Tag: ಅರಿಶಿಣ ಶಾಸ್ತ್ರ

  • ವೀಡಿಯೋ: ಪೇಂಟ್ ರೋಲರ್‌ನಲ್ಲಿ ವಧುವಿಗೆ ಅರಿಶಿಣ ಶಾಸ್ತ್ರ ನೆರವೇರಿಸಿದ ಮಹಿಳೆ!

    ವೀಡಿಯೋ: ಪೇಂಟ್ ರೋಲರ್‌ನಲ್ಲಿ ವಧುವಿಗೆ ಅರಿಶಿಣ ಶಾಸ್ತ್ರ ನೆರವೇರಿಸಿದ ಮಹಿಳೆ!

    – ಮಹಿಳೆಯ ಐಡಿಯಾಕ್ಕೆ ಭರ್ಜರಿ ಕಮೆಂಟ್

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಕ್ಕರಿಸಿದ ಬಳಿಕ ಸಾಕಷ್ಟು ಅವಾಂತರಗಳು ನಡೆದಿದೆ. ಈ ಸಾಂಕ್ರಾಮಿಕ ರೋಗದಿಂದ ದೂರ ಇರಲು ಕೆಲವೊಂದು ನಿಯಮಗಳನ್ನು ತಾವೇ ರೂಪಿಸಿಕೊಳ್ಳುವ ಮೂಲಕ ಜೀವನ ಮುಂದುವರಿಸಲು ಹಲವು ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅನೇಕ ಮದುವೆಗಳು ರದ್ದಾದರೆ, ಇನ್ನೂ ಕೆಲವೊಂದು ಮದುವೆಗಳು ಅತ್ಯಂತ ಸರಳವಾಗಿ ನಡೆಯುತ್ತಿವೆ. ಈ ಮಧ್ಯೆ ಅರಿಶಿಣ ಶಾಸ್ತ್ರದಲ್ಲಿ ಮಹಿಳೆಯೊಬ್ಬರು ಕಂಡುಕೊಂಡ ಐಡಿಯಾ ಇದೀಗ ಭಾರೀ ಸುದ್ದಿಯಾಗಿದೆ.

    ಹೌದು. ಮಹಿಳೆಯೊಬ್ಬರು ವಧುವಿಗೆ ಪೇಂಟ್ ರೋಲರ್ ಮೂಲಕ ಅರಿಶಿಣ ಶಾಸ್ತ್ರ ನೆರವೇರಿಸಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಹರ್ಜಿಂದರ್ ಸಿಂಗ್ ಕುಕ್ರೇಜಾ ಎಂಬವರು ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಸಾಮಾಜಿಕ ಅಂತರದಿಂದ ಹುಟ್ಟಿಕೊಂಡ ಹೊಸ ವಿಧಾನ! ಈ ಶಾಸ್ತ್ರ ಭಾರತದಲ್ಲಿ ವಿವಾಹದ ಪೂರ್ವದಲ್ಲಿ ನಡೆಯುತ್ತದೆ. ದಾಂಪತ್ಯ ಜೀವನಕ್ಕೆ ಕಾಲಿಡುವ ದಿನದಂದು ಬೆಳಗ್ಗೆ ವಿವಾಹಿತ ಮಹಿಳೆಯರು ಅರಿಶಿಣ, ಎಣ್ಣೆ ಹಾಗೂ ನೀರು ಮಿಕ್ಸ್ ಮಾಡಿ ವಧು-ವರನಿಗೆ ಹಚ್ಚುತ್ತಾರೆ. ಈ ರೀತಿ ಮಾಡಿದರೆ ಮದುವೆಗೆ ಮೊದಲು ಜೋಡಿಗೆ ಆಶೀರ್ವಾದ ಸಿಕ್ಕಂತಾಗುತ್ತದೆ ಎಂಬ ನಂಬಿಕೆಯಿದೆ.

    ಲೂಧಿಯಾನದಲ್ಲಿ ನಡೆದ ಅರಿಶಿಣ ಶಾಸ್ತ್ರದ 13 ಸೆಕೆಂಡಿನ ಈ ವೀಡಿಯೋದಲ್ಲಿ, ಸಂಬಂಧಿಕರೊಬ್ಬರು ವಧುವಿಗೆ ಅರಿಶಿಣ ಹಚ್ಚಲು ಪೇಂಟ್ ರೋಲರ್ ಬಳಸಿರುವುದುನ್ನು ಕಾಣಬಹುದು. ಸಾಮಾಜಿಕ ಅಂತರ ಕಾಯ್ದುಕೊಂಡು ವಧುವಿಗೆ ಅರಿಶಿಣ ಹಚ್ಚಿರುವುದನ್ನು ನೋಡಿ ಸಮಾರಂಭದಲ್ಲಿ ನೆರೆದಿದ್ದವರು ಜೋರಾಗಿ ನಕ್ಕಿದ್ದಾರೆ. ಈ ಮೂಲಕ ಕಾರ್ಯಕ್ರಮದಲ್ಲಿ ಮೋಜು ಮಾಡಿದ್ದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಇದುವರೆಗೂ ಈ ವೀಡಿಯೋ 6 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಸಾವಿರಾರು ಕಮೆಂಟ್ ಗಳು ಕೂಡ ಬಂದಿವೆ. ಒಬ್ಬರು ಈ ವೀಡಿಯೋ ನೋಡಿದರೆ ನಗು ಬರುತ್ತದೆ ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬರು ಹಳದಿ ಪೇಂಟ್‍ಗಾಗಿ ಒಳ್ಳೆಯ ಉಪಾಯ ಕಂಡುಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    https://twitter.com/jass_kukreja/status/1310673800640499715

  • ಗಾಜನೂರಿನ ಮನೆಯಲ್ಲಿ ರಾಜ್ ಮೊಮ್ಮಗನ ಅರಿಶಿಣ ಶಾಸ್ತ್ರ

    ಗಾಜನೂರಿನ ಮನೆಯಲ್ಲಿ ರಾಜ್ ಮೊಮ್ಮಗನ ಅರಿಶಿಣ ಶಾಸ್ತ್ರ

    ಚಾಮರಾಜನಗರ: ನಟ ರಾಘವೇಂದ್ರ ರಾಜ್‍ಕುಮಾರ್ ಅವರ ಎರಡನೇ ಪುತ್ರ ಯುವರಾಜ್ ಅವರ ಅರಿಶಿಣ ಶಾಸ್ತ್ರ ಗಾಜನೂರಿನ ನಿವಾಸದಲ್ಲಿ ಇಂದು ನಡೆದಿದೆ.

    ಮೇ 26ರಂದು ಯುವ ರಾಜ್‍ಕುಮಾರ್ ಅವರ ಮದುವೆ ನಿಗದಿಯಾಗಿದ್ದು, ಇಂದು ಗಾಜನೂರಿನ ಮನೆಯಲ್ಲಿ ಅರಿಶಿಣದ ಶಾಸ್ತ್ರ ನಡೆಯಿತು. ಅರಿಶಿಣದ ಶಾಸ್ತ್ರದಲ್ಲಿ ರಾಜ್‍ಕುಮಾರ್ ಕುಟುಂಬಸ್ಥರು ಭಾಗಿಯಾಗಿದ್ದು, ಮದುವೆ ಸಂಭ್ರಮ ಮನೆ ಮಾಡಿದೆ.

    ಯುವರಾಜ್‍ಕುಮಾರ್ ತಮ್ಮ ಗೆಳತಿ ಶ್ರೀದೇವಿ ಜೊತೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‍ನಲ್ಲಿ ಅದ್ಧೂರಿಯಾಗಿ ಮದುವೆ ಆಗಲಿದ್ದಾರೆ. ಈ ಮದುವೆಗೆ ಎಲ್ಲಾ ತಯಾರಿ ನಡೆಯುತ್ತಿದೆ. ಅದೇ ದಿನ ಆರತಕ್ಷತೆ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದಾರೆ. ಈಗಾಗಲೇ ಸಿನಿಮಾರಂಗದ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡುತ್ತಿದ್ದು, ಮದುವೆ ತಯಾರಿಯಲ್ಲಿ ದೊಡ್ಮನೆ ಮಂದಿ ಸಾಕಷ್ಟು ಬ್ಯುಸಿಯಾಗಿದ್ದಾರೆ.

    ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವ ರಾಜ್‍ಕುಮಾರ್ ಹಾಗೂ ಶ್ರೀದೇವಿ ಉಂಗುರ ಬದಲಾಯಿಸಿಕೊಂಡಿದ್ದರು. ಖಾಸಗಿ ಹೊಟೇಲ್‍ನಲ್ಲಿ ನಡೆದ ಸಮಾರಂಭದಲ್ಲಿ ಈ ಜೋಡಿ ಎಂಗೇಜ್ ಆಗಿದ್ದರು. ಯುವ ರಾಜ್‍ಕುಮಾರ್ ಹಾಗೂ ಶ್ರೀದೇವಿ ಉಂಗುರ ಬದಲಾವಣೆ ವೇಳೆ ರಾಜ್ ಕುಟುಂಬ ಸದಸ್ಯರು ಹಾಜರಾಗಿದ್ದು, ನವ ಜೋಡಿಗೆ ಶುಭ ಹಾರೈಸಿದ್ದರು.

    ಈ ಹಿಂದೆ ಯುವ ಅವರ ಹೆಸರು ಗುರು ರಾಜ್‍ಕುಮಾರ್ ಆಗಿದ್ದು, ಈಗ ಯುವ ರಾಜ್‍ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಯುವ ರಾಜ್‍ಕುಮಾರ್ ಇದುವರೆಗೂ ಯಾವ ಸಿನಿಮಾದಲ್ಲೂ ಹೀರೋ ಆಗಿ ಕಾಣಿಸಿಕೊಂಡಿಲ್ಲ. ಆದರೆ ತಮ್ಮ ಹೋಮ್ ಬ್ಯಾನರ್ ನಲ್ಲಿ ಬರುವ ಚಿತ್ರಗಳ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಸದ್ಯ ಯುವ ಮದುವೆ ಆದ ನಂತರ ಹೀರೋ ಆಗಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.