Tag: ಅಭಯಾರಣ್ಯ

  • ಅಳಿವಿನಂಚಿನಲ್ಲಿರುವ ಸ್ಲೆಂಡರ್ ಲೋರಿಸ್‍ಗಾಗಿ ಭಾರತದ ಮೊದಲ ಅಭಯಾರಣ್ಯ – ತಮಿಳುನಾಡು ಸರ್ಕಾರದಿಂದ ಆದೇಶ

    ಅಳಿವಿನಂಚಿನಲ್ಲಿರುವ ಸ್ಲೆಂಡರ್ ಲೋರಿಸ್‍ಗಾಗಿ ಭಾರತದ ಮೊದಲ ಅಭಯಾರಣ್ಯ – ತಮಿಳುನಾಡು ಸರ್ಕಾರದಿಂದ ಆದೇಶ

    ಚೆನ್ನೈ: ಅಳಿವಿನಂಚಿನಲ್ಲಿರುವ ಸ್ಲೆಂಡರ್ ಲೋರಿಸ್‍ಗಾಗಿ (Slender Loris) ಕರೂರ್ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ಭಾರತದ ಮೊದಲ ಸ್ಲೆಂಡರ್ ಲೋರಿಸ್ ಅಭಯಾರಣ್ಯ (Slender Loris Sanctuary) ಸ್ಥಾಪಿಸಲು ತಮಿಳುನಾಡು (Tamil Nadu) ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳ ಕಚೇರಿ (Chief Minister’s Office), ಕರೂರ್  (Karur) ಮತ್ತು ದಿಂಡಿಗಲ್ (Dindigul) ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಒಟ್ಟು 11,806 ಹೆಕ್ಟೇರ್‌ಗಿಂತಲೂ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಸ್ಲೆಂಡರ್ ಲೋರಿಸ್ ಅಭಯಾರಣ್ಯವನ್ನು ಸ್ಥಾಪಿಸಲು ತಮಿಳುನಾಡು ಸರ್ಕಾರ ಅಧಿಸೂಚಿಸಿದೆ ಎಂದು ಘೋಷಿಸಲು ಸಂತೋಷವಾಗುತ್ತಿದೆ. ಸ್ಲೆಂಡರ್ ಲೋರಿಸ್ ಸಂರಕ್ಷಣೆಯಲ್ಲಿ ಅಭಯಾರಣ್ಯವು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಇದರ ಸಂರಕ್ಷಣಾ ಪ್ರಯತ್ನದಲ್ಲಿ ಇದು ಮತ್ತೊಂದು ಮೈಲಿಗಲ್ಲು ಎಂದು ಹೇಳಿದ್ದಾರೆ. ಇದನ್ನೂ ಓದಿ: ಆರೋಪಿ ಚೇಸಿಂಗ್, ಗುಂಡೇಟಿಗೆ ಮಹಿಳೆ ಸಾವು – ಐವರು ಪೊಲೀಸರಿಗೆ ಗಾಯ

    ಚಿಕ್ಕದಾಗಿರುವ ಲೋರಿಸ್‍ಗಳು ಸಸ್ತನಿಗಳಾಗಿವೆ. ಅವು ತಮ್ಮ ಜೀವನದ ಬಹುಪಾಲು ಸಮಯ ಮರಗಳ ಮೇಲೆಯೇ ಕಳೆಯುತ್ತವೆ. ಇವು ಕೃಷಿ ಭೂಮಿಯಲ್ಲಿನ ಕೀಟಗಳನ್ನು ತಿನ್ನುವ ಮೂಲಕ ರೈತರಿಗೆ ಉಪಯೋಗಕಾರಿಯಾಗಿವೆ. ಭೂಮಂಡಲದ ಪರಿಸರ ವ್ಯವಸ್ಥೆಯಲ್ಲಿ ಈ ಪ್ರಭೇದವು ಪ್ರಮುಖ ಪಾತ್ರ ವಹಿಸುತ್ತದೆ.

    ಇಂಟರ್​​ನ್ಯಾಷನಲ್ ಯೂನಿಯನ್ ಫಾರ್ ದಿ ಕನ್ಸರ್ವೇಶನ್ ಆಫ್ ನೇಚರ್ ( International Union for the Conservation of Nature) (IUCN) ಪ್ರಕಾರ, ಸ್ಲೆಂಡರ್ ಲೋರಿಸ್ ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಪಟ್ಟಿ ಮಾಡಲಾಗಿದೆ. ಜಾತಿಯ ಉಳಿವು ಅದರ ಆವಾಸಸ್ಥಾನದ ಸುಧಾರಣೆ, ಸಂರಕ್ಷಣೆಯ ಪ್ರಯತ್ನಗಳು ಮತ್ತು ಬೆದರಿಕೆಗಳ ತಗ್ಗಿಸುವಿಕೆಯ ಮೇಲೆ ಅವಲಂಬಿತವಾಗಿದೆ. ಇದನ್ನೂ ಓದಿ: ವಿಶ್ವದಲ್ಲೇ ಫಸ್ಟ್‌ – ಹಸುಗಳ ತೇಗು, ಹೂಸಿಗೂ ತೆರಿಗೆ ವಿಧಿಸಿದ ನ್ಯೂಜಿಲೆಂಡ್‌!

    ವನ್ಯಜೀವಿ (ಸಂರಕ್ಷಣೆ) ಕಾಯಿದೆ, 1972 ರ ನಿಬಂಧನೆಗಳ ಅಡಿ “ಕಡವೂರ್ ಸ್ಲೇನರ್ ಲೋರಿಸ್ ಅಭಯಾರಣ್ಯ ಸ್ಥಾಪಿಸಲು ಅಧಿಸೂಚನೆ ಹೊರಡಿಸಿದೆ. ಪರಿಸರ, ಹವಾಮಾನ ಬದಲಾವಣೆಯಿಂದ ಅರಣ್ಯ ಇಲಾಖೆಗೆ ಈ ಆದೇಶ ನೀಡಲಾಗಿದೆ. ವಿಶೇಷವಾಗಿ ತಮಿಳುನಾಡು ಸರ್ಕಾರವು ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಸಂರಕ್ಷಣೆಗಾಗಿ ಹಲವಾರು ಪ್ರಯತ್ನಗಳನ್ನು ಕೈಗೊಂಡಿದೆ ಎಂದು ತಿಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಖಾಸಗೀಕರಣಗೊಳ್ಳಲಿದೆ ಭಾರತದ ಮೊದಲ ಹಸು ಅಭಯಾರಣ್ಯ

    ಖಾಸಗೀಕರಣಗೊಳ್ಳಲಿದೆ ಭಾರತದ ಮೊದಲ ಹಸು ಅಭಯಾರಣ್ಯ

    ಭೋಪಾಲ್: ಭಾರತದ ಮೊದಲ ಹಸು ಅಭಯಾರಣ್ಯವನ್ನು ಮಧ್ಯಪ್ರದೇಶ ಸರ್ಕಾರ ಖಾಸಗೀಕರಣಗೊಳಿಸಲು ಮುಂದಾಗಿದೆ.

    ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಸೆಪ್ಟೆಂಬರ್ 2017 ರಲ್ಲಿ ಸ್ಥಾಪಿಸಿದ ಭಾರತದ ಮೊದಲ ಹಸು ಅಭಯಾರಣ್ಯವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರವು ಖಾಸಗೀಕರಣಗೊಳಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭೋಪಾಲ್‍ನಿಂದ ವಾಯುವ್ಯಕ್ಕೆ 190 ಕಿ.ಮೀ ದೂರದಲ್ಲಿರುವ ಅಗರ್ ಮಾಲ್ವಾದಲ್ಲಿರುವ ಕಾಮಧೇನು ಗೋ ಅಭರಣ್ಯವನ್ನು ಗೋ ಸಂವರ್ಧನ್ ಮಂಡಳಿಯು ಸುಮಾರು 32 ಕೋಟಿ ರೂ ವೆಚ್ಚದಲ್ಲಿ 472 ಎಕ್ರೆ ಪ್ರದೇಶದಲ್ಲಿ ನಿರ್ಮಾಣ ಮಾಡಿತ್ತು. ಈ ಅಭಯಾರಣ್ಯದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಹಸುಗಳು ವಾಸಿಸುತ್ತಿವೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪಶುಸಂಗೋಪನಾ ವಿಭಾಗದ ಉನ್ನತ ಅಧಿಕಾರಿಯೊಬ್ಬರು, ಆರ್ಥಿಕ ಬಿಕ್ಕಟ್ಟಿನಿಂದ ಹಸು ಅಭಯಾರಣ್ಯವನ್ನು ಖಾಸಗೀಕರಣ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಆಸಕ್ತ ಸಂಸ್ಥೆಗಳನ್ನು ಆಹ್ವಾನಿಸಲು ಇಲಾಖೆ ಅಧಿಸೂಚನೆ ಹೊರಡಿಸಲಿದೆ ಎಂದು ತಿಳಿಸಿದ್ದಾರೆ.

    “ಅಭಯಾರಣ್ಯದಲ್ಲಿ ಕಳಪೆ ನಿರ್ವಹಣೆ ಮತ್ತು ಹಸುಗಳ ನಿರಂತರ ಸಾವಿನ ವಿಷಯಗಳು ಹಲವು ಬಾರಿ ತೊಂದರೆಯಾಗಿದೆ. ಇದನ್ನು ಸುಧಾರಿಸಿ ಸೌಲಭ್ಯಗಳನ್ನು ನೀಡಲು ಸರ್ಕಾರ ಪ್ರಯತ್ನಿಸಿದರೂ ಅದನ್ನು ನಿರ್ವಹಿಸಲು ಕಷ್ಟವಾಗುತ್ತಿದೆ. ಅಕ್ಷಯ್‍ಪಾತ್ರೆಯಂತಹ ಪ್ರಸಿದ್ಧ ಸರ್ಕಾರೇತರ ಸಂಸ್ಥೆಗಳು ಅಭಯಾರಣ್ಯವನ್ನು ಯಾವುದೇ ಲಾಭವಿಲ್ಲದೆ ನಷ್ಟದಲ್ಲಿ ನಿರ್ವಹಿಸಲು ಆಸಕ್ತಿ ತೋರಿಸಿದವು. ಆದರೆ ನಾವು ನಿಯಮಗಳ ಪ್ರಕಾರ ಅಭಯಾರಣ್ಯವನ್ನು ಹಸ್ತಾಂತರಿಸುತ್ತೇವೆ” ಎಂದು ಅಧಿಕಾರಿ ಹೇಳಿದರು.

    ಕಳೆದ ಒಂದು ವರ್ಷದಲ್ಲಿ 600 ಕ್ಕೂ ಹೆಚ್ಚು ಹಸುಗಳು ಹವಾಮಾನ ವೈಪರೀತ್ಯದಿಂದ ಅಭಯಾರಣ್ಯದಲ್ಲಿ ಸಾವನ್ನಪ್ಪಿವೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಿರುವ ಪಶುಸಂಗೋಪನಾ ಇಲಾಖೆ ಸಚಿವ ಲಖನ್ ಸಿಂಗ್ ಯಾದವ್, ನಾವು ಸಾರ್ವಜನಿಕ ಸಹಭಾಗಿತ್ವವನ್ನು ಬಯಸುತ್ತೇವೆ. ನಾವು ಹಣ ಸಂಪಾದನೆಗಾಗಿ ಅಭಯಾರಣ್ಯವನ್ನು ಖಾಸಗೀಕರಣ ಮಾಡಿ ಕಂಪನಿಗೆ ನೀಡುತ್ತಿಲ್ಲ. ಆದರೆ ಸಾಮಾಜಿಕ ಅಥವಾ ಧಾರ್ಮಿಕ ಸಂಸ್ಥೆಯು ಅಭಯಾರಣ್ಯ ನಿರ್ವಹಿಸಲಿ ಮತ್ತು ಹಸುಗಳಿಗೆ ಸೇವೆ ಸಲ್ಲಿಸಲಿ ಎಂದು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.

    ಸರ್ಕಾರದ ಈ ನಡೆಗೆ ಮೆಚ್ಚುಗೆ ಸೂಚಿಸಿರುವ ಗೋ ಸಂವರ್ಧನ ಮಂಡಳಿಯ ಮಾಜಿ ಅಧ್ಯಕ್ಷ ಸ್ವಾಮಿ ಅಖಿಲೇಶ್ವರನಂದ್ ಗಿರಿ, ಬಿಜೆಪಿಯೂ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುತ್ತಿದೆ. ಸರ್ಕಾರವು ಅಭಯಾರಣ್ಯವನ್ನು ನಡೆಸುವುದು ಅಸಾಧ್ಯವಾದ ಕಾರಣ ನಾನು ಈ ನಿರ್ಧಾರವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.

  • ಕಾರ್ಮಿಕನ ಮನೆಯಲ್ಲಿ ಪತ್ತೆಯಾದವು ನೂರಕ್ಕೂ ಹೆಚ್ಚು ಹಾವಿನ ಮರಿಗಳು

    ಕಾರ್ಮಿಕನ ಮನೆಯಲ್ಲಿ ಪತ್ತೆಯಾದವು ನೂರಕ್ಕೂ ಹೆಚ್ಚು ಹಾವಿನ ಮರಿಗಳು

    ಸಾಂದರ್ಭಿಕ ಚಿತ್ರ

    ಭುವನೇಶ್ವರ: ನೂರಕ್ಕೂ ಹೆಚ್ಚು ಹಾವಿನ ಮರಿಗಳು ಹಾಗೂ 20 ಮೊಟ್ಟೆಗಳನ್ನು ಒರಿಸ್ಸಾದ ಭದ್ರಕ ಜಿಲ್ಲೆಯ ಪೈಕಸಹಿ ಗ್ರಾಮದ ಕಾರ್ಮಿಕನ ಮನೆಯಲ್ಲಿ ಪತ್ತೆಯಾಗಿವೆ.

    ಪೈಕಸಹಿ ಗ್ರಾಮದ ಭಿಜಯ್ ಭುಯಾನ್ ಎಂಬವರ ಮನೆಯಲ್ಲಿ ಶನಿವಾರ 20 ಹಾವಿನ ಮೊಟ್ಟೆಗಳು ಹಾಗೂ ತಾಯಿ ಹಾವಿನ ಸಮೇತ 110 ಹೆಚ್ಚು ಹಾವುಗಳನ್ನು ಹಿಡಿದು ರಕ್ಷಿಸಲಾಗಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಅಮ್ಲನ್ ನಾಯಕ್ ತಿಳಿಸಿದ್ದಾರೆ.

    ಮರಿಗಳು ಕಳೆದ ಎರಡು ಮೂರು ದಿನಗಳ ಹಿಂದೆ ಮೊಟ್ಟೆಯಿಂದ ಹೊರಬಂದಿದ್ದು, ಗಂಡು ಮತ್ತು ಹೆಣ್ಣು ಹಾವಿನ ಮರಿಗಳು ಸುಮಾರು 2.1ಮೀ ಉದ್ದವಿದೆ. ಈ ಹಾವುಗಳ ಸಾಮಾನ್ಯವಾಗಿ ಮನುಷ್ಯನಿಂದ ದೂರವಿರುತ್ತವೆ. ಆದರೆ ಇಲ್ಲಿ ಇಷ್ಟು ಪ್ರಮಾಣದಲ್ಲಿ ಸಿಕ್ಕಿರುವ ಹಾವುಗಳು ಆಶ್ಚರ್ಯ ಮೂಡಿಸುತ್ತವೆ. ಹಾವುಗಳನ್ನು ಹತ್ತಿರದ ಹಡಗರ್ ವನ್ಯಜೀವಿ ಅಭಯಾರಣ್ಯದಲ್ಲಿ ಬಿಡಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಎಲ್ಲಿಂದ ಬಂತು ಹಾವು?: ಭುಯಾನ್ ಮನೆಯ ಒಂದು ಕೋಣೆಯಲ್ಲಿ ಹುತ್ತವಿದ್ದು ಅದರಲ್ಲಿ ಹಾವುಗಳಿದ್ದವು. ದಿನನಿತ್ಯ ಭುಯಾನ್ ಹುತ್ತಕ್ಕೆ ಪೂಜೆ ಸಲ್ಲಿಸುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಹಾವುಗಳ ಕಾಣಿಸಿಕೊಂಡಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

    ಮನೆಯಲ್ಲಿ ಹಾವುಗಳು ಹರಿದಾಡುತ್ತಿದ್ದು, ಅವುಗಳನ್ನು ಹಿಡಿಯುವಂತೆ ಉರಗ ರಕ್ಷಕ ಎಸ್ ಕೆ ಮಿರ್ಜಾರವರಿಗೆ ಭುಯಾನ್ ವಿಷಯ ತಿಳಿಸಿದ್ದಾರೆ. ಕೂಡಲೇ ಮನೆಗೆ ಬಂದ ಅವರು ಸುಮಾರು 5 ಗಂಟೆ ಕಾರ್ಯಚರಣೆ ನಡೆಸಿ ತಾಯಿ ಹಾವು ಸೇರಿದಂತೆ ಸುಮಾರು 110 ಮರಿಹಾವು ಹಾಗೂ 20 ಮೊಟ್ಟೆಗಳನ್ನು ರಕ್ಷಣೆ ಮಾಡಿದ್ದಾರೆ.