Tag: ಅಮೆರಿಕಾ

  • PublicTV Explainer: ಟ್ರಂಪ್ ಟ್ಯಾರಿಫ್ ವಾರ್ – ಭಾರತದ ಯಾವ ವಲಯಗಳ ಮೇಲೆ ಪ್ರಭಾವ ಹೆಚ್ಚು?

    PublicTV Explainer: ಟ್ರಂಪ್ ಟ್ಯಾರಿಫ್ ವಾರ್ – ಭಾರತದ ಯಾವ ವಲಯಗಳ ಮೇಲೆ ಪ್ರಭಾವ ಹೆಚ್ಚು?

    ಜಗತ್ತಿನ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಟ್ಯಾರಿಫ್ ವಿಷಯವಾಗಿ ಭಾರಿ ಚರ್ಚೆಯಲ್ಲಿದ್ದಾರೆ. ಪ್ರತಿ ದಿನ ಬೇರೆ ಬೇರೆ ದೇಶಗಳ ಮೇಲೆ ಸುಂಕ ಸಮರವನ್ನ ಸಾರುತ್ತಲೇ ಬರುತ್ತಿದ್ದಾರೆ. ಹೀಗಿರುವಾಗ ಇದೀಗ ಮತ್ತೆ ಭಾರತದ ಮೇಲೆ ಆಮದು ಸುಂಕ ಹೆಚ್ಚಿಸಿದ್ದಾರೆ.

    ಏನಿದು ಟ್ಯಾರಿಫ್ ವಾರ್/ಸುಂಕ ಸಮರ?

    ಎರಡು ಅಥವಾ ಹೆಚ್ಚು ದೇಶಗಳು ಪರಸ್ಪರ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಹೆಚ್ಚುವರಿ ಸುಂಕವನ್ನ ವಿಧಿಸುತ್ತವೆ. ಈ ಮೂಲಕ ಆರ್ಥಿಕ ಒತ್ತಡವನ್ನ ಸೃಷ್ಟಿಸುವ ಪರಿಸ್ಥಿತಿ ಉಂಟು ಮಾಡಲಾಗುತ್ತದೆ. ಉದಾಹರಣೆಗೆ, ಒಂದು ದೇಶ ತನ್ನ ಮಾರುಕಟ್ಟೆಯ ನಿಯಂತ್ರಣಕ್ಕೋಸ್ಕರ ಇನ್ನೊಂದು ದೇಶದಿಂದ ಬರುವ ವಸ್ತುಗಳ ಮೇಲೆ ಹೆಚ್ಚುವರಿ ಸುಂಕವನ್ನ ವಿಧಿಸುತ್ತದೆ. ಇದಕ್ಕೆ ಪ್ರತಿಯಾಗಿ ರಫ್ತು ಮಾಡುವ ದೇಶವು ಆಮದು ಮಾಡಿಕೊಳ್ಳುವ ದೇಶದ ಮೇಲೆ ಸುಂಕ ವಿಧಿಸುತ್ತದೆ. ಹೀಗೆ ಈ ಸುಂಕ ಸಮರದಿಂದಾಗಿ ಸರಕು, ಸಾಗಾಣೆ ದರ ಹೆಚ್ಚಾಗುತ್ತದೆ, ಜೊತೆಗೆ ವ್ಯಾಪಾರದ ಮೇಲೆಯೂ ಪರಿಣಾಮ ಬೀರುತ್ತದೆ, ಕೆಲವೊಮ್ಮೆ ಆರ್ಥಿಕ ಹಾನಿ ಉಂಟುಮಾಡುವ ಸಾಧ್ಯತೆಯೂ ಇರುತ್ತದೆ.

    ಅಮೆರಿಕಾ ಮತ್ತು ಭಾರತದ ನಡುವಿನ ಸುಂಕ ಸಮರ ಹೇಗಿದೆ?

    ಮೊದಲ ಬಾರಿಗೆ 2017ರಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕಾದ ಅಧ್ಯಕ್ಷರಾದ ಬಳಿಕ ಈ ಸುಂಕ ಸಮರವನ್ನ ಪ್ರಾರಂಭಿಸಿದರು. 2018ರಲ್ಲಿ ಮೊದಲ ಬಾರಿಗೆ ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೆಚ್ಚುವರಿ ಸುಂಕ ವಿಧಿಸಿದರು. ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ ನಂತರ ಭಾರತವು ಪ್ರತಿಯಾಗಿ ಬಾದಾಮಿ, ಸೇಬು ಸೇರಿದಂತೆ ಇನ್ನಿತರ ವಸ್ತುಗಳ ಮೇಲೆಯೂ ಹೆಚ್ಚುವರಿ ಸುಂಕ ವಿಧಿಸಿತ್ತು. ಅದಾದ ಬಳಿಕ ಮತ್ತೆ 2019 ರಲ್ಲಿ ಅಮೆರಿಕಾ ಭಾರತಕ್ಕೆ ನೀಡಿದ ಜಿಎಸ್‌ಪಿ (GSP) ಸೌಲಭ್ಯವನ್ನು ರದ್ದುಗೊಳಿಸಿತು.

    ಏನಿದು ಜಿಎಸ್‌ಪಿ?

    Generalized System of Preferences ಅಂದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ನೀಡುವ ವಿಶೇಷ ವ್ಯಾಪಾರ ಸೌಲಭ್ಯವೇ ಇದು. ಈ GSP ಅಡಿಯಲ್ಲಿ ಕೆಲವು ಉತ್ಪನ್ನಗಳನ್ನು ಸುಂಕವಿಲ್ಲದೆ ಅಥವಾ ಕಡಿಮೆ ಸುಂಕದಲ್ಲಿ ಆಮದು ಮಾಡುವ ಅವಕಾಶವಿರುತ್ತದೆ.

    ಅದರಂತೆ ಅಮೆರಿಕಾ ಭಾರತಕ್ಕೆ ನೀಡಿದ್ದ GSP ಸೌಲಭ್ಯವನ್ನು ರದ್ದುಗೊಳಿಸಿತು. ಈ ಮೂಲಕ ಭಾರತೀಯ ವಸ್ತುಗಳು, ಆಭರಣಗಳು, ಕೈಮಗ್ಗ ಉತ್ಪನ್ನಗಳು ಸೇರಿದಂತೆ ಹಲವು ವಸ್ತುಗಳ ಮೇಲೆ ಪರಿಣಾಮ ಬೀರಿತು. ಇದಕ್ಕೆ ಪ್ರತಿಯಾಗಿ ಭಾರತ ಅಮೆರಿಕಾದ 28 ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿತು.

    ಇನ್ನು 2020ರಲ್ಲಿ ಕೋವಿಡ್ ಸ್ಥಿತಿಯಿಂದಾಗಿ ಜಾಗತಿಕ ವ್ಯಾಪಾರದಲ್ಲಿ ಕುಸಿತ ಕಂಡಿತು. ಆದರೆ ಔಷಧಿ, ವೈದ್ಯಕೀಯ ಕ್ಷೇತ್ರಗಳಲ್ಲಿ ಬಳಸಲಾಗುವ ಸಾಧನಗಳ ವಿಚಾರದಲ್ಲಿ ಭಾರತ ಮತ್ತು ಅಮೆರಿಕಾದ ನಡುವಿನ ಹೊಂದಾಣಿಕೆ ಚೆನ್ನಾಗಿತ್ತು. ಈ ಸಮಯದಲ್ಲಿ ಸುಂಕ ಸಮರ ತಾತ್ಕಾಲಿಕವಾಗಿ ಕಡಿಮೆಯಾಗಿತ್ತು. ಅದಾದ ಬಳಿಕ ಡೊನಾಲ್ಡ್ ಟ್ರಂಪ್ ಅಧಿಕಾರವಧಿ ಮುಗಿದು ಜೋ ಬೈಡನ್ ಅಮೆರಿಕಾ ಅಧ್ಯಕ್ಷರಾದರು. ಈ ಸಮಯದಲ್ಲಿ ಭಾರತದಿಂದ ಬರುವ ಕೆಲವು ಉತ್ಪನ್ನಗಳ ಮೇಲೆ ಅಮೆರಿಕಾ ಸುಂಕ ಸಡಿಲಿಕೆ ಮಾಡಿತು. ಇದೇ ಸಮಯದಲ್ಲಿ ಡಿಜಿಟಲ್ ತೆರಿಗೆ ವಿಷಯವಾಗಿ ಕೆಲವು ಒಪ್ಪಂದಗಳು ಆಗಿದ್ದವು.

    2024ರಲ್ಲಿ ಅಮೆರಿಕಾವು ಭಾರತಕ್ಕೆ ಪ್ರಮುಖ ರಫ್ತು ತಾಣವಾಗಿತ್ತು. ಆ ಸಮಯದಲ್ಲಿ 87.3 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನ ಕಳಿಸಿಕೊಟ್ಟಿತ್ತು. ಆದರೆ 2025ರಲ್ಲಿ ಟ್ರಂಪ್ ಮರು ಆಯ್ಕೆಯಾಗಿ ಅಧಿಕಾರಕ್ಕೆ ಬಂದ ನಂತರ ಜುಲೈ 30ರಂದು, ಭಾರತದ ಮೇಲೆ ಹೆಚ್ಚುವರಿ ಯಾಗಿ ಶೇಕಡಾ 25ರಷ್ಟು ಸುಂಕ ಘೋಷಿಸಿದರು.

    ಈಗ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡವಾಗಿ 25% ಸುಂಕವನ್ನು ಟ್ರಂಪ್‌ ಘೋಷಿಸಿದ್ದಾರೆ. ಪರಿಣಾಮ ಅಮೆರಿಕಾಕ್ಕೆ ಹೋಗುವ ಹಲವು ವಸ್ತುಗಳಿಗೆ 50% ತೆರಿಗೆ ವಿಧಿಸಲಾಗಿದೆ.

    ಈ ನಿರ್ಧಾರದಿಂದ ವಜ್ರ, ಆಭರಣ, ಮೀನುಗಾರಿಕೆ ಹಾಗೂ ರಾಸಾಯನಿಕ ವಸ್ತುಗಳ ಮೇಲೆ ಭಾರಿ ಹೊಡೆತ ಉಂಟಾಗಿದೆ. ಹೀಗಾಗಿ ಭಾರತ ಪರ್ಯಾಯ ಮಾರುಕಟ್ಟೆ ವ್ಯವಸ್ಥೆಗಾಗಿ ಹಾಗೂ ಹೊಸ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಲು ಮುಂದಾಗಿದೆ.

    ಅಮೆರಿಕಾದ ಕಸ್ಟಮ್ಸ್ ಅಧಿಸೂಚನೆಯ ಪ್ರಕಾರ ಆಗಸ್ಟ್ 27ರ ಮಧ್ಯರಾತ್ರಿಯಿಂದ ಈ ಆಮದು ಸುಂಕಗಳ ನಿಯಮ ಜಾರಿಯಾಗಿದೆ.

    ಯಾವ ವಲಯಗಳಿಗೆ ಹೆಚ್ಚು ಹೊಡೆತ?

    ಆಭರಣ, ಚಿನ್ನ:

    ಭಾರತದಿಂದ ಅಮೆರಿಕಾ ಬಹುದೊಡ್ಡ ಮಟ್ಟದಲ್ಲಿ ಆಭರಣ ಮತ್ತು ವಜ್ರಗಳನ್ನ ಆಮದು ಮಾಡಿಕೊಳ್ಳುತ್ತದೆ. ಈ ವಲಯದಲ್ಲಿ ವರ್ಷಕ್ಕೆ ಸುಮಾರು 10 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳು ಭಾರತದಿಂದ ಅಮೆರಿಕಾಕ್ಕೆ ರಫ್ತು ಮಾಡಲಾಗುತ್ತದೆ. ಇದೀಗ ಅಮೆರಿಕಾ ಹೆಚ್ಚುವರಿ ಸುಂಕದಿಂದಾಗಿ ಭಾರತದಿಂದ ಅಮೆರಿಕಕ್ಕೆ ಈ ವಸ್ತುಗಳ ಆಮದು ಕಡಿಮೆಯಾಗುವ ಸಾಧ್ಯತೆ ಇದೆ.

    ಗೃಹ ಉತ್ಪನ್ನಗಳು:

    ಈ ಸುಂಕ ಸಮರದಿಂದಾಗಿ ಕೈಮಗ್ಗ, ಕಸೂತಿ ಕೆಲಸಗಳಿಂದ ತಯಾರಾದ ಕೆಲವು ವಸ್ತುಗಳ ಆಮದು ಕಡಿಮೆಯಾಗುತ್ತದೆ. ಈ ಮೊದಲು ಭಾರತದಿಂದ ಅಮೆರಿಕಕ್ಕೆ ಈ ವಸ್ತುಗಳು ಜಿ ಎಸ್ ಪಿ ಅಡಿಯಲ್ಲಿ ಸುಂಕ ವಿಲ್ಲದೆ ರಫ್ತು ಮಾಡಲಾಗುತ್ತಿತ್ತು. ಹೀಗಾಗಿ ಈ ವಲಯದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಅಭಿವೃದ್ಧಿ ಮೇಲೆ ಪರಿಣಾಮ ಬೀರಿ, ಭಾರಿ ಪ್ರಮಾಣದ ನಷ್ಟ ಉಂಟಾಗುವ ಸಾಧ್ಯತೆ ಇದೆ.

    ಮೀನುಗಾರಿಕಾ ವಲಯ:

    ಭಾರತದ ಮೀನುಗಾರಿಕೆ ಮತ್ತು ಸೀ ಫುಡ್ ಉತ್ಪನ್ನಗಳ ಮೇಲೆ ಅಮೆರಿಕ ಭಾರಿ ಬೇಡಿಕೆ ಹೊಂದಿತ್ತು. ಹೀಗಾಗಿ ಸದ್ಯ ವಿಧಿಸಿರುವ ಶೇಕಡಾ 50ರಷ್ಟು ಸುಂಕದಿಂದಾಗಿ ಈ ವಲಯದ ರಫ್ತು ಶೇಕಡ 40ರಷ್ಟು ಕುಸಿಯುವ ಸಾಧ್ಯತೆ ಇದೆ.

    ವೈದ್ಯಕೀಯ ಹಾಗೂ ತಂತ್ರಜ್ಞಾನ ಉತ್ಪನ್ನಗಳು:

    ಔಷಧಿ ಸೇರಿದಂತೆ ಇನ್ನಿತರ ವೈದ್ಯಕೀಯ ವಲಯದ ಉತ್ಪನ್ನಗಳ ಮೇಲೆ ಈ ಸುಂಕದಿಂದಾಗಿ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಇದಲ್ಲದೆ ಮಸಾಲೆ ಪದಾರ್ಥಗಳು, ಬಾಸ್ಮತಿ ಹಾಗೂ ಚಹಾ ಸೇರಿದಂತೆ ಕೃಷಿ ಉತ್ಪನ್ನಗಳ ಪರಿಣಾಮ ಬೀರಲಿದೆ. ಅಮೇರಿಕಾದಲ್ಲಿನ ಆಮದುದಾರರು ಮೆಕ್ಸಿಕನ್ ಹಾಗೂ ಯುರೋಪ್ ದೇಶದ ವಸ್ತುಗಳ ಮೇಲೆ ಹೆಚ್ಚು ಒಲವು ತೋರುತ್ತಿರುವುದರಿಂದ ಭಾರತದ ಕೈಗಾರಿಕಾ ಯಂತ್ರೋಪಕರಣಗಳು ಹಾಗೂ ವಾಹನ ರಫ್ತುಗಳ ಮೇಲೆ ಹೊಡೆತ ಬೀಳಲಿದೆ. ಜೊತೆಗೆ ಸೂರತ್ ಮತ್ತು ಮುಂಬೈನಲ್ಲಿ ಉದ್ಯೋಗಗಳ ಮೇಲೆಯೂ ಇದು ಪರಿಣಾಮ ಬೀರಲಿದೆ. ಇನ್ನು ಬಟ್ಟೆ ಹಾಗೂ ಜವಳಿ ವಸ್ತುಗಳ ಮೇಲೆ ಪರಿಣಾಮ ಬೀರಲಿದ್ದು, ಎನ್ ಸಿ ಆರ್ ಹಾಗೂ ಬೆಂಗಳೂರು ಪ್ರದೇಶಗಳ ಮೇಲೆಯೂ ಪ್ರಭಾವ ಬೀರುತ್ತದೆ.

    ಈ ಸುಂಕದಿಂದಾಗಿ ಭಾರತದಿಂದ ಅಮೆರಿಕಾಕ್ಕೆ ರಫ್ತು ಮಾಡಲಾಗುವ ವಸ್ತುಗಳ ಪೈಕಿ 60.2 ಬಿಲಿಯನ್ ಡಾಲರ್ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಸುಂಕ ಜಾರಿಯಾದ ಬಳಿಕ ಇದರ ಮೌಲ್ಯ 18.6 ಬಿಲಿಯನ್ ಡಾಲರ್ ಗೆ ಇಳಿಯುವ ಸಾಧ್ಯತೆಯಿದ್ದು, ಒಟ್ಟು ಭಾರತದಿಂದ ಅಮೆರಿಕಾಕ್ಕೆ ಶೇಕಡ 43ರಷ್ಟು ರಫ್ತು ಆಗುವ ಸಾಧ್ಯತೆ ಇದೆ. ಅದಲ್ಲದೆ ಇದರಿಂದಾಗಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಮೇಲೆ ಭಾರಿ ಹೊಡೆತ ಬೀಳಲಿದ್ದು, ಹೆಚ್ಚಿನ ಜನರು ನಿರುದ್ಯೋಗಿಗಳಾಗುವ ಸಾಧ್ಯತೆ ಇದೆ.

    ಶೇಕಡಾವಾರು ಪ್ರಭಾವಿತ ವಲಯಗಳು:

    • ಆಭರಣ ಮತ್ತು ವಜ್ರ – 53.2%
    • ಬಟ್ಟೆ ಸೇರಿದಂತೆ ಇನ್ನಿತರ ಉತ್ಪನ್ನಗಳು – 63.05%
    • ಸೀ ಫುಡ್ ಹಾಗೂ ಮೀನುಗಾರಿಕೆ – 58.5%
    • ರಾಸಾಯನಿಕಗಳು – 54%
    • ಯಂತ್ರೋಪಕರಣಗಳು- 51.3%

    ಈ ಸುಂಕದಿಂದಾಗಿ ದೇಶದ ವಿವಿಧ ವಲಯಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದ್ದು, ಔಷಧ ಹಾಗೂ ಎಲೆಕ್ಟ್ರಾನಿಕ್ಸ್ ಗಳಾದ ಮೊಬೈಲ್, ಲ್ಯಾಪ್ಟಾಪ್ ಗಳು ಇವುಗಳಿಂದ ಹೊರತಾಗಿವೆ. ಕಾರಣ ಅಮೆರಿಕಾದ ಜನರು ಈ ಎಲೆಕ್ಟ್ರಾನಿಕ್ಸ್ ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಒಂದು ವೇಳೆ ಇವುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದರೆ ಅಮೆರಿಕಾದ ಆರ್ಥಿಕತೆಯ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ಈ ವಸ್ತುಗಳನ್ನು ಸುಂಕಪಟ್ಟಿಯಿಂದ ಹೊರಗಿರಿಸಲಾಗಿದೆ.

  • ರಷ್ಯಾ ಮಾರಾಟ ಮಾಡಿದ್ದ ಅಲಾಸ್ಕಾ ಈಗ ಅಮೆರಿಕಾದ ಚಿನ್ನದ ಮೊಟ್ಟೆ!

    ರಷ್ಯಾ ಮಾರಾಟ ಮಾಡಿದ್ದ ಅಲಾಸ್ಕಾ ಈಗ ಅಮೆರಿಕಾದ ಚಿನ್ನದ ಮೊಟ್ಟೆ!

    ಸಾಮಾನ್ಯವಾಗಿ ಒಂದಿಲ್ಲೊಂದು ಚರ್ಚೆಯಲ್ಲಿರುವ ಟ್ರಂಪ್ ಇದೀಗ ರಷ್ಯಾದ (Russia) ಜೊತೆಗಿನ ಸಭೆ ಮೂಲಕ ಮತ್ತೊಂದು ಚರ್ಚೆಗಿಳಿದಿದ್ದಾರೆ. ಪುಟಿನ್ (Putin) ಜೊತೆ ನಡೆದ ಸಭೆ ಯಾವುದೇ ಒಪ್ಪಂದಗಳಿಲ್ಲದೆ ಅಂತ್ಯಗೊಂಡರೂ ಕೂಡ ಅಲಾಸ್ಕಾದಲ್ಲಿ ನಡೆದಿದ್ದು ಕೂತುಹಲಕ್ಕೆ ಎಡೆಮಾಡಿಕೊಟ್ಟಿದೆ. 

    ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಟ್ರಂಪ್ ಹಾಗೂ ಪುಟಿನ್ ಭೇಟಿಯಾಗಿದ್ದಾರೆ. ಆಗಸ್ಟ್‌ 15 ರಂದು ಉಭಯ ನಾಯಕರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಡುವೆ ಅಂಕೊರೇಜ್‌ನಲ್ಲಿ ಅಮೆರಿಕದ ಸೇನಾ ಮೂಲಸೌಕರ್ಯವಿರುವ ಜಾಯಿಂಟ್ ಬೇಸ್ ಎಲೆಂಡಾರ್ಫ್–ರಿಚರ್ಡ್‌ಸನ್‌ನಲ್ಲಿ (JBER) ಸುಮಾರು ಮೂರು ಗಂಟೆ ಸಭೆ ನಡೆಯಿತು. ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿ ನಡೆಸಿದರು.  ಈ ಸಭೆಗೆ ಆಗಮಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸ್ವತಃ ಡೊನಾಲ್ಡ್ ಟ್ರಂಪ್ ಅವರು ವೇದಿಕೆಗೆ ಕರೆದುಕೊಂಡು ಬಂದರು. ಈ ವೇಳೆ ಅಮೆರಿಕ ಸೇನೆಯ ಬಾಂಬರ್ ಫೈಟರ್ ಜೆಟ್ B-2 bomber ಹಾರಾಡಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರಶ್ನಿಸಿದಾಗ ಟ್ರಂಪ್‌ ಅವರು ಅತಿಥಿಗಳಿಗೆ ಅಮೆರಿಕದ ಸೇನಾ ಗೌರವ ಎಂದು ತಿಳಿಸಿದ್ದಾರೆ. ಇದು ಜಗತ್ತಿನಾದ್ಯಂತ ವ್ಯಾಪಕ ಟೀಕೆಗೆ ಕಾರಣವಾಗಿದೆ. 

    ಸುದ್ದಿಗೋಷ್ಠಿಯಲ್ಲಿ ಟ್ರಂಪ್‌ ಮಾತನಾಡಿ, ಈ ಸಭೆಯಲ್ಲಿ ಅನೇಕ ಮಾತುಕತೆಗಳಿಗೆ ಒಪ್ಪಿಗೆ ಸೂಚಿಸಿದ್ದು, ಕೆಲವೇ ಕೆಲವು ಬಾಕಿ ಉಳಿದಿವೆ. ರಷ್ಯಾ ಜೊತೆಗೆ ಕೆಲವು ಬಗೆಹರಿಸಲಾಗದ ಸಮಸ್ಯೆಗಳಿವೆ. ಅಲ್ಲಿಗೆ ತಲುಪಲು ನಮಗೆ ಉತ್ತಮ ಅವಕಾಶವೂ ಇದೆ. ಅವೆಲ್ಲದರ ಒಪ್ಪಂದವಾಗುವವರೆಗೆ ಅಮೆರಿಕ ರಷ್ಯಾ ನಡುವೆ ಯಾವುದೇ ಒಪ್ಪಂದವಿಲ್ಲ. ಪುಟಿನ್‌ ಜೊತೆ ಉಕ್ರೇನ್‌ ಕುರಿತ ಮಾತುಕತೆಯಲ್ಲಿ ಒಂದಿಷ್ಟು ಪ್ರಗತಿ ಕಂಡುಬಂದಿದೆ. ಆದ್ರೆ ಗುರಿ ಸಾಧನೆ ಆಗುವವರೆಗೆ ಸಂಪೂರ್ಣ ಒಪ್ಪಂದವಾಗವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. 

    ಇದೇ ವೇಳೆ ಮಾತನಾಡಿದ ಪುಟಿನ್‌, ದೇಶದ ಭದ್ರತೆಗೆ ಆತಂಕವಿರುವುದರಿಂದ ಉಕ್ರೇನ್‌ಗೆ ಸಂಬಂಧಿಸಿದಂತೆ ನಮ್ಮ ನಿಲುವು ಬದಲಾಗುವುದಿಲ್ಲ ಎಂದು ಖಚಿತಪಡಿಸಿದರು. ಅಲ್ಲದೇ ಮಾತುಕತೆಯು ದೀರ್ಘಕಾಲೀನವಾಗಿಸಬೇಕಾದ್ರೆ, ಸಂಘರ್ಷಕ್ಕೆ ಕಾರಣವಾದ ಎಲ್ಲ ಅಂಶಗಳನ್ನೂ ಸರಿಪಡಿಸಬೇಕು ಎಂಬುದು ನಮಗೆ ಮನವರಿಕೆಯಾಗಿದೆ. ಆ ಮೂಲಕ, ಉಕ್ರೇನ್ ಮತ್ತು ಅದರ ಪ್ರದೇಶ ಪಶ್ಚಿಮದ ಭಾಗವಾಗುವುದನ್ನು ಒಪ್ಪಲಾಗದು ಎಂಬ ರಷ್ಯಾ ನಿಲುವನ್ನು ಮುಂದಿಟ್ಟಿದ್ದಾರೆ.

    ಅಲಾಸ್ಕಾ ಮಿಲಿಟರಿ ನೆಲೆಯನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ? 
    ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ತಮ್ಮ ಭೇಟಿಗಾಗಿ ಅಲಾಸ್ಕಾ ಪ್ರದೇಶವನ್ನು ಆಯ್ಕೆ ಮಾಡಿದ್ದೆ ಯಾಕೆ ಎನ್ನುವಂತಹ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ. ಅಲಾಸ್ಕಾ ಪ್ರದೇಶವು ಎಲ್ಮೆಂಡಾರ್ಫ್ ವಾಯು ಸೇನೆ ಹಾಗೂ ಪೋರ್ಟ್ ರಿಚರ್ಡ್ಸನ್ ಸೇನಾ ನೆಲೆಯನ್ನು ವಿಲೀನಗೊಳಿಸಿದ ಆಂಕಾರೇಜ್‌ನಲ್ಲಿರುವ ಎಲ್ಮೆಂಡಾರ್ಫ್  ರಿಚರ್ಡ್ಸನ್ ಜಂಟಿ ನೆಲೆಯಾಗಿದೆ.

    ಅಲಾಸ್ಕಾ 1867ರಲ್ಲಿ ಅಮೆರಿಕ ಆಡಳಿತಕ್ಕೆ ಬಂದಿತ್ತು. ಹೀಗಾಗಿ ಈ ಐತಿಹಾಸಿಕ ಸಂಬಂಧವನ್ನು ಇದು ಪ್ರತಿಬಿಂಬಿಸುತ್ತದೆ. ಈ ಪ್ರದೇಶ ರಷ್ಯಾ ದೇಶಕ್ಕೆ ಹತ್ತಿರವಾಗಿದ್ದು, ಅಮೆರಿಕಾದ ಪ್ರಮುಖ ರಕ್ಷಣಾ ಕೇಂದ್ರಗಳು ಇಲ್ಲಿವೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನ ಕೊನೆಗೊಳಿಸುವ ನಿಟ್ಟಿನಲ್ಲಿ ಈ ಸಭೆ ಪ್ರಮುಖವಾಗಿತ್ತು. ಈ ಪ್ರದೇಶ ಭೌಗೋಳಿಕವಾಗಿ ಸಮೀಪವಾಗಿದ್ದರೂ ಸಾಂಕೇತಿಕ ಮಹತ್ವವನ್ನು ಹೊಂದಿದೆ. ಅದಲ್ಲದೆ ಸುರಕ್ಷಿತ ನಿಯಂತ್ರಣ ಹೊಂದಿದ ಪ್ರದೇಶ ಇದಾಗಿದ್ದು, ಸಭೆ ಕೈಗೊಳ್ಳಲು ಸೂಕ್ತ ಪ್ರದೇಶ. ಅದಲ್ಲದೆ ಶೃಂಗಸಭೆಗೆ ಕೂಡ ಇದೊಂದು ಸೂಕ್ತ ಸ್ಥಳ ಎನ್ನಲಾಗಿದೆ.

    ಅಲಾಸ್ಕಾ ಇತಿಹಾಸ:
    ಒಂದು ಕಾಲದಲ್ಲಿ ರಷ್ಯಾದ ಆಡಳಿತದಲ್ಲಿದ್ದ ಅಲಾಸ್ಕಾ ಪ್ರದೇಶ ಇದೀಗ ಅಮೆರಿಕದ ಒಡೆತನದಲ್ಲಿದೆ. ಅಮೆರಿಕದಲ್ಲಿರುವ ಒಂದು ಅತ್ಯಂತ ವಿಸ್ತೀರ್ಣವುಳ್ಳ ಪ್ರದೇಶವೂ ಇದಾಗಿದೆ. ಉತ್ತರ ಅಮೆರಿಕ ಖಂಡದ ವಾಯುವ್ಯ ತುದಿಯಲ್ಲಿರುವ 15,18,800 ಚದರ ಕಿ.ಮೀ ಇರುವ ಈ  ಪ್ರದೇಶದಲ್ಲಿ ಸ್ಥಳೀಯ ಜನಾಂಗಗಳು ವಾಸವಾಗಿವೆ.

    ಪ್ರಾರಂಭದಲ್ಲಿ ಇನ್ಯೂಟ್, ಯುಪಿಕ್, ಅಲೆಟ್ ಜನಾಂಗಗಳು ವಾಸವಾಗಿದ್ದವು. ರಷ್ಯಾದ ಅನ್ವೇಷಕ ವಿಟಸ್ ಬೇರಿಂಗ್ ಎಂಬುವರು 1741ರಲ್ಲಿ ಈ ಅಲಾಸ್ಕಾವನ್ನು ಕಂಡುಹಿಡಿದರು. ಅದಾದ ಬಳಿಕ ಸುಮಾರು ವರ್ಷಗಳ ಕಾಲ ಚರ್ಮ ವ್ಯಾಪಾರ ನಡೆಸಲು ವ್ಯಾಪಾರಿಗಳು ಇಲ್ಲಿಗೆ ಬರುತ್ತಿದ್ದರು. ಈ ಸಮಯದಲ್ಲಿ ಈ ಪ್ರದೇಶ ರಷ್ಯಾದ ನಿಯಂತ್ರಣದಲ್ಲಿತ್ತು. ಅದಾದ ಬಳಿಕ 1867ರಲ್ಲಿ ಅಮೆರಿಕದ ಕಾರ್ಯದರ್ಶಿ ವಿಲಿಯಂ ಹೆನ್ರಿ ಸಿವರ್ಡ್ ಅವರು ರಷ್ಯಾದಿಂದ ಅಲಾಸ್ಕಾನ್ನು 7.2 ಮಿಲಿಯನ್ ಡಾಲರ್‌ಗೆ ಖರೀದಿಸಿದರು. ಆ ಸಮಯದಲ್ಲಿ ಇದು ಸಿವರ್ಡ್ ಮೂರ್ಖತನ ಎಂದು ಟೀಕಿಸಿದರು. ಕಾರಣ ಹಿಮಾಚ್ಛಾದಿತವಾಗಿದ್ದ ಈ ಪ್ರದೇಶ ಯಾವುದಕ್ಕೂ ಉಪಯೋಗವಿಲ್ಲದೆ ಖರೀದಿಸಿದ್ದು ಮೂರ್ಖತನ ಎನಿಸಿತ್ತು. 1890ರ ದಶಕದಲ್ಲಿ ಇದೇ ಅಲಾಸ್ಕಾ ಪ್ರದೇಶದಲ್ಲಿ ಚಿನ್ನ ಪತ್ತೆಯಾಗಿತ್ತು ಇದಾದ ನಂತರ ಸಾವಿರಾರು ಜನ ಈ ಪ್ರದೇಶಕ್ಕೆ ವಲಸೆ ಬರಲು ಪ್ರಾರಂಭಿಸಿದರು. ಇದು  ಅಲಾಸ್ಕಾದ ಆರ್ಥಿಕತೆಯನ್ನು ಬದಲಾಯಿಸಿತು. ಬಳಿಕ 1959 ರಲ್ಲಿ ಅಲಾಸ್ಕ್ ಅಧಿಕೃತವಾಗಿ ಅಮೆರಿಕಾದ 49ನೇ ರಾಜ್ಯವಾಗಿ ಘೋಷಣೆ ಆಯಿತು.  ಅಲಾಸ್ಕಾದಲ್ಲಿ 2025ರ ಪ್ರಕಾರ ಸುಮಾರು 7.3 ಲಕ್ಷ ಜನರು ವಾಸಿಸುತ್ತಾರೆ. ಜೊತೆಗೆ ಅಮೆರಿಕಾದ ವಾಯುಪಡೆ ಹಾಗೂ ಸೇನಾ ಶಿಬಿರದ ಕೇಂದ್ರಗಳು ಇಲ್ಲಿದೆ.

    20ನೇ ಶತಮಾನದಲ್ಲಿ  ಅಲಾಸ್ಕಾ ಪ್ರದೇಶದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲ ಪತ್ತೆಯಾಯಿತು. ಇದರಿಂದ ಈ ಪ್ರದೇಶ ಅಮೆರಿಕಾದ ಪ್ರಮುಖ ಶಕ್ತಿ ಕೇಂದ್ರವಾಗಿ ಪರಿವರ್ತನೆಯಾಯಿತು. ಇಂದಿಗೂ ಕೂಡ ಈ ಪ್ರದೇಶವು ತನ್ನ ಪ್ರಕೃತಿ ಸಂಪತ್ತು, ಹಿಮ ಪರ್ವತಗಳು ಹಾಗೂ ವನ್ಯಜೀವಿ ಸಂಪತ್ತಿಗಾಗಿ ಪ್ರಸಿದ್ಧಿಯನ್ನು ಪಡೆದಿದೆ. ಇದೀಗ ಡೊನಾಲ್ಡ್ ಟ್ರಂಪ್ ಹಾಗೂ ಪುಟಿನ್ ಸಭೆಯು ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಹೀಗಾಗಿ ಪುಟಿನ್  ಅಲಾಸ್ಕಾ ಪ್ರದೇಶವನ್ನು ಮತ್ತೆ ರಷ್ಯಾದ ಭಾಗವಾಗಿ ಹಿಂಪಡೆಯುತ್ತಾರಾ? ಎಂಬ ಪ್ರಶ್ನೆಯು ಕೇಳಿಬಂದಿದೆ.

  • ಅಮೆರಿಕದ ಹೊರಗಡೆ ತಯಾರಾದ ಸಿನಿಮಾಗಳಿಗೆ 100% ಸುಂಕ – ಟ್ರಂಪ್ ಘೋಷಣೆ

    ಅಮೆರಿಕದ ಹೊರಗಡೆ ತಯಾರಾದ ಸಿನಿಮಾಗಳಿಗೆ 100% ಸುಂಕ – ಟ್ರಂಪ್ ಘೋಷಣೆ

    ವಾಷಿಂಗ್ಟನ್: ಅಮೆರಿಕದ (America) ಹೊರಗಡೆ ತಯಾರಾದ ಚಲನಚಿತ್ರಗಳ ಮೇಲೆ 100% ಸುಂಕ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ.

    ಚಲನಚಿತ್ರ ಉದ್ಯಮವನ್ನು ರಕ್ಷಿಸಲು ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಭರ್ಜರಿ ಪಾರ್ಟಿ ಮಾಡಿದ್ದ ಆರೋಪಿಗಳು!

    ಅಮೆರಿಕದ ಮಾರುಕಟ್ಟೆಯಲ್ಲಿ ವಿದೇಶಿ ಚಿತ್ರಗಳು ಕಡಿಮೆ ವೆಚ್ಚದಲ್ಲಿ ಸ್ಪರ್ಧಿಸುವುದರಿಂದ, ಇದು ಸ್ಥಳೀಯ ನಿರ್ಮಾಪಕರಿಗೆ ಸವಾಲಾಗಿ ಪರಿಣಮಿಸುತ್ತದೆ. ಇದರ ಜೊತೆಗೆ, ಸಾಂಸ್ಕೃತಿಕ ಮೌಲ್ಯಗಳು ಮತ್ತು ರಾಷ್ಟ್ರೀಯ ಗುರುತಿನ ಮೇಲೆ ವಿದೇಶಿ ಚಿತ್ರಗಳ ಪ್ರಭಾವ ಹೆಚ್ಚಾಗುತ್ತಿದ್ದು, ಇದನ್ನು ಕಡಿಮೆ ಮಾಡುವ ಉದ್ದೇಶವನ್ನು ಈ ನೀತಿ ಹೊಂದಿದೆ ಎಂದು ತಿಳಿಸಿದರು.

    ಸದ್ಯ ಈ ಘೋಷಣೆಯು ಚಲನಚಿತ್ರ ಉದ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಿಶ್ವದ ಇತರ ದೇಶಗಳಿಂದ, ವಿಶೇಷವಾಗಿ ಭಾರತ, ಚೀನಾ ಮತ್ತು ಯುರೋಪ್‌ನಿಂದ ತಯಾರಾದ ಚಿತ್ರಗಳು ಅಮೆರಿಕದಲ್ಲಿ ಜನಪ್ರಿಯವಾಗಿವೆ. ಈ ಸುಂಕ ನೀತಿಯಿಂದಾಗಿ ವಿದೇಶಿ ಸಿನಿಮಾಗಳ ಬೆಲೆ ಗಣನೀಯವಾಗಿ ಹೆಚ್ಚಾಗಬಹುದು. ಇದರಿಂದ ಅವುಗಳ ಮಾರುಕಟ್ಟೆ ಸಾಮರ್ಥ್ಯ ಕಡಿಮೆಯಾಗುವ ಸಾಧ್ಯತೆಗಳಿವೆ.

    ಈ ಕ್ರಮವು ಅಂತಾರಾಷ್ಟ್ರೀಯ ವಾಣಿಜ್ಯ ಸಂಬಂಧಗಳ ಮೇಲೆಯೂ ಪರಿಣಾಮ ಬೀರಬಹುದು. ಭಾರತದ ಬಾಲಿವುಡ್ ಚಿತ್ರಗಳು ಅಮೆರಿಕದಲ್ಲಿ ಗಮನಾರ್ಹ ಪ್ರೇಕ್ಷಕರನ್ನು ಹೊಂದಿದ್ದು, ಈ ಸುಂಕವು ಭಾರತೀಯ ನಿರ್ಮಾಪಕರಿಗೆ ಹೊಸ ಸವಾಲುಗಳನ್ನು ಸೃಷ್ಟಿಸಬಹುದು. ಇದಕ್ಕೆ ಪ್ರತಿಯಾಗಿ ಕೆಲವು ದೇಶಗಳು ಅಮೆರಿಕದ ಚಿತ್ರಗಳಿಗೆ ತಮ್ಮದೇ ಆದ ಪ್ರತಿ ಸುಂಕಗಳನ್ನು ವಿಧಿಸುವ ಸಾಧ್ಯತೆಯಿದೆ.

    ಟ್ರಂಪ್ ಈ ನಿರ್ಧಾರದ ಕುರಿತು ಸ್ಪಷ್ಟನೆ ಬೇಕಾಗಿದ್ದು, ಈ ಸುಂಕ ಯಾವಾಗಿನಿಂದ ಜಾರಿಗೆ ಬರಲಿದೆ ಮತ್ತು ಯಾವ ರೀತಿಯ ಚಿತ್ರಗಳಿಗೆ ಇದು ಅನ್ವಯವಾಗಲಿದೆ ಎಂಬುದು ತಿಳಿದುಬಂದಿಲ್ಲ. ಇದಕ್ಕೂ ಮೊದಲು ಟ್ರಂಪ್ ಭಾರತ ಸೇರಿ ಹಲವು ದೇಶಗಳ ಮೇಲೆ ಸುಂಕ ಸಮರ ನಡೆಸಿದ್ದರು.ಇದನ್ನೂ ಓದಿ: ಲಾಯರ್ ಜಗದೀಶ್ ಸಾವಿಗೆ ಟ್ಟಿಸ್ಟ್ – ಪೊಲೀಸರ ತನಿಖೆ ವೇಳೆ ರಹಸ್ಯ ಬಯಲು

  • ಅಂಬಾನಿ ಮಗನ ಮದುವೆಯಲ್ಲಿ ಡೈಮಂಡ್ ಕಳೆದುಕೊಂಡ ಕಿಮ್ ಕರ್ದಾಶಿಯಾನ್

    ಅಂಬಾನಿ ಮಗನ ಮದುವೆಯಲ್ಲಿ ಡೈಮಂಡ್ ಕಳೆದುಕೊಂಡ ಕಿಮ್ ಕರ್ದಾಶಿಯಾನ್

    ನವದೆಹಲಿ: ಭಾರತದ ಅಗರ್ಭ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ನಾನು ಬೆಲೆಬಾಳುವ ವಜ್ರವನ್ನು ಕಳೆದುಕೊಂಡೆ ಎಂದು ಅಮೆರಿಕನ್ ಮಾಡೆಲ್ ಕಿಮ್ ಕರ್ದಾಶಿಯಾನ್ (Kim Kardashian) ಖಾಸಗಿ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

    ಅನಂತ್ ಅಂಬಾನಿಯವರು ಅದ್ದೂರಿ ಮದುವೆಯಲ್ಲಿ ಕಿಮ್ ಕರ್ದಾಶಿಯಾನ್ ಭಾಗವಹಿಸಿದ್ದರು. ಈ ವೇಳೆ ಅವರು ಕಸ್ಟಮ್ ಐವರಿ ಲೆಹೆಂಗಾ ಜೊತೆಗೆ ದುಬಾರಿ ಬೆಲೆಯ ವಜ್ರದ ಹಾರ, ಕಿವಿಯೋಲೆಗಳು ಮತ್ತು ಶಿರ ಮಾಲೆಯನ್ನು ಧರಿಸಿದ್ದರು. ಇದನ್ನೂ ಓದಿ: ಕನ್ನಡದ ‘ಅಮ್ಮಾವ್ರ ಗಂಡ’ ಚಿತ್ರದಲ್ಲಿ ನಟಿಸಿದ್ದ ಭಾಗ್ಯಶ್ರೀ ಹಣೆಗೆ ಪೆಟ್ಟು- ಆಸ್ಪತ್ರೆಗೆ ದಾಖಲು

    ಮದುವೆ ಸಮಾರಂಭದಲ್ಲಿ ಅನಂತ್ ಅಂಬಾನಿ ಸಹೋದರಿ ಇಶಾ ಅಂಬಾನಿ ಜೊತೆ ಕಿಮ್ ಕರ್ದಾಶಿಯಾನ್ ಮಾತನಾಡುತ್ತಿದ್ದಾಗ ಅವರ ಡೈಮಂಡ್ ನೆಕ್ಲೆಸ್‌ನಿಂದ ಒಂದು ವಜ್ರದ ಹರಳು ಕೆಳಗೆ ಬಿದ್ದಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹಾರ್ದಿಕ್‌ ಪಾಂಡ್ಯ ಕಮಾಲ್‌ – ಜಸ್ಟ್‌ 6 ನಿಮಿಷದಲ್ಲಿ ಕೊಹ್ಲಿ ದಾಖಲೆ ಉಡೀಸ್‌

    ನನಗೆ ಅರಿವಿಲ್ಲದೇ ನನ್ನ ನೆಕ್ಲೆಸ್‌ನಿಂದ ವಜ್ರದ ಹರಳು ಕೆಳಗೆ ಬಿದ್ದಿದೆ. ಇದನ್ನೂ ನನ್ನ ಜೊತೆಗಿದ್ದ ಸ್ನೇಹಿತೆ ಕ್ಲೋಯ್ ಗಮನಿಸಿದ್ದು, ಬಳಿಕ ನನ್ನ ಗಮನಕ್ಕೆ ತಂದಳು. ನಾವೆಲ್ಲರೂ ಸೇರಿ ಆ ಡೈಮಂಡ್ ನೆಕ್ಲೆಸ್‌ನ ಹರಳನ್ನು ಹುಡುಕಿದೆವು. ಆದರೆ ಕೊನೆಗೂ ದುಬಾರಿ ಆ ವಜ್ರದ ಹರಳು ಸಿಗಲಿಲ್ಲ ಎಂದು ಸಂದರ್ಶನ ಒಂದರಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

  • ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಇಂದು ತಾಯ್ನಾಡಿಗೆ ಶಿವಣ್ಣ ವಾಪಸ್

    ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಇಂದು ತಾಯ್ನಾಡಿಗೆ ಶಿವಣ್ಣ ವಾಪಸ್

    ಬೆಂಗಳೂರು: ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಇಂದು (ಜ 26) ಶಿವಣ್ಣ (Shivanna) ತಾಯ್ನಾಡಿಗೆ ವಾಪಸ್ ಆಗುತ್ತಿದ್ದಾರೆ.

    ಇತ್ತೀಚಿಗಷ್ಟೇ ಶಿವಣ್ಣ ತಾಯ್ನಾಡಿಗೆ ಬರುವ ಸಿಹಿ ಸುದ್ದಿಯನ್ನು ಸ್ವತಃ ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಇಂದು ಬೆಳಿಗ್ಗೆ 8:50ಕ್ಕೆ ಬೆಂಗಳೂರಿನ ಏರ್ಪೋಟ್‌ನಲ್ಲಿ ಲ್ಯಾಂಡ್ ಆಗಲಿದ್ದು, ವಿಮಾನ ನಿಲ್ದಾಣದ ಪ್ರಕ್ರಿಯೆಗಳನ್ನು ಮುಗಿಸಿ 9.30ರ ಬಳಿಕ ಹೊರಬರುವ ಸಾಧ್ಯತೆಯಿದೆ. ಅಮೆರಿಕದಿಂದ ದುಬೈಗೆ ಬಂದಿಳಿದು, ಅಲ್ಲಿಂದ ಕನೆಕ್ಟೆಡ್ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಕೆಂಪುಕೋಟೆ ಸಜ್ಜು – 10,000 ಗಣ್ಯರಿಗೆ ಆಹ್ವಾನ, ಮಿಲಿಟರಿ ಶಕ್ತಿ ಅನಾವರಣ

    ಮೂತ್ರಕೋಶದ ಕ್ಯಾನ್ಸರ್ ಸಂಬಂಧ ಆಪರೇಷನ್ ಮಾಡಿಸಿಕೊಳ್ಳಲು ನಟ ಶಿವರಾಜಕುಮಾರ್ ಡಿ.18 ರಂದು ಅಮೆರಿಕಕ್ಕೆ ತೆರಳಿದ್ದರು. ಬಳಿಕ ಡಿ.34 ರಂದು ಆಪರೇಷನ್‌ಗೆ ಒಳಗಾಗಿದ್ದು, ಇದೀಗ ಸಂಪೂರ್ಣ ಗುಣಮುಖರಾಗಿ ತಾಯ್ನಾಡಿಗೆ ಮರಳುತ್ತಿದ್ದಾರೆ.

    ಇದೀಗ ಶಿವಣ್ಣರನ್ನು ಅದ್ಧೂರಿಯಾಗಿ ಸ್ವಾಗತಿಸಲು ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಒಂದು ತಿಂಗಳಿಗೂ ಅಧಿಕ ಕಾಲ ಅಮೆರಿಕಾದಲ್ಲಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡ ಶಿವರಾಜ್‌ಕುಮಾರ್ ಆಗಾಗ ಅಭಿಮಾನಿಗಳಿಗೆ ಅಪ್‌ಡೇಟ್ ಕೊಟ್ಟಿದ್ದರು.

    ಏರ್‌ಪೋರ್ಟ್ ಬಳಿಯ ಟೋಲ್‌ನಿಂದ ಹಿಡಿದು ನಾಗವಾರದ ಮನೆಯವರೆಗೂ ಶಿವಣ್ಣರನ್ನ ಬರಮಾಡಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ. ಶಿವಣ್ಣ ಅವರ ನಿವಾಸದ ಬಳಿ ಅಭಿಮಾನಿಗಳು ಬ್ಯಾನರ್, ಕಟೌಟ್ ಹಾಕಿ ಸ್ವಾಗತ ಮಾಡೋದಕ್ಕೂ ತಯಾರಿ ಮಾಡಿಕೊಂಡಿದ್ದಾರೆ. ಇನ್ನೂ ಸೋಮವಾರ ಶಿವಣ್ಣನ ಮನೆಯಲ್ಲಿ ಹೊಸ ವರ್ಷ ಹಾಗೂ ಸಂಕ್ರಾಂತಿ ಸಂಭ್ರಮ ಒಟ್ಟೊಟ್ಟಿಗೆ ನಡೆಯಲಿದೆ.ಇದನ್ನೂ ಓದಿ: ದಿನ ಭವಿಷ್ಯ 26-01-2025

  • ಶಿವಣ್ಣ ಸರ್ಜರಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ, ಆರೋಗ್ಯ ಸ್ಥಿರ: ಡಾ.ಮುರುಗೇಶ್ ಮನೋಹರನ್

    ಶಿವಣ್ಣ ಸರ್ಜರಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ, ಆರೋಗ್ಯ ಸ್ಥಿರ: ಡಾ.ಮುರುಗೇಶ್ ಮನೋಹರನ್

    – ವೀಡಿಯೋ ಮೂಲಕ ಹೆಲ್ತ್ ಅಪ್ಡೇಟ್ ನೀಡಿದ ಡಾಕ್ಟರ್

    ವಾಷಿಂಗ್ಟನ್: ಡಾ. ಶಿವರಾಜ್‌ಕುಮಾರ್ (Shiva Rajkumar) ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸದ್ಯ ಶಿವಣ್ಣ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಿಯಾಮಿ ಕ್ಯಾನ್ಸರ್‌ ಇನ್ಸ್ಟಿಟ್ಯೂಟ್‌ ವೈದ್ಯ ಡಾ.ಮುರುಗೇಶ್ ಮನೋಹರನ್ (Murugesh Manoharan) ತಿಳಿಸಿದ್ದಾರೆ.

    ಶಸ್ತ್ರಚಿಕಿತ್ಸೆ ಬಳಿಕ ವೀಡಿಯೋ ಮೂಲಕ ಮಾತನಾಡಿದ ಅವರು, ದೇವರ ದಯೆಯಿಂದ ಹಾಗೂ ಹಲವರ ಆಶೀರ್ವಾದ ಹಾಗೂ ಪ್ರಾರ್ಥನೆಯಿಂದ ಸರ್ಜರಿ ಯಶಸ್ವಿಯಾಗಿದೆ. ಪ್ರಮುಖ ಹಂತ ಪೂರ್ಣಗೊಂಡಿದೆ. ಶಿವಣ್ಣ ಚೆನ್ನಾಗಿ ಸ್ಪಂದಿಸಿದ್ದಾರೆ. ಸರ್ಜರಿ ನಂತರವೂ ಆರಾಮಾಗಿದ್ದಾರೆ. ಅವರು ಶೀಘ್ರವೇ ಸಂಪೂರ್ಣ ಚೇತರಿಕೆ ಕಾಣಲಿದ್ದಾರೆ. ನಿಮ್ಮ ಬೆಂಬಲಕ್ಕೆ ಧನ್ಯವಾದ ಎಂದು ಹೇಳಿದ್ದಾರೆ. ಇದನ್ನೂ ಓದಿ: Hand Luggage On Flights | ಇನ್ಮುಂದೆ 7 ಕೆಜಿ ಮೀರದ ಕೇವಲ 1 ಬ್ಯಾಗ್‌ಗೆ ಮಾತ್ರ ಅನುಮತಿ

    ಡಾ. ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು, ಸಹೋದ್ಯೋಗಿಗಳು, ಶುಭಚಿಂತಕರು ಮತ್ತು ಮಾಧ್ಯಮಗಳಿಗೆ ಈ ಸಂದರ್ಭದಲ್ಲಿ ತೋರಿಸಿದ ನಿರಂತರ ಬೆಂಬಲ, ಪ್ರಾರ್ಥನೆ ಮತ್ತು ಮೆಚ್ಚುಗೆ ಸಂದೇಶಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹವು ಡಾ. ಶಿವರಾಜ್‌ಕುಮಾರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಶಕ್ತಿ ಒದಗಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ನ ಶಿವಣ್ಣನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

  • ಕೆನಡಾ ಭಾರತೀಯರಿಗೆ ನೀಡುವ ಪ್ರವಾಸಿ ವೀಸಾಗಳನ್ನು ಕಡಿಮೆಗೊಳಿಸುತ್ತಿದೆ ಏಕೆ?

    ಕೆನಡಾ ಭಾರತೀಯರಿಗೆ ನೀಡುವ ಪ್ರವಾಸಿ ವೀಸಾಗಳನ್ನು ಕಡಿಮೆಗೊಳಿಸುತ್ತಿದೆ ಏಕೆ?

    ಕೆನಡಾ ಭಾರತೀಯರಿಗೆ ನೀಡುವ ಪ್ರವಾಸಿ ವೀಸಾಗಳನ್ನು ಕೆಲವು ಮಾನದಂಡಗಳ ಆಧಾರದ ಮೇಲೆ ಕಡಿಮೆಗೊಳಿಸುತ್ತಿದೆ. ಯುಎಸ್-ಕೆನಡಾ ಗಡಿ ದುರುಪಯೋಗ ಆರೋಪ, ಭಾರತ-ಕೆನಡಾ ರಾಜತಾಂತ್ರಿಕ ಗಲಾಟೆ ಇವು ಪ್ರಮುಖ ಪಾತ್ರವನ್ನು ವಹಿಸುತ್ತವೆ.

    ಕೆನಡಾವು ಭಾರತೀಯರಿಗೆ ನೀಡುತ್ತಿರುವ ಪ್ರವಾಸಿ ವೀಸಾಗಳ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸಿದ್ದು, 80% ರಿಂದ 20% ಇಳಿಸಿದೆ.

    ಇತ್ತೀಚಗೆ ಕೆನಡಾ ತನ್ನ ವೀಸಾ ನೀತಿಯನ್ನು ತಿದ್ದುಪಡಿ ಮಾಡಿದೆ. 10 ವರ್ಷಗಳ ಹಳೆಯವೀಸಾಗಳನ್ನು ಸ್ಥಗಿತಗೊಳಿಸಿದೆ. ಇನ್ನೂ ವಿಸ್ತೃತ ಅವಧಿಯ ವೀಸಾಗಳನ್ನು ವೈಯಕ್ತಿಕ ಮೌಲ್ಯಮಾಪನದ ಆಧಾರದ ಮೇಲೆ ಅನುಮತಿ ನೀಡುತ್ತದೆ. ಈ ವೀಸಾ ನೀತಿಯ ಬದಲಾವಣೆಯು ತಮ್ಮ ಜೀವನ ಮಟ್ಟವನ್ನು ನಿರ್ವಹಿಸಲು, ವಸತಿ ಕೊರತೆಯನ್ನು ಪರಿಹರಿಸಲು, ಜೀವನ ವೆಚ್ಚವನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

    ಕುಸಿತಕ್ಕೆ ಮೂಲ ಕಾರಣವೇನು?
    ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಒತ್ತಡದ ಹೊರತಾಗಿಯೂ, 2024ರ ಮೊದಲಾರ್ಧದಲ್ಲಿ ಕೆನಡಾದಿಂದ ಭಾರತೀಯರಿಗೆ ನೀಡಲಾದ ಪ್ರವಾಸಿ ವೀಸಾಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜನವರಿ ಮತ್ತು ಜುಲೈ ನಡುವೆ ಭಾರತೀಯರಿಗೆ 3,65,750 ಸಂದರ್ಶಕರ ವೀಸಾಗಳನ್ನು ನೀಡಿದೆ. ಇನ್ನೂ 2023ರ ಇದೇ ಅವಧಿಯಲ್ಲಿ 3,45,631 ವೀಸಾಗಳನ್ನು ನೀಡಲಾಗಿತ್ತು.

    ಈ ಕುರಿತು ಕೆನಡಾದ ವಲಸೆ ಸಚಿವ ಮಾರ್ಕ್ ಮಿಲ್ಲರ್, ಭಾರತದಲ್ಲಿ ಕೆನಡಾ ವಲಸೆ ಅಧಿಕಾರಿಗಳು 2023ರಲ್ಲಿ 27 ಜನರಿದ್ದರು. ಆದರೆ ಇದೀಗ ವಲಸೆ ಅಧಿಕಾರಿಗಳು ಕಡಿಮೆಯಾಗಿದ್ದು, 4ಕ್ಕೆ ಇಳಿದಿದೆ. ಹೀಗಾಗಿ ಇದು ಕೆನಡಾದಲ್ಲಿ ನೀಡಲಾಗುವ ವೀಸಾ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.

    ಗಡಿ ದುರ್ಬಳಕೆ: ಭಾರತೀಯ ಪ್ರವಾಸಿಗರು ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಕೆನಡಾ ಗಡಿಯನ್ನು ಬಳಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಮೆರಿಕಾ ಸರ್ಕಾರ ವೀಸಾ ನೀಡಲು ಕಟ್ಟುನಿಟ್ಟಾದ ವೀಸಾ ನಿಯಮಗಳನ್ನು ಹೊಂದಿದ್ದು, ವೀಸಾ ಪಡೆಯಲು ದೀರ್ಘ ಕಾಲ ಕಾಯಬೇಕಾಗುತ್ತದೆ. ಈ ಕಾರಣದಿಂದ ಯುಎಸ್ ವೀಸಾಗಳನ್ನು ಕೆನಡಾದಲ್ಲಿ ಪಡೆಯುವ ಉದ್ದೇಶದಿಂದ ಕೆನಾಡಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇನ್ನೂ ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಪ್ರಕಾರ, ಜೂನ್ 2024 ರಲ್ಲಿ 5,000ಕ್ಕೂ ಹೆಚ್ಚು ಭಾರತೀಯರು ಕೆನಡಾದಿಂದ ಯುಎಸ್‌ಗೆ ಕಾಲ್ನಡಿಗೆಯಲ್ಲಿ ಸರಿಯಾದ ದಾಖಲೆಗಳಿಲ್ಲದೆ ಪ್ರವೇಶಿದ್ದಾರೆ ಎಂದು ತಿಳಿಸಿದೆ.

    ದೇಶೀಯ ಕಾಳಜಿಗಳು: ದೇಶವು ತಾತ್ಕಾಲಿಕ ನಿವಾಸಿಗಳ ಸಂಖ್ಯೆಯನ್ನು ಮಿತಿಗೊಳಿಸುವ ಉದ್ದೇಶವನ್ನು ಹೊಂದಿದ್ದು, ವೀಸಾಕ್ಕೆ ಅರ್ಜಿ ಸಲ್ಲಿಸುವ ಪ್ರತಿ ಅರ್ಜಿದಾರರ ಪರಿಶೀಲನೆಯ ನಂತರ ವೀಸಾ ನೀಡುತ್ತದೆ. 2023ರ ಜೂನ್‌ನಲ್ಲಿ ಸರ್ರೆಯ ಗುರುದ್ವಾರದ ಹೊರಗೆ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತೀಯ ಅಧಿಕಾರಿಗಳ ಸಂಬಂಧವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಮ್ಮ ಸಂಸತ್ತಿನಲ್ಲಿ ಆರೋಪಿಸಿದರು. ಈ ಕಾರಣದಿಂದ ಭಾರತ ಮತ್ತು ಕೆನಡಾ ಸಂಬಂಧದಲ್ಲಿ ಬಿಕ್ಕಟ್ಟು ಉಂಟಾಗಿತ್ತು. ಇದು ಒಂದು ಕಾರಣವಾಗಿದ್ದು, ವೀಸಾ ಕಡಿತಗೊಳಿಸಲು ಇದು ಕಾರಣವಲ್ಲ ಎಂದು ಕೆನಡಾ ಸ್ಪಷ್ಟನೆ ನೀಡಿದೆ.

    ಕೆನಡಾದ ಹೊಸ ವೀಸಾ ಮಾರ್ಗಸೂಚಿಗಳು ಯಾವುವು?
    ಹೊಸ ನಿಯಮದ ಪ್ರಕಾರ, ವೀಸಾ ಅಧಿಕಾರಿಗಳು ಪ್ರತಿ ಅರ್ಜಿದಾರರನ್ನು ಪ್ರತ್ಯೇಕವಾಗಿ ಪರಿಶೀಲನೆ ನಡೆಸುತ್ತಾರೆ. ಏಕ-ಪ್ರವೇಶ ಮತ್ತು ಬಹು-ಪ್ರವೇಶದ ಕೆನಡಿಯನ್ ವೀಸಾದ ವೆಚ್ಚವು ಪ್ರತಿ ವ್ಯಕ್ತಿಗೆ ಕೆನಡಾ ಮೌಲ್ಯ 100 ಆಗಿದೆ. ಒಂದು ಹಾಗೂ ಎರಡು ವೀಸಾಗಳ ನಡುವೆ ಯಾವುದೇ ವೆಚ್ಚದ ವ್ಯತ್ಯಾಸವಿಲ್ಲ. ಸರ್ಕಾರವು ತನ್ನ ವಲಸೆ ಮಟ್ಟದ ಯೋಜನೆಯನ್ನು ಕೂಡ ಪರಿಷ್ಕರಿಸಿದ್ದು, ಅದರ ಗುರಿಯನ್ನು 5,00,000 ಹೊಸ ಶಾಶ್ವತ ನಿವಾಸಿಗಳಿಂದ 2025ರಲ್ಲಿ 3,95,000, 2026ರಲ್ಲಿ 3,80,000 ಮತ್ತು 2027ರಲ್ಲಿ 3,65,000ಕ್ಕೆ ಇಳಿಸಿದೆ.

  • ‘ಗೋ ಬ್ಯಾಕ್ ಹಿಂದೂ’: ಅಮೆರಿಕದ ಸ್ವಾಮಿನಾರಾಯಣ ದೇವಸ್ಥಾನ ಆವರಣದಲ್ಲಿ ಆಕ್ಷೇಪಾರ್ಹ ಬರವಣಿಗೆ

    ‘ಗೋ ಬ್ಯಾಕ್ ಹಿಂದೂ’: ಅಮೆರಿಕದ ಸ್ವಾಮಿನಾರಾಯಣ ದೇವಸ್ಥಾನ ಆವರಣದಲ್ಲಿ ಆಕ್ಷೇಪಾರ್ಹ ಬರವಣಿಗೆ

    ಸ್ಯಾಕ್ರಮೆಂಟೊ: ಅಮೆರಿಕದಲ್ಲಿರುವ (America) ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನಗಳನ್ನು (BAPS Swaminarayana Temple) ನಿರಂತರವಾಗಿ ಗುರಿಯಾಗಿಸಿಕೊಂಡಿದ್ದು, ಹಿಂದೂ ವಿರೋಧಿ ಹೇಳಿಕೆಯನ್ನು ಬರೆಯಲಾಗುತ್ತಿದೆ. ನ್ಯೂಯಾರ್ಕ್ (NewYork) ಘಟನೆ ಬೆನ್ನಲ್ಲೆ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿರುವ ಶ್ರೀ ಸ್ವಾಮಿನಾರಾಯಣ ದೇವಾಲಯವನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ದೇವಸ್ಥಾನದ ಹೊರಭಾಗದಲ್ಲಿರುವ ಬೋರ್ಡ್ ಮೇಲೆ ಹಿಂದೂ ವಿರೋಧಿ ಹೇಳಿಕೆಗಳನ್ನು ಬರೆಯಲಾಗಿದೆ.

    ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ದೇವಸ್ಥಾನವು ರಾಂಚೋ ಕಾರ್ಡೋವಾ ಪ್ರದೇಶದಲ್ಲಿ ಆರ್ಮ್ಸ್ಟ್ರಾಂಗ್ ಅವೆನ್ಯೂದಲ್ಲಿದೆ. ಇದು ಸ್ಯಾಕ್ರಮೆಂಟೊ ಮಾಥರ್ ವಿಮಾನ ನಿಲ್ದಾಣದ ಉತ್ತರ ಭಾಗದಲ್ಲಿದೆ. ದೇವಸ್ಥಾನದ ಹೊರಗಿರುವ ಬೋರ್ಡ್ ಮೇಲೆ ‘ಗೋ ಬ್ಯಾಕ್ ಹಿಂದೂ’ ಎಂದು ಬರೆಯಲಾಗಿದ್ದು, ಸ್ಯಾಕ್ರಮೆಂಟೊ ಕೌಂಟಿಯ ಪೊಲೀಸ್ ಅಧಿಕಾರಿಗಳು ‘ದ್ವೇಷ ಅಪರಾಧ’ವನ್ನು ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: ತಮಿಳುನಾಡು ಮಾಜಿ ಸಚಿವ ಸೆಂಥಿಲ್ ಬಾಲಾಜಿಗೆ ಸುಪ್ರೀಂ ಜಾಮೀನು

    ಪಾರ್ಕಿಂಗ್ ಲಾಟ್ ಮುಂಭಾಗದ ಸೈನ್ ಬೋರ್ಡ್‌ನಲ್ಲಿ ಭಾರತ ಸರ್ಕಾರ ಎಂದು ನಮೂದಿಸಿ ಈ ಹೇಳಿಕೆ ಬರೆಯಲಾಗಿದೆ. ದಾಳಿಕೋರರು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ನೀರಿನ ಮಾರ್ಗವನ್ನೂ ಕಡಿತಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಮೋದಿ (Narendra Modi) ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ದಾಳಿಗಳು ನಡೆದಿವೆ.

    ಇದಕ್ಕೂ ಮೊದಲು ಸೆ.17 ರಂದು ನ್ಯೂಯಾರ್ಕ್‌ನ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ವಿಧ್ವಂಸಕ ಘಟನೆ ನಡೆದಿತ್ತು. ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕೂಡ ಶ್ರೀ ಸ್ವಾಮಿನಾರಾಯಣ ದೇವಸ್ಥಾನದ ವಿಧ್ವಂಸಕತೆಯನ್ನು ಖಂಡಿಸಿದರು ಮತ್ತು ಅದನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು: ಕಾಂಗ್ರೆಸ್ ನಾಯಕ ಕೆ.ಬಿ.ಕೋಳಿವಾಡ

    ದೇಶದಲ್ಲಿ ಪದೇ ಪದೇ ದ್ವೇಷ ಮತ್ತು ಹಿಂಸಾಚಾರದ ಘಟನೆಗಳ ಬಗ್ಗೆ ಕಾಂಗ್ರೆಸ್ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತೀಯ-ಅಮೆರಿಕನ್ ಶಾಸಕ ಥಾನೇದಾರ್ ಅವರು ಈ ಹೇಯ ಕೃತ್ಯವನ್ನು ಬಲವಾಗಿ ಖಂಡಿಸಿದರು ಮತ್ತು ಇಂತಹ ‘ವಿಧ್ವಂಸಕ, ಧರ್ಮಾಂಧತೆ ಮತ್ತು ದ್ವೇಷದ’ ಕೃತ್ಯಗಳನ್ನು ಕೂಲಂಕಷವಾಗಿ ತನಿಖೆ ಮಾಡಬೇಕು ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಬಿಜೆಪಿ ನಾಯಕನ ಪತ್ನಿ ವಿರುದ್ಧ ಮಾನಹಾನಿ ಹೇಳಿಕೆ – ಸಂಜಯ್ ರಾವತ್‍ಗೆ 15 ದಿನಗಳ ಜೈಲು!

  • ನ್ಯೂಯಾರ್ಕ್‌ನಲ್ಲಿ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸ

    ನ್ಯೂಯಾರ್ಕ್‌ನಲ್ಲಿ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸ

    ನ್ಯೂಯಾರ್ಕ್: ಮೆಲ್ವಿಲ್ಲೆಯಲ್ಲಿರುವ (Melville) ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನವನ್ನು (BAPS Swaminayaran Temple) ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.

    ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ (Indian Consulate General) ಅಮೆರಿಕಾದ ಕಾನೂನು ಅಧಿಕಾರಗಳ ಮುಂದೆ ವಿಷಯವನ್ನು ಪ್ರಸ್ತಾಪಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.ಇದನ್ನೂ ಓದಿ: ಉಡುಪಿ: ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ತೆತ್ತ ಶಿಕ್ಷಕಿ ಅರ್ಚನಾ ಕಾಮತ್

    ಮೆಲ್ವಿಲ್ಲೆಯಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸಗೊಳಿಸಿರುವ ಸಂಬಂಧ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಖಂಡಿಸಿದ್ದು, ಇದು ಸ್ವೀಕಾರವಲ್ಲ ಹಾಗೂ ಅಮೆರಿಕಾದ ಕಾನೂನು ಅಧಿಕಾರಿಗಳು ಹೇಯ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

    ಅಮೆರಿಕಾದ ಹಿಂದೂ ಸಂಸ್ಥೆಯು (Hindu American Foudation) ಬಿಎಪಿಎಸ್, ಹಿಂದೂ ದೇವಾಲಯದ ಧ್ವಂಸಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಅಮೆರಿಕಾದ ನ್ಯಾಯ ಇಲಾಖೆಗೆ ತಿಳಿಸಿದೆ.

    ಕ್ಯಾಲಿಫೋನಿರ್ಯಾ ಹಾಗೂ ಕೆನಡಾದ ದೇವಸ್ಥಾನಗಳ ಮೇಲೆ ಆದ ದಾಳಿ ಬಳಿಕ, ಅದೇ ರೀತಿಯಲ್ಲಿ ನ್ಯೂಯಾರ್ಕ್ ದೇವಸ್ಥಾನದ ಧ್ವಂಸ ನಡೆದಿದೆ ಎಂದು ಅಮೆರಿಕಾದ ಹಿಂದೂ ಸಂಸ್ಥೆಯು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದೆ.ಇದನ್ನೂ ಓದಿ: ಲೇಡಿ ಸೂಪರ್ ಸ್ಟಾರ್‌ಗೆ ತಮಿಳು ಡೈರೆಕ್ಟರ್ ಸುಂದರ್ ಸಿ. ಆ್ಯಕ್ಷನ್ ಕಟ್

  • ಅಮೆರಿಕಾದಲ್ಲಿ ಭೂಕಂಪ: ನಟ ನಿರೂಪ್ ಭಂಡಾರಿ ಬಿಚ್ಚಿಟ್ಟ ಅನುಭವ

    ಅಮೆರಿಕಾದಲ್ಲಿ ಭೂಕಂಪ: ನಟ ನಿರೂಪ್ ಭಂಡಾರಿ ಬಿಚ್ಚಿಟ್ಟ ಅನುಭವ

    ರಂಗಿತರಂಗ ಖ್ಯಾತಿಯ ನಟ ನಿರೂಪ್ ಭಂಡಾರಿ (Nirup Bhandari) ಸದ್ಯ ಅಮೆರಿಕಾದಲ್ಲಿ (America) ಇದ್ದಾರೆ.  ವೀಕೆಂಡ್ ನಲ್ಲಿ ತಮಗಾದ ಭೂಕಂಪದ ಅನುಭವವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಲವು ದಿನಗಳ ಬಳಿಕ ಫ್ಯಾಮಿಲಿ ಸೇರಿದ್ದೇವೆ. ಮಳೆ ಬರುತ್ತಿದೆ. ಜೊತೆಗೆ ಭೂಕಂಪ (Earthquake) ಕೂಡ ಆಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

    ವೀಕೆಂಡ್ ಸಮಯದಲ್ಲಿ ಎಲ್ಲರೂ ಸೇರಿದಾಗ ಭೂಕಂಪದ ತೀವ್ರತೆ 4.8ರಷ್ಟು ಇತ್ತು ಎಂದು ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಸಮಯದಲ್ಲಿ ಅವರು ಕಾಫಿ ಕುಡಿಯುತ್ತಾ, ಫ್ರಾಂಕ್ಲಿನ್ ಬುಕ್ಸ್ ಓದುತ್ತಿದ್ದೆ ಎಂದು  ನಿರೂ‍ಪ್ ಇನ್ಸ್ಟಾ ಪೇಜ್ ನಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ.

     

    ಅನೇಕ ಕಡೆ ಭೂಕಂಪದ ಅನುಭವವಾಗುತ್ತಿದೆ. ಅದನ್ನು ಹಲವರು ತಮ್ಮದೇ ಆದ ರೀತಿಯಲ್ಲಿ ಜನತೆಗೆ ತಲುಪಿಸುತ್ತಿದ್ದಾರೆ. ಹಾಗೆಯೇ ನಿರೂಪ್ ಕೂಡ ತಮಗಾದ ಅನುಭವವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.