Tag: ಅರವಿಂದ್ ಕೆ.ಪಿ

  • ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ: ವೈಷ್ಣವಿ ಜೊತೆ ದಿವ್ಯಾ- ಅರವಿಂದ್ ಕೆ.ಪಿ ಜೋಡಿ

    ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ: ವೈಷ್ಣವಿ ಜೊತೆ ದಿವ್ಯಾ- ಅರವಿಂದ್ ಕೆ.ಪಿ ಜೋಡಿ

    ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ಶೋಗೆ ತೆರೆಬಿದ್ದಿದೆ. ಈ ಕಾರ್ಯಕ್ರಮ ಮುಗಿದು ಈಗಾಗಲೇ 15 ದಿನಗಳಾಗಿದೆ. ಈ ಬೆನ್ನಲ್ಲೇ ದಿವ್ಯಾ ಉರುಡುಗ (Divya Uruduga) ಮತ್ತು ಅರವಿಂದ್ (Aravind Kp) ಜೋಡಿ ಸೀಸನ್ 8ರ ವೈಷ್ಣವಿ, ರಘು ಗೌಡ ಅವರನ್ನ ಮೀಟ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ದೊಡ್ಮನೆಯ ಆಟ ಸೀಸನ್ 9ರಲ್ಲೂ ದಿವ್ಯಾ ಉರುಡುಗ ಪ್ರವೀಣರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಟಾಪ್ 5 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. 5ನೇ ರನ್ನರ್ ಅಪ್ ಆಗಿ ಹೊರಬಂದಿದ್ದರು. ಇದೀಗ ಬಿಗ್ ಬಾಸ್ ಶೋಗೆ ತೆರೆ ಬಿದ್ದಿದೆ. ದಿವ್ಯಾ ಉರುಡುಗ ಫುಲ್ ರಿಲಾಕ್ಸ್ ಮೂಡ್‌ನಲ್ಲಿದ್ದಾರೆ. ಇದನ್ನೂ ಓದಿ: 15 ದಿನಗಳಿಂದ ಸುಧಾರಾಣಿ ಮನೆ ಶ್ವಾನ ನಾಪತ್ತೆ: ಬಿಬಿಎಂಪಿ ವಿರುದ್ಧ ನಟಿ ಗರಂ

    ಈ ಹಿಂದಿನ ಬಿಗ್ ಬಾಸ್ 8ರಲ್ಲಿ (Bigg Boss Kannada 8) ಪರಿಚಯವಾಗಿ ಸ್ಪರ್ಧಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ವೈಷ್ಣವಿ ಗೌಡ (Vaishnavi Gowda) ಮತ್ತು ರಘು ಗೌಡ (Raghu Gowda)  ಅವರನ್ನ ದಿವ್ಯಾ ಮತ್ತು ಅರವಿಂದ್ ಕೆ.ಪಿ ಜೋಡಿ ಭೇಟಿಯಾಗಿದ್ದಾರೆ. ಒಟ್ಟಿಗೆ ಮೋಜು ಮಸ್ತಿ ಮಾಡಿದ್ದಾರೆ. ಒಟ್ಟಾಗಿ ಒಂದೊಳ್ಳೆಯ ಸಮಯವನ್ನ ಕಳೆದಿದ್ದಾರೆ.

    ಬಿಗ್ ಬಾಸ್ ಶೋ ಮುಗಿದ ಮೇಲೂ ಕೂಡ ಆ ಸ್ನೇಹವನ್ನ ಮುಂದುವರೆಸಿಕೊಂಡು ಹೋಗಿರೋದನ್ನ ನೋಡಿ ವೈಷ್ಣವಿ, ರಘು, ದಿವ್ಯಾ, ಅರವಿಂದ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿವ್ಯಾಳ ಆಸೆಯಂತೆ ದೊಡ್ಮನೆಗೆ ಎಂಟ್ರಿ ಕೊಟ್ಟ ಅರವಿಂದ್ ಕೆ.ಪಿ

    ದಿವ್ಯಾಳ ಆಸೆಯಂತೆ ದೊಡ್ಮನೆಗೆ ಎಂಟ್ರಿ ಕೊಟ್ಟ ಅರವಿಂದ್ ಕೆ.ಪಿ

    ಬಿಗ್ ಬಾಸ್ ಮನೆಯ (Bigg Boss House) ಆಟದ ಅಂತಿಮ ಹಣಾಹಣಿಗೆ ಕೇವಲ ಮೂರೇ ದಿನ ಬಾಕಿಯಿದೆ. ಹೀಗಿರುವಾಗ ಸ್ಪರ್ಧಿಗಳಿಗೆ ಬಿಗ್ ಬಾಸ್ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಡಬಲ್ ಧಮಾಕ ಎನ್ನುವಂತೆ, ಮನೆಗೆ ಹೊಸ ಅತಿಥಿಗಳ ಆಗಮನವಾಗಿದೆ. ಈ ಮೂಲಕ ಬಿಗ್ ಬಾಸ್ ಮನೆಯ ರಂಗು ಹೆಚ್ಚಾಗಿದೆ. ದಿವ್ಯಾ (Divya Uruduga) ಆಸೆಯಂತೆ ಅರವಿಂದ್ ಕೆಪಿ (Aravind Kp) ಅವರನ್ನು ದೊಡ್ಮನೆಗೆ ಕಳುಹಿಸಲಾಗಿದೆ.

    ದೊಡ್ಮನೆಯ ಕಾಳಗಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಈ ಬಾರಿ ಬಿಗ್ ಬಾಸ್ (Bigg Boss) ಯಾರು ಗೆದ್ದು ಬೀಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಸ್ಪರ್ಧಿಗಳಲ್ಲೂ ಆತಂಕ ಹೆಚ್ಚಾಗಿದೆ. ಈ ನಡುವೆ ಬಿಗ್ ಸರ್ಪ್ರೈಸ್ ನೀಡುವ ಮೂಲಕ ಸ್ಪರ್ಧಿಗಳನ್ನು ಸಂತಸ ಪಡಿಸುತ್ತಿದೆ. ಇತ್ತೀಚಿಗಷ್ಟೆ ದಿವ್ಯಾ ಉರುಡುಗ ಬಿಗ್ ಬಾಸ್‌ಗೆ ಒಂದು ಮನವಿ ಮಾಡಿದ್ದರು. ಅರವಿಂದ್ ಕೆಪಿ ಅವರನ್ನು ಮನೆಯೊಳಗೆ ಕಳುಹಿಸಿ ಎಂದು ಕೇಳಿಕೊಂಡಿದ್ದರು. ದಿವ್ಯಾ ಆಸೆಯಂತೆ ಅರವಿಂದ್ ಕೆಪಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಅರವಿಂದ್ ನೋಡಿ ದಿವ್ಯಾ ಅಚ್ಚರಿ ಪಟ್ಟಿದ್ದಾರೆ. ಇದನ್ನೂ ಓದಿ:ಸುಶಾಂತ್ ಶವ ಪರೀಕ್ಷೆ ಸಿಬ್ಬಂದಿ ಬೆನ್ನಿಗೆ ನಿಂತ ನಟನ ಸಹೋದರಿ

    ಬಿಗ್ ಬಾಸ್ ಕೊನೆಯ ವಾರದಲ್ಲಿ ಸ್ಪರ್ಧಿಗಳಿಗೆ ಒಂದೊಂದು ಆಸೆ ಈಡೇರಿಸುವುದಾಗಿ ಹೇಳಿದ್ದರು. ಆಗ ದಿವ್ಯಾ ಉರುಡುಗ ಅರವಿಂದ್ ಮನೆ ಒಳಗೆ ಬರಲಿ ಎಂದು ಕೇಳಿಕೊಂಡಿದ್ದರು. ಇನ್ನೂ ರೂಪೇಶ್ ಶೆಟ್ಟಿ (Roopesh Shetty) ಹುಲಿ ಕುಣಿತ ನೋಡಬೇಕೆಂದು ಹೇಳಿದ್ದರು. ಇಬ್ಬರ ಆಸೆಯನ್ನು ಬಿಗ್ ಬಾಸ್ ಈಡೇರಿಸಿದೆ. ಮನೆಗೆ ಹುಲಿ ಕುಣಿತ ಮಾಡುವವರು ಬಿಗ್ ಬಾಸ್ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಅರವಿಂದ್ ಕೆಪಿ ಬಂದರು. ಹುಲಿ ಮುಖವಾಡ ಹಾಕಿ ಮನೆಯೊಳಗೆ ಎಂಟ್ರಿ ಕೊಟ್ಟರು. ಅರವಿಂದ್ ನೋಡಿ ದಿವ್ಯಾ ಸಖತ್ ಎಗ್ಸಾಯಿಟ್ ಆದರು. ಬಳಿಕ ಅರವಿಂದ್ ಅವರನ್ನು ತಬ್ಬಿಕೊಂಡು ಸಂತಸ ಪಟ್ಟರು.

    ಇನ್ನೂ ಆರ್ಯವರ್ಧನ್ ಗುರೂಜಿ (Aryavardhan Guruji) ಎಲಿಮಿನೇಷನ್ (Elimination) ನಂತರ ಟಾಪ್ ಸ್ಪರ್ಧಿಗಳಲ್ಲಿ ದಿವ್ಯಾ ಉರುಡುಗ ಕೂಡ ಒಬ್ಬರಾಗಿದ್ದಾರೆ. ರೂಪೇಶ್ ರಾಜಣ್ಣ, ರಾಕೇಶ್, ರೂಪೇಶ್ ಶೆಟ್ಟಿ, ದೀಪಿಕಾ ದಾಸ್, ದಿವ್ಯಾ ಈ ಐವರಲ್ಲಿ ಯಾರಿಗೆ ವಿಜಯಲಕ್ಷಿö್ಮ ಒಲಿಯಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್‌ ಬಾಸ್‌ ಆಟ ಬಿಟ್ಟು ಕೊಡಬೇಡ, ದಿವ್ಯಾಗೆ ಅರವಿಂದ್ ಪ್ರೀತಿಯ ಸಂದೇಶ

    ಬಿಗ್‌ ಬಾಸ್‌ ಆಟ ಬಿಟ್ಟು ಕೊಡಬೇಡ, ದಿವ್ಯಾಗೆ ಅರವಿಂದ್ ಪ್ರೀತಿಯ ಸಂದೇಶ

    ಬಿಗ್ ಬಾಸ್ ಮನೆಯ (Bigg Boss House) ಆಟ 10 ವಾರಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಸ್ಪರ್ಧಿ ದಿವ್ಯಾ ಉರುಡುಗ (Divya Uruduga) ಕೂಡ ಈ ಹಿಂದಿನ ಸೀಸನ್‌ನಲ್ಲಿ ಕೂಡ ಗುರುತಿಸಿಕೊಂಡಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರಲ್ಲೂ ಖಡಕ್ ಸ್ಪರ್ಧಿಯಾಗಿ ಪೈಪೋಟಿ ನೀಡುತ್ತಿದ್ದಾರೆ. ಹೀಗಿರುವಾಗ ಭಾವಿ ಪತ್ನಿ ದಿವ್ಯಾ ಉರುಡುಗ ಅವರಿಗೆ ಅರವಿಂದ್‌ ಕೆ.ಪಿ(Aravind Kp) ಪ್ರೀತಿಯ ಸಂದೇಶವನ್ನ ಕೊಟ್ಟಿದ್ದಾರೆ.

    ಸೀರಿಯಲ್, ಸಿನಿಮಾ, ಟಿವಿ ಶೋ ಬಿಗ್ ಬಾಸ್ ಎಲ್ಲದರಲ್ಲೂ ಸೈ ಎನಿಸಿಕೊಂಡವರು ನಟಿ ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಪ್ರವಿಣರ ಸಾಲಿನಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಇದರ ಮಧ್ಯೆ ದಿವ್ಯಾಗೆ ಬಿಗ್ ಬಾಸ್ ಆಟ ಬಿಟ್ಟು ಕೊಡಬೇಡ ಆಡು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಅರವಿಂದ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಉದ್ಯಮಿ ಸೋಹೈಲ್ ಕೈಹಿಡಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ

    View this post on Instagram

     

    A post shared by Aravind K P (@aravind_kp)

    ‌ʻಮರಿಹುಳುನ ಕೈಬಿಟ್ಟರೆ, ಅದು ಎಂದಿಗೂ ಸುಂದರವಾದ ಚಿಟ್ಟೆಯಾಗುವುದಿಲ್ಲ ನೆವರ್ ಗಿವ್ ಅಪ್ʼ ಎಂದು ಅರವಿಂದ್, ದಿವ್ಯಾ ಉರುಡುಗಗೆ ಬೆಂಬಲ ನೀಡಿದ್ದಾರೆ. ಈಗಾಗಲೇ 10 ವಾರಗಳನ್ನ ದೊಡ್ಮನೆಯಲ್ಲಿ ಪೂರೈಸಿರುವ ದಿವ್ಯಾ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ದಿವ್ಯಾ ಉರುಡುಗ ಗೆದ್ದು ಬರಲಿ ಎಂಬುದೇ ಅರವಿಂದ್ ಮತ್ತು ಅಭಿಮಾನಿಗಳ ಆಶಯ.

    ಇತ್ತೀಚೆಗೆ ಅರವಿಂದ್, ದಿವ್ಯಾ ಜೊತೆಗಿನ ಲವ್ ಲೈಫ್ ಬಗ್ಗೆ ರಿವೀಲ್ ಮಾಡಿದ್ದರು. ಇಬ್ಬರು ಎಂಗೇಜ್ ಆಗಿದ್ದು, ಸದ್ಯದಲ್ಲೇ ಹಸೆಮಣೆ ಏರೋದಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 8ರ ಇಬ್ಬರ ಪರಿಚಯ, ಪ್ರೀತಿಗೆ ತಿರುಗಿದೆ. ಬಿಗ್‌ ಬಾಸ್ ಶೋ ಬಳಿಕ ಹಸೆಮಣೆ ಏರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಿವ್ಯಾ, ಅರವಿಂದ್ ಮದುವೆಯಾದರೆ ಡಿವೋರ್ಸ್ ಆಗುತ್ತೆ ಎಂದು ಭವಿಷ್ಯ ನುಡಿದ ಗುರೂಜಿ

    ದಿವ್ಯಾ, ಅರವಿಂದ್ ಮದುವೆಯಾದರೆ ಡಿವೋರ್ಸ್ ಆಗುತ್ತೆ ಎಂದು ಭವಿಷ್ಯ ನುಡಿದ ಗುರೂಜಿ

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ನೇರ ನುಡಿಯಿಂದ ಸಾಕಷ್ಟು ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿರುವ ಗುರೂಜಿ ದಿವ್ಯಾ ಉರುಡುಗ (Divya Uruduga) ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮುಖ, ಕೆನ್ನೆ, ತುಟಿ ನೋಡಿ ಭವಿಷ್ಯ ಹೇಳುತ್ತಿದ್ದ ಗುರೂಜಿ ಇದೀಗ ದಿವ್ಯಾ ಭವಿಷ್ಯದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

    ದೊಡ್ಮನೆ ಆಟ ಇದೀಗ ಸಾಕಷ್ಟು ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಇನ್ನೂ ಓಟಿಟಿಯಿಂದ ಟಿವಿ ಬಿಗ್ ಬಾಸ್‌ನಲ್ಲೂ ಹೈಲೈಟ್ ಆಗುತ್ತಿರುವ ಆರ್ಯವರ್ಧನ್ ಗುರೂಜಿ, ದಿವ್ಯಾ ಹುಟ್ಟಿದ ದಿನಾಂಕದ ಅನುಸಾರವಾಗಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ದಿವ್ಯಾ ಉರುಡುಗ (Divya Uruduga), ಅರವಿಂದ್‌ನ(Aravind Kp) ಮದುವೆಯಾದರೆ ಡಿವೋರ್ಸ್ ಆಗುತ್ತೆ ಎಂದು ಗುರೂಜಿ ಭವಿಷ್ಯ ನುಡಿದಿರೋದು ಈಗ ದಿವ್ಯಾ ಮುನಿಸಿಗೆ ಕಾರಣವಾಗಿದೆ.

    ರಾಕೇಶ್ ಅಡಿಗ(Rakesh Adiga) ಬಳಿ ಗುರೂಜಿ ಮಾತನಾಡುತ್ತಿದ್ದರು. ಈ ವೇಳೆ ದಿವ್ಯಾ ಕೂಡ ಇದ್ದರು. ಈ ವೇಳೆ ಹುಟ್ಟಿದ ದಿನಾಂಕ ಅನುಸಾರವಾಗಿ ಭವಿಷ್ಯ ಹೇಳಿದ್ದಾರೆ. 7ನೇ ತಾರೀಖಿನವರಿಗೆ 8ನೇ ತಾರೀಖಿನವರು ಲೈಫ್ ಪಾರ್ಟ್ನರ್ ಆಗೋಕೆ ಆಗಲ್ಲ. ಬೆಸ್ಟ್ ಫ್ರೆಂಡ್ ಆಗಿರ್ತಾರೆ. ಲೈಫ್ ಪಾರ್ಟ್ನರ್ ಆದರೆ ಅವರು ಡಿವೋರ್ಸ್ ಆಗ್ತಾರೆ ಎಂದರು ಆರ್ಯವರ್ಧನ್ ಗುರೂಜಿ. ಇದನ್ನೂ ಓದಿ:ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ: ಅತಿಥಿಯಾಗಿ ಬೆಂಗಳೂರಿಗೆ ಬಂದ ಜ್ಯೂನಿಯರ್ ಎನ್.ಟಿ.ಆರ್

    ಅಸಲಿಗೆ, ದಿವ್ಯಾ ಉರುಡುಗ ಅವರದ್ದು 7ನೇ ತಾರೀಖು. ಅರವಿಂದ್.ಕೆ.ಪಿ ಅವರದ್ದು 8ನೇ ತಾರೀಖು. ಹೀಗಾಗಿ, ಆರ್ಯವರ್ಧನ್ ಗುರೂಜಿ ನುಡಿದ ಭವಿಷ್ಯವನ್ನ ದಿವ್ಯಾ ಉರುಡುಗ ಕೈಯಲ್ಲಿ ಅರಗಿಸಿಕೊಳ್ಳಲು ಆಗಲಿಲ್ಲ. ಹೀಗಾಗಿ, ನಮಸ್ಕಾರ ನಿಮ್ಮ ಜ್ಯೋತಿಷ್ಯಕ್ಕೆ. ನಾನು ಇಲ್ವೇ ಇಲ್ಲ ಇದಕ್ಕೆ ಎಂದು ದಿವ್ಯಾ ಎದ್ದು ಹೊರಟುಬಿಟ್ಟರು. ದಿವ್ಯಾ ಮತ್ತು ಅರವಿಂದ ಬಿಗ್ ಬಾಸ್ 8ರಲ್ಲಿ ಪರಿಚಯವಾಗಿ, ಅಲ್ಲಿಂದ ಹೊರಬಂದ ಮೇಲೂ ಜೊತೆಯಾಗಿದ್ದಾರೆ. ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ಗುರೂಜಿ ಹೇಳಿರುವ ಮಾತು, ದಿವ್ಯಾ ಮನಸ್ಸಿಗೆ ಘಾಸಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರೀತಿ ಇರಲಿ ಅಂತರಾಳದಿಂದ – ಡಿಯುಗೆ ಅರವಿಂದ್ ವಿಶ್

    ಪ್ರೀತಿ ಇರಲಿ ಅಂತರಾಳದಿಂದ – ಡಿಯುಗೆ ಅರವಿಂದ್ ವಿಶ್

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಸ್ಪರ್ಧಿ ದಿವ್ಯಾ ಉರುಡುಗಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಡಿಯುಗೆ ಅರವಿಂದ್ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ.

    ಕನ್ನಡ ಕಿರುತೆರೆ ಧಾರಾವಾಹಿಗಳ ಮೂಲಕ ನಟಿಯಾಗಿ ಗುರುತಿಸಿಕೊಂಡ ದಿವ್ಯಾ ಉರುಡುಗ, ಕಳೆದ ವರ್ಷ ಬಿಗ್‍ಬಾಸ್ ಸೀಸನ್-8 ಸ್ಫರ್ಧಿಯಾಗಿ ಕಾಣಿಸಿಕೊಂಡು ಕನ್ನಡಿಗರ ಮನಗೆದ್ದಿದ್ದರು. ದೊಡ್ಮನೆಯಲ್ಲಿ ಅರವಿಂದ್.ಕೆ.ಪಿ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಈ ಜೋಡಿ, ಈಗಲೂ ಸಹ ಅಷ್ಟೇ ಉತ್ತಮ ಭಾಂದವ್ಯ ಮತ್ತು ಆತ್ಮೀಯತೆಯನ್ನು ಹೊಂದಿದೆ. ಇದನ್ನೂ ಓದಿ: ನಾನು ಸ್ವಲ್ಪ ಸೈಕೊ- ರಶ್ಮಿಕಾ ಮಂದಣ್ಣ

    ಜೋಡಿ ಹಕ್ಕಿಗಳಂತೆ ಆಗಾಗಾ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಇಂದು ದಿವ್ಯಾ ಉರುಡುಗ ಅವರು 32ನೇ ವಸಂತಕ್ಕೆ ಕಾಲಿಟ್ಟಿದ್ದು, ದಿವ್ಯಾ ಉರುಡುಗ ಜೊತೆಗಿರುವ ಫೋಟೋವೊಂದನ್ನು ಅರವಿಂದ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಹುಟ್ಟುಹಬ್ಬದ ಶುಭಾಶಯಗಳು ಕೆ(ಕಾವ್ಯ). ಪ್ರೀತಿ ಇರಲಿ ಅಂತರಾಳದಿಂದ ಎಂದು ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲದೇ ದಿವ್ಯಾ ಉರುಡುಗ ಕಿರುತೆರೆ ಹಾಗೂ ಬೆಳ್ಳಿತೆರೆಯ ಪುಟ್ಟ ಜರ್ನಿ ವೀಡಿಯೋವನ್ನು ತಮ್ಮ ಸ್ಟೋರಿಯಲ್ಲಿ ಕೂಡ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಂಕ್ರಾಂತಿಗೆ ಅಮೂಲ್ಯ ಮನೆಗೆ ಗಂಗೆ, ದ್ರೌಪದಿ ಆಗಮನ

     

    View this post on Instagram

     

    A post shared by Aravind K P (@aravind_kp)

    ವಿಶೇಷವಾಗಿ ಅರವಿಂದ್ ಅವರು ಸಾಮಾನ್ಯವಾಗಿ ದಿವ್ಯಾ ಉರುಡುಗ ಅವರೊಂದಿಗೆ ಹಂಚಿಕೊಳ್ಳುವ ಪ್ರತಿಯೊಂದು ಫೋಟೋ ಕೆಳಗೆ ಪ್ರೀತಿ ಇರಲಿ ಅಂತರಾಳದಿಂದ ಎಂದು ಬರೆದುಕೊಂಡಿರುತ್ತಾರೆ. ಬಿಗ್‍ಬಾಸ್ ಕಾರ್ಯಕ್ರಮದಿಂದಲೂ ಇವರಿಬ್ಬರ ನಡುವೆ ಲವ್ವಿ, ಡವ್ವಿ ಶುರುವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ವಿಚಾರವಾಗಿ ಇಲ್ಲಿಯವರೆಗೂ ಇಬ್ಬರೂ ಸಹ ಯಾವುದೇ ಗುಟ್ಟುಬಿಟ್ಟುಕೊಟ್ಟಿಲ್ಲ. ಸದ್ಯ ದಿವ್ಯಾ ಉರುಡುಗ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರೆ, ಮೋಟಾರ್ ರೇಸರ್ ಆಗಿರುವ ಅರವಿಂದ್ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

    ಬಿಗ್‍ಬಾಸ್ ಸ್ಪರ್ಧಿಗಳಾದ ಶುಭಾ ಪೂಂಜಾ, ದಿವ್ಯಾ ಸುರೇಶ್, ವೈಷ್ಣವಿ ಗೌಡ ಸೇರಿದಂತೆ ಹಲವಾರು ಮಂದಿ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಮಿಸ್ ಬಿಕಿನಿ ಇಂಡಿಯಾ ಅರ್ಚನಾ ಕಾಂಗ್ರೆಸ್‍ನಿಂದ ಚುನಾವಣಾ ಅಭ್ಯರ್ಥಿ- ರಾಜಕೀಯಕ್ಕೆ ನನ್ನ ವೃತ್ತಿ ಬೆಸೆಯಬೇಡಿ

  • ಬಿಗ್‌ಬಾಸ್ ಲವ್ ಬರ್ಡ್ಸ್ ಭೇಟಿಯಾದ ಶುಭಾ ಪೂಂಜಾ

    ಬಿಗ್‌ಬಾಸ್ ಲವ್ ಬರ್ಡ್ಸ್ ಭೇಟಿಯಾದ ಶುಭಾ ಪೂಂಜಾ

    ಬೆಂಗಳೂರು: ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಶುಭಾ ಪೂಂಜಾಅ ವರು ಬಿಗ್ ಬಾಸ್ ಲವ್ ಬರ್ಡ್ಸ್ ಅರವಿಂದ್.ಕೆ.ಪಿ ಮತ್ತು ದಿವ್ಯಾ ಉರುಡುಗ ಅವರನ್ನು ಭೇಟಿ ಮಾಡಿದ್ದು, ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಬಿಗ್ ಬಾಸ್ ನ ಈ ಸೀಸನ್ ನಲ್ಲಿ ಬಿಗ್ ಬಾಸ್ ಗೆ ಟಾಸ್ಕ್ ಕೊಡುತ್ತಾ ಕ್ಯೂಟ್ ಕ್ಯೂಟ್ ಆಗಿ ಮನೆಯವರಿಗೆಲ್ಲ ಅಚ್ಚುಮೆಚ್ಚಾದ ಶುಭಾ, ಬಿಗ್ ಬಾಸ್ ಲವ್ ಬರ್ಡ್ಸ್ ಗಳಾದ ಅರವಿಂದ್ ಮತ್ತು ದಿವ್ಯಾ ಅವರನ್ನು ಭೇಟಿ ಮಾಡಿದ್ದು, ಆ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ಬ್ರಿಟಿಷರು ಶಿಕ್ಷಣ ವ್ಯವಸ್ಥೆಗೆ ಕೈ ಹಾಕಿದ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟ ಆಯ್ತು: ಬಿ.ಸಿ ನಾಗೇಶ್

    ಶುಭಾ ಸ್ಟೋರಿಯಲ್ಲಿ ಅವಿ ಅಂಡ್ ಬಿಟ್ಟು ಎಂದು ಬರೆದು ಪೋಸ್ಟ್ ಮಾಡಿದ್ದು, ಅರವಿಂದ್ ಕೆ.ಪಿ ಗೆ ಟ್ಯಾಗ್ ಮಾಡಿದ್ದಾರೆ. ಅದು ಅಲ್ಲದೇ ಇಂದು ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಅವರ ಹುಟ್ಟುಹಬ್ಬವಾಗಿದ್ದು, ಮಂಜನ ವಿಶೇಷ ಫೋಟೋವನ್ನು ಕೊಲಾಜ್ ಮಾಡಿ ವಿಶ್ ಮಾಡಿದ್ದಾರೆ.

    ಬಿಗ್‍ಬಾಸ್ ನಲ್ಲಿ ಎಲ್ಲರ ಜೊತೆಯೂ ಮುದ್ದು ಮುದ್ದಾಗಿ ಹಾಡಿಕೊಂಡು ಒಳ್ಳೆಯ ಮನರಂಜನೆಯನ್ನು ನೀಡುತ್ತಿದ್ದ ಇವರು, ಇನ್ನೂ ಸ್ವಲ್ಪ ದಿನಗಳಲ್ಲೇ ತಾವು ಪ್ರೀತಿಸಿದ ಹುಡುಗನ ಜೊತೆ ಮದುವೆಯನ್ನು ಆಗುತ್ತಿದ್ದಾರೆ. ಅದು ಅಲ್ಲದೇ ಶುಭಾ ತಮ್ಮ ಭಾವಿ ಪತಿಯನ್ನು ‘ಚಿನ್ನಿ ಬಾಂಬ್’ ಎಂದು ಕರೆಯುತ್ತಿದ್ದು, ಈ ಹೆಸರು ಬಿಗ್ ಬಾಸ್ ನಲ್ಲಿ ಸಖತ್ ಫೇಮಸ್ ಆಗಿತ್ತು. ಇದನ್ನೂ ಓದಿ: ಟೇಕ್ ಆಫ್ ಆಗ್ತಿದ್ದಂತೇ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

     

    View this post on Instagram

     

    A post shared by shubha Poonja . (@shubhapoonja)

    ಬಿಗ್ ಬಾಸ್ ನಿಂದ ಹೊರಬಂದ ತಕ್ಷಣ ಮದುವೆ ತಯಾರಿಯಲ್ಲಿ ಸಖತ್ ಬ್ಯುಸಿಯಾಗಿರುವ ಈ ನಟಿ, ಇತ್ತೀಚೆಗೆ ಖಾಸಗಿ ವಾಹಿನಿವೊಂದರಲ್ಲಿ ದೀಪಾವಳಿ ಸ್ಪೇಷಲ್ ಗೆ ನಿರೂಪಣೆಯನ್ನು ಸಹ ಮಾಡಿದ್ದರು.

  • ಅರವಿಂದ್ ಗೆಲುವಿಗಾಗಿ ಬೈಕ್ ರೇಸ್

    ಅರವಿಂದ್ ಗೆಲುವಿಗಾಗಿ ಬೈಕ್ ರೇಸ್

    ಬೆಂಗಳೂರು: 119 ದಿನಗಳ ಕಾಲ ನಡೆದ ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಅದ್ಧೂರಿಯಾಗಿ ತೆರೆ ಬೀಳುತ್ತಿದೆ. ಬಿಗ್‍ಬಾಸ್ ಶೋನಲ್ಲಿ ಬೈಕ್ ರೇಸರ್ ಅರವಿಂದ್ ಗೆಲುವಿಗಾಗಿ ಎಕ್ಸ್ ಪಲ್ಸ್ ರಿಲಿವ್ ಇನ್ಡೋರೋ (XPULSE RELIVE ENDURO ) ತಂಡದಿಂದ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. 8 ರಿಂದ 10 ಜನರಿರುವ ತಂಡದಿಂದ ಅರವಿಂದ್ ಗೆಲ್ಲಲಿ ಎಂದು ವಿಶ್ ಮಾಡುವ ಮೂಲಕ ಬೈಕ್ ರೇಸ್ ಮಾಡಲಿದ್ದಾರೆ.

    ಬಿಗ್ ಬಾಸ್ ಕನ್ನಡ ಸೀಸನ್ 8ರ ಗ್ರ್ಯಾಂಡ್ ಫಿನಾಲೆ ಆರಂಭಗೊಂಡಿದೆ. ನಗರದ ಬಿಡದಿ ಬಳಿ ಇರುವ ಇನ್ನೋವೆಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣವಾಗಿರುವ ವೇದಿಕೆಯಲ್ಲಿ ‘ಬಿಗ್ ಬಾಸ್ ಸೀಸನ್ 8’ರ ವಿನ್ನರ್ ಯಾರು ಅನ್ನೋದು ಇಂದು ರಾತ್ರಿ ಬಹಿರಂಗವಾಗಲಿದೆ. ಇಂದು ಸಂಜೆ 6 ಗಂಟೆಗೆ ಫಿನಾಲೆ ಶುರುವಾಗಲಿದೆ. ರಾತ್ರಿ 11ರ ತನಕ ಫಿನಾಲೆ ಎಪಿಸೋಡ್ ನಡೆಯಲಿದೆ.

    ಈಗಾಗಲೇ ಮನೆಯಿಂದ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಗೌಡ ಹೊರ ಬಂದಿದ್ದಾರೆ. ಅಂತಿಮ ಹಂತದಲ್ಲಿ ಮಂಜು ಪಾವಗಡ, ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ. ಇದ್ದಾರೆ.

    ಬಿಗ್‍ಬಾಸ್ ಗೆದ್ದವರಿಗೆ 53 ಲಕ್ಷ ರೂಪಾಯಿ, ರನ್ನರ್ ಅಪ್‍ಗೆ 11 ಲಕ್ಷ ರೂಪಾಯಿ, ಮೂರನೇ ಸ್ಥಾನದವರಿಗೆ 6 ಲಕ್ಷ ರೂಪಾಯಿ, ನಾಲ್ಕನೇ ಸ್ಥಾನದವರಿಗೆ 3.5 ಲಕ್ಷ ರೂಪಾಯಿ ಹಾಗೂ ಐದನೇ ಸ್ಥಾನದವರಿಗೆ 2.5 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ. ಬಿಗ್‍ಬಾಸ್ ಮನೆಯಲ್ಲಿ ಟಾಪ್ 5 ಅಲ್ಲಿ ಇರುವ ನೀವು ಯಾರೂ ಖಾಲಿ ಕೈಯಿಂದ ವಾಪಸ್ ಹೋಗಲ್ಲ ಎಂದು ಸುದೀಪ್ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಅರವಿಂದ್ ಬೈಕ್ ರೈಡಿಂಗ್ ಮೆಚ್ಚಿ, ಬಿಗ್‍ಮನೆಯ ಪಯಣ ಬಿಚ್ಚಿಟ್ಟ ಮನೆಮಂದಿ

    ಬಿಗ್‍ಬಾಸ್ ಸ್ಪರ್ಧಿಗಳಿಗೆ ಸಿಗುತ್ತಿರುವ ಬಹುಮಾನದ ಮೊತ್ತದ ಹಣದಲ್ಲಿ ಏರಿಕೆಯಾಗಿದೆ. ಪ್ರತಿ ಬಾರಿ ಗೆದ್ದವರಿಗೆ 50 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಈ ಬಾರಿ ಈ ಮೊತ್ತದಲ್ಲಿ 3 ಲಕ್ಷ ರೂಪಾಯಿ ಏರಿಕೆ ಮಾಡಲಾಗಿದೆ. ಇನ್ನು ರನ್ನರ್ ಅಪ್‍ಗೆ 10 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಈ ಬಾರಿ ಟಾಪ್ 5ರಲ್ಲಿರುವ ಎಲ್ಲರಿಗೂ ಮೊತ್ತ ನೀಡಲಾಗುತ್ತಿದೆ. ಇದನ್ನೂ ಓದಿ: ದಿವ್ಯಾ ಉರುಡುಗ ಹೇರ್ ಕಟ್ ಮಾಡಿದ ಅರವಿಂದ್

  • ದಿವ್ಯಾ ಕಣ್ಣೀರಿಗೆ ಕರಗಿದ ಅರವಿಂದ್ ಮನಸ್ಸು

    ದಿವ್ಯಾ ಕಣ್ಣೀರಿಗೆ ಕರಗಿದ ಅರವಿಂದ್ ಮನಸ್ಸು

    ಬಿಗ್‍ಬಾಸ್ ಮನೆಯಲ್ಲಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಗುತ್ತಾ ಇರುವ ಅರವಿಂದ್, ದಿವ್ಯಾ ಉರುಡುಗ ಜೋಡಿ ಇದೀಗ ಮತ್ತೆ ಸುದ್ದಿಯಾಗಿದೆ. ದಿವ್ಯಾ ಕಣ್ಣೀರಿಗೆ ಅರವಿಂದ್ ಕರಗಿದ್ದಾರೆ.

    ಬಿಗ್‍ಬಾಸ್ ಸ್ಪರ್ಧಿಗಳಿಗೆ ನಿಲ್ಲು ನಿಲ್ಲು ಕಾವೇರಿ, ತರತರ ಈ ಎತ್ತರ ಎನ್ನುವ ಎರಡು ಟಾಸ್ಕ್ ಅನ್ನು ನೀಡಿದ್ದರು. ಈ ವೇಳೆ 2 ಗುಂಪನ್ನು ಮಾಡಲಾಗಿತ್ತು. ದಿವ್ಯಾ ಅರವಿಂದ್ ಒಂದೇ ಗುಂಪಿನಲ್ಲಿ ಆಟವನ್ನು ಆಡುತ್ತಿದ್ದರು. ತರತರ ಎತ್ತರ ಟಾಸ್ಕ್ ಆಡುವ ಸಮಯದಲ್ಲಿ ಅರವಿಂದ್ ರೂಮ್ ಒಳಗೆ ಲಾಕ್ ಆಗಿ ಬಿಡುತ್ತಾರೆ. ಈ ವೇಳೆ 2 ತಂಡಗಳ ಚೆನ್ನಾಗಿ ಆಡುತ್ತಾರೆ ಗೇಮ್ ಟೈ ಆಗುತ್ತದೆ. ಈ ಹೇಗೆ ಟೈ ಆಯಿತ್ತು. ನಾವು ಗೆಲ್ಲ ಬೇಕಿತ್ತು ಎಂದು ಅರವಿಂದ್, ದಿವ್ಯಾ ಮಾತನಾಡುತ್ತಾ ಇರುವಾಗ ಗೇಮ್ ಸೋತಿರುವ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

    ದಿವ್ಯಾ ಏನ್ ಆಯ್ತು ಗೇಮ್‍ನಲ್ಲಿ ಎಂದು ವಿವರವಾಗಿ ಅರವಿಂದ್‍ಗೆ ಹೇಳಲು ಪ್ರಯತ್ನಿಸಿದ್ದಾರೆ. ಆದರೆ ಅರವಿಂದ್ ಆಟ ಗೆದ್ದಿಲ್ಲ ಎನ್ನುವ ಬೇಸರದಲ್ಲಿ ಇದ್ದರು. ದಿವ್ಯಾ ಕೂಡಾ ಬೇಸರವಾಗಿ ಕೂತಿದ್ದರು. ಅರವಿಂದ್ ಬಂದು ದಿವ್ಯಾ ಅವರಿಗೆ ಸಮಾಧಾನ ಮಾಡಿದ್ದಾರೆ.

    ನಾವು ಗೇಮ್ ಸೋತಿಲ್ಲ, ಆದರೆ ವೀನ್ ಆಗಬೇಕಿತ್ತು ಅಷ್ಟೇ. ಎಲ್ಲರೂ ಬೇಸ್ಟ್ ಟ್ರೈ ಮಾಡಿದ್ದಾರೆ. ಎಲ್ಲರೂ ಹಸನ್ಮುಖಿಯಾಗಿರಬೇಕು ಎಂದು ಹೇಳಿ ನೀವು ಬೇಸರವಾಗಬೇಡಿ, ಮುಂದಿನ ಆಟವನ್ನು ಚೆನ್ನಾಗಿ ಆಡುವಾ ಎಂದು ದಿವ್ಯಾ ಅರವಿಂದ್‍ಗೆ ಹೇಳಿದ್ದಾರೆ. ಆಗ ಟೀಮ್‍ನ ಎಲ್ಲರನ್ನೂ ಕರೆದು ಅರವಿಂದ್ ಚೆನ್ನಾಗಿ ಅಡುವ ಎಂದು ಹೇಳಿ ಆಟಕ್ಕೆ ಹುರಿದುಂಬಿಸಿದ್ದಾರೆ.

    ಬಿಗ್‍ಬಾಸ್ ಮನೆಯ ಈ ಪ್ರೀತಿ ಜೋಡಿ ಮನೆಯಲ್ಲಿ ಮುದ್ದಾಗಿ ಕಾಣಿಸಿಕೊಳ್ಳುತ್ತದೆ. ಆಗಾಗ ಸುದ್ದಿಯಾಗುತ್ತಾ ತಮ್ಮ ಕ್ಯೂಟ್ ಆಟ, ಮಾತು, ಗೇಮ್ ಮೂಲಕವಾಗಿ ಬಿಗ್‍ಬಾಸ್ ವೀಕ್ಷಕರಿಗೆ ಮೆಚ್ಚುಗೆಯಾಗುವಂತಹ ಜೋಡಿಯಾಗಿದೆ. ಇದೀಗ ದಿವ್ಯಾ ಅವರ ಬೇಸರವನ್ನು ಅರವಿಂದ್ ಮುದ್ದಾಗಿ ಸಮಾಧಾನ ಮಾಡಿದ್ದಾರೆ.

  • ಬಿಗ್‍ಬಾಸ್ ನಗದು ಬಹುಮಾನಕ್ಕಿಂತಲೂ ಹೆಚ್ಚಿನದ್ದನ್ನು ಸಂಪಾದಿಸಿದ್ದಾರೆ ದಿವ್ಯಾ

    ಬಿಗ್‍ಬಾಸ್ ನಗದು ಬಹುಮಾನಕ್ಕಿಂತಲೂ ಹೆಚ್ಚಿನದ್ದನ್ನು ಸಂಪಾದಿಸಿದ್ದಾರೆ ದಿವ್ಯಾ

    ಬಿಗ್‍ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು, ವೀಕ್ಷಕರನ್ನು ಪಡೆದುಕೊಂಡಿದ್ದವರು ದಿವ್ಯಾ ಉರುಡುಗ ಮತ್ತು ಅರವಿಂದ್ ಆಗಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗಿಂತ ದಿವ್ಯಾ ಉರುಡುಗ ಅವರು ಹೆಚ್ಚಿನದ್ದನ್ನೇ ಸಂಪಾದಿಸಿದ್ದಾರೆ ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

    ಬಿಗ್‍ಬಾಸ್ ವಿಜೇತರಿಗೆ 50 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ನೀಡಲಾಗುತ್ತದೆ. ಇದಕ್ಕಿಂತಲೂ ಹೆಚ್ಚಿನದ್ದನ್ನೇ ದಿವ್ಯಾ ಬಿಗ್‍ಬಾಸ್ ಮನೆಯಲ್ಲಿ ಸಂಪಾದಿಸಿದ್ದಾರೆ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ. ದಿವ್ಯಾ ಉರುಡುಗ ಸ್ಮಾಲ್ ಸ್ಕ್ರೀನ್‍ನಲ್ಲೇ ಹೆಚ್ಚು ಹೈಲೆಟ್ ಆಗಿರಲಿಲ್ಲ. ಆದರೆ ಈಗ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

    ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ. ಬಿಗ್‍ಬಾಸ್ ಮನೆಯಲ್ಲಿ ತುಂಬಾನೇ ಆಪ್ತವಾಗಿದ್ದರು. ಇಬ್ಬರ ಮಧ್ಯೆ ಪ್ರೀತಿ ಮೊಳೆತಿದ್ದು ವೀಕ್ಷಕರಿಗೆ ಸ್ಪಷ್ಟವಾಗಿತ್ತಾದರೂ ಅವರು ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ನಮ್ಮ ಮಧ್ಯೆ ಇದ್ದಿದ್ದು ಕೇವಲ ಉತ್ತಮ ಗೆಳೆತನ ಎಂದಿದ್ದರು. ಬಿಗ್‍ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಉಳಿದ ವಿಚಾರಗಳ ಬಗ್ಗೆ ಯೋಚಿಸುತ್ತೇವೆ ಎಂದು ಇಬ್ಬರೂ ಆಗಾಗ ಹೇಳಿಕೊಳ್ಳುತ್ತಿದ್ದರು.

    ಅನಾರೋಗ್ಯ ಕಾರಣದಿಂದ ದಿವ್ಯಾ ಉರುಡುಗ ಬಿಗ್‍ಬಾಸ್ ಮನೆಯಿಂದ ಹೊರ ನಡೆದಿದ್ದರು. 10 ವಾರಗಳ ಕಾಲ ಅವರು ವೀಕ್ಷಕರನ್ನು ರಂಜಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದಿವ್ಯಾ ಬೇಗ ಗುಣಮುಖರಾಗಲಿ ಎನ್ನುವ ಹಾರೈಕೆಗಳು ಬರುತ್ತಿವೆ. ಈ ಮಧ್ಯೆ ನೆಟ್ಟಿಗರು ಅವರ ಬಗ್ಗೆ ತಮಗನಿಸಿದ್ದನ್ನು ಗೀಚುತ್ತಿದ್ದಾರೆ. ಬಗ್‍ಬಾಸ್ ಮನೆಗೆ ಹೋದ ದಿನದಿಂದ ದಿವ್ಯಾ ಅವರಿಗೆ ಸಾಕಷ್ಟು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡಿದ್ದಾರೆ ಎನ್ನುವುದು ಗೊತ್ತಿರುವ ವಿಷಯವಾಗಿದೆ. ಆದರೆ ದಿವ್ಯಾ ಮನೆಯಿಂದ ಆಚೆ ಹೋಗುತ್ತಿದ್ದಂತೆ ಬಿಗ್‍ಬಾಸ್‍ನ ಹಲವು ವೀಕ್ಷಕರು ದಿವ್ಯಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

    ಅರವಿಂದ್ ಕೆ.ಪಿ.ಹಾಗೂ ದಿವ್ಯಾ ಉರುಡುಗ ಜೋಡಿ ವೀಕ್ಷಕರಿಗೆ ಇಷ್ಟವಾಗಿದೆ. ಹೀಗಾಗಿ, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರು ಅರವಿಂದ್-ದಿವ್ಯಾ ವಿಲ್ ಮಿಸ್ ಯು ಎಂದು ಬರೆದುಕೊಂಡಿದ್ದಾರೆ. ಕೆಲವರು, ದಿವ್ಯಾಗೆ ಸೋಲ್ ಮೇಟ್ ಸಿಕ್ಕಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ನೀಡುವ ಕ್ಯಾಶ್ ಪ್ರೈಸ್‍ಗಿಂತ ಇದು ದೊಡ್ಡದು ಎನ್ನುವ ಅಭಿಪ್ರಾಯ ಹೊರ ಹಾಕಿದ್ದಾರೆ. ದಿವ್ಯಾ ಅವರಿಗೆ ದೊಡ್ಡ್ ಅಭಿಮಾನಿಗಳ ಬಳಗವೇ ಹುಟ್ಟುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ದಿವ್ಯಾ ಅವರ ಕ್ಯೂಟ್ ಆಗಿರುವ ಸಾಕಷ್ಟು ವೀಡಿಯೋಗಳು ಹರಿದಾಡುತ್ತಿದೆ.

    ಕೊರೊನಾ ವೈರಸ್ ಎರಡನೇ ಅಲೆ ನಿಯಂತ್ರಿಸಲು ಕರ್ನಾಟಕ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿದೆ. ಹೀಗಾಗಿ ಬಿಗ್‍ಬಾಸ್ ಸೀಸನ್ 8 ಅರ್ಧಕ್ಕೆ ನಿಂತಿದೆ. ಎಲ್ಲಾ ಸ್ಪರ್ಧಿಗಳು ತಮ್ಮ ಮನೆ ಸೇರಿದ್ದಾರೆ. ಬಿಗ್‍ಬಾಸ್ ಮನೆಯ ಕೊನೆಯ ಕ್ಷಣಗಳನ್ನು ಮಂಗಳವಾರ ಹಾಗೂ ಬುಧವಾರ ಪ್ರಸಾರ ಮಾಡಲಾಗುತ್ತಿದೆ.

  • ವಯಸ್ಸಾಗಿದೆ ಫ್ಲರ್ಟ್ ಮಾಡ್ಬಾರ್ದು- ಸಂಬರಗಿ, ಅರವಿಂದ್ ಗುಸುಗುಸು

    ವಯಸ್ಸಾಗಿದೆ ಫ್ಲರ್ಟ್ ಮಾಡ್ಬಾರ್ದು- ಸಂಬರಗಿ, ಅರವಿಂದ್ ಗುಸುಗುಸು

    ಯಾವಾಗಲೂ ಒಬ್ಬರಿಗೊಬ್ಬರು ಜಗಳವಾಡುತ್ತಿದ್ದ ಅರವಿಂದ್ ಹಾಗೂ ಪ್ರಶಾಂತ್ ಸಂಬರಗಿ ಇದೀಗ ಒಟ್ಟಿಗೆ ಕೂತು ಗುಸು ಗುಸು ಮಾತನಾಡಿದ್ದು, ಅದೂ ಸಹ ಹುಡುಗಿಯರ ಜೊತೆ ಫ್ಲರ್ಟ್ ಮಾಡುವ ವಿಚಾರದ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ.

    ಚಕ್ರವರ್ತಿಯವರು ಪ್ರಿಯಾಂಕಾ ಜೊತೆ ಹೆಚ್ಚು ಮಾತನಾಡುವುದು ತಿಳಿದೇ ಇದೆ. ಆದರೆ ಪ್ರಿಯಾಂಕಾ ಚಕ್ರವರ್ತಿ ಅವರ ಜೊತೆ ಮಾತನಾಡಲು ಹಿಂಜರಿಗೆ ಇರುವುದು ಸಹ ಗೊತ್ತಿರುವ ವಿಚಾರ. ಈ ಬಗ್ಗೆ ಇದೀಗ ಗಾರ್ಡನ್ ಏರಿಯಾದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಅರವಿಂದ್ ಒಟ್ಟಿಗೆ ಕೂತು ಮಾತನಾಡಿದ್ದಾರೆ. ಹುಡುಗಿಯರಿಗೆ ನೀವು ದೇವತೆ, ಹಾಗೇ ಹೀಗೆ ಎಂದು ಮಾತನಾಡುತ್ತಾರೆ. ಆ ರೀತಿ ಮಾತನಾಡಬೇಡ ನಾಟಕೀಯವಾಗುತ್ತೆ ಎಂದು ಹಲವು ಬಾರಿ ಅವರಿಗೆ ತಿಳಿ ಹೇಳಿದ್ದೇನೆ. ತುಂಬಾ ನಾಟಕೀಯ ಎಂದು ಚಕ್ರವರ್ತಿ ಹೆಸರು ಪ್ರಸ್ತಾಪಿಸದೇ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

    ನಾನು ಊಟ ಬಡಿಸುವವರೆಗೆ ಊಟ ಮಾಡಬೇಡಿ, ನೀನು ಕಾಫಿ ಮಾಡಿಕೊಟ್ಟರೆ ದೇವತೆ ಮಾಡಿ ಕೊಟ್ಟಂಗಿರುತ್ತೆ ಮಾಡಿಕೊಡು ಎನ್ನುವುದು, ದೇವಲೋಕದಲ್ಲಿ ಯಾರಾದರೂ ತಂಗಿ ಇದ್ದರೆ ನಿನ್ನಂತೆ ಇರಲಿ ಎಂದು ವೈಷ್ಣವಿಗೆ ಹೇಳುವುದು ಸರಿಯಲ್ಲ. ಒಂದು ಸಾರಿ ಆದರೆ ಓಕೆ ಪ್ರತಿ ಬಾರಿ ಹೀಗೆ ಹೇಳಿದೆ ಒಳ್ಳೆಯದಲ್ಲ, ಹೀಗೆ ಮಾಡಬೇಡ, ಅತಿಯಾಗಿ ಕಾಣುತ್ತೆ, ಫೇಕ್ ಆಗಿ ಕಾಣುತ್ತೆ, ನಮ್ಮ ವಯಸ್ಸಿಗೆ ಅದು ಸರಿ ಕಾಣುವುದಿಲ್ಲ ಎಂದು ಪಬ್ಲಿಕ್‍ನಲ್ಲೂ ಹೇಳಿದ್ದೇನೆ, ಪ್ರೈವೇಟ್ ಆಗಿಯೂ ಹೇಳಿದ್ದೇನೆ ಎಂದು ಸಂಬರಗಿ ಹೇಳಿದ್ದಾರೆ.

    ಪ್ರಿಯಾಂಕಾ ಜೊತೆ ಫ್ಲರ್ಟ್ ಮಾಡಬೇಡ, ಸರಿ ಕಾಣುವುದಿಲ್ಲ, ಆ ಕಡೆಯಿಂದ ಅವಳು ಫ್ಲರ್ಟ್ ಮಾಡಿದರೆ ನೀನು ಫ್ಲರ್ಟ್ ಮಾಡು, ಫೋರ್ಸ್ ಮಾಡಬಾರದು. ಹಾಗೆ ಫ್ಲರ್ಟ್ ಮಾಡುವ ಅವಶ್ಯಕತೆ ಇಲ್ಲ ಬಾಸ್ ಎಂದು ಅರವಿಂದ್ ಬಳಿ ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅರವಿಂದ್, ಅವಶ್ಯಕತೆ ಅಂತಲ್ಲ, ಮಾಡಬಾರದು ಎಂದಿದ್ದಾರೆ.