Tag: ಅಮೀರ್ ಖಾನ್

  • ಐಪಿಎಲ್ ಫಿನಾಲೆಯಲ್ಲಿ ಅಮೀರ್ ಖಾನ್ ಸಿನಿಮಾ ‘ಲಾಲ್ ಸಿಂಗ್ ಛಡ್ಡಾ’ ಟ್ರೈಲರ್ ರಿಲೀಸ್

    ಐಪಿಎಲ್ ಫಿನಾಲೆಯಲ್ಲಿ ಅಮೀರ್ ಖಾನ್ ಸಿನಿಮಾ ‘ಲಾಲ್ ಸಿಂಗ್ ಛಡ್ಡಾ’ ಟ್ರೈಲರ್ ರಿಲೀಸ್

    ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದ ಟ್ರೈಲರ್ ಇಂದು ಸಂಜೆ ರಿಲೀಸ್ ಆಗಲಿದೆ. ವಿಶೇಷ ಅಂದರೆ, ಇಂದು ಸಂಜೆ ಗುಜರಾತ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 2022 ಫೈನಲ್ ಪಂದ್ಯದಲ್ಲಿ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದ ಟ್ರೈಲರ್ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ : ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ಮಂಸೋರೆ ನಿರ್ದೇಶನದ ‘19.20.21’ ಸಿನಿಮಾ

    ಇಂದು ಫಿನಾಲೆಯಲ್ಲಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದ್ದು, ಮೊದಲ ಇನ್ನಿಂಗ್ಸ್ ನ ಪಂದ್ಯದ ಎರಡನೇ ಟೈಮ್ ಔಟ್ ಅವಧಿಯಲ್ಲಿ ಈ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುತ್ತಿರುವುದಾಗಿ ನಟ ಅಮೀರ್ ಖಾನ್ ಟ್ವೈಟ್ ಮಾಡಿದ್ದಾರೆ. ಫೈನಲ್ ಪಂದ್ಯದ ನಡುವೆ ರಿಲೀಸ್ ಆಗಲಿರುವ ಟ್ರೈಲರ್ ಬಗ್ಗೆ ಈಗಿನಿಂದಲೇ ಕುತೂಹಲ ಶುರುವಾಗಿದೆ. ಇದನ್ನೂ ಓದಿ : ಒಟಿಟಿಯಲ್ಲೂ ರಾಜಮೌಳಿ ‘RRR’ ದಾಖಲೆ

    ತಮ್ಮ ವೃತ್ತಿ ಬದುಕಿನುದ್ದಕ್ಕೂ ವೈಶಿಷ್ಟ್ಯ ಪೂರ್ಣ ಸಿನಿಮಾಗಳನ್ನು ಮಾಡುತ್ತಾ ಬಂದವರು ಅಮೀರ್ ಖಾನ್. ಹಾಗಾಗಿ ಇದು ಅವರ ವೃತ್ತಿ ಜೀವನದ ಮತ್ತೊಂದು ಮಹೋನ್ನತ ಚಿತ್ರ ಎಂದು ಬಣ್ಣಿಸಲಾಗುತ್ತಿದೆ. ಈ ಸಿನಿಮಾಗಾಗಿ ಅಮೀರ್ 200ಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರಂತೆ. 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಸಿನಿಮಾದ ಶೂಟಿಂಗ್ ನಡೆದಿರುವುದು ದಾಖಲೆ. ಇದನ್ನೂ ಓದಿ : ಅಭಿಷೇಕ್ ಅಂಬರೀಶ್ ನಟನೆಯ ಕಾಳಿ ಸಿನಿಮಾ ಫಸ್ಟ್ ಲುಕ್ ರಿಲೀಸ್

    ಅದ್ವೈತ್ ಚಂದನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಹಾಲಿವುಡ್ ನ ಫಾರೆಸ್ಟ್ ಗಂಪ್ ಸಿನಿಮಾದ ರೀಮೇಕ್ ಚಿತ್ರ ಎಂದು ಹೇಳಲಾಗುತ್ತಿದೆ. ನಟನೆಯ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ಅಮೀರ್. ವಿವಿಧ ಕಾಲಘಟ್ಟದಲ್ಲಿ ಕಥೆ ನಡೆಯುವುದರಿಂದ, ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ಅಮೀರ್ ಮಾಡಿಕೊಂಡಿದ್ದಾರಂತೆ.

  • ಅಮೀರ್ ಖಾನ್ ಪುತ್ರಿ ಇರಾ ಪೂಲ್ ಸೈಡ್ ಬರ್ತ್‌ಡೇಗೆ ವ್ಯಾಪಕ ಟೀಕೆ- ಬಿಕಿನಿ ಬರ್ತ್‌ಡೇನಾ ಎಂದ ಕಾಲೆಳೆದ ನೆಟ್ಟಿಗರು

    ಅಮೀರ್ ಖಾನ್ ಪುತ್ರಿ ಇರಾ ಪೂಲ್ ಸೈಡ್ ಬರ್ತ್‌ಡೇಗೆ ವ್ಯಾಪಕ ಟೀಕೆ- ಬಿಕಿನಿ ಬರ್ತ್‌ಡೇನಾ ಎಂದ ಕಾಲೆಳೆದ ನೆಟ್ಟಿಗರು

    ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಬಾಲಿವುಡ್ ಹೆಸರಾಂತ ನಟ ಅಮೀರ್ ಖಾನ್ ಪುತ್ರಿ ಇರಾ ಅವರದ್ದೇ ಹವಾ. ಇರಾ ತಮ್ಮ 25ನೇ ವರ್ಷದ ಹುಟ್ಟು ಹಬ್ಬವನ್ನು ಪೂಲ್ ಸೈಡ್ ಆಚರಿಸಿದ್ದು, ಅವರು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಅವರ ಬಾಯ್ ಫ‍್ರೆಂಡ್ ಜತೆ ಅರೆ ಬೆತ್ತಲೆಯಾಗಿಯೇ ತಬ್ಬಿಕೊಂಡು ಮುತ್ತಿಟ್ಟಿದ್ದಾರೆ. ಅಂದು ಪಾರ್ಟಿಯಲ್ಲಿ ಸೇರಿದವರೆಲ್ಲ ಬಿಕಿನಿಯಲ್ಲೇ ಇದ್ದ ಕಾರಣಕ್ಕಾಗಿ ಇರಾ ವ್ಯಾಪಕ ಟೀಕೆಯನ್ನು ಎದುರಿಸುತ್ತಿದ್ದಾರೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ಮೊದಲು ಇರಾ ಅಪ್ಪ, ಅಮ್ಮ ಹಾಗೂ ಸಹೋದರ ಜತೆ ಕೇಕ್ ಕತ್ತಿರಿಸಿದ್ದಾರೆ. ಈ ವೇಳೆಯಲ್ಲೂ ಅವರು ಬಿಕಿನಿಯಲ್ಲೇ ಇದ್ದಾರೆ. ಅಮೀರ್ ಖಾನ್ ಮತ್ತು ಪುತ್ರ ಕೂಡ ಶರ್ಟ್ ಲೆಸ್ ಆಗಿದ್ದಾರೆ. ಅಲ್ಲದೇ, ಬಾಯ್ ಫ್ರೆಂಡ್ ಮತ್ತು ಫ್ರೆಂಡ್ಸ್ ಜತೆಯೂ ಇರುವಾಗ ಇರಾ ಅಷ್ಟೇ ಅಲ್ಲ, ಅಲ್ಲಿದ್ದ ಬಹುತೇಕರು ಅರೆಬೆತ್ತಲೆಯಲ್ಲೇ ಇದ್ದಾರೆ. ಹಾಗಾಗಿ ಆ ಫೋಟೋಗಳು ಟೀಕಾ ವಸ್ತುವಾಗಿವೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಅಮೀರ್ ಖಾನ್ ಮತ್ತು ಅಮೀರ್ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ. ವಿಚ್ಚೇದನದ ನಂತರವೂ ರೀನಾ ಮತ್ತು ಅಮೀರ್ ಒಂದೊಳ್ಳೆ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹಾಗಾಗಿ ಒಟ್ಟಿಗೆ ಸೇರಿ ಮಗಳ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಅಮೀರ್, ಅಮೀರ್ ಪುತ್ರ ಶರ್ಟ್ ಲೆಸ್ ಆಗಿದ್ದು, ಮಗಳು ಮಾತ್ರ ಬಿಕಿನಿಲ್ಲೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಆ ವಿಡಿಯೋವನ್ನು ಸ್ವತಃ ಅಮೀರ್ ಖಾನ್ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.  ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಇರಾ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಅಮೀರ್ ಖಾನ್, ರೀನಾ ದತ್ತ ಮತ್ತು ಅಮೀರ್ ಅವರ ಎರಡನೇ ಪತ್ನಿಯ ಮಗ ಅಜಾದ್ ಕೂಡ ಹಾಜರಿದ್ದು, ಇರಾ ಅವರ 25ನೇ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಅಲ್ಲದೇ, ಮಗಳಿಗೆ ವಿಶೇಷವಾಗಿ ಶುಭಾಶಯಗಳನ್ನೂ ಹೇಳಿದ್ದಾರೆ ಅಮೀರ್ ಖಾನ್. ಜೀವನ ಪೂರ್ತಿ ಸಂತೋಷವಾಗಿರು ಎಂದು ಹಾರೈಸಿದ್ದಾರೆ.

    ರೀನಾ ದತ್ ಮತ್ತು ಅಮೀರ್ ಖಾನ್ 1986ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಇರಾ ಮತ್ತು ಜುನೈದ್ ಖಾನ್ ಇಬ್ಬರು ಮಕ್ಕಳಿದ್ದಾರೆ. ಮದುವೆಯಾಗಿ ಒಂದೂವರೆ ದಶಕದ ನಂತರ ಈ ಜೋಡಿ ವಿಚ್ಚೇದನ ಪಡೆಯಿತು. ಆ ಬಳಿಕ ಅಮೀರ್ ಖಾನ್ ಅವರು ಕಿರಣ್ ರಾವ್ ಅವರ ಜತೆ ಹೊಸ ಜೀವನಕ್ಕೆ ಕಾಲಿಟ್ಟರು. ಈಗ ಕಿರಣ್ ರಾವ್ ಜೊತೆಯೂ ಅಮೀರ್ ಡೈವೋರ್ಸ್ ಪಡೆದುಕೊಂಡಿದ್ದಾರೆ.

  • ಬಿಕಿನಿಯಲ್ಲೇ ಕೇಕ್ ಕತ್ತರಿಸಿದ ಅಮೀರ್ ಖಾನ್ ಪುತ್ರಿ ಇರಾ

    ಬಿಕಿನಿಯಲ್ಲೇ ಕೇಕ್ ಕತ್ತರಿಸಿದ ಅಮೀರ್ ಖಾನ್ ಪುತ್ರಿ ಇರಾ

    ಬಾಲಿವುಡ್ ನ ಹೆಸರಾಂತ ನಟ ಅಮೀರ್ ಖಾನ್ ಪುತ್ರಿ ಇರಾ 25ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ವಿಶೇಷ ಅಂದರೆ, ಬಿಕಿನಿಯಲ್ಲೇ ಅವರು ಕೇಕ್ ಕಟ್ ಮಾಡುವ ಮೂಲಕ ಟ್ರೋಲ್ ಗೆ ಆಹಾರವಾಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಂತೂ ವೈರಲ್ ಆಗಿದೆ. ಇದು ನಿಜವಾದ ಫೋಟೋನಾ ಅಥವಾ ಎಡಿಟ್ ಮಾಡಲಾಗಿದೆ ಎಂಬ ಅನುಮಾನವನ್ನೂ ಹುಟ್ಟು ಹಾಕಿದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಅಮೀರ್ ಖಾನ್ ಮತ್ತು ಅಮೀರ್ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ. ವಿಚ್ಚೇದನದ ನಂತರವೂ ರೀನಾ ಮತ್ತು ಅಮೀರ್ ಒಂದೊಳ್ಳೆ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹಾಗಾಗಿ ಒಟ್ಟಿಗೆ ಸೇರಿ ಮಗಳ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಅಮೀರ್, ಅಮೀರ್ ಪುತ್ರ ಶರ್ಟ್ ಲೆಸ್ ಆಗಿದ್ದು, ಮಗಳು ಮಾತ್ರ ಬಿಕಿನಿಲ್ಲೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಆ ವಿಡಿಯೋವನ್ನು ಸ್ವತಃ ಅಮೀರ್ ಖಾನ್ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ಇರಾ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಅಮೀರ್ ಖಾನ್, ರೀನಾ ದತ್ತ ಮತ್ತು ಅಮೀರ್ ಅವರ ಎರಡನೇ ಪತ್ನಿಯ ಮಗ ಅಜಾದ್ ಕೂಡ ಹಾಜರಿದ್ದು, ಇರಾ ಅವರ 25ನೇ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಅಲ್ಲದೇ, ಮಗಳಿಗೆ ವಿಶೇಷವಾಗಿ ಶುಭಾಶಯಗಳನ್ನೂ ಹೇಳಿದ್ದಾರೆ ಅಮೀರ್ ಖಾನ್. ಜೀವನ ಪೂರ್ತಿ ಸಂತೋಷವಾಗಿರು ಎಂದು ಹಾರೈಸಿದ್ದಾರೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜತೆ ಇರೋ ಹುಡುಗ ಯಾರು?

    ರೀನಾ ದತ್ ಮತ್ತು ಅಮೀರ್ ಖಾನ್ 1986ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಇರಾ ಮತ್ತು ಜುನೈದ್ ಖಾನ್ ಇಬ್ಬರು ಮಕ್ಕಳಿದ್ದಾರೆ. ಮದುವೆಯಾಗಿ ಒಂದೂವರೆ ದಶಕದ ನಂತರ ಈ ಜೋಡಿ ವಿಚ್ಚೇದನ ಪಡೆಯಿತು. ಆ ಬಳಿಕ ಅಮೀರ್ ಖಾನ್ ಅವರು ಕಿರಣ್ ರಾವ್ ಅವರ ಜತೆ ಹೊಸ ಜೀವನಕ್ಕೆ ಕಾಲಿಟ್ಟರು. ಈಗ ಕಿರಣ್ ರಾವ್ ಜೊತೆಯೂ ಅಮೀರ್ ಡೈವೋರ್ಸ್ ಪಡೆದುಕೊಂಡಿದ್ದಾರೆ.

  • ಕಾಲೇಜು ದಿನಗಳಲ್ಲಿ ಅಮೀರ್‌ ಮೇಲೆ ಕ್ರಷ್‌ ಆಗಿತ್ತು.. ಲವ್‌ ಲೆಟರ್‌ ಕೂಡ ಬರೆದಿದ್ದೆ: ಬಾಲಿವುಡ್‌ ನಟಿ

    ಕಾಲೇಜು ದಿನಗಳಲ್ಲಿ ಅಮೀರ್‌ ಮೇಲೆ ಕ್ರಷ್‌ ಆಗಿತ್ತು.. ಲವ್‌ ಲೆಟರ್‌ ಕೂಡ ಬರೆದಿದ್ದೆ: ಬಾಲಿವುಡ್‌ ನಟಿ

    ಬಾಲಿವುಡ್‌ ನಟಿ ಶೆಫಾಲಿ ಶಾ ಅವರು ತಮ್ಮ ಕಾಲೇಜು ದಿನಗಳು, ಪ್ರೀತಿ, ಸಿನಿಮಾಗಳಲ್ಲಿನ ಅಭಿನಯದ ಕೆಲವು ಇಂಟರೆಸ್ಟಿಂಗ್‌ ವಿಷಯಗಳನ್ನು ಬಾಲಿವುಡ್‌ ಹಂಗಾಮದಲ್ಲಿ ಹಂಚಿಕೊಂಡಿದ್ದಾರೆ.

    ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಅವರಿಗೆ ಅಮಿರ್‌ ಖಾನ್‌ ಮೇಲೆ ಕ್ರಷ್‌ ಆಗಿತ್ತು. ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ ಸುದೀರ್ಘ ಬರಹವಿದ್ದ ಪ್ರೇಮ ಪತ್ರವೊಂದನ್ನು ಅಮೀರ್‌ ಖಾನ್‌ಗೆ ಕಳುಹಿಸಿದ್ದರು. ಲವ್‌ ಲೆಟರ್‌ನೊಂದಿಗೆ ತನ್ನ ಫೋಟೊವೊಂದನ್ನು ಸಹ ಕಳುಹಿಸಿದ್ದರು. ಇದನ್ನೂ ಓದಿ: ಮಾಧುರಿ ದೀಕ್ಷಿತ್ ಇರೋದು ಮನೇಲಿ ಅಲ್ಲ, ಅರಮನೆಯಲ್ಲಿ: ಹೊಸ ಮನೆಗೆ ದೇವದಾಸ್ ಬೆಡಗಿ

    1995ರಲ್ಲಿ ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದಲ್ಲಿ ತೆರೆ ಕಂಡಿದ್ದ ಅಮೀರ್‌ ಖಾನ್‌ ಅಭಿನಯದ ʼರಂಗೀಲಾʼ ಚಿತ್ರದಲ್ಲಿ ಶೆಫಾಲಿ ಶಾ ಅವರು ಮಾಲಾ ಮಲ್ಹೋತ್ರಾ ಪಾತ್ರದಲ್ಲಿ ಅಭಿನಯಿಸಿದ್ದರು. ಆ ಸಿನಿಮಾದ ಕೆಲವೇ ದೃಶ್ಯಗಳಲ್ಲಿ ಮಾತ್ರ ಇವರ ಪಾತ್ರವಿದೆ. ಆದರೆ ಅಮೀರ್‌ ಅವರೊಂದಿಗೆ ಕಾಣಿಸಿಕೊಳ್ಳುವ ಯಾವುದೇ ದೃಶ್ಯ ಸಿನಿಮಾದಲ್ಲಿರಲಿಲ್ಲ.

    ಬಾಲಿವುಡ್‌ ಹಂಗಾಮದಲ್ಲಿ ಮಾತನಾಡಿದ ಶೆಫಾಲಿ, ಅಮೀರ್‌ ಖಾನ್‌ ಅವರಿಗೆ ನಾನು ಪತ್ರ ಬರೆದಿದ್ದೆ. ಪ್ರೇಮ ಪತ್ರದೊಂದಿಗೆ ನನ್ನ ಫೋಟೋವನ್ನು ಕಳುಹಿಸಿದ್ದೆ. ಅದರಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಈ ವಾರ ಕರ್ನಾಟಕದಲ್ಲೇ 250ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ‘ಆರ್.ಆರ್.ಆರ್’: ಪುನೀತ್ ‘ಜೇಮ್ಸ್’ ಏನಾಗತ್ತೆ?

    ಚಿತ್ರರಂಗಕ್ಕೆ ಬಂದಾಗಿನಿಂದ ಅಮೀರ್‌ ಖಾನ್‌ ಅವರೊಂದಿಗೆ ನೀವು ಸಿನಿಮಾ ಕೆಲಸ ಮಾಡಿದ್ದೀರಾ ಎಂಬ ಪ್ರಶ್ನೆಗೆ ಶೆಫಾಲಿ, ಇಲ್ಲ ಎಂದಿದ್ದಾರೆ. ಅಮೀರ್‌ ಅಭಿನಯದ ʼರಂಗೀಲಾʼ ಸಿನಿಮಾದಲ್ಲಿ ನಟಿಸಿದ್ದೇನೆ. ಆದರೆ ಅವರೊಟ್ಟಿಗೆ ತೆರೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

    ನಿಮ್ಮ ಪ್ರೀತಿಯ ಬಗ್ಗೆ ಅಮೀರ್‌ ಖಾನ್‌ ಅವರಿಗೆ ಈಗೇನಾದರೂ ನೆನಪಿದೆಯಾ ಎಂಬ ಪ್ರಶ್ನೆಗೆ ಶೆಫಾಲಿ, ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ತನಿಖಾ ಥ್ರಿಲ್ಲರ್‌ ಸಿನಿಮಾ ʼಜಲ್ಸʼದಲ್ಲಿ ಶೆಫಾಲಿ ಶಾ ಮತ್ತು ವಿದ್ಯಾ ಬಾಲನ್‌ ಅಭಿನಯಿಸಿದ್ದಾರೆ. ಸುರೇಶ್‌ ತ್ರಿವೇಣಿ ನಿರ್ದೇಶನದ ಈ ಸಿನಿಮಾ ಮಾ.18ರಂದು ಅಮೇಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ.

  • ಕಂಗನಾ ರಣಾವತ್ ಪ್ರಶ್ನೆಗೆ ಮೌನ ಮುರಿದ ಆಮೀರ್ ಖಾನ್ : ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಬೆನ್ನು ತಟ್ಟಿದ ಖಾನ್

    ಕಂಗನಾ ರಣಾವತ್ ಪ್ರಶ್ನೆಗೆ ಮೌನ ಮುರಿದ ಆಮೀರ್ ಖಾನ್ : ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಬೆನ್ನು ತಟ್ಟಿದ ಖಾನ್

    ನವದೆಹಲಿ: ವಿವೇಕ್ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ, ಇದೀಗ ಸಿನಿಮಾವಾಗಿ ಉಳಿದಿಕೊಂಡಿಲ್ಲ. ಅದನ್ನು ರಾಜಕೀಯ ಇಚ್ಛಾಶಕ್ತಿಗೆ ಮತ್ತು ಕೋಮಿನ ನಡುವಿನ ವೈಷಮ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎನ್ನುವ ಆರೋಪವಿದೆ. ಹೀಗಾಗಿ ಬಾಲಿವುಡ್ ಖಾನ್ ನಟರು ಈ ಕುರಿತು ಏನು ಹೇಳುತ್ತಾರೆ ಎನ್ನುವ ಕುತೂಹಲ ಬಿಟೌನ್‌ಗೆ ಇತ್ತು. ಈ ಕುರಿತು ನಟಿ ಕಂಗನಾ ರಣಾವತ್ ಬಹಿರಂಗವಾಗಿಯೇ ಹೇಳಿಕೆ ನೀಡಿ ‘ಬಾಲಿವುಡ್ ಏಕೆ ಮೌನವಹಿಸಿದೆ? ಈ ಸಿನಿಮಾದ ಬಗ್ಗೆ ಯಾಕೆ ಯಾರು ತುಟಿ ಬಿಚ್ಚುತ್ತಿಲ್ಲ’ ಎಂದು ಪ್ರಶ್ನೆ ಕೇಳಿದ್ದರು. ನೇರವಾಗಿ ಖಾನ್ ಗುಂಪಿಗೆ ಹೇಳದೇ, ಪರೋಕ್ಷವಾಗಿ ಶಾರೂಖ್ ಖಾನ್, ಸಲ್ಮಾನ್ ಖಾಗ್, ಆಮೀರ್ ಖಾನ್‌ಗೆ ಅವರು ಟಾಂಗ್ ಕೊಟ್ಟಿದ್ದರು. ಇದೀಗ ಈ ಸಿನಿಮಾದ ಬಗ್ಗೆ ಆಮೀರ್ ಖಾನ್ ಮೌನ ಮುರಿದಿದ್ದಾರೆ. ಈ ಚಿತ್ರವನ್ನು ಅವರು ನೋಡದೇ ಇದ್ದರೂ, ಹಾಡಿ ಹೊಗಳಿದ್ದಾರೆ.

    ಕಾಶ್ಮೀರಿ ಪಂಡಿತರ ಹತ್ಯಾಕಾಂಡವನ್ನು ತೆರೆ ಮೇಲೆ ಬಿಂಬಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರಾಜಕೀಯ ತಿರುವು ಪಡೆದು ವಿವಾದಕ್ಕೆ ಸಿಲುಕಿದೆ. ಅನ್ಯ ಕೋಮಿನ ಸಮುದಾಯವನ್ನು ಸಿನಿಮಾದಲ್ಲಿ ಉಗ್ರರೆಂದೇ ಬಿಂಬಿಸಲಾಗಿದೆ ಎಂಬ ಆರೋಪವೂ ಸಿನಿಮಾದ ಮೇಲಿದೆ. ಆದರೆ ಸಿನಿಮಾ ಕುರಿತು ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಚಿತ್ರದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಮೀರ್ ಖಾನ್, ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತು ಪ್ರತಿಕ್ರಿಯಿಸಿದ್ದಾರೆ. ಎಲ್ಲರೂ ಸಿನಿಮಾವನ್ನು ನೋಡಬೇಕು ಎಂದು ತಿಳಿಸಿದ್ದಾರೆ.

    “ನಾನು ಖಂಡಿತ ಈ ಸಿನಿಮಾ ನೋಡುತ್ತೇನೆ. ಈ ಕಥೆಯು ನಮ್ಮ ಇತಿಹಾಸದ ಒಂದು ಭಾಗವಾಗಿದೆ. ಕಾಶ್ಮೀರಿ ಪಂಡಿತರಿಗೆ ಏನಾಯಿತು ಎಂಬುದನ್ನು ಚಿತ್ರಿಸಲಾಗಿದೆ. ಇದು ನಿಜಕ್ಕೂ ದುಃಖಕರ ಸಂಗತಿ. ಅಂತಹ ವಿಷಯಗಳ ಮೇಲೆ ಮೂಡಿಬರುವ ಯಾವುದೇ ಚಲನಚಿತ್ರವನ್ನು ಎಲ್ಲಾ ಭಾರತೀಯರು ನೋಡಬೇಕು” ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿವೆ ಮಾದಕ ನಟಿ ಸನ್ನಿ ಲಿಯೋನ್ ಅಭಿಮಾನಿ ಸಂಘ: ತಮಾಷೆಯಲ್ಲ, ನಿಜ

    “ಮಾನವೀಯತೆ ಮೇಲೆ ವಿಶ್ವಾಸವಿಟ್ಟರುವ ಎಲ್ಲ ಜನರ ಭಾವನೆಗಳನ್ನು ಈ ಚಿತ್ರ ಮುಟ್ಟಿದೆ. ಆಶಯ ತುಂಬಾ ಚೆನ್ನಾಗಿದೆ. ಖಂಡಿತಾ ಸಿನಿಮಾ ನೋಡುತ್ತೇನೆ. ಸಿನಿಮಾ ಯಶಸ್ವಿಯಾಗಿರುವುದು ಖುಷಿ ತಂದಿದೆ” ಎನ್ನುವುದು ಆಮೀರ್ ಮಾತು.

    1990 ರಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಸುತ್ತ ಹೆಣೆದಿರುವ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’. ವಿವೇಕ್ ಅಗ್ನಿಹೋತ್ರಿ ಅವರು ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದನ್ನೂ ಓದಿ : ತಮಿಳಲ್ಲ, ಬಾಲಿವುಡ್ ಗೆ ಹಾರಿದ ರಜನಿಕಾಂತ್ ಪುತ್ರಿ ಐಶ್ವರ್ಯಾ

  • ಮಾಜಿ ಪತ್ನಿಯಿಂದ ಅಮೀರ್ ಖಾನ್ ಗೆ ಸಿಕ್ತು ಭರ್ಜರಿ ಗಿಫ್ಟ್

    ಮಾಜಿ ಪತ್ನಿಯಿಂದ ಅಮೀರ್ ಖಾನ್ ಗೆ ಸಿಕ್ತು ಭರ್ಜರಿ ಗಿಫ್ಟ್

    ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಟ್ಟಿರುವ ಅಮೀರ್ ಖಾನ್‍ಗೆ ಈ ವಿಶೇಷ ದಿನದಂದು ಮಾಜಿ ಪತ್ನಿ ಕಿರಣ್ ರಾವ್ ಬೆಸ್ಟ್ ಗಿಫ್ಟ್ ನೀಡಿರುವುದಾಗಿ ಸ್ವತಃ ಅವರೇ ಬಹಿರಂಗ ಪಡಿಸಿದ್ದಾರೆ. ಆ ಗಿಫ್ಟ್ ಈವರೆಗೂ ಸಿಗದೇ ಇರದಂತಹ ದುಬಾರಿ ಉಡುಗೊರೆಯಾಗಿದೆಯಂತೆ.

    ನನ್ನನ್ನು ಕಿರಣ್‍ಗಿಂತ ಚೆನ್ನಾಗಿ ಯಾರು ತಿಳಿದಿಲ್ಲ. ಹಾಗಾಗಿ ಈ ವರ್ಷ ಸ್ವಯಂ ಆಗಿ ಕೆಲಸ ಮಾಡಲು ಬಯಸುತ್ತಿರುವ ನನಗೆ ನನ್ನಲ್ಲಿರುವ ಒಂದಷ್ಟು ವೀಕ್‍ನೆಸ್‍ಗಳ ಬಗ್ಗೆ ಲಿಸ್ಟ್ ಮಾಡಿ ತಿಳಿಸುವಂತೆ ಕೇಳಿದ್ದೆ. ಅದಕ್ಕೆ ಕಿರಣ್ 10 ರಿಂದ 12 ಸಲಹೆಗಳನ್ನು ನೀಡಿದರು. ನಾನು ಅದೆಲ್ಲವನ್ನು ಬರೆದುಕೊಂಡೆ. ಇದು ನನ್ನ ಜೀವನದ ಅತ್ಯುತ್ತಮ ಗಿಫ್ಟ್ ಆಗಿದೆ ಎಂದರು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

     

    View this post on Instagram

     

    A post shared by Aamir Khan (@amirkhanactor_)

    ಇದೇ ವೇಳೆ ವಿಚ್ಚೇದನ ಕುರಿತಂತೆ ಮಾತನಾಡಿದ ಅವರು, ಕಿರಣ್ ಮತ್ತು ನಾನು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ. ನಾವು ಪರಸ್ಪರ ತುಂಬಾ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದೇವೆ. ಆದರೆ ಜನರಿಗೆ ಇದು ಅರ್ಥವಾಗುವುದಿಲ್ಲ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ಸಾಮಾನ್ಯ ವಿಚಾರವಾಗಿ ಇದನ್ನು ನೋಡಲು ಸಾಧ್ಯವಾಗುವುದಿಲ್ಲ. ನಿಜ ಹೇಳಬೇಕೆಂದರೆ ನಾವು ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತೇವೆ ಮತ್ತು ಪರಸ್ಪರ ಕುಟುಂಬದವರನ್ನು ಅರ್ಥ ಮಾಡಿಕೊಂಡಿದ್ದೇವೆ. ವಾಸ್ತವವಾಗಿ ಕಿರಣ್ ಮತ್ತು ನನ್ನದು ಒಂದೇ ಕುಟುಂಬ. ಆದರೆ ನಮ್ಮ ಗಂಡ ಮತ್ತು ಹೆಂಡತಿಯ ಸಂಬಂಧದಲ್ಲಿ ಬದಲಾವಣೆಯಾಗಿದೆ. ನಾವು ಮದುವೆಯನ್ನು ಗೌರವಿಸುತ್ತೇವೆ. ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಆದರೆ ನಾವು ಗಂಡ ಮತ್ತು ಹೆಂಡತಿಯಾಗಿ ದೀರ್ಘಕಾಲ ಮುಂದುವರಿಯಲು ಆಗಲಿಲ್ಲ. ಹಾಗಾಗಿ ವಿಚ್ಛೇದನ ಪಡೆಯಲು ನಿರ್ಧರಿಸಿದೆವು ಎಂದಿದ್ದಾರೆ.

     

    View this post on Instagram

     

    A post shared by Aamir Khan (@amirkhanactor_)

    18 ವರ್ಷದ ದಾಂಪತ್ಯ ಜೀವನಕ್ಕೆ ಅಮೀರ್ ಮತ್ತು ಕಿರಣ್ 2021ರಲ್ಲಿ ವಿಚ್ಛೇದನ ಪಡೆದರು. ಆದರೆ ಇಬ್ಬರು ಸ್ನೇಹಿತರು ಮತ್ತು ಪೋಷಕರಾಗಿ ಮುಂದುವರಿಯುವುದಾಗಿ ತಿಳಿಸಿದ್ದರು. ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್: ಅಸಲಿನಾ..? ನಕಲಿನಾ..?

  • ಜುಂಡ್ ಚಿತ್ರ ವೀಕ್ಷಿಸಿ ಕಣ್ಣೀರಿಟ್ಟ ಅಮೀರ್ – ಓವರ್‌ ಎಕ್ಸೈಟ್‌ ಆಗ್ತಾರೆ ಎಂದ ಅಮಿತಾಬ್

    ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ‘ಜುಂಡ್'(Jhund) ಚಿತ್ರದ ವಿಶೇಷ ಪ್ರದರ್ಶನವನ್ನು ವೀಕ್ಷಿಸಿದ ಅಮೀರ್ ಖಾನ್ ಕಣ್ಣೀರು ಹಾಕಿ, ಇದು ಅಮಿತಾಬ್ ಬಚ್ಚನ್‌ರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ ಎಂದು ಹೊಗಳಿದ್ದರು. ಈ ಹೊಗಳಿಕೆಗೆ ಅಮಿತಾಭ್, ಅಮೀರ್ ಆಗಾಗ ಅತಿಯಾಗಿ ಎಕ್ಸೈಟ್‌ ಆಗ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಅಮೀರ್ ಖಾನ್ ಕಳೆದ ವಾರ ಜುಂಡ್ ಚಿತ್ರದ ವಿಶೇಷ ಪ್ರದರ್ಶನವನ್ನು ವೀಕ್ಷಿಸಿದ್ದರು. ಚಿತ್ರ ವೀಕ್ಷಿಸಿದ ಅಮೀರ್ ಖಾನ್ ಇದು ಅಮಿತಾಬ್ ಅವರ ಶ್ರೇಷ್ಠ ಸಿನಿಮಾಗಳಲ್ಲೊಂದು ಎಂದು ಹೇಳುವುದರೊಂದಿಗೆ ಕಣ್ಣೀರನ್ನೂ ಹಾಕಿದ್ದರು. ಇದನ್ನೂ ಓದಿ: ಮದ್ವೆ ಸೀರೆ ವಾಪಸ್ಸು ಕೊಟ್ರಂತೆ ಸಮಂತಾ: ಮಳೆ ನಿಂತ್ರೂ ಮಳೆ ಹನಿ ನಿಲ್ಲದು!

    ಇತ್ತೀಚೆಗೆ ನಡೆದ ಸಂವಾದವೊಂದರಲ್ಲಿ ಅಮಿತಾಬ್ ಅಮೀರ್ ಖಾನ್‌ಗೆ ಧನ್ಯವಾದ ಹೇಳಿದ್ದರಲ್ಲದೇ ಕಣ್ಣೀರು ಹಾಕಿದ ಅಮೀರ್ ಕುರಿತು ಅದು ಅವರ ಓವರ್‌ ಎಕ್ಸೈಟ್‌ (ಅತಿಯಾದ ಭಾವುಕ) ಎಂದು ಹೊಗಳಿದ್ದರು. ಜುಂಡ್ ಚಿತ್ರ ಬಿಡುಗಡೆಗೂ ಮುನ್ನ ವಿಶೇಷ ಪ್ರದರ್ಶನಕ್ಕೆ ಅಮೀರ್ ಅವರನ್ನು ಆಹ್ವಾನಿಸಲಾಗಿತ್ತು. ಪ್ರೊಡಕ್ಷನ್ ಹೌಸ್ ಟಿ ಸೀರೀಸ್ ಯೂಟ್ಯೂಬ್ ಚ್ಯಾನೆಲ್‌ನಲ್ಲಿ ಹಂಚಿಕೊಂಡಿದ್ದ ವೀಡಿಯೋದಲ್ಲಿ ಅಮೀರ್ ಖಾನ್ ಕಣ್ಣೀರು ಹಾಕಿಕೊಂಡು ಚಿತ್ರವನ್ನು ಹೊಗಳಿರುವುದು ಕಂಡುಬಂದಿತ್ತು. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ

    ವಾಟ್ ಎ ಫಿಲ್ಮ್. ಮೈ ಗಾಡ್. ಬೋಹುತ್ ಹೀ ಬೆಹ್ತರೀನ್ ಫಿಲ್ಮ್ ಹೈ(ಇದೆಂಥಾ ಸಿನಿಮಾ. ಓ ದೇವರೇ! ಇದೊಂದು ಅದ್ಭುತ ಚಿತ್ರ) ಎಂದು ಹೇಳಿದ್ದರು. ಇದರೊಂದಿಗೆ ಚಪ್ಪಳೆ ತಟ್ಟಿ, ತಮ್ಮ ಟಿ-ಶರ್ಟ್ ತೋಳುಗಳಿಂದ ತಮ್ಮ ಕಣ್ಣೀರು ಒರೆಸಿಕೊಂಡಿದ್ದರು.

  • ಟ್ರೋಲಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟ ಅಮೀರ್ ಪುತ್ರಿ ಇರಾ – ಸೋನಾ ಮೋಹಪತ್ರಾ ಸಾಥ್

    ಟ್ರೋಲಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟ ಅಮೀರ್ ಪುತ್ರಿ ಇರಾ – ಸೋನಾ ಮೋಹಪತ್ರಾ ಸಾಥ್

    ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ಈ ವೇಳೆ ಇರಾ ಟ್ರೋಲ್ ಆಗಿದ್ದು, ಅದಕ್ಕೆ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಗಾಯಕಿ ಸೋನಾ ಮೋಹಪತ್ರಾ ಸಹ ಇರಾಗೆ ಸಾಥ್ ಕೊಟ್ಟಿದ್ದಾರೆ.

    ಅಮೀರ್ ಖಾನ್ ಅವರ ಮಗಳು ಇರಾ ಅವರನ್ನು ಟ್ರೋಲಿಗರು, ಇರಾ ಅವರು ವಯಸ್ಸಾದವರು. ಹಂದಿಯಂತಹ ಮುಖವನ್ನು ಹೊಂದಿದ್ದಾರೆ ಎಂದು ಅಪಹಾಸ್ಯ ಮಾಡಿದ್ದರು. ಈ ಟ್ರೋಲ್ ಗೆ ಪ್ರತಿಕ್ರಿಯಿಸಿದ ಇರಾ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದು, ನಾನು ಸಾರ್ವಜನಿಕವಾಗಿ ಮಾನಸಿಕ ಸಮಸ್ಯೆಗಳನ್ನು ಹಂಚಿಕೊಳ್ಳುವ ಬಗ್ಗೆ ಮಾತನಾಡುತ್ತಿದ್ದೇನೆ. ನೀವು ಏಕೆ ಈ ರೀತಿ ಟ್ರೋಲ್ ಮಾಡುತ್ತಿದ್ದೀರಾ ಎಂದು ನಿಮಗೆ ತಿಳಿದಿರಲಿ. ಸಾರ್ವಜನಿಕವಾಗಿ ಈ ರೀತಿ ಸಮಸ್ಯೆಗಳ ಬಗ್ಗೆ ಮಾತನಾಡುವುದು ತುಂಬಾ ಮುಖ್ಯ. ಈ ಬಗ್ಗೆ ಮಾತನಾಡುವುದು ಮತ್ತು ಮಾನಸಿಕ ಆರೋಗ್ಯವನ್ನು ಸಾಮಾನ್ಯಗೊಳಿಸುವುದು ಮುಖ್ಯ. ನಿಮ್ಮ ಬಗ್ಗೆ ನೀವು ಮೊದಲು ಹೋರಾಡಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಸಹೋದರನೊಂದಿಗೆ ಸಾರಾ ಅಲಿ ಖಾನ್ ಕಾಶ್ಮೀರ ಟ್ರಿಪ್

    ನಿಮ್ಮ ಸಮಸ್ಯೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಎಂದು ನಾನು ಎಲ್ಲರಿಗೂ ಹೇಳುವುದಿಲ್ಲ. ಅದನ್ನು ನಾನು ತೀರ್ಮಾನಿಸುವುದಿಲ್ಲ. ಸಾರ್ವಜನಿಕವಾಗಿ ಹಂಚಿಕೊಳ್ಳಲು ಆಸಕ್ತಿಯಿಲ್ಲದ ಸಾಕಷ್ಟು ಬುದ್ಧಿವಂತ, ಧೈರ್ಯಶಾಲಿ ಜನರನ್ನು ನಾನು ಬಲ್ಲೆ. ಸೊಶಿಯಲ್ ಮೀಡಿಯಾದಲ್ಲಿ ದ್ವೇಷ ಮತ್ತು ಕಾಮೆಂಟ್‍ಗಳಿಂದ ತೊಂದರೆಗೊಳಗಾಗುವ ಸಾಕಷ್ಟು ಬುದ್ಧಿವಂತ, ಧೈರ್ಯಶಾಲಿ ಜನರನ್ನು ನಾನು ಬಲ್ಲೆ. ಆದ್ದರಿಂದ ಅವರು ತಮ್ಮ ಅಮೂಲ್ಯ ಶಕ್ತಿಯನ್ನು ಬೇರೆಡೆ ಕೇಂದ್ರೀಕರಿಸುತ್ತಾರೆ. ಟೇಕ್ ಕೇರ್ ಎಂದು ಟ್ರೋಲಿಗರಿಗೆ ಖಡಕ್ ಆಗಿ ಹೇಳಿದ್ದಾರೆ.

     

    View this post on Instagram

     

    A post shared by Ira Khan (@khan.ira)

    ಗಾಯಕಿ ಸೋನಾ ಮೋಹಪತ್ರಾ ಈ ಪೋಸ್ಟ್ ಗೆ ‘ಗುಡ್, ಗೊಂಬೆ’ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ. ಟ್ರೋಲಿಗರಿಗೆ, ನಿಮ್ಮ ಈ ರೀತಿಯ ಪೋಸ್ಟ್ ಅನುಭವಿಸುವವರಿಗೆ ವಿಷದ ರೀತಿ ಇರುತ್ತೆ. ಹೋಗಿ ಏನಾದರೂ ಕೆಲಸ ಕಲಿಯಿರಿ. ನಿಮ್ಮ ಹೆತ್ತವರಿಗೆ ಅವಮಾನ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ನಿದ್ದೆಗಳಿಲ್ಲದ ರಾತ್ರಿ ಕಳೆಯಲು ಸಿದ್ಧರಾಗಿ – ಪ್ರಿಯಾಂಕಾಗೆ ಅನುಷ್ಕಾ ಶರ್ಮಾ ವಿಶ್

    ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಇರಾ ಆಗಾಗ್ಗೆ ತಾನು ಅನುಭವಿಸಿದ ಮಾನಸಿಕ ಖಿನ್ನತೆ ಮತ್ತು ಇತರ ಸಮಸ್ಯೆಗಳ ಬಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಈ ಕಾರಣದಿಂದ ಇರಾ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ.

  • ಥಿಯೇಟರ್‌ಗಳಲ್ಲಿ ನಾವು ರಾಜಿಯಾಗಲ್ಲ: ಅಮೀರ್‌ಗೆ ಯಶ್ ಉತ್ತರ

    ಥಿಯೇಟರ್‌ಗಳಲ್ಲಿ ನಾವು ರಾಜಿಯಾಗಲ್ಲ: ಅಮೀರ್‌ಗೆ ಯಶ್ ಉತ್ತರ

    ಬೆಂಗಳೂರು: ಥಿಯೇಟರ್‌ಗಳಲ್ಲಿ ನಾವು ರಾಜೀಯಾಗುವುದಿಲ್ಲ ಎಂದು ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್ ನಟ ಅಮೀರ್ ಖಾನ್ ಗೆ ಉತ್ತರಿಸಿದ್ದಾರೆ.

    ಕೆಜಿಎಫ್ ಚಾಪ್ಟರ್-2 ರಿಲೀಸ್ ದಿನವೇ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸಹ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆ ಅಮೀರ್ ಖಾನ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಯಶ್ ಅವರನ್ನು ಟೆಕ್ಸ್ಟ್ ಮೆಸೇಜ್ ನಲ್ಲಿ ಕ್ಷಮೆ ಕೇಳಿಕೊಂಡಿದ್ದರು.

    ಅದಕ್ಕೆ ಪ್ರತಿಕ್ರಿಯಿಸಿದ ಯಶ್, ಅಮೀರ್ ಜೀ ನಿಮ್ಮ ಅನಿವಾರ್ಯತೆ ನಮಗೆ ಅರ್ಥವಾಗುತ್ತೆ. ಪರವಾಗಿಲ್ಲ ನೀವೂ ಅಂದೇ ಸಿನಿಮಾವನ್ನು ರಿಲೀಸ್ ಮಾಡಬಹುದು. ನೀವು ಬಾಲಿವುಡ್‍ಗೆ ಹಿರಿಯರು. ನಿಮ್ಮ ಕೋರಿಕೆಯನ್ನು ತಿರಸ್ಕರಿಸಲಾಗದು. ಆದರೆ ಥಿಯೇಟರ್‍ಗಳಲ್ಲಿ ನಾವು ರಾಜಿಯಾಗುವುದಿಲ್ಲ. ನಮ್ಮ ನಿರ್ಮಾಪಕರಿಗೂ ಕಷ್ಟವಾಗಬಾರದಲ್ಲವೇ? ನಮ್ಮ ಹಂಚಿಕೆದಾರರ ಜೊತೆ ಈ ಬಗ್ಗೆ ಒಂದು ಸಲ ಮಾತನಾಡುತ್ತೇನೆ. ನಿಮ್ಮ ಬೆಂಬಲಕ್ಕೆ ನಾನಿರುತ್ತೇನೆ. ನೀವು ಸಹಕರಿಸಿ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಯಶ್‌, ಪ್ರಶಾಂತ್‌ ನೀಲ್‌ ಬಳಿ ಕ್ಷಮೆ ಕೇಳಿದ ಅಮೀರ್‌ ಖಾನ್‌

    ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಮೀರ್ ನಾನು ಬೇರೆಯವರನ್ನು ಅತಿಕ್ರಮಿಸಿಕೊಳ್ಳುತ್ತಿದ್ದೇನೆ ಎಂಬ ಭಾವನೆ ಸೃಷ್ಟಿ ಆಗುವುದನ್ನು ದ್ವೇಷಿಸ್ತೇನೆ. ಆದರೆ ನಾನು ಮೊದಲ ಬಾರಿಗೆ ಸಿಖ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣ ಏಪ್ರಿಲ್ 14ರಂದು ಬೈಸಾಖಿ ದಿನ ಸಿನಿಮಾ ರಿಲೀಸ್ ಮಾಡುವುದು ಸೂಕ್ತ ಎಂದು ಭಾವಿಸಿದ್ದೆ. ಹೀಗಾಗಿ ನಾನು ಕೆಜಿಎಫ್ ನಿರ್ಮಾಪಕ, ನಿರ್ದೇಶಕ ಮತ್ತು ಯಶ್ ಅವರಲ್ಲಿ ಕ್ಷಮೆ ಕೇಳಿದ್ದೇನೆ ಎಂದಿದ್ದರು.

    ಬೈಸಾಖಿ ದಿನ ನನ್ನ ಸಿನಿಮಾ ಬಿಡುಗಡೆಯಾದರೆ ಸೂಕ್ತ ಎಂದು ಅವರಿಗೆ ತಿಳಿಸಿದೆ. ಅವರು ನನ್ನ ಅಭಿಪ್ರಾಯವನ್ನು ಒಪ್ಪಿಕೊಂಡರು. ಅವರ ಸಿನಿಮಾ ರಿಲೀಸ್ ಇದ್ದರೂ ಅದೇ ನೀವು ಸಿನಿಮಾ ಬಿಡುಗಡೆ ಮಾಡಿ ಎಂದು ನನಗೆ ಹೇಳಿದರು. ಅವರ ಸ್ಪಂದನೆ ನನಗೆ ಇಷ್ಟ ಆಯಿತು. ನನ್ನ ಯೋಚನೆಗೆ ಯಶ್ ತುಂಬಾನೇ ಬೆಂಬಲವಾಗಿ ನಿಂತರು ಎಂದು ಅಮೀರ್ ಹೇಳಿಕೊಂಡಿದ್ದರು. ಇದನ್ನೂ ಓದಿ:  ಅಭಿಮಾನಿಯಿಂದ ಅಪ್ಪುಗೆ ಅಯ್ಯಪ್ಪನ ದರ್ಶನ

  • ಯಶ್‌, ಪ್ರಶಾಂತ್‌ ನೀಲ್‌ ಬಳಿ ಕ್ಷಮೆ ಕೇಳಿದ ಅಮೀರ್‌ ಖಾನ್‌

    ಯಶ್‌, ಪ್ರಶಾಂತ್‌ ನೀಲ್‌ ಬಳಿ ಕ್ಷಮೆ ಕೇಳಿದ ಅಮೀರ್‌ ಖಾನ್‌

    ಮುಂಬೈ: ಕೆಜಿಎಫ್ ಚಾಪ್ಟರ್-2 ರಿಲೀಸ್ ದಿನವೇ `ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನೂ ರಿಲೀಸ್ ಮಾಡುತ್ತಿರುವುದಕ್ಕೆ ಅಮೀರ್ ಖಾನ್ ಕೆಜಿಎಫ್‍ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್‍ಗೆ ಟೆಕ್ಟ್ಸ್ ಮೆಸೇಜ್ ಮಾಡಿ ಕ್ಷಮೆ ಕೇಳಿದ್ದಾರೆ.

    ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಮೀರ್, ನಾನು ಬೇರೆಯವರನ್ನು ಅತಿಕ್ರಮಿಸಿಕೊಳ್ಳುತ್ತಿದ್ದೇನೆ ಎಂಬ ಭಾವನೆ ಸೃಷ್ಟಿ ಆಗುವುದನ್ನು ದ್ವೇಷಿಸ್ತೇನೆ. ಆದರೆ ನಾನು ಮೊದಲ ಬಾರಿಗೆ ಸಿಖ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣ ಏಪ್ರಿಲ್ 14ರಂದು ಬೈಸಾಖಿ ದಿನ ಸಿನಿಮಾ ರಿಲೀಸ್ ಮಾಡುವುದು ಸೂಕ್ತ ಎಂದು ಭಾವಿಸಿದ್ದೆ. ಹೀಗಾಗಿ ನಾನು ಕೆಜಿಎಫ್ ನಿರ್ಮಾಪಕ ವಿಜಯ್‌ ಕಿರಗಂದೂರು, ನಿರ್ದೇಶಕ ಪ್ರಶಾಂತ್‌ ನೀಲ್ ಮತ್ತು ಯಶ್ ಅವರಲ್ಲಿ ಕ್ಷಮೆ ಕೇಳಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್!

    ಬೈಸಾಖಿ ದಿನ ನನ್ನ ಸಿನಿಮಾ ಬಿಡುಗಡೆಯಾದರೆ ಸೂಕ್ತ ಎಂದು ಅವರಿಗೆ ತಿಳಿಸಿದೆ. ಅವರು ನನ್ನ ಅಭಿಪ್ರಾಯವನ್ನು ಒಪ್ಪಿಕೊಂಡರು. ಅವರ ಸಿನಿಮಾ ರಿಲೀಸ್ ಇದ್ದರೂ ಅದೇ ನೀವು ಸಿನಿಮಾ ಬಿಡುಗಡೆ ಮಾಡಿ ಎಂದು ನನಗೆ ಹೇಳಿದರು. ಅವರ ಸ್ಪಂದನೆ ನನಗೆ ಇಷ್ಟ ಆಯಿತು. ನನ್ನ ಯೋಚನೆಗೆ ಯಶ್ ತುಂಬಾನೇ ಬೆಂಬಲವಾಗಿ ನಿಂತರು ಎಂದು ಅಮೀರ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?

    ಸಾಮಾನ್ಯವಾಗಿ ಅಮೀರ್ ಖಾನ್ ಸಿನಿಮಾಗಳು ಕ್ರಿಸ್‍ಮಸ್ ರಜೆಗೆ ರಿಲೀಸ್ ಆಗುತ್ತಿತ್ತು. ಆದರೆ ಕ್ರಿಸ್‍ಮಸ್ ಬದಲು ಏಪ್ರಿಲ್‍ನಲ್ಲಿ ಕೆಜಿಎಫ್ ಜೊತೆಗೆ ರಿಲೀಸ್ ಆಗುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೋವಿಡ್ ಕಾರಣದಿಂದ ಕ್ರಿಸ್‍ಮಸ್‍ಗೆ ರಿಲೀಸ್ ಮಾಡುವುದು ಬೇಡ ಎಂದು ಲಾಲ್ ಸಿಂಗ್ ಚಡ್ಡಾ ಸಿನಿಮಾ ತಂಡ ನಿರ್ಧರಿಸಿತ್ತು. ಈ ನಡುವೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮಾರ್ಚ್ 14ಕ್ಕೆ ಮೊದಲು ಮುಗಿಯುವುದು ಕಷ್ಟವಾಗಿತ್ತು. ಹೀಗಾಗಿ ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಮಾಡೋಣ ಎಂದು ಲಾಲ್‍ಸಿಂಗ್ ಚಡ್ಡಾ ಸಿನಿಮಾ ತಂಡ ನಿರ್ಧರಿಸಿದೆ.