Tag: ಅಮೃತಾ

  • ‘ಜೀಬ್ರಾ’ಗೆ ‘ಭೀಮ’ ಬೆಂಬಲ- ಡಾಲಿ, ಸತ್ಯದೇವ್ ಚಿತ್ರಕ್ಕೆ ದುನಿಯಾ ವಿಜಯ್ ಸಾಥ್

    ‘ಜೀಬ್ರಾ’ಗೆ ‘ಭೀಮ’ ಬೆಂಬಲ- ಡಾಲಿ, ಸತ್ಯದೇವ್ ಚಿತ್ರಕ್ಕೆ ದುನಿಯಾ ವಿಜಯ್ ಸಾಥ್

    ನ್ನಡದ ಡಾಲಿ ಧನಂಜಯ (Daali Dhananjay) ಹಾಗೂ ತೆಲುಗಿನ ಸತ್ಯದೇವ್ ನಟನೆಯ ‘ಜೀಬ್ರಾ’ (Zebra Film) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಡಾಲಿ ಹಾಗೂ ಸತ್ಯದೇವ್ ಅಂತಿಮ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನ ಮಾಲ್‌ವೊಂದರಲ್ಲಿ ನಿನ್ನೆ (ನ.19) ಪ್ರೀ- ರಿಲೀಸ್ ಕಾರ್ಯಕ್ರಮ ನಡೆಯಿತು. ಈ ಇವೆಂಟ್‌ಗೆ ಮುಖ್ಯ ಅತಿಥಿಗಳಾಗಿ ದುನಿಯಾ ವಿಜಯ್ (Duniya Vijay) ಕುಮಾರ್, ಸತೀಶ್ ನೀನಾಸಂ, ಸಪ್ತಮಿ ಗೌಡ (Sapthami Gowda), ನಾಗಭೂಷಣ್, ನವೀನ್‌ ಶಂಕರ್ ಭಾಗವಹಿಸಿದ್ದರು.

    ದುನಿಯಾ ವಿಜಯ್ ಮಾತನಾಡಿ, ಧನಂಜಯ ಬಗ್ಗೆ ಅಪಾರವಾದ ಗೌರವಿದೆ. ತಾನು ಬೆಳೆದು ತನ್ನವವರನ್ನು ಬೆಳೆಯುಸುತ್ತಾರೆ. ಧನಂಜಯ ಬಂದ ರೂಟ್, ಸ್ಟ್ರಗಲ್, ಅವರು ಮನಸ್ಸು ನನಗೆ ಇಷ್ಟ. ‘ಸಲಗ’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿ ನನಗೆ ಗೆಲುವು ತಂದು ಕೊಟ್ಟಿದ್ದಾರೆ. ಸತ್ಯದೇವ್ ಕಷ್ಟುಪಟ್ಟು ದೊಡ್ಡ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಸಿನಿಮಾಗೆ ಭಾಷೆ ಇಲ್ಲ. ಎಷ್ಟು ಖುಷಿ, ನೋವು ಹಂಚಿಕೊಳ್ಳುತ್ತೇವೆ. ‘ಜೀಬ್ರಾ’ ನಮ್ಮ ಕನ್ನಡದ ಸಿನಿಮಾ ಆಗಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಮಹಾ ತಿರುವು- ಕಾವೇರಿ ಅಟ್ಟಹಾಸಕ್ಕೆ ಬ್ರೇಕ್‌ ಹಾಕಲು ಬಂದ ಕೀರ್ತಿ

    ಡಾಲಿ ಮಾತನಾಡಿ, ಕನ್ನಡ ವರ್ಷನ್ ಸಿನಿಮಾಗಳನ್ನು ನೀವು ಹೆಚ್ಚಾಗಿ ನೋಡುವುದರಿಂದ ಡಿಮ್ಯಾಂಡ್ ಕ್ರಿಯೇಟ್ ಆಗುತ್ತದೆ. ಬೈಕೊಂಡು ಕುರುವುದರಿಂದ ಯಾವುದು ಆಗುವುದಿಲ್ಲ. ಪಕ್ಕ ಕನ್ನಡ ಸಿನಿಮಾ ಎನಿಸಲು ಶಶಾಂಕ್ ಅಂಡ್ ಟೀಂ ತುಂಬಾ ಚೆನ್ನಾಗಿ ಡಬ್ ಮಾಡಿದ್ದಾರೆ. ‘ಜೀಬ್ರಾ’ ಇದೇ ನವೆಂಬರ್ 22ಕ್ಕೆ ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದೆ ನೋಡಿ ಬೆಂಬಲಿಸಿ ಎಂದರು. ಸತ್ಯದೇವ್ (Satyadev) ಅವರು ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ ದಿನಗಳನ್ನು ನೆನಪಿಸಿಕೊಂಡು ಮೆಲುಕು ಹಾಕಿದರು. ‘ಜೀಬ್ರಾ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ನಿಮ್ಮ ಬೆಂಬಲ ಸಿನಿಮಾ ಮೇಲೆ ಇರಲಿದೆ ಎಂದರು.

    ‘ಜೀಬ್ರಾ’ ಚಿತ್ರದಲ್ಲಿ ಡಾಲಿ ಧನಂಜಯ್ ಆದಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರಕ್ಕೆ ಒಳ್ಳೆಯ ಸ್ಕೋಪ್ ಇದೆ. ಇನ್ನೂ ಸತ್ಯದೇವ್ ಕೂಡ ಮತ್ತೊಬ್ಬ ಹೀರೋ ಆಗಿ ಅಭಿನಯಿಸಿದ್ದಾರೆ. ಸತ್ಯರಾಜ್, ಸತ್ಯ ಅಕ್ಕಲಾ, ಜೆನ್ನಿಫರ್ ಪಿಕ್ಕಿನಾಟೊ, ಸುನಿಲ್, ಪ್ರಿಯಾ ಭವಾನಿ ಶಂಕರ್ ಇನ್ನೀತರರು ತಾರಾಬಗಳದಲ್ಲಿದ್ದಾರೆ. ‘ಕೆಜಿಎಫ್’ ಮತ್ತು ‘ಸಲಾರ್’ ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣವಿದೆ.

    ಈ ಚಿತ್ರವನ್ನು ಎಸ್‌.ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡಿದ್ದಾರೆ.  ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ‘ಜೀಬ್ರಾ’ ಸಿನಿಮಾಗೆ ಈಶ್ವರ್ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

  • ಡಾಲಿ ಧನಂಜಯ್ ಈಗ ಕೋಟಿ ಕಾರಿನ ಒಡೆಯ

    ಡಾಲಿ ಧನಂಜಯ್ ಈಗ ಕೋಟಿ ಕಾರಿನ ಒಡೆಯ

    ನಂಜಯ್ (Dhananjay) ನಟನೆಯ 25ನೇ ಸಿನಿಮಾ `ಗುರುದೇವ್ ಹೊಯ್ಸಳ’ ಮಾರ್ಚ್ 30ರಂದು ತೆರೆ ಕಂಡಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸೌಂಡ್ ಮಾಡ್ತಿದೆ. 25ನೇ ಸಿನಿಮಾ ರಿಲೀಸ್ ಆಗಿರುವ ಶುಭ ಸಂದರ್ಭದಲ್ಲಿ ಡಾಲಿಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ಈ ಕುರಿತು ಡಾಲಿ ಸೋಷಿಯಲ್ ಮೀಡಿಯಾದಲ್ಲಿ ಖುಷಿ ಸುದ್ದಿ ಹೇಳಿಕೊಂಡಿದ್ದಾರೆ.

    ಡಾಲಿ- ಅಮೃತಾ ನಟನೆಯ `ಹೊಯ್ಸಳ’ ಸಿನಿಮಾ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಡಾಲಿ, ಅಮೃತಾ, ನವೀನ್ ಶಂಕರ್, ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. `ಗುರುದೇವ್ ಹೊಯ್ಸಳ’ ಕಥೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಡಾಲಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ದುಬಾರಿ ಬೆಲೆಯ Toyota Vellfire ಕಾರನ್ನ ಚಿತ್ರದ ನಿರ್ಮಾಪಕರಾದ ಕಾರ್ತಿಕ್- ಯೋಗಿ ಡಾಲಿಗೆ ಉಡುಗೊರೆ ನೀಡಿದ್ದಾರೆ.

    25ನೇ ಚಿತ್ರ ಮತ್ತು ನನ್ನ ವಿಶೇಷ ವ್ಯಕ್ತಿಗಳಿಂದ ವಿಶೇಷ ಉಡುಗೊರೆ. ಲವ್‌ ಯೂ ನಾವು ಒಟ್ಟಿಗೆ ಮಾಡಲಿರುವ ಹೆಚ್ಚು ಹೆಚ್ಚು ಕೆಲಸಗಳಿಗಾಗಿ ಚೀರ್ಸ್. ಇಂತಹ ಒಳ್ಳೆಯ ನೆನಪುಗಳಿಗೆ ಧನ್ಯವಾದಗಳು ಎಂದು ಡಾಲಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

    ಅಂದಹಾಗೆ ಡಾಲಿ ಇದೀಗ ಕೋಟಿ ಕಾರಿನ ಒಡೆಯನಾಗಿದ್ದಾರೆ. ನಿರ್ಮಾಪಕರಾದ ಕಾರ್ತಿಕ್-ಡಾಲಿ ಉಡುಗೊರೆ ನೀಡಿರುವ Toyota Vellfire ಕಾರಿಗೆ 1 ಕೋಟಿ ಬೆಲೆಯದಾಗಿದೆ.

  • ಡಾಲಿ-ಅಮೃತಾ ಆಫ್ ಸ್ಕ್ರೀನ್, ಆನ್ ಸ್ಕ್ರೀನ್‌ ಕೆಮಿಸ್ಟ್ರಿ ಸೂಪರ್ ಎಂದು ಲವ್ ಸೀಕ್ರೆಟ್ ಬಿಚ್ಚಿಟ್ಟ ರಮ್ಯಾ

    ಡಾಲಿ-ಅಮೃತಾ ಆಫ್ ಸ್ಕ್ರೀನ್, ಆನ್ ಸ್ಕ್ರೀನ್‌ ಕೆಮಿಸ್ಟ್ರಿ ಸೂಪರ್ ಎಂದು ಲವ್ ಸೀಕ್ರೆಟ್ ಬಿಚ್ಚಿಟ್ಟ ರಮ್ಯಾ

    ಡಾಲಿ- ಅಮೃತಾ ಅಯ್ಯಂಗಾರ್ (Amrutha Iyengar) ನಟನೆಯ `ಹೊಯ್ಸಳ’ (Hoysala Film) ಸಿನಿಮಾ ಮಾ.30ರಂದು ತೆರೆಗೆ ಅಬ್ಬರಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡ್ತಿರುವ ಈ ಚಿತ್ರದ ಬಗ್ಗೆ ರಮ್ಯಾ ಹಾಡಿ ಹೊಗಳಿದ್ದಾರೆ. ಡಾಲಿ-ಅಮೃತಾ ಲವ್ ಬಗ್ಗೆ ರಮ್ಯಾ (Ramya) ಸುಳಿವು ಬಿಟ್ಟು ಕೊಟ್ಟಿದ್ದಾರೆ.

    ಧನಂಜಯ್, ಅಮೃತಾ, ನವೀನ್ ಶಂಕರ್ ನಟನೆಯ `ಹೊಯ್ಸಳ’ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಡಾಲಿಯನ್ನ ನಟ ರಾಕ್ಷಸ ಅಂದ್ರೆ, ನವೀನ್ ಅವರನ್ನ ಬಲಿ ರಾಕ್ಷಸ ಅಂತಾ ಕರೆಯುತ್ತಿದ್ದಾರೆ. ಡಾಲಿ ಖಾಕಿ ಖದರ್ ಚಿತ್ರದಲ್ಲಿ ಕಮಾಲ್ ಮಾಡಿದೆ.

    ನಟಿ ರಮ್ಯಾ ಕೂಡ ಫಸ್ಟ್ ಡೇ ಫಸ್ಟ್ ಶೋ `ಹೊಯ್ಸಳ’ ಸಿನಿಮಾ ನೋಡಿ ಚಿತ್ರತಂಡಕ್ಕೆ ಭೇಷ್ ಎಂದಿದ್ದಾರೆ. ಚಿತ್ರದ ಬಗ್ಗೆ ವಿಮರ್ಶೆ ಹೇಳುವಾಗ ಡಾಲಿ- ಅಮೃತಾ ಬಗ್ಗೆ ರಮ್ಯಾ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

     

    View this post on Instagram

     

    A post shared by Amy❤️ (@amrutha_iyengar)

    ಈ ಸಿನಿಮಾದಲ್ಲಿ ಗಂಡ-ಹೆಂಡತಿಯಾಗಿ ಡಾಲಿ-ಅಮೃತ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಹೇಗಿದೆ? ನೀವೂ ಎಷ್ಟು ಮಾರ್ಕ್ಸ್ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಡಾಲಿ ಹಾಗೂ ಅಮೃತಾ ಇಬ್ಬರ ಆಫ್ ಲೈನ್ ಹಾಗೂ ಆನ್ ಲೈನ್ ಕೆಮಿಸ್ಟ್ರಿ ಸೂಪರ್ ಎಂದು ಹೇಳಿದ್ದಾರೆ. ‘ಗಂಡ-ಹೆಂಡತಿಯಾಗಿ ಧನಂಜಯ್​ ಮತ್ತು ಅಮೃತಾ ಚೆನ್ನಾಗಿ ನಟಿಸಿದ್ದಾರೆ. ಇಬ್ಬರ ನಟನೆಗೂ 10ಕ್ಕೆ 10 ಮಾರ್ಕ್ಸ್​ ನೀಡುತ್ತೇನೆ ಎಂದಿದ್ದಾರೆ. ಈ ಮೂಲಕ ಇಬ್ಬರ ಲವ್‌ ಬಗ್ಗೆ ರಮ್ಯಾ ಸುಳಿವು ಬಿಟ್ಟು ಕೊಟ್ಟಿದ್ದಾರೆ.

  • ನ್ಯೂ ಇಯರ್ ಪಾರ್ಟಿ ಮಾಡಲು ಲಂಡನ್‌ಗೆ ಹಾರಿದ ರಮ್ಯಾ- ಅಮೃತಾ

    ನ್ಯೂ ಇಯರ್ ಪಾರ್ಟಿ ಮಾಡಲು ಲಂಡನ್‌ಗೆ ಹಾರಿದ ರಮ್ಯಾ- ಅಮೃತಾ

    ಸ್ಯಾಂಡಲ್‌ವುಡ್ ಮೋಹಕತಾರೆ ರಮ್ಯಾ (Ramya) ಹೊಸ ವರ್ಷ ಅದ್ದೂರಿಯಾಗಿ ಸ್ವಾಗತಿಸಲು ಲಂಡನ್‌ಗೆ (London) ಹಾರಿದ್ದಾರೆ. ಪದ್ಮಾವತಿಗೆ ಸಾಥ್ ಕೊಡಲು ಅಮೃತಾ ಅಯ್ಯಂಗಾರ್ (Amrutha Iyengar) ಕೂಡ ಬಂದಿದ್ದಾರೆ. ಇದೀಗ ರಮ್ಯಾ, ಅಮೃತಾ ಇಬ್ಬರ ಮಸ್ತ್ ಮಸ್ತ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by Ramya|Divya Spandana (@divyaspandana)

    ನಟಿ ರಮ್ಯಾ ಮತ್ತೆ ನಟನೆಗೆ ಕಮ್‌ಬ್ಯಾಕ್ ಆಗುತ್ತಿದ್ದಾರೆ. ಚಿತ್ರರಂಗದಲ್ಲಿ ಆಕ್ಟೀವ್ ಆಗ್ತಿದ್ದಾರೆ. ಹೀಗಿರುವಾಗ ಹೊಸ ವರ್ಷ ಸಂತಸದಿಂದ ಬರಮಾಡಿಕೊಳ್ಳಲು ನಟಿ ಅಮೃತಾ ಜೊತೆ ಲಂಡನ್‌ಗೆ ಹಾರಿದ್ದಾರೆ. ದೂರದ ದೇಶ ಲಂಡನ್‌ನಲ್ಲಿ ಹೊಸ ಹೊಸ ಜಾಗಗಳಿಗೆ ಭೇಟಿ ಕೊಡುತ್ತಾ ಎಂಜಾಯ್‌ ಮಾಡ್ತಿದ್ದಾರೆ. ಈಗ ಲಂಡನ್ ಪ್ರವಾಸದಲ್ಲಿ ಮಸ್ತ್ ಮಜಾ ಮಾಡುತ್ತಿರುವ ಈ ಇಬ್ಬರ ನಟಿಯರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಪ್ರಶಾಂತ್ ನೀಲ್ ಸಿನಿಮಾದಲ್ಲಿ ಆಮೀರ್ ಖಾನ್: ಗಾಂಧಿನಗರ ಗುಸು ಗುಸು

     

    View this post on Instagram

     

    A post shared by Amy❤️ (@amrutha_iyengar)

    ಇನ್ನೂ ರಮ್ಯಾ ಮತ್ತು ಡಾಲಿ (Dhananjay) ನಟನೆಯ `ಉತ್ತರಾಕಾಂಡ’ (Uttarakanda) ಸಿನಿಮಾ 2023ರ ಜನವರಿಯಿಂದ ಶೂಟಿಂಗ್ ಶುರುವಾಗಲಿದೆ. ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಮೃತಾಗೆ ಡಾಲಿ ವಿಶ್ ಮಾಡಿದಕ್ಕೆ ಮದುವೆ ಯಾವಾಗ ಅಂತಾ, ಡಾಲಿ ಹಿಂದೆ ಬಿದ್ದ ಫ್ಯಾನ್ಸ್

    ಅಮೃತಾಗೆ ಡಾಲಿ ವಿಶ್ ಮಾಡಿದಕ್ಕೆ ಮದುವೆ ಯಾವಾಗ ಅಂತಾ, ಡಾಲಿ ಹಿಂದೆ ಬಿದ್ದ ಫ್ಯಾನ್ಸ್

    ಚಂದನವನದ ಬ್ಯೂಟಿ ಕ್ವೀನ್ ಅಮೃತ ಅಯ್ಯಂಗಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜತೆಗೆ ಧನಂಜಯ್ ಮತ್ತು ಅಮೃತಾ ಲವ್ ಗಾಸಿಪ್ ಬೆನ್ನಲ್ಲೇ ಸಹನಟಿಗೆ ಡಾಲಿ ವಿಶ್ ಮಾಡಿದ್ದಕ್ಕೆ ಮದುವೆ ಯಾವಾಗ ಅಂತಾ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

     

    View this post on Instagram

     

    A post shared by Dhananjaya KA (@dhananjaya_ka)

    `ಪಾಪ್ ಕಾರ್ನ್ ಮಂಕಿ ಟೈಗರ್’, `ಬಡವ ರಾಸ್ಕಲ್’ ಈ ಎರಡು ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಅದರಲ್ಲೂ `ಬಡವ ರಾಸ್ಕಲ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ, ಜೋಡಿ ಎಲ್ಲರ ಗಮನ ಸೆಳೆದಿತ್ತು. ನಂತರ ಖಾಸಗಿ ಶೋನಲ್ಲಿ ಡಾಲಿ, ಅಮೃತಾ ಪ್ರಪೋಸ್ ಮಾಡಿದ್ರು. ಈ ಸೀನ್ ನೈಜವಾಗಿ ಮೂಡಿ ಬಂದಿತ್ತು. ಈ ಸೀನ್ ಬಳಿಕ ಇವರಿಬ್ಬರು ಪ್ರೇಮಿಗಳು ಎಂದೇ ಬಿಂಬಿತರಾಗಿದ್ದರು. ನಂತರ ಲವ್‌ ಮತ್ತು ಮದುವೆ ಗಾಸಿಪ್‌ ಸುಳ್ಳು ಎಂದು ಈ ಜೋಡಿ, ಕ್ಲ್ಯಾರಿಟಿ ಕೊಟ್ಟಿದ್ದರು. ಈಗ ಅಮೃತಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಕ್ಕೆ ಡಾಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:Breaking- ಅಭಿಮಾನಿಗಳಿಗೆ ನಿವೇದಿತಾ ಗೌಡ ಗುಡ್ ನ್ಯೂಸ್

    ಧನಂಜಯ್ ಮತ್ತು ಅಮೃತಾ ಲವ್ ಗಾಸಿಪ್ ಬೆನ್ನಲ್ಲೇ ಡಾಲಿ ಬರೆದ ಸಂದೇಶ ವೈರಲ್ ಆಗಿದೆ. ಹುಟ್ಟುಹಬ್ಬದ ಶುಭಾಶಯಗಳು ಅಮೃತಾ, ದೇವರ ಹಾರೈಕೆಯಿರಲಿ, ಕೀಪ್ ರಾಕಿಂಗ್. ಈ ವರ್ಷ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಡಾಲಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಬಳಿಕವೇ ಫ್ಯಾನ್ಸ್ ನಿಮ್ಮ ಮದುವೆ ಯಾವಾಗ ಅಂತಾ ಕೇಳಿದ್ದಾರೆ. ಅಭಿಮಾನಿಗಳ ಈ ಪ್ರಶ್ನೆಗೆ ಈ ಜೋಡಿ ಎನು ಉತ್ತರ ನೀಡಲಿದ್ದಾರೆ. ಕಾದುನೋಡಬೇಕಿದೆ.

    `ಬಡವ ರಾಸ್ಕಲ್’ ಚಿತ್ರದ ನಂತರ ಮತ್ತೆ ಡಾಲಿ ಮತ್ತು ಅಮೃತಾ ಹೊಯ್ಸಳ ಚಿತ್ರದಲ್ಲಿ ಜತೆಯಾಗಿ ನಟಿಸುತ್ತಿದ್ದಾರೆ. ಇಬ್ಬರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೊಲೀಸರೊಂದಿಗೆ ಹೋದ್ರೂ ತಂದೆಯ ಅಂತಿಮ ದರ್ಶನ ಸಿಗದೆ ಅಮೃತಾ ವಾಪಸ್

    ಪೊಲೀಸರೊಂದಿಗೆ ಹೋದ್ರೂ ತಂದೆಯ ಅಂತಿಮ ದರ್ಶನ ಸಿಗದೆ ಅಮೃತಾ ವಾಪಸ್

    – ಮಗನೊಂದಿಗೆ ಕಾರಿನಿಂದ ಇಳಿಯುತ್ತಿದ್ದಂತೆ ಧಿಕ್ಕಾರ

    ಹೈದರಾಬಾದ್: ಪ್ರಣಯ್ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿ ರಾವ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಕೊನೆಯದಾಗಿ ಅಮೃತಾ ತನ್ನ ತಂದೆಯ ಅಂತಿಮ ದರ್ಶನ ಪಡೆಯಲು ಹೋಗಿದ್ದರು.

    ಮಾರುತಿ ರಾವ್ ಹೈದರಾಬಾದ್‍ನ ಖೈರತಾಬಾದ್ ಆರ್ಯವೈಶ್ಯ ಭವನನಲ್ಲಿ ಉಳಿದುಕೊಂಡಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಈತನ ಅಂತ್ಯಕ್ರಿಯೆ ಸೋಮವಾರ ಗಾಂಧಿನಗರದಲ್ಲಿ ನಡೆದಿದೆ. ಈ ವೇಳೆ ಅಮೃತಾ ತನ್ನ ತಂದೆಯ ಅಂತಿಮ ದರ್ಶನ ಮಾಡಲೆಂದು ಹೋಗಿದ್ದರು. ಆಗ ಮಾರುತಿ ರಾವ್‍ನ ಕೊನೆಯ ವಿಧಿ-ವಿಧಾನಗಳನ್ನು ನಡೆಸಲಾಗುತ್ತಿತ್ತು. ಇದನ್ನೂ ಓದಿ: ‘ಅಮೃತಾ ಅಮ್ಮನ ಬಳಿಗೆ ಬಾ’- ಮಗಳಿಗೆ ಮಾರುತಿ ರಾವ್ ಭಾವನಾತ್ಮಕ ಸಂದೇಶ

    ಅಮೃತಾ ಮೇಲೆ ಹಲ್ಲೆ ನಡೆಸುವ ಸಾಧ್ಯತೆಯಿದೆ ಎಂಬ ಅನುಮಾನದಿಂದ ಪೊಲೀಸರು ಎಚ್ಚರಿಕೆವಹಿಸಿದ್ದರು. ಹೀಗಾಗಿ ಅಮೃತಾಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಅಮೃತಾ ತನ್ನ ಮಗುವಿನೊಂದಿಗೆ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಮಾರುತಿ ರಾವ್‍ನ ಹತ್ತಾರು ಮಂದಿ ಹಿತೈಷಿಗಳು ಅಮೃತಾರನ್ನು ಸುತ್ತುವರಿದರು. ಅಲ್ಲದೆ ಅನೇಕರು ಅಮೃತಾಗೆ ಧಿಕ್ಕಾರ ಕೂಗಿದರು.

    ಅಷ್ಟೇ ಅಲ್ಲದೆ ತಂದೆಯ ಸಾವಿಗೆ ನೀನೇ ಕಾರಣ ಎಂದು ಬೈಯುತ್ತಾ, ಮಾರುತಿ ರಾವ್ ಅಮರವಾಗಿರಲಿ ಎಂದು ಘೋಷಣೆ ಕೂಗಿದರು. ಆದರೂ ಅಮೃತಾ ತಂದೆಯನ್ನು ಹತ್ತಿರದಿಂದ ನೋಡಲು ಮುಂದೆ ಹೋಗುತ್ತಿದ್ದರು. ತಕ್ಷಣ ಅನೇಕ ಮಂದಿ ಆಕೆಯನ್ನು ಅಲ್ಲೇ ತಡೆದರು. ಕೊನೆಗೆ ದೂರದಿಂದಲೇ ತಂದೆಯ ಮುಖವನ್ನು ನೋಡಿ ಪೊಲೀಸರ ಜೊತೆ ಬಂದಿದ್ದ ಕಾರಿನಲ್ಲೇ ಅಮೃತಾ ವಾಪಸ್ ಹೋಗಿದ್ದಾರೆ.

    ಮಾರುತಿ ರಾವ್ ಕಿರಿಯ ಸೋದರ ಶ್ರವಣ್ ಮಾರುತಿ ರಾವ್ ನ ಅಂತಿಮ ಕ್ರಿಯೆಯನ್ನು ನೆರವೇರಿಸಿದ್ದಾರೆ. ತಂದೆಯ ಸಾವಿನ ಸುದ್ದಿ ತಿಳಿದ ನಂತರ ಮಾತನಾಡಿದ್ದ ಅಮೃತಾ, ಪ್ರಣಯ್ ಹತ್ಯೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು  ಎಂದು ಹೇಳಿದ್ದರು.

  • ‘ಅಮೃತಾ ಅಮ್ಮನ ಬಳಿಗೆ ಬಾ’- ಮಗಳಿಗೆ ಮಾರುತಿ ರಾವ್ ಭಾವನಾತ್ಮಕ ಸಂದೇಶ

    ‘ಅಮೃತಾ ಅಮ್ಮನ ಬಳಿಗೆ ಬಾ’- ಮಗಳಿಗೆ ಮಾರುತಿ ರಾವ್ ಭಾವನಾತ್ಮಕ ಸಂದೇಶ

    ಹೈದರಾಬಾದ್: ದೇಶಾದ್ಯಂತ ಸಂಚಲನವನ್ನು ಉಂಟು ಮಾಡಿದ್ದ ಆಂಧ್ರ ಪ್ರದೇಶದ ಪ್ರಣಯ್ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿ ರಾವ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಇದೀಗ ಮಾರುತಿ ರಾವ್ ಕೊನೆಯದಾಗಿ ತನ್ನ ಮಗಳಿಗೆ ಭಾವನಾತ್ಮಕ ಸಂದೇಶ ಬರೆದಿರುವ ಡೆತ್‍ನೂಟ್ ಪತ್ತೆಯಾಗಿದೆ.

    ಮಾರುತಿ ರಾವ್ ಹೈದರಾಬಾದ್‍ನ ಖೈರತಾಬಾದ್ ಆರ್ಯವೈಶ್ಯ ಭವನನಲ್ಲಿ ಉಳಿದುಕೊಂಡಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಇದೀಗ ಅದೇ ರೂಮಿನ ಡ್ರೆಸ್ಸಿಂಗ್ ಟೇಬಲ್ ಮೇಲೆ ಡೆತ್‍ನೋಟ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ:  ಪ್ರಣಯ್ ಮರ್ಯಾದಾ ಹತ್ಯೆ ಕೇಸ್- ಅಮೃತಾ ತಂದೆ ಆತ್ಮಹತ್ಯೆ

    ಡೆತ್‍ನೋಟ್‍ನಲ್ಲಿ ಪತ್ನಿ ಮತ್ತು ಮಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. ಮೊದಲಿಗೆ ಪತ್ನಿಗೆ ಗಿರಿಜಾ ನನ್ನನ್ನು ಕ್ಷಮಿಸು ಎಂದು ಬರೆದಿದ್ದಾನೆ. ನಂತರ ಅಮೃತಾ ಅಮ್ಮನ ಬಳಿ ಬಾ ಎಂದು ಬರೆದಿದ್ದಾನೆ. ಸದ್ಯಕ್ಕೆ ಪೊಲೀಸರು ಇದು ಮಾರುತಿ ರಾವ್ ಕೈ ಬರವೇ ಎಂದು ಪರಿಶೀಲನೆ ಮಾಡುತ್ತಿದ್ದಾನೆ. ಇದನ್ನೂ ಓದಿ: ತಂದೆಯಿಂದ ಪತಿಯನ್ನು ಕಳೆದುಕೊಂಡಿದ್ದ ಅಮೃತಾಗೆ ಗಂಡು ಮಗು ಜನನ

    ಪ್ರಣಯ್ ಹತ್ಯೆಯ ಬಳಿ ಅಮೃತಾ ಅಮ್ಮನ ಮನೆಗೆ ಹೋಗಿಲ್ಲ. ಬದಲಿಗೆ ಪ್ರಣಯ್ ಅಮ್ಮ ಅಮೃತಾ ಮತ್ತು ಮೊಮ್ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಮೃತಾಗೆ ತನ್ನ ಅಮ್ಮನ ಬಳಿ ಹೋಗುವಂತೆ ಮಾರುತಿ ರಾವ್ ಡೆತ್‍ನೋಟಿನಲ್ಲಿ ತಿಳಿಸಿದ್ದಾನೆ.

    ಏನಿದು ಪ್ರಕರಣ?
    ಮಾರುತಿ ರಾವ್ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡಿನಿಂದ ಕೆಲಸ ಇದೆ ಎಂದು ಮನೆಯಿಂದ ಹೈದರಾಬಾದ್‍ಗೆ ಹೋಗುವುದಾಗಿ ಪತ್ನಿ ಗಿರಿಜಾಗೆ ತಿಳಿಸಿದ್ದನು. ಆದರೆ ಯಾವ ಕೆಲಸ ಎಂದು ಪತ್ನಿಗೆ ತಿಳಿಸಿರಲಿಲ್ಲ. ಅಲ್ಲದೇ ತನ್ನ ಚಾಲಕ ರಾಜೇಶ್‍ಗೂ ಏನು ಹೇಳದೆ ಕರೆದುಕೊಂಡು ಹೋಗಿದ್ದನು. ಶನಿವಾರ ಆರ್ಯವೈಶ್ಯ ಭವನಕ್ಕೆ ಹೋಗಿ ಊಟಿ ಮಾಡಿ ರೂಮ್‍ಗೆ ಹೋಗಿದ್ದನು. ಚಾಲಕ ಕಾರಿನಲ್ಲಿಯೇ ಮಲಗಿದ್ದನು.

    ಮಾರುತಿ ರಾವ್‍ಗೆ ಪತ್ನಿ ಎಷ್ಟೇ ಬಾರಿ ಫೋನ್ ಕರೆ ಮಾಡಿದರೂ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಮಾಹಿತಿ ನೀಡಿದ ವೇಳೆ ಘಟನೆ ಬೆಳಕಿಗೆ ಬಂದಿತ್ತು. ಮಾರುತಿ ರಾವ್ ಪತ್ನಿ ನೀಡಿದ ಮಾಹಿತಿ ಮೇರೆಗೆ ಆರ್ಯವೈಶ್ಯ ಭವನದ ಸಿಬ್ಬಂದಿ ಕೊಠಡಿಯ ಬಾಗಿಲು ಮುರಿದು ಒಳ ಪ್ರವೇಶ ಮಾಡಿದ್ದರು. ಈ ವೇಳೆ ಆತ ವಿಷ ಸೇವನೆ ಮಾಡಿರುವುದು ಬೆಳಕಿಗೆ ಬಂದಿತ್ತು.

  • ಪ್ರಣಯ್ ಮರ್ಯಾದಾ ಹತ್ಯೆ ಕೇಸ್- ಅಮೃತಾ ತಂದೆ ಆತ್ಮಹತ್ಯೆ

    ಪ್ರಣಯ್ ಮರ್ಯಾದಾ ಹತ್ಯೆ ಕೇಸ್- ಅಮೃತಾ ತಂದೆ ಆತ್ಮಹತ್ಯೆ

    ಹೈದರಾಬಾದ್: ದೇಶಾದ್ಯಾಂತ ಸಂಚಲನವನ್ನು ಉಂಟು ಮಾಡಿದ್ದ ಆಂಧ್ರಪ್ರದೇಶದ ಪ್ರಣಯ್ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿ ರಾವ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಪುತ್ರಿ ಅಮೃತಾ ತನಗೆ ಇಷ್ಟವಿಲ್ಲದೆ ದಲಿತ ಯುವಕನೊಂದಿಗೆ ಮದುವೆಯಾದ ಕಾರಣ ಅಳಿಯ ಪ್ರಣಯ್‍ನನ್ನು ಕಳೆದ 2 ವರ್ಷಗಳ ಹಿಂದೆ ಸುಪಾರಿ ನೀಡಿ ಮಾರುತಿ ರಾವ್ ಕೊಲೆ ಮಾಡಿಸಿದ್ದ. ಈ ಪ್ರಕರಣದಲ್ಲಿ ಇತ್ತಿಚೆಗಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿ ಮಾರುತಿ ರಾವ್ ಹೈದರಾಬಾದ್‍ನ ಖೈರತಾಬಾದ್ ಆರ್ಯವೈಶ್ಯ ಭವನನಲ್ಲಿ ಉಳಿದುಕೊಂಡಿದ್ದನು. ಈ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಾರುತಿ ರಾವ್ ಪತ್ನಿ ಎಷ್ಟೇ ಬಾರಿ ಫೋನ್ ಕರೆ ಮಾಡಿದರೂ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಮಾಹಿತಿ ನೀಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ.

    ಮಾರುತಿ ರಾವ್ ಪತ್ನಿ ನೀಡಿದ ಮಾಹಿತಿ ಮೇರೆಗೆ ಆರ್ಯವೈಶ್ಯ ಭವನದ ಸಿಬ್ಬಂದಿ ಕೊಠಡಿಯ ಬಾಗಿಲು ಮುರಿದು ಒಳ ಪ್ರವೇಶ ಮಾಡಿದ್ದರು. ಈ ವೇಳೆ ಆತ ವಿಷ ಸೇವನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಅಲ್ಲದೆ ಆ ವೇಳೆಗಾಗಲೇ ಸಾವನ್ನಪ್ಪಿರುವುದು ತಿಳಿದುಬಂದಿತ್ತು. ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಾರುತಿ ರಾವ್ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ನನಗೆ ಹಣ, ಆಸ್ತಿ ಬೇಡ- ತಂದೆಯನ್ನ ಗಲ್ಲಿಗೇರಿಸಿ: ಅಮೃತಾ ಆಕ್ರೋಶದ ಮಾತು

    ಆಂಧ್ರಪ್ರದೇಶದ ನಲ್ಗೋಂಡ ಜಿಲ್ಲೆಯ ಮಿರ್ಯಾಲಗೂಡು ನಿವಾಸಿಯಾಗಿದ್ದ ಮಾರುತಿ ರಾವ್ ರಿಯಲ್ ಎಸ್ಟೇಟ್ ವ್ಯವಹಾರದಿಂದ ಕೋಟಿ ಕೋಟಿ ಆಸ್ತಿ ಗಳಿಸಿದ್ದರು. ಆ ವೇಳೆ ಮಾರುತಿ ರಾವ್ ಪುತ್ರಿ ಅಮೃತಾ ದಲಿತ ಯುವಕ ಪ್ರಣಯ್‍ನನ್ನು ಪ್ರೀತಿಸಿ ವಿವಾಹವಾಗಿದ್ದರು. ಇದನ್ನು ಸಹಿಸದ ಮಾರುತಿ ರಾವ್ 2018ರ ಸೆ.15 ರಂದು ಐದು ತಿಂಗಳ ಗರ್ಭಿಣಿ ಅಮೃತ ಪತಿಯೊಂದಿಗೆ ನರ್ಸಿಂಗ್ ಹೋಮ್‍ಗೆ ಹೋಗಿ ವಾಪಸ್ ಬರುವ ಸಂದರ್ಭದಲ್ಲಿ ಪ್ರಣಯ್‍ನನ್ನು ಕೊಲೆ ಮಾಡಿದ್ದರು. ಅದಕ್ಕೂ ಮುನ್ನವೇ ಆತನ ಕೊಲೆಗೆ 4 ಬಾರಿ ಪ್ರಯತ್ನಿಸಿದ್ದಾಗಿ ಮಾರುತಿ ರಾವ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದ. ಇದನ್ನೂ ಓದಿ: ಮರ್ಯಾದಾ ಹತ್ಯೆ- ಗರ್ಭಿಣಿ ಅಮೃತಾಗೆ ಸರ್ಕಾರಿ ಉದ್ಯೋಗ, ಮನೆ, 8.25 ಲಕ್ಷ ರೂ. ಪರಿಹಾರ

    ಪ್ರಕರಣದಲ್ಲಿ ಮಾರುತಿ ರಾವ್ ಹಾಗೂ ಆತನ ಸಹೋದರ ಸೇರಿದಂತೆ ಹಂತಕನ ವಿರುದ್ಧ ದೂರು ದಾಖಲಿಸಿ ವಿಚಾರಣೆ ನಡೆಸಲಾಗಿತ್ತು. ಪ್ರಕರಣದಲ್ಲಿ ವಾರಂಗಲ್ ಸೆಂಟ್ರಲ್ ಜೈಲಿನಲ್ಲಿದ್ದ ಮಾರುತಿ ರಾವ್ ಕೆಲ ದಿನಗಳ ಹಿಂದೆ ಜಾಮೀನು ಪಡೆದು ಹೊರ ಬಂದಿದ್ದ. ಇದನ್ನೂ ಓದಿ: ಮರ್ಯಾದಾ ಹತ್ಯೆಗೆ ಬಲಿಯಾದ ಪ್ರಣಯ್ ಬದುಕಿರುವುದು ಈ ವಿಡಿಯೋದಲ್ಲಿ ಮಾತ್ರ

    ಆಸ್ತಿಗಾಗಿ ಒತ್ತಡ: ಕೊಲೆ ಪ್ರಕರಣದಲ್ಲಿ ಸಹೋದರರಿಬ್ಬರು ಜೈಲು ಪಾಲಾಗಿದ್ದರು. ಇತ್ತ ಪುತ್ರಿ ಅಮೃತಾ ಕೂಡ ಕುಟುಂಬಸ್ಥರ ವಿರೋಧದ ನಡುವೆಯೂ ಮದುವೆಯಾದ ಹಿನ್ನೆಲೆಯಲ್ಲಿ ಕೋಟಿ ಕೋಟಿ ಮೌಲ್ಯದ ಮಾರುತಿ ರಾವ್ ಆಸ್ತಿಯನ್ನು ತನ್ನ ಮಕ್ಕಳ ಹೆಸರಿಗೆ ಮಾಡಿಕೊಂಡು ಸಹೋದರ ಒತ್ತಡ ಹಾಕಿದ್ದ ಎನ್ನಲಾಗಿದೆ. ಆಸ್ತಿಗಾಗಿ ಸಹೋದರ ಒತ್ತಡ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಮಾರುತಿರಾವ್ ಹೆಚ್ಚು ಹೈದರಾಬಾದ್‍ನಲ್ಲೇ ಉಳಿದುಕೊಳ್ಳುತ್ತಿದ್ದ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಮುಂದಾಗಿರಬಹುದು ಎಂಬ ಶಂಕೆ ಮೂಡಿದೆ. ಇದನ್ನೂ ಓದಿ: ತಂದೆಯಿಂದ ಪತಿಯನ್ನು ಕಳೆದುಕೊಂಡಿದ್ದ ಅಮೃತಾಗೆ ಗಂಡು ಮಗು ಜನನ

  • ಓ ಹೆಣ್ಣೇ ನೀನೆಷ್ಟು ಕ್ರೂರಿ!

    ಓ ಹೆಣ್ಣೇ ನೀನೆಷ್ಟು ಕ್ರೂರಿ!

    ಮುರುಳೀಧರ್ ಎಚ್.ಸಿ
    ವಳ ಹೊಟ್ಟೆಯಲ್ಲಿ ಕಂದಮ್ಮ ಕುಡಿಯೊಡೆಯುವಾಗ ಒಹೋ ಅದೆಂಥ ಸಂಭ್ರಮ. ಬದುಕು ಸಾರ್ಥಕವಾಯ್ತು ಅಂತಾ ತನ್ನ ತುಂಬು ಹೊಟ್ಟೆಯನ್ನು ಅದೆಷ್ಟು ಬಾರಿ ಸವರಿ ಖುಷಿಪಟ್ಟಿತ್ತೋ ಆ ತಾಯಿ ಜೀವ. ಇನ್ನೇನು ಯಾತನೆಯ ನೋವಿನ ಮಧ್ಯೆ ಅವಳ ಮಡಿಲಲ್ಲಿ ಕಂದಮ್ಮ ಕಿಲಕಿಲನೆ ನಗುತ್ತಿದ್ಲು. ನೋಡನೋಡುತ್ತಿದ್ದಂತೆ ಅಂಬೆಗಾಲಿಡುತ್ತ ಅಮ್ಮನ ಅಪ್ಪಿಕೊಳ್ಳುವ ಪುಟ್ಟ ಪುಟ್ಟ ಕೈಗೆ ಆ ಅಮ್ಮ ಅದೆಷ್ಟು ಬಾರಿ ಮುತ್ತಿಟ್ಟಿದ್ದಳು.

    ಚಂದಮಾಮನ ತೋರಿಸಿ ತುತ್ತು ತಿನ್ನಿಸಿದ ಮಗಳು ದೊಡ್ಡವಳಾದ್ಲು. ಅಮ್ಮನ ಕನಸಿಗೆ ರೆಕ್ಕೆಪುಕ್ಕ ಬರುವ ಸಮಯ. ಆದರೆ ಮಗಳು, ಅಮ್ಮ ನಿರಮ್ಮಳವಾಗಿ ಸವಿನಿದ್ದೆಯ ಸಮಯದಲ್ಲಿದ್ಲು ಬಹುಶಃ ಅಮ್ಮನ ಕನವರಿಕೆಯಲ್ಲೂ ಮಗಳ ಭವಿಷ್ಯದ ಕನಸಿತ್ತೇನೋ? ಆದ್ರೇ ಅದೇ ನಿದ್ದೆಯಲ್ಲಿದ್ದಾಗ ಅಮ್ಮನ ಎದೆಗೆ ಮಗಳು ಚಾಕು ಚುಚ್ಚೇಬಿಟ್ಲು ನೋಡಿ. ಉಫ್ ಅಮ್ಮಂಗೆ ಮಗಳು ಚಾಕು ಚುಚ್ಚೋದು ಕಂಡಿತಾ? ಚಾಕು ಚುಚ್ಚಿದಕ್ಕೆ ಅಮ್ಮ ರಕ್ತಕಾರಿ ಸತ್ಲಾ? ಅಥವಾ ಮಗಳು ಚಾಕು ಚುಚ್ಚುತ್ತಾ ಇರುವ ರಕ್ತಸಿಕ್ತ ಚಾಕುವನ್ನೇ ನೋಡಿ ತಾಯಿ ಗೋಣುಚೆಲ್ಲಿದ್ಲಾ? ಗೊತ್ತಿಲ್ಲ. ಆದ್ರೇ ಬೆಂಗಳೂರಿನ ಕೆಆರ್ ‌ಪುರಂನಲ್ಲಿ ಅಮ್ಮನ ಕೊಂದ ಕೊಲೆಗಾತಿ ಮಗಳ ಕಥೆ ಇಡೀ ರಾಜ್ಯವನ್ನು ಕಣ್ಣೀರಲ್ಲಿ ಕೈತೊಳೆಸುವಂತೆ ಮಾಡಿತ್ತು. ಥೂ ಅಮ್ಮ ತನ್ನ ಮಗಳಿಗೆ ಅದೆಷ್ಟು ಚಂದದ ಹೆಸ್ರು ಇಟ್ಟಿದ್ಲು ನೋಡಿ ಅಮೃತಾ ಅಂತಾ. ಆದ್ರೇ ತಾಯಿಯ ಬದುಕಿಗೆ ವಿಷವಾಗಿ ಬಿಟ್ಲು ಪಾಪಿ. ಅಕ್ಕಪಕ್ಕದ ಮನೆಯವರೆಲ್ಲ ಕಣ್ಣೀರಾದ್ರೂ ತನ್ನ ತಾಯಿಯನ್ನೇ ಬಿಗಿದಪ್ಪಿದ ಅದೇ ಕೈಯಿಂದ ಚಾಕು ಹಿಡಿದು ಕೊಲೆ ಮಾಡಿದ ಅಮೃತಾ ಕಣ್ಣಲ್ಲಿ ಕಣ್ಣೀರೆ ಇರಲಿಲ್ಲ. ಬಿಡಿ ಅವಳು ಮನುಷ್ಯಳಾಗೋಕೆ ಯೋಗ್ಯಳು ಅಲ್ಲ.

    ನವ ಮಾಸ ಹೊತ್ತು ಹೆತ್ತವಳಿಗೆ ಆಕೆ ಕೊಟ್ಟಿದ್ದು ಮಾತ್ರ ಅದೊಂದು ದೊಡ್ಡ ಬಹುಮಾನ, ಅಂಬೆಗಾಲು ಇಡುವ ಮಗುವಿನ ಕಾಲಿಗೆ ಮುತ್ತಿಟ್ಟವಳ ಬಾಯಿ ಕಟ್ಟಿದ್ಲು. ಮಗಳೇ ಅನ್ನೋ ಪದಕ್ಕೆ ಅವಳು ಅನ್ವರ್ಥವೇ ಆಗಿಬಿಟ್ಟಳು. ಇದು ಕೋಮಲ ಹೃದಯವನ್ನೂ ಕುದಿಯವಂತೆ ಮಾಡಿತ್ತು. ಹೆಣ್ಣು ಕ್ಷಮಯಾಧರಿತ್ರಿ, ರೂಪೇಶು ಮಾತೇ ಅಂತೆಲ್ಲಾ ಕರೆಯೋ ಹೆಣ್ಣು ಜೀವ ಹೆಮ್ಮಾರಿಯಾದ್ರೆ ಏನುಬೇಕಾದ್ರೂ ಆಗಿ ಹೋಗುತ್ತೆ. ಹೆಣ್ಣು ಆದಿ ಅಂತ್ಯವೂ ಆಗಿರ್ತಾಳೆ. ಆದ್ರೆ, ಈ ಹೆಣ್ಣು ಆದಿಯಾಗಿದ್ದ ತಾಯಿಗೆ ಅಂತ್ಯವನ್ನು ಹಾಡಿದ್ಲು.

    ಅಮೃತಾ ಹೆಸರೇ ಹೇಳುವಂತೆ ಅದೊಂದು ಕಲ್ಮಶವೇ ಇಲ್ಲದ ಜೀವ ಆಗಿರ್ಬೇಕಿತ್ತು. ಆದ್ರೆ, ಈ ಅಮೃತಾ ಹೆಸರಿಗೆ ಅನ್ವರ್ಥಳಾಗಿದ್ದಾಳೆ. ತಾಯಿಯನ್ನು ಅದ್ಯಾವ ಕಾರಣಕ್ಕೆ ಚಾಕು ಚುಚ್ಚಿ ಕೊಂದ್ಲೋ ದೇವರೇ ಬಲ್ಲ. ಟೆಕ್ಕಿ ಅಮೃತಾಗೆ ಒಳ್ಳೆಯ ಹುದ್ದೆ, ಕೈತುಂಬಾ ಸಂಬಳ ಇತ್ತು. ಬದುಕನ್ನು ಕರ್ಪೂರದಂತೆ ಮಗಳಿಗಾಗಿ ಸವೆಸಿದ ತಾಯಿಯ ಭರಪೂರ ಪ್ರೀತಿಯಿತ್ತು. ಸದಾ ಕಾಟ ಕೊಟ್ಟು ಜಗತ್ತಿನಲ್ಲಿ ಅತ್ಯಂತ ಪ್ರೀತಿ ಕೊಡುವ ಪುಟ್ಟ ತಮ್ಮನೂ ಇದ್ದ. ಆದ್ರೇ ಅವತ್ತು ಅದೇನಾಗಿತ್ತೋ ಈ ಪಾಪಿಗೆ ನಿದ್ದೆ ಮಂಪರಿನಲ್ಲಿದ್ದ ತಾಯಿಯ ಎದೆಗೆ ಚಾಕು ಚುಚ್ಚಿದ್ಲು. ಇನ್ನು ತನ್ನೊಂದಿಗೆ ಅಕ್ಕ ಅಕ್ಕ ಅಂತಾ ಅಮೃತಾಳಲ್ಲಿ ತಾಯಿಯನ್ನು ಕಂಡ ಆ ತಮ್ಮನ ದೇಹದಲ್ಲಿಯೂ ರಕ್ತ ಕಾಣೋಕೆ ಹಪಹಪಿಸಿದ್ಲು ರಾಕ್ಷಸಿ. ತಮ್ಮನಿಗೆ ಚಾಕು ಚುಚ್ಚೋಕೆ ಶುರು ಮಾಡಿದ್ಲು. ಆ ಹುಡ್ಗನ ಅದೃಷ್ಟ ಚೆನ್ನಾಗಿತ್ತು ಅನ್ಸುತ್ತೆ. ಜಸ್ಟ್ ಕೊಲೆಯಿಂದ ತಪ್ಪಿಸಿಕೊಂಡ. ಹಿಂಗೆ ಒಂದ್ ಕೊಲೆ, ಒಂದ್ ಕೊಲೆ ಯತ್ನ ಮಾಡಿ ಅದೆಷ್ಟು ತಣ್ಣಗೆ ಪ್ರಿಯಕರನ ಬೈಕ್‍ನ್ನು ಏರಿದ್ಲು ಅಂದ್ರೆ ಇನ್‍ಫ್ಯಾಕ್ಟ್ ಅದೇ ಬೈಕ್‍ನ್ನು ಏರಿದ್ದಕ್ಕೆ ಆಕೆ ತಗ್ಲಾಕ್ಕೊಂಡ್ಲು. ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಹಂಗಂಗೆ ಸೆರೆಯಾಗಿತ್ತು. ಒಂದ್‍ಕ್ಷಣ ಖಾಕಿ ತೊಟ್ಟವರು ಕೂಡ ಹೊಟ್ಟೆಯಲ್ಲಿ ಹುಟ್ಟಿದ ಮಗಳೇ ಕೊಲೆ ಮಾಡಿದ್ದಾಳೆ ಅಂತಾ ನಂಬೋಕೆ ತಯಾರಿರಲಿಲ್ಲ. ಆದರೆ ಅದ್ಯಾವಾಗ ತಮ್ಮ ಅಕ್ಕನ ಪಾಪದ ಕೃತ್ಯವನ್ನು ಇಂಚಿಂಚಾಗಿ ಹೇಳೋಕೆ ಶುರುಮಾಡಿದ್ನೋ ಖಡಕ್ ಖಾಕಿ ಕಣ್ಣಲ್ಲಿ ಕೂಡ ಆ ತಾಯಿಯ ಕೊನೆಯ ಕ್ಷಣದ ಕೊಸರಾಟ ನೆನೆಸಿ ಕಣ್ಣ ನೀರನ್ನು ಮರೆಮಾಚಿದ್ರು. ಹಾ ಪ್ರಿಯಕರನ ಸೊಂಟ ಹಿಡಿದು ಬೈಕ್ ಏರಿದ ಈ ಕಿರಾತಕಿ ಹೋಗಿದ್ದೆಲ್ಲಿ ಗೊತ್ತಾ ಸೀದಾ ಅಂಡಮಾನ್‍ಗೆ. ಅಸಲಿಗೆ ಅಮ್ಮನ ಕೊಲೆ ಮಾಡಿ ಬೆಚ್ಚಗೆ ಪ್ರಿಯಕರನ ಜೊತೆ ಕೂತವಳಿಗೆ ಸಣ್ಣ ನೋವು ಕಾಡಿಲ್ವಾ ಅಂತಾ ಖಾಕಿ ಕೂಡ ಅದೆಷ್ಟೋ ಬಾರಿ ಆಕೆಯ ಕೈಗೆ ಕೋಳ ಹಾಕಿದಾಗ ಪ್ರಶ್ನಿಸಿದೆ.

    ಇನ್ನು ಪ್ರಿಯಕರ. ಆತನಿಗೆ ತನ್ನ ಮನದನ್ನೆಯ ಸ್ಕೆಚ್ ಮೊದಲೇ ಗೊತ್ತಿತ್ತಾ ಗೊತ್ತಿಲ್ವಾ. ಪೊಲೀಸರಿಗೆ ಇನ್ನೂ ಕನ್‍ಫ್ಯೂಶನ್..! ಅಂಡಮಾನ್‍ಗೆ ಟ್ರಿಪ್ ಹೋಗಿದ್ದ ಅಮೃತಾಗಳಿಗೆ ಒದೆಕೊಟ್ಟು ಪೊಲೀಸರು ಎತ್ತಾಕ್ಕೊಂಡು ಬಂದ್ರು. ಕೊಲೆಗಾತಿ ಪೊಲೀಸ್ರ ಕೈಗೆ ಸಿಕ್ಕಿ ಬಿದ್ಲು, ಆದ್ರೆ, ಆಕೆ ಕೊಲೆ ಮಾಡಿದ್ಯಾಕೆ? ಕೊಲೆ ಮಾಡೋಕೆ ಆಕೆಗೆ ಇದ್ದ ಕಾರಣ ಏನು ಅನ್ನೋದು ಇನ್ನೂ ನಿಗೂಢವಾಗಿಯೇ ಉಳಿದು ಬಿಟ್ಟಿದೆ. ಒಳ್ಳೆಯ ಓದನ್ನು ಓದಿಕೊಂಡಿದ್ದ ಅಮೃತಾ ಪೊಲೀಸ್ರ ವಿಚಾರಣೆಯಲ್ಲಿ ತಡಬಡಿಸಿದ್ದು ಬಿಟ್ಟರೆ ನಿಖರ ಕಾರಣ ಇಲ್ಲಿಯವರಗೂ ಹೇಳಲೇ ಇಲ್ಲ.

    ತಾಯಿಯನ್ನು ಯಾಕಮ್ಮ ಕೊಂದೆ ಅಂತ ಪೊಲೀಸ್ರು ಪರಿ ಪರಿಯಾಗಿ ಕೇಳಿದ್ರು ಆಕೆ ಹೇಳಿದ್ದು ಮಾತ್ರ, ಕಂತೆ ಕಂತೆ ಸ್ಟೋರಿಗಳನ್ನು ಮಾತ್ರ. ನಾನು ಸಾಲ ಮಾಡಿಕೊಂಡಿದ್ದೆ. ಸಾಲ ತೀರಿಸೋಕೆ ಆಗುತ್ತಿರಲಿಲ್ಲ. ಪ್ರೀತಿ ಮಾಡ್ತಾ ಇದ್ದೇ ಅದನ್ನು ಉಳಿಸಿಕೊಳ್ಳೊದಕ್ಕೂ ಆಗ್ತಾ ಇರ್ಲಿಲ್ಲ ಅನ್ನೋದನ್ನಷ್ಟೇ ಹೇಳೋ ಅಮೃತಾ ಕೊನೆಗೆ ಪೊಲೀಸ್ರಿಗೆ ಕೈ ಮುಗಿದು ನನ್ನನ್ನ ಸಾಯಿಸಿಬಿಡಿ ಅಂತಾಳೆ.

    ಮಗಳು ಸಾಲ ಮಾಡಿಕೊಂಡಿದ್ದಕ್ಕೆ ತಾಯಿ ಕೊಲೆ ಮಾಡೋದು ಸರಿನಾ ಅನ್ನೋ ಪ್ರಶ್ನೆ ಬಂದೇ ಬರುತ್ತೆ. ತಾ ಮಾಡಿಕೊಂಡ ಸಾಲದ ಬಗ್ಗೆ ಹೇಳಿಕೊಂಡಿದ್ರೆ ತಾಯಿ ತನ್ನ ಕೈಲಾದ ಸಹಾಯ ಮಾಡುತ್ತಾ ಇದ್ಲು ಅಲ್ವಾ. 9 ತಿಂಗಳು ಗರ್ಭಗುಡಿಯಲ್ಲಿ ಸಾಕಿ ಸಲಹಿದ್ದವಳು ಮಗಳನ್ನು ಬೀದಿಗೆ ಬಿಡುತ್ತಾ ಇದ್ದಳಾ ಅನ್ನೋ ಪ್ರಶ್ನೆ ಹುಟ್ಟದೇ ಇರೋದಿಲ್ಲ. ಈಗ ಅಮೃತಾ ವಿಚಾರದಲ್ಲೂ ಅದೇ ಆಗಿರೋದು.

    ಅಮೃತಾ ತಾಯಿಯನ್ನು ಕೊಲ್ಲೋದಕ್ಕೂ ಮುನ್ನ ಎಷ್ಟು ಪ್ಲಾನ್ ಮಾಡಿದ್ಲು ಅಂದರೆ ಅವಳು ಈ ಮಟ್ಟಿಗಿನ ಕಲ್ಮಶವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾಳೆ ಅನ್ನೋದು ಯಾರಿಗೂ ಗೊತ್ತೇ ಇರ್ಲಿಲ್ಲ. ಪ್ರಿಯತಮನ ಜೊತೆ ಅಂಡಮಾನ್‍ಗೆ ಹೋಗೋಳು 15 ದಿನ ಮುನ್ನವೇ ಟಿಕೆಟ್ ಅನ್ನು ಬುಕ್ ಮಾಡಿದ್ಲು. ಟಿಕೆಟ್ ಬುಕ್ ಮಾಡಿದವಳಿಗೆ 15 ದಿನ ಕಾಲಾವಕಾಶವೂ ಇತ್ತು. ತನ್ನ ತಪ್ಪನ್ನು ತಾಯಿಯ ಮಡಿಲಲ್ಲಿ ಮಲಗಿ ಹೇಳಿಕೊಂಡಿದ್ರೆ ನಿರ್ಮಲ ಮನಸ್ಸಿನ ತಾಯಿ ಏನಾದ್ರು ಮಾಡುತ್ತಾ ಇದ್ದಳು ಅನ್ಸುತ್ತೆ. ಇವತ್ತು ಅವಳು ಮಾಡಿದ ಕೆಲಸ ತಲೆ ಎತ್ತದಂತೆ ಮಾಡಿದೆ. ತಲೆ ಎತ್ತೋದು ಇರ್ಲಿ, ಇಡೀ ಸಮಾಜವೇ ಇವಳಿಂದ ತಲೆ ತಗ್ಗಿಸುವಂತೆ ಮಾಡಿದೆ.

  • ಸಾರ್ವಜನಿಕರಲ್ಲಿ ವಿನಂತಿ: ಕೊಲೆಯ ಸಿಕ್ಕು ಬಿಡಿಸುತ್ತಾ ಸಖತ್ ಥ್ರಿಲ್ ನೀಡೋ ಚಿತ್ರ!

    ಸಾರ್ವಜನಿಕರಲ್ಲಿ ವಿನಂತಿ: ಕೊಲೆಯ ಸಿಕ್ಕು ಬಿಡಿಸುತ್ತಾ ಸಖತ್ ಥ್ರಿಲ್ ನೀಡೋ ಚಿತ್ರ!

    ಬೆಂಗಳೂರು: ವಿಭಿನ್ನವಾದ ಕ್ರೈಂ ಥ್ರಿಲ್ಲರ್ ಕಥೆಯ ಸುಳಿವು ಕೊಡುತ್ತಲೇ ಪ್ರೇಕ್ಷಕರನ್ನು ಕಾಯುವಂತೆ ಮಾಡಿದ್ದ ಸಾರ್ವಜನಿಕರಲ್ಲಿ ವಿನಂತಿ ಚಿತ್ರ ತೆರೆ ಕಂಡಿದೆ. ಒಂದು ಕೊಲೆ ಮತ್ತು ಅದರ ಸುತ್ತ ಬಿಚ್ಚಿಕೊಳ್ಳೋ ರಂಗು ರಂಗಾದ ಕಥನಗಳು ಮತ್ತು ಅದೆಲ್ಲದರ ತಾರ್ಕಿಕ ಅಂತ್ಯವಾಗುವಲ್ಲಿ ಅಮೂಲ್ಯವಾದೊಂದು ಸಂದೇಶ. ಇವಿಷ್ಟು ಎಲಿಮೆಂಟುಗಳೊಂದಿಗೆ ಮಾಮೂಲಿ ಚಿತ್ರಗಳಿಗಿಂತಲೂ ಒಂಚೂರು ವಿಭಿನ್ನವಾಗಿಯೇ ಪ್ರೇಕ್ಷಕರನ್ನು ತಾಕುವಲ್ಲಿ ಸಾರ್ವಜನಿಕರಲ್ಲಿ ವಿನಂತಿ ಯಶ ಕಂಡಿದೆ.

    ಇದು ಕೃಪಾ ಸಾಗರ್ ನಿರ್ದೇಶನ ಮಾಡಿರುವ ಚೊಚ್ಚಲ ಚಿತ್ರ. ಈ ಮೊದಲ ಹೆಜ್ಜೆಯಲ್ಲಿಯೇ ಅವರು ಸಂಕೀರ್ಣವಾದ ಕಥೆಯೊಂದನ್ನು ಆರಿಸಿಕೊಂಡಿದ್ದಾರೆ. ಇಲ್ಲಿ ಹಲವಾರು ಘಟನಾವಳಿಗಳ ಗುಚ್ಛವಿದೆ. ಹಳ್ಳಿ ಘಮಲಿನ ಸನ್ನಿವೇಶಗಳಿವೆ. ಚೂರೇ ಚೂರು ಎಡವಟ್ಟಾದರೂ ಸೂತ್ರ ಸಂಬಂಧ ಕಡಿದು ಹೋಗುವಂಥಾ, ಎಚ್ಚರ ತಪ್ಪಿದರೂ ಸಿಕ್ಕಾಗಿ ಬಿಡುವಂಥಾ ಕಥೆಯನ್ನು ಕೃಪಾ ಸಾಗರ್ ಇಲ್ಲಿ ಲೀಲಾಜಾಲವಾಗಿಯೇ ನಿರೂಪಣೆ ಮಾಡಿದ್ದಾರೆ. ಈ ಕಾರಣದಿಂದಲೇ ಸಾರ್ವಜನಿಕರಲ್ಲಿ ವಿನಂತಿ ಹೊಸ ಅಲೆಯ ಚಿತ್ರವಾಗಿ ತಾನೇ ತಾನಾಗಿ ದಾಖಲಾಗುವಷ್ಟು ಪರಿಣಾಮಕಾರಿಯಾಗಿಯೂ ಮೂಡಿ ಬಂದಿದೆ.

    ಒಂದು ಹಳ್ಳಿ. ಅದರಲ್ಲಿ ಪ್ರತೀ ಹಳ್ಳಿಗಳಲ್ಲಿರುವಂಥಾದ್ದೇ ಒಂದು ಹುಡುಗರ ಗುಂಪು. ಅದರಲ್ಲಿ ಪ್ರತಿಯೊಬ್ಬರಿಗೂ ಮಾಡಲೊಂದು ಕೆಲಸವಿದೆಯೋ ಇಲ್ಲವೋ. ಆದರೆ ಅವರೆಲ್ಲರಿಗೂ ಒಂದೊಂದು ಲವ್ವಿರುತ್ತೆ. ಅಂಥಾ ಲವ್ವಿನ ಹಿನ್ನೆಲೆಯೊಂದಿಗೇ ತೆರೆದುಕೊಳ್ಳುವ ಕಥೆಯನ್ನು ನಿರ್ದೇಶಕರು ಜಾಣ್ಮೆಯಿಂದಲೇ ಕ್ರೈಂ ಥ್ರಿಲ್ಲರ್ ಟ್ರ್ಯಾಕಿನತ್ತ ಹೊರಳಿಸಿದ್ದಾರೆ. ಈ ಹುಡುಗರ ಗುಂಪಿನ ಪರಮ ಸೋಮಾರಿ ಆಸಾಮಿಗೆ ಹೇಗೋ ಹುಡುಗಿಯೊಬ್ಬಳು ಸಿಕ್ಕು ಮದುವೆಯೂ ಆಗುತ್ತೆ. ಆದರೆ ಈತನ ವರ್ತನೆಯಿಂದ ರೇಜಿಗೆ ಹುಟ್ಟಿಸಿಕೊಳ್ಳೋ ಆಕೆ ಅಸಮಾಧಾನವನ್ನು ಧರಿಸಿಕೊಂಡೇ ಬದುಕುತ್ತಿರುತ್ತಾಳೆ. ಈ ನಡುವೆ ಅದೇ ಊರ ತೋಟದಲ್ಲೊಂದು ಕೊಲೆ ನಡೆಯುತ್ತದೆ. ಆ ಕೊಲೆ ಕೇಸಲ್ಲಿ ಈ ಸೋಮಾರಿ ಆಸಾಮಿಯನ್ನು ಪೊಲೀಸರು ಎತ್ತಾಕಿಕೊಂಡು ಹೋಗಿ ಟ್ರೀಟ್‍ಮೆಂಟು ಕೊಡುತ್ತಾರೆ.

    ಅಸಲಿಗೆ ಆ ಕೊಲೆಗೂ ಈ ಸೋಮಾರಿಗೂ ಸಂಬಂಧವಿರೋದಿಲ್ಲ. ಅಲ್ಲಿಂದಾಚೆಗೆ ಆ ಕೊಲೆಗೆ ಕಾರಣವೇನೆಂಬುದನ್ನು ಪೊಲೀಸರು ಬೆಂಬೀಳುತ್ತಾರೆ. ಆ ಪೊಲೀಸರ ಹುಡುಕಾಟದೊಂದಿಗೇ ಒಟ್ಟಾರೆ ಕಥೆ ಪ್ರತೀ ಕ್ಷಣವೂ ಕಾತರದಿಂದ ಕಾಯುವಂತೆ ಚಲಿಸುತ್ತದೆ. ಹಾಗಾದರೆ ಆ ಕೊಲೆಗೆ ಕಾರಣವೇನು? ಅದಕ್ಕೂ ಅಂಡಲೆಯೋ ಊರ ಹುಡುಗರಿಗೂ ಸಂಬಂಧವಿರುತ್ತಾ ಎಂಬ ಕುತೂಹಲಕ್ಕೆ ಮಜವಾದ ಉತ್ತರವೇ ಕಾದಿದೆ. ಈ ಮೂಲಕವೇ ನಿರ್ದೇಶಕರಾಗಿ ಕೃಪಾ ಸಾಗರ್ ಕೂಡಾ ಭರವಸೆ ಮೂಡಿಸುವಂಥಾ ಚಿತ್ರವನ್ನೇ ಕಟ್ಟಿ ಕೊಟ್ಟಿದ್ದಾರೆ.

    ನಾಯಕನಾಗಿ ಮದನ್ ರಾಜ್ ರಂಗಭೂಮಿಯ ಕಸುವನ್ನೆಲ್ಲ ಒಗ್ಗೂಡಿಸಿಕೊಂಡು ನಟಿಸಿದ್ದಾರೆ. ನಾಯಕಿ ಅಮೃತಾ ಕೂಡಾ ಅಷ್ಟೇ ಚೆನ್ನಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ರಮೇಶ್ ಪಂಡಿತ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಎಂದಿನಂತೆ ಚೆಂದಗೆ ನಟಿಸಿದ್ದಾರೆ. ಯಾವ ಪಾತ್ರವೂ ಇಲ್ಲಿ ಸುಮ್ಮನೆ ತುರುಕಿದಂತಿಲ್ಲ. ಪ್ರತಿಯೊಂದು ಪಾತ್ರಗಳೂ ಚಿತ್ರದ ಕಥೆಗೆ ಟ್ವಿಸ್ಟು ನೀಡುತ್ತಾ ವೇಗ ಹೆಚ್ಚಿಸುವಂತಿವೆ. ಅನಿಲ್ ಪಿಜೆ ಹಿನ್ನೆಲೆ ಸಂಗೀತ ಮತ್ತು ಅನಿಲ್ ಕುಮಾರ್ ಕೆ ಅವರ ಛಾಯಾಗ್ರಹಣ ಇಡೀ ಚಿತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿವೆ.

    ರೇಟಿಂಗ್: 3.5/5

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]