Tag: ಅರ್ಚಕರು

  • ಚಂದ್ರಗ್ರಹಣದ ನಂತ್ರ ರಿಲ್ಯಾಕ್ಸ್ ಮೂಡಿನಲ್ಲಿ ಅರ್ಚಕರು, ಜ್ಯೋತಿಷಿಗಳು

    ಚಂದ್ರಗ್ರಹಣದ ನಂತ್ರ ರಿಲ್ಯಾಕ್ಸ್ ಮೂಡಿನಲ್ಲಿ ಅರ್ಚಕರು, ಜ್ಯೋತಿಷಿಗಳು

    ಮೈಸೂರು: ಚಂದ್ರಗ್ರಹಣದ ನಂತರ ಅರ್ಚಕರು ಮತ್ತು ಜ್ಯೋತಿಷಿಗಳು ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಪಂಚಾಂಗ ಹಾಗೂ ಕವಡೆ ಬಿಟ್ಟು ಕ್ರಿಕೆಟ್ ಆಟದಲ್ಲಿ ತೊಡಗಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ.

    ಮೈಸೂರಿನಲ್ಲಿ ಜ್ಯೋತಿಷಿಗಳು ಅರ್ಚಕರಿಗಾಗಿ ಮಾಯಕಾರ ಗುರುಕುಲವು ರಾಜ್ಯಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಅನ್ನು ಮೈಸೂರಿನ ರೈಲ್ವೇ ಮೈದಾನದಲ್ಲಿ ಆಯೋಜಿಸಿದೆ. ಎರಡು ದಿನ ನಡೆಯಲಿರುವ ಈ ಟೂರ್ನಮೆಂಟ್ ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 16 ತಂಡ ಭಾಗಿಯಾಗಿವೆ.

    ಮೈಸೂರು, ಬೆಂಗಳೂರು, ಹಾವೇರಿ, ಶಿವಮೊಗ್ಗ, ತುಮಕೂರು ಸೇರಿ ವಿವಿಧ ಜಿಲ್ಲೆಯ ಅರ್ಚಕರು ಹಾಗೂ ಜ್ಯೋತಿಷಿಗಳು ಭಾಗಿಯಾಗಿದ್ದಾರೆ. ಮೊದಲ ಬಹುಮಾನ 10 ಸಾವಿರ ನಗದು ಆಕರ್ಷಕ ಟ್ರೋಫಿ ದೊರಯಲಿದ್ದು, ಎರಡನೇ ಬಹುಮಾನ 5 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ.

  • ತಿರುಪತಿ ಪ್ರಧಾನ ಅರ್ಚಕ ವಜಾ – ತಿರುಮಲದ ವಜ್ರಾಭರಣಗಳನ್ನು ನೀವೂ ನೋಡ್ಬಹುದು!

    ತಿರುಪತಿ ಪ್ರಧಾನ ಅರ್ಚಕ ವಜಾ – ತಿರುಮಲದ ವಜ್ರಾಭರಣಗಳನ್ನು ನೀವೂ ನೋಡ್ಬಹುದು!

    ಹೈದರಾಬಾದ್: ತಿಮ್ಮಪ್ಪನ ಚಿನ್ನಾಭರಣಗಳು ನಾಪತ್ತೆಯಾಗುತ್ತಿವೆ ಎಂದು ತಿರುಮಲ ತಿರುಪತಿ ದೇವಾಸ್ಥಾನ ಮಾಜಿ ಪ್ರಧಾನ ಅರ್ಚಕರಾದ ರಮಣ ದೀಕ್ಷಿತುಲು ಆರೋಪ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಟಿಡಿ ಕಮಿಟಿ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್, ಧಾರ್ಮಿಕ ನಿಯಮಗಳ ಪ್ರಕಾರ ತಿಮ್ಮಪ್ಪನ ಆಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶವಿದ್ದರೆ ಅವುಗಳನ್ನು ಪ್ರದರ್ಶಿಸಲು ಸಿದ್ಧ. ಒಂದು ವೇಳೆ ದೇವರ ಆಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶ ಇಲ್ಲ ಅಂತಾದ್ರೆ ಅವುಗಳನ್ನು ಅಧುನಿಕ ತಂತ್ರಜ್ಞಾನ ಬಳಸಿ 3ಡಿ ಮಾದರಿಯಲ್ಲಿ ಮುದ್ರಣ ಮಾಡಿ ವಸ್ತುಸಂಗ್ರಾಹಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡುವುದಾಗಿ ಹೇಳಿದ್ದು, ಈ ಕುರಿತು ನಿರ್ಣಯವನ್ನು ಮೇಲಾಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಏನಿದು ಆರೋಪ: ದೇವರ ಆಭರಣಗಳಲ್ಲಿದ್ದ ವಜ್ರಾಭರಣ ನಾಪತ್ತೆಯಾಗಿದೆ ಎಂದು ಕೆಲ ದಿನಗಳ ಹಿಂದೆ ದೇವಾಲಯದ ಮಾಜಿ ಪ್ರಧಾನ ಅರ್ಚಕರು ಆರೋಪಿಸಿದ್ದರು. ಅಲ್ಲದೇ ದೇವಾಲಯದ ಸಮಿತಿ ಹಲವು ಆಕ್ರಮಗಳನ್ನು ನಡೆಸುತ್ತಿದ್ದು, ಈ ಕುರಿತು ತನಿಖೆ ಆಗಬೇಕು ಎಂದು ಹೇಳಿಕೆ ನೀಡಿದ್ದರು.

    ಈ ಹೇಳಿಕೆ ಬೆನ್ನಲ್ಲೇ ಟಿಟಿಡಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ದೇವಾಲಯದ ಕುರಿತು ಈ ರೀತಿ ಹೇಳಿಕೆ ನೀಡುವುದರ ವಿರುದ್ಧ ಕ್ರಮಕೈಗೊಳ್ಳುವ ದೃಷ್ಟಿಯಿಂದ ಅವರನ್ನು ಅಮಾನತು ಮಾಡಲಾಗಿದೆ. ಆದರೆ ಈ ಹಿಂದೆ ತೆಗೆದುಕೊಂಡ ನಿರ್ಧಾರದ ಪ್ರಕಾರ ತಿರುಮಲ ದೇವಾಲಯದಲ್ಲಿ ಕಾರ್ಯನಿರ್ವಹಿಸುವ ಅರ್ಚಕರ ವಯಸ್ಸು 65 ವರ್ಷ ಪೂರ್ಣಗೊಂಡಿದ್ದರೆ ಸೇವೆಯಿಂದ ನಿವೃತ್ತಿ ಆಗಬೇಕಿದೆ. ಈ ನಿಯಮಗಳ ಆನ್ವಯ ಈಗಾಗಲೇ ರಮಣ ದೀಕ್ಷಿತುಲು ಅವರು ನಿವೃತ್ತಿಯಾಗಿದ್ದಾರೆ.

    ಅರ್ಚಕರ ನಿವೃತ್ತಿ: ಟಿಟಿಡಿ ಆಡಳಿತ ಮಂಡಳಿಯ ಸಭೆಯಲ್ಲಿ 2012 ರಲ್ಲಿ ಜಾರಿಯಾಗಿದ್ದ ನಿಯಮಗಳ ಅನ್ವಯ 65 ವರ್ಷ ಮೀರಿದ ಅರ್ಚಕರು ಸೇವೆಯಿಂದ ತಕ್ಷಣವೇ ನಿವೃತ್ತಿಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ರಮಣ ದೀಕ್ಷಿತುಲು ಆಗಮ ಶಾಸ್ತ್ರಗಳಿಗೆ ಟಿಟಿಡಿ ಅಸಡ್ಡೆ ತೋರುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮಂಡಳಿ ನಿರ್ಣಯ ರದ್ದು ಮಾಡುವಂತೆ ನ್ಯಾಯಾಲಯದ ಮೇರೆ ಹೋಗುವುದಾಗಿ ತಿಳಿಸಿದ್ದಾರೆ.

  • ಮೈಸೂರು ಚಾಮುಂಡಿ ದೇವಸ್ಥಾನದ ಮಂಗಳಾರತಿ ತಟ್ಟೆ ಗಲಾಟೆಗೆ ಬ್ರೇಕ್!

    ಮೈಸೂರು ಚಾಮುಂಡಿ ದೇವಸ್ಥಾನದ ಮಂಗಳಾರತಿ ತಟ್ಟೆ ಗಲಾಟೆಗೆ ಬ್ರೇಕ್!

    ಮೈಸೂರು: ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿನ ಮಂಗಳಾರಾತಿ ತಟ್ಟೆ ಗಲಾಟೆಗೆ ಕೊನೆಗೂ ಧಾರ್ಮಿಕ ದತ್ತಿ ಇಲಾಖೆ ಬ್ರೇಕ್ ಹಾಕಿದೆ.

    ಇಷ್ಟು ವರ್ಷ ದೇವಸ್ಥಾನದ ಅರ್ಚಕರು ಮತ್ತು ಸನ್ನಿಧಿ ಪರಿಚಾರಕರು ಬೇರೆ ಬೇರೆ ಮಂಗಳರಾತಿ ಕಾಸಿನ ತಟ್ಟೆ ಇಡುತ್ತಿದ್ದರು. ಇದರಿಂದ ಮಂಗಳಾರತಿ ತಟ್ಟೆ ದುಡ್ಡಿಗೆ ಅರ್ಚರು ಮತ್ತು ಆಗಮಿಕರ ನಡುವೆ ಗಲಾಟೆ ನಡೆಯುತ್ತಿತ್ತು. ಇದರಿಂದ ದೇವಾಲಯಕ್ಕೆ ಬರೋ ಭಕ್ತರಿಗೂ ಪ್ರತಿನಿತ್ಯ ಇರಿಸು ಮುರಿಸು ಉಂಟಾಗುತಿತ್ತು.

    ಈ ಕಾರಣ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನದಲ್ಲಿ ಇನ್ಮುಂದೆ ಒಂದೇ ಮಂಗಳಾರತಿ ತಟ್ಟೆ ಇಡುವಂತೆ ಸುತ್ತೋಲೆ ಜಾರಿ ಮಾಡಿದೆ. ಇದರ ಜೊತೆಗೆ ಚಾಮುಂಡಿ ಬೆಟ್ಟದ ದಾಸೋಹದಲ್ಲಿ ಮಾರ್ಚ್ 1 ರಿಂದ ಭಕ್ತಾದಿಗಳಿಗೆ ಬೆಳಗ್ಗೆ ತಿಂಡಿ ಮಧ್ಯಾಹ್ನ ಊಟ ಮತ್ತು ರಾತ್ರಿ ಊಟದ ವ್ಯವಸ್ಥೆ ಕೂಡ ಜಾರಿ ಮಾಡಲು ಇಲಾಖೆ ಮುಂದಾಗಿದೆ.

    ಇಷ್ಟು ವರ್ಷ ಕೇವಲ ಮಧ್ಯಾಹ್ನದ ಊಟ ಮಾತ್ರ ನೀಡಲಾಗುತ್ತಿತ್ತು. ಈಗ ಮೂರು ಹೊತ್ತು ಭಕ್ತರಿಗೆ ಊಟದ ಪ್ರಸಾದದ ವ್ಯವಸ್ಥೆ ಇರಲಿದೆ. ಇದಕ್ಕಾಗಿ ಹೊಸ ಮೆನೂ ಕೂಡ ಸಿದ್ಧವಾಗಿದೆ. ಬೆಳಿಗ್ಗೆ 7:30 ರಿಂದ 10 ಗಂಟೆ ಮಧ್ಯಾಹ್ನ 12.30 ರಿಂದ ಮೂರು ಗಂಟೆ ಹಾಗೂ ರಾತ್ರಿ 7:30 ರಿಂದ 9 ಗಂಟೆವರೆಗೆ ಪ್ರಸಾದ ನೀಡಲು ಟೈಮ್ ಫಿಕ್ಸ್ ಆಗಿದೆ.

    ಸೋಮವಾರ ತರಕಾರಿ ಉಪ್ಪಿಟ್ಟು ಹಾಗೂ ರವೆ ಕೇಸರಿ ಬಾತ್, ಮಂಗಳವಾರ ಖಾರ ಪೊಂಗಲ್ ಮತ್ತು ಸಿಹಿ ಪೊಂಗಲ್, ಬುಧವಾರ ಬಿಸಿಬೇಳೆ ಬಾತ್ ಮತ್ತು ಕೇಸರಿ ಬಾತ್, ಗುರುವಾರ ಅವಲಕ್ಕಿ ಉಪ್ಪಿಟ್ಟು ಮತ್ತು ಸಿಹಿ ಅವಲಕ್ಕಿ, ಶುಕ್ರವಾರ ತರಕಾರಿ ಬಾತ್ ಹಾಗೂ ಬೆಲ್ಲದ ಅನ್ನ, ಶನಿವಾರ ವಾಂಗಿಬಾತ್ ಹಾಗೂ ರವೆ ಸಜ್ಜಿಗೆ. ಭಾನುವಾರ ಟೊಮೆಟೊ ಬಾತ್ ಹಾಗೂ ರವೆ ಸಜ್ಜಿಗೆ ನೀಡಲಾಗುತ್ತದೆ.

  • ಇಮಾಮ್‍ರ ಗೌರವ ಧನ ಹೆಚ್ಚಳ- ಸರ್ಕಾರದ ವಿರುದ್ಧ ಅರ್ಚಕರು, ಆಗಮಿಕರ ಆಕ್ರೋಶ

    ಇಮಾಮ್‍ರ ಗೌರವ ಧನ ಹೆಚ್ಚಳ- ಸರ್ಕಾರದ ವಿರುದ್ಧ ಅರ್ಚಕರು, ಆಗಮಿಕರ ಆಕ್ರೋಶ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಬುಧವಾರದಂದು 12ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರನ್ನು ಓಲೈಸಲು ಅನೇಕ ಜನಪರ ಯೋಜನೆಗಳಿಗೆ ಅನುದಾನ ನೀಡಿದ್ದಾರೆ. ಆದ್ರೇ ಈ ಬಜೆಟ್‍ಗೆ ಆರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಜೆಟ್‍ನಲ್ಲಿ ಅಲ್ಪಾಸಂಖ್ಯಾತರನ್ನು ಸಮಾಧಾನಪಡಿಸಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯನ್ನ ಕಡೆಗಣಿಸಿದೆ ಎಂದು ಅರ್ಚಕರು ಆರೋಪಿಸಿದ್ದಾರೆ. ಷೇಷ್ ಇಮಾಮ್ ಅವರ ಗೌರವ ಧನ 3100 ರೂ.ನಿಂದ 4000 ಕ್ಕೆ ಹೆಚ್ಚಳ, ಮೌಜಾನ್ ಅವರ ಗೌರವಧನ 2500 ರಿಂದ 3000ಕ್ಕೆ ಹೆಚ್ಚಳ ಮಾಡಿರೋದು ಅರ್ಚಕರು ಹಾಗೂ ಆಗಮಿಕರ ಕಣ್ಣು ಕೆಂಪಾಗಿಸಿದೆ.

    ಮುಜರಾಯಿ ಇಲಾಖೆಯ ಅಧೀನದಲ್ಲಿ ರಾಜ್ಯದಲ್ಲಿ 35 ಸಾವಿರಕ್ಕೂ ಹೆಚ್ಚು ದೇವಾಲಯಗಳಿದ್ದು ಇದರಿಂದ ಸರ್ಕಾರಕ್ಕೆ ಪ್ರತಿ ವರ್ಷ 135 ಕೋಟಿ ರೂ. ಆದಾಯವಿದೆ. ಅದ್ರೂ ನಮಗೆ ಯಾವುದೇ ಸೌಲಭ್ಯಗಳನ್ನ ಈ ಬಾರಿಯ ಬಜೆಟ್‍ನಲ್ಲಿ ನೀಡಿಲ್ಲ. ದಿನಕ್ಕೆ 100 ರೂಪಾಯಿಯಂತೆ ವರ್ಷಕ್ಕೆ 36 ಸಾವಿರ ರೂಪಾಯಿಗಳನ್ನ ಮಾತ್ರ ನೀಡುತ್ತಾರೆ. ಇದನ್ನ ಹೆಚ್ಚಿಸಬೇಕು ಅಂತ ನಾವು ಮನವಿ ಮಾಡಿದ್ದೆವು. ಅದ್ರೆ ಅದರ ಬಗ್ಗೆ ಸಿದ್ದರಾಮಯ್ಯನವರು ಗಮನಹರಿಸಿಲ್ಲ. ವಕ್ಫ್ ಸಂಸ್ಥೆಯಿಂದ ಸರ್ಕಾರಕ್ಕೆ ಯಾವುದೇ ಆದಾಯವಿಲ್ಲ. ಅದ್ರೂ ಅವರಿಗೆ ಅಷ್ಟು ಅನುದಾನ ಕೊಟ್ಟಿದ್ದೀರ. ನಮಗೇಕೆ ಯಾವುದೇ ಗೌರವಧನವಿಲ್ಲ ಅಂತಾ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಶಾಂತವೀರ ಮಹಾಸ್ವಾಮಿಗಳು ರಾಜ್ಯ ಸರ್ಕಾರವನ್ನ ಪ್ರಶ್ನಿಸಿದ್ದಾರೆ.

    ಈ ಸರ್ಕಾರದಿಂದ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ. ನಮ್ಮ ದೇವಾಲಯಗಳಲ್ಲಿ ಎಲ್ಲ ವರ್ಗದ ಜನರು ದುಡಿಯುತ್ತಾರೆ. ಅವರಿಗೆ ಯಾವುದೇ ಅನುದಾನವನ್ನ ನೀಡದೆ ಇರುವುದು ಸರಿಯಲ್ಲ. ಓಟ್ ಬ್ಯಾಂಕ್ ಉದ್ದೇಶದಿಂದ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಬಳಿಯುತ್ತಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಮುಜರಾಯಿ ಇಲಾಖೆಗೆ ಅನುದಾನ ನೀಡುವ ಬಗ್ಗೆ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದ್ರೆ ರಾಜ್ಯದ ಅಷ್ಟೂ ದೇವಾಲಯಗಳಿಗೆ ಬೀಗ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತೆ ಅಂತಾ ಹೇಳಿದ್ರು.

    ಪ್ರತಿನಿತ್ಯದ ಪೂಜೆಗೆ 100 ರೂಪಾಯಿ ಸಾಲೋದಿಲ್ಲ. ನಿಮ್ಮ ಸರ್ಕಾರದಿಂದ ನಮಗೆ ಯಾವುದೇ ಅನುದಾನ ಬೇಡ. ನಮ್ಮ ದೇವಾಲಯಗಳನ್ನ ನಮ್ಮ ಹತೋಟಿಗೆ ಕೊಡಿ ಅಂತಿದ್ದಾರೆ ಅರ್ಚಕರು. ಸರ್ಕಾರ ಅರ್ಚಕರ ನಿಲುವನ್ನ ಹೇಗೆ ಸ್ವೀಕರಿಸುತ್ತದೋ ಕಾದು ನೋಡ್ಬೇಕು.