Tag: ಅಮ್ಮ

  • ನೀರು ತರೋ ಗಾಡಿಯಲ್ಲೇ ಅಮ್ಮನನ್ನ ಆಸ್ಪತ್ರೆಗೆ ಕರೆದೊಯ್ದ ಮಗ- ಕೊಪ್ಪಳದಲ್ಲೊಂದು ಮನಕಲಕುವ ಘಟನೆ

    ನೀರು ತರೋ ಗಾಡಿಯಲ್ಲೇ ಅಮ್ಮನನ್ನ ಆಸ್ಪತ್ರೆಗೆ ಕರೆದೊಯ್ದ ಮಗ- ಕೊಪ್ಪಳದಲ್ಲೊಂದು ಮನಕಲಕುವ ಘಟನೆ

    ಕೊಪ್ಪಳ: ವ್ಯಕ್ತಿಯೊಬ್ಬರು ತನ್ನ ಅನಾರೋಗ್ಯಪೀಡಿತ ತಾಯಿಯನ್ನು ಸಮೀಪದ ಆಸ್ಪತ್ರೆಗೆ ನೀರು ತರುವ ತಳ್ಳು ಗಾಡಿಯಲ್ಲಿ ಕರೆದುಕೊಂಡು ಹೋದ ಮನ ಕಲಕುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕುಷ್ಟಗಿ ತಾಲೂಕಿನ ಜುಂಜಲಕೊಪ್ಪ ಗ್ರಾಮದ ಹನುಮಪ್ಪ ದಾಸರ ತನ್ನ ಅಸ್ವಸ್ಥ ತಾಯಿ ಹನುಮವ್ವ ಕಲ್ಲಪ್ಪ ದಾಸರ(75) ಅವರನ್ನು ನೀರು ತರುವ ತಳ್ಳುಗಾಡಿಯಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಹನುಮವ್ವನಿಗೆ ಮೂವರು ಮಕ್ಕಳಿದ್ದಾರೆ. ಬದುಕು ಹರಸಿ ಇಬ್ಬರು ಮಕ್ಕಳು ಗೋವಾಕ್ಕೆ ಗುಳೆ ಹೋಗಿದ್ದಾರೆ. ಈ ಕುಟುಂಬಕ್ಕೆ ಕೂಲಿಯೇ ಜೀವನಾಧಾರವಾಗಿದೆ. ಪಡಿತರ ಚೀಟಿಯ ಆಹಾರ ಧಾನ್ಯ, ವೃದ್ಧಾಪ್ಯ ವೇತನ ಕೊಂಚ ಆಸರೆಯಾಗಿದೆ. ಇನ್ನು ಹನುಮವ್ವ ಅವರ ಆರೋಗ್ಯ ಆಗಾಗ ಕೈಕೊಡುತ್ತಿದ್ದು, ಆಕೆಯ ಮಗ ಹನುಮಂತಪ್ಪ ಅಥವಾ ಆತನ ಸೊಸೆಯಂದಿರು ಚಳಗೇರಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ತೋರಿಸಬೇಕಾಗುತ್ತಿದೆ.

    ಈ ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲದೆ ಖಾಸಗಿ ವಾಹನಗಳನ್ನೇ ಆಶ್ರಯಿಸಬೇಕಾಗಿದೆ. ಅಷ್ಟು ಹಣವಿಲ್ಲದ ಕಾರಣ ಹನುಮವ್ವರಿಗೆ ನೀರು ತರುವ ಗಾಡಿಯೇ ಆಂಬುಲೆನ್ಸ್ ಆಗಿದೆ. ಆಕೆಯ ಮಕ್ಕಳು ಮತ್ತು ಸೊಸೆಯಂದಿರು ನೀರು ತರುವ ತಳ್ಳುಗಾಡಿಯಲ್ಲಿ ಕೂರಿಸಿಕೊಂಡು, 2 ಕಿ.ಮೀ. ದೂರದ ಆಸ್ಪತ್ರೆಗೆ ಕರೆದೊಯ್ಯುತ್ತಾರೆ.

    ಜುಂಜಲಕೊಪ್ಪ ಗ್ರಾಮದಲ್ಲಿ ಹಲವು ಕುಟುಂಬಗಳು ಇಂಥ ಸಂಕಷ್ಟ ಎದುರಿಸುತ್ತಿವೆ. ಜಿಲ್ಲಾಡಳಿತ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

    https://youtu.be/zROwVtjiGok

  • ಆಸ್ಪತ್ರೆಯಲ್ಲಿ 1 ಬಾರಿಯೂ ಜಯಲಲಿತಾ ಭೇಟಿಗೆ ಬಿಡಲಿಲ್ಲ: ಪನ್ನೀರ್ ಸೆಲ್ವಂ

    – ಜಯಾ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ಆಗ್ಬೇಕು

    ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಜಯಲಲಿತಾ ಸಮಾಧಿ ಬಳಿ ಧ್ಯಾನ ಮಗ್ನರಾಗಿದ್ದ ಪನ್ನೀರ್ ಸೆಲ್ವಂ ಶಶಿಕಲಾ ವಿರುದ್ಧ ತಿರುಗಿಬಿದದ್ದಿದ್ದಾರೆ. ಜಯಲಲಿತಾ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಒಂದು ಬಾರಿಯೂ ಅವರನ್ನು ನೋಡಲು ನನ್ನನ್ನು ಬಿಟ್ಟಿರಲಿಲ್ಲ ಎಂದು ಪನ್ನೀರ್ ಸೆಲ್ವಂ ಟ್ವೀಟ್ ಮಾಡಿದ್ದಾರೆ.

    ನಾನು ಪ್ರತಿದಿನ ಅಮ್ಮನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗುತ್ತಿದ್ದೆ. ಆದ್ರೆ ಒಂದು ಬಾರಿಯೂ ಅವರನ್ನು ಭೇಟಿಯಾಗುವ ಅವಕಾಶ ಸಿಗಲಿಲ್ಲ ಎಂದು ಒನ್ನೀರ್ ಸೆಲ್ವಂ ಹೇಳಿದ್ದಾರೆ. ವರದಿಗಾರರೊಂದಿಗೆ ಮಾತನಾಡಿರುವ ಅವರು, ಇನ್ಫೆಕ್ಷನ್ ಆಗುತ್ತದೆ ಎಂಬ ಭಯದಿಂದ ಜಯಲಲಿತಾರನ್ನು ನೋಡಲು ಆಗಲಿಲ್ಲ ಎಂದು ಪ್ರತಿದಿನ ನನ್ನ ಕುಟುಂಬದವರಿಗೆ ಹೇಳುತ್ತಿದೆ. ಪ್ರತಿದಿನ ನನ್ನ ಕುಟುಂಬದವರು, ನೀವು ಆಸ್ಪತ್ರೆಯಲ್ಲಿ ಅಮ್ಮನನ್ನು ನೋಡಿದ್ರಾ ಅಂತ ಕೇಳ್ತಿದ್ರು. ಹೌದು ಅಂತ ಹೇಳಬೇಕು ಎಂದುಕೊಂಡರೂ ಸುಳ್ಳು ಹೇಳಲು ಮನಸ್ಸಾಗಲಿಲ್ಲ ಎಂದಿದ್ದಾರೆ.

    ಜಯಲಲಿತಾ ಚಿಕಿತ್ಸೆಯ ಬಗ್ಗೆ ಅನುಮಾನಗಳಿದ್ದು, ಅದಕ್ಕೆ ಉತ್ತರ ಬೇಕು. ಜಯಲಲಿತಾ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ. ಮಂಗಳವಾರದಂದು ಎಐಎಡಿಂಕೆಯ ಕಾರ್ಯಕರ್ತ ಪಿಹೆಚ್ ಪಂಡಿಯನ್, ಜಯಲಲಿತಾ ಅವರ ಸಾವು ಸಹಜ ಸಾವಲ್ಲ ಎಂದು ಆರೋಪಿಸಿದ್ದರು.

    ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾರನ್ನು ಶಶಿಕಲಾ ಸೇರಿದಂತೆ ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಭೇಟಿ ಮಾಡಿದ್ದರು. ಸಿಎಂಬರ್ 5 ರಂದು ಜಯಲಲಿತಾ ನಿಧನರಾದ್ರು.