Tag: ಅರ್ಜುನ್ ಗೌಡ

  • ಅಂಬುಲೆನ್ಸ್ ಸೇವೆ ಬಳಿಕ ಗಂಗೆಯಲ್ಲಿ ಅಸ್ಥಿ ವಿಸರ್ಜಿಸಿದ ನಟ ಅರ್ಜುನ್ ಗೌಡ

    ಅಂಬುಲೆನ್ಸ್ ಸೇವೆ ಬಳಿಕ ಗಂಗೆಯಲ್ಲಿ ಅಸ್ಥಿ ವಿಸರ್ಜಿಸಿದ ನಟ ಅರ್ಜುನ್ ಗೌಡ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅರ್ಜುನ್ ಗೌಡ ಕಾಶಿಗೆ ತೆರಳಿ, ಕೊರೊನಾದಿಂದ ಮೃತಪಟ್ಟವರ ಅಸ್ಥಿಯನ್ನು ಗಂಗೆಯಲ್ಲಿ ವಿಸರ್ಜಿಸಿದ್ದಾರೆ.

    ಕೊರೊನಾ 2ನೇ ಅಲೆ ದೇಶದಾದ್ಯಂತ ಅಬ್ಬರಿಸಿದಾಗಿನಿಂದಲೂ ಕೊರೊನಾದಿಂದ ಬಳಲಿರುವ ಜನರಿಗೆ ಸಹಾಯ ಮಾಡಲು ಸ್ವರ್ಯ ಪ್ರೇರಿತವಾಗಿ ಅರ್ಜುನ್ ಗೌಡ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜನರ ಸಹಾಯಕ್ಕೆ ನಿಂತಿರುವ ಅರ್ಜುನ್, ಅಂಬುಲೆನ್ಸ್ ಡ್ರೈವರ್ ಆಗಿ ಆಸ್ಪತ್ರೆಗಳಿಗೆ ಸೋಂಕಿತರನ್ನು ಕರೆದುಕೊಂಡು ಹೋಗುವುದರ ಜೊತೆಗೆ, ಮೃತ ದೇಹಗಳ ಅಂತ್ಯ ಸಂಸ್ಕಾರವನ್ನೂ ಮಾಡುತ್ತಿದ್ದಾರೆ. ಇದೀಗ ಕೊರೊನಾದಿಂದ ಮೃತಪಟ್ಟವರ ಅಸ್ಥಿಯನ್ನು ನಟ ಅರ್ಜುನ್ ಗೌಡಾ ಕಾಶಿಗೆ ತೆರಳಿ ಗಂಗೆಯಲ್ಲಿ ವಿಸರ್ಜಿಸಿದ್ದಾರೆ.

     

    View this post on Instagram

     

    A post shared by Arjun Gowda (@actor_arjungowda_92)

    ಸುಮಾರು 100 ಮಂದಿ ಕೊರೊನಾ ಸೋಂಕಿತರ ದೇಹವನ್ನು ಸಂಸ್ಕಾರ ಮಾಡಿದ್ದ ಅರ್ಜುನ್ ಗೌಡ, ಸದ್ಯ ಅದೇ ಮೃತ ದೇಹಗಳ ಅಸ್ಥಿಯನ್ನೂ ತೆಗೆದುಕೊಂಡು ಕಾಶಿಯ ಗಂಗೆಯಲ್ಲಿ ಬಿಟ್ಟಿದ್ದಾರೆ. ಅದೆಷ್ಟೋ ಮನೆಯವರು ಕೊರೊನಾದಿಂದ ಮೃತರಾದ ತಂದೆ, ತಾಯಿಯರ ದೇಹದ ಬಳಿಯೂ ಬರದಿದ್ದಾಗೆ ಖದ್ದು ಅರ್ಜುನ್ ಅವರು ಮೃತದೇಹಗಳನ್ನು ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಅದೇ ರೀತಿ ಆಮೃತದೇಹಗಳ ಅಸ್ಥಿಯನ್ನು ಗಂಗೆಯಲ್ಲಿ ವಿಸರ್ಜನೆ ಮಾಡಿದ್ದಾರೆ. ಇದನ್ನೂ ಓದಿ:  ಹೆಣ, ಔಷಧಿಯಲ್ಲೂ ಜನರ ದುಡ್ಡನ್ನು ಲೂಟಿ ಹೊಡೆದ ಪಿಕ್ ಪಾಕೆಟ್ ಸರ್ಕಾರ: ಡಿಕೆಶಿ

    ಅರ್ಜುನ್ ಈ ಸೇವೆಗೆ ಪ್ರಾಜೆಕ್ಟ್ ಸ್ಮೈಲ್ ಟ್ರಸ್ಟ್ ಅಂತ ಹೆಸರಿಟ್ಟಿದ್ದು, ರೋಗಿಗಳನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಹಾಗೂ ಮೃತ ದೇಹಗಳ ಅಂತ್ಯಸಂಸ್ಕಾರದ ನೆರವಿನ ಜೊತೆಗೆ ಆಕ್ಸಿಜನ್ ಪೂರೈಸುವಲ್ಲೂ ಅರ್ಜುನ್ ಸಹಾಯ ಮಾಡೋದಾಗಿ ಹೇಳಿದ್ದರು. ಅದರಂತೆ ಕೆಲಸವನ್ನೂ ಮಾಡಿದ್ದಾರೆ. ಅರ್ಜುನ್ ಅವರ ಸೇವೆಗೆ ಹಲವರು ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆಯ ಕಮೆಂಟ್ ಮಾಡುತ್ತಿದ್ದಾರೆ.

  • ಈ ಅಂಬುಲೆನ್ಸ್‌ನಲ್ಲಿ  ಮಕ್ಕಳ ಶವ ಸಾಗಿಸಲು ಇಷ್ಟವಿಲ್ಲ, ದಯವಿಟ್ಟು ಸುರಕ್ಷಿತವಾಗಿರಿ: ನಟ ಅರ್ಜುನ್ ಗೌಡ

    ಈ ಅಂಬುಲೆನ್ಸ್‌ನಲ್ಲಿ ಮಕ್ಕಳ ಶವ ಸಾಗಿಸಲು ಇಷ್ಟವಿಲ್ಲ, ದಯವಿಟ್ಟು ಸುರಕ್ಷಿತವಾಗಿರಿ: ನಟ ಅರ್ಜುನ್ ಗೌಡ

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆಯಿಂದ ರಾಜ್ಯ ಭೀಕರ ಪರಿಣಾಮ ಎಸುರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಮೂರನೇ ಅಲೆಯ ಬಗ್ಗೆ ಸ್ಯಾಂಡಲ್‍ವುಡ್ ನಟ, ಅಂಬುಲೆನ್ಸ್ ಡ್ರೈವರ್ ಅರ್ಜುನ್ ಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

    ಮೂರನೇ ಅಲೆಯ ಬಗ್ಗೆ ಮಾತನಾಡಿರುವ ಅರ್ಜುನ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಈಗಾಗಲೇ ಈ ಅಂಬುಲೆನ್ಸ್ ನಲ್ಲಿ ಹಲವಾರು ಮಂದಿಯ ಶವಗಳನ್ನು ಸಾಗಿಸಿದ್ದೀನಿ. ಆದರೆ ಮುಂದೆ ಮಕ್ಕಳ ಶವವನ್ನು ಸಾಗಿಸಲು ಇಷ್ಟಪಡಲ್ಲ. ಹೀಗಾಗಿ ದಯವಿಟ್ಟು ಮಕ್ಕಳನ್ನು ರಕ್ಷಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವೀಡಿಯೋವನ್ನು ನಟ ಇನ್ಸ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

    ವೀಡಿಯೋದಲ್ಲಿ ಹೇಳಿದ್ದೇನು..?
    ಎಲ್ಲರಿಗೂ ನಮಸ್ಕಾರ ಕೊರೊನಾ ಮೂರನೇ ಅಲೆ ಬರಲಿದೆ. ಅದರಿಂದ ಮಕ್ಕಳಿಗೆ ತೊಂದರೆ ಆಗುತ್ತದೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಮೂರನೇ ಅಲೆ ಬರತ್ತೆ ಎಂದು ಎಲ್ಲರೂ ಕಾಯುತ್ತಾ ಕೂತಿದ್ದೀರಾ ಅನಿಸುತ್ತೆ. ಆದರೆ ಅದು ಈಗಾಗಲೇ ಬಂದಿದೆ. ಅಪ್ಪ-ಅಮ್ಮನಿಗೆ ಕೊರೊನಾ ಬರುತ್ತದೆ. ಈ ವೇಳೆ ಮಕ್ಕಳು ಐಸೋಲೇಟ್ ಆಗ್ತಿದ್ದಾರೆ, ಅದೇ ರೀತಿ ಅಪ್ಪ-ಅಮ್ಮ ನಿಧನರಾಗ್ತಿದ್ದಾರೆ. ಅವರ ಮಕ್ಕಳು ಏನು ಮಾಡ್ತಾರೆ ಎಂದು ಅರ್ಜುನ್ ಪ್ರಶ್ನಿಸಿದ್ದಾರೆ.

    ನನಗೆ ನಿತ್ಯ 25 ಫೋನ್‍ಗಳು ಬರುತ್ತಿವೆ. ನಮಗೆ ಕೊರೊನಾ ಬಂದಿದೆ. ನಮ್ಮ ಮಕ್ಕಳನ್ನು ಎಲ್ಲಾದರೂ ಐಸೋಲೇಷನ್ ಮಾಡಬೇಕು. ಆ ಬಗ್ಗೆ ನಿಮಗೆ ಗೊತ್ತಾ ಎಂದು ಕೇಳುತ್ತಾರೆ. ಇನ್ನೂ ಕೆಲವರು ನಮ್ಮ ಸಂಬಂಧಿಕರಲ್ಲಿ ಅಪ್ಪ-ಅಮ್ಮ ಇಬ್ಬರೂ ಮೃತಪಟ್ಟಿದ್ದಾರೆ. ಅವರ ಮಕ್ಕಳನ್ನು ಅಡಾಪ್ಟ್ ಮಾಡಿಕೊಳ್ಳಬೇಕಿತ್ತು. ಯಾರಾದಾರೂ ಸಿಕ್ತಾರಾ ಎಂದು ಕೇಳುತ್ತಾ ಇದ್ದಾರೆ. ಇದಕ್ಕೆಲ್ಲಾ ಹೊಣೆ ಯಾರು? ಎಂದು ಅರ್ಜುನ್ ಆತಂಕ ವ್ಯಕ್ತಪಡಿಸಿದ್ದಾರೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಒಂದೊಳ್ಳೆಯ ಔಟ್ ಕಮ್ ಬಂದೇ ಬರುತ್ತದೆ ಎಂಬ ನಂಬಿಕೆ ಇದೆ. ಕೊರೊನಾ ಬರೋದಕ್ಕೂ ಮೊದಲೇ ರೆಡಿ ಆಗಿದ್ರೆ ಒಳ್ಳೆಯದು. ಯಾಕಂದ್ರೆ ಈಗಾಗಲೇ ಇದೇ ಗಾಡಿಯಲ್ಲಿ ತುಂಬಾ ಹೆಣಗಳನ್ನು ಸಾಗಿಸಿದ್ದೀನಿ. ಈಗ ಮಕ್ಕಳ ಹೆಣವನ್ನೂ ತೆಗೆದುಕೊಂಡು ಹೋಗಬೇಕು ಎಂದರೆ ನಾನು ಅದನ್ನು ಇಷ್ಟಪಡಲ್ಲ ಎಂದು ಅರ್ಜುನ್ ಗೌಡ ಹೇಳಿದ್ದಾರೆ.

     

    View this post on Instagram

     

    A post shared by Arjun Gowda (@actor_arjungowda_92)

  • ಕೊರೊನಾ ಸೋಂಕಿತರಿಗಾಗಿ ಅಂಬುಲೆನ್ಸ್ ಚಾಲಕನಾದ ‘ಯುವರತ್ನ’ ನಟ ಅರ್ಜುನ್

    ಕೊರೊನಾ ಸೋಂಕಿತರಿಗಾಗಿ ಅಂಬುಲೆನ್ಸ್ ಚಾಲಕನಾದ ‘ಯುವರತ್ನ’ ನಟ ಅರ್ಜುನ್

    ಬೆಂಗಳೂರು: ಮಹಾಮಾರಿ ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಸೆಲೆಬ್ರಿಟಿಗಳು ತಮ್ಮದೇ ಆದ ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಆದರೆ ನಟ ಅರ್ಜುನ್ ಗೌಡ ಮಾತ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

    ಹೌದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಹಾಗೂ ‘ರುಸ್ತುಂ’ ಚಿತ್ರದಲ್ಲಿ ನಟಿಸಿರುವ ಅರ್ಜುನ್ ಗೌಡ ಸದ್ಯ ಅಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಸೋಂಕಿತರಿಗಾಗಿ ಅರ್ಜುನ್ ಗೌಡ ಅಂಬುಲೆನ್ಸ್ ಚಾಲಕರಾಗಿದ್ದಾರೆ.

    ಕೊರೊನಾದಂತಹ ಮಹಾಮಾರಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಅಂಬುಲೆನ್ಸ್, ಬೆಡ್ ಸಿಗದೆ ಜನ ಪರದಾಡುತ್ತಿದ್ದಾರೆ. ಹೀಗಾಗಿ ಕೊರೊನಾ ಸಂಕಷ್ಟದ ಸಮಯದಲ್ಲಿ ಅರ್ಜುನ್ ಗೌಡ ಅವರು ಸಹಾಯ ಕೋರಿದವರ ಪಾಲಿಗೆ ನೆರವಾಗಲು ಮುಂದಾಗಿದ್ದಾರೆ.

    ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಹಾಗೂ ಕೊರೊನಾಗೆ ಬಲಿಯಾದವರ ಮೃತದೇಹಗಳನ್ನು ಸಾಗಿಸುವ ಆಂಬ್ಯುಲೆನ್ಸ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಅರ್ಜುನ್ ಸೇವಾ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ಸಂಬಂಧ ಪ್ರತಿಕ್ರಿಯಿಸಿರುವ ಅರ್ಜುನ್, ನಾನು ಈಗಾಗಲೇ ಹಲವಾರು ಮಂದಿಯ ಅಂತ್ಯಕ್ರಿಯ ಮಾಡುವ ಮೂಲಕ ಸಹಾಯ ಮಾಡಿದ್ದೇನೆ. ಅಗತ್ಯವಿರುವವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ. ಇತ್ತೀಚೆಗೆ ಕೆಂಗೇರಿಯಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲೆಮದು ವೈಟ್ ಫೀಲ್ಡ್ ಗೆ ಕರೆದುಕೊಂಡು ಹೋಗಿದ್ದೆ. ಸದ್ಯದ ಪರಿಸ್ಥಿತಿ ತುಂಬಾ ಹದಗೆಟ್ಟಿರುವ ಕಾರಣ ನನ್ನ ಈ ಸೇವೆಯನ್ನು ಎರಡು ತಿಂಗಳ ಕಾಲು ಮುಂದುವರಿಸುಲು ನಿರ್ಧರಿಸಿರುವುದಾಗಿ ಅರ್ಜುನ್ ಹೇಳಿದ್ದಾರೆ.

    ಒಟ್ಟಿನಲ್ಲಿ ಕಳೆದ ಬಾರಿ ಲಾಕ್‍ಡೌನ್ ಆಗಿದ್ದಾಗ ಹಲವು ಸ್ಟಾರ್ ನಟರು ಸಂಕಷ್ಟಕ್ಕೀಡಾದವರಿಗೆ ಊಟ, ಆಹಾರ ಕಿಟ್ ಒದಗಿಸಿದ್ದರು. ನಟ ದಿಗಂತ್ ಬೈಕ್ ನಲ್ಲಿ ಡೆಲಿವರಿ ಬಾಯ್ ರೀತಿ ಔಷಧಗಳನ್ನು ಹೋಂ ಡೆಲಿವರಿ ಮಾಡುವ ಮೂಲಕ ಗಮನ ಸೆಳೆದಿದ್ದರು.