Tag: ಅರಣ್ಯಧಾಮ

  • ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಕೋಟೆ ನಾಡಿನ ಜೋಗಿಮಟ್ಟಿ ನಿಸರ್ಗಧಾಮ!

    ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಕೋಟೆ ನಾಡಿನ ಜೋಗಿಮಟ್ಟಿ ನಿಸರ್ಗಧಾಮ!

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಅಂದಾಕ್ಷಣ ಕೋಟೆ ಕೊತ್ತಲುಗಳು ಮಾತ್ರ ನಾವು ಕಾಣುತ್ತೇವೆ. ಆದರೆ ಮಲೆನಾಡನಲ್ಲಿರುವಂತೆ ಇರುವ ನಿಸರ್ಗಧಾಮವೊಂದು ಕೋಟೆನಾಡಲ್ಲಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರೋ ತುಂತುರು ಮಳೆಯಿಂದಾಗಿ ಜೋಗಿಮಟ್ಟಿ ನಿಸರ್ಗಧಾಮ ಹಸಿರು ಸೀರೆ ಹೊದ್ದ ನಾರಿಯಂತೆ ಕಂಗೊಳಿಸುತ್ತಾ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

    ಐತಿಹಾಸಿಕ ಹಿನ್ನಲೆಯ ಪ್ರವಾಸಿ ತಾಣವೆನಿಸಿರೋ ಕೋಟೆನಾಡು ಚಿತ್ರದುರ್ಗ ಕೇವಲ ಬಂಡೆಗಳಿಂದ ಕೂಡಿರೋ ಬಯಲುಸೀಮೆಯೆಂದು ಭಾವಸಿದ್ದಾರೆ. ಆದರೆ ಚಿತ್ರದುರ್ಗ ನಗರದಿಂದ ಕೇವಲ 10 ಕಿ.ಮೀಟರ್ ದೂರದಲ್ಲಿರುವ ಜೋಗಿಮಟ್ಟಿ ಗಿರಿಧಾಮ ಅವರ ಭಾವನೆಯನ್ನ ಅಲ್ಲೆಗೆಳೆಯುವಂತಿದೆ. ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಷ್ಟು ವಿಶಾಲವಾಗಿರುವ ಈ ಕಾಯ್ದಿಟ್ಟ ಅರಣ್ಯ ಪ್ರದೇಶ ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶಗಳ ಪೈಕಿ ಒಂದಾಗಿದೆ.

    ಇಂಥ ಅಪರೂಪದ ಗಿರಿಧಾಮ ಮಳೆಗಾಲ ಹಾಗೂ ಚಳಿಗಾಲದಲ್ಲಂತೂ ಮಂಜಿನ ಮಡಿಕೇರಿ, ಸೊಬಗಿನ ಮಲೆನಾಡನ್ನೇ ನಾಚಿಸುವಂತೆ ರೂಪುಗೊಳ್ಳುತ್ತದೆ. ಕಳೆದ ಒಂದು ವಾರದಿಂದ ಜಿನುಗುತ್ತಿರುವ ಮಳೆಯಿಂದಾಗಿ ಜೋಗಿಮಟ್ಟಿ ಮತ್ತಷ್ಟು ಹಚ್ಚಹಸಿರಾಗಿ ಕಂಗೊಳಿಸುತ್ತಿದೆ. ಮೋಡದ ಅಲೆಗಳು ಜೋಗಿಮಟ್ಟಿಯ ಗಿರಿಧಾಮಗಳಿಗೆ ಮುತ್ತಿಟ್ಟು ನಲಿಯುತ್ತಿವೆ. ಜೋಗಿಮಟ್ಟಿ ಮೇಲ್ಭಾಗದಲ್ಲಿರುವ ವೀವ್ ಪಾಯಿಂಟ್ ಹಾಗೂ ಅತಿಥಿಗೃಹದ ಬಳಿಯ ಪ್ರಕೃತಿಕ ಸೊಬಗಂತೂ ಮೈಮರೆಸುತ್ತದೆ. ಹೀಗಾಗಿ ಕಳೆದ ವಾರದಿಂದ ಜೋಗಿಮಟ್ಟಿಗೆ ತೆರಳಿ ಸೌಂದರ್ಯದ ಸವಿ ಸವಿಯುವವರ ಸಂಖ್ಯೆ ಹೆಚ್ಚಾಗಿದೆ. ಜೋಗಿಮಟ್ಟಿಯ ನಿಸರ್ಗದಲ್ಲಿ ಪರಿಸರ ಪ್ರಿಯರು ಸೆಲ್ಫಿ ತೆಗೆದುಕೊಳ್ಳುವುದು, ಗ್ರೂಪ್ ಪೋಟೋ ಕ್ಲಿಕ್ಕಿಸಿಕೊಳ್ಳುವ ದೃಶ್ಯಗಳು ಸಾಮಾನ್ಯವಾಗಿದೆ.

    ಇನ್ನು ಕೊರೆಯುವ ಚಳಿ, ಬಿರುಗಾಳಿ ಮತ್ತು ಕೈಗೆ ಸಿಗುವ ಮೋಡಗಳ ನಡುವೆ ತೇಲುವ ಜನ ಸಖತ್ ಏಂಜಾಯ್ ಮಾಡುತ್ತಿದ್ದಾರೆ. ಕೆಲವರು ಕೇಕೆ ಹಾಕಿ ಖುಷಿಪಡುತ್ತಾರೆ, ಹಾಡು ಗುನುಗುತ್ತ ಹೆಜ್ಜೆ ಹಾಕುತ್ತಾರೆ. ಕೋಟೆನಾಡಿನ ಪಾಲಿಗಂತೂ ಈ ನಿಸರ್ಗದ ಮಡಿಲು ಧರೆಯ ಮೇಲಿನ ಸ್ವರ್ಗವೇ ಆಗಿದೆ ಎಂದು ನಿಸರ್ಗ ಪ್ರಿಯರು ಕರೆಯುತ್ತಾರೆ.

    ಜೋಗಿಮಟ್ಟಿ ಕಾಯ್ದಿಟ್ಟ ಅರಣ್ಯ ಪ್ರದೇಶ ಇತ್ತೀಚೆಗೆ ವನ್ಯಜೀವಗಳ ಧಾಮವಾಗಿಯೂ ಘೋಷಿಸಲ್ಪಟ್ಟಿದೆ. ಇಲ್ಲಿ ಕರಡಿ, ಜಿಂಕೆ, ಚಿರತೆಯಂಥ ಪ್ರಾಣಿಗಳಿವೆ. ನವಿಲು ಮತ್ತಿತರೆ ಪಕ್ಷಿಗಳಂತೂ ಲೆಕ್ಕವಿಲ್ಲದಷ್ಟಿವೆ. ನಿತ್ಯ ನೂರಾರು ಜನ ಈ ನಿಸರ್ಗ ಸೌಂದರ್ಯ ಸವಿಯಲು ಜೋಗಿಮಟ್ಟಿಗೆ ಭೇಟಿ ನೀಡುತ್ತಾರೆ. ಆದ್ದರಿಂದ ಅರಣ್ಯ ಇಲಾಖೆ ಈ ಜೋಗಿಮಟ್ಟಿಗೆ ಇನ್ನಷ್ಟು ಮೂಲ ಸೌಕರ್ಯಗಳನ್ನು ಕಲ್ಪಿಸಿ ಅರಣ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದು ಭೇಟಿ ನೀಡುವ ಪ್ರವಾಸಿಗರು ಮನವಿ ಮಾಡಿಕೊಂಡಿದ್ದಾರೆ.

  • ಸಿಂಹಗಳನ್ನ ಬೈಕ್‍ನಲ್ಲಿ ಚೇಸ್ ಮಾಡಿ ಮಜಾ ತಗೊಂಡ್ರು- ವಿಡಿಯೋ ವೈರಲ್

    ಸಿಂಹಗಳನ್ನ ಬೈಕ್‍ನಲ್ಲಿ ಚೇಸ್ ಮಾಡಿ ಮಜಾ ತಗೊಂಡ್ರು- ವಿಡಿಯೋ ವೈರಲ್

    ಅಹಮದಾಬಾದ್: ಬೈಕ್ ಸವಾರರ ಗುಂಪೊಂದು ಗುಜರಾತ್‍ನ ಗಿರ್ ಅರಣ್ಯಧಾಮದಲ್ಲಿ ಸಿಂಹಗಳನ್ನ ಚೇಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ.

    ಘಟನೆಗೆ ಸಂಬಂಧಿಸಿದಂತೆ ನಾಲ್ವರಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ನಾಲ್ವರು ಸಿಂಹಗಳು, ಸಿಂಹಿಣಿಗಳು ಹಾಗೂ ಮರಿಗಳನ್ನು ಬೈಕ್‍ನಲ್ಲಿ ಚೇಸ್ ಮಾಡಿದ್ದಾರೆ. ಒಂದು ಬೈಕಿನ ಲೈಸೆನ್ಸ್ ಪ್ಲೇಟ್ ವಿಡಿಯೋದಲ್ಲಿ ಕಾಣಿಸುತ್ತದೆ. ಸಿಂಹಗಳು ಬೈಕ್ ಸದ್ದಿಗೆ ಬೆದರಿ ಅಲ್ಲಿಂದ ದಿಕ್ಕಾಪಾಲಾಗಿ ಓಡಿವೆ. ಇದರ ವಿಡಿಯೋವನ್ನ ಬುಧವಾರದಂದು ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳಲಾಗಿತ್ತು.

    ವನ್ಯಜೀವಿ ಅಧಿಕಾರಿಗಳು ಉಳಿದ ಆರೋಪಿಗಳ ಪತ್ತೆಗಾಗಿ ಹಾಗೂ ವಿಡಿಯೋದ ಮೂಲದ ಬಗ್ಗೆ ತಿಳಿಯಲು ಪ್ರಯತ್ನ ನಡೆಸಿದ್ದಾರೆ.

    ಇಂದು ರಾಜ್‍ಕೋಟ್ ಬಳಿ ಓರ್ವ ಬೈಕ್ ಸವಾರನನ್ನು ಬಂಧಿಸಲಾಗಿದೆ. ಬೈಕ್ ನೋಂದಣಿ ಸಂಖ್ಯೆ ಹಾಗೂ ಸ್ಥಳೀಯ ಗ್ರಾಮಸ್ಥರ ಮಾಹಿತಿ ಆಧರಿಸಿ ಆತನನ್ನು ಪತ್ತೆಹಚ್ಚಲಾಗಿದೆ. ಉಳಿದ ಮೂವರು ಆರೋಪಿಗಳಲ್ಲಿ ಇಬ್ಬರು ಸೌರಾಷ್ಟ್ರದ ಅಮ್ರೇಲಿ ಜಿಲ್ಲೆಯವರು ಎಂದು ವರದಿಯಾಗಿದೆ.

     

     

    ಗುಜರಾತ್‍ನ ಗಿರ್ ಅರಣ್ಯಧಾಮ ಏಷ್ಯಾಟಿಕ್ ಲಯನ್‍ಗಳ ಏಕೈಕ ನೈಸರ್ಗಿಕ ವಾಸಸ್ಥಾನವಾಗಿದೆ. 1400 ಚದರ ಅಡಿ ವಿಸ್ತೀರ್ಣದ ಈ ವನ್ಯಜೀವಿಧಾಮದಲ್ಲಿ 400 ಸಿಂಹಗಳಿವೆ. ಜೂನ್‍ನಲ್ಲಿ ಅಮ್ರೇಲಿ ಜಿಲ್ಲೆಯಲ್ಲಿ ಕಾರಿನಲ್ಲಿದ್ದ ಯುವಕರ ಗುಂಪೊಂದು ಸಿಂಹದ ಮರಿಯನ್ನು ಚೇಸ್ ಮಾಡಿದ ವಿಡಿಯೋ ಹರಿದಾಡಿತ್ತು.

    https://www.youtube.com/watch?v=-6-vyqTM644