Tag: ಅಮಿತಾ ಬಚ್ಚನ್

  • ದೀಪಿಕಾ ಪಡುಕೋಣೆ ಆಸ್ಪತ್ರೆ ಸೇರಲು ಹಾರ್ಟ್ ಆರ್ಹೆತ್ಮಿಯಾ ಕಾರಣ: ಏನದು ಹಾಗೆಂದರೆ?

    ದೀಪಿಕಾ ಪಡುಕೋಣೆ ಆಸ್ಪತ್ರೆ ಸೇರಲು ಹಾರ್ಟ್ ಆರ್ಹೆತ್ಮಿಯಾ ಕಾರಣ: ಏನದು ಹಾಗೆಂದರೆ?

    ಮಿತಾಭ್ ಬಚ್ಚನ್ ನಟನೆಯ ‘ಕೆ’ ಸಿನಿಮಾದ ಶೂಟಿಂಗ್ ಗಾಗಿ ಹೈದರಾಬಾದ್ ಗೆ ಬಂದಿಳಿದಿದ್ದಾರೆ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ. ಮೂರ್ನಾಲ್ಕು ದಿನಗಳಿಂದ ಈ ಸಿನಿಮಾದ ಶೂಟಿಂಗ್ ಸತತವಾಗಿ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು, ಎರಡು ದಿನಗಳ ಹಿಂದೆಯಷ್ಟೇ ಹೃದಯ ಬಡಿತದಲ್ಲಿ ಏರು ಪೇರಾದ ಕಾರಣದಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದರು. ದಿಢೀರ್ ಅಂತ ದೀಪಿಕಾ ಆಸ್ಪತ್ರೆ ದಾಖಲಾಗಿದ್ದಕ್ಕೆ ಸಹಜವಾಗಿಯೇ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳು ಆತಂಕವಾಗಿತ್ತು.

    ಅಷ್ಟಕ್ಕೂ ದೀಪಿಕಾ ಪಡುಕೋಣೆ ಆಸ್ಪತ್ರೆ ಸೇರಿಕೊಳ್ಳಲು ಕಾರಣ ಹಾರ್ಟ್ ಆರ್ಹೆತ್ಮಿಯಾ (Heart Arrhythmia) ಎನ್ನಲಾಗುತ್ತಿದೆ. ಉದ್ವೇಗಕ್ಕೆ ಒಳಗಾದಾಗ ಮತ್ತು ಆತಂಕ ಹೆಚ್ಚಾದಾಗ ಹೀಗೆ ಹೃದಯ ಬಡಿತ ಏರು ಪೇರಾಗುತ್ತದೆಯಂತೆ. ಅದು ಇನ್ನೂ ಹೆಚ್ಚಾದರೆ, ಲಘು ಹೃದಯಾಘಾತವೂ ಸಂಭವಿಸಬಹುದಂತೆ. ಹಾಗಾಗಿ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ದೀಪಿಕಾ. ಯಾವುದೋ ಒಂದು ಕಾರಣದಿಂದಾಗಿ ಆತಂಕಗೊಂಡರೆ, ಹೀಗೆ ಹೃದಯ ಬಡಿತದಲ್ಲಿ ಏರುಪೇರಾಗುವುದು ಸಹಜವಂತೆ. ಆದರೆ, ಅದನ್ನು ನಿರ್ಲಕ್ಷ್ಯ ಮಾಡಬಾರದು ಎನ್ನುತ್ತಾರೆ ವೈದ್ಯರು. ಇದನ್ನೂ ಓದಿ : ಮುಂದಿನ ಚಿತ್ರಕ್ಕಾಗಿ ತೂಕ ಇಳಿಸ್ಕೊತಿರೋ ಯಶ್- ಗಡ್ಡಕ್ಕೂ ಬೀಳಲಿದೆಯಾ ಕತ್ತರಿ?

    ಅಂದು ಶೂಟಿಂಗ್ ಸ್ಪಾಟ್ ನಿಂದ ಹೈದರಾಬಾದ್ ಆಸ್ಪತ್ರೆಗೆ ದಾಖಲಾದ ದೀಪಿಕಾ, ಸೂಕ್ತ ಚಿಕಿತ್ಸೆ ಮತ್ತು ಸಲಹೆಗಳನ್ನು ಪಡೆದು ಮತ್ತೆ ಶೂಟಿಂಗ್ ಸ್ಪಾಟ್ ಗೆ ವಾಪಸ್ಸಾಗಿದ್ದಾರೆ. ಹಾಗಾಗಿ ಆತಂಕ ಪಡುವಂಥದ್ದು ಅವರಿಗೆ ಏನೂ ಆಗಿಲ್ಲ. ಮತ್ತೆ ಅವರು ಎಂದಿನಂತೆ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರಂತೆ. ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದಾಗಿಯೇ ಹೆಚ್ಚು ಜನರ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಹಜವಾಗಿ ಎಲ್ಲರನ್ನೂ ಆತಂಕ ಮೂಡಿತ್ತು.

    Live Tv

  • 850 ರೈತರ ಸಾಲಮನ್ನಾ ಮಾಡಲು ಮುಂದಾದ್ರು ಬಿಗ್ ಬಿ!

    850 ರೈತರ ಸಾಲಮನ್ನಾ ಮಾಡಲು ಮುಂದಾದ್ರು ಬಿಗ್ ಬಿ!

    ಮುಂಬೈ: ಬಾಲಿವುಡ್ ನಟ ಬಿಗ್ ಬಿ ಅಮಿತಾ ಬಚ್ಚನ್ ಅವರು ಉತ್ತರ ಪ್ರದೇಶದ 850 ಮಂದಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ.

    ನಮ್ಮ ದೇಶಕ್ಕೆ ಅವರು ಜೀವನವನ್ನೇ ತ್ಯಾಗ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ 44 ಕುಟುಂಬಗಳು 112 ಘಟಕಗಳಾಗಿ ವೈವಿಧ್ಯಗೊಂಡಿದ್ದು, ಹೀಗಾಗಿ ಸಣ್ಣ ರೀತಿಯಲ್ಲಿ ಸಹಾಯ ಮಾಡಲಾಗಿದೆ. ದೇಶದ ಇನ್ನಿತರ ಭಾಗಗಳಲ್ಲಿಯೂ ಹೆಚ್ಚಿನ ಅಗತ್ಯಗಳಿದ್ದು ಅವುಗಳನ್ನು ಪೂರೈಸಬೇಕಿದೆ ಎಂದರು.

    ಬಚ್ಚನ್ ಅವರು ಈ ಹಿಂದೆ ಮಹಾರಾಷ್ಟ್ರದ 350 ಕ್ಕೂ ಹೆಚ್ಚು ರೈತರ ಸಾಲವನ್ನು ಪಾವತಿ ಮಾಡುವ ಮೂಲಕ ಅವರುಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಅಮಿತಾಬ್ ತಡೆಗಟ್ಟಿದ್ದರು. ಅಷ್ಟೇ ಅಲ್ಲದೇ ಆಂಧ್ರ ಮತ್ತು ವಿದರ್ಭದ ರೈತರ ಸಾಲಮನ್ನಾ ಕೂಡ ಮಾಡಲಾಗಿತ್ತು. ಇದೀಗ ಉತ್ತರಪ್ರದೇಶದ ರೈತರ ಸಾಲಮನ್ನಾ ಮಾಡಲು ಸುಮಾರು 850 ರೈತರ ಪಟ್ಟಿಯನ್ನು ಗುರುತಿಸಲಾಗಿದೆ ಮತ್ತು 5.5 ಕೋಟಿ ರೂಪಾಯಿಗಳಷ್ಟು ಸಾಲವನ್ನು ತೀರಿಸುವುದಕ್ಕೆ ಸಂಬಂಧಿಸಿದ ಬ್ಯಾಂಕ್‍ಗಳೊಂದಿಗೆ ಮಾತನಾಡಲಿದ್ದೇನೆ ಎಂದು ತಮ್ಮ ಬ್ಲಾಗ್‍ನಲ್ಲಿ ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.

    ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಜಿತ್ ಸಿಂಗ್ ಅವರಿಗೆ ಸಹಾಯ ಮಾಡಲಾಗುವುದು ಎಂದು ಅವರು ಬರೆದುಕೊಂಡಿದ್ದಾರೆ. ಬಲವಂತದಿಂದ ವೇಶ್ಯಾವೃತ್ತಿಗೆ ತಳ್ಳಲ್ಪಟ್ಟ ಮಹಿಳೆಯರ ರಕ್ಷಣೆಗಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತ ಅಜಿತ್ ಸಿಂಗ್ ಅವರಿಗೆ ನನ್ನ ಕೊಡುಗೆ ಸಲ್ಲುತ್ತದೆ ಎಂದು ಅವರು ಹೇಳಿದ್ದಾರೆ.

    ಈ ಹಿಂದೆ ಬಿಗ್ ಬೀ ಮಹಾರಾಷ್ಟ್ರದ 350 ರೈತರಿಗೆ ಸಾಲಮನ್ನಾ ಮಾಡಲು ಸಹಾಯ ಮಾಡಿದ್ದರು. ಇದೀಗ ಉತ್ತರ ಪ್ರದೇಶದ 850 ರೈತರಿಗೆ ಸಹಾಯ ಮಾಡಲು ಮುಂದಾಗಿರುವುದು ಹೆಮ್ಮೆಯ ವಿಷಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನ ತಂದೆ ರಾಜ್ ಕುಮಾರ್ ದೊಡ್ಡ ಫ್ಯಾನ್: ಅಭಿಷೇಕ್ ಬಚ್ಚನ್ ಮನದ ಮಾತು

    ನನ್ನ ತಂದೆ ರಾಜ್ ಕುಮಾರ್ ದೊಡ್ಡ ಫ್ಯಾನ್: ಅಭಿಷೇಕ್ ಬಚ್ಚನ್ ಮನದ ಮಾತು

    ಬೆಂಗಳೂರು: ಬಾಲಿವುಡ್ ಫೇಮಸ್ ನಟ ಬಿಗ್ ಬಿ ಅವರ ಪುತ್ರ ಅಭಿಷೇಕ್ ಬಚ್ಚನ್ ‘ನನ್ನ ತಂದೆ ಕರುನಾಡ ಚಕ್ರವರ್ತಿ ಡಾ. ರಾಜ್‍ಕುಮಾರ್ ಅವರ ದೊಡ್ಡ ಫ್ಯಾನ್’ ಎಂದು ಅಣ್ಣಾವ್ರ ಬಗೆಗಿನ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

    ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅಣ್ಣಾವ್ರನನ್ನು ನೆನೆದು ತಂದೆ ಮತ್ತು ಅವರ ನಡುವೆ ಇದ್ದ ಒಡನಾಟದ ಬಗ್ಗೆ ಮಾತನಾಡಿದ್ದಾರೆ.

    ಅಭಿಷೇಕ್ ಬಚ್ಚನ್ ಅವರು ‘ಮನ್ ಮರ್ಜಿಯಾ’ ಹೊಸ ಸಿನಿಮಾ ಮಾಡಿದ್ದು, ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಸೌತ್ ಸಿನಿಮಾ ನಟರ ಬಗ್ಗೆ ಮಾತಾನಾಡುತ್ತಾ ಅಣ್ಣಾವ್ರ ಬಗ್ಗೆ ಮಾತಾನಾಡಿದ್ದಾರೆ. ನನ್ನ ತಂದೆ ರಾಜ್ ಕುಮಾರ್ ಅವರ ದೊಡ್ಡ ಫ್ಯಾನ್ ಆಗಿದ್ದು, ಅವರನ್ನು ಕಂಡರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.

    ಸ್ವತಃ ತಂದೆಯೇ ನಾನು ರಾಜ್‍ಕುಮಾರ್ ಅವರ ದೊಡ್ಡ ಫ್ಯಾನ್ ಎಂದು ಹೇಳಿಕೊಂಡಿದ್ದರು. ನನ್ನನ್ನು ಒಂದೆರೆಡು ಬಾರಿ ರಾಜ್ ಕುಮಾರ್ ಸರ್ ಅವರನ್ನು ಭೇಟಿ ಮಾಡಿಸಿದರು. ಆಗ ನಾನಿನ್ನು ಚಿಕ್ಕವನು. ಅವರ ನಟನೆ ಎಂದರೆ ತಂದೆಗೆ ತುಂಬಾ ಇಷ್ಟ. ಅವರ ಮಕ್ಕಳು ಒಳ್ಳೆಯ ಸಿನಿಮಾಗಳನ್ನು ಮಾಡಿದ್ದಾರೆ. ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ತಂದೆ ಹೇಳಿದ್ದರು. ನಾನು ಸೌತ್ ಸಿನಿಮಾಗಳನ್ನು ನೋಡಿದ್ದೇನೆ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎಂದು ತಮ್ಮ ಮೆಚ್ಚುಗೆಯನ್ನು ಸೂಚಿಸಿದರು.

    ಈ ಹಿಂದೆ ಅಮಿತಾಬ್ ಬಚ್ಚನ್, ಹಿಂದಿ ಚಿತ್ರರಂಗಕ್ಕೆ ರಾಜ್‍ಕುಮಾರ್ ಬಾರದೇ ಇದ್ದದ್ದು ಒಳ್ಳೆಯದಾಯಿತು. ಅವರು ಬಂದಿದ್ದರೆ ನಮಗೆ ಸಿನಿಮಾಗಳೇ ಸಿಗುತ್ತಿರಲಿಲ್ಲ ಎಂದು ಅಣ್ಣಾವ್ರ ಬಗ್ಗೆ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದರು. ಈಗಲೂ ಕೂಡ ಬಿಗ್ ಬಿ ರಾಜ್‍ಕುಮಾರ್ ಅವರ ಕುಟುಂಬದೊಂದಿಗೆ ಒಳ್ಳೆಯ ಸಂಪರ್ಕವನ್ನು ಹೊಂದಿದ್ದು ಒಂದು ಜಾಹೀರಾತಿನಲ್ಲಿ ಬಿಗ್ ಬಿ ಹಾಗೂ ಶಿವಣ್ಣ ಒಟ್ಟಿಗೆ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv