Tag: ಅಮೀರ್ ಖಾನ್

  • ನನಗೂ ಅಮೀರ್‌ಗೂ ಆ ದೃಶ್ಯ ಮಾಡುವಾಗ ಸಾಕಾಗಿ ಹೋಗಿತ್ತು: ಕರಿಷ್ಮಾ ಕಪೂರ್

    ನನಗೂ ಅಮೀರ್‌ಗೂ ಆ ದೃಶ್ಯ ಮಾಡುವಾಗ ಸಾಕಾಗಿ ಹೋಗಿತ್ತು: ಕರಿಷ್ಮಾ ಕಪೂರ್

    ಮುಂಬೈ: ನನಗೂ ಅಮೀರ್ ಖಾನ್ ಅವರಿಗೂ ಆ ದೃಶ್ಯ ಮಾಡುವಾಗ ಸಾಕಾಗಿ ಹೋಗಿತ್ತು ಎಂದು ಬಾಲಿವುಡ್‍ನ 90ರ ದಶಕದ ಬೆಡಗಿ ಕರಿಷ್ಮಾ ಕಪೂರ್ ಅವರು ಹೇಳಿದ್ದಾರೆ.

    1996ರಲ್ಲಿ ಕರಿಷ್ಮಾ ಕಪೂರ್ ಮತ್ತು ಅಮೀರ್ ಖಾನ್ ಅಭಿನಯದ ರಾಜಾ ಹಿಂದೂಸ್ತಾನಿ ಎಂಬ ಚಿತ್ರ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಕರಿಷ್ಮಾ ಮತ್ತು ಅಮಿರ್ ಖಾನ್ ಅವರ ಕೆಮಿಷ್ಟ್ರಿ ವರ್ಕ್ ಆಗಿತ್ತು. ಅದರಲ್ಲೂ ಚಿತ್ರದಲ್ಲಿ ಈ ಇಬ್ಬರ ಲಿಪ್‍ಲಾಕ್ ದೃಶ್ಯ ಸಖತ್ ಸದ್ದು ಮಾಡಿತ್ತು. ಈಗ ಇದೇ ದೃಶ್ಯದಲ್ಲಿ ನಮಗಿಬ್ಬರಿಗೂ ಅಭಿನಯಿಸುವುದರಲ್ಲಿ ಸಾಕಾಗಿ ಹೋಗಿತ್ತು ಎಂದು ಕಪೂರ್ ಹೇಳಿದ್ದಾರೆ.

    ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಕರಿಷ್ಮಾ, ಅಂದು ರಾಜಾ ಹಿಂದೂಸ್ತಾನಿ ಚಿತ್ರದಲ್ಲಿ ಮೂಡಿಬಂದಿದ್ದ ಆ ಚುಂಬನದ ದೃಶ್ಯ ಸಖತ್ ಮೋಡಿ ಮಾಡಿತ್ತು. ಈಗ ಎಲ್ಲ ಸಿನಿಮಾಗಳಲ್ಲೂ ಲಿಪ್‍ಲಾಕ್ ಮಾಡುತ್ತಾರೆ. ಆದರೆ ಅಂದು ಕಿಸ್ಸಿಂಗ್ ಸೀನ್‍ಗಳು ಹೆಚ್ಚು ಬರುತ್ತಿರಲಿಲ್ಲ. ಆದರೆ ಆ ಚಿತ್ರದಲ್ಲಿ ನಾವು ಕಿಸ್ಸಿಂಗ್ ಸೀನ್ ಅಲ್ಲಿ ಅಭಿನಯಿಸಬೇಕಿತ್ತು. ಜನರು ಚಿತ್ರದಲ್ಲಿ ನೋಡಿದಷ್ಟು ಸುಲಭವಾಗಿ ಆ ದೃಶ್ಯವನ್ನು ನಾವು ಚಿತ್ರೀಕರಣ ಮಾಡಿರಲಿಲ್ಲ. ಆ ದೃಶ್ಯದಲ್ಲಿ ನಟಿಸಲು ನನಗೂ ಮತ್ತು ಅಮೀರ್ ಗೂ ಸಖತ್ ಕಷ್ಟವಾಗಿತ್ತು ಎಂದು ಹೇಳಿದ್ದಾರೆ.

    ಈ ದೃಶ್ಯದ ಚಿತ್ರೀಕರಣವನ್ನು ನಾವು ಫೆಬ್ರವರಿ ತಿಂಗಳಲ್ಲಿ ಊಟಿಯಲ್ಲಿ ಮಾಡಿದ್ದೇವು. ಜೊತೆಗೆ ಈ ಒಂದು ದೃಶ್ಯವನ್ನು ಮೂರು ದಿನ ಶೂಟ್ ಮಾಡಿದ್ದೇವು. ನಾನು ಮತ್ತು ಅಮೀರ್ ಖಾನ್ ಈ ದೃಶ್ಯದ ಚಿತ್ರೀಕರಣ ಯಾವಾಗ ಮುಗಿಯುತ್ತೋ ಎಂದು ಸೆಟ್‍ನಲ್ಲಿ ಮಾತನಾಡಿಕೊಳ್ಳುತ್ತಿದ್ದೆವು. ಅಂದು ಊಟಿಯಲ್ಲಿ ಸಖತ್ ಚಳಿ ಅದರಲ್ಲೂ ನಮ್ಮಿಬ್ಬರ ಮೇಲೆ ತಣ್ಣೀರನ್ನು ಸುರಿಯಲಾಗಿತ್ತು. ಜೊತೆಗೆ ಗಾಳಿ ಬರಲೆಂದು ದೊಡ್ಡ ಫ್ಯಾನ್ ಕೂಡ ಹಾಕಿದ್ದರು. ಆ ಚಳಿಯಲ್ಲಿ ಸಿನಿಮಾ ಶೂಟ್ ಮಾಡುವುದು ತುಂಬಾ ಕಷ್ಟವಾಗುತ್ತಿತ್ತು ಎಂದು ಕರಿಷ್ಮಾ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

    1996 ನವೆಂಬರ್ 15 ರಂದು ಬಿಡುಗಡೆಯಾಗಿದ್ದ ರಾಜಾ ಹಿಂದೂಸ್ತಾನಿ ಚಿತ್ರ ಬಾಲಿವುಡ್ ಚಿತ್ರರಂಗದಲ್ಲೇ ಸಖತ್ ಹಿಟ್ ಆಗಿತ್ತು. ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ಅಮಿರ್ ಖಾನ್ ಅದ್ಭುತವಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಕರಿಷ್ಮಾ ಕಪೂರ್ ಮತ್ತು ಅಮೀರ್ ಖಾನ್ ಅವರ ರೊಮ್ಯಾನ್ಸ್ ನೋಡಿದ್ದ ಪ್ರೇಕ್ಷಕ ಚಿತ್ರವನ್ನು ಒಪ್ಪಿ ಅಪ್ಪಿಕೊಂಡಿದ್ದ. ಈ ಚಿತ್ರ 2002ರಲ್ಲಿ ಕನ್ನಡಕ್ಕೆ ‘ನಾನು ನಾನೇ’ ಹೆಸರಿನಲ್ಲಿ ರೀಮೇಕ್ ಮಾಡಲಾಗಿತ್ತು ಇದರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿದ್ದರು.

  • ಅಮೀರ್‌ಗಾಗಿ ‘ಬಚ್ಚನ್ ಪಾಂಡೆ’ ರಿಲೀಸ್ ಡೇಟ್ ಮುಂದೂಡಿದ ಅಕ್ಷಯ್

    ಅಮೀರ್‌ಗಾಗಿ ‘ಬಚ್ಚನ್ ಪಾಂಡೆ’ ರಿಲೀಸ್ ಡೇಟ್ ಮುಂದೂಡಿದ ಅಕ್ಷಯ್

    ಮುಂಬೈ: ಒಂದು ಕಾಲದಲ್ಲಿ ಬಾಲಿವುಡ್ ಆಳುತ್ತಿದ್ದ ಖಾನ್‍ಗಳಲ್ಲಿ ಅಮೀರ್ ಖಾನ್ ಕೂಡ ಒಬ್ಬರು. ಹಿಂದೆ ಯಾವುದೇ ಪ್ರಚಾರವಿಲ್ಲದಿದ್ದರೂ ಬಿಟೌನ್‍ನಲ್ಲಿ ಖಾನ್‍ಗಳ ಸಿನಿಮಾಗಳು ಓಡುತ್ತಿದ್ದವು. ಆದ್ರೆ ಈಗ ಬಿಟೌನ್‍ನಲ್ಲಿ ಖಾನ್‍ಗಳ ಹವಾ ಕೊಂಚ ಕಡಿಮೆಯಾಗಿದ್ದು, ಸಿನಿಮಾ ಯಶಸ್ಸಿಗಾಗಿ ಬೇರೆ ನಟರ ಸಹಾಯ ಕೇಳುವಂತಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಅಮೀರ್ ಖಾನ್ ಮನವಿ ಮಾಡಿದಕ್ಕೆ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನೇ ಮುಂದೂಡಿದ್ದಾರೆ.

    ಹೌದು, ಇತ್ತೀಚೆಗೆ ಬಾಲಿವುಡ್‍ನಲ್ಲಿ ಹೆಚ್ಚಾಗುತ್ತಿರುವ ಸ್ಪರ್ಧೆಗೆ ಅಮೀರ್ ತಲೆಕೆಡಿಸಿಕೊಂಡಿದ್ದಾರೆ. ಹೊಸ ವಿಷಯ, ಕ್ರಿಯೇಟಿವ್ ಎಲಿಮೆಂಟ್ ಇರುವ ಸಿನಿಮಾಗಳು ಸದ್ಯ ಬಿಟೌನ್ ಅಂಗಳದಲ್ಲಿ ಸದ್ದು ಮಾಡುತ್ತಿವೆ. ಅದರಲ್ಲೂ ಅಕ್ಷಯ್ ಕುಮಾರ್ ಅವರು ಆರಿಸಿಕೊಳ್ಳುತ್ತಿರುವ ಹೊಸ ಪಾತ್ರಗಳು, ಸಿನಿಮಾ ವಿಷಯ ಎಲ್ಲರ ಮನ ಗೆಲ್ಲುತ್ತಿದೆ. ಹೀಗಾಗಿ ಅಕ್ಷಯ್ ಅವರ ಬಳಿ ಅಮೀರ್ ಒಂದು ಮನವಿ ಮಾಡಿಕೊಂಡಿದ್ದರು. ಈ ವರ್ಷದ ಕ್ರಿಸ್ಮಸ್‍ನಲ್ಲಿ ಅಮೀರ್ ಖಾನ್‍ರ ಬಹುನಿರೀಕ್ಷಿತ ಸಿನಿಮಾ ‘ಲಾಲ್ ಸಿಂಗ್ ಚಡ್ಡಾ’ ಬಿಡುಗಡೆ ಮಾಡಲು ಸಿನಿಮಾ ತಂಡ ತಯಾರಿ ನಡೆಸುತ್ತಿದೆ. ಆದ್ರೆ ಅದೇ ಸಮಯಕ್ಕೆ ಅಕ್ಷಯ್ ಅವರ ‘ಬಚ್ಚನ್ ಪಾಂಡೆ’ ಸಿನಿಮಾದ ಬಿಡುಗಡೆ ದಿನಾಂಕ ಕೂಡ ನಿಗದಿಯಾಗಿತ್ತು.

    https://www.instagram.com/p/B70Ce7LH0Ye/

    ಅಕ್ಷಯ್ ಅವರ ಸಿನಿಮಾ ಬಿಡುಗಡೆಯಾದರೆ ಎಲ್ಲಿ ತಮ್ಮ ಸಿನಿಮಾ ಓಡುವುದಿಲ್ಲವೋ ಎಂದು ಅಮೀರ್ ತಲೆಕೆಡಿಸಿಕೊಂಡಿದ್ದರು. ಹೀಗಾಗಿ ‘ಬಚ್ಚನ್ ಪಾಂಡೆ’ ಸಿನಿಮಾ ಬಿಡುಗಡೆ ಬಗ್ಗೆ ಅಕ್ಷಯ್ ಹಾಗೂ ನಿರ್ದೇಶಕ ಸಾಜಿದ್ ನಾಡಿಯಾದ್‍ವಾಲಾ ಅವರೊಂದಿಗೆ ಅಮೀರ್ ಮಾತನಾಡಿದ್ದರು. ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿದ್ದರು. ಅಮೀರ್ ಅವರ ಮನವಿಯನ್ನು ಗೌರವಿಸಿರುವ ಅಕ್ಷಯ್ ತಮ್ಮ ಸಿನಿಮಾದ ಹೊಸ ಲುಕ್ ಬಿಡುಗಡೆ ಮಾಡಿ ಬಚ್ಚನ್ ಪಾಂಡೆ ಯಾವಾಗ ಬಿಡುಗಡೆ ಆಗುತ್ತೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

    ಈ ಸಿನಿರಂಗದಲ್ಲಿ ಎಲ್ಲರೂ ಸ್ನೇಹಿತರು ಎಂದು ಹೊಸ ಲುಕ್ ಹಾಗೂ ‘ಬಚ್ಚನ್ ಪಾಂಡೆ’ ಸಿನಿಮಾ ಬಿಡುಗಡೆ ದಿನಾಂಕವನ್ನು ಅಕ್ಷಯ್ ಪ್ರಕಟಿಸಿದ್ದಾರೆ. ‘ಬಚ್ಚನ್ ಪಾಂಡೆ’ ಸಿನಿಮಾ ಈ ವರ್ಷಾಂತ್ಯದ ಬದಲು 2021 ಜನವರಿ 22ಕ್ಕೆ ತೆರೆ ಕಾಣಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಹೊಸ ಪೋಸ್ಟರ್‌ನಲ್ಲಿ ಅಕ್ಷಯ್‍ರ ರಗಡ್ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಈ ಟ್ವೀಟ್ ನೋಡಿದ ಬಳಿಕ ಅಮೀರ್ ಅಕ್ಷಯ್ ಹಾಗೂ ಸಾಜಿದ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಕೆಲವೊಮ್ಮೆ ಒಂದೇ ಒಂದು ಮಾತುಕತೆ ಸಾಕು, ಎಲ್ಲ ಸರಿಹೋಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಅಮೀರ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಇದೇ ವರ್ಷ ಡಿಸೆಂಬರ್‌ನಲ್ಲಿ ಕ್ರಿಸ್ಮಸ್‍ಗೆ ಬಿಡುಗಡೆ ಆಗಲಿದೆ. ಹಾಲಿವುಡ್‍ನಲ್ಲಿ ಟಾಮ್ ಹ್ಯಾಂಕ್ಸ್ ಅಭಿನಯದ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ಇದಾಗಿದ್ದು, ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ.

  • ಕಾಡಿನಲ್ಲಿ ಅಮೀರ್ ಮಗಳ ಹಾಟ್ ಫೋಟೋಶೂಟ್

    ಕಾಡಿನಲ್ಲಿ ಅಮೀರ್ ಮಗಳ ಹಾಟ್ ಫೋಟೋಶೂಟ್

    ನವದೆಹಲಿ: ಬಾಲಿವುಡ್ ಮಿ. ಪರ್ಫೆಕ್ಟ್ ಅಮೀರ್ ಖಾನ್ ಅವರ ಮಗಳು ಇರಾ ಖಾನ್ ಕಾಡಿನಲ್ಲಿ ಹಾಟ್ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಇರಾ ಕಾಡಿನಂತೆ ಇರುವ ಜಾಗದಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋದಲ್ಲಿ ಅವರ ಸ್ಟೈಲ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೆಲವು ಫೋಟೋಗಳಲ್ಲಿ ಇರಾ ಗೋಲ್ಡನ್ ಹಾಗೂ ಕಪ್ಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೆ ಕೆಲವು ಫೋಟೋಗಳಲ್ಲಿ ಮೆರೂನ್ ಬಣ್ಣದ ಗೌನ್‍ನಲ್ಲಿ ಮಿಂಚಿದ್ದಾರೆ.

    ಈ ಫೋಟೋಗಳನ್ನು ಇರಾ ಖಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಅವರ ಪೋಸ್ಟ್ ಗೆ ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

    ಕೆಲವರು ‘ಬಾರ್ನ್ ಸ್ಟಾರ್’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇರಾ ಅವರ ಸೌಂದರ್ಯವನ್ನು ಹೊಗಳಿದ್ದಾರೆ. ಇನ್ನು ಕೆಲವರು ನೀನು ನಿನ್ನ ತಂದೆಯ ಮರ್ಯಾದೆಯನ್ನು ಕಾಪಾಡಬೇಕು. ಅದನ್ನು ಬಿಟ್ಟು ಈ ರೀತಿ ಫೋಟೋಶೂಟ್ ಮಾಡಿಸಿದ್ದೀಯಾ ನಿನಗೆ ನಾಚಿಕೆ ಆಗಬೇಕು ಎಂದು ಕಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

    ಇರಾ ಖಾನ್, ಅಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತ ಅವರ ಎರಡನೇ ಮಗಳು. ಇರಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

  • ಗಾಂಧೀಜಿ ಆದರ್ಶಗಳನ್ನು ಜನಪ್ರಿಯಗೊಳಿಸಲು ಬಾಲಿವುಡ್ ಮಂದಿಗೆ ಮೋದಿ ಮಣೆ

    ಗಾಂಧೀಜಿ ಆದರ್ಶಗಳನ್ನು ಜನಪ್ರಿಯಗೊಳಿಸಲು ಬಾಲಿವುಡ್ ಮಂದಿಗೆ ಮೋದಿ ಮಣೆ

    ನವದೆಹಲಿ: ಮಹಾತ್ಮಾ ಗಾಂಧೀಜಿ ಅವರ ಆದರ್ಶಗಳನ್ನು ಚಲನಚಿತ್ರೋದ್ಯಮದ ಮೂಲಕ ಜನಪ್ರಿಯಗೊಳಿಸಲು ಪ್ರಧಾನಿ ಮೋದಿ ಅವರು ಬಾಲಿವುಡ್ ನಟ-ನಟಿಯರನ್ನು ಭೇಟಿ ಮಾಡಿ ಸಂವಾದ ನಡೆಸಿದ್ದಾರೆ.

    ಗಾಂಧೀಜಿ ಅವರ 150 ನೇ ಜನ್ಮದಿನದ ಅಂಗವಾಗಿ ಆಯೋಜನೆ ಮಾಡಿದ್ದ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ನಟಿ-ನಟಿಯರು ಭಾಗವಹಿಸಿ ಮೋದಿ ಅವರ ಜೊತೆ ಸಂವಾದ ನಡೆಸಿದರು. ಇದೇ ವೇಳೆ ಬಾಲಿವುಡ್ ನಟರಾದ ಅಮೀರ್ ಖಾನ್ ಮತ್ತು ಶಾರೂಖ್ ಖಾನ್ ಮೋದಿ ಅವರ ಈ ಯೋಜನೆಯನ್ನು ಶ್ಲಾಘಿಸಿದರು.

    ಬಾಲಿವುಡ್ ನ ಬಹುತೇಕ ನಟ-ನಟಿಯರು ಭಾಗವಸಿದ್ದ ಈ ಕಾರ್ಯಕ್ರಮದಲ್ಲಿ ಅಮೀರ್, ಶಾರೂಖ್, ರಾಜ್‍ಕುಮಾರ್ ಹಿರಾನಿ, ಕಂಗನಾ ರನೌತ್, ಆನಂದ್ ಎಲ್ ರೈ, ಎಸ್‍ಪಿ ಬಾಲಸುಬ್ರಹ್ಮಣ್ಯಂ, ಸೋನಮ್ ಕಪೂರ್, ಜಾಕಿ ಶ್ರಾಫ್, ಸೋನು ನಿಗಮ್, ಏಕ್ತಾ ಕಪೂರ್ ಸೇರಿದಂತೆ ಭಾರತೀಯ ಚಲನಚಿತ್ರ ಮತ್ತು ಮನರಂಜನಾ ಉದ್ಯಮದ ಸದಸ್ಯರು ಉಪಸ್ಥಿತರಿದ್ದರು.

    ಈ ಕಾರ್ಯಕ್ರಮ ಲೋಕ ಕಲ್ಯಾಣ್ ಮಾರ್ಗದ ನಿವಾಸದಲ್ಲಿ ಶನಿವಾರ ಸಂಜೆ 7 ಕ್ಕೆ ಆಯೋಜಿಸಿಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಸಂಬಂಧಿಸಿದ ನಾಲ್ಕು ಸಾಂಸ್ಕೃತಿಕ ವಿಡಿಯೋಗಳನ್ನು ಬಿಡುಗಡೆ ಮಾಡಿದರು. ಈ ವೇಳೆ ಚಿತ್ರೋದ್ಯಮದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಜನಪ್ರಿಯಗೊಳಿಸುವ ವಿಷಯದಲ್ಲಿ ಮನರಂಜನಾ ಉದ್ಯಮದಲ್ಲಿ ಹಲವಾರು ಜನರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

    ಚಿತ್ರೋದ್ಯಮ ಸಾಮಾನ್ಯ ನಾಗರಿಕರನ್ನು ಮನರಂಜನೆಯ ಜೊತೆಗೆ ಒಳ್ಳೆಯ ವಿಚಾರಗಳನ್ನು ಹೇಳಬೇಕು. ಸಮಾಜವನ್ನು ಸಕಾರಾತ್ಮಕವಾಗಿ ಪರಿವರ್ತನೆ ಮಾಡುವ ಸಮಾಥ್ರ್ಯ ಸಿನಿಮಾ ಮಂದಿಗೆ ಇದೆ ಎಂದು ಹೇಳಿದರು. ಗಾಂಧೀಜಿ ಅವರು ಸರಳತೆಗೆ ಸಮಾನಾರ್ಥಕವಾದವರು. ಒಂದು ಆಲೋಚನೆಯಿಂದ ಒಬ್ಬ ವ್ಯಕ್ತಿ, ಪ್ರಪಂಚದಾದ್ಯಂತ ಜನರೊಂದಿಗೆ ಸಂಪರ್ಕವನ್ನು ಸ್ಥಾಪಿಸಬಲ್ಲವರು ಎಂದರೆ ಅದು ಗಾಂಧೀಜಿಯವರು ಮಾತ್ರ ಎಂದು ತಿಳಿಸಿದರು.

    ಈ ವಿಚಾರದ ಬಗ್ಗೆ ಮಾತನಾಡಿದ ನಟ ಅಮೀರ್ ಖಾನ್, ಮೊದಲಿಗೆ ಗಾಂಧೀಜಿ ಅವರ ಆದರ್ಶಗಳನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಿರುವ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು. ಸಿನಿಮಾ ರಂಗದವರಾಗಿ, ಸೆಲಿಬ್ರಿಟಿಗಳಾಗಿ ನಾವು ಮಾಡಬಹುದಾದದ್ದು ತುಂಬಾ ಇದೆ ಮತ್ತು ನಾವು ಇನ್ನು ಮುಂದೆ ಅದನ್ನು ಮಾಡುತ್ತೇವೆ ಎಂದು ನಾನು ಪ್ರಧಾನ ಮಂತ್ರಿಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು.

    ನಮ್ಮೆಲ್ಲರನ್ನೂ ಒಂದುಗೂಡಿಸಿದ್ದಕ್ಕಾಗಿ ಪಿಎಂ ನರೇಂದ್ರ ಮೋದಿಯವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅದೂ ಸಹ ಈ ಮಹಾತ್ಮ ಗಾಂಧಿಯಂತಹ ಉತ್ತಮ ಕಾರಣಕ್ಕಾಗಿ ನಾವು ಸೇರಿದ್ದು ಖುಷಿಯಾಗಿದೆ. ನಾವು ಗಾಂಧೀಜಿಯನ್ನು ಭಾರತ ಮತ್ತು ಜಗತ್ತಿಗೆ ಮತ್ತೆ ಪರಿಚಯಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ನಟ ಶಾರೂಖ್ ಖಾನ್ ಹೇಳಿದ್ದಾರೆ.

  • ಪ್ರವಾಹ ಸಂತ್ರಸ್ತರಿಗೆ ಅಮೀರ್‌ರಿಂದ 25 ಲಕ್ಷ ರೂ. – ಲತಾರಿಂದ 11 ಲಕ್ಷ ರೂ. ದೇಣಿಗೆ

    ಪ್ರವಾಹ ಸಂತ್ರಸ್ತರಿಗೆ ಅಮೀರ್‌ರಿಂದ 25 ಲಕ್ಷ ರೂ. – ಲತಾರಿಂದ 11 ಲಕ್ಷ ರೂ. ದೇಣಿಗೆ

    ಮುಂಬೈ: ಮಹಾರಾಷ್ಟ್ರ ಪ್ರವಾಹಕ್ಕೆ ಸಂತ್ರಸ್ತರಿಗೆ ಬಾಲಿವುಡ್ ನಟ ಅಮೀರ್ ಖಾನ್ ಅವರು 25 ಲಕ್ಷ ರೂ. ಹಾಗೂ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು 11 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

    ಅಮೀರ್ ಖಾನ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ನಿಧಿಗೆ 25 ಲಕ್ಷ ರೂ. ಸಹಾಯಧನ ನೀಡಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ಪ್ರವಾಹ ಸಂತ್ರಸ್ತರಿಗಾಗಿ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದ ಅಮೀರ್ ಖಾನ್ ಅವರಿಗೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

    ನಟ ಅಮೀರ್ ಖಾನ್ ಅಲ್ಲದೆ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಕೂಡ ಮಹಾರಾಷ್ಟ್ರ ಪ್ರವಾಹಕ್ಕೆ 11 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ದೇವೇಂದ್ರ ಅವರು ಈ ಬಗ್ಗೆ ಕೂಡ ತಮ್ಮ ಟ್ವಿಟ್ಟಿರಿನಲ್ಲಿ, “ಸಿಎಂ ಪರಿಹಾರ ನಿಧಿಗೆ 11 ಲಕ್ಷ ರೂ. ದೇಣಿಗೆ ನೀಡಿದ ಗೌರವಾನ್ವಿತ ಲತಾ ಮಂಗೇಶ್ಕರ್ ದೀದಿಗೂ ಧನ್ಯವಾದಗಳು” ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.

    ಇದೇ ತಿಂಗಳು 12ರಂದು ಸ್ಟಾರ್ ಜೋಡಿ ನಟ ರಿತೇಶ್ ದೇಶ್‍ಮುಖ್ ಹಾಗೂ ಜೆನಿಲಿಯಾ ಡಿಸೋಜಾ ಮಹಾರಾಷ್ಟ್ರ ಪ್ರವಾಹ ಸಂತ್ರಸ್ತರಿಗೆ 25 ಲಕ್ಷ ರೂ. ದೇಣಿಗೆ ನೀಡಿದ್ದರು. ಸಿಎಂ ದೇವೇಂದ್ರ ಅವರು ತಮ್ಮ ಟ್ವಿಟ್ಟರಿನಲ್ಲಿ, “ಮಹಾರಾಷ್ಟ್ರ ಪ್ರವಾಹಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದ ಜೆನಿಲಿಯಾ ಹಾಗೂ ರಿತೇಶ್‍ಗೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿಕೊಂಡಿದ್ದರು.

    ಬಳಿಕ ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ಕೂಡ ಸಿಎಂ ಪರಿಹಾರ ನಿಧಿಗೆ 51 ಲಕ್ಷ ರೂ. ದೇಣಿಗೆ ನೀಡಿದ್ದರು. ಈ ವಿಷಯವನ್ನು ಅಮಿತಾಬ್ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಈ ವಿಷಯವನ್ನು ಟ್ವೀಟ್ ಮಾಡುವ ಮೂಲಕ ಎಲ್ಲರಿಗೂ ತಿಳಿಸಿದ್ದರು. ಅಮಿತಾಬ್ ಅಲ್ಲದೆ ನಟ ನಾನಾ ಪಾಟೇಕರ್ ಅವರು ಕೂಡ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 500 ನಿವಾಸಗಳನ್ನು ಕಟ್ಟಿಕೊಡುವ ಭರವಸೆಯನ್ನು ನೀಡಿದ್ದಾರೆ.

  • ಹೊಸ ವರ್ಷಕ್ಕೆ ಶುಭ ಕೋರಿದ ಬಿಟೌನ್- ಕ್ಷಮೆ ಕೇಳಿದ ಅಮೀರ್ ಖಾನ್

    ಹೊಸ ವರ್ಷಕ್ಕೆ ಶುಭ ಕೋರಿದ ಬಿಟೌನ್- ಕ್ಷಮೆ ಕೇಳಿದ ಅಮೀರ್ ಖಾನ್

    ಮುಂಬೈ: 2018ಗೆ ಟಾಟಾ ಹೇಳಿ ಹೊಸ ವರ್ಷ 2019 ಅನ್ನು ಬಾಲಿವುಡ್ ಕಲಾವಿದರು ಸ್ವಾಗತಿಸಿ ತಮ್ಮ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.

    ಬಾಲಿವುಡ್ ಮಿ. ಪರ್ಫೆಕ್ಟ್ ತಮ್ಮ ಟ್ವಿಟ್ಟರಿನಲ್ಲಿ ಈ ವರ್ಷದ ಹೊಸ ರೆಸಲ್ಯೂಶನ್‍ನನ್ನು ಬರೆದು ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿ ಕ್ಷಮೆ ಕೇಳಿದ್ದಾರೆ. ಅಮೀರ್ ಖಾನ್ ತಮ್ಮ ಟ್ವಿಟ್ಟರಿನಲ್ಲಿ, “ಹಾಯ್ ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಎಲ್ಲರಿಗೂ ನೆಮ್ಮದಿ ಹಾಗೂ ಖುಷಿ ಸಿಗಲಿ. ನನ್ನ ಹೊಸ ವರ್ಷದ ರೆಸಲ್ಯೂಶನ್ ಏನೆಂದರೆ ನಾನು ಮೊದಲಿನಂತೆ ಟಾಪ್ ಶೇಪ್‍ಗೆ ಬರಬೇಕು. 2018ರಲ್ಲಿ ತಪ್ಪುಗಳಿಂದ ಕಲಿತಿರುವುದನ್ನು ದಿನನಿತ್ಯ ಅಭ್ಯಾಸ ಮಾಡುವೆ. ಅತ್ಯುತ್ತಮ ಚಿತ್ರ ಮಾಡುವುದು. ಹೊಸ ವಿಷಯಗಳನ್ನು ಕಲಿಯುವುದು ಹಾಗೂ ನನ್ನ ತಾಯಿ, ಪತ್ನಿ ಹಾಗು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವುದು. ನಾನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಯಾರಿಗಾದರೂ ನೋವು ಮಾಡಿದ್ದರೆ, ನನ್ನನ್ನು ಕ್ಷಮಿಸಿ” ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/aamir_khan/status/1079751736317755392

    ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರು ಟ್ವೀಟ್ ಮಾಡಿ ಹೊಸ ವರ್ಷಕ್ಕೆ ಶುಭಾಶಯ ತಿಳಿಸಿದ್ದಾರೆ. ಅಮಿತಾಬ್ ತಮ್ಮ ಟ್ವಿಟ್ಟರಿನಲ್ಲಿ, “ಹೊಸ ವರ್ಷದ ಗ್ರೀಟಿಂಗ್ಸ್ ಹಾಗೂ ಖುಷಿ ನಿರಂತವಾಗಿರಲಿ. ಹೊಸ ವರ್ಷ, ಹೊಸ ಹರ್ಷ, ಹೊಸ ಜೀವನ ಉತ್ಕರ್ಷ, ಹೊಸ ದಾರಿ, ಹೊಸ ಗುರಿ, ಜೀವನದ ಹೊಸ ಪ್ರವಾಹ” ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ಮಗ ಅಭಿಷೇಕ್ ಬಚ್ಚನ್ “ಎಲ್ಲರಿಗೂ ಹೊಸ ವರ್ಷದ ಶುಭಾಶಯ” ಎಂದು ಟ್ವೀಟ್ ಮಾಡಿದ್ದಾರೆ.

    ನಟ ಸಿದ್ಧಾರ್ಥ್ ಮಲ್ಹೋತ್ರ ಕೂಡ ಟ್ವಿಟ್ಟರಿನಲ್ಲಿ, “ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ದಿನ ರಾತ್ರಿ ಯಾವುದೇ ಪಾರ್ಟಿ ಮಾಡುವುದಿಲ್ಲ. ನಾನು ಇತರರಿಗೆ ಕೆಲಸ ಮಾಡದೇ ಇರುವ ಕೆಲಸಗಳನ್ನು ನಂಬುತ್ತೇನೆ. ನೀವು ನಿಮ್ಮ ದಾರಿಯಲ್ಲಿ ನಡೆಯಿರಿ. ನಿಮ್ಮನ್ನು ನೀವು ನಂಬಿ. ನಿಮ್ಮ ಈ ಪ್ರಯಾಣವನ್ನು ಎಂಜಾಯ್ ಮಾಡಿ. ಎಲ್ಲರಿಗೂ ಗುಡ್ ಲಕ್” ಎಂದು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

    ನಟಿ ಅನುಷ್ಕಾ ಶರ್ಮಾ ತಮ್ಮ ಟ್ವಿಟ್ಟರಿನಲ್ಲಿ ಪತಿ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆಯಿರುವ ಫೋಟೋವನ್ನು ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ. ಅನುಷ್ಕಾ ತಮ್ಮ ಟ್ವಿಟ್ಟರಿನಲ್ಲಿ, “ಶಾಂತಿ, ಭರವಸೆ ತುಂಬಿರುವ ಈ ಹೊಸ ವರ್ಷಕ್ಕೆ ನೀವು ಎಲ್ಲರೂ ಎಚ್ಚರಗೊಂಡಿದ್ದೀರಿ ಎಂದುಕೊಳ್ಳುತ್ತೇನೆ. ಒಬ್ಬರಿಗೊಬ್ಬರು ಸ್ವಲ್ಪ ದಯೆ ತೋರಿಸಿ ನಕ್ಷತ್ರದಂತೆ ಒಬ್ಬರ ಬಾಳಲ್ಲಿ ಬೆಳಕು ಹಾಗೂ ಸೌಂದರ್ಯವನ್ನು ಬೆಳೆಗಿಸೋಣ. ನಮ್ಮ ಕಡೆಯಿಂದ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

    ನಟಿ ಶ್ರದ್ಧಾ ಕಪೂರ್ ಕೂಡ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಎಲ್ಲರಿಗೂ ಖುಷಿ, ನೆಮ್ಮದಿ, ಪ್ರೀತಿ ಹಾಗೂ ಎಲ್ಲಾ ಕೆಲಸ ಅದ್ಭುತವಾಗಲಿ ಎಂದು ಶುಭ ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ನಟಿ ಶಿಲ್ಪಾ ಶೆಟ್ಟಿ ಕೂಡ ತಮ್ಮ ಫೋಟೋವನ್ನು ಹಾಕಿ ಅದಕ್ಕೆ, “ಬಾಯ್ ಬಾಯ್ 2018. ಈಗ ಮಿನುಗುವ ಸಮಯ. ಎಲ್ಲರೂ ಸ್ಪಾರ್ಕಿ 2019ಕ್ಕೆ ರೆಡಿಯಾಗಿದ್ದೀರಿ ಅಂದುಕೊಂಡಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕತ್ತೆ ಮೇಲೆ ಕೂತ ಅಮೀರ್ ಫುಲ್ ವೈರಲ್!

    ಕತ್ತೆ ಮೇಲೆ ಕೂತ ಅಮೀರ್ ಫುಲ್ ವೈರಲ್!

    ಮುಂಬೈ: ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಹೆಸರು ಪಡೆದಿರುವ ಅಮೀರ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾದ `ಥಗ್ಸ್ ಆಫ್ ಹಿಂದೂಸ್ತಾನ್’ ಪೋಸ್ಟರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಅಮೀರ್ ಖಾನ್ ಸ್ವತಃ ತಮ್ಮ ಇನ್ ಸ್ಟಾಗ್ರಾಮ್ ಮೂಲಕ `ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದ ತಮ್ಮ ಪಾತ್ರದ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಪೋಸ್ಟರ್ ನಲ್ಲಿ ಅಮೀರ್ ಖಾನ್ ವಿಶೇಷ ಅವತಾರದಲ್ಲಿ ಕತ್ತೆಯ ಮೇಲೆ ಕೂತು ಫೋಟೋಗೆ ಪೋಸ್ ನೀಡಿದ್ದಾರೆ.

    https://www.instagram.com/p/BoGM2qmH1Bj/?utm_source=ig_embed

    ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಪೋಸ್ಟರ್ ಗೆ ಅಮೀರ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಪೋಸ್ಟರ್ ನಲ್ಲಿ ವಿಭಿನ್ನ ವೇಷಭೂಷಣ ಧರಿಸಿ ಕತ್ತೆಯ ಮೇಲೆ ಕುಳಿತಿರುವ ಚಿತ್ರ ಸಾಕಷ್ಟು ಕುತೂಹಲ ಕೆರೆಳಿಸಿದೆ. ಚಿತ್ರದಲ್ಲಿ ಯಾವ ರೀತಿ ಪಾತ್ರ ಮಾಡಿದ್ದಾರೆ ಎನ್ನುವ ಮಾತುಗಳು ಸಾಕಷ್ಟು ಕೇಳಿಬರುತ್ತಿವೆ.

    ಪೋಸ್ಟರ್ ಬಿಡುಗಡೆಯಾಗುತ್ತಲೆ ಸಾಕಷ್ಟು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 2,000 ಕ್ಕಿಂತಲೂ ಹೆಚ್ಚಿನ ಕಾಮೆಂಟ್‍ಗಳು ಬಂದಿವೆ. `ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದಲ್ಲಿ ಅಮೀರ್ ಖಾನ್ ಫಿರಂಗಿ ಎನ್ನುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೇರಿದಂತೆ ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್ ಸೇರಿದಂತೆ ಬಹುದೊಡ್ಡ ತಾರಾಗಣವೇ ಒಳಗೊಂಡಿದೆ. ಇದಕ್ಕೂ ಮೊದಲು ಚಿತ್ರತಂಡ ಒಬ್ಬೊಬ್ಬರ ಟೀಸರ್ ಗಳನ್ನು ಬಿಡುಗಡೆಗೊಳಿಸಿತ್ತಾ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮೀರ್ ಖಾನ್ ಫೋಟೋ ಹಾಕಿ ಪೆಟ್ರೋಲ್ ಬೆಲೆ ಹೋಲಿಕೆ ಮಾಡಿದ್ರು ರಮ್ಯಾ

    ಅಮೀರ್ ಖಾನ್ ಫೋಟೋ ಹಾಕಿ ಪೆಟ್ರೋಲ್ ಬೆಲೆ ಹೋಲಿಕೆ ಮಾಡಿದ್ರು ರಮ್ಯಾ

    ಬೆಂಗಳೂರು: ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಅಧಿಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು `ದಂಗಲ್’ ಸಿನಿಮಾದ ಅಮೀರ್ ಖಾನ್ ಫೋಟೋ ಹಾಕಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದ್ದರಿಂದ ಸೋಮವಾರ ‘ಭಾರತ್ ಬಂದ್’ಗೆ ಕಾಂಗ್ರೆಸ್ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಮ್ಯಾ ಕ್ರಿಕೆಟ್ ತಂಡದ ಆಟಗಾರರು ಗಳಿಸುವ ರನ್ ಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ಹೆಚ್ಚಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಈಗ `ದಂಗಲ್’ ಸಿನಿಮಾದಲ್ಲಿ ಅಭಿನಯಿಸಿರುವ ಅಮೀರ್ ಖಾನ್ ಫೋಟೋವನ್ನು ಹಾಕಿ ಟೀಕಿಸಿದ್ದಾರೆ.

    ರಮ್ಯಾ ಟ್ವೀಟ್:
    `ದಂಗಲ್’ ಸಿನಿಮಾದಲ್ಲಿ ಅಮೀರ್ ಖಾನ್ ಅವರು ಎರಡು ಶೇಡ್‍ನಲ್ಲಿ ಅಭಿನಯಿಸಿದ್ದರು. ಒಂದು ಫಿಟ್ ಆಗಿರುವ ಯುವಕನ ಪಾತ್ರ, ಮತ್ತೊಂದು ಅಪ್ಪನ ಪಾತ್ರವನ್ನು ಮಾಡಿದ್ದರು. ಈಗ ಅದೇ ಸಿನಿಮಾದ ಎರಡು ಫೋಟೋವನ್ನು ಪೋಸ್ಟ್ ಮಾಡಿ ಯುಪಿಎ ಮತ್ತು ಎನ್‍ಡಿಎ ಸರ್ಕಾರಕ್ಕೆ ಹೋಲಿಸಿ ಟೀಕಿಸಿದ್ದಾರೆ.

    ಒಂದು ಕಡೆ ಅಮೀರ್ ಖಾನ್ ಯುವಕನಾಗಿ ಫಿಟ್ ಆಗಿರುವ ಫೋಟೋ ಹಾಕಿದ್ದು, ಅದರ ಮೇಲೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಪೆಟ್ರೋಲ್ ಬೆಲೆ ಫಿಟ್ ಆಗಿ ಇತ್ತು ಎಂದು ಹೋಲಿಸಿದ್ದಾರೆ. ಅದೇ ರೀತಿ ಅಮೀರ್ ಖಾನ್ ನ ವಯಸ್ಸಾದ ಫೋಟೋ ಹಾಕಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದಲ್ಲಿ ಪೆಟ್ರೋಲ್ ಬೆಲೆ ಈ ರೀತಿ ಇದೇ ಎಂದು ಹೋಲಿಕೆ ಮಾಡಿ ಟೀಕಿಸಿದ್ದಾರೆ.

    ಈ ಹಿಂದೆ ರಮ್ಯಾ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಇಂಗ್ಲೆಂಡ್ ವಿರುದ್ಧ ಗಳಿಸಿದ ರನ್‍ಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ದುಬಾರಿ ಎನ್ನುವ ಮೂಲಕ  ರಮ್ಯಾ ಟ್ವಿಟ್ಟರ್ ನಲ್ಲಿ ಕೇಂದ್ರ ಸರ್ಕಾರದ ಕಾಲೆಳೆದಿದ್ದರು.

    ರಮ್ಯಾ ಅವರು ತಮ್ಮ ಟ್ವಿಟ್ಟರ್ ಮೂಲಕ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ವೈಯಕ್ತಿಕವಾಗಿ ರವೀಂದ್ರ ಜಡೇಜಾರವರು 86 ರನ್ ಗಳಿಸಿದ್ದಾರೆ. ಆದರೆ ಅವರು ಗಳಿಸಿದ್ದು, ಭಾರತದಲ್ಲಿ 2ನೇ ಅತ್ಯಧಿಕ ರನ್ ಆಗಿದೆ. ಮೊದಲನೇಯ ಅತ್ಯಧಿಕ ರನ್ ಭಾರತದ ಪೆಟ್ರೋಲ್ ದರವೇ 87 ಆಗಿದೆ ಎಂದು ಬರೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮೀರ್ ಮಗಳ ಜೊತೆಯಿರುವ ಫೋಟೋವನ್ನು ಪೋರ್ನ್ ಗೆ ಹೋಲಿಸಿದ ನೆಟ್ಟಿಗರು!

    ಅಮೀರ್ ಮಗಳ ಜೊತೆಯಿರುವ ಫೋಟೋವನ್ನು ಪೋರ್ನ್ ಗೆ ಹೋಲಿಸಿದ ನೆಟ್ಟಿಗರು!

    ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ತನ್ನ ಪುತ್ರಿ ಇರಾ ಜೊತೆ ಇರುವ ಒಂದು ಫೋಟೋವನ್ನು ನೆಟ್ಟಿಗರು ಪೋರ್ನ್ ಸಿನಿಮಾಗೆ ಹೋಲಿಸಿ ಕಮೆಂಟ್ ಮಾಡಿದ್ದಾರೆ.

    ಬುಧವಾರ ಅಮೀರ್ ಖಾನ್ ತಮಿಳುನಾಡಿನ ಕುನೂರ್ ಗೆ ತನ್ನ ಕುಟುಂಬದವರ ಜೊತೆ ಹೋಗಿದ್ದರು. ಅಲ್ಲಿ ತಮ್ಮ ಸಹೋದರ ಸಂಬಂಧಿ ಹಾಗೂ ನಿರ್ದೇಶಕರಾಗಿರುವ ಮನ್ಸೂರ್ ಖಾನ್ ಅವರ 60ನೇ ಹುಟ್ಟುಹಬ್ಬವನ್ನು ಆಚರಿಸಿದ್ದರು.

    ಆಗ ಅಮೀರ್ ಖಾನ್ ತನ್ನ ಮಗಳ ಜೊತೆ ಫೋಟೋವನ್ನು ತೆಗೆದುಕೊಂಡರು. ನಂತರ ಮಗಳ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಈಗ ಟ್ರೋಲರ್ಸ್ ಆ ಫೋಟೋವನ್ನು ಪೋರ್ನ್ ಗೆ ಹೋಲಿಸಿ ಟ್ರೋಲ್ ಮಾಡುತ್ತಿದ್ದಾರೆ.

    ಅಮೀರ್ ತನ್ನ ಮಗಳ ಜೊತೆಯಿರುವ ಫೋಟೋಗೆ ಒಬ್ಬರು, “ನೀವು ನಿಮ್ಮ ಕೆಲಸ ಕಡೆ ತೋರುವ ಪರಿಶ್ರಮದ ಬಗ್ಗೆ ನಮಗೆ ಹೆಮ್ಮೆ ಇದೆ. ಅದನ್ನು ನಾವು ಗೌರವಿಸುತ್ತೇವೆ. ಆದರೆ ಈ ಫೋಟೋ ನಮಗೆ ಸರಿ ಕಾಣುತ್ತಿಲ್ಲ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

    ಕೆಲವರು ಈ ಫೋಟೋ ನೋಡಿ ಈಗ ನೀವು ನಿಮ್ಮ ಮಗಳ ಜೊತೆ ಪೋರ್ನ್ ಸಿನಿಮಾ ಮಾಡುತ್ತಿದ್ದೀರಾ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ರಂಜಾನ್ ತಿಂಗಳಲ್ಲಿ ಈ ರೀತಿ ಪೋಸ್ ಕೊಟ್ಟು ಫೋಟೋ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಕಮೆಂಟ್ ಮಾಡಿದ್ದಾರೆ.

    ಇನ್ನೂ ಕೆಲವರು ಅಮೀರ್ ತನ್ನ ಮಗಳ ಜೊತೆಯಿರುವ ಫೋಟೋಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಫೋಟೋಗೆ ಧರ್ಮವನ್ನು ಮಧ್ಯ ತರಬೇಡಿ. ಈ ಫೋಟೋ ತುಂಬಾ ಸುಂದರವಾಗಿದೆ. ತಂದೆ- ಮಗಳ ಪ್ರೀತಿ ತುಂಬಾ ಅಮೂಲ್ಯವಾದದ್ದು ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸದ್ಯ ಅಮೀರ್ ಖಾನ್ ‘ಥಗ್ಸ್ ಆಫ್ ಹಿಂದೋಸ್ಥಾನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ನಟಿಸುತ್ತಿದ್ದು, ಅಮೀರ್ ಗೆ ನಾಯಕಿಯರಾಗಿ ಕತ್ರಿನಾ ಕೈಫ್ ಹಾಗೂ ಫಾತಿಮಾ ಸನಾ ಶೇಖ್ ಕಾಣಿಸಿಕೊಳ್ಳುತ್ತಿದ್ದಾರೆ.

  • 53ನೇ ಹುಟ್ಟುಹಬ್ಬಕ್ಕೆ ಅಮೀರ್ ಖಾನ್‍ಗೆ ಅಭಿಮಾನಿಗಳಿಂದ ಸಿಕ್ತು ಭರ್ಜರಿ ಗಿಫ್ಟ್

    53ನೇ ಹುಟ್ಟುಹಬ್ಬಕ್ಕೆ ಅಮೀರ್ ಖಾನ್‍ಗೆ ಅಭಿಮಾನಿಗಳಿಂದ ಸಿಕ್ತು ಭರ್ಜರಿ ಗಿಫ್ಟ್

    ಮುಂಬೈ: ಬಾಲಿವುಡ್ ಮಿ.ಪರ್ಫೆಕ್ಟ್ ನಟ ಅಮೀರ್ ಖಾನ್ ಅವರಿಗೆ ಇಂದು 53 ನೇ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಇಂದು ಇನ್ ಸ್ಟಾಗ್ರಾಮ್‍ಗೆ ಎಂಟ್ರಿಕೊಟ್ಟಿದ್ದು, ಒಂದು ಫೋಟೋವನ್ನು ಶೇರ್ ಮಾಡದೇ ಇದ್ದರೂ 2.35 ಲಕ್ಷ ಫಾಲೋವರ್ಸ್ ಗಳನ್ನು ಗಳಿಸಿದ್ದಾರೆ.

    ಅಮೀರ್ ಈಗಾಗಲೇ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಕೋಟಿಗೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದು, ಈಗ ಇನ್ ಸ್ಟಾಗ್ರಾಮ್ ತೆರೆದ ಸ್ವಲ್ಪ ಸಮಯದಲ್ಲೇ ಈ ಪ್ರತಿಕ್ರಿಯೆಯನ್ನು ಕಂಡು ಸಂತೋಷಗೊಂಡಿದ್ದಾರೆ.

    ಅಮೀರ್ ಭಾರತದಲ್ಲಿ ಮಾತ್ರವಲ್ಲದೆ ಚೀನಾ, ಟರ್ಕಿ, ತೈವಾನ್ ಮತ್ತು ರಷ್ಯಾಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಮೀರ್ ಖಾನ್ ಅವರಿಗೆ ಟ್ವಿಟ್ಟರ್ ನಲ್ಲಿ 2.3 ಕೋಟಿ ಜನ ಫಾಲೋವರ್ ಗಳಿದ್ದರೆ, ಫೇಸ್ ಬುಕ್ ನಲ್ಲಿ 1.53 ಲಕ್ಷ ಮಂದಿ ಅಭಿಮಾನಿಗಳಿದ್ದಾರೆ.

    ಅಮೀರ್ ಖಾನ್ ಪ್ರಸ್ತುತ ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ `ಥಗ್ಸ್ ಆಫ್ ಹಿಂದೊಸ್ತಾನ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಅದರಲ್ಲಿ ಅಮಿತಾಬ್ ಬಚ್ಚನ್, ಫಾತಿಮಾ ಸನಾ ಶೇಖ್ ಮತ್ತು ಕತ್ರಿನಾ ಕೈಫ್ ನಟಿಸುತ್ತಿದ್ದಾರೆ.