ಕಿರುತೆರೆ ನಟಿ ಅಮೃತಾ ನಾಯ್ಡು (Amrutha Naidu) ಅವರು ನಟನೆಯಿಂದ ದೂರವಿದ್ದಾರೆ. ಮುದ್ದು ಮಗಳು ಸಮನ್ವಿ (Samanvi) ಸಾವಿನ ನೋವಿನಲ್ಲಿದ್ದ ಅಮೃತಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮಗನ ಆಗಮನ ಖುಷಿ ಕೊಟ್ಟಿದೆ. ಕೆಲ ತಿಂಗಳುಗಳ ಹಿಂದೆ ಮಗನಿಗೆ ಅಮೃತಾ ಅವರು ಜನ್ಮ ನೀಡಿದ್ದರು. ಈಗ ಮೊದಲ ಬಾರಿಗೆ ಮಗನ ಫೋಟೋವನ್ನು ನಟಿ ರಿವೀಲ್ ಮಾಡಿದ್ದಾರೆ.
25ಕ್ಕೂ ಹೆಚ್ಚು ಧಾರಾವಾಹಿಯಲ್ಲಿ ನಟಿಸಿರುವ ಅಮೃತಾ ನಾಯ್ಡು, ಗಂಗೋತ್ರಿ, ಸತ್ಯ, ಅಮೃತವರ್ಷಿಣಿ, ಪುಣ್ಯಕೋಟಿ (Punyakoti) ಸೇರಿದಂತೆ ಹಲವು ಹಿಟ್ ಸೀರಿಯಲ್ಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅಮೃತಾ ಅವರು ಬಣ್ಣ ಹಚ್ಚಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ (Nanamma Super Star) ರಿಯಾಲಿಟಿ ಶೋನಲ್ಲಿ ಮುದ್ದು ಮಗಳು ಸಮನ್ವಿ ಜೊತೆ ಅಮೃತಾ ಭಾಗವಹಿಸಿದ್ದರು.
2022ರಲ್ಲಿ ಕಾರು ಅಪಘಾತದಲ್ಲಿ ಮಗಳು ಸಮನ್ವಿಯನ್ನ ಅಮೃತಾ-ರೂಪೇಶ್ ದಂಪತಿ ಕಳೆದುಕೊಂಡರು. ಸಮನ್ವಿ ಸಾವಿನ ನಂತರ ಅಮೃತಾ ಕುಟುಂಬ ತುಂಬಾ ನೊಂದಿದ್ದರು. ಸಮನ್ವಿ ಸಾವಿನ ಸಮಯದಲ್ಲಿ ಅಮೃತಾ ಅವರಿಗೆ ಆಗ 5 ತಿಂಗಳ ಗರ್ಭಿಣಿಯಾಗಿದ್ದರು. ಹಾಗಾಗಿ ಮಗಳ ಸಾವಿನ ಆಘಾತದಿಂದ ಹೊರಬರಲು ಸಾಕಷ್ಟು ಸಮಯ ಬೇಕಾಗಿತ್ತು. ಅಮೃತಾ- ಸಮನ್ವಿ ಬೈಕ್ನಲ್ಲಿ ಹೋಗುವಾಗ ಲಾರಿಯೊಂದು ಬಂದು ಡಿಕ್ಕಿ ಹೊಡೆದಿತ್ತು. ಆಗ ಸಮನ್ವಿ ತಲೆಗೆ ಗಂಭೀರ ಪೆಟ್ಟಾಗಿ ಸಾವನ್ನಪ್ಪಿದ್ದಳು. ಇದನ್ನೂ ಓದಿ:ಕಪಿಲ್ ಶರ್ಮಾ ಶೋನಲ್ಲಿ ಸುಮೋನಾ ಚಕ್ರವರ್ತಿಗೆ ಅವಮಾನ
ಬೇಬಿ ಬಂಪ್ ಫೋಟೋಶೂಟ್ ಮೂಲಕ ನಟಿ ಕೆಲ ತಿಂಗಳುಗಳ ಹಿಂದೆ ಹೊಸ ಅತಿಥಿಯ ಆಗಮನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ಬಳಿಕ ಗಂಡು ಮಗು ಜನಿಸಿರೋದಾಗಿ ಸೋಷಿಯಲ್ ಮೀಡಿಯಾ ಮೂಲಕ ಗುಡ್ ನ್ಯೂಸ್ ತಿಳಿಸಿದ್ದರು. ಈಗ ಮೊದಲ ಬಾರಿಗೆ ಮಗನ ಫೋಟೋವನ್ನ ಅಮೃತಾ ಹಂಚಿಕೊಂಡಿದ್ದಾರೆ. ಆದರೆ ಮಗನ ಮುಖ ಕಾಣದೇ ನಟಿ ಮರೆಮಾಚಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಮ್ಮಿಗೆಪುರ ವಾರ್ಡ್ ನಂಬರ್ 198ರ ವಾಜರಹಳ್ಳಿ ಯಲ್ಲಿ ಇತ್ತೀಚೆಗಷ್ಟೇ ಅಪಘಾತದಲ್ಲಿ ನಿಧನ ಹೊಂದಿದ ಪುಟಾಣಿ ಸಮನ್ವಿ ಅವರ ತಂದೆ ರೂಪೇಶ್ ಹಾಗೂ ತಾಯಿ ಅಮೃತ ನಾಯ್ಡು ಅವರ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳಲಾಯಿತು. pic.twitter.com/OpZgFAKSL6
ಸಮನ್ವಿ ಬಾಲ ಕಲಾವಿದೆಯಾಗಿ ಜನರ ಮನಗೆದ್ದಿದ್ದಳು. ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಸಮನ್ವಿ ಚಿಕ್ಕ ವಯಸ್ಸಿನಲ್ಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಳು. ಆಕೆಯ ಸಾವು ನಿಜಕ್ಕೂ ದುರದೃಷ್ಟಕರ. ಅವರ ಕುಟುಂಬವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭೇಟಿ ಬಳಿಕ ಎಸ್ಟಿಎಸ್ ತಿಳಿಸಿದ್ದಾರೆ. ಇದನ್ನೂ ಓದಿ: ಕಣ್ಣೀರು ತರಿಸುವಂತಿದೆ ಸಮನ್ವಿ ತಾಯಿ ಅಮೃತಾ ನಾಯ್ಡು ಮನವಿ
ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕೂಡ ಸಮನ್ವಿ ಮನೆಗೆ ಭೇಟಿ ನೀಡಿ ಆಕೆಯ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಕಳೆದ ಗುರುವಾರ ಅಮೃತಾ ನಾಯ್ಡು ಅವರು ರಾಜಾಜಿನಗರದಲ್ಲಿರುವ ತಮ್ಮ ತವರುನ ಮನೆಗೆ ಸ್ಕೂಟಿಯಲ್ಲಿ ಹೊರಟಿದ್ದರು. ಮೆಟ್ರೋ ಸ್ಟೇಷನ್ ವರೆಗೆ ಗಾಡಿಯಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸಮನ್ವಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ 4 ತಿಂಗಳ ಗರ್ಭಿಣಿ ಅಮೃತಾ ಅವರು ಭಾರೀ ಅವಘಡದಿಂದ ಬಚಾವ್ ಆಗಿದ್ದರು. ಇದನ್ನೂ ಓದಿ: ಮುದ್ದಿನ ಮಗಳು ಸಮನ್ವಿಯ ಲಾಸ್ಟ್ ಕಿಸ್ ಹಂಚಿಕೊಂಡ ನಟಿ ಅಮೃತಾ
ಬೆಂಗಳೂರು: ಮುದ್ದಿನ ಮಗಳು ಸಮನ್ವಿಯನ್ನು ಕಳೆದುಕೊಂಡು ದುಃಖದಲ್ಲಿರುವ ನಟಿ ಅಮೃತಾ ನಾಯ್ಡು ಅವರು ತಮ್ಮ ಇನ್ ಸ್ಟಾ ಖಾತೆಯಲ್ಲಿ 2 ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಹೌದು. ಮಗಳ ಜೊತೆಗಿನ ಲಾಸ್ಟ್ ವೀಡಿಯೋವನ್ನು ಅಮೃತಾ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ನನಗೆ ಅವಳ ಲಾಸ್ಟ್ ಕಿಸ್ ಇದಾಗಿದ್ದು, ನನ್ನನ್ನು ನಾನು ಲವ್ ಮಾಡಿಕೊಳ್ಳುತ್ತೀನಿ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ವೀಡಿಯೋದಲ್ಲಿ ಸಮನ್ವಿ ತನ್ನ ಪಾಡಿಗೆ ತಾನು ಆಟವಾಡಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮಗಳ ಸಾವಿನ ಬಗ್ಗೆ ಕಣ್ಣೀರುಡುತ್ತಲೇ ಎಳೆಎಳೆಯಾಗಿ ಬಿಚ್ಚಿಟ್ಟ ಅಮೃತಾ ನಾಯ್ಡು!
ನಿನ್ನೆಯಷ್ಟೇ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಅಮೃತಾ, ಅಂದು ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಕಣ್ಣೀರಾಕಿದ್ದರು. ಅಲ್ಲದೆ ಮನೆಯಿಂದ ಹೊರಡುವ ಮುಂಚೆ ಮಗಳ ಜೊತೆ ರೀಲ್ಸ್ ಕೂಡ ಮಾಡಿದ್ದೆ ಎಂದು ಹೇಳಿದ್ದರು. ಅದರಂತೆ ಆ ಲಾಸ್ಟ್ ರೀಲ್ಸ್ ಅನ್ನು ಇದೀಗ ಅವರು ತಮ್ಮ ಇನ್ ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಮಗಳ ತುಂಟಾಟಗಳನ್ನು ನೆನಪು ಮಾಡಿಕೊಳ್ಳುತ್ತಾ ಮರುಗುತ್ತಿದ್ದಾರೆ. ಇದನ್ನೂ ಓದಿ: ಕಣ್ಣೀರು ತರಿಸುವಂತಿದೆ ಸಮನ್ವಿ ತಾಯಿ ಅಮೃತಾ ನಾಯ್ಡು ಮನವಿ
ಕಳೆದ ಗುರುವಾರ ಕೋಣನಕುಂಟೆ ಬಳಿ ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ನಡೆದಿತ್ತು. ಈ ಅವಘಡದಲ್ಲಿ ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುವ ನನ್ನಮ್ಮ ಸೂಪ್ ಸ್ಟಾರ್ ಖ್ಯಾತಿ ಸಮನ್ವಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಗರ್ಭಿಣಿಯಾಗಿರುವ ಅಮೃತಾ ನಾಯ್ಡು ಸಣ್ಣ-ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದರು. ಆ ಬಳಿಕ ಮಗಳನ್ನು ಕಳೆದುಕೊಂಡ ದುಃಖದಲ್ಲಿಯೂ ಅಮೃತಾ ಅವರು ಇನ್ ಸ್ಟಾದಲ್ಲಿ ಫೋಸ್ಟ್ ಮಾಡಿ, ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು. ನನ್ನ ಮಗಳು ಮತ್ತೆ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರಲಿ ಎಂದು ಎಲ್ಲರೂ ಪ್ರಾರ್ಥಿಸಿ ಅಂತ ಕೈಮುಗಿದು ಬೇಡಿಕೊಂಡಿದ್ದರು.
– ದೂಷಿಸುವವರಲ್ಲಿ ಕೈಮುಗಿದು ಬೇಡ್ಕೊಂಡ ಸಮನ್ವಿ ತಾಯಿ
– ಮಗಳಿಗಾಗಿ ಪ್ರಾರ್ಥಿಸಿ ಅಂತ ಕೈಮುಗಿದ ನಟಿ
ಬೆಂಗಳೂರು: ಪ್ರತಿಯೊಬ್ಬರೂ ಈ ವಿಚಾರವಾಗಿ ಕಾಳಜಿಯ ಮಾತನ್ನಾಡಿದ್ದಾರೆ. ಆದರೆ ಜನರು ಎಲ್ಲೋ ಕೂತು ಇಲ್ಲಿನ ಪರಿಸ್ಥಿತಿಯ ಬಗ್ಗೆ ಹೀಗಾಗಬೇಕಾಗಿತ್ತು, ಹೀಗೆ ಮಾಡಬಹುದಿತ್ತು ಎನ್ನುವುದು ಸುಲಭ. ತಾಯಿಯಾಗಿ ನನಗೂ ಅನಿಸಿದೆ. ಆ ಸಂದರ್ಭದಲ್ಲಿ ಹೀಗೆ ಮಾಡಬೇಕಾಗಿತ್ತು ಎಂದು ನನಗೂ ಅನಿಸಿದೆ ಎಂದು ಮೃತ ಸಮನ್ವಿ ತಾಯಿ ಅಮೃತಾ ನಾಯ್ಡು ಕಂಬನಿ ಮಿಡಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅಪಘಾತ ಸಂಭವಿಸಿದ ಘಟನೆಯನ್ನು ಕಣ್ಣೀರು ಹಾಕುತ್ತಲೇ ಎಳೆಎಳೆಯಾಗಿ ಬಿಚ್ಚಿಟ್ಟರು. ಅಂದು ಟಿಪ್ಪರ್ ಸಮನ್ವಿಗೆ ಡಿಕ್ಕಿ ಹೊಡೆದು ಆಕೆ ಮೂರ್ಛೆ ತಪ್ಪಿ ಬಿದ್ದಾಗಲೂ ಲಾರಿ ಡ್ರೈವರ್ ಮೇಲೆ ನನಗೆ ಎಳ್ಳಷ್ಟೂ ಕೋಪ ಬಂದಿರಲಿಲ್ಲ. ತಕ್ಷಣ ನನಗೆ ಮನಸ್ಸಿಗೆ ಬಂದಿದ್ದು, ಭಗವಂತನೇ ಇಂತಹ ಸಂದರ್ಭ ಕಲ್ಪಿಸಿ ಕೊಟ್ಟನೇನೋ ಎಂದು. ದೇವರು ಹೀಗೆ ಆಗಬೇಕು ಎಂದು ಮೊದಲೇ ನಿರ್ಧಾರ ಮಾಡಿದ್ದ. ಈ ಘಟನೆ ನಡೆದಿದ್ದು ನಿನ್ನಿಂದ, ನನ್ನಿಂದ ಎನ್ನೋದ್ರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಗದ್ಗದಿತರಾದರು. ಇದನ್ನೂ ಓದಿ: ಕಣ್ಣೀರು ತರಿಸುವಂತಿದೆ ಸಮನ್ವಿ ತಾಯಿ ಅಮೃತಾ ನಾಯ್ಡು ಮನವಿ
ನನ್ನ ನೋವನ್ನು ಅರ್ಥ ಮಾಡಿಕೊಂಡವರು ಈ ಕ್ಷಣ ನನ್ನ ಜೊತೆ ಇದ್ದಾರೆ. ನನ್ನನ್ನು ನೋವಿನಿಂದ ಹೊರಗಡೆ ತರಲು ಬಹಳ ಪ್ರಯತ್ನ ಪಡುತ್ತಿದ್ದಾರೆ. ಎಲ್ಲೋ ಕೂತು ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ಯಾರನ್ನೂ ದೂಷಿಸಬೇಡಿ. ನಾನು ಗರ್ಭಿಣಿಯಾಗಿದ್ದರಿಂದ ಗಾಡಿ ತಗೊಂಡು ಹೋಗಬಾರದಿತ್ತು ಅಂತೆಲ್ಲ ಮಾತನಾಡುತ್ತಿದ್ದಾರೆ. ಇಂತಹ ಮಾತುಗಳನ್ನಾಡಿ ನನ್ನ ಮೇಲೆ ಆರೋಪಗಳನ್ನು ಮಾಡಬೇಡಿ ಎಂದು ಕಣ್ಣೀರಾಕುತ್ತಲೇ ಬೇಡಿಕೊಂಡರು.
ಯಾವುದೇ ತಾಯಿ ತನ್ನ ಮಗುವನ್ನು ಬಲಿ ಕೊಡೋದಕ್ಕೆ ಹೋಗಲ್ಲ. ನೋವಲ್ಲಿರೋ ನಮನ್ನ ಈ ರೀತಿ ದೂಷಿಸಿ ಮತ್ತಷ್ಟು ನೋವು ಕೊಡಬೇಡಿ. ಹಲವರು ಇದಕ್ಕೆ ಸಲಹೆ ನೀಡಿದ್ದಾರೆ. ಆದರೆ ಈ ಸಲಹೆಗಳಿಂದ ಸಮನ್ವಿ ಮರಳಿ ಬರಲು ಸಾಧ್ಯವಿಲ್ಲ. ನನ್ನ ಹತ್ತಿರದವರು ಜೊತೆಯಲ್ಲಿದ್ದು ಸಹಾಯ ಮಾಡುತ್ತಾ ಇದ್ದಾರೆ. ಸಾಧ್ಯವಾದರೆ ಅವಳಿಗೆ ಆಶೀರ್ವಾದ ಮಾಡಿ, ಅವಳಿಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಸಮನ್ವಿ ಮುಂದೆ ದೊಡ್ಡ ಸ್ಟಾರ್ ಆಗುತ್ತಿದ್ದಳು: ಸೃಜನ್ ಲೋಕೇಶ್ ಭಾವುಕ
ಅಂದು ಏನಾಗಿತ್ತು?
ನನ್ನ ತಾಯಿ ಮನೆ ರಾಜಾಜಿನಗರದಲ್ಲಿದೆ. ಹೀಗಾಗಿ ಅಷ್ಟು ದೂರ ಬೈಕ್ನಲ್ಲಿ ಹೋಗುವುದು ನನಗೆ ಕಷ್ಟವಾಗಿದ್ದರಿಂದ ಮೆಟ್ರೋ ಹತ್ತಿ ಹೋಗುವುದಾಗಿ ನಿರ್ಧರಿಸಿದ್ದೆ. ಮನೆಯಿಂದ ಮೆಟ್ರೋ ನಿಲ್ದಾಣಕ್ಕೆ ಕೇವಲ 2 ನಿಮಿಷಗಳ ದಾರಿ. ಸಮನ್ವಿಗೆ ಕಾರ್ ಪ್ರಯಾಣ ಇಷ್ಟ ಆಗಲ್ಲ ಎಂಬ ಕಾರಣಕ್ಕೆ ಮೆಟ್ರೋ ಸ್ಟೇಷನ್ ವರೆಗೆ ಬೈಕ್ನಲ್ಲಿ ಹೋಗಲು ನಿರ್ಧರಿಸಿದ್ವಿ ಎಂದರು.
ಆಕೆಯನ್ನ ಎಲ್ಲಿಗೇ ಕರೆದುಕೊಂಡು ಹೋಗುವಾಗಲೂ ಬಹಳ ಜಾಗ್ರತೆಯಿಂದಲೇ ಕರೆದುಕೊಂಡು ಹೋಗುತ್ತಿದ್ದೆವು. ಈ ರೀತಿ ಅನಾಹುತ ಆಗುತ್ತೆ ಎಂಬ ನಿರೀಕ್ಷೆ ಇರಲಿಲ್ಲ. ಸಮನ್ವಿಯನ್ನ ಮೊದಲು ಬೈಕ್ನ ಎದುರುಗಡೆಯೇ ಕೂರಿಸಿಕೊಳ್ಳುತ್ತಾ ಇದ್ದೆ. ಆದರೆ ಇತ್ತೀಚೆಗೆ ಆಕೆ ಸ್ವಲ್ಪ ಉದ್ದ ಬೆಳೆದಿದ್ದಾಳೆ. ಅಲ್ಲದೆ ಆಕೆಯ ತಲೆ ನನಗೆ ಅಡ್ಡ ಆಗ್ತಾ ಇದ್ದಿದ್ದರಿಂದ ಜೋಪಾನವಾಗಿನೇ ಹಿಂದುಗಡೆ ಕೂರಿಸಿಕೊಳ್ಳುತ್ತಾ ಇದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು
ಅಂದು ನಾವಿಬ್ರೂ ತುಂಬಾ ಮಾತಾಡ್ತಾ ಇದ್ವಿ. ಮೆಟ್ರೋ ನಿಲ್ದಾಣ ನನಗೆ ಕಣ್ಣಿಗೆ ಕಾಣಿಸ್ತಾನೇ ಇತ್ತು. ಒಂದು ಕ್ಷಣ ನನಗೆ ಸಿಕ್ಕಿದ್ದಿದ್ರೆ ಎಡಕ್ಕೆ ತಿರುಗಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಪಕ್ಕದಲ್ಲಿ ದೊಡ್ಡ ಗಾಡಿಯೊಂದು ಬಂತು. ಆ ಕ್ಷಣಕ್ಕೆ ನನಗೆ ಅಷ್ಟು ಮಾತ್ರ ಗೊತ್ತಾಗಿದ್ದು. ಆಕೆ ರೋಡ್ಗೆ ಬಿದ್ದಿದ್ದಳು. ನಾನೂ ಕೂಡಾ ಬಿದ್ದಿದ್ದೆ. ಮಗು ಬಿದ್ದಿದೆ, ಆಕೆ ಭಯ ಪಟ್ಟಿರುತ್ತಾಳೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಆಕೆ ಮೂರ್ಛೆ ತಪ್ಪಿ ಹೋಗಿದ್ದಳು. ಆಸ್ಪತ್ರೆಗೆ ಕರೆದುಕೊಂಡು ಹೋದಾಗಲೇ ಗೊತ್ತಾಗಿದ್ದು ಆಕೆ ಮೃತಪಟ್ಟಿದ್ದಾಳೆ ಎಂದು ಹೇಳುತ್ತಾ ಬೇಸರಗೊಂಡರು.
ನಾವು ಮಗುವನ್ನು ಕಳೆದುಕೊಂಡಿದ್ದೇವಾ ಅಥವಾ ಯಾರೋ ಹಿರಿಯರನ್ನ ಕಳೆದುಕೊಂಡಿದ್ದೇವಾ ಎಂಬುದೇ ತಿಳೀತಾ ಇಲ್ಲ. ಆಕೆಗೆ ಏನು ಹೇಳಿದ್ರೂ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾ ಇದ್ದಳು. ಆಕೆಯನ್ನ ತುಂಬಾ ಜೋಪಾನ ಮಾಡಿ ಸಾಕಿದ್ವಿ. ಆಕೆಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಅಂತ ಒಳ್ಳೆ ಶಾಲೆಗೂ ಸೇರಿಸಿದ್ವಿ. ಅಪರೂಪದಲ್ಲಿ ಅವಳಿಗೆ ಸುಲಭವಾಗಿ ಸೀಟ್ ಕೂಡಾ ಸಿಕ್ಕಿತ್ತು. ಭಗವಂತ ಆಕೆಯ ಜೀವನದ ಎಲ್ಲಾ ಹಂತವನ್ನೂ ಸುಲಭವಾಗಿ ಪಾರು ಮಾಡಿಸಿದ್ದಾನೆ. ಆದರೆ ಸಾವನ್ನ ಮಾತ್ರ ಪಾರು ಮಾಡಿಸದೇ ಹೋದ ಅಮೃತಾ ಕಂಬನಿ ಮಿಡಿದರು. ಇದನ್ನೂ ಓದಿ: ಸಮನ್ವಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಡಿಕೆಶಿ
ಈ ನೋವು ಒಂದು ಕಡೆಯಾದರೆ ಮನಸ್ಸಿಗೆ ಸಮಾಧಾನವನ್ನು ತಂದುಕೊಟ್ಟಿರುವ ಕೆಲಸವನ್ನು ಮಾಧ್ಯಮದವರು ಮಾಡಿದ್ದಾರೆ. ಸಮನ್ವಿಯನ್ನು ಜನರಿಗೆ ತಲುಪಿಸುವ ಕೆಲಸದೊಂದಿಗೆ ಜನರು ಅವಳಿಗೋಸ್ಕರ ಪ್ರಾರ್ಥಿಸುವಂತೆ ಮಾಡಿದ್ದಾರೆ. ಇಷ್ಟು ಪ್ರೀತಿಯ ಜೊತೆ ಅವಳನ್ನು ಕಳುಹಿಸಿ ಕೊಡುವಂತೆ ಸಹಾಯ ಮಾಡಿರುವ ಮಾಧ್ಯಮಗಳಿಗೆ ಹಾಗೂ ಪಬ್ಲಿಕ್ ಟಿವಿಗೆ ನಾನು ಚಿರಋಣಿಯಾಗಿದ್ದೇನೆ ಎಂದರು.
ಬೆಂಗಳೂರು: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿ, ಬಾಲಕಲಾವಿದೆ ಸಮನ್ವಿ ಮನೆಗೆ ಕೆಪಿಸಿಸಿ ಅಧ್ಯಕ್ಷ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಕೆಂಗೇರಿ ರಸ್ತೆಯಲ್ಲಿರುವ ಅಮೃತಾ ರೂಪೇಶ್ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಮಂಗಳವಾರ ಭೇಟಿ ನೀಡಿದರು. ಸಮನ್ವಿ ಅಗಲಿಕೆ ದುಃಖದಲ್ಲಿರುವ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಬಾಲಕಲಾವಿದೆ ಸಮನ್ವಿ ಭಾವಚಿತ್ರ ಗೌರವ ನಮನ ಸಲ್ಲಿಸಿದರು. ಇದನ್ನೂ ಓದಿ: ಕಣ್ಣೀರು ತರಿಸುವಂತಿದೆ ಸಮನ್ವಿ ತಾಯಿ ಅಮೃತಾ ನಾಯ್ಡು ಮನವಿ
ಅರಳಿ ನಗಬೇಕಿದ್ದ ಹೂವೊಂದು ಮೊಗ್ಗಿನಲ್ಲೇ ದೇವರಿಗೆ ಅರ್ಪಣೆಯಾಗಿದೆ. ಖ್ಯಾತ ಹರಿಕಥಾ ವಿದ್ವಾಂಸ ಶ್ರೀ ಗುರುರಾಜ ನಾಯ್ಡು ಅವರ ಮೊಮ್ಮಗಳು ಸಮನ್ವಿ ಪ್ರತಿಭಾವಂತೆ ಭವಿಷ್ಯದಲ್ಲಿ ಉತ್ತಮ ಕಲಾವಿದೆಯಾಗುವ ಭರವಸೆಹುಟ್ಟಿಸಿದ್ದಳು. ಆಕೆಯ ಅಗಲಿಕೆ ಕಲಾ ರಂಗಕ್ಕೆ ತುಂಬಲಾರದ ನಷ್ಟ. ಇಂದು ಸಮನ್ವಿ ಅವರ ಮನೆಗೆ ಭೇಟಿ ನೀಡಿ ಅವರ ಪೋಷಕರಿಗೆ ಧೈರ್ಯ ಹೇಳಿದೆ. pic.twitter.com/MFJf6vdfFU
6 ವರ್ಷದ ಪುಟ್ಟ ಬಾಲಕಿ ನಾಲ್ಕು ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಳು. ಬೆಂಗಳೂರಿನ ಕೋಣನಕುಂಟೆಯಲ್ಲಿ ತಾಯಿ ಅಮೃತಾ ನಾಯ್ಡು ಮತ್ತು ಮಗಳು ಸಮನ್ವಿ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಆಗ ಟಿಪ್ಪರ್ ಡಿಕ್ಕಿ ಹೊಡದು ಸ್ಕೂಟಿಯಿಂದ ಇಬ್ಬರೂ ಬಿದ್ದರು. ಟಿಪ್ಪರ್ ಲಾರಿಯ ಮಡ್ಗಾರ್ಡ್ ಸಮನ್ವಿಗೆ ಗುದ್ದಿದೆ. ಹೀಗಾಗಿ ಹೊಟ್ಟೆ ಭಾಗದಲ್ಲಿ ರಕ್ತಸ್ರಾವ ಆಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಳು. ಇದನ್ನೂ ಓದಿ: ಸಮನ್ವಿ ಮುಂದೆ ದೊಡ್ಡ ಸ್ಟಾರ್ ಆಗುತ್ತಿದ್ದಳು: ಸೃಜನ್ ಲೋಕೇಶ್ ಭಾವುಕ
ಬೆಂಗಳೂರು: ಕಳೆದ ಗುರುವಾರ ನಟಿ ಅಮೃತಾ ನಾಯ್ಡು ಅವರು ಅಪಘಾತದಲ್ಲಿ ತಮ್ಮ ಮಗಳನ್ನು ಕಳೆದುಕೊಂಡಿದ್ದಾರೆ. ಇದೀಗ ಈ ದುಃಖದ ನಡುವೆಯೇ ಅಮೃತಾ ಅವರು ಮನವಿ ಮಾಡಿಕೊಂಡಿದ್ದಾರೆ.
ಹೌದು. ಅಮೃತಾ ನಾಯ್ಡು ಅವರ ಮನವಿ ಕೇಳಿದರೆ ಎಂಥವರ ಕರುಳು ಕೂಡ ಚುರುಕ್ ಅನ್ನಿಸುವಂತಿದೆ. ಮಗಳ ಕಳೆದುಕೊಂಡ ಬಳಿಕ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ಹಾಕಿದ್ದಾರೆ. ಇದರಲ್ಲಿ ನನ್ನ ಆಸೆ ಈಡೇರಿಸಿ ಎಂದು ಅಂಗಲಾಚಿಕೊಂಡಿರುವುದು ಕಣ್ಣೀರು ತರಿಸುವಂತಿದೆ.
ಪೋಸ್ಟ್ ನಲ್ಲೇನಿದೆ..?
ದೇವರ ಪ್ರತಿರೂಪವಾಗಿ ಕಾಣುತ್ತಿರುವ ನಿಮ್ಮೆಲ್ಲರಲ್ಲಿ ನನ್ನದೊಂದು ಪ್ರಾರ್ಥನೆ. ನಾನು ಈಗ 4 ತಿಂಗಳ ಗರ್ಭಿಣಿ. ಮತ್ತೆ ನನ್ನ ಮುದ್ದು ಕಂದಮ್ಮ ಸಮನ್ವಿಯ ಬರುವಿಕೆಗಾಗಿ ಈ ತಾಯಿ ಜೀವ ಹಂಬಲಿಸುತ್ತಿದೆ. ದಯಮಾಡಿ ನನಗೊಂದು ಸಹಾಯ ಮಾಡಿ. ಆ ಭಗವಂತನಲ್ಲಿ ಪ್ರಾರ್ಥಿಸಿ, ನಿಮ್ಮೆಲ್ಲರ ಪ್ರಾರ್ಥನೆಯ ಒತ್ತಾಯದಿಂದಾರೂ ನನ್ನ ಕಂದಮ್ಮನನ್ನು ಆ ಭಗವಂತ ಮರಳಿ ಕಳಿಸಿಬಿಡಲಿ. ಅವಳನ್ನು ನನ್ನ ಗರ್ಭದಲ್ಲಿ ಜೋಪಾನ ಮಾಡಿಕೊಳ್ಳುತ್ತೇನೆ. ದಯಮಾಡಿ ಈ ತಾಯಿ ಕರೆಗೆ ಕೈಜೋಡಿಸಿ, ನನ್ನ ಸಮನ್ವಿಯ ಪುನಃ ಬರುವಿಕೆಗಾಗಿ ಸಹಾಯ ಮಾಡಿ, ಪ್ರಾರ್ಥಿಸಿ. ಅವಳೇ ಮತ್ತೆ ನನ್ನ ಮಗಳಾಗಿ ಬರಬೇಕು. ನಿಮ್ಮೆಲ್ಲರ ಪ್ರಾರ್ಥನೆಯಿಂದ ಇದು ಸಾಧ್ಯ. ಅವಳು ಮರಳಿ ಬರಲಿ ಎಂದು ದಯವಿಟ್ಟು ಎಲ್ಲರೂ ಪ್ರಾರ್ಥನೆ ಮಾಡಿ ಅಂತ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇಂದು ಪುಟಾಣಿ ಸಮನ್ವಿಯ ಅಸ್ಥಿ ವಿಸರ್ಜನೆ
ಗುರುವಾರ ಕೋಣನ ಕುಂಟೆ ಬಳಿ ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ನಡೆಯಿತು. ಈ ಅವಘಡದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ಮೃತಪಟ್ಟಿದ್ದಾಳೆ. ತಾಯಿ ಅಮೃತಾ ನಾಯ್ಡು ಸಣ್ಣ-ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದರು. ಶನಿವಾರ ಬನಶಂಕರಿ ಚಿತಾಗಾರದಲ್ಲಿ ಸಮನ್ವಿ ಅಂತ್ಯಕ್ರಿಯೆ ನಡೆಯಿತು. ಈ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.
ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಪಶ್ಚಿಮ ವಾಹಿನಿಯಲ್ಲಿ ಅಸ್ಥಿವಿಸರ್ಜನೆ ನಡೆಯಿತು. ಕಾವೇರಿ ನದಿಯಲ್ಲಿ ಸಮನ್ವಿ ತಂದೆ ರೂಪೇಶ್ ನಾಯ್ಡು ವಿಧಿವಿಧಾನಗಳನ್ನು ಪೂರೈಸಿದರು. ವೈದಿಕ ಭಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ನಡೆದ ಕೈಂಕರ್ಯ ನಡೆಯಿತು. ತಿರ ತರ್ಪಣ, ನಾರಾಯಣ ಬಲಿ, ಪಿಂಡ ಪ್ರದಾನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನಡಯಿತು. ಅಂತಿಮ ವಿಧಿ-ವಿಧಾನ ಕಾರ್ಯದಲ್ಲಿ ಸಮನ್ವಿ ತಾತ ನಾರಾಯಣಸ್ವಾಮಿ, ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ ಭಾಗಿಯಾಗಿದ್ದರು.
ಬೆಂಗಳೂರು: ಖಾಸಗಿ ಚಾನೆಲ್ ರಿಯಾಲಿಟಿ ಶೋ ‘ನನ್ನಮ್ಮ ಸೂಪರ್ ಸ್ಟಾರ್’ ಖ್ಯಾತಿಯ ಸಮನ್ವಿ ಅಂತ್ಯಕ್ರಿಯೆ ಇಂದು ಬನಶಂಕರಿ ಚಿತಾಗಾರದಲ್ಲಿ ನೆರವೇರಿದೆ.
ಇಂದು ಬೆಳಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಸಮನ್ವಿ ಮೃತದೇಹವನ್ನು ಲಿಬರ್ಟಿ ಅಪಾರ್ಟ್ ಮೆಂಟ್ ಗೆ ತರಲಾಗಿತ್ತು. ಆದರೆ ಲಿಬರ್ಟ್ ಅಪಾರ್ಟ್ ಮೆಂಟ್ ನಲ್ಲಿ 20 ಮಂದಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ಒಳಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಅಪಾರ್ಟ್ ಮೆಂಟ್ ಪ್ರವೇಶ ದ್ವಾರದ ಬಳಿಯೇ ಸಮನ್ವಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಹೊಟ್ಟೆಗೆ ಗಾಯ, ತೀವ್ರ ರಕ್ತಸ್ರಾವದಿಂದ ಸಮನ್ವಿ ಸಾವು: ಡಿಸಿಪಿ ಕುಲದೀಪ್ ಜೈನ್
ಮಧ್ಯಾಹ್ನ 1 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ ನಂತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಸಿನಿಮಾ ಹಾಗೂ ಧಾರವಾಹಿ ಕಲಾವಿದರು ಅಂತಿಮ ದರ್ಶನ ಪಡೆದು ಕಣ್ಣೀರಾಕಿದ್ದಾರೆ. ಇತ್ತ ಸಮನ್ವಿ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಇದನ್ನೂ ಓದಿ: ನಿನ್ನನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ : ಬಿಕ್ಕಿ ಬಿಕ್ಕಿ ಅತ್ತ ತಂದೆ ರೂಪೇಶ್
ತಂದೆ ರೂಪೇಶ್ ಮಗಳ ಅಂತ್ಯಕ್ರಿಯೆ ನೆರವೇರಿಸಿದರು. ಇನ್ನು ಅಂತಿಮ ವಿಧಿ ವಿಧಾನಗಳನ್ನ ನೆರವೇರಿಸಿದ ಬಳಿಕ ಮಾತನಾಡಿದ ಕಾಳಿಸ್ವಾಮಿ, ಮಗು ಸಮನ್ವಿಗೆ ಬಲಿಜ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ಮಾಡಿದ್ದೇವೆ. ಮಗು ಆಗಿರೋದ್ರಿಂದ ಪೂರ್ಣ ಪ್ರಮಾಣದಲ್ಲಿ ಆ ಥರ ಮಾಡೋಕೆ ಆಗ್ಲಿಲ್ಲ. ಅಪಘಾತದ ನಿಧನ ಆಗಿರೋದ್ರಿಂದ ಕೆಲವು ಶಾಸ್ತ್ರ ಮಾಡಿದೆವು. ಮೂರನೇ ದಿನಕ್ಕೆ ಶ್ರೀರಂಗಪಟ್ಟಣದಲ್ಲಿ ನಾರಾಯಣ ಬಲಿಹೋಮ ಮಾಡುತ್ತೇವೆ. ತಾಯಿ ಗರ್ಭಿಣಿ ಹೀಗಾಗಿ ಶಾಂತಿ ಮಾಡಬೇಕು. ಅಮೃತಾ ತಾಯಿ ಶೋಭಾ ನಾಯ್ಡು ಸಾಕು ಮಗ ನಾನು. ಇಡೀ ಕುಟುಂಬ ಹರಿಕಥೆಯಲ್ಲಿ ದೊಡ್ಡ ಹೆಸರು. ಅಮೃತಾ ನನಗೆ ಸಹೋದರಿ ಸಮಾನ ಎಂದರು. ಇದನ್ನೂ ಓದಿ: ಸಮನ್ವಿ ಮುಂದೆ ದೊಡ್ಡ ಸ್ಟಾರ್ ಆಗುತ್ತಿದ್ದಳು: ಸೃಜನ್ ಲೋಕೇಶ್ ಭಾವುಕ
ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಆಗಿದ್ದ ಪುಟಾಣಿ ಸಮನ್ವಿ ಇನ್ನಿಲ್ಲ. 6 ವರ್ಷದ ಪುಟ್ಟ ಬಾಲಕಿ ನಿನ್ನೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಬೆಂಗಳೂರಿನ ಕೋಣನಕುಂಟೆಯಲ್ಲಿ ತಾಯಿ, ಕಿರುತರೆ ನಟಿ ಅಮೃತಾ ನಾಯ್ಡು ಮತ್ತು ಮಗಳು ಅಮನ್ವಿ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಆಗ ಟಿಪ್ಪರ್ ಡಿಕ್ಕಿ ಹೊಡದು ಸ್ಕೂಟಿಯಿಂದ ಇಬ್ಬರೂ ಬಿದ್ದರು. ಟಿಪ್ಪರ್ ಲಾರಿಯ ಮಡ್ಗಾರ್ಡ್ ಸಮನ್ವಿಗೆ ಗುದ್ದಿದೆ. ಹೀಗಾಗಿ ಹೊಟ್ಟೆ ಭಾಗದಲ್ಲಿ ರಕ್ತಸ್ರಾವ ಆಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು
ಬೆಂಗಳೂರು: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ ನಡೆಯುತ್ತಲೇ ಇದೆ. ಈ ಹಿಂದೆ 7 ತಿಂಗಳ ಗರ್ಭಿಣಿಯಾಗಿದ್ದಾಗ ಮಗುವೊಂದು ಸಾವನ್ನಪ್ಪಿದ್ದು, ಬಳಿಕ ಸಮನ್ವಿ ಹುಟ್ಟಿದ್ದಳು. ಆದರೆ ಇದೀಗ ಈಕೆಯನ್ನೂ ಅಮೃತಾ ಕಳೆದುಕೊಂಡಿದ್ದಾರೆ.
ಹೌದು. ಅಮೃತಾಗೆ ಮೃತ ಸಮನ್ವಿ ಎರಡನೇ ಮಗಳು. ಮೊದಲ ಮಗು ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿತ್ತು. ಸಮನ್ವಿ ಬಂದ ಬಳಿಕ ಬದುಕಿನಲ್ಲಿ ನಗು ಮೂಡಿತ್ತು ಎಂದು ಹಲವು ಬಾರಿ ಅಮೃತಾ ಹೇಳಿದ್ದರು. ಆದರೆ ಇದೀಗ ಮತ್ತೆ ಅಮೃತಾ ಅವರ ಬಾಳಲ್ಲಿ ಮತ್ತೆ ನಗು ಮಾಸಿದೆ.
ಸದ್ಯ 4 ತಿಂಗಳು ಗರ್ಭಿಣಿಯಾಗಿರುವ ಅಮೃತಾ ನಾಯ್ಡು ಹಲವು ಧಾರಾವಾಹಿಗಳಲ್ಲೂ ಅಭಿನಯಿಸುತ್ತಿದ್ದರು. ಆದರೆ ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಸೀರಿಯಲ್ ನಿಂದ ನಟಿ ಹೊರಬಂದಿದ್ದರು. ಈ ನಡುವೆ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ದಲ್ಲಿ ಅಮ್ಮ ಮಗಳು ಸ್ಪರ್ಧಿಗಳಾಗಿದ್ದರು. ಅಮೃತಾ ಗರ್ಭಿಣಿಯಾಗಿರುವ ಕಾರಣ ಡಾನ್ಸ್ ಹಾಗೂ ಹಲವು ಟಾಸ್ಕ್ ಕಷ್ಟ ಅನ್ನುವ ಕಾರಣ ಕಳೆದ ವಾರ ಎಲಿಮನೇಟ್ ಆಗಿ ಹೊರಬಂದಿದ್ದರು.
ಕನಕಪುರ ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿರುವ ಅಮೃತಾ ಇಂದು ಸಂಜೆ 4.30ರ ವೇಳೆ ತನ್ನ ಮಗಳೋಂದಿಗೆ ಮನೆಯಿಂದ ಸ್ಕೂಟಿಯಲ್ಲಿ ಹೊರಟಿದ್ದಾರೆ. ಗಾಯತ್ರಿ ನಗರಕ್ಕೆ ಹೋಗಬೇಕಿದ್ದ ಅಮೃತ ನಾಯ್ಡು, ಸಮನ್ವಿ ವಾಜರಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಬೈಕ್ ಪಾರ್ಕ್ ಮಾಡಬೇಕಿತ್ತು. ಮೆಟ್ರೋ ನಿಲ್ದಾಣಕ್ಕೆ 100 ಮೀಟರ್ ಇರುವಂತೆಯೇ ಅಪಘಾತ ಸಂಭವಿಸಿದೆ. ಟಾಟ ಸುಮೋ ಮತ್ತು ಲಾರಿ ಮಧ್ಯೆ ತಾಯಿ- ಮಗಳು ಸಿಲುಕಿಕೊಂಡರು. ಈ ವೇಳೆ ಆಯತಪ್ಪಿ ತಾಯಿ ಅಮೃತನಾಯ್ಡು, ರಸ್ತೆಯ ಪಕ್ಕಕ್ಕೆ ಬಿದ್ದಿದ್ದರೆ, ಮಗಳು ಸಮನ್ವಿ ರಸ್ತೆಗೆ ಬಿದ್ದಿದ್ದಾಳೆ. ವೇಳೆ ಪಕ್ಕದಲ್ಲೇ ಬರ್ತಿದ್ದ ಲಾರಿ ಸಮನ್ವಿ ಮೇಲೆ ಹರಿದಿದೆ.
ಸದ್ಯ ಅಮೃತನಾಯ್ಡುಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿಪ್ಪರ್ ಲಾರಿ ಮತ್ತು ಸುಮೋ ವಾಹನಗಳನ್ನು ವಶಕ್ಕೆ ಪಡೆದು, ಡ್ರೈವರ್ ಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.