Tag: ಅರಣ್ಯಾಧಿಕಾರಿಗಳು

  • ಕಾಲಿಲ್ಲದ ದೊಡ್ಡ ಕಡಲಾಮೆ ರಕ್ಷಣೆ

    ಕಾಲಿಲ್ಲದ ದೊಡ್ಡ ಕಡಲಾಮೆ ರಕ್ಷಣೆ

    ಉಡುಪಿ: ಜಿಲ್ಲೆಯ ಕೋಟ ಪಡುಕೆರೆಯಲ್ಲಿ ಕಡಲ ಆಮೆಯನ್ನು ರಕ್ಷಣೆ ಮಾಡಲಾಗಿದೆ.

    ಕೋಟದ ಕಡಲ ಕಿನಾರೆಯಲ್ಲಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಕಡಲಾಮೆಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಸ್ಥಳೀಯ ಮೀನುಗಾರ ಪ್ರದೀಪ್ ಅವರು, ಕಡಲಂಚಿನಲ್ಲಿ ಬಲೆಹಾಕಿ ಮೀನು ಹಿಡಿಯುವ ಸಂದರ್ಭದಲ್ಲಿ ಗಾಯಗೊಂಡಿರುವ ಕಡಲ ಆಮೆ ಒದ್ದಾಡುತ್ತಿರುವುದನ್ನು ನೋಡಿದ್ದಾರೆ. ಬಳಿಕ ಸಮುದ್ರ ತೀರದಲ್ಲಿದ್ದ ಆಮೆಯನ್ನು ರಕ್ಷಣೆ ಮಾಡಿದ್ದಾರೆ.

    ರಕ್ಷಣೆ ಮಾಡಿದ ಆಮೆಯ ಬಗ್ಗೆ ಕೋಟದ ಸಾಮಾಜಿಕ ಸೇವಾ ಸಂಸ್ಥೆಯಾದ, ಗೀತಾನಂದ ಫೌಂಡೇಶನ್ ಗಮನಕ್ಕೆ ತಂದಿದ್ದಾರೆ. ಸಂಸ್ಥೆಯ ರವಿಕಿರಣ್ ಮತ್ತು ಸಾಮಾಜಿಕ ಕಾರ್ಯಕರ್ತ ವಿನಯಚಂದ್ರ ಅರಣ್ಯ ಇಲಾಖೆಯನ್ನು ಸಂಪರ್ಕ ಮಾಡಿದ್ದಾರೆ. ಉಪವಲಯ ಅರಣ್ಯಾಧಿಕಾರಿ ಜೀವನ್ ದಾಸ್ ಶೆಟ್ಟಿ, ಅರಣ್ಯ ರಕ್ಷಕರಾದ ಶಿವಪ್ಪ ನಾಯ್ಕ, ಅರಣ್ಯ ವೀಕ್ಷಕರು ಪರಶುರಾಮ್ ಮೇಟಿ ಮತ್ತು ವಾಹನ ಚಾಲಕ ಜೋಯ್ ಕಡಲಾಮೆ ರಕ್ಷಣಾ ಕಾರ್ಯಚರಣೆಯನ್ನು ನೆಡೆಸಿದ್ದಾರೆ.

    ಬಳಿಕ ಆಮೆಯನ್ನು ಕಡಲಲ್ಲಿ ಅಲೆಗಳ ಅಬ್ಬರ ಹೆಚ್ಚಾದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಹಾರಾಡಿಯ ಸುವರ್ಣ ನದಿ ಮಡಿಲಿಗೆ ಬಿಡಲಾಗಿದೆ. ಮೀನುಗಾರರ ಬಲೆಗೆ ಸಿಲುಕಿ ಅಥವಾ ದೊಡ್ಡ ಮೀನುಗಳ ದಾಳಿಗೆ ತುತ್ತಾಗಿ ಆಮೆ ಒಂದು ಕಾಲನ್ನು ಕಳೆದುಕೊಂಡಿದೆ.

  • ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿ ಹೆಣ್ಣಾನೆ ಸಾವು

    ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿ ಹೆಣ್ಣಾನೆ ಸಾವು

    ಚಾಮರಾಜನಗರ: ಕೆರೆಗೆ ನೀರು ಕುಡಿಯಲು ಹೋದ ವೇಳೆ ಹೆಣ್ಣಾನೆಯೊಂದು ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.

    ಬಂಡಿಪುರದ ಕುಂದಗೆರೆ ವಲಯದ ಸಿದ್ರಾಮಯ್ಯನ ಕಟ್ಟೆಯಲ್ಲಿ ಹೆಣ್ಣಾನೆ ನೀರು ಕುಡಿಯಲು ಹೋದ ವೇಳೆ ಈ ಘಟನೆ ಸಂಭವಿಸಿದೆ. ಬೆಳಗಿನ ಜಾವ 4 ಗಂಟೆಯ ವೇಳೆಯಲ್ಲಿ ಹೆಣ್ಣಾನೆಯೊಂದು ನೀರು ಕುಡಿಯಲು ಕೆರೆಯ ಬಳಿ ಹೋಗಿದೆ.

    ಬೇಸಿಗೆ ಕಾಲವಾದ್ದರಿಂದ ಕೆರೆಯಲ್ಲಿ ನೀರಿಗಿಂತ ಕೆಸರು ಹೆಚ್ಚಿರುವ ಕಾರಣ ಆನೆ ನೀರಿಗಾಗಿ ಕೆರೆಯ ಮಧ್ಯ ಭಾಗಕ್ಕೆ ಹೋಗಿದೆ. ಈ ವೇಳೆ ಆನೆ ಕೆಸರಲ್ಲಿ ಸಿಲುಕಿದ್ದು, ಮೇಲೆ ಹೇಳಲು ಒದ್ದಾಡಿದೆ. ಕೊನೆಗೆ ಮೇಲೆ ಹೇಳಲು ಸಾಧ್ಯವಾಗದ ಕಾರಣ ಆನೆ ಸುಸ್ತಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ.

    ಆನೆ ಮೃತಪಟ್ಟಿದ್ದನ್ನು ಗ್ರಾಮಸ್ಥರು ನೋಡಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

  • ನಿತ್ರಾಣವಾಗಿ ಬಿದ್ದಿದ್ದ ಕಡವೆಗೆ ಚಿಕಿತ್ಸೆ ನೀಡಿದ ಅರಣ್ಯಾಧಿಕಾರಿಗಳು

    ನಿತ್ರಾಣವಾಗಿ ಬಿದ್ದಿದ್ದ ಕಡವೆಗೆ ಚಿಕಿತ್ಸೆ ನೀಡಿದ ಅರಣ್ಯಾಧಿಕಾರಿಗಳು

    ಚಿಕ್ಕಮಗಳೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ನೀರು ಸಿಗದೆ ನಿತ್ರಾಣಗೊಂಡು ಬಿದ್ದಿದ್ದ ಕಡವೆಗೆ ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡಿ, ತಮ್ಮ ವಾಹನದಲ್ಲೇ ಕಾಡಿಗೆ ಬಿಟ್ಟಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ನಂದಿಬಂಟ್ಲು ಗ್ರಾಮದಲ್ಲಿ ನಡೆದಿದೆ.

    ಭದ್ರಾ ಅಭಯಾರಣ್ಯದಿಂದ ಆಹಾರ ಹುಡುಕುತ್ತಾ ಗ್ರಾಮದ ಸಚಿನ್ ಎಂಬವರ ತೋಟಕ್ಕೆ ಬಂದಿದ್ದ ಕಡವೆ ಅಲ್ಲೇ ಸುಸ್ತಾಗಿ ಬಿದ್ದಿತ್ತು. ತೋಟಕ್ಕೆ ಬಂದ ಸಚಿನ್ ಕಡವೆಯನ್ನ ಕಂಡು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ತಣಿಗೆಬೈಲು ಅರಣ್ಯಾಧಿಕಾರಿ ಉಲ್ಲಾಸ್ ಹಾಗೂ ಸಿಬ್ಬಂದಿಗಳು ಕಡವೆಗೆ ಚಿಕಿತ್ಸೆ ನೀಡಿ, ನೀರು ಕುಡಿಸಿ ತಮ್ಮ ಕಾರಿನಲ್ಲಿ ತೆಗೆದುಕೊಂಡು ಹೋಗಿ ಕಾಡಿಗೆ ಬಿಟ್ಟಿದ್ದಾರೆ.