Tag: ಅಮ್ಮ

  • ಜನವರಿ 1ರಂದು ಡೆಲಿವರಿಗಾಗಿ ಅಮ್ಮಂದಿರ ದುಂಬಾಲು- ಹೊಸ ವರ್ಷ ತೀರಾ ಸ್ಪೆಷಲ್

    ಜನವರಿ 1ರಂದು ಡೆಲಿವರಿಗಾಗಿ ಅಮ್ಮಂದಿರ ದುಂಬಾಲು- ಹೊಸ ವರ್ಷ ತೀರಾ ಸ್ಪೆಷಲ್

    ಬೆಂಗಳೂರು: ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿದೆ. ಅತ್ತ ನವಮಾಸ ತುಂಬುತ್ತಿರುವ ಅಮ್ಮಂದಿರು ಹೊಸ ವರ್ಷಕ್ಕೆ ಹೆರಿಗೆ ಮಾಡಿಸಲು ದುಂಬಾಲು ಬೀಳುತ್ತಿದ್ದಾರೆ. ಕೇವಲ ಹೊಸ ವರ್ಷ ನಯಾ ದಿನ ಅನ್ನುವ ಕಾರಣವಲ್ಲ. ಆ ದಿನ ಹುಟ್ಟುವ ಮಗುವಿನ ಅದೃಷ್ಟವೇ ಬದಲಾಗುತ್ತೆ.

    ನವಮಾಸವೂ ತನ್ನ ಕಂದನಿಗಾಗಿ ಚಡಪಡಿಸುವ ಅಮ್ಮ ತನ್ನ ಕರುಳ ಕುಡಿ ಒಳ್ಳೆಯ ದಿನವೇ ಪ್ರಪಂಚ ನೋಡಬೇಕು ಅಂತಾ ಬಯಸುತ್ತಾರೆ. ಆದರೆ ಈಗ ಫ್ಯಾನ್ಸಿ ನಂಬರ್ ಗಳ ಸೆಳೆತ, ಒಳ್ಳೆಯ ದಿನ ನೋಡಿಯೇ ಡೆಲಿವರಿ ಡೇಟ್ ಅಡ್ಜೆಸ್ಟ್ ಮೆಂಟ್ ಮಾಡುವ ಟ್ರೆಂಡ್ ಸಿಕ್ಕಾಪಟ್ಟೆ ಜೋರಾಗಿದೆ. ಅದರಲ್ಲೂ ಹೆರಿಗೆಗೆ ಅಸುಪಾಸಿನಲ್ಲಿರುವವರು ಹೊಸ ವರ್ಷ ಜನವರಿ ಒಂದರಂದು ಡೆಲಿವರಿ ಮಾಡಿಸಲು ವೈದ್ಯರಿಗೆ ಡಿಮ್ಯಾಂಡ್ ಇಡುತ್ತಿದ್ದಾರೆ. ರಿಸ್ಕಿ ಇಲ್ಲದ ಡೆಲಿವರಿಗಳನ್ನು ಅವರಿಚ್ಚೆಯ ದಿನವೇ ಮಾಡಬಹುದು. ಆದರೆ ಸ್ವಾಭಾವಿಕವಾಗಿ ಹೆರಿಗೆ ನೋವು ಬಂದಾಗ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಾರೆ.

    ಸಾಮಾನ್ಯವಾಗಿ ಮಂಗಳವಾರ ಡೆಲಿವರಿ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ ಈ ಬಾರಿ ಜನವರಿ ಒಂದು ಮಂಗಳವಾರ ಬಂದರೂ ಅಂದೇ ಆಗಬೇಕು ಅಂತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಜ್ಯೋತಿಷಿಗಳ ಸಲಹೆ. ಜನವರಿ ಒಂದರಂದು ಸ್ವಾತಿ ನಕ್ಷತ್ರ, ತುಲಾ ರಾಶಿ ಇರುವುದರಿಂದ ಅದೃಷ್ಟದ ಸಂಕೇತವಾಗಿರುತ್ತದೆ. ಹೀಗಾಗಿ ಈ ಡೇಟ್ ಗೆ ಡಿಮ್ಯಾಂಡ್ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

    ಹೊಸ ವರ್ಷ ಅಂದರೆ ಒಂಥರ ಹೊಸ ಬದುಕಿನ ಪ್ರಾರಂಭ. ಆ ದಿನ ಕಂದನ ಆಗಮನಕ್ಕೆ ಕಾಯುವ ಅಮ್ಮಂದಿರು. ಅಮ್ಮನ ತವಕ ಗರ್ಭದೊಳಗಿನ ಕಂದಮ್ಮಗೆಲ್ಲ ಅರ್ಥವಾಗುತ್ತಾ? ಒಳ್ಳೆ ದಿನದ ಡೆಲಿವರಿಗೆ ಆಸೆಗೆ ಬಿದ್ದು ತೊಂದರೆ ತೆಗೆದುಕೊಳ್ಳಬಾರದು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂದು ತಂದೆ, ಇಂದು ತಾಯಿ – ದೇವಿ ಪ್ರಸಾದದಿಂದ ಮಕ್ಕಳು ಅನಾಥರಾದ್ರು!

    ಅಂದು ತಂದೆ, ಇಂದು ತಾಯಿ – ದೇವಿ ಪ್ರಸಾದದಿಂದ ಮಕ್ಕಳು ಅನಾಥರಾದ್ರು!

    ಮೈಸೂರು: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ವಿಷ ಪ್ರಸಾದ ಸೇವನೆ ಪ್ರಕರಣದಲ್ಲಿ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಸೋಮವಾರ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಿಧನರಾಗಿದ್ದಾರೆ.

    ಬೆಳಗ್ಗೆ 8:45ಕ್ಕೆ ಮೋನಿ ಬಾಯಿ ಮೃತಪಟ್ಟಿದ್ದಾರೆ. ಮೈಲಿ ಬಾಯಿ ಪತಿ ಕೃಷ್ಣ ನಾಯಕ್ ಸಹ ಮೊನ್ನೆ ನಿಧನವಾಗಿದ್ದರು. ಮೃತರು ಕೋಟೆಪುದೆ ಗ್ರಾಮದವರು ಎಂದು ತಿಳಿದು ಬಂದಿದೆ. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೈಲಿಬಾಯಿ ಕೂಡ ಮೃತಪಟ್ಟಿದ್ದಾರೆ. ಇತ್ತ ಅಪ್ಪ ಅಮ್ಮನನ್ನ ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ.

    ಏನಾಗಿತ್ತು?
    ಸುಳವಾಡಿ ಗ್ರಾಮದ ಮಾರಮ್ಮನ ದೇವಸ್ಥಾನಕ್ಕೆ ಮಾರ್ಟಳ್ಳಿಯ ಕೃಷ್ಣ ನಾಯ್ಕ ಪತ್ನಿ ಮೈಲಿ ಬಾಯಿ ಜೊತೆ ಹೋಗಿದ್ದರು. ನಮಗೆ ಕೆಲಸ ಸರಿಯಾಗಿ ಸಿಗುತ್ತಿಲ್ಲ. ನಮ್ಮ ಕುಟುಂಬಕ್ಕೆ ದಯೆ ತೋರು ಎಂದು ಮಾರಮ್ಮನಿಗೆ ಪೂಜೆಯನ್ನೂ ಸಲ್ಲಿಸಿದ್ದರು. ಪೂಜೆ ಬಳಿಕ ದೇಗುಲದಲ್ಲಿ ಪ್ರಸಾದ ವಿತರಣೆ ಮಾಡಿದ್ದು, ಅದನ್ನು ದೇವಸ್ಥಾನದಲ್ಲೇ ಕೃಷ್ಣ ನಾಯ್ಕ ದಂಪತಿ ತಿಂದಿದ್ದರು. ಮನೆಗೆ ಬಂದು ಮಗಳಿಗೆ ಪ್ರಸಾದ ಕೊಟ್ಟಿದ್ದರು. ಆದರೆ ಮಗಳು ಪ್ರಿಯಾ ತಕ್ಷಣ ಪ್ರಸಾದ ತಿನ್ನಲಿಲ್ಲ. ಇದಾದ ಸ್ವಲ್ಪ ಸಮಯದಲ್ಲೇ ಕೃಷ್ಣ ನಾಯ್ಕರ ಪತ್ನಿ ಮೈಲಿ ಬಾಯಿಗೆ ವಾಂತಿ, ತಲೆ ಸುತ್ತು ಶುರುವಾಗಿದೆ. ಆದರೆ ತಾವು ತಿಂದಿದ್ದು ವಿಷಪೂರಿತ ಆಹಾರ ಎಂದು ಗೊತ್ತಾಗದ ಕೃಷ್ಣ ನಾಯ್ಕ ಪತ್ನಿಯ ಬಳಿ, ಬಿಸಿಲಿನಿಂದಾಗಿ ಹೀಗಾಗಿದೆ. ಏನೂ ಆಗಲ್ಲ ಎಂದು ಸಮಾಧಾನ ಮಾಡಿದ್ದರು.

    ಸಮಯ ಕಳೆದಂತೆ ಪತ್ನಿಯ ವಾಂತಿ ಮತ್ತಷ್ಟು ಹೆಚ್ಚಾಗುತ್ತಿದ್ದಂತೆ ಪತ್ನಿಯನ್ನು ಕರೆದುಕೊಂಡು ಅವರು ಸಮೀಪದ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಇವರಂತೆಯೇ ಆಗಮಿಸಿದ್ದವರನ್ನು ನೋಡಿದ್ದಾರೆ. ಅಲ್ಲಿ ವಿಚಾರಿಸಿದಾಗ ಪ್ರಸಾದಲ್ಲಿ ವಿಷ ಸೇರ್ಪಡೆಯಾಗಿರುವ ವಿಚಾರ ಗೊತ್ತಾಗಿದೆ. ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಅವರನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಅಷ್ಟರಲ್ಲೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಹೀಗಾಗಿ ಅವರನ್ನು ಅಂಬುಲೆನ್ಸ್ ನಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಲಾಗಿತ್ತು. ಮೈಸೂರು ತಲುಪೋ ಮುನ್ನವೇ ಕೃಷ್ಣ ನಾಯ್ಕ ಅವರಿಗೂ ವಾಂತಿ ಶುರುವಾಗಿದೆ. ಅವರನ್ನು ನೇರವಾಗಿ ಕೆ.ಆರ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಲ್ಲಿ ವೆಂಟಿಲೇಟರ್ ಕೊರತೆ ಹಿನ್ನೆಲೆಯಲ್ಲಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ಬಂದ 5 ನಿಮಿಷಕ್ಕೇ ಅಪ್ಪ ನನ್ನ ಬಿಟ್ಟು ಬಿಟ್ಟು ಹೊರಟು ಹೋದ್ರು ಎಂದು ಕಣ್ಣೀರು ಹಾಕುತ್ತಲೇ ನಡೆದ ಘಟನೆಯನ್ನು ಮೃತ ಕೃಷ್ಣ ನಾಯ್ಕರ ಪುತ್ರಿ ಪ್ರಿಯಾ ವಿವರಿಸಿದ್ದರು.

    ನನ್ನ ಅಮ್ಮನೂ ಕ್ರಿಟಿಕಲ್ ಸ್ಟೇಜಲ್ಲಿದ್ದಾರೆ. ಅಪ್ಪ ಅಮ್ಮ ಊರು ಬಿಟ್ಟು ಬೇರೆ ಊರಲ್ಲಿ ಕೆಲಸ ಮಾಡಿ ನಮ್ಮ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಅಪ್ಪನನ್ನು ಕಳೆದುಕೊಂಡಿದ್ದೇವೆ. ಅಮ್ಮನೂ ಕ್ರಿಟಿಕಲ್ ಸ್ಟೇಜಲ್ಲಿದ್ದಾರೆ. ಏನೂ ಹೇಳೋಕಾಗಲ್ಲ ಅಂತಿದ್ದಾರೆ. ಅವರನ್ನು ಉಳಿಸಿಕೊಡಿ. ಅವರೂ ಹೋದರೆ ನಮ್ಮ ವಿದ್ಯಾಭ್ಯಾಸವೇ ನಿಂತು ಹೋಗುತ್ತದೆ. ನಮ್ಮ ಕುಟುಂಬದಲ್ಲಿ ನಾನು ಚಿಕ್ಕವಳು. ಅಕ್ಕ ಹಾಗೂ ನನಗೊಬ್ಬ ತಮ್ಮ ಇದ್ದಾರೆ. ಎಲ್ರೂ ಹೋದ್ರೆ ನಮ್ಮನ್ನು ಓದಿಸುವವರು ಯಾರಿದ್ದಾರೆ..? ನಮ್ಮ ಅಮ್ಮನ ಚಿಕಿತ್ಸೆಗೆ ನೆರವಾಗಿ. ಯಾರು ಏನೋ ಮಾಡ್ಕೊಂಡು ನಮ್ಮ ಅಪ್ಪನನ್ನು ನನ್ನಿಂದ ಕಿತ್ತುಕೊಂಡಿದ್ದಾರೆ. ನಮ್ಮ ಅಮ್ಮನನ್ನು ಹೇಗಾದರೂ ಮಾಡಿ ಉಳಿಸಿಕೊಡಿ ಸಾರ್ ಎಂದು ಪ್ರಿಯಾ ಗೋಗರೆದಿದ್ದಳು.

    ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತೆ ಏನೂ ಅರಿಯದ ಈ ಮುಗ್ಧ ಮಕ್ಕಳ ಅಪ್ಪ ಯಾರದೋ ಸಿಟ್ಟು, ದ್ವೇಷಕ್ಕೆ ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ ಇಂದು ಅಮ್ಮ ಕೂಡ ಮಕ್ಕಳನ್ನು ತಬ್ಬಲಿ ಮಾಡಿ ಅಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ‘ಕಾಣದ ದೇವರನ್ನು ನಿನ್ನಲಿ ಕಾಣಿರುವೆ’ – ಕೆಜಿಎಫ್‍ನಲ್ಲಿ ತಾಯಿ ಸೆಂಟಿಮೆಂಟಿಗೆ ಅಭಿಮಾನಿಗಳು ಫಿದಾ

    ‘ಕಾಣದ ದೇವರನ್ನು ನಿನ್ನಲಿ ಕಾಣಿರುವೆ’ – ಕೆಜಿಎಫ್‍ನಲ್ಲಿ ತಾಯಿ ಸೆಂಟಿಮೆಂಟಿಗೆ ಅಭಿಮಾನಿಗಳು ಫಿದಾ

    ಬೆಂಗಳೂರು: ಹೈವೋಲ್ಟೇಜ್ ಆ್ಯಕ್ಷನ್ ಕೆಜಿಎಫ್ ಸಿನಿಮಾದ `ಗರ್ಭದಿ ನನ್ನಿರಿಸಿ, ಊರಲ್ಲಿ ನಡೆಯುತಿರೆ ತೇರಲಿ ಕುಳಿತಂತೆ ಅಮ್ಮ’ ಹಾಡು ಬಿಡುಗಡೆಯಾಗಿದ್ದು, ತಾಯಿ-ಮಗನ ಸೆಂಟಿಮೆಂಟನ್ನು ಹಾಡಿನ ಮೂಲಕ ತಿಳಿಸಲಾಗಿದೆ.

    ರಾಕಿಯ ಅರ್ಭಟಕ್ಕೆ ತಾಯಿ ಮಗನ ಬಾಂಧವ್ಯದ ಕಥನ ಸಾಥ್ ನೀಡಿದ್ದು, ರವಿ ಬಸ್ರೂರ್ ಅವರು ಮತ್ತೊಮ್ಮೆ ಈ ಹಾಡಿನ ಮೂಲಕ ಮೋಡಿ ಮಾಡಿದ್ದಾರೆ. ಕಿನ್ನಾಳ್ ರಾಜ್, ಬಸ್ರೂರ್ ಬರೆದಿರುವ ಹಾಡಿನ ಸಾಹಿತ್ಯ ಕ್ಷಣ ಮಾತ್ರದಲ್ಲಿ ಕೇಳುಗರ ಹೃದಯ ತಲುಪುತ್ತದೆ. ಹಡೆದ್ವನನ್ನ ನೆನೆದು ಕ್ಷಣ ಮಾತ್ರದಲ್ಲಿ ನೆನೆದು ಕಣ್ಣಂಚು ಒದ್ದೆಯಾಗುತ್ತದೆ.

    ಹಾಡಿಗೆ ಆನನ್ಯ ಭಟ್ ಅವರ ಕಂಠ ಸಿರಿ ಮತ್ತೊಂದು ಮೆರಗು ನೀಡಿದ್ದು, ಹಾಡಿನ ಸಂಗೀತ ಪ್ರತಿಯೊಬ್ಬರನ್ನು ಭಾವುಕರನ್ನಾಗಿಸುತ್ತದೆ. `ಕಾಣದ ದೇವರನ್ನು ನಿನ್ನಲಿ ಕಾಣಿರುವೆ, ನಿನ್ನಲಿ ಕಂಡಿರುವೆ ನೀನೇ ಭರವಸೆಯೂ ನಾಳೆಗೆ’ ಎಂಬ ಸಾಲು ಅಮ್ಮನ ಬಗ್ಗೆ ಮಗನ ಪ್ರೀತಿಯನ್ನು ತೆರೆದಿಡುತ್ತದೆ. ಅಪ್ಪಟ ಕನ್ನಡ ಪದಗಳು ಕೇಳುಗರ ಮನಸ್ಸಿಗೆ ಮುದ ನೀಡಿವೆ. ಹಾಡು ಕೇಳಿದ ಸಿನಿರಸಿಕರು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೂ ಸಲಾಂ ಹೇಳುತ್ತಿದ್ದು, ಚಿತ್ರದಲ್ಲಿ ತಾಯಿಗೆ ಸಾಂಗ್ ನೀಡಿರುವುದಕ್ಕೆ ಧನ್ಯವಾದ ಹೇಳುತ್ತಿದ್ದಾರೆ. ಇದು ಬರೀ ಹಾಡಲ್ಲ ಎಲ್ಲಾ ಮಕ್ಕಳ ತಾಯಿ ಮಕ್ಕಳ ಸಂಬಂಧವನ್ನು ಹೇಳುವ ವಾತ್ಸಲ್ಯದ ಹಾಡು. ವರ್ಷಾಂತ್ಯದಲ್ಲಿ ಹಾಡು ಬಿಡುಗಡೆಯಾದರೂ ಈ ವರ್ಷ ತಾಯಿಯ ಪ್ರೀತಿಗೆ ಸಂಬಂಧಿಸಿದ ನಂಬರ್ ಒನ್ ಹಾಡು ಎಂದು ಅಭಿಮಾನಿಗಳು ಈಗ ಹೇಳುತ್ತಿದ್ದಾರೆ.

    ಸಿನಿಮಾ ಹೈಲೆಟ್ ಏನು?
    ಕೆಜಿಎಫ್ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗುತ್ತಿದಂತೆ ಚಿತ್ರತಂಡ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತಿದೆ. ಕೆಜಿಎಫ್ ಸಿನಿಮಾ ಬಿಡುಗಡೆ ಗಳಿಗೆಯಲ್ಲೇ ಇದೊಂದು ಮೈನಿಂಗ್ ಸುತ್ತ ಇರುವ ಕಥೆ ಎಂದು ಊಹಿಸಿದ್ದ ಮಂದಿಗೆ ಚಿತ್ರದ ಟೀಸರ್ ಇದು ಬರಿ ಮೈನಿಂಗ್ ಕಥೆಯಲ್ಲ, ಬದಲಾಗಿ ತಾಯಿ-ಮಗನ ಸೆಂಟಿಮೆಂಟ್ ಇದೆ ಎಂದು ತಿಳಿಸಿದೆ. ಕೋಲಾರ ಗೋಲ್ಡ್ ಫೀಲ್ಡ್ ನಲ್ಲಿ ಬಗೆದಷ್ಟು ಚಿನ್ನ ಸಿಕ್ಕಂತೆ ಕೆಜಿಎಫ್ ಚಿತ್ರದ ತಂಡ ನಿರೀಕ್ಷೆಗಳನ್ನು ಹೆಚ್ಚಿಸುತ್ತಿದೆ. ಚಿತ್ರ ಕನ್ನಡಿಗರ ಹೆಮ್ಮೆಯಾಗಿದ್ದು, ಚಿತ್ರತಂಡ ಎಷ್ಟು ಪರಿಶ್ರಮ ಪಟ್ಟಿದೆ ಎನ್ನುವುದು ತಿಳಿಯುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

    ಕೆಜಿಎಫ್ ಅಖಾಡದಿಂದ ತೂರಿಬರುತ್ತಿರುವ ಒಂದೊಂದು ದೃಶ್ಯಕ್ಕೂ ಸಿನಿಪ್ರಿಯರು ಬಂಪರ್ ರೆಸ್ಪಾನ್ಸ್ ನೀಡುತ್ತಿದ್ದು, ಲಿರಿಕಲ್ ಹಾಡು ಬಿಡುಗಡೆಯಾದ 1 ಗಂಟೆಯಲ್ಲಿ 2 ಲಕ್ಷಕ್ಕೂ ಹೆಚ್ಚು ವ್ಯೂ ಕಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯ- ಹೆತ್ತ ತಂದೆ ತಾಯಿಯನ್ನೇ ಹೊರ ಹಾಕಿದ ಪಾಪಿ ಮಗ

    ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯ- ಹೆತ್ತ ತಂದೆ ತಾಯಿಯನ್ನೇ ಹೊರ ಹಾಕಿದ ಪಾಪಿ ಮಗ

    ತುಮಕೂರು: ಹೆತ್ತ ತಂದೆ ತಾಯಿಯನ್ನೇ ಪಾಪಿ ಮಗನೊಬ್ಬ ಮನೆಯಿಂದ ಹೊರಹಾಕಿರುವ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ.

    ತುಮಕೂರು ತಾಲೂಕಿನ ಲಕ್ಕೇನಹಳ್ಳಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾದ ನರಸಿಂಹಮೂರ್ತಿ ತನ್ನ ವೃದ್ಧ ತಂದೆ ವೆಂಕಟಪ್ಪ ಹಾಗೂ ತಾಯಿ ಗಂಗಮ್ಮನನ್ನ ದಿನನಿತ್ಯ ಹಿಂಸಿಸಿ ಮನೆಯಿಂದ ಹೊರದಬ್ಬಿದ್ದಾನೆ. ಬೀದಿಗೆ ಬಂದ ಹೆತ್ತವರು ಸೂರಿಲ್ಲದೇ ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ.

    ಅಷ್ಟಕ್ಕೂ ಪಾಪಿ ಪುತ್ರ ನರಸಿಂಹಮೂರ್ತಿ ವಾಸವಿರುವ ಮನೆ ಸಹೋದರ ಮೂಡಲಗಿರಿಯಪ್ಪ ಕಟ್ಟಿಸಿದ್ದು, ಮೂಡಲಗಿರಿಯಪ್ಪ ಉದ್ಯೋಗದ ನಿಮಿತ್ತ ಬೆಂಗಳೂರಲ್ಲಿ ವಾಸ ಇದ್ದು ತಾನು ಕಟ್ಟಿಸಿದ ಮನೆಯಲ್ಲಿ ತಂದೆ ತಾಯಿಯನ್ನ ಇರಿಸಿದ್ದ. ಈ ನಡುವೆ ಬೇರೆ ಊರಲ್ಲಿ ವಾಸವಿದ್ದ ನರಸಿಂಹ ಮೂರ್ತಿ ತನ್ನ ತಂದೆ ತಾಯಿಯನ್ನು ನೋಡಿಕೊಳ್ಳುವ ನೆಪದಲ್ಲಿ ಮನೆಗೆ ಬಂದಿದ್ದಾನೆ.

    ಇದೀಗ ಆ ಮನೆಯನ್ನೇ ತನ್ನ ಹೆಸರಿಗೆ ಬರೆದುಕೊಂಡುವಂತೆ ತಂದೆ ತಾಯಿಗೆ ಇನ್ನಿಲ್ಲದ ಹಿಂಸೆ ನೀಡಿ ಅವರು ಒಪ್ಪದಿದ್ದಾಗ ಹೆಂಡತಿ ಜೊತೆ ಸೇರಿ ಮನೆಯಿಂದ ಹೊರಹಾಕಿದ್ದಾನೆ. ಈವರೆಗೂ ಪ್ರತಿನಿತ್ಯ ಮಗ ಹಾಗೂ ಸೊಸೆ ಲತಾ ವೃದ್ಧರಿಗೆ ದೊಣ್ಣೆಯಲ್ಲಿ ಹೊಡೆಯುತ್ತಿದ್ದರು ಅಂತಾ ವೃದ್ಧ ದಂಪತಿ ಕಣ್ಣೀರಿಡುತ್ತಿದ್ದಾರೆ.

    ಈ ಬಗ್ಗೆ ಹೆಬ್ಬೂರು ಪೊಲೀಸರಿಗೆ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಜರಿಗಿಸಲ್ಲ ಅಂತಾ ವೃದ್ಧ ದಂಪತಿ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೈದ್ಯಲೋಕದ ಅಚ್ಚರಿ : ಇಬ್ಬರು ತಾಯಂದಿರ ಗರ್ಭದಿಂದ ಜನಿಸಿದ ಒಂದು ಮಗು

    ವೈದ್ಯಲೋಕದ ಅಚ್ಚರಿ : ಇಬ್ಬರು ತಾಯಂದಿರ ಗರ್ಭದಿಂದ ಜನಿಸಿದ ಒಂದು ಮಗು

    ಆಸ್ಟಿನ್: ಇಬ್ಬರು ಸಲಿಂಗಿ ದಂಪತಿ ಮದುವೆಯಾಗಿದ್ದು, ಅವರಿಬ್ಬರು ಸೇರಿ ಒಂದು ಮಗುವಿಗೆ ಜನ್ಮ ನೀಡಿರುವ ಅಚ್ಚರಿಯೊಂದು ನಡೆದಿದೆ.

    ಒಂದೇ ಮಗುವನ್ನು ಇಬ್ಬರು ಸಲಿಂಗಿಗಳು ತಮ್ಮ ಗರ್ಭದಲ್ಲಿರಿಸಿಕೊಂಡು ಜನ್ಮ ನೀಡಿದ್ದಾರೆ. ಈಗ ಆ ಮಗುವಿಗೆ ಇಬ್ಬರು ಅಮ್ಮಂದಿರಾಗಿದ್ದು, ವೈದ್ಯಲೋಕದ ಅಚ್ಚರಿ ಘಟನೆ ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಎಂದು ಹೇಳಲಾಗುತ್ತಿದೆ.

    ಈ ಅಚ್ಚರಿ ಘಟನೆ ನಾರ್ಥ್ ಟೆಕ್ಸಾಸ್ ನ ಮೌಂಟೇನ್ ಸ್ಪ್ರಿಂಗ್ಸಿ ಎಂಬಲ್ಲಿ ನಡೆದಿದೆ. ಟೆಕ್ಸಾಸ್ ನಿವಾಸಿಗಳಾದ ಆಶ್ಲೆ ಮತ್ತು ಬ್ಲಿಸ್ ಕೌಲ್ಟರ್ ಇಬ್ಬರು ಒಂದು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಗುವನ್ನು ಪಡೆಯಲು ಇವರು ಸುಮಾರು 6,25,557 ರೂ, ಖರ್ಚು ಮಾಡಿದ್ದಾರೆ.

    ಮೊದಲಿಗೆ ಪ್ರಯೋಗಾಲಯದ ಮೂಲಕ ದಾನಿಗಳಿಂದ 36 ವರ್ಷದ ಬ್ಲಿಸ್ ಅವರು ಅಂಡಾಣುಗಳನ್ನು ಪಡೆದುಕೊಂಡಿದ್ದರು. ಅದನ್ನು ಬ್ಲಿಸ್ ಗರ್ಭದಲ್ಲಿ ಇರಿಸಲಾಯಿತು. ಐದು ದಿನಗಳ ನಂತರ ಬ್ಲಿಸ್ ಮಗುವಿಗೆ ಜನ್ಮ ನೀಡಲು ಹಿಂದೇಟು ಹಾಕಿದರು. ಮತ್ತೆ ವೈದ್ಯರ ಸಲಹೆಯ ಮೇರೆಗೆ ಅಂಡಾಣುಗಳನ್ನು ಸಂಗಾತಿ 28 ವರ್ಷದ ಆಶ್ಲೆ ಗರ್ಭದಲ್ಲಿ ಇರಿಸಲಾಯಿತು.

    ಇದೇ ವರ್ಷದ ಜೂನ್ ತಿಂಗಳಿನಲ್ಲಿ ಆಶ್ಲೆ ಅವರು ಆರೋಗ್ಯಕರವಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಶ್ಲೇ ಮತ್ತು ಬ್ಲಿಸ್ ಆರು ವರ್ಷಗಳ ಹಿಂದೆ ಭೇಟಿಯಾಗಿದ್ದು, ಜೂನ್ 2015 ರಲ್ಲಿ ಮದುವೆಯಾದ್ದರು. ಇವರಿಬ್ಬರೂ ಒಂದು ದಿನ ತಾವು ಮಗುವನ್ನು ಪಡೆಯಬೇಕು ಎಂದು ನಿರ್ಧಾರ ಮಾಡಿದ್ದಾರೆ.

    ಆದರೆ ಬ್ಲಿಸ್ ಅವರು ಮಗುವಿಗೆ ಗರ್ಭಿಣಿಯಾಗಬೇಕೆಂದು ಬಯಸಲಿಲ್ಲ. ಒಂದೇ ಲಿಂಗದ ಸ್ತ್ರೀ ದಂಪತಿ ಮಗುವನ್ನು ಪಡೆಯಬೇಕೆಂದರೆ ಒಬ್ಬ ಮಹಿಳೆ ಇತರರ ಅಂದರೆ ದಾನಿಗಳು ಮೂಲಕ ವೀರ್ಯಾಣು ಪಡೆದು ಮಕ್ಕಳನ್ನು ಪಡೆಯಬೇಕಾಗುತ್ತದೆ. ಅದೇ ರೀತಿ ಬ್ಲಿಸ್ ಮತ್ತು ಆಶ್ಲೇ ಇಬ್ಬರೂ ಮಗುವನ್ನು ಪಡೆಯಲು ಬಯಸಿದ್ದರು.

    ಆ ಮೂಲಕ ಮೊದಲಿಗೆ ಬ್ಲಿಸ್ ಡಾ. ಕ್ಯಾಥಿ ಡೂಡಿ ಬಗ್ಗೆ ತಿಳಿದು ಅವರ ಬಳಿ ಚಿಕಿತ್ಸೆ ಪಡೆದು ದಾನಿಗಳ ಮೂಲಕ ವೀರ್ಯಾಣು ಪಡೆದು ಗರ್ಭ ಧರಿಸಿದರು. ಆದರೆ ಕಾರಣನಂತರಗಳಿಂದ ಆ ಗರ್ಭವನ್ನು ತನ್ನ ಪಾಟ್ನರ್ ಆಶ್ಲೆಗೆ ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ಇಬ್ಬರು ಒಂದೇ ಮಗುವನ್ನು ತಮ್ಮ ಗರ್ಭದಲ್ಲಿರಿಸಿಕೊಂಡು  ಜನ್ಮ ನೀಡಿದ್ದಾರೆ. ಈ ಮೂಲಕ ಇಬ್ಬರು ಒಂದೇ ಮಗುವಿಗೆ ಅಮ್ಮನಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗು ಗುಡ್ಡ ಕುಸಿತದ ವೇಳೆ ಸಾವನ್ನೇ ಗೆದ್ದು ಬಂದ ಅಮ್ಮ-ಮಗ! ವಿಡಿಯೋ ನೋಡಿ

    ಕೊಡಗು ಗುಡ್ಡ ಕುಸಿತದ ವೇಳೆ ಸಾವನ್ನೇ ಗೆದ್ದು ಬಂದ ಅಮ್ಮ-ಮಗ! ವಿಡಿಯೋ ನೋಡಿ

    – 12 ಕಿ.ಮೀ ದೂರದವರೆಗೂ ತಾಯಿಯನ್ನು ಹೊತ್ತುಕೊಂಡು ಸಾಗಿದ!

    ಬೆಂಗಳೂರು: ಭಾರೀ ಮಳೆಯಿಂದಾಗಿ ತತ್ತರಿಸಿ ಹೋದ ಕೊಡಗಿನ ಜಲಪ್ರಳಯದಿಂದ ವ್ಯಕ್ತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ 12 ಕಿ.ಮೀ ದೂರದವೆರೆಗೂ ತಾಯಿಯನ್ನು ಹೆಗಲ ಮೇಲೆ ಹೊತ್ತು ತಂದು ಇದೀಗ ಸಾವನ್ನೇ ಗೆದ್ದು ಬಂದಿದ್ದಾರೆ.

    ಮಡಿಕೇರಿ ತಾಲೂಕು ಮಕ್ಕಂದೂರು ಮೇಘತಾಳ ಗ್ರಾಮದವರಾದ ಮಡ್ಲಂಡ ತಮ್ಮಯ್ಯ, ತಾಯಿ 90 ವರ್ಷದ ಮುತ್ತವ್ವ ಹಾಗೂ ಪತ್ನಿ ವಿನೀತ ಜಲ ಕಂಟಕದಿಂದ ಬದುಕಿ ಬಂದಿದ್ದಾರೆ.

    ನಡೆದಿದ್ದು ಏನು?
    ಭಾರೀ ಮಳೆಯಿಂದಾಗಿ ತಮ್ಮಯ್ಯ ಅವರ ಮನೆ ಹಾಗೂ 15 ಎಕರೆ ಜಮೀನು ನಾಶವಾಗಿದ್ದು, ಇದನ್ನು ಕಣ್ಣಾರೆ ಕಂಡ ತಮ್ಮಯ್ಯ ಹಾಗೂ ಪತ್ನಿ ವಿನೀತ, ತಾಯಿ ಮುತ್ತವ್ವ ಕುಟುಂಬಸ್ಥರು ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಓಡಲು ಪ್ರಾರಂಭಿಸಿದ್ದರು. ಈ ವೇಳೆ ತಮ್ಮಯ್ಯ ಹಾಗೂ ವಿನೀತ ಹಿರಿಯ ವಯಸ್ಸಿನ ಮುತ್ತವ್ವರನ್ನು ರಕ್ಷಿಸಲು ಓಡಿ ಹೋಗಿ ಕಾಲೂರಿನಿಂದ 15 ಕಿ.ಮೀ ನಡೆದುಕೊಂಡು ಹೆಬ್ಬೆಟುಗೆರೆ ಎಂಬ ಸ್ಥಳಕ್ಕೆ ಬಂದು ತಲುಪಿದ್ದಾರೆ. ಇಲ್ಲಿಯೂ ಭಾರೀ ಪ್ರಮಾಣದಲ್ಲೇ ಕುಸಿತ ಸಂಭವಿಸಿದ್ದು, ಊರಿನವರ ನೆರವಿನಿಂದ ವಿನೀತ ಅವರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

    ತಮ್ಮಯ್ಯವರು ತಾಯಿ ಮುತ್ತವ್ವ ಅವರೊಂದಿಗೆ ತಮ್ಮ ಮನೆಯಿಂದ ಬೆಟ್ಟವನ್ನು ಹತ್ತಿ ಒಂದು ದಿನ ಬೆಟ್ಟದ ತುದಿಯಲ್ಲೇ 150 ಜನರೊಂದಿಗೆ ತಂಗಿದ್ದರು. ಆದರೆ ಅಲ್ಲಿಯೂ ಗುಡ್ಡ ಕುಸಿತವಾದ ಕಾರಣ ಎಲ್ಲರೂ ಬೆಟ್ಟದಿಂದ ಹೊರಡಲು ನಿರ್ಧರಿಸಿ, ಹೆದ್ದಾರಿಗೆ ಬಂದಿದ್ದಾರೆ. ಈ ವೇಳೆ ಹೆಲಿಕಾಪ್ಟರ್ ನಲ್ಲಿ ರಕ್ಷಣಾ ಕಾರ್ಯ ನಡೆಸಿದರೂ ಬೆಟ್ಟದ ಮೇಲೆ ಕಾರ್ಯಾಚರಣೆ ನಡೆಸಲು ಸಾಧ್ಯವಾಗದೆ ಸಮಸ್ಯೆ ಎದುರಾಗಿತ್ತು.

    ಅಲ್ಲಿಂದ ರಸ್ತೆಗಳು ಅಸ್ತವ್ಯಸ್ತವಾಗಿದ್ದರಿಂದ ತಮ್ಮಯ್ಯ, ತಾಯಿ ಮುತ್ತವ್ವ ರನ್ನು ಸುಮಾರು 12 ಕಿ.ಮೀ ದೂರದವರೆಗೂ ಹೆಗಲ ಮೇಲೆ ಹೊತ್ತುಕೊಂಡು ಬಂದಿದ್ದಾರೆ. ಮಗನ ಕಷ್ಟವನ್ನು ಕಂಡ ಮತ್ತವ್ವ ತನ್ನನ್ನು ಬಿಟ್ಟು ಬೀಡು ನೀನಾದರೂ ಹೋಗಿ ಬದುಕಿಕೋ ಎಂದು ಹೇಳಿದರು ತಮ್ಮಯ್ಯ ಅವರು ಮಳೆಯಲ್ಲೇ ದಾರಿ ಮಾಡಿಕೊಂಡು ಅಮ್ಮನನ್ನು ರಕ್ಷಿಸಿದ್ದಾರೆ.

    ಈ ವೇಳೆ ಸುಭಾಸ್ ಎಂಬವರು ತಮ್ಮಯ್ಯ ಅವರ ಸ್ಥಿತಿ ಕಂಡು ತಾಯಿ ಮುತ್ತವ್ವರನ್ನು ಮೈತ್ರಿಯಾ ಹಾಲ್ ಎಂಬ ಪುರ್ನವಸತಿ ಕೇಂದ್ರಕ್ಕೆ ಕರೆದುಕೊಂಡು ಹೋಗುವ ಬದಲು ತಮ್ಮ ಮನೆಗೆ ಕರೆದುಕೊಂಡು ಹೋಗಿ ಮುತ್ತವ್ವ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಬಹುಬೇಗ ಬಂದ ಪತ್ನಿ ವಿನೀತ ಪುರ್ನವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

    ತಮ್ಮಯ್ಯ ಅವರು ಮಡಿಕೇರಿಗೆ ಬಂದ ಬಳಿಕ ಬೇರೆ ಅವರಿಂದ ಫೋನ್ ಪಡೆದು ಬೆಂಗಳೂರಿನಲ್ಲಿದ್ದ ಮತ್ತವ್ವ ಅವರ ತಮ್ಮ ಚಂಗಪ್ಪ ಚಂಡಿರಕರೂರುರಿಗೆ ಕರೆಮಾಡಿ ತಾವಿರುವ ಪರಿಸ್ಥಿತಿಯನ್ನು ಹೇಳಿದ್ದು ಬಳಿಕ ಬೆಂಗಳೂರಿಗೆ ವಾಹನ ವ್ಯವಸ್ಥೆ ಪಡೆದು ಚಂಗಪ್ಪ ಮನೆ ತಲುಪಿದ್ದಾರೆ.

    ಇದೇ ರೀತಿ ಮತ್ತೊಬ್ಬರೂ ಶಾರದ ಎನ್ನುವವರು ಮಡಿಕೇರಿಯ ಇಂದ್ರನಗರದ ನಿವಾಸಿಯಾಗಿದ್ದು, ಪ್ರವಾಹದಿಂದ ಬದುಕಿ ಬಂದಿದ್ದು ಪುರ್ನವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

    https://www.youtube.com/watch?v=eGDVxLWkqao

    https://www.youtube.com/watch?v=QNRET4_ZoP4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮ್ಮನ ತೀರ್ಥಯಾತ್ರೆ ಆಸೆ-ಸ್ಕೂಟರ್‌ನಲ್ಲೇ ಜೀವ ತುಂಬಿದ ಆಧುನಿಕ ಶ್ರವಣಕುಮಾರ

    ಅಮ್ಮನ ತೀರ್ಥಯಾತ್ರೆ ಆಸೆ-ಸ್ಕೂಟರ್‌ನಲ್ಲೇ ಜೀವ ತುಂಬಿದ ಆಧುನಿಕ ಶ್ರವಣಕುಮಾರ

    ಧಾರವಾಡ: ತಂದೆ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ತೀರ್ಥ ಯಾತ್ರೆ ಮಾಡಿದ ಶ್ರವಣಕುಮಾರ ಬಗ್ಗೆ ನಾವು ಕೇಳಿದ್ದೆವೆ. ಆದರೆ ಇಂದಿನ ಕಾಲದಲ್ಲಿ ಅಂತಹ ಮಕ್ಕಳು ಇಲ್ಲ ಎನ್ನುವರೇ ಹೆಚ್ಚು. ಆದರೆ ಇಲ್ಲೊಬ್ಬರು ತಮ್ಮ ತಾಯಿಯ ಆಸೆ ಪೂರ್ಣಗೊಳಿಸಲು ಸ್ಕೂಟರ್ ಮೇಲೆಯೇ ತೀರ್ಥ ಯಾತ್ರೆ ನಡೆಸಿದ್ದಾರೆ.

    ಹೌದು, ಮೂಲತಃ ಮೈಸೂರಿನವರಾದ ಡಿ ಕೃಷ್ಣಕುಮಾರ ಸದ್ಯ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ತಾಯಿ ಚುಡರತ್ನ ಅವರ ಆಸೆಯಂತೆ ತೀರ್ಥಯಾತ್ರೆ ಮಾಡುತ್ತಿದ್ದಾರೆ. ದಕ್ಷಿಣ ಭಾರತದ 6 ರಾಜ್ಯಗಳ ಪ್ರವಾಸ ಮುಗಿಸಿದ್ದು, ಇಂದು ಧಾರವಾಡಕ್ಕೆ ಆಗಮಿಸಿದ್ದರು.

    ತಂದೆ ಸ್ಕೂಟರ್ ಮೇಲೆಯೇ ಸವಾರಿ: ವಿಶೇಷ ಎಂದರೆ ಕೃಷ್ಣಕುಮಾರ್ ಅವರು ತಂದೆಯ ಬಜಾಜ್ ಚೇತಕ್ ಸ್ಕೂಟರ್ ನಲ್ಲೇ ತೀರ್ಥಯಾತ್ರೆ ನಡೆಸಿದ್ದು, ಇಬ್ಬರು ಸದ್ಯ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಇವರಿಗೆ 20 ವರ್ಷಗಳ ಹಳೆಯ ಬಜಾಜ್ ಚೇತಕ್ ಸ್ಕೂಟರ್ ಕೂಡ ಇವರಿಗೆ ಸಾಥ್ ನೀಡಿದೆ.

    ತಂದೆ ಇದ್ದಾಗ ಈ ಪ್ರವಾಸ ಮಾಡಲು ಆಗಲಿಲ್ಲ, ಆದರೆ ತಂದೆ ನಿಧನ ಬಳಿಕ ತಾಯಿಯ ಇಚ್ಛೆಯಂತೆ ಯಾತ್ರೆ ಆರಂಭ ಮಾಡಿದ್ದೇನೆ ಎಂದು ಕೃಷ್ಣಕುಮಾರ್ ತಿಳಿಸಿದ್ದಾರೆ. ಜನವರಿ 16 ರಿಂದ ಆರಂಭವಾಗಿರುವ ಇವರ ತೀರ್ಥಯಾತ್ರೆ ಬೆಂಗಳೂರಿನಲ್ಲಿ ಮುಕ್ತಾಯವಾಗಲಿದೆ. ಧಾರವಾಡದಿಂದ ಬೆಂಗಳೂರಿಗೆ ಪ್ರಯಾಣ ಮುಂದುವರಿಸಿರುವ ಇವರು ಹಲವು ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಇನ್ನು ಪ್ರಯಾಣ ವೇಳೆ ಹಣ್ಣು ಹಂಪಲು ಸೇವಿಸುವ ಇವರು ದೇವಾಲಯ, ಮಠಗಳಲ್ಲಿ ನೀಡುವ ದೇವರ ಪ್ರಸಾದವನ್ನು ಸೇವಿಸುತ್ತಾ ಪ್ರಯಾಣ ಬೆಳೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಲಿಕಾನ್ ಸಿಟಿಯ `ಅಮ್ಮಂದಿರಿಗೆ’ ಇದು ಶಾಕಿಂಗ್ ಸುದ್ದಿ!

    ಸಿಲಿಕಾನ್ ಸಿಟಿಯ `ಅಮ್ಮಂದಿರಿಗೆ’ ಇದು ಶಾಕಿಂಗ್ ಸುದ್ದಿ!

    ಬೆಂಗಳೂರು: ನಗರದ ಅಮ್ಮಂದಿರಿಗೆ ಶಾಕಿಂಗ್ ಸುದ್ದಿ. ತಾಯ್ತನದ ಸಂಭ್ರಮದಲ್ಲಿರುವವರಿಗೆ ಅರಗಿಸಿಕೊಳ್ಳಲಾರದ ಕಹಿಯನ್ನು ವೈದ್ಯಲೋಕ ಹೊರಹಾಕಿದೆ.

    ನವಮಾಸ ಕಂದಮ್ಮಗಳು ಗರ್ಭದಲ್ಲಿ ನಿಲ್ಲುತ್ತಿಲ್ಲ, ಗ್ರಾಮೀಣ ಭಾಗಕ್ಕಿಂತ ಸಿಟಿಭಾಗದಲ್ಲಿಯೇ ಅವಧಿಪೂರ್ವ ಹೆರಿಗೆ ಪ್ರಕರಣ ಹೆಚ್ಚಾಗುತ್ತಿದೆ. ಅವಧಿ ಪೂರ್ವ ಹುಟ್ಟಿದ ಮಕ್ಕಳು ಕೇವಲ 600 ರಿಂದ 800 ಗ್ರಾಂ ಇರೋದ್ರಿಂದ ಬದುಕುವ ಸಾಧ್ಯತೆಯೂ ಕಡಿಮೆ. ಹೀಗಾಗಿ ಆತ್ಯಾಧುನಿಕ ತಂತ್ರಜ್ಞಾನಗಳು ಇದ್ರೂ ಖರ್ಚುವೆಚ್ಚವನ್ನು ಭರಿಸೋದು ಕಷ್ಟ ಅನ್ನುವಂತಾಗಿದೆ. ಇದನ್ನೂ ಓದಿ: 375 ಗ್ರಾಂ ತೂಕದ ಅತೀ ಚಿಕ್ಕ ಮಗು ಜನನ!

    ಮಹಿಳೆಯರಲ್ಲಿ ಹೆಚ್ಚುತ್ತಿರುವ ಧೂಮಪಾನ, ಮದ್ಯಪಾನ, ಒತ್ತಡ ಸೇರಿದಂತೆ ಬದಲಾದ ಜೀವನ ಶೈಲಿ ಈ ಅವಧಿಪೂರ್ವ ಹೆರಿಗೆಗೆ ಕಾರಣವಾಗಿದೆ. ಹತ್ತರಲ್ಲಿ ಎರಡರಿಂದ ಮೂರು ಹೆರಿಗೆ ಅವಧಿಪೂರ್ವವೇ ಆಗುತ್ತಿದ್ದು, ವೈದ್ಯಲೋಕಕ್ಕೆ ಕೊಂಚ ಸವಾಲಾಗಿದೆ ಅಂತ ಫೋರ್ಟಿಸ್ ಫೆಮಿನಾ ಆಸ್ಪತ್ರೆ ಮುಖ್ಯಸ್ಥೆ ಡಾ ಪ್ರತಿಮಾ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ನಾನು ಅಜ್ಜಿ ಆಗೋದು ಯಾವಾಗ: ತಾಯಿ ಕೇಳಿದ ಪ್ರಶ್ನೆಗೆ ನಕ್ಕು ಉತ್ತರ ಕೊಟ್ಟ ಯಶ್

    ನಾನು ಅಜ್ಜಿ ಆಗೋದು ಯಾವಾಗ: ತಾಯಿ ಕೇಳಿದ ಪ್ರಶ್ನೆಗೆ ನಕ್ಕು ಉತ್ತರ ಕೊಟ್ಟ ಯಶ್

    ಬೆಂಗಳೂರು: ನಾನು ಅಜ್ಜಿ ಆಗೋದು ಯಾವಾಗ ಎಂದು ತಾಯಿ ಕೇಳಿದ್ದಕ್ಕೆ ರಾಕಿಂಗ್ ಸ್ಟಾರ್ ಯಶ್ `ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಶೀಘ್ರದಲ್ಲೇ ಎಂದು ನಕ್ಕು ಉತ್ತರ ಕೊಟ್ಟಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಟ ರಮೇಶ್ ಅರವಿಂದ್ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿಗೆ ಅತಿಥಿಯಾಗಿ ಯಶ್ ಆಗಮಿಸಿದ್ದರು. ಈ ಶೋನಲ್ಲಿ ಯಶ್ ಉತ್ತಮವಾಗಿ ಆಟವಾಡಿ ಕೊನೆಗೆ 25 ಲಕ್ಷ ರೂ. ಹಣವನ್ನು ಗೆದ್ದುಕೊಂಡು ಹೋಗಿದ್ದಾರೆ. ಆದರೆ ಯಶ್ ಅವರ ಆಟಕ್ಕಿಂತ ಈ ಕಾರ್ಯಕ್ರಮದಲ್ಲಿ ಅವರು ತಾಯಿ ಕೇಳಿದ ಪ್ರಶ್ನೆಯೇ ಎಲ್ಲರ ಗಮನವನ್ನು ಸೆಳೆದಿದೆ.

    ಈ ಕಾರ್ಯಕ್ರಮದಲ್ಲಿ ಆಟದ ಮಧ್ಯೆ ಯಶ್ ಅವರಿಗೆ ಅವರ ಕುಟುಂಬದವರು ವಿಡಿಯೋ ಕಾಲ್ ಮೂಲಕ ಒಂದೊಂದು ಪ್ರಶ್ನೆ ಕೇಳುತ್ತಿದ್ದರು. ಮೊದಲು ಅವರ ತಂದೆ ಪ್ರಶ್ನೆ ಕೇಳಿದ್ದರು. ಅವರ ತಂದೆ ಕೇಳಿದ ಪ್ರಶ್ನೆ ಉತ್ತರ ಕೊಟ್ಟರು. ಬಳಿಕ ಅವರ ತಾಯಿ ಪುಷ್ಪಾ ಅವರು ವಿಡಿಯೋ ಕಾಲ್ ಮಾಡಿ “ನಾನು ತಾಯಿಯಾಗಿ ಅಲ್ಲದೇ ಒಬ್ಬ ಅಭಿಮಾನಿಯಾಗಿ ಕೇಳ್ತಿದ್ದೀನಿ. ನಾನು ಅಜ್ಜಿ ಆಗೋದು ಯಾವಾಗ?” ಎಂದು ಪ್ರಶ್ನೆ ಕೇಳಿದ್ದಾರೆ.

    ಅಮ್ಮನ ಪ್ರಶ್ನೆಗೆ ಯಶ್ ಮೊದಲು ನಕ್ಕು ಬಳಿಕ ಉತ್ತರಿಸಿದ್ದಾರೆ. ನಾನು ಮತ್ತು ರಾಧಿಕಾ ಇಬ್ಬರು ಏಳು ವರ್ಷ ರಿಲೇಷನ್ ಶಿಪ್ ನಲ್ಲಿ ಇದ್ವಿ. ಆಗ ಇಬ್ಬರು ಕಲಾವಿದರಾಗಿದ್ದು, ಸಾರ್ವಜನಿಕವಾಗಿ ಎಲ್ಲಿಯೂ ಓಡಾಡೋಕೆ ಸಾಧ್ಯವಾಗಿಲ್ಲ. ಇಬ್ಬರಿಗೂ ಗೌರವ-ಘನತೆ ಕಾಪಾಡಿಕೊಳ್ಳಬೇಕು ಎಂಬುದು ಮನಸ್ಸಲ್ಲಿತ್ತು. ಆದ್ದರಿಂದ ನಾವು ನಮ್ಮ ಮನೆಯವರ ಜೊತೆ ಇರುತ್ತಿದ್ವಿ. ಮದುವೆಯಾದ ಮೇಲೆ ಎಲ್ಲ ಕಡೆ ಸುತ್ತಾಡೋಣ ಅಂದಕೊಂಡಿದ್ವಿ. ಆದ್ದರಿಂದ ಎರಡು ವರ್ಷ ಮಕ್ಕಳು ಬೇಡ ಎಂದು ನಿರ್ಧಾರ ಮಾಡಿದ್ವಿ. ಈಗ ಮದುವೆ ಆಗಿ ಒಂದುವರೆ ವರ್ಷ ಆಗಿದೆ. ಈಗ ಮನೆಯಲ್ಲಿ, ಸಂಬಂಧಿಕರು ಒತ್ತಡ ಹಾಕುತ್ತಿದ್ದಾರೆ. ನಾನು ಈ ಬಗ್ಗೆ ಎಲ್ಲಿಯೂ ಚರ್ಚೆ ಮಾಡಲು ಇಷ್ಟ ಪಡುವುದಿಲ್ಲ. ನಮ್ಮ ಅಮ್ಮ ಮನೆಯಲ್ಲಿ ಈ ಪ್ರಶ್ನೆ ಕೇಳಿದ್ದರೆ ರೇಗಾಡುತ್ತಿದ್ದೆ. ಸರಿಯಾದ ಜಾಗದಲ್ಲಿಯೇ ಕೇಳಿದ್ದಾರೆ. ಆದಷ್ಟೂ ಬೇಗ ಆಗುತ್ತದೆ. ಸದ್ಯಕ್ಕೆ ಇಷ್ಟೇ ಹೇಳೋದು ಎಂದು ಯಶ್ ಉತ್ತರಿಸಿದ್ದಾರೆ.

    ಯಶ್ ಮತ್ತು ರಾಧಿಕಾ ಮದುವೆ ಆಗಿ ಒಂದೂವರೆ ವರ್ಷ ಆಗಿದೆ. 2016ರ ಡಿಸೆಂಬರ್ 9 ರಂದು ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

  • 90 ವರ್ಷದ ವೃದ್ಧೆಯ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ ನಿರ್ದಯಿ ಮೊಮ್ಮಗಳು!

    90 ವರ್ಷದ ವೃದ್ಧೆಯ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ ನಿರ್ದಯಿ ಮೊಮ್ಮಗಳು!

    ತಿರುವನಂತಪುರಂ: ನಿರ್ದಯಿ ಮೊಮ್ಮಗಳೊಬ್ಬಳು 90 ವರ್ಷದ ಅಜ್ಜಿಗೆ ಸಾರ್ವಜನಿಕರ ಎದುರೇ ಹಿಗ್ಗಾಮುಗ್ಗಾಗಿ ಥಳಿಸಿ ಹಲ್ಲೆಗೈದ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಅಯಿಕ್ಕೆರ ಎಂಬಲ್ಲಿ ನಡೆದಿದೆ.

    30 ವರ್ಷದ ದೀಪಾ ತನ್ನ ತಾಯಿಯ ತಾಯಿ ಕಲ್ಯಾಣಿ ಅವರಿಗೆ ಹಲ್ಲೆ ನಡೆಸಿದ್ದಾಳೆ. ಅಜ್ಜಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗಾಗಿ ಪ್ರಕರಣ ಸಂಬಂಧಿಸಿದಂತೆ ಆರೋಪಿ ದೀಪಾಳನ್ನು ಪೊಲೀಸರು ಬಂಧಿಸಿದ್ದಾರೆ.

    ವಿಡಿಯೊದಲ್ಲೇನಿದೆ?: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ವಿಡಿಯೋದಲ್ಲಿ ಅಜ್ಜಿ ಕಲ್ಯಾಣಿ ಅಮ್ಮ ಮನೆಯ ಮುಂದೆ ಮಲಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ದೀಪಾ ಹಿಗ್ಗಾಮುಗ್ಗಾವಾಗಿ ಥಳಿಸಿದ್ದಾಳೆ. ಅಲ್ಲದೇ ಅಜ್ಜಿ ಮೈಮೇಲಿದ್ದ ಬಟ್ಟೆಯನ್ನು ಎಳೆದಾಡಿ, ಅದರಲ್ಲೇ ಥಳಿಸಿದ್ದಾಳೆ. ಬಳಿಕ  ಅಜ್ಜಿಯನ್ನು ಮಲಗಿದ್ದಲ್ಲಿಂದ ಎಬ್ಬಿಸಿ, ಕುಳಿತುಕೊಳ್ಳಿಸಿ ಮತ್ತೆ ಹಲವಾರು ಬಾರಿ ಥಳಿಸುವ ಮೂಲಕ ಕ್ರೂರ ವರ್ತನೆ ತೋರಿದ್ದಾಳೆ. ಹೀಗೆ 5 ನಿಮಿಷಗಳ ಕಾಲ ಚೆನ್ನಾಗಿ ಥಳಿಸಿದ್ದಾಳೆ. ಈ ಎಲ್ಲಾ ಘಟನೆಗಳನ್ನು ನೋಡುತ್ತಿದ್ದ ಸಾರ್ವಜನಿಕರು ಹಲ್ಲೆ ನಡೆಸದಂತೆ ಪರಿಪರಿಯಾಗಿ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಯಾಕಂದ್ರೆ ವೃದ್ಧೆಯ ಸಹಾಯಕ್ಕೆ ನಿಂತ ಸಾರ್ವಜನಿಕರ ಮೇಲೆಯೇ ದೀಪಾ ರೇಗಾಡಿರುವುದು ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ.

    ಹಲ್ಲೆ ಮಾಡಲು ಕಾರಣವೇನು?: ಹಲ್ಲೆ ನಡೆಸಿದ ದೀಪಾ ತನ್ನ ಇಬ್ಬರು ಮಕ್ಕಳೊಂದಿಗೆ ಅಮ್ಮ ಹಾಗೂ ಅಜ್ಜಿಯೊಂದಿಗೆ ವಾಸವಿದ್ದರು. ಕೆಲ ತಿಂಗಳ ಹಿಂದೆ ದೀಪಾ ಕೆಲಸ ಕಳೆದುಕೊಂಡಿದ್ದಳು. ಹೀಗಾಗಿ ಹಣದ ಸಮಸ್ಯೆ ಎದುರಿಸುತ್ತಿದ್ದಳು. ಈ ಮಧ್ಯೆ ಅಜ್ಜಿಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಹೋಗುತ್ತಿತ್ತು. ಇದರಿಂದ ದೀಪಾ ಕಿರಿಕಿರಿ ಅನುಭವಿಸುತ್ತಿದ್ದು, ಅಜ್ಜಿ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆರೋಪಿ ದೀಪಾಳನ್ನು ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 323ರ (ಸ್ವಯಂಪ್ರೇರಿತ ಹಾನಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಾಗೂ ಆರೋಪಿ ಅಮ್ಮ ಹಾಗೂ ಅಜ್ಜಿಯನ್ನು ರಕ್ಷಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

    https://www.facebook.com/kayalfriends/videos/2021498344530524/