Tag: ಅಭಿಷೇಕ್ ಸಿಂಗ್

  • ವಾರಣಾಸಿಯ ಗಂಗಾ ಆರತಿಯಲ್ಲಿ ಭಾಗಿಯಾದ ಸನ್ನಿ ಲಿಯೋನ್

    ವಾರಣಾಸಿಯ ಗಂಗಾ ಆರತಿಯಲ್ಲಿ ಭಾಗಿಯಾದ ಸನ್ನಿ ಲಿಯೋನ್

    ಹಿಂದೂಗಳ ಪವಿತ್ರ ಸ್ಥಳ ವಾರಣಾಸಿಯ (Varanasi) ನೆಲವನ್ನು ಸ್ಪರ್ಶಿಸಬೇಕು ಎನ್ನುವುದು ಹಲವರ ಗುರಿಯಾಗಿರುತ್ತದೆ. ಅದರಲ್ಲೂ ಗಂಗಾ ಆರತಿಯ ಪೂಜೆಯಲ್ಲಿ ಭಾಗಿಯಾಗುವುದು ಪುಣ್ಯದ ಕೆಲಸವೆಂದೇ ಭಾವಿಸಲಾಗಿದೆ. ಇಂತಹ ಗಂಗಾ ಆರತಿ ಪೂಜೆಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ (Sunny Leone) ) ಭಾಗಿಯಾಗಿದ್ದಾರೆ.

    ಸನ್ನಿ ಲಿಯೋನ್ ಜೊತೆ ಮಾಜಿ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ (Abhishek Singh) ಕೂಡ ಪವಿತ್ರ ಗಂಗಾ ಆರತಿಯ ಪೂಜೆಯಲ್ಲಿ ಭಾಗಿಯಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಪಿಂಕ್ ಸಲ್ವಾರ್ ಧರಿಸಿ, ಕುತ್ತಿಗೆಗೆ ಚಂಡು ಹೂವಿನ ಮಾಲೆ ಹಾಕಿಕೊಂಡಿರುವ ಸನ್ನಿ, ಪೂಜೆಗೆ ಉತ್ಸಾಹದಿಂದಲೇ ಭಾಗಿಯಾಗಿದ್ದಾರೆ.

     

    ತಾವು ಗಂಗಾರತಿ ಪಡೆದ ನಂತರ ಆ ವಿಡಿಯೋವನ್ನು ಸನ್ನಿ ಶೇರ್ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಭಗವಂತ ಒಳ್ಳೇದು ಮಾಡಲಿ ಎಂದು ಅವರು ಕೇಳಿಕೊಂಡಿದ್ದಾರಂತೆ. ಥರ್ಡ್ ಪಾರ್ಟಿ ಎಂಬ ಮ್ಯೂಸಿಕ್ ಆಲ್ಬಂಗೆ ಅಭಿಷೇಕ್ ಸಿಂಗ್ ಮತ್ತು ಸನ್ನಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಅವರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.

  • ಮುಸ್ಲಿಮರ ಟೋಪಿ ಧರಿಸಿ ಶುಭಾಶಯ – 1 ಲಕ್ಷ ಅಭಿಮಾನಿಗಳನ್ನು ಕಳೆದುಕೊಂಡ ನಟ ಅಭಿಷೇಕ್

    ಮುಸ್ಲಿಮರ ಟೋಪಿ ಧರಿಸಿ ಶುಭಾಶಯ – 1 ಲಕ್ಷ ಅಭಿಮಾನಿಗಳನ್ನು ಕಳೆದುಕೊಂಡ ನಟ ಅಭಿಷೇಕ್

    ಹಿಂದಿ ವೆಬ್ ಸರಣಿಗಳಲ್ಲಿ ನಟಿಸಿರುವ ಅಭಿಷೇಕ್ ಸಿಂಗ್ (Abhishek Singh) ಅವರು ಬಕ್ರೀದ್ ಹಬ್ಬಕ್ಕೆ ಶುಭ ಕೋರಿ ಪೋಸ್ಟ್ ಹಾಕಿದ ಪರಿಣಾಮ 1 ಲಕ್ಷ ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ.

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅಭಿಷೇಕ್ ಸಿಂಗ್ ಪೋಸ್ಟ್ ಮಾಡಿದ್ದಾರೆ. ಮುಸ್ಲಿಮರ ಟೋಪಿ ಧರಿಸಿ ಶುಭ ಕೋರಿದ್ದಕ್ಕೆ 1 ಲಕ್ಷ ಫಾಲೋವರ್ಸ್ ನನ್ನನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಗುರುವಾರ ಕೆಂಪು ಬಣ್ಣದ ಕುರ್ತಾದ ಜೊತೆ ಮುಸ್ಲಿಮರು ಧರಿಸುವ ಬಿಳಿ ಬಣ್ಣದ ಟೋಪಿ ಧರಿಸಿದ ಫೋಟೋವನ್ನು ಶೇರ್ ಮಾಡಿದ್ದರು. ಪಕ್ಕಾ ಇಸ್ಲಾಂ ಸಂಪ್ರದಾಯದಂತೆ ರೆಡಿಯಾಗಿದ್ದ ಅಭಿಷೇಕ್ ಸಿಂಗ್ ಅವರ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದನ್ನೂ ಓದಿ:ಕೋಟಿ ಕೊಟ್ರೂ ಸಿನಿಮಾದಲ್ಲಿ ಕಿಸ್‌ ಮಾಡಲ್ಲ- ಪ್ರಿಯಾಮಣಿ ಖಡಕ್‌ ಉತ್ತರ

    ಈ ಪೋಸ್ಟ್ ಹಲವು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅನೇಕರು ಪೋಸ್ಟ್ ಡಿಲೀಟ್ ಮಾಡಿ ಎಂದು ಹೇಳಿದ್ದರು. ಈ ಪೋಸ್ಟ್‌ಗೆ ರಿಪ್ಲೈ ರೂಪದಲ್ಲಿ ಕಮೆಂಟ್ ಮಾಡಿದ ಅಭಿಷೇಕ್ ಈ ಒಂದು ಪೋಸ್ಟ್‌ನಿಂದ ನಾನು 1 ಲಕ್ಷ ಅಭಿಮಾನಿಗಳನ್ನು ಕಳೆದುಕೊಂಡೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಅಭಿಷೇಕ್ ಅವರನ್ನು ಇನ್‌ಸ್ಟಾದಲ್ಲಿ 48.46 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ.

    https://www.instagram.com/p/CauB6eblbh8/?utm_source=ig_web_copy_link&igshid=MzRlODBiNWFlZA==

    ಅಭಿಷೇಕ್ ಸಿಂಗ್ ಐಎಎಸ್ ಅಧಿಕಾರಿಯಾಗಿಯೂ ಈ ಹಿಂದೆ ಕೆಲಸ ಮಾಡಿದ್ದರು. ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಅಭಿಷೇಕ್ ಅವರನ್ನು ಅಮಾನತುಗೊಳಿಸಿತ್ತು. 82 ದಿನಗಳ ಕಾಲ ಕಾರಣ ತಿಳಿಸಿದೇ ಕರ್ತವ್ಯಕ್ಕೆ ಗೈರು ಹಾಜರಿ ಹಾಕಿದ್ದಕ್ಕೆ ಸರ್ಕಾರ ಅಭಿಷೇಕ್ ಅವರನ್ನು ಅಮಾನತು ಮಾಡಿತ್ತು. ಈಗ ಇನ್‌ಸ್ಟಾ ಪೋಸ್ಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇನ್‍ಸ್ಟಾಗ್ರಾಮ್‍ನಲ್ಲಿ ಚುನಾವಣಾ ಆಯೋಗದ ಕಾರ್‌ನೊಂದಿಗೆ ಐಎಎಸ್ ಅಧಿಕಾರಿ ಪೋಸ್ಟ್ – ಕರ್ತವ್ಯದಿಂದ ವಜಾ

    ಇನ್‍ಸ್ಟಾಗ್ರಾಮ್‍ನಲ್ಲಿ ಚುನಾವಣಾ ಆಯೋಗದ ಕಾರ್‌ನೊಂದಿಗೆ ಐಎಎಸ್ ಅಧಿಕಾರಿ ಪೋಸ್ಟ್ – ಕರ್ತವ್ಯದಿಂದ ವಜಾ

    ಗಾಂಧೀನಗರ: ಗುಜರಾತ್ ವಿಧಾನಸಭೆ (Gujarat Election) ಚುನಾವಣೆಗಾಗಿ ಚುನಾವಣಾ ವೀಕ್ಷಕರಾಗಿ ನೇಮಕಗೊಂಡಿದ್ದ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ (Abhishek Singh) ತಮ್ಮ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಪೋಸ್ಟ್ ಮಾಡಿದ್ದಕ್ಕಾಗಿ ಕೇಂದ್ರ ಚುನಾವಣಾ ಆಯೋಗ (Election Commission) ಅವರನ್ನು ಚುನಾವಣಾ ಕರ್ತವ್ಯದಿಂದ ತೆಗೆದುಹಾಕಿದೆ.

    ಅಭಿಷೇಕ್ ಸಿಂಗ್‍ರನ್ನು ಅಹಮದಾಬಾದ್‍ನ ಬಾಪುನಗರ ಮತ್ತು ಅಸರ್ವಾ ಎರಡು ಕ್ಷೇತ್ರಗಳಿಗೆ ಚುನಾವಣಾ ವೀಕ್ಷಕರಾಗಿ ನೇಮಕ ಮಾಡಲಾಗಿತ್ತು. ಆ ಬಳಿಕ ಅಭಿಷೇಕ್ ಸಿಂಗ್ ಇನ್‍ಸ್ಟಾಗ್ರಾಮ್‍ನಲ್ಲಿ ಚುನಾವಣಾ ಆಯೋಗದಿಂದ ನೀಡಲಾಗಿದ್ದ ಅಧಿಕೃತ ವಾಹನದ ಪಕ್ಕದಲ್ಲಿ ನಿಂತು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ವಾಹನದ ಮುಂಭಾಗದಲ್ಲಿ ʼಭಾರತೀಯ ಚುನಾವಣಾ ಆಯೋಗದ ವೀಕ್ಷಕʼ ಎಂದು ಬರೆಯಲಾಗಿತ್ತು. ಇದನ್ನು ಗಮನಿಸಿ ಚುನಾವಣಾ ಆಯೋಗ ಅವರನ್ನು ಚುನಾವಣಾ ಕರ್ತವ್ಯದಿಂದ ತೆಗೆದು ಹಾಕಿದ್ದು, ಪ್ರಚಾರದ ಗೀಳಿನಿಂದಾಗಿ ಅಧಿಕಾರ ಕಳೆದುಕೊಂಡಿದ್ದಾರೆ. ಅವರ ಬದಲಿಗೆ ಸಾಮಾನ್ಯ ವೀಕ್ಷಕರನ್ನು ನೇಮಿಸುವವರೆಗೆ ಈ ಎರಡು ಕ್ಷೇತ್ರಗಳ ಉಸ್ತುವಾರಿಯನ್ನು ಐಎಎಸ್ ಅಧಿಕಾರಿ ಕ್ರಿಶನ್ ಬಾಜ್‍ಪೇಯ್ ಅವರಿಗೆ ನೀಡಲಾಗಿದೆ. ಕ್ರಿಶನ್ ಅವರು ಇತರ ಹತ್ತಿರದ ಕ್ಷೇತ್ರಗಳಿಗೆ ಸಾಮಾನ್ಯ ವೀಕ್ಷಕರಾಗಿ ನೇಮಕಗೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಆಯ್ಕೆ ಸಮಿತಿ ವಜಾ – ಹೊಸ ಸಮಿತಿ ರಚನೆಗೆ ಅರ್ಜಿ ಆಹ್ವಾನ

     

    View this post on Instagram

     

    A post shared by Abhishek Singh (@abhishek_as_it_is)

    ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಭಿಷೇಕ್ ಸಿಂಗ್ ಅವರನ್ನು ತೆಗೆದುಹಾಕಲಾಗಿದೆ ಮತ್ತು ಸಾಮಾನ್ಯ ವೀಕ್ಷಕರನ್ನು ನೇಮಿಸುವವರೆಗೆ ಕ್ರಿಶನ್ ಬಾಜ್‍ಪೇಯ್ ಅವರಿಗೆ ಉಸ್ತುವಾರಿ ನೀಡಲಾಗಿದೆ ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ ಅಜಯ್ ಭಟ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಾಮನಿಗಿಂತ ರಾವಣ ಜ್ಞಾನಿ – ವಿವೇಕ ಇರುವುದರಿಂದ ಜನ ರಾಮನನ್ನು ಪೂಜಿಸುತ್ತಾರೆ: ರಾಜನಾಥ್ ಸಿಂಗ್

    Live Tv
    [brid partner=56869869 player=32851 video=960834 autoplay=true]