Tag: ಅಮೂಲ್ಯ ಗೌಡ

  • ಶ್ರೀಗೌರಿ ಆಗಿ ಬಂದ ‘ಬಿಗ್ ಬಾಸ್’ ಅಮೂಲ್ಯ ಗೌಡ

    ಶ್ರೀಗೌರಿ ಆಗಿ ಬಂದ ‘ಬಿಗ್ ಬಾಸ್’ ಅಮೂಲ್ಯ ಗೌಡ

    ಮಲಿ, ಬಿಗ್ ಬಾಸ್ ಶೋ (Bigg Boss Kannada 9) ಮೂಲಕ ಮನೆ ಮಾತಾದ ನಟಿ ಅಮೂಲ್ಯ ಗೌಡ (Amulya Gowda) ಅವರು ಇದೀಗ ಶ್ರೀಗೌರಿಯಾಗಿ (Shreegowri) ಮಿಂಚಲು ರೆಡಿಯಾಗಿದ್ದಾರೆ. ಗೌರಿ ಆಗಿ ಕಿರುತೆರೆ ಲೋಕದಲ್ಲಿ ಬೆಳಗಲು ಅಮೂಲ್ಯ ಸಜ್ಜಾಗಿದ್ದಾರೆ.

    ಕಳೆದ ಬಿಗ್ ಬಾಸ್ ಸೀಸನ್ 9ರಲ್ಲಿ ನಟಿ ಅಮೂಲ್ಯ ಕಾಣಿಸಿಕೊಂಡ ಮೇಲೆ ತೆಲುಗು ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದರು. ಈಗ ‘ಶ್ರೀಗೌರಿ’ ಎಂಬ ಹೊಸ ಧಾರಾವಾಹಿಯನ್ನ ನಟಿ ಒಪ್ಪಿಕೊಂಡಿದ್ದಾರೆ. ಪ್ರೋಮೋದಲ್ಲಿ ನಟಿಯ ಲುಕ್ ರಿವೀಲ್ ಆಗಿದೆ. ಅಮೂಲ್ಯ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ವಿನಯ್ ಫೇಕ್, ಆದರೆ ವರ್ತೂರ್ ಸಂತೋಷ್ ಗೆಲ್ಲಬೇಕು- ಅವಿನಾಶ್ ಶೆಟ್ಟಿ

    ಪ್ರೊಮೋದಲ್ಲಿ ಪ್ರತಿ ಇರುವೆಗೂ ಕೂಡ ನೋವು ಆಗದೆ ಇರುವ ಹಾಗೆ ನೋಡಿಕೊಳ್ಳುತ್ತಾ ಇರುವ ಹುಡುಗಿ, ಯಾವ ರೀತಿ ಲೆಕ್ಕ ಹಾಕಿದರೂ ಇವಳೇ ಸರಿ, ಯಾವಾಗಲೂ ಹೀಗೆ ಪ್ರೀತಿಯಲ್ಲಿ ನನ್ನ ಕಟ್ಟಿ ಹಾಕಿ ಬಿಡುತ್ತಾಳೆ, ನನ್ನ ಮಗಳು, ನನ್ನ ಉಸಿರು, ನನ್ನ ಗೌರಿ, ಆದರೆ ರಾತ್ರಿ ಹೊತ್ತಿಗೆ ನನ್ನ ಉಸಿರೇ ನಿಂತು ಹೋಗುತ್ತೆ, ಮುದ್ದಿನ ಮಗಳಿಗೆ ಪ್ರತಿ ರಾತ್ರಿ ಗ್ರಹಣ ಎಂದು ಪ್ರೋಮೋದಲ್ಲಿದೆ.

     

    View this post on Instagram

     

    A post shared by Amulya M O (@amulya_gowdaa_official)

    ತಂದೆ ಮತ್ತು ಮಗಳ ಬಾಂಧವ್ಯ ಸಾರುವ ಕಥೆಯಾಗಿದ್ದು, ತಂದೆ ಪಾತ್ರದಲ್ಲಿ ಸುನೀಲ್ ಪುರಾಣಿಕ್ ಅಭಿನಯಿಸಿದ್ದಾರೆ. ಮಗಳು ಗೌರಿಯಾಗಿ ಅಮೂಲ್ಯ ಗೌಡ ಬಣ್ಣ ಹಚ್ಚಿದ್ದಾರೆ. ನಾಯಕಿ ಅಮೂಲ್ಯ ಎಂಬುದು ರಿವೀಲ್ ಆಗಿದೆ. ಆದರೆ ನಾಯಕ ನಟ ಯಾರು ಎಂಬುದು ವಾಹಿನಿ ಬಿಟ್ಟು ಕೊಟ್ಟಿಲ್ಲ.

    ಒಟ್ನಲ್ಲಿ ಅಮೂಲ್ಯ ಎಂಟ್ರಿ ಮತ್ತು ಮುಗ್ಧತೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಶ್ರೀಗೌರಿ ಸೀರಿಯಲ್ ಪ್ರೋಮೋ ಸದ್ದು ಮಾಡುತ್ತಿದೆ. ಆದರೆ ಸೀರಿಯಲ್ ಪ್ರಸಾರದ ದಿನಾಂಕ ಇನ್ನೂ ಅಂತಿಮವಾಗಿಲ್ಲ.

  • ತೆಲುಗಿನತ್ತ ‘ಬಿಗ್‌ ಬಾಸ್‌’ ಖ್ಯಾತಿಯ ಅಮೂಲ್ಯ ಗೌಡ

    ತೆಲುಗಿನತ್ತ ‘ಬಿಗ್‌ ಬಾಸ್‌’ ಖ್ಯಾತಿಯ ಅಮೂಲ್ಯ ಗೌಡ

    ಮಲಿ, ಬಿಗ್ ಬಾಸ್ (Bigg Boss Kannada) ಖ್ಯಾತಿಯ ಅಮೂಲ್ಯ ಗೌಡ (Amulya) ಇದೀಗ ತೆಲುಗಿನ (Telagu) ಕಿರುತೆರೆಯತ್ತ ಮುಖ ಮಾಡಿದ್ದಾರೆ. ಬಿಗ್ ಬಾಸ್ ಶೋ ಆದ್ಮೇಲೆ ಮೊದಲ ಬಾರಿಗೆ ಟಿವಿಪರದೆಯಲ್ಲಿ ಅಮೂಲ್ಯ ದರ್ಶನ ಕೊಡ್ತಿದ್ದಾರೆ.

    ‘ಗುಂಡೇನಿಂದ ಗುಡಿ ಗಂಟಲು’ ಎಂಬ ತೆಲುಗಿನ ಸೀರಿಯಲ್ ಮೂಲಕ ಅಮೂಲ್ಯ ಕಾಣಿಸಿಕೊಳ್ತಿದ್ದಾರೆ. ಗೃಹಿಣಿಯಾಗಿ ಅಮೂಲ್ಯ ಸೀರಿಯಲ್‌ನಲ್ಲಿ ಜೀವತುಂಬಿದ್ದಾರೆ. ಕುಡುಕ ಗಂಡನನ್ನು ಸರಿ ದಾರಿಗೆ ತರುವ ಪಾತ್ರದಲ್ಲಿ ನಟಿಸಿದ್ದಾರೆ.

    ಕಮಲಿಯಾಗಿ (Kamali) ಕನ್ನಡ ಸಿನಿಪ್ರೇಕ್ಷಕರ ಮನಗೆದ್ದ ನಟಿ ಅಮೂಲ್ಯ ಬಳಿಕ ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು. ಫಿನಾಲೆ ತಲುಪುವ ಒಂದು ವಾರದ ಮುನ್ನ ದೊಡ್ಮನೆಯಿಂದ ಔಟ್ ಆದರು. ಇದನ್ನೂ ಓದಿ:ಸಮಂತಾ ಔಟ್‌, ರಶ್ಮಿಕಾ ಮಂದಣ್ಣಗೆ ಸಿಕ್ತು ಬಿಗ್‌ ಚಾನ್ಸ್

    ‘ಬಿಗ್ ಬಾಸ್’ ಶೋ ಬಳಿಕ ತೆಲುಗಿನ ಧಾರಾವಾಹಿ ಒಪ್ಪಿಕೊಳ್ಳುವ ಮೂಲಕ ನಟನೆಗೆ ಮರಳಿದ್ದಾರೆ. ಕನ್ನಡ ಚಿತ್ರಗಳಲ್ಲಿ ನಟಿಸಲು ಕಥೆ ಕೇಳ್ತಿದ್ದಾರೆ ಎನ್ನಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ಒಂದಾದ ‘ಬಿಗ್ ಬಾಸ್’ ಮನೆಮಂದಿ – ರಾಕಿ ಬಗ್ಗೆ ದೂರಿದ ದಿವ್ಯಾ ಉರುಡುಗ

    ಮತ್ತೆ ಒಂದಾದ ‘ಬಿಗ್ ಬಾಸ್’ ಮನೆಮಂದಿ – ರಾಕಿ ಬಗ್ಗೆ ದೂರಿದ ದಿವ್ಯಾ ಉರುಡುಗ

    ಕಿರುತೆರೆಯ ಬಿಗ್ ರಿಯಾಲಿಟಿ ಶೋ ‘ಬಿಗ್ ಬಾಸ್ʼ (Bigg Boss Kannada) ಕಾರ್ಯಕ್ರಮ ಮುಗಿದ ಮೇಲೂ ಆ ಸ್ಪರ್ಧಿಗಳು ಜೊತೆಯಾಗೋದು ತುಂಬಾ ಕಮ್ಮಿ. ಆದರೆ ಸೀಸನ್ 9ರ ಬಿಗ್ ಬಾಸ್ ಸ್ಪರ್ಧಿಗಳು ಹಲವು ತಿಂಗಳುಗಳ ನಂತರ ಮತ್ತೆ ಜೊತೆಯಾಗಿದ್ದಾರೆ. ಈ ಕುರಿತ ಫೋಟೋಗಳನ್ನ ದಿವ್ಯಾ ಉರುಡುಗ ಶೇರ್ ಮಾಡಿ, ರಾಕೇಶ್ ಅಡಿಗ ಅವರ ಎಡವಟ್ಟಿನ ಬಗ್ಗೆ ಹೇಳಿ ದೂರಿದ್ದಾರೆ.

    ಒಂದು ಸಿನಿಮಾ, ಸೀರಿಯಲ್ ಅಥವಾ ರಿಯಾಲಿಟಿ ಶೋ ಮುಗಿದ ಮೇಲೆ ಜೊತೆಗೆ ಕೆಲಸ ಮಾಡಿದ ಕಲಾವಿದರು ಮತ್ತೆ ಜೊತೆಯಾಗುವುದು ತೀರಾ ಕಡಿಮೆ. ಆದರೆ ಬಿಗ್ ಬಾಸ್ ಸೀಸನ್ 9 ಸ್ಪರ್ಧಿಗಳು ಶೋನಲ್ಲಿ ಫ್ರೆಂಡ್ಸ್ ಆಗಿದ್ದು, ದೊಡ್ಮನೆ ಆಟ ಮುಗಿದ ಮೇಲೂ ಸ್ನೇಹವನ್ನ ಉತ್ತಮ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಿದ್ದಾರೆ. ಇದನ್ನೂ ಓದಿ:ಶೂಟಿಂಗ್ ವೇಳೆ ಶಾರುಖ್ ಖಾನ್‌ಗೆ ಪೆಟ್ಟು- ಆಸ್ಪತ್ರೆಗೆ ದಾಖಲು

    ಇದೀಗ ಮತ್ತೆ ರಾಕೇಶ್ ಅಡಿಗ ಜೊತೆ ಅಮೂಲ್ಯ, ನೇಹಾ, ಅನುಪಮಾ, ದಿವ್ಯಾ ಉರುಡುಗ (Divya Uruduga) ಕಾಣಿಸಿಕೊಂಡಿದ್ದಾರೆ. ಪೆಂಡಿಂಗ್ ಇದ್ದ ಅನುಪಮಾ ಬರ್ತ್‌ಡೇಯನ್ನ ಖುಷಿಯಿಂದ ಸೆಲೆಬ್ರೇಟ್ ಮಾಡಿದ್ದಾರೆ. ರಾಕೇಶ್ ಗ್ಯಾಂಗ್ ಒಂದೆಡೆ ಸೇರಿ ಮೋಜು- ಮಸ್ತಿ ಮಾಡಿದ್ದಾರೆ. ಎಲ್ಲರೂ ನಗುಮುಖದಿಂದ ಇರುವ ಖುಷಿಯ ಫೋಟೋವನ್ನ ದಿವ್ಯಾ ಉರುಡುಗ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ, ರಾಕೇಶ್ ಅಡಿಗ (Rakesh Adiga) ಅವರನ್ನ ನಟಿ ದೂರಿದ್ದಾರೆ.

    ದಿವ್ಯಾ ಹಂಚಿಕೊಂಡ ಕೊನೆಯ ಫೋಟೋದಲ್ಲಿ ನಟಿ ಧರಿಸಿದ್ದ ಪ್ಯಾಂಟ್‌ಗೆ ಏನೋ ಕಲೆ ಆಗಿದೆ. ಈ ಬಗ್ಗೆ ನಟಿ ಮಾತನಾಡಿದ್ದಾರೆ. ಪ್ಯಾಂಟ್ ಮೇಲೆ ಬಿದ್ದಿರುವ ಕಲೆ ಏನು ಎಂಬ ಪ್ರಶ್ನೆಗೆ ಅನೇಕರಲ್ಲಿ ಮೂಡಬಹುದು ಎನ್ನುವ ಕಾರಣಕ್ಕೆ ಶೇರ್ ಮಾಡಿದ ಪೋಸ್ಟ್‌ನಲ್ಲಿ ಕ್ಯಾಪ್ಶನ್‌ನಲ್ಲಿ ಈ ವಿಚಾರವನ್ನು ದಿವ್ಯಾ ಮೊದಲೇ ತಿಳಿಸಿದ್ದಾರೆ. ರಾಕೇಶ್ ಅಡಿಗ ಒಂದು ಬೌಲ್ ಸೂಪ್‌ನ ಕಾಲಿನ ಮೇಲೆ ಹಾಗೂ ಶೂ ಮೇಲೆ ಚೆಲ್ಲಿದ್ದಾನೆ ಎಂದು ದಿವ್ಯಾ ಬರೆದುಕೊಂಡಿದ್ದಾರೆ. ಒಟ್ನಲ್ಲಿ ಬಿಗ್ ಬಾಸ್ ಮನೆ ಮಂದಿ ಶೋ ಮುಗಿದ ಮೇಲೂ ಹೀಗೆ ಜೊತೆಯಾಗಿರೋದನ್ನ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ಅಭಿಷೇಕ್ – ಮಹೇಶ್ ಕಾಂಬಿನೇಷನ್ ಚಿತ್ರದಲ್ಲಿ ನಟಿ ಅಮೂಲ್ಯ

    ನಟ ಅಭಿಷೇಕ್ – ಮಹೇಶ್ ಕಾಂಬಿನೇಷನ್ ಚಿತ್ರದಲ್ಲಿ ನಟಿ ಅಮೂಲ್ಯ

    ಸುಂದರಿ, ಅಗ್ನಿಸಾಕ್ಷಿ, ನನ್ನರಸಿ ರಾಧೆ, ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಮೋಡಿ ಮಾಡಿರುವ ಚೆಲುವೆ ಅಮೂಲ್ಯ ಗೌಡ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. `ಕುರುಡು ಕಾಂಚಣ’ (Kurudu Kanchana) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಬಗ್ಗೆ ಇತ್ತೀಚಿಗೆ ಅಪ್‌ಡೇಟ್ ನೀಡಿದ್ದರು. ಇದೀಗ ಮತ್ತೊಂದು ಚಿತ್ರಕ್ಕೆ ಅಮೂಲ್ಯ ಆಯ್ಕೆಯಾಗಿದ್ದಾರೆ.

    2016ರಲ್ಲಿ `ಸುಂದರಿ’ ಧಾರಾವಾಹಿ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ಅಮೂಲ್ಯ ಬಳಿಕ ಶಮಂತ್ ಗೌಡ ಜೊತೆ `ಮರೆಯಲಾರೆ’ ಎಂಬ ಬ್ರೇಕಪ್ ಸಾಂಗ್‌ನಲ್ಲಿ ನಟಿಸಿದ್ದರು. ಸಾಕಷ್ಟು ಜಾಹಿರಾತಿನಲ್ಲಿ ಮಾಡೆಲ್ ಆಗಿ ಕಾಣಿಕೊಂಡಿದ್ದಾರೆ. ಇದೀಗ ಸಿನಿಮಾದತ್ತ ಮುಖ ಮಾಡಿದ್ದಾರೆ.

    ಅಭಿಷೇಕ್ ಅಂಬರೀಶ್ ಮತ್ತು ʻಮದಗಜʼ ನಿರ್ದೇಶಕ ಮಹೇಶ್ ಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿರುವ ಚಿತ್ರದಲ್ಲಿ ನಟಿ ಅಮೂಲ್ಯ ಗೌಡ (Amoolya Gowda) ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಅಪ್‌ಡೇಟ್‌ ಸಿಗುವವರೆಗೂ ಕಾದುನೋಡಬೇಕಿದೆ.

  • ʻಒಲವ ಘಮವುʼ ಆಲ್ಬಂ ಸಾಂಗ್‌ಗೆ ಧ್ರುವ ಸರ್ಜಾ ಮೆಚ್ಚುಗೆ

    ʻಒಲವ ಘಮವುʼ ಆಲ್ಬಂ ಸಾಂಗ್‌ಗೆ ಧ್ರುವ ಸರ್ಜಾ ಮೆಚ್ಚುಗೆ

    ಕಿರುತೆರೆ ನಟಿ ಅಮೂಲ್ಯ ಗೌಡ (Amoolya Gowda) ಇದೀಗ ಸ್ಯಾಂಡಲ್‌ವುಡ್ (Sandalwood) ಪಾದಾರ್ಪಣೆ ಮಾಡಿದ್ದಾರೆ. `ಕುರುಡು ಕಾಂಚಾಣ’ (Kurudu Kanchana) ಸಿನಿಮಾ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡ್ತಿದ್ದಾರೆ. ಈ ಬೆನ್ನಲ್ಲೇ `ಒಲವ ಘಮವು’ ಎಂಬ ಆಲ್ಬಂ ಸಾಂಗ್ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ಅಮೂಲ್ಯ ತಂಡದ ಹೊಸ ಹೆಜ್ಜೆಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ನೀಡಿದ್ದಾರೆ.

    ಟಿವಿಪರದೆಯಲ್ಲಿ ಮಿಂಚ್ತಿದ್ದ ನಟಿ ಅಮೂಲ್ಯ ಗೌಡ ಅವರು ಈಗ ಆಲ್ಬಂ ಸಾಂಗ್‌ನಿಂದ ಗಮನ ಸೆಳೆಯುತ್ತಿದ್ದಾರೆ. ʻಒಲವ ಘಮವುʼ ಎಂಬ ಬ್ಯೂಟಿಫುಲ್ ಟ್ರ್ಯಾಕ್ ಅನ್ನ `ಮಾರ್ಟಿನ್’ ಹೀರೋ ಧ್ರುವ ಸರ್ಜಾ (Dhruva Sarja) ರಿಲೀಸ್ ಮಾಡುವ ಮೂಲಕ ತಂಡಕ್ಕೆ ಶುಭಹಾರೈಸಿದ್ದಾರೆ. ಸಾಂಗ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಹೊಸಬರಿಗೆ ಸದಾ ಸಾಥ್ ನೀಡುವ ಧ್ರುವ ಇದೀಗ ಅಮೂಲ್ಯ ಆ್ಯಂಡ್ ಟೀಂ ಪ್ರಯತ್ನಕ್ಕೆ ಶ್ಲಾಘಿಸಿದ್ದಾರೆ. ಇದನ್ನೂ ಓದಿ:  ಕ್ರಿಕೆಟರ್ ಶುಭಮನ್ ಗಿಲ್ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ರಶ್ಮಿಕಾ ಮಂದಣ್ಣ

     

    View this post on Instagram

     

    A post shared by Amoolya Gowda???? (@amoolya_gowda)

    ಈ ಸುಂದರ ಹಾಡಿನ ಮೂಲಕ ಮುದ್ದಾದ ಪ್ರೇಮ ಕಥೆಯನ್ನ ತೋರಿಸಲಾಗಿದೆ. ಮುಖ್ಯ ಭೂಮಿಕೆಯಲ್ಲಿ ನಟಿ ಅಮೂಲ್ಯ ಮತ್ತು ಆನಂದ್ ಜೀವತುಂಬಿದ್ದಾರೆ. ಮೀರಾ ಚಂದ್ರ ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ಕಿರಣ್ ಕೃಷ್ಣಮೂರ್ತಿ ಅವರು ಸಂಗೀತ ನೀಡಿದ್ದು, ಸಾಯಿ ಸರ್ವೇಶ್ ಸಾಹಿತ್ಯ ಬರೆದಿದ್ದಾರೆ.

    `ಒಲವ ಘಮವು’ ಸಾಂಗ್ ರಿಲೀಸ್ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಸಾಂಗ್ ಸದ್ದು ಮಾಡುತ್ತಿದೆ.

  • ಸೋನುಗೆ ಕೈಕೊಟ್ಟು ಅಮೂಲ್ಯ ಜೊತೆ ರಾಕೇಶ್ ಅಡಿಗ ಸುತ್ತಾಟ

    ಸೋನುಗೆ ಕೈಕೊಟ್ಟು ಅಮೂಲ್ಯ ಜೊತೆ ರಾಕೇಶ್ ಅಡಿಗ ಸುತ್ತಾಟ

    ಬಿಗ್ ಬಾಸ್ ಸೀಸನ್ 9ರ ಆಟಕ್ಕೆ ಈಗಾಗಲೇ ಬ್ರೇಕ್ ಬಿದ್ದಿದೆ. ರೂಪೇಶ್ ಶೆಟ್ಟಿ (Roopesh Shetty) ಈ ಸೀಸನ್‌ನ ವಿನ್ನರ್ ಆಗಿದ್ದು, ರಾಕೇಶ್ ಅಡಿಗ (Rakesh Adiga) ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ (Bigg Boss House) ಲವ್ ಬರ್ಡ್ಸ್ ಆಗಿ ರಾಕೇಶ್, ಅಮೂಲ್ಯ ಗುರುತಿಸಿಕೊಂಡಿದ್ದರು. ಈ ಶೋ ಬಳಿಕವೂ ಇವರಿಬ್ಬರ ಸ್ನೇಹ ಮುಂದುವರೆದಿದೆ. ರಾಕಿ ಮತ್ತು ಅಮ್ಮು ಮೀಟಿಂಗ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ದೊಡ್ಮನೆಯಲ್ಲಿ ರೂಪೇಶ್ ಮತ್ತು ಸಾನ್ಯ, ರಾಕೇಶ್ ಮತ್ತು ಅಮೂಲ್ಯ ಪ್ರೇಮ ಪಕ್ಷಿಗಳಾಗಿ ಹೈಲೈಟ್ ಆಗಿದ್ದಾರೆ. ಒಟಿಟಿಯಲ್ಲಿ ಸೋನು ಗೌಡ (Sonu Srinivas Gowda) ಜೊತೆ ರಾಕೇಶ್ ಹೈಲೈಟ್ ಆಗಿದ್ದರು. ರಾಕೇಶ್ ಕೂಡ ಟಿವಿ ಬಿಗ್ ಬಾಸ್‌ನ (Bigg Boss) ಫೈನಲಿಸ್ಟ್ ಆದಾಗ ಸೋನು ಸಂಭ್ರಮಿಸಿದ್ದರು. ಹೊರಗಿನಿಂದಲೇ ಸೋನು ರಾಕಿಗೆ ಬೆಂಬಲ ನೀಡುತ್ತಲೇ ಬಂದಿದ್ದರು. ಈಗ ಸೋನುನ ಬಿಟ್ಟು ಅಮೂಲ್ಯ ಜೊತೆ ರಾಕೇಶ್ ಸುತ್ತಾಡುತ್ತಿದ್ದಾರೆ. ಇದನ್ನೂ ಓದಿ: ಡಿವೋರ್ಸ್ ನಂತರ ಆಧ್ಯಾತ್ಮದತ್ತ ಹೊರಳಿದ್ರಾ ನಟಿ ಸಮಂತಾ

    ಶೋನಲ್ಲಿ ನಮ್ಮಿಬ್ಬರ ನಡುವೆ ಇಂತಹದೇನಿಲ್ಲ ಎಂದು ಹೇಳುತ್ತಲೇ ಇದ್ದರು ಈ ಜೋಡಿ. ಶೋಗೆ ದಿ ಎಂಡ್ ಸಿಗೋಕು ಅಮೂಲ್ಯನ ರಾಕಿ ಭೇಟಿ ಮಾಡಿದ್ದಾರೆ. ಈ ಕುರಿತು ನಟಿ ಅಮೂಲ್ಯ ತಮ್ಮ ಫೋಟೋ ಶೇರ್‌ ಮಾಡಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ರಾಕೇಶ್ ಅಡಿಗ (Rakesh Adiga) ಮತ್ತು ಅಮೂಲ್ಯ ಗೌಡ (Amulya Gowda)  ಅವರ ಮಧ್ಯೆ ಇರೋದು ಸ್ನೇಹಾನಾ ಅಥವಾ ಪ್ರೀತಿನಾ. ಮದುವೆಯ ಬಗ್ಗೆ ಈ ಜೋಡಿ ಮುಂದಿನ ದಿನಗಳಲ್ಲಿ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಮೂಲ್ಯ, ನನ್ನ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ

    ಅಮೂಲ್ಯ, ನನ್ನ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ

     

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಮೂಲ್ಯ ಗೌಡ ಜೊತೆಗಿನ ಸಿನಿಮಾ ಬಗ್ಗೆ ರಾಕೇಶ್‌ ಹೇಳಿದ್ದೇನು?

    ಅಮೂಲ್ಯ ಗೌಡ ಜೊತೆಗಿನ ಸಿನಿಮಾ ಬಗ್ಗೆ ರಾಕೇಶ್‌ ಹೇಳಿದ್ದೇನು?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೊನೆಗೂ ಈಡೇರಲಿಲ್ಲ ಅಮೂಲ್ಯ ಬಗ್ಗೆ ರಾಕೇಶ್ ಕಂಡ ಕನಸು

    ಕೊನೆಗೂ ಈಡೇರಲಿಲ್ಲ ಅಮೂಲ್ಯ ಬಗ್ಗೆ ರಾಕೇಶ್ ಕಂಡ ಕನಸು

    ಬಿಗ್ ಬಾಸ್ ಮನೆಯ (Bigg Boss House) ಲವ್ ಬರ್ಡ್ಸ್ (Love Birds) ಆಗಿ ರಾಕೇಶ್ ಅಡಿಗ (Rakesh Adiga) ಮತ್ತು ಅಮೂಲ್ಯ ಗೌಡ (Amulya Gowda) ಹೈಲೈಟ್ ಆಗಿದ್ದರು. ಇಬ್ಬರ ಲವ್ವಿ ಡವ್ವಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಅಮೂಲ್ಯ ಎಲಿಮಿನೇಷನ್‌ಗೂ ಮುಂಚೆ ರಾಕಿ, ಅಮ್ಮುಗೆ ತಮ್ಮ ಆಸೆಯೊಂದನ್ನ ಹೇಳಿಕೊಂಡಿದ್ದರು. ಆದರೆ ಈಗ ಆ ಕನಸು ಕನಸಾಗಿಯೇ ಉಳಿದಿದೆ. 13ನೇ ವಾರಕ್ಕೆ ಅಮೂಲ್ಯ ಔಟ್ ಆಗಿದ್ದಾರೆ.

    ಅಮೂಲ್ಯ ಗೌಡ (Amulya Gowda) ತಮ್ಮದೇ ಶೈಲಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದವರು. ರಾಕೇಶ್ ಜೊತೆಗಿನ ಒಡನಾಟದ ವಿಷ್ಯವಾಗಿ ಹೈಲೈಟ್ ಆಗಿದ್ದರು. ರಾಕೇಶ್ ಅಡಿಗ ಕಳಪೆ ಹಣೆಪಟ್ಟಿ ಪಡೆದು ಜೈಲಿಗೆ ಹೋದಾಗ ಅಮೂಲ್ಯಗೆ ತಮ್ಮ ಆಸೆಯೊಂದನ್ನ ಹೇಳಿಕೊಂಡಿದ್ದರು. ಬೆಳದಿಂಗಳ ಕಗ್ಗತ್ತಲು, ರಾತ್ರಿಯೆಲ್ಲಾ ಹೊರಗೆ ಮಾತನಾಡುವ ಖುಷಿಯೇ ಬೇರೇ, ಇಷ್ಟು ದಿನ ಹೇಗೋ ಆಯ್ತು. ಆದರೆ ಬಿಗ್ ಬಾಸ್‌ನ ಕೊನೆಯ ಕ್ಷಣಗಳನ್ನ ಫೀಲ್ ಮಾಡಬೇಕೆಂದು ರಾಕಿ ಆಸೆಪಟ್ಟಿದ್ದರು. ಈ ಬಗ್ಗೆ ಅಮ್ಮು ಬಳಿ ಮಾತನಾಡಿದ್ದರು. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಗೆ 6 ಸ್ಪರ್ಧಿಗಳ ಎಂಟ್ರಿ: ಕಾದಿದೆ ಮತ್ತೊಂದು ಶಾಕ್

    ಹೊರಗೆ ಮಲಗುವುದು ಎಷ್ಟು ಚೆಂದ ಇರುತ್ತೆ ಗೊತ್ತಾ. ಶನಿವಾರ ರಾತ್ರಿ ಮಲಗೋಣಾ ಎಂದಾಗ ಅಮೂಲ್ಯ, “ಓಕೆ ಡನ್ ಬಟ್ ಎರಡು ಬೆಡ್ ಇಲ್ಲ ಬಾಬಾ” ಎಂದಿದ್ದಾರೆ. ಆಗ ರಾಕಿ, ಬೆಡ್ ಸೆಟಪ್ ಮಾಡಿಕೊಳ್ಳೋಣಾ. ಅದೇನು ಅಷ್ಟೊಂದು ಕಷ್ಟವೇ ಅಲ್ಲ. ಎಷ್ಟೊಂದು ಪ್ರಾಪರ್ಟಿಸ್ ಇದೆ. ಅದೇನು ದೊಡ್ಡ ವಿಷ್ಯಾನಾ ಎಂದಿದ್ದರು. ಅಷ್ಟರಲ್ಲಿ ಅಮೂಲ್ಯ ಗೌಡ ಎಲಿಮಿನೇಟ್ (Elimination) ಆಗಿ ಹೊರಬಂದರು.

    ಅಮೂಲ್ಯ ಎಲಿಮಿನೇಷನ್ ರಾಕೇಶ್‌ಗೆ ಶಾಕ್ ಕೊಟ್ಟಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಅಮ್ಮು ಅನುಪಸ್ಥಿತಿಯನ್ನು ರಾಕೇಶ್ ನೆನಪು ಮಾಡಿಕೊಳ್ತಿದ್ದಾರೆ. ಸದ್ಯ ಫಿನಾಲೆಗೆ ಲಗ್ಗೆ ಇಟ್ಟಿರುವ ಕಾರಣ, ಆಟದ ಕಡೆಗೂ ಗಮನ ಕೊಡ್ತಿದ್ದಾರೆ. ಅಂತಿಮ ಹಣಾಹಣಿಗೆ ಕೇವಲ ಐದು ದಿನ ಬಾಕಿಯಿದೆ.

    Live Tv
    [brid partner=56869869 player=32851 video=960834 autoplay=true]