Tag: ಅರವಳಿಕೆ ಮದ್ದು

  • ಇಬ್ಬರನ್ನು ಗಾಯಗೊಳಿಸಿದ್ದ ಗೂಳಿ ಸೆರೆ

    ಇಬ್ಬರನ್ನು ಗಾಯಗೊಳಿಸಿದ್ದ ಗೂಳಿ ಸೆರೆ

    ಶಿವಮೊಗ್ಗ: ಮದವೇರಿದಂತೆ ಓಡಾಡುತ್ತಿದ್ದ ಗೂಳಿಯೊಂದು ಇಬ್ಬರನ್ನು ಗಾಯಗೊಳಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಶಿವಮೊಗ್ಗ ವಿನೋಬನಗರದ ಶುಭ ಮಂಗಳ ಕಲ್ಯಾಣ ಮಂಟಪ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಗೂಳಿಯ ದಾಳಿಯಿಂದ ಆತಂಕಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಗೂಳಿ ತಪ್ಪಿಸಿಕೊಂಡು ಹೋಗದಂತೆ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧ ವಿಧಿಸಿದ್ದರು.

    ನಂತರ ಸ್ಥಳಕ್ಕಾಗಮಿಸಿದ ಪಶುವೈದ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಡಾರ್ಟಿಂಗ್ ಗನ್ ಮೂಲಕ ಗೂಳಿಗೆ ಅರವಳಿಕೆ ನೀಡಿ ಸೆರೆ ಹಿಡಿದು ಗೋ ಶಾಲೆಗೆ ಕಳುಹಿಸಿದ್ದಾರೆ. ಆತಂಕ ಸೃಷ್ಟಿಸಿದ್ದ ಗೂಳಿ ಸೆರೆಯಿಂದಾಗಿ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.