Tag: ಅಬೂಬಕ್ಕರ್ ಕುಳಾಯಿ

  • ಯು.ಟಿ ಖಾದರ್ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರಿಗೆ ಕೊಲೆ ಬೆದರಿಕೆ ಹಾಕಿದ ಅಬೂಬಕ್ಕರ್ ಕುಳಾಯಿ

    ಯು.ಟಿ ಖಾದರ್ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರಿಗೆ ಕೊಲೆ ಬೆದರಿಕೆ ಹಾಕಿದ ಅಬೂಬಕ್ಕರ್ ಕುಳಾಯಿ

    ಮಂಗಳೂರು: ಕಾಂಗ್ರೆಸ್‍ನ ಮಾಜಿ ಸಚಿವ ಯು.ಟಿ ಖಾದರ್ ಕ್ಷೇತ್ರ ಉಳ್ಳಾಲದಲ್ಲಿ ದಕ್ಷಿಣ ಕನ್ನಡದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಕಾಂಗ್ರೆಸ್ಸಿಗರಿಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದಾರೆ.

    ಈ ಬಗ್ಗೆ ಹೇಳಿಕೆ ನೀಡಿರುವ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ನಮ್ಮವರ ಮೇಲೆ ಹಲ್ಲೆ ಮಾಡಿಸಲು ನೋಡಿದ್ರೆ ಕಾಂಗ್ರೆಸ್ಸಿಗರನ್ನು ಆಸ್ಪತ್ರೆಗೆ ಕಳುಹಿಸಲೂ ಗೊತ್ತಿದೆ, ಖಬರಿಸ್ತಾನಕ್ಕೆ ಕಳುಹಿಸಲೂ ಗೊತ್ತಿದೆ. ನಾವು ಈವರೆಗೂ ತಲೆ ಬಗ್ಗಿಸಿದ್ದೇವೆ. ಆದರೆ ನಮ್ಮ ಎಸ್‍ಡಿಪಿಐ ಬೆಳೆಯುತ್ತಿದೆ. ಇನ್ಮುಂದೆ ನಾವು ಸುಮ್ಮನಿರಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಭಾರತದ ಸೇನೆ ಸೇರಿದ ಐಎನ್‍ಎಸ್ ವಿಶಾಖಪಟ್ಟಣ ನೌಕೆ – ಚೀನಾ, ಪಾಕಿಸ್ತಾನಕ್ಕೆ ನಡುಕ

    ಎಸ್‍ಡಿಪಿಐ ಬೆಳೆಯುತ್ತಾ ಇರುವುದನ್ನು ಕಂಡು ಕಾಂಗ್ರೆಸ್ಸಿಗರಿಗೆ ಸಹಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಯಾರೋ ಕಾಂಜಿ ಪೀಂಜಿ ಗಾಂಜಾದವರನ್ನು ಇಟ್ಟುಕೊಂಡು ಅವರಿಗೆ ದುಡ್ಡು ಕೊಟ್ಟು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇನ್ಮುಂದೆ ಅದು ನಡಿಯುವುದಿಲ್ಲ. ಎಸ್‍ಡಿಪಿಐ ಸೇರೋದಾದ್ರೆ ಆಸ್ಪತ್ರೆಯಲ್ಲಿ ಮಲಗೋಕೆ, ಜೈಲಿಗೆ ಹೋಗೋಕೆ, ಖಬರಿಸ್ತಾನ ಸೇರೋಕೂ ಸಿದ್ದರಿರಬೇಕು ಎಂದು ಕರೆ ನೀಡಿರುವ ವೀಡಿಯೋ ವೈರಲ್‌ ಆಗುತ್ತಿದೆ. ಇದನ್ನೂ ಓದಿ: ಭಾರತೀಯ ಸೇನೆಯ ಹುತಾತ್ಮ ಯೋಧನ ಪತ್ನಿ ಈಗ ಸೇನಾಧಿಕಾರಿ