Tag: ಅಮ್ಮ

  • ಪ್ರೀತಿಗೆ ಅಡ್ಡಿಪಡಿಸಿದ ಹೆತ್ತ ತಾಯಿಯನ್ನೇ ಕೊಂದ ಮಹಿಳಾ ಟೆಕ್ಕಿ

    ಪ್ರೀತಿಗೆ ಅಡ್ಡಿಪಡಿಸಿದ ಹೆತ್ತ ತಾಯಿಯನ್ನೇ ಕೊಂದ ಮಹಿಳಾ ಟೆಕ್ಕಿ

    – ತಮ್ಮನ ಮೇಲೆ ಚಾಕುವಿನಿಂದ ಹಲ್ಲೆ

    ಬೆಂಗಳೂರು: ಹೆತ್ತ ತಾಯಿಯನ್ನೇ ಮಗಳು ಕೊಲೆ ಮಾಡಿರುವ ಘಟನೆ ನಗರದ ಕೆ.ಆರ್.ಪುರಂನಲ್ಲಿ ನಡೆದಿದೆ.

    ಕೆ.ಆರ್.ಪುರಂ ನಿವಾಸಿ ನಿರ್ಮಾಲ ಕೊಲೆಯಾದ ಮಹಿಳೆಯಾಗಿದ್ದು, ಸಾಫ್ಟ್ ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಅಮೃತ ಕೊಲೆ ಮಾಡಿದ ಆರೋಪಿ. ಕೆಆರ್ ಪುರಂನ ಅಪಾರ್ಟ್ ಮೆಂಟ್‍ನಲ್ಲಿ ಕುಟುಂಬದೊಂದಿಗೆ ಅಮೃತ ವಾಸಿಸುತ್ತಿದ್ದರು.

    ನಾನು 15 ಲಕ್ಷ ರೂ. ಸಾಲ ಮಾಡಿದ್ದೇನೆ. ಸಾಲಗಾರರು ಮನೆಯ ಬಳಿ ಬರುತ್ತಾರೆ. ಸಾಲಗಾರರು ಬಂದಾಗ ನನ್ನ ಬಂಡವಾಳ ಬಯಲಾಗುತ್ತೆ. ಅದಕ್ಕೆ ನಿಮ್ಮನ್ನು ಕೊಲ್ಲುತ್ತೇನೆ ಎಂದು ಮಲಗಿದ್ದ ತಾಯಿಗೆ ಚಾಕು ಇರಿದು ಅಮೃತ ಕೊಲೆ ಮಾಡಿದ್ದಾಳೆ. ತಾಯಿಯನ್ನು ಕೊಲೆ ಮಾಡಿ ಬಳಿಕ ತಮ್ಮ ಹರೀಶ್ ಕೊಲ್ಲಲು ಯತ್ನ ಮಾಡಿದ್ದಾಳೆ.

    ತಾಯಿಯನ್ನು ಕೊಲೆ ಮಾಡಿ ಬಳಿಕ ತಮ್ಮ ಹರೀಶ್‍ಗೆ ಚಾಕು ಇರಿದಿದ್ದ ಅಮೃತ. ಚಾಕು ಇರಿಯುವಾಗ ಯಾಕೆ ಈ ರೀತಿ ಮಾಡುತ್ತಿದ್ದೀಯಾ ಎಂದು ಹರೀಶ್ ಪ್ರಶ್ನೆ ಮಾಡಿದ್ದಾನೆ. ನಾನು 15 ಲಕ್ಷ ರೂ. ಸಾಲ ಮಾಡಿದ್ದೀನಿ. ಅದನ್ನು ಕೇಳಲು ಸಾಲಗಾರರು ನಿಮ್ಮ ಬಳಿ ಬರುತ್ತಾರೆ. ಆಗ ನನ್ನ ಬಂಡವಾಳ ಗೊತ್ತಾಗುತ್ತೆ. ಅದಕ್ಕೆ ಅಮ್ಮನನ್ನು ಕೊಲೆ ಮಾಡಿದ್ದೀನಿ, ನಿನ್ನನ್ನು ಕೊಲ್ಲುತ್ತೇನೆ ಎಂದು ಚಾಕುವಿನಿಂದ ಕೊಲೆ ಮಾಡಲು ಯತ್ನಿಸಿದ್ದಾಳೆ. ಆ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾಳೆ.

    ಆದರೆ ಅಮೃತ ಪ್ರೀತಿಗೆ ಮನೆಯವರ ವಿರೋಧವಿತ್ತು. ಈ ಕಾರಣದಿಂದಲೇ ಅಮ್ಮನನ್ನು ಕೊಲೆ ಮಾಡಿ, ಬಳಿಕ ಸಹೋದರರನ್ನು ಕೊಲೆ ಮಾಡಲು ಯತ್ನಿಸಿದ್ದಳು ಎನ್ನಲಾಗಿದೆ. ನಗರದಲ್ಲಿ ಕೆಲಸ ಮಾಡುತ್ತಿದ್ದ ಅಮೃತ ಇತ್ತೀಚೆಗೆ ಹೈದರಾಬಾದ್ ಗೆ ವರ್ಗಾವಣೆ ಮಾಡಿಸಿಕೊಂಡಿದ್ದಳು. ಹೈದರಾಬಾದ್‍ಗೆ ತೆರಳುವ ಮುನ್ನ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಆದರೆ ಪ್ರೀತಿಗೆ ವಿರೋಧ ಮಾಡಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅಮೃತಳಿಗಾಗಿ ಹುಡುಕಾಟ ನಡೆಸಿದ್ದಾರೆ.

  • ಅಮ್ಮನನ್ನು ಮರೆಯುತ್ತಿದ್ದೇನೆಂದು ದೀಪಿಕಾ ಕಣ್ಣೀರು

    ಅಮ್ಮನನ್ನು ಮರೆಯುತ್ತಿದ್ದೇನೆಂದು ದೀಪಿಕಾ ಕಣ್ಣೀರು

    ಬೆಂಗಳೂರು: ಅಮ್ಮನನ್ನು ಮರೆಯುತ್ತಿದ್ದೇನೆ ಎಂದು ದೀಪಿಕಾ ದಾಸ್ ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ.

    ದೀಪಿಕಾ ದಾಸ್ ಬಿಗ್‍ಮನೆಗೆ ಎಂಟ್ರಿ ಕೊಟ್ಟ ಮೊದಲ ಎರಡು ವಾರಗಳ ಕಾಲ ಯಾವುದೇ ಸ್ಪರ್ಧಿಯ ಜೊತೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ನಂತರ ಬಿಗ್‍ಬಾಸ್ ನೀಡುತ್ತಿದ್ದ ಟಾಸ್ಕ್ ಮಾಡುತ್ತಾ, ಮಾಡುತ್ತಾ ಮನೆಯ ಸದಸ್ಯರ ಜೊತೆ ಚೆನ್ನಾಗಿ ಮಾತನಾಡಲು ಶುರು ಮಾಡಿದ್ದಾರೆ. ದೀಪಿಕಾ ಯಾವುದೇ ಗೇಮ್ ಬಂದರೂ ತುಂಬಾ ಚೆನ್ನಾಗಿ ಆಟವಾಡುತ್ತಿದ್ದರು. ಆದರೆ ಸೋಮವಾರದ ಸಂಚಿಕೆಯಲ್ಲಿ ದೀಪಿಕಾ ಅಮ್ಮನನ್ನು ನೆನಪಿಸಿಕೊಂಡು ಗಳಗಳನೇ ಅತ್ತಿದ್ದಾರೆ.

    ಹೌದು. ಸೋಮವಾರ ಪ್ರಸಾರವಾದ ಸಂಚಿಕೆಯಲ್ಲಿ ಕ್ಯಾಪ್ಟನ್ ಆಯ್ಕೆಗಾಗಿ ಪ್ರಿಯಾಂಕಾ, ದೀಪಿಕಾ ಮತ್ತು ಚಂದನ್ ಆಚಾರ್ ಮೂವರಿಗೆ ಬಿಗ್‍ಬಾಸ್ ಒಂದು ಟಾಸ್ಕ್ ಕೊಟ್ಟಿದ್ದರು. ಟಾಸ್ಕಿನಲ್ಲಿ ಪ್ರಿಯಾಂಕಾ ವಿಜೇತರಾಗಿದರು. ಕ್ಯಾಪ್ಟನ್ ಆದವರಿಗೆ ಅವರ ಮನೆಯವರಿಂದ ಬಿಗ್‍ಬಾಸ್ ಧ್ವನಿ ಕೇಳಿಸುತ್ತಾರೆ. ಅದೇ ರೀತಿ ಪ್ರಿಯಾಂಕಾ ಅವರ ಅಮ್ಮ ಮಾತಾಡಿದ್ದಾರೆ.

    ಇತ್ತ ಟಾಸ್ಕ್ ಬಗ್ಗೆ ದೀಪಿಕಾ, ಕಿಶನ್ ಮಾತಾಡುತ್ತಿದ್ದರು. ಆಗ ದೀಪಿಕಾ ನಾನು ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ. ನಂತರ ಅಮ್ಮನನ್ನು ನೆನಪಿಸಿಕೊಂಡು ಗಳಗಳನೇ ಅತ್ತಿದ್ದಾರೆ. ಆಗ ಪ್ರಿಯಾಂಕಾ ಮತ್ತು ಕಿಶನ್ ಸಮಾಧಾನ ಮಾಡಿದ್ದಾರೆ. ಆದರೂ ದೀಪಿಕಾ, ಅಮ್ಮನನ್ನು ನಾನು ಮರೆಯುತ್ತಿದ್ದೇನೆ ಎಂದು ಪ್ರಿಯಾಂಕಾರನ್ನು ತಬ್ಬಿಕೊಂಡು ಜೋರಾಗಿ ಕಣ್ಣೀರು ಹಾಕಿದ್ದಾರೆ.

  • ಕಲಿಯುಗದ ಶ್ರವಣಕುಮಾರ ಖ್ಯಾತಿಯ ಮೈಸೂರಿನ ಪುತ್ರನಿಗೆ ಆನಂದ್ ಮಹೀಂದ್ರಾರಿಂದ ಭರ್ಜರಿ ಗಿಫ್ಟ್

    ಕಲಿಯುಗದ ಶ್ರವಣಕುಮಾರ ಖ್ಯಾತಿಯ ಮೈಸೂರಿನ ಪುತ್ರನಿಗೆ ಆನಂದ್ ಮಹೀಂದ್ರಾರಿಂದ ಭರ್ಜರಿ ಗಿಫ್ಟ್

    ಬೆಂಗಳೂರು: ತಾಯಿಯನ್ನು ಹಳೆ ಸ್ಕೂಟರ್ ನಲ್ಲಿ ಕರೆದುಕೊಂಡು ತೀರ್ಥಯಾತ್ರೆಯನ್ನು ಮಾಡುತ್ತಿರುವ ಮೈಸೂರು ನಿವಾಸಿಯಾಗಿರುವ ಕೃಷ್ಣ ಕುಮಾರ್ ಹಾಗೂ ತಾಯಿ ರತ್ನಮ್ಮ ಅವರ ಜರ್ನಿಯ ಕಥೆ ಮಹೀಂದ್ರ ಸಂಸ್ಥೆಯ ಆನಂದ್ ಮಹೀಂದ್ರಾ ವರೆಗೂ ತಲುಪಿದ್ದು, ಅಮ್ಮ-ಮಗನ ಈ ವರದಿಯನ್ನು ಕೇಳಿದ ಆನಂದ್ ಮಹೀಂದ್ರಾ ಅವರು ಭರ್ಜರಿ ಗಿಫ್ಟ್ ನೀಡಲು ಮುಂದಾಗಿದ್ದಾರೆ.

    ವೃದ್ಧ ತಂದೆ, ತಾಯಿಯನ್ನು ಭಾರವೆಂದು ವೃದ್ಧಾಶ್ರಮಗಳಿಗೆ ದಾಖಲು ಮಾಡುತ್ತಿರುವ ಮಕ್ಕಳ ನಡುವೆ ಕೃಷ್ಣ ಕುಮಾರ್ ಅವರ ಈ ಕಾರ್ಯ ಹಲವರ ಮೆಚ್ಚುಗೆಗೆ ಕಾರಣವಾಗಿತ್ತು. ಸದ್ಯ ಆನಂದ್ ಮಹೀಂದ್ರಾ ಅವರು ಕೂಡ ಕೃಷ್ಣ ಕುಮಾರ್ ಅವರ ಕಾರ್ಯಕ್ಕೆ ಫಿದಾ ಆಗಿದ್ದು, ತಾಯಿ ಹಾಗೂ ದೇಶದ ಬಗ್ಗೆ ಇರುವ ಪ್ರೀತಿಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ವೈಯಕ್ತಿಕವಾಗಿ ಅವರಿಗೆ ಮಹೀಂದ್ರ ಕೆಯುವಿ 100 ಎನ್‍ಎಕ್ಸ್‍ಟಿ ಕಾರನ್ನು ಗಿಫ್ಟ್ ನೀಡುವುದಾಗಿ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ.

    ಕೃಷ್ಣ ಕುಮಾರ್ ಅವರು ಮಾಧ್ಯಮವೊಂದಕ್ಕೆ ತಮ್ಮ ಕಾರ್ಯದ ಕುರಿತು ಹೇಳಿಕೆ ನೀಡಿದ್ದು, ಈ ವಿಡಿಯೋವನ್ನು ಟ್ವಿಟ್ಟಗರೊಬ್ಬರು ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ಈ ಟ್ವಿಟ್ಟನ್ನು ರಿಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಅವರು ನನ್ನನ್ನು ಸಂಪರ್ಕ ಮಾಡಿದರೆ ಕಾರನ್ನು ಗಿಫ್ಟ್ ನೀಡುವುದಾಗಿ ತಿಳಿಸಿದ್ದು, ಮುಂದಿನ ತಮ್ಮ ಪ್ರಯಾಣವನ್ನು ಕಾರಿನಲ್ಲಿ ನಡೆಸಬಹುದು ಎಂದು ಹೇಳಿದ್ದಾರೆ.

    ಯಾರು ಕೃಷ್ಣ ಕುಮಾರ್: ಮೂಲತಃ ಮೈಸೂರಿನವರಾಗಿದ್ದು, ಅವರ ತಂದೆ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಒಂದು ದಿನ ರತ್ಮಮ್ಮನವರು, ನಿಮ್ಮ ತಂದೆ ಕೊನೆಗೂ ನನಗೆ ವೆಲ್ಲೂರು ದೇವಸ್ಥಾನ ತೋರಿಸಲಿಲ್ಲ. ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿಬಿಟ್ಟರು ಎಂದು ನೋವು ತೋಡಿಕೊಂಡಿದ್ದರು. ಅಂದು ಕೃಷ್ಣ ಕುಮಾರ್, ಕೇವಲ ವೆಲ್ಲೂರು ಏಕೆ, ದೇಶದ ನಾಲ್ಕು ದಿಕ್ಕಿನಲ್ಲಿರುವ ಕ್ಷೇತ್ರಗಳ ದರ್ಶನ ಮಾಡಿಸುತ್ತೇನೆ ಎಂದು ತೀರ್ಥಯಾತ್ರೆ ಆರಂಭಿಸಿದ್ದಾರೆ.

    ತಾಯಿಗೆ ನೀಡಿದ ಮಾತಿನಂತೆ ತಂದೆಯ ನಲವತ್ತು ವರ್ಷದ ಹಳೆಯ ಸ್ಕೂಟರ್ ಮೇಲೆ ಅಮ್ಮನ ಜೊತೆ ಕೃಷ್ಣ ಕುಮಾರ್ ತೀರ್ಥಯಾತ್ರೆ ಆರಂಭಿಸಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ, ಪುದುಚೇರಿ, ಸೇರಿದಂತೆ ನೇಪಾಳ, ಮ್ಯಾನ್ಮಾರ್ ಸೇರಿದಂತೆ ಹಲವು ಸ್ಥಳಗಳಿಗೆ ಸ್ಕೂಟರ್ ಮೇಲೆಯೇ ಭೇಟಿ ನೀಡಿದ್ದಾರೆ.

    ತಂದೆ-ತಾಯಿ ಸೇವೆಯಲ್ಲಿ ತೊಡಗಿಕೊಂಡಿರುವ ಕೃಷ್ಣಕುಮಾರ್ ಅವರಿಗೆ ಮದುವೆ ಆಗಿಲ್ಲ. ತಂದೆಯ ನಿಧನದ ಬಳಿಕ ತಾಯಿಯೇ ಕೃಷ್ಣ ಕುಮಾರ್ ಅವರ ದೊಡ್ಡ ಆಸ್ತಿಯಾಗಿದ್ದಾರೆ. ತೀರ್ಥಯಾತ್ರೆಯನ್ನ ಬಸ್ ಅಥವಾ ಬೇರೆ ವಾಹನದ ಮೂಲಕ ಕೈಗೊಳ್ಳಬಹುದಿತ್ತು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಸ್ಕೂಟರ್ ನಮ್ಮ ಜೊತೆಯಲ್ಲಿದ್ದರೆ ತಂದೆಯೊಂದಿಗೆ ಪ್ರಯಾಣ ಮಾಡುತ್ತಿದ್ದೇವೆ ಅನ್ನಿಸುತ್ತದೆ ಎಂದಿದ್ದಾರೆ.

    ತಾಯಿಯ ಸೇವೆ ಮಾಡುವುದರಲ್ಲಿಯೇ ನನಗೆ ಖುಷಿ ಹಾಗೂ ತೃಪ್ತಿ ಸಿಗುತ್ತದೆ. ಸ್ಕೂಟರ್ ಜೊತೆ ತಂದೆಯ ನೆನಪುಗಳು ಬೆಸೆದುಕೊಂಡಿವೆ. ಒಂದು ಸ್ಟೆಪ್ನಿ ಜೊತೆ ಪ್ರಯಾಣ ಮಾಡುತ್ತಿದ್ದು, ಹೋದ ಸ್ಥಳಗಳಲ್ಲಿ ಒಳ್ಳೆಯ ಜನರು ಸಿಗುತ್ತಿದ್ದು, ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಕೃಷ್ಣ ಕುಮಾರ್ ಈ ಹಿಂದೆ ತಿಳಿಸಿದ್ದರು.

    ಮಗ ನನಗಾಗಿ ಮದುವೆ ಮಾಡಿಕೊಳ್ಳಲಿಲ್ಲ. ಕೃಷ್ಣ ಕುಮಾರನನೇ ನನಗೆ ಮಗ ಮತ್ತು ಮಗಳಾಗಿ ನೋಡಿಕೊಳ್ಳುತ್ತಿದ್ದಾನೆ. ಪ್ರಯಾಣದಲ್ಲಿ ಇದೂವರೆಗೂ ಯಾವುದೇ ತೊಂದರೆ ಆಗಿಲ್ಲ. ಇಂತಹ ಮಗನನ್ನು ಎಲ್ಲರಿಗೂ ದೇವರು ಕರುಣಿಸಲಿ ಎಂದು ತಾಯಿ ರತ್ನಮ್ಮ ಪುತ್ರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  • ಚೈನ್ ಕಳ್ಳರನ್ನು ಹಿಡಿದು ಥಳಿಸಿದ ಅಮ್ಮ ಮಗಳು: ವಿಡಿಯೋ

    ಚೈನ್ ಕಳ್ಳರನ್ನು ಹಿಡಿದು ಥಳಿಸಿದ ಅಮ್ಮ ಮಗಳು: ವಿಡಿಯೋ

    ನವದೆಹಲಿ: ತಮ್ಮ ಬಳಿ ಚೈನ್ ಕಿತ್ತುಕೊಂಡು ಹೋಗಲು ಬಂದ ಇಬ್ಬರು ಕಳ್ಳರನ್ನು ಅಮ್ಮ ಮಗಳ ಹಿಡಿದು ಥಳಿಸಿರುವ ಘಟನೆ ಪಶ್ಚಿಮ ದೆಹಲಿಯ ನಂಗ್ಲೋಯಿ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಕಳೆದ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಂಗ್ಲೋಯಿ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದ ಅಮ್ಮ ಮತ್ತು ಮಗಳ ಮುಂದೆ ಬೈಕಿನಲ್ಲಿ ಬಂದ ಇಬ್ಬರು ಅಮ್ಮನ ಕೊರಳಲ್ಲಿ ಇದ್ದ ಸರ ಕಸಿದು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆಗ ಅಮ್ಮ ಮಗಳು ಇಬ್ಬರು ಸೇರಿ ಕಳ್ಳನ್ನು ಹಿಡಿದು ಥಳಿಸುವ ದೃಶ್ಯ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ವಿಡಿಯೋದಲ್ಲಿ ರಸ್ತೆ ದಾಟುತ್ತಿದ್ದ ಅಮ್ಮ ಮಗಳ ಮುಂದೆ ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ಸರವನ್ನು ಕಿತ್ತುಕೊಂಡು ಹೋಗಲು ಪ್ರಯತ್ನ ಮಾಡುತ್ತಾರೆ. ತಕ್ಷಣ ಎಚ್ಚೆತ್ತುಕೊಂಡ ಅಮ್ಮ ಮಗಳು ಹಿಂಬದಿಯಲ್ಲಿ ಕುಳಿತ್ತಿದ್ದ ಕಳ್ಳನನ್ನು ಹಿಡಿದುಕೊಂಡು ಇಬ್ಬರು ಕಳ್ಳರನ್ನು ಬೈಕಿನ ಸಮೇತ ಕೆಳಗೆ ಬೀಳಿಸುತ್ತಾರೆ. ಇದರಲ್ಲಿ ಒಬ್ಬ ತಪ್ಪಿಸಿಕೊಂಡು ಹೊಗುತ್ತಾನೆ ಆದರೆ ಒಬ್ಬನನ್ನು ಬಿಗಿಯಾಗಿ ಹಿಡಿದುಕೊಂಡ ಅಮ್ಮ ಮಗಳು ಸ್ಥಳೀಯರ ಸಹಾಯದಿಂದ ಕಳ್ಳನನ್ನು ಹಿಗ್ಗಾಮುಗ್ಗಾ ಥಳಿಸಿರುವುದು ಸಿಸಿಟಿಯಲ್ಲಿ ಸೆರೆಯಾಗಿದೆ.

    ಚೈನ್ ಕಳ್ಳನನ್ನು ಹಿಡಿದು ಥಳಿಸಿದ ಅಮ್ಮ ಮಗಳು ಮತ್ತು ಸ್ಥಳೀಯರು ನಂತರ ಅವನನ್ನು ಪೊಲೀಸರುಗೆ ಒಪ್ಪಿಸಿದ್ದಾರೆ. ಒಬ್ಬನನ್ನು ಕರೆದುಕೊಂಡು ಹೋಗಿ ತನಿಖೆ ಮಾಡಿರುವ ದೆಹಲಿ ಪೊಲೀಸರು ತಪ್ಪಿಸಿಕೊಂಡಿದ್ದ ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಅರೋಪಿಗಳನ್ನು ಅಬ್ದುಲ್ ಶಂಶಾದ್ ಮತ್ತು ವಿಕಾಸ್ ಜೈನ್ ಎಂದು ಗುರುತಿಸಲಾಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸರು, ತನಿಖೆಯಲ್ಲಿ ಈ ಇಬ್ಬರು ಆರೋಪಿಗಳು ತುಂಬಾ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಇವರು ಎರಡು ಚಿನ್ನದ ಚೈನ್ ಮತ್ತು ಮೂರು ಬೈಕ್‍ಗಳು ಎರಡು ಮೊಬೈಲ್‍ಗಳನ್ನು ಕಳವು ಮಾಡಿದ್ದರು ಎಂದು ಹೇಳಿದ್ದಾರೆ.

  • ಅಮ್ಮನ ಮೇಣದ ಪ್ರತಿಮೆ ನಿರ್ಮಿಸಿದ ಪುತ್ರ

    ಅಮ್ಮನ ಮೇಣದ ಪ್ರತಿಮೆ ನಿರ್ಮಿಸಿದ ಪುತ್ರ

    ಬೆಂಗಳೂರು: ಇಂದಿನ ಕಾಲದಲ್ಲಿ ಹೆತ್ತವರು ಮಕ್ಕಳಿಗೆ ಹೊರೆಯಾಗಿ ಬಿಡುತ್ತಾರೆ. ಕೆಲವರು ಪೋಷಕರಿಂದ ಆಸ್ತಿ ಬರೆಸಿಕೊಂಡು ಹೊರ ಹಾಕುವ ಉದಾಹರಣೆಗಳು ನಮ್ಮ ಮುಂದಿವೆ. ಇನ್ನು ಹಲವರು ಪೋಷಕರನ್ನು ನೋಡಿಕೊಳ್ಳಲಾಗದೇ ವೃದ್ಧಾಶ್ರಮಕ್ಕೆ ಸೇರಿಸಿ ಒಂದಿಷ್ಟು ಹಣ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಬೆಂಗಳೂರಿನಲ್ಲಿರುವ ಉದ್ಯಮಿಯೊಬ್ಬರು ಅಮ್ಮನ ನೆನಪಿಗಾಗಿ 2.5 ಲಕ್ಷ ರೂ. ಖರ್ಚು ಮಾಡಿ ಮೇಣದ ಪ್ರತಿಮೆಯನ್ನ ಮಾಡಿಸಿದ್ದಾರೆ.

    ಬೆಂಗಳೂರಿನ ನಿವಾಸಿಯಾಗಿರವ ಉದ್ಯಮಿ ವೆಂಕಟೇಶ್ ತಾಯಿಯ ಪ್ರತಿಮೆ ಮಾಡಿಸುವ ಮೂಲಕ ಪುತ್ರ ಪ್ರೇಮ ಮೆರೆದಿದ್ದಾರೆ. ಒಂದು ವರ್ಷದ ಹಿಂದೆ ವೆಂಕಟೇಶ್ ಅವರ ತಾಯಿ ಮನೋರಾಮ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು. ತಾಯಿಯ ವೈಕುಂಠ ಸಮಾರಾಧನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ 1,500ಕ್ಕೂ ಹೆಚ್ಚು ಪುರೋಹಿತರನ್ನು ಕರೆಸಿ ಮಂತ್ರ ಪಠಣೆ ಮಾಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಒಂದು ಸಾವಿರ ಮುತ್ತೈದೆಯರು ಭಾಗಿಯಾಗಿದ್ದು ಮತ್ತೊಂದು ವಿಶೇಷ.

    ಇಷ್ಟಲ್ಲದೇ 2.5 ಲಕ್ಷ ರೂ. ವೆಚ್ಚ ಮಾಡಿ 5 ಅಡಿ ಎತ್ತರದ ಮೇಣದ ಪ್ರತಿಮೆಯನ್ನು ಸಹ ಮಾಡಿಸಿದ್ದಾರೆ. ಮನೋರಮಾ ಅವರು ಧರಿಸುತ್ತಿದ್ದ ಚಿನ್ನದ ಬಳೆ, ಕಾಟನ್ ಸೀರೆ, ನೀಲಿ ಶಾಲು, ಕನ್ನಡಕ, ದಿಂಬು ಸೇರಿದಂತೆ ಅವರೊಂದಿಗೆ ಕಳೆದ ಅವಿಸ್ಮರಣೀಯ ಕ್ಷಣಗಳನ್ನು ಸಾಕ್ಷಚಿತ್ರದ ಮೂಲಕ ಸೆರೆ ಹಿಡಿದಿದ್ದಾರೆ. ವೆಂಕಟೇಶ್ ಅವರ ಪುತ್ರ ಪ್ರೇಮಕ್ಕೆ ಕುಟುಂಬಸ್ಥರು ಮತ್ತು ಸ್ನೇಹಿತ ವರ್ಗ ಮೆಚ್ಚುಗೆ ಸೂಚಿಸಿದ್ದಾರೆ.

  • ಅಮ್ಮನಾಗುತ್ತಿರುವ ಸಂತಸ ರಿವೀಲ್ ಮಾಡಿದ ಶ್ವೇತಾ ಚಂಗಪ್ಪ

    ಅಮ್ಮನಾಗುತ್ತಿರುವ ಸಂತಸ ರಿವೀಲ್ ಮಾಡಿದ ಶ್ವೇತಾ ಚಂಗಪ್ಪ

    ಬೆಂಗಳೂರು: ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ಅಮ್ಮ ಆಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಪತಿಯೊಂದಿಗೆ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿರುವ ಅವರು ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

    ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿರುವ ಶ್ವೇತಾ ಚಂಗಪ್ಪ ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ. ಸದ್ಯ ಶೋದಿಂದ ಬ್ರೇಕ್ ಪಡೆದಿರುವ ಶ್ವೇತಾ ಅಮ್ಮನಾಗುತ್ತಿರುವ ಹರ್ಷದಲ್ಲಿದ್ದಾರೆ. ಇಂದು ಶ್ವೇತಾ ಚಂಗಪ್ಪ ಅವರ ಪತಿಯ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಮಾಹಿತಿ ನೀಡಿ ಆರ್ಶೀವಾದ ಕೇಳಿದ್ದಾರೆ. ಇದೇ ಸಂದರ್ಭದಲ್ಲಿ ಅಮ್ಮನಾಗುತ್ತಿರುವ ಸಂತಸದ ಬೇಬಿ ಬಂಪ್‍ನ ಫೋಟೋ ಶೂಟ್ ನಡೆಸಿದ್ದಾರೆ.

    ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಿರ್ದೇಶಕ ಎಸ್. ನಾರಾಯಣ್ ಅವರ ‘ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾರ್ದಾಪಣೆ ಮಾಡಿದ ಅವರು, ಯಾರಿಗುಂಟು ಯಾರಿಗಿಲ್ಲ ಎಂಬ ಕಾರ್ಯಕ್ರಮದ ನಿರೂಪನೆಯನ್ನು ಮಾಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಸೀಸನ್ 2ರಲ್ಲೂ ಭಾಗವಹಿಸಿದ್ದರು. ವರ್ಷ, ತಂಗಿಗಾಗಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರಿಗೆ 2013ರ ಕರ್ನಾಟಕ ಸರ್ಕಾರ ನೀಡುವ ಮಾಧ್ಯಮ ಸನ್ಮಾನ ಪ್ರಶಸ್ತಿಯೂ ಲಭಿಸಿದೆ.

     

    View this post on Instagram

     

    Hi my dear friends ❣️I’m very greatful to all your LOVE and BLESSINGS showered on me all these years, for the work I have been doing and the PERSON I am♥️….. U all have known me for more than a decade????. U guys have LIKED ME, LOVED ME,n BLESSED ME for the kind of roles I have been doing in the television & cinemas???????? on this SPECIAL DAY being my HUSBAND’S @kiranappachu BIRTHDAY I want to tell you all a very SPECIAL NEWS. Happy to Announce that in my REAL life I will be portraying a Role of A “MOTHER”???? With the BLESSINGS of GOD, Me and My Hubby are gonna welcome our BUNDLE OF JOY very soon???? Need all your BEST WISHES and BLESSINGS to us and our family???? like u guys have always shown????????. LOVE YOU All????????. Photography-@aashish__photography ography. thank u soo much aashish for the beautiful pics.im happy that my first ever maternity shoot is done by u???? Makeup and hair- @karishmauthappa_makeup p. Karishma u rock girl…. amazing job. Love u???? Outfit- @paramparika_vastra . U guys are too good. And made my outfit look really cute and beautiful on pics ???? Tiyara- @sscreations719 ons719 thank u guys for the lovely tiyara which is adding it’s magic for these pics????. Love u all guys????. #happy #goodnews @bangalore_times #maternity #journey #godsgift #blessed????. #lovemylife #loveuzindagi,????

    A post shared by Swetha Changappa (@swethachangappa) on

  • ಕಲ್ಪತರುನಾಡಿನಲ್ಲಿ ಕರುಣೆ ಇಲ್ಲದ ಅಮ್ಮಂದಿರ ಸಂಖ್ಯೆ ಹೆಚ್ಚಾಯ್ತಾ!

    ಕಲ್ಪತರುನಾಡಿನಲ್ಲಿ ಕರುಣೆ ಇಲ್ಲದ ಅಮ್ಮಂದಿರ ಸಂಖ್ಯೆ ಹೆಚ್ಚಾಯ್ತಾ!

    ತುಮಕೂರು: ಇಂದು ಅಮ್ಮಂದಿರ ದಿನ, ಹೆತ್ತು- ಹೊತ್ತು, ಸಾಕಿ- ಸಲುಹಿದ ಮಾತೃದೇವತೆಯ ನೆನೆಯುವ ದಿನವಾಗಿದೆ. ಆದರೆ ಕಲ್ಪತರುನಾಡಿನಲ್ಲಿ ದಿನೇ ದಿನೇ ಕರುಣೆ ಇಲ್ಲದ ಅಮ್ಮಂದಿರರ ಸಂಖ್ಯೆ ಹೆಚ್ವಾಗುತ್ತಿವೆ.

    ಹೌದು, ತುಮಕೂರಿನಲ್ಲಿ ಅಮ್ಮಂದಿರಿಗೆ ಕರುಣೆ ಇಲ್ಲವಾಗ್ತಾ ಇದೆಯಾ? ಕರುಣೆ ಇಲ್ಲದ ಅಮ್ಮನಿಂದ ತಿಪ್ಪೆ, ಚರಂಡಿ, ಬೀದಿ ಬೀದಿಗಳಲ್ಲಿ ಕರುಳಿನ ಬಳಿಗಳು ಬಿದ್ದು ಒದ್ದಾಡುತ್ತಿವೆ. ಕೆಲವಡೆ ಇರುವೆ, ನಾಯಿ, ಬೆಕ್ಕುಗಳ ಪಾಲಾಗಿವೆ. ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 35 ಕಂದಮ್ಮಗಳು ತಾಯಂದಿರರಿಂದ ದೂರವಾಗಿದೆ. ಅದರಲ್ಲಿ 25 ಶಿಶುಗಳನ್ನ ಹೆಣ್ಣೆಂಬ ಕಾರಣಕ್ಕೆ ಬೀದಿಯಲ್ಲಿ ಬಿಟ್ಟು ಹೋಗಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ ತಿಳಿಸಿದ್ದಾರೆ.

    ಇವುಗಳಲ್ಲಿ ಬೀದಿಯಲ್ಲಿ ಬಿದ್ದ ಸುಮಾರು 11 ಶಿಶುಗಳು ಪ್ರಾಣಿ, ಪಕ್ಷಿಗಳ ದಾಳಿಗೆ ತುತ್ತಾಗಿವೆ. ಹೆಣ್ಣು ಮಕ್ಕಳ ಬಗೆಗಿನ ತಾತ್ಸಾರ ಮನೋಭಾವ ಈ ಪ್ರಕರಣಕ್ಕೆ ಪ್ರಮುಖ ಕಾರಣವಾಗಿದೆ. ಇನ್ನು ತಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿ ಸಾಕಲು ಸಾಧ್ಯವಾಗದ ಸುಮಾರು 15 ಮಕ್ಕಳನ್ನು ಪೋಷಕರು ಮಕ್ಕಳ ಕಲ್ಯಾಣ ಸಮಿತಿಗೆ ಕೊಟ್ಟು ಹೋಗಿದ್ದಾರೆ. ಅಮ್ಮಂದಿರ ದಿನದಂದು ನಿಜಕ್ಕೂ ಈ ಅಂಕಿ ಅಂಶ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

  • ಅಮ್ಮನ ಜೊತೆ ಇರುವಾಗ್ಲೇ 17ರ ಹುಡುಗಿ ಮೇಲೆ ಆ್ಯಸಿಡ್ ಎಸೆದ್ರು!

    ಅಮ್ಮನ ಜೊತೆ ಇರುವಾಗ್ಲೇ 17ರ ಹುಡುಗಿ ಮೇಲೆ ಆ್ಯಸಿಡ್ ಎಸೆದ್ರು!

    ಪಾಟ್ನಾ: ಕಿರುಕುಳ ನೀಡಲು ವಿಫಲವಾದ್ದರಿಂದ 17 ವರ್ಷದ ಹುಡುಗಿ ಮೇಲೆ ನೆರೆಮನೆಯವರೇ ಆ್ಯಸಿಡ್ ಎರಚಿದ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.

    ಈ ಘಟನೆ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ತನ್ನ ತಾಯಿ ಜೊತೆ ಮನೆಯಲ್ಲಿ ಇರುವಾಗ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.

    ನೆರೆಮನೆಯ ಪ್ರಿನ್ಸ್ ಎಂಬಾತ ಮೂವರೊಂದಿಗೆ ಏಕಾಏಕಿ ಮನೆಗೆ ನುಗಿದ್ದಾನೆ. ಅಲ್ಲದೆ ಅಮ್ಮನ ಹಣೆಗೆ ಗನ್ ಇಟ್ಟು, ಹುಡುಗಿಗೆ ಕಿರುಕುಳ ನೀಡಲು ಮುಂದಾಗಿದ್ದಾರೆ. ಈ ವೇಳೆ ಸಂತ್ರಸ್ತೆ ಕಿಡಿಗೇಡಿಗಳಿಂದ ತಪ್ಪಿಸಿಕೊಂಡಿದ್ದಾಳೆ. ಇದರಿಂದ ಸಿಟ್ಟುಗೊಂಡ ಅವರು, ಆಕೆಯ ಮುಖಕ್ಕೆ ಆ್ಯಸಿಡ್ ಎರಚಿದ್ದಾರೆ. ಘಟನೆಯ ಬಳಿಕ ಘಟನಾ ಸ್ಥಳದಿಂದ ಗನ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ರೂಪ್ ರಂಜನ್ ಹಾರ್ಗವೆ ತಿಳಿಸಿದ್ದಾರೆ.

    ಪ್ರಕರಣ ಸಂಬಂಧ ಪ್ರಿನ್ಸ್‍ನನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಇತ್ತ ಸಂತ್ರಸ್ತೆಯನ್ನು ಪಾಟ್ನಾ ಮೆಡಿಕಲ್ ಕಾಲೇಜು & ಹಾಸ್ಪಿಟಲ್ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.

  • ಮಹಿಳಾ ದಿನದ ವಿಶೇಷ: ಅಮ್ಮನಿಗೆ ವಿಶೇಷ ಗಿಫ್ಟ್ ಕೊಟ್ಟ ಸಚಿನ್

    ಮಹಿಳಾ ದಿನದ ವಿಶೇಷ: ಅಮ್ಮನಿಗೆ ವಿಶೇಷ ಗಿಫ್ಟ್ ಕೊಟ್ಟ ಸಚಿನ್

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರರ ಸಚಿನ್ ತೆಂಡೂಲ್ಕರ್ ಮಹಿಳಾ ದಿನಾಚರಣೆಯ ಅಂಗವಾಗಿ ತಾವೇ ಸ್ವತಃ ಅಡುಗೆ ಮನೆಗೆ ತೆರಳಿ ಅಮ್ಮನಿಗಾಗಿ ವಿಶೇಷ ಖಾದ್ಯ ಸಿದ್ಧ ಪಡಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಚಿನ್, ಮಹಿಳಾ ದಿನಾಚರಣೆ ಶುಭಾಶಯ ತಿಳಿಸಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಟ್ವೀಟ್ ನೊಂದಿಗೆ ವಿಶೇಷ ವಿಡಿಯೋವನ್ನು ನೀಡಿದ್ದಾರೆ. ನಮ್ಮ ಜೀವನದಲ್ಲಿ ಅತಿ ಹೆಚ್ಚು ಮುಖ್ಯವಾಗಿರುವ ಮಹಿಳೆ ಇಂದು ವಿಶೇಷ ನೀಡೋಣ ಎಂದು ತಿಳಿಸಿರುವ ಸಚಿನ್ ಅಮ್ಮನಿಗೆ ಬದನೆಕಾಯಿ ಖಾದ್ಯ ಮಾಡಿಕೊಟ್ಟಿದ್ದಾರೆ.

    ಈಗಾಗಲೇ ಸಚಿನ್ ತಮ್ಮ ತಾಯಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂಬುವುದು ಎಲ್ಲ ಅಭಿಮಾನಿಗಳಿಗೂ ತಿಳಿದಿದೆ. ಇದೇ ವೇಳೆ ತಮ್ಮ ಈ ದಿನದ ವಿಶೇಷ ಗಿಫ್ಟ್‍ನಂತೆ ನೀವು ಕೂಡ ನಿಮ್ಮ ಜೀವನದಲ್ಲಿ ಮುಖ್ಯ ಪಾತ್ರವಹಿಸಿರುವವರಿಗೆ ಏನಾದರು ಮಾಡಿ ಎಂದು ಮನವಿ ಮಾಡಿದ್ದಾರೆ.

    ನಮಗಾಗಿ ಅಮ್ಮ ಹೆಚ್ಚಿನ ಸಮಯವನ್ನು ಅಡುಗೆ ಮನೆಯಲ್ಲೇ ಕಳೆದಿರುತ್ತಾರೆ. ಅದ್ದರಿಂದ ಇಂದು ನಾನು ಅವರಿಗಾಗಿ ಅಡುಗೆ ಮಾಡಿದ್ದೇನೆ. ಸದ್ಯ ಪತ್ನಿ ಬೇರೆಡೆ ತೆರಳಿರುವುದಿಂದ ನಾನು ಅಮ್ಮನಿಗೆ ಮಾತ್ರ ಇದನ್ನು ನೀಡುತ್ತಿದ್ದೇನೆ. ಅಮ್ಮ ಜೀವನದಲ್ಲಿ ಎಂದು ನಮಗೇ ಉನ್ನತ ಸ್ಥಾನದಲ್ಲೇ ಇರುತ್ತಾರೆ. ಅವರಿಗೆ ಬೇರೆ ಯಾರನ್ನು ಹೋಲಿಕೆ ಮಾಡಲು ಆಗಲ್ಲ ಎಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದೇ ದಿನ ಇಬ್ಬರ ಬರ್ತ್ ಡೇ- ಖುಷಿಯಲ್ಲಿ ರಾಧಿಕಾ ಪಂಡಿತ್

    ಒಂದೇ ದಿನ ಇಬ್ಬರ ಬರ್ತ್ ಡೇ- ಖುಷಿಯಲ್ಲಿ ರಾಧಿಕಾ ಪಂಡಿತ್

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರು ತಮ್ಮ ತಾಯಿ ಮತ್ತು ಸಹೋದರನ ಮಗಳ ಹುಟ್ಟುಹಬ್ಬವು ಈ ವರ್ಷ ಒಂದೇ ದಿನ ಆಚರಿಸಿದ್ದು, ವಿಶೇಷವಾಗಿತ್ತು ಎಂದು ರಾಧಿಕಾ ಅವರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

    ನಟಿ ರಾಧಿಕಾ ಪಂಡಿತ್ ಅವರ ತಾಯಿ ಹುಟ್ಟುಹಬ್ಬ ಮಂಗಳವಾರ ಇತ್ತು. ಇದೇ ದಿನ ಅವರ ಅಣ್ಣ ಗೌರವ್ ಪಂಡಿತ್ ಮಗಳು ರಿಯಾ ಬರ್ತ್ ಡೇ ಕೂಡ ಇತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವರು ಫೋಟೋ ಹಾಕಿ ಶುಭಾಶಯವನ್ನು ತಿಳಿಸಿದ್ದಾರೆ.

    ರಾಧಿಕಾ ಅವರು, “ಇಂದು ವಿಶೇಷವಾದ ದಿನವಾಗಿದೆ. ಯಾಕೆಂದೆರೆ ಈ ವರ್ಷ ಇಬ್ಬರ ಹುಟ್ಟುಹಬ್ಬವನ್ನು ಒಂದೇ ದಿನ ಆಚರಿಸುತ್ತಿದ್ದೇವೆ. ನಮ್ಮ ಅಮ್ಮ ಮತ್ತು ರಿಯಾ ಇಬ್ಬರ ಬರ್ತ್ ಡೇಯನ್ನು ಆಚರಿಸಿದ್ದೇವೆ. ಇಂದಿಗೆ ರಿಯಾಗೆ ಒಂದು ವರ್ಷವಾಗಿದೆ. ಅಮ್ಮ ನೀವೇ ನನಗೆ ಪ್ರಪಂಚ, ನಾನು ನಿಮ್ಮಂತೇ ಉತ್ತಮ ತಾಯಿ ಎಂದು ಭಾವಿಸುತ್ತೇವೆ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಹ್ಯಾಪಿ ಬರ್ತ್ ಡೇ ಅಮ್ಮ” ಎಂದು ಬರೆದು ವಿಶ್ ಮಾಡಿದ್ದಾರೆ.

    ಜೊತೆಗೆ ರಾಧಿಕಾ ಅವರು ಸೀಮಂತಾ ಕಾರ್ಯಕ್ರಮದಲ್ಲಿ ಅಮ್ಮನ ಜೊತೆಗೆ ತೆಗೆಸಿಕೊಂಡಿದ್ದ ಹಾಗೂ ಅಮ್ಮ ರಿಯಾಳನ್ನು ಎತ್ತಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ನಟಿ ರಾಧಿಕಾ ಸಹೋದರ ಗೌರವ್ ಅಮೆರಿಕದ ಚಿಕಾಗೋದಲ್ಲಿ ನೆಲೆಸಿದ್ದು, ಅವರ ಪತ್ನಿಗೆ ಕಳೆದ ವರ್ಷ ಫೆಬ್ರವರಿಯಲ್ಲಿ ರಿಯಾ ಹುಟ್ಟಿದ್ದಳು.

    https://www.instagram.com/p/Btg52dHBLxF/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv