗಿದ್ದಾರೆ. ಬಹುಕಾಲದ ಗೆಳತಿ ಆಶ್ನಾ ಶ್ರಾಫ್ (Aashna Shroff) ಜೊತೆ ಇಂದು (ಆಗಸ್ಟ್ 28) ಎಂಗೇಜ್‌ಮೆಂಟ್ (Engagement)  ಮಾಡಿಕೊಂಡಿದ್ದಾರೆ. ಈ ಕುರಿತ ಫೋಟೋಗಳನ್ನ ಸಿಂಗರ್ ಅರ್ಮಾನ್ ಹಂಚಿಕೊಂಡಿದ್ದಾರೆ.

    ಸಾಕಷ್ಟು ಸಮಯದಿಂದ ಆಶ್ನಾ- ಅರ್ಮಾನ್ ಡೇಟಿಂಗ್ ಮಾಡುತ್ತಿದ್ದರು. ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಈ ಜೋಡಿ ಎಂಗೇಜ್ ಆಗಿದ್ದಾರೆ. ಸೋಷಿಯಲ್‌ ಮೀಡಿಯಾ ಸ್ಟಾರ್‌ ಆಶ್ನಾ ಜೊತೆಗೆ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಟ್ರೆಂಡಿಂಗ್ ಬಗ್ಗೆಯೇ ಹಾಡು ಮಾಡಿದ ‘ಸೂತ್ರಧಾರಿ’ ಚಂದನ್ ಶೆಟ್ಟಿ

    ಗೆಳತಿ ಆಶ್ನಾಗೆ (Aashna Shroff) ಮಂಡಿಯೂರಿ ಬೆರಳಿಗೆ ಉಂಗುರ ತೊಡಿಸುತ್ತಿರುವ ಅರ್ಮಾನ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಈ ಬಗ್ಗೆ ಸ್ವತಃ ಸಿಂಗರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಎಂಗೇಜ್‌ಮೆಂಟ್ ಫೋಟೋ ಶೇರ್ ಮಾಡುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ.

    ಮುಂಗಾರು ಮಳೆ 2 (Mungaru Male 2) ಚಿತ್ರದ ಸರಿಯಾಗಿ ನೆನಪಿದೆ ನನಗೆ ಸಾಂಗ್, ಚಕ್ರವರ್ತಿ ಚಿತ್ರದ ಒಂದು ಮಳೆಬಿಲ್ಲು, ಎಕ್ ಲವ್ ಯಾ ಚಿತ್ರದ ಯಾರೇ ಯಾರೇ ಸಾಂಗ್ ಸೇರಿದಂತೆ ಕನ್ನಡದ ಸಾಕಷ್ಟು ಹಾಡುಗಳಿಗೆ ಅರ್ಮಾನ್ ಧ್ವನಿಯಾಗಿದ್ದಾರೆ. ಹಲವು ಸೂಪರ್ ಹಿಟ್ ಸಾಂಗ್‌ಗಳನ್ನ ಅರ್ಮಾನ್ ಮಲಿಕ್ ನೀಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏಕಕಾಲಕ್ಕೆ ಯುಟ್ಯೂಬರ್ ಅರ್ಮಾನ್ ಮಲಿಕ್ ಪತ್ನಿಯರು ಪ್ರೆಗ್ನೆಂಟ್

    ಏಕಕಾಲಕ್ಕೆ ಯುಟ್ಯೂಬರ್ ಅರ್ಮಾನ್ ಮಲಿಕ್ ಪತ್ನಿಯರು ಪ್ರೆಗ್ನೆಂಟ್

    ಗೆ ಬಗೆಯ ವೀಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿರುವ ಖ್ಯಾತ ಯುಟ್ಯೂಬರ್ ಅರ್ಮಾನ್ ಮಲ್ಲಿಕ್ (Armaan Malik) ಇದೀಗ ತಮ್ಮ ಖಾಸಗಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅರ್ಮಾನ್ ಮಲಿಕ್ ಅವರ ಇಬ್ಬರೂ ಪತ್ನಿಯರು ಏಕಕಾಲಕ್ಕೆ ಗರ್ಭ ಧರಿಸಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅರ್ಮಾನ್ ಟ್ರೋಲ್ ಆಗಿತ್ತಿದ್ದಾರೆ.

     

    View this post on Instagram

     

    A post shared by Armaan Malik (@armaan__malik9)

    ಯುಟ್ಯೂಬ್‌ನಲ್ಲಿ (Youtuber) ಸೆನ್ಸೆಷನ್ ಕ್ರಿಯೆಟ್ ಮಾಡಿರುವ ಅರ್ಮಾನ್ ಮಲಿಕ್ ತಮ್ಮ ಖಾಸಗಿ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚೆಗೆ ಅರ್ಮಾನ್ ಇಬ್ಬರೂ ಪತ್ನಿಯರೊಂದಿಗೆ ಇರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು. ಈ ಮೂಲಕ ತಮ್ಮ ಇಬ್ಬರೂ ಪತ್ನಿಯರಾದ ಪಾಯಲ್ ಮತ್ತು ಕೃತಿಕಾ ಗರ್ಭಿಣಿಯಾಗಿರುವ ವಿಚಾರವನ್ನ ಹಂಚಿಕೊಂಡಿದ್ದರು. ಬೇಬಿ ಬಂಪ್ ಫೋಟೋವನ್ನ ಹಂಚಿಕೊಂಡಿದ್ದರು. ಇದೀಗ ಈ ಪೋಸ್ಟ್ ನೋಡಿ ನೆಟ್ಟಿಗರು, ನಿಮಗೆ ನಾಚಿಕೆಯಾಗಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅರ್ಮಾನ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ವೇದಿಕೆಯಲ್ಲಿ ಸಾನ್ಯಗೆ ಖಡಕ್ ಉತ್ತರ ಕೊಟ್ಟ ಕಿಚ್ಚ

     

    View this post on Instagram

     

    A post shared by Armaan Malik (@armaan__malik9)

    ಮೂವರು ಅದು ಹೇಗೆ ಒಟ್ಟಿಗೆ ವಾಸಿಸುತ್ತಿದ್ದೀರಾ. ನಿಮಗೆ ನಾಚಿಗೆಯಾಗುವುದಿಲ್ವಾ ಎಂದರೆ, ಇನ್ನೂ ಕೆಲವರು ಅರ್ಮಾನ್‌ಗೆ ಇದು ಟ್ಯಾಲೆಂಟ್ ಗುರು ಎನ್ನುತ್ತಿದ್ದಾರೆ. ಇಬ್ಬರೂ ಏಕಕಾಲಕ್ಕೆ ಪ್ರೆಗ್ನೆಂಟ್ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಅರ್ಮಾನ್ ಅವರಿಗೆ ಈಗಾಗಲೇ ಚಿರಾಯು ಎಂಬ ಮಗನಿದ್ದಾನೆ. ಇದನ್ನೆಲ್ಲ ಅರಿತಿರೋ ಟ್ರೋಲಿಗರ ಕೆಂಗಣ್ಣಿಗೆ ಅರ್ಮಾನ್ ಗುರಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿರಿಯ ಗಾಯಕಿ ಅನುರಾಧಾ ಪುತ್ರ ಆದಿತ್ಯ ಪೌಡ್ವಾಲ್ ಇನ್ನಿಲ್ಲ- ಶಂಕರ್ ಮಹದೇವನ್ ಮಾಹಿತಿ

    ಹಿರಿಯ ಗಾಯಕಿ ಅನುರಾಧಾ ಪುತ್ರ ಆದಿತ್ಯ ಪೌಡ್ವಾಲ್ ಇನ್ನಿಲ್ಲ- ಶಂಕರ್ ಮಹದೇವನ್ ಮಾಹಿತಿ

    ನವದೆಹಲಿ: ಹಿರಿಯ ಗಾಯಕಿ ಅನುರಾಧಾ ಪೌಡ್ವಾಲ್ ಪುತ್ರ ಆದಿತ್ಯ ಪೌಡ್ವಾಲ್(35) ಅವರು ಸಾವನ್ನಪ್ಪಿದ್ದಾರೆ.

    ಈ ಸುದ್ದಿಯನ್ನು ಗಾಯಕ, ಸಂಗೀತ ಸಂಯೋಜಕ ಶಂಕರ್ ಮಹದೇವನ್ ಘೋಷಿಸಿದ್ದು, ತಮ್ಮ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಆದಿತ್ಯ ಫೋಟೋ ಹಾಕಿ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. ಆದಿತ್ಯ ಪೌಡ್ವಾಲ್ ಕಳೆದ ಕೆಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿ ವೈಫಲ್ಯದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆಗೆ ಶಂಕರ್ ಮಹದೇವನ್ ತಿಳಿಸಿದ್ದಾರೆ.

    ನಮ್ಮ ಪ್ರೀತಿಯ ಆದಿತ್ಯ ಪೌಡ್ವಲ್ ಇನ್ನಿಲ್ಲ ಎಂಬ ಈ ಸುದ್ದಿ ಕೇಳಿ ತುಂಬಾ ಘಾಸಿಯಾಯಿತು. ಅತ್ಯದ್ಭುತ ಸಂಗೀತಗಾರನಾಗಿದ್ದ. ಹಾಸ್ಯ ಪ್ರಜ್ಞೆ ಹೊಂದಿದ ಅತ್ಯದ್ಭುತ ಮನುಷ್ಯ. ಹಲವು ಪ್ರಾಜೆಕ್ಟ್ ಗಳಲ್ಲಿ ನನ್ನೊಂದಿಗೆ ಜೊತೆಯಾಗಿದ್ದ. ಇದೀಗ ಇಲ್ಲವಾಗಿದ್ದಾನೆ. ಅವರ ಕುಟುಂಬಕ್ಕಾಗಿ ಪ್ರಾರ್ಥಿಸುತ್ತೇನೆ. ಲವ್ ಯು ಆದಿತ್ಯ, ವಿಲ್ ಮಿಸ್ ಯು ಎಂದು ಬರೆದುಕೊಂಡಿದ್ದಾರೆ.

    https://www.instagram.com/p/CFBkgO_ntON/?utm_source=ig_embed&utm_campaign=loading

    ಅಲ್ಲದೆ ಈ ಕುರಿತು ಮಾತನಾಡಿರುವ ಶಂಕರ್ ಮಹದೇವನ್, ಆದಿತ್ಯಾ ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು. ಅಲ್ಲದೆ ಉತ್ಸಾಹಬರಿತ ವ್ಯಕ್ತಿಯಾಗಿದ್ದ. ತುಂಬಾ ವರ್ಷಗಳಿಂದ ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ದೈಹಿಕ ಕಾಯಿಲೆಗಳಿದ್ದವು. ಹಲವು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದರು. ನಂತರ ಆರಾಮಾಗಿದ್ದರು. ನಂತರ ಲಗ್ಸ್ ಸಮಸ್ಯೆ ಕಾಣಿಸಿಕೊಂಡಿತು. ಅಲ್ಲದೆ ಅಂತಿಮವಾಗಿ ಕಿಡ್ನಿ ವೈಫಲ್ಯ ಕಾಣಿಸಿಕೊಂಡಿತು. ಕಳೆದ ನಾಲ್ಕು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

    ಅಲ್ಲದೆ ಆದಿತ್ಯ ಪೌಡ್ವಾಲ್ ಅವರ ಸಾವಿಗೆ ಸಂಗೀತ ಲೋಕ ಕಂಬನಿ ಮಿಡಿದಿದ್ದು, ಅರ್ಮಾನ್ ಮಲಿಕ್ ಸೇರಿದಂತೆ ಸಂಗೀತ ದಿಗ್ಗಜರು ಸಂತಾಪ ವ್ಯಕ್ತಪಡಿಸಿದ್ದಾರೆ.

  • ಸ್ಟೇಜ್ ಮೇಲೆ ಹತ್ತದೆ ಪತ್ನಿ ಮುಂದೆ ನಾಚಿ ನೀರಾದ ಧೋನಿ

    ಸ್ಟೇಜ್ ಮೇಲೆ ಹತ್ತದೆ ಪತ್ನಿ ಮುಂದೆ ನಾಚಿ ನೀರಾದ ಧೋನಿ

    ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಧೋನಿ ಅವರು, ಸ್ಟೇಜ್ ಮೇಲೆ ಹತ್ತದೆ ಪತ್ನಿ ಮುಂದೆ ನಾಚಿ ನೀರಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಮೈದಾನಕ್ಕೆ ಇಳಿದಾಗ ಸಾವಿರಾರು ಜನರ ಮುಂದೆ ಸಖತ್ ಕೂಲ್ ಹಾಗೇ ಇರುತ್ತಿದ್ದ ಧೋನಿ, ನಾಚಿಕೆ ಸ್ವಭಾವದವರಂತೂ ಅಲ್ಲವೇ ಅಲ್ಲ. ಕ್ರಿಕೆಟ್ ಗೀಳಿನ ನಡುವೆಯು ಸಿಕ್ಕ ಅವಕಾಶಗಳನ್ನ ಧೋನಿ ಚೆನ್ನಾಗಿ ಬಳಸಿಕೊಳ್ಳುತ್ತಿದ್ದರು. ಮೈಕ್ ಸಿಕ್ಕಾಗ ಹಾಡೇಳಿ ರಂಜಿಸುತ್ತಿದ್ದರು. ಆದರೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸ್ಟೇಜ್ ಹತ್ತೋಕೆ ಧೋನಿ ಸಿಕ್ಕಾಪಟ್ಟೆ ನಾಚಿಕೊಂಡಿದ್ದು ಅಲ್ಲಿದ್ದವರಿಗೆ ಸಖತ್ ಮಜಾ ನೀಡಿದೆ.

    https://www.instagram.com/p/B72Us8NgFrc/?utm_source=ig_embed

    ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಧೋನಿಯನ್ನು ಖ್ಯಾತ ಗಾಯಕ ಅರ್ಮಾನ್ ಮಲಿಕ್ ಸ್ಟೇಜ್ ಮೇಲೆ ಬರುವಂತೆ ಆಹ್ವಾನಿಸಿದರು. ಆದರೆ ಸ್ಟೇಜ್ ಮೆಟ್ಟಿಲು ಹತ್ತಿದ್ದ ಮಾಹಿ, ನಾಚಿಕೊಳ್ಳುತ್ತಾ ಹಿಂದಕ್ಕೆ ಓಡಿ ಬಂದು ನೆರೆದಿದ್ದ ಜನರ ಗುಂಪು ಸೇರಿದರು.

    ಇದನ್ನೆಲ್ಲ ನೋಡುತ್ತಿದ್ದ ಪತ್ನಿ ಸಾಕ್ಷಿ ಧೋನಿಯನ್ನ ಸ್ಟೇಜ್ ಮೇಲೆ ಹೋಗಿ ಎಂದು ಧರ್ಮ ಪತಿಯನ್ನ ಸ್ಟೇಜ್ ಹತ್ತಿಸಿದರು. ನಂತರ ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡಿಗೆ ತಲೆತೂಗಿದ್ದ ಧೋನಿ, ಪತ್ನಿ ಸಾಕ್ಷಿಯನ್ನು ಸ್ಟೇಜ್‍ಗೆ ಕರೆದು ವೇದಿಕೆ ಮೇಲೆ ಬಂದ ಧೋನಿ ದಂಪತಿ ಅರ್ಮಾನ್ ಮಲ್ಲಿಕ್‍ರ ಕೌನ್ ತುಜೇ ಅನ್ನೋ ಹಾಡಿಗೆ ಫಿದಾ ಆದರು. ಈಗ ಧೋನಿ ದಂಪತಿಯ ಈ ವಿಡಿಯೋ ಇಸ್ಟಾಗ್ರಾಮ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

  • ಬದ್ರಿ ವರ್ಸಸ್ ಮಧುಮತಿ: ಮ್ಯೂಸಿಕಲ್ ಹಿಟ್ ಆಗಲಿದೆಯಾ ರೊಮ್ಯಾಂಟಿಕ್ ಆ್ಯಕ್ಷನ್ ಮೂವಿ?

    ಬದ್ರಿ ವರ್ಸಸ್ ಮಧುಮತಿ: ಮ್ಯೂಸಿಕಲ್ ಹಿಟ್ ಆಗಲಿದೆಯಾ ರೊಮ್ಯಾಂಟಿಕ್ ಆ್ಯಕ್ಷನ್ ಮೂವಿ?

    ಬೆಂಗಳೂರು: ಹಾಡುಗಳು ಗೆದ್ದರೆ ಸಿನಿಮಾ ಕೂಡಾ ಗೆದ್ದೇ ಗೆಲ್ಲುತ್ತದೆ ಅನ್ನೋದು ಗಾಂಧಿನಗರದಲ್ಲಿ ಬೇರು ಬಿಟ್ಟಿರೋ ಹಳೇ ನಂಬಿಕೆ. ಅದರ ಬೇರುಗಳು ಗಟ್ಟಿಯಾಗಿವೆ. ಯಾಕೆಂದರೆ ಈ ನಂಬಿಕೆಗೆ ಪುಷ್ಠಿ ನೀಡುವಂಥಾ ಹತ್ತಾರು ಉದಾಹರಣೆಗಳಿದ್ದಾವೆ. ಆ ನಿಟ್ಟಿನಲ್ಲಿ ನೋಡ ಹೋದರೆ ಬದ್ರಿ ವರ್ಸಸ್ ಮಧುಮತಿ ಎಂಬ ರೊಮ್ಯಾಂಟಿಕ್ ಆಕ್ಷನ್ ಚಿತ್ರ ಮ್ಯೂಸಿಕಲ್ ಹಿಟ್ ಆಗೋ ಸ್ಪಷ್ಟ ಲಕ್ಷಣಗಳೇ ಕಾಣಿಸುತ್ತಿವೆ.

    ಈ ಸಿನಿಮಾಗೆ ಎಲ್ವಿನ್ ಜೋಶ್ವಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಜಯಂತ್ ಕಾಯ್ಕಿಣಿಯವರು ಆ ಮೂರೂ ಹಾಡುಗಳನ್ನು ಬರೆದಿದ್ದಾರೆ. ಅವರು ಮೂರು ಹಾಡು ಬರೆದಿದ್ದಾರೆಂಬುದರಲ್ಲಿಯೂ ಒಂದು ಗೆಲುವಿನ ಲಿಂಕ್ ಇದೆ!

    ಸಾಮಾನ್ಯವಾಗಿ ಇಷ್ಟವಾಗದಿದ್ದರೆ ಕಾಯ್ಕಿಣಿಯವರು ಒಂದಕ್ಕಿಂತ ಹೆಚ್ಚು ಹಾಡು ಬರೆಯೋದಿಲ್ಲ. ಒಂದು ಸಿನಿಮಾಗೆ ಒಂದೇ ಹಾಡೆಂಬುದು ಅವರೇ ಕಾಯ್ದುಕೊಂಡು ಬಂದಿರೋ ಸೂತ್ರ. ಆದರೆ ಅವರು ಈ ಹಿಂದೆ ಮುಂಗಾರು ಮಳೆ ಚಿತ್ರಕ್ಕೆ ಮಾತ್ರವೇ ಮೂರು ಹಾಡುಗಳನ್ನು ಬರೆದಿದ್ದರು. ಅದಾದ ನಂತರ ಅವರು ಮೂರು ಹಾಡುಗಳನ್ನು ಬರೆದಿರೋದು ಬದ್ರಿ ವರ್ಸಸ್ ಮಧುಮತಿ ಚಿತ್ರಕ್ಕೆ ಮಾತ್ರ!

    ಜಯಂತ್ ಕಾಯ್ಕಿಣಿಯವರು ಮೂರು ಹಾಡು ಬರೆದಿದ್ದಲ್ಲದೆ ಚಿತ್ರವನ್ನೂ ಮೆಚ್ಚಿಕೊಂಡಿದ್ದಾರಂತೆ. ಈಗ ಈ ಮೂರೂ ಹಾಡುಗಳೂ ಹಿಟ್ ಆಗಿವೆ. ಅರ್ಮಾನ್ ಮಲಿಕ್, ವಿಜಯ್ ಜೇಸುದಾಸ್ ಹಾಡಿರೋ ಹಾಡುಗಳಂತೂ ಲಕ್ಷ ಲಕ್ಷ ವೀಕ್ಷಣೆ ಪಡೆಯುತ್ತಾ ಮುನ್ನುಗ್ಗುತ್ತಿವೆ. ಇದೆಲ್ಲವೂ ಮುಂಗಾರು ಮಳೆ ಚಿತ್ರದ ಅಗಾಧ ಗೆಲುವಿನ ಇತಿಹಾಸ ಮತ್ತೆ ಪುನರಾವರ್ತನೆಯಾಗೋ ಸೂಚನೆಯಂತೆಯೇ ಭಾಸವಾಗುತ್ತಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv