Tag: ಅಬುಜಾ

  • ಪೆಟ್ರೋಲ್ ಟ್ಯಾಂಕರ್ ಪಲ್ಟಿ, ಕ್ಯಾನ್‌ನಲ್ಲಿ ತುಂಬಿಕೊಳ್ಳುತ್ತಿದಾಗ ಸ್ಫೋಟ – 70 ಮಂದಿ ಸಾವು

    ಪೆಟ್ರೋಲ್ ಟ್ಯಾಂಕರ್ ಪಲ್ಟಿ, ಕ್ಯಾನ್‌ನಲ್ಲಿ ತುಂಬಿಕೊಳ್ಳುತ್ತಿದಾಗ ಸ್ಫೋಟ – 70 ಮಂದಿ ಸಾವು

    ಅಬುಜಾ: ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಸ್ಫೋಟಗೊಂಡ ಪರಿಣಾಮ 70 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಉತ್ತರ ನೈಜೀರಿಯಾದ (Nigeria) ಕಡುನಾ (Kaduna) ನಗರದ ಡಿಕ್ಕೊ ಜಂಕ್ಷನ್‌ನಲ್ಲಿ ನಡೆದಿದೆ.

    ಶನಿವಾರ ಈ ಘಟನೆ ಸಂಭವಿಸಿದ್ದು, 60,000 ಲೀಟರ್ ಪೆಟ್ರೋಲ್ ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಸ್ಫೋಟಗೊಂಡಿದೆ. ಟ್ರಕ್ ಪಲ್ಟಿಯಾದಾಗ ಚೆಲ್ಲಿದ್ದ ಪೆಟ್ರೋಲ್‌ನ್ನು ತುಂಬಿಕೊಳ್ಳಲು ಹೋಗಿದ್ದವರ ಪೈಕಿ 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 56 ಜನ ಗಾಯಗೊಂಡಿದ್ದಾರೆ. ಜೊತೆಗೆ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಅಂಗಡಿಗಳು ನಾಶವಾಗಿವೆ ಎಂದು ರಾಷ್ಟ್ರೀಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿಳಿಸಿದೆ.ಇದನ್ನೂ ಓದಿ: ಬಣ ಬಡಿದಾಟದ ನಡುವೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೆ ಸುನಿಲ್ ಕುಮಾರ್ ಮನವಿ

    ಈ ಕುರಿತು ನೈಜರ್ ರಾಜ್ಯದ ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್ ಮುಖ್ಯಸ್ಥ ಕುಮಾರ್ ತ್ಸುಕ್ವಾಮ್ ಮಾತನಾಡಿ, ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನೈಜೇರಿಯಾ ರಾಜಧಾನಿ ಅಬುಜಾವನ್ನು ಕಡುನಾಗೆ ಸಂಪರ್ಕಿಸುವ ರಸ್ತೆಯ ಡಿಕ್ಕೊ ಜಂಕ್ಷನ್‌ನಲ್ಲಿ ಈ ಅವಘಡ ಸಂಭವಿಸಿದ್ದು, ಇಲ್ಲಿಯವರೆಗೆ ಸಾವಿನ ಸಂಖ್ಯೆ 70ಕ್ಕೆ ಏರಿದೆ ಎಂದು ತಿಳಿಸಿದರು.

    ನೈಜೀರಿಯಾದಲ್ಲಿ ಕಳೆದ 18 ತಿಂಗಳಲ್ಲಿ ಪೆಟ್ರೋಲ್ ಬೆಲೆ ಐದು ಪಟ್ಟು ಹೆಚ್ಚಾಗಿದೆ. ಹೀಗಾಗಿ ಟ್ರಕ್ ಪಲ್ಟಿಯಾದ ಸಮಯದಲ್ಲಿ ಪೆಟ್ರೋಲ್ ತೆಗೆದುಕೊಳ್ಳಲು ಹೋದವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ ಎಂದು ಹೇಳಿದರು.

    ಕಳೆದ ಅಕ್ಟೋಬರ್ ತಿಂಗಳಲ್ಲಿ ಆಫ್ರಿಕಾದ ಜಿಗಾವಾ ರಾಜ್ಯದಲ್ಲಿ ನಡೆದ ಸ್ಫೋಟದಲ್ಲಿ 170ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.ಇದನ್ನೂ ಓದಿ: ನಾಗು ಸಾಧುಗಳು ಯಾರು? ನೇಮಕಾತಿ ಹೇಗೆ ನಡೆಯುತ್ತೆ? ದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?

  • ಅವಕಾಶ ಕೇಳಿ ಬಂದಿದ್ದ ಶೈಲಜಾ ಜೊತೆ 2ನೇ ಮದುವೆಯಾದರು ದ್ವಾರಕೀಶ್

    ಅವಕಾಶ ಕೇಳಿ ಬಂದಿದ್ದ ಶೈಲಜಾ ಜೊತೆ 2ನೇ ಮದುವೆಯಾದರು ದ್ವಾರಕೀಶ್

    ದ್ವಾರಕೀಶ್ (Dwarakish) ಅವರಿಗೆ ಎರಡು ಮದುವೆ ಆಗಿರೋ ವಿಚಾರ ತುಂಬಾ ಜನರಿಗೆ ಗೊತ್ತಿರಲಿಲ್ಲ. ಜೀ ವಾಹಿನಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇಂಥದ್ದೊಂದು ವಿಚಾರವನ್ನು ಸ್ವತಃ ದ್ವಾರಕೀಶ್ ಹೇಳಿಕೊಂಡಿದ್ದರು. ಆನಂತರ ಮದುವೆ ಆಗಿದ್ದ ಶೈಲಜಾ (Shailaja) ಅವರೇ ಒಂದಷ್ಟು ವಿಷಯಗಳನ್ನು ಜನರ ಮುಂದಿಟ್ಟಿದ್ದರು.

    ದ್ವಾರಕೀಶ್ ಎರಡನೇ ಮದುವೆ ಆದಾಗ ಅವರಿಗೆ 51 ವರ್ಷ. ಈ ಸಮಯದಲ್ಲಿ ದ್ವಾರಕೀಶ್ ಗೌರಿ ಕಲ್ಯಾಣ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ಇವರದ್ದೇ ಬ್ಯಾನರ್ ನಲ್ಲಿ ಮೂಡಿ ಬಂದಿದ್ದ ಶ್ರುತಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ದ್ವಾರಕೀಶ್ ಅವರ ನಿರ್ಮಾಣದಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ ಎಂದಾಗ, ಆ ಸಿನಿಮಾದಲ್ಲಿ ತನ್ನ ತಂಗಿಗೆ ಅವಕಾಶ ಕೇಳಲು ಬಂದವರು ಶೈಲಜಾ. ಈ ಭೇಟಿಯೇ ಮುಂದೆ ಪ್ರೀತಿಯಾಗಿ, ಮದುವೆ ಹಂತ ತಲುಪಿತ್ತು.

    ಹಾಗಂತ ಶೈಲಜಾ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದೋರು ಅಲ್ಲ. ಅವರು ಬ್ಯಾಂಕ್ ಉದ್ಯೋಗಿ. ಪ್ರತಿಷ್ಠಿಯ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ತಂಗಿಗಾಗಿ ಪಾತ್ರ ಕೇಳಲು ಬಂದವರು ದ್ವಾರಕೀಶ್ ಅವರ ಪ್ರೀತಿಗೆ ಮನಸೋತರು. ಎರಡನೇ ಮದುವೆ ಅಂತ ಗೊತ್ತಿದ್ದರೂ, ಒಪ್ಪಿಕೊಂಡರು.

     

    ಶೈಲಜಾ ಹಾಗೂ ದ್ವಾರಕೀಶ್ ಇಷ್ಟ ಪಡುತ್ತಿರುವ ಮತ್ತು ದ್ವಾರಕೀಶ್ ಮತ್ತೊಂದು ಮದುವೆ ಆಗುವ ವಿಚಾರವನ್ನು ಮೊದಲ ಪತ್ನಿಗೆ (Ambuja) ತಿಳಿಸೋದು ಹೇಗೆ ಎನ್ನುವ ಒದ್ದಾಟ ಇಬ್ಬರದ್ದೂ ಆಗಿತ್ತು. ಆಗಲೇ ದ್ವಾರಕೀಶ್ ಅವರಿಗೆ ಐದು ಮಕ್ಕಳು. ಅಳುಕಿನಿಂದಲೇ ಮೊದಲ ಪತ್ನಿಗೆ ವಿಷಯ ತಿಳಿಸಿದ್ದರು ದ್ವಾರಕೀಶ್. ಆಗ ಮೊದಲ ಪತ್ನಿ ಹೇಳಿದ ಮಾತೆಂದರೆ, ನಿನಗೇನಿಷ್ಟನೋ ಅದು ನನಗಿಷ್ಟ ದ್ವಾರ್ಕಿ ಅಂತ.. ಆಗ ಮದುವೆ ಸಲೀಸಾಗಿ ನಡೆಯಿತು. ಪತ್ನಿ ಮತ್ತು ಮಕ್ಕಳ ಎದುರೇ ಎರಡನೇ ಮದುವೆ ಆಗಿದ್ದರು ದ್ವಾರಕೀಶ್.

  • ಪತ್ನಿ ಅಂಬುಜಾ ನಿಧನದ ದಿನವೇ ಇಹಲೋಕ ತೊರೆದ ದ್ವಾರಕೀಶ್

    ಪತ್ನಿ ಅಂಬುಜಾ ನಿಧನದ ದಿನವೇ ಇಹಲೋಕ ತೊರೆದ ದ್ವಾರಕೀಶ್

    ಕಾಕತಾಳೀಯ ಎನ್ನುವಂತೆ ಪತ್ನಿಯನ್ನು ಕಳೆದುಕೊಂಡ ದಿನವೇ ನಟ ದ್ವಾರಕೀಶ್ (Dwarakish) ಕೂಡ ಇಹಲೋಕ ತ್ಯಜಿಸಿದ್ದಾರೆ. ದ್ವಾರಕೀಶ್ ಪತ್ನಿ ಅಂಬುಜಾ (Ambuja) 16 ಜುಲೈ 2021ರಂದು ನಿಧನರಾಗಿದ್ದರು (Passed away). ದ್ವಾರಕೀಶ್ ಕೂಡ ಇದೇ ದಿನ ಕಣ್ಮುಚ್ಚಿದ್ದಾರೆ. ಮುಂಜಾನೆ 9.45ಕ್ಕೆ ಅಂಬುಜಾ ಅವರು ಪ್ರಾಣಬಿಟ್ಟಿದ್ದರೆ, ದ್ವಾರಕೀಶ್ ಕೂಡ ಅದೇ ಹೊತ್ತಿಗೆ ಉಸಿರು ನಿಲ್ಲಿಸಿದ್ದರು ಎಂದು ಅವರ ಪುತ್ರ ಯೋಗೀಶ್ ತಿಳಿಸಿದ್ದಾರೆ.

    ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ದ್ವಾರಕೀಶ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. 81 ವರ್ಷದ ದ್ವಾರಕೀಶ್ 19 ಅಗಷ್ಟ್ 1942ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು. ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಶಾರದ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ. ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದರು. ನಂತರ ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದ್ದರು. 1963ರಲ್ಲಿ ವ್ಯಾಪಾರ ಬಿಟ್ಟು ನಟನೆಯತ್ತ ಮುಖ ಮಾಡಿದ ದ್ವಾರಕೀಶ್ ತಮ್ಮ ಸೋದರ ಮಾವ ಹುಣಸೂರು ಕೃಷ್ಣಮೂರ್ತಿ ಅವರ ಮೂಲಕ 1964ರಲ್ಲಿ ‘ವೀರ ಸಂಕಲ್ಪ’ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

    ನಿರ್ಮಾಪಕರಾಗಿ ಡಾ.ರಾಜ್ ಅವರೊಂದಿಗೆ ‘ಮೇಯರ್ ಮುತ್ತಣ್ಣ’ ಭಾಗ್ಯವಂತರು ನಿರ್ಮಿಸಿದರು. ನಂತರ  ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಬಹಳ ಪ್ರಸಿದ್ಧಿ ಪಡೆಯಿತು. ಕಳ್ಳ-ಕುಳ್ಳ ಎಂದೇ ಪ್ರಸಿದ್ದವಾಗಿದ್ದ ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದು, ದ್ವಾರಕೀಶ್ ವಿಷ್ಣು ಅಭಿನಯದ ಬಹುತೇಕ ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದರು. 2006 ರಲ್ಲಿ ಆಪ್ತಮಿತ್ರ ನಿರ್ಮಾಣ ಮಾಡಿದ ದ್ವಾರಕೀಶ್ ಅತ್ಯಂತ ಯಶಸ್ಸು ಕಂಡಿದ್ದರು.

     

    ನಂತರ ಹಲವಾರು ಚಿತ್ರ ನಿರ್ಮಾಣ ಮಾಡಿದರು ಅಂತಹ ಯಶಸ್ಸು ಕಾಣದೆ ಕಂಗಾಲಾಗಿದ್ದರು. ಚಿತ್ರಜೀವನದಲ್ಲಿ ಹಲವಾರು ಏಳುಬಿಳು ಕಂಡ ದ್ವಾರಕೀಶ್ ಕರ್ನಾಟಕದ ಕುಳ್ಳ ಎಂಬ ಖ್ಯಾತಿಯ ಜೊತೆಗೆ ವಿದೇಶದಲ್ಲಿ ಚಿತ್ರೀಕರಣ ಲಂಡನ್ ನಲ್ಲಿ ಹಾಡುಗಳ ಧ್ವನಿಮುದ್ರಣ , ಕಿಶೋರ್ ಕುಮಾರ್ ಅವರಂತಹ ಗಾಯಕರನ್ನು ಪರಿಚಯಿಸಿದ್ದು. ನಟ. ನಟಿಯರನ್ನ, ಸಂಗೀತಗಾರನ್ನ, ಗಾಯಕರನ್ನು,  ತಂತ್ರಜ್ಞರನ್ನು ಪರಿಚಯಿಸಿದ ಸಾಹಸಿ ಇದೇ ದ್ವಾರಕೀಶ್.

  • ಕಷ್ಟಪಟ್ಟಿರೋ ದುಡ್ಡು, ಹಡಬೆ ದುಡ್ಡಲ್ಲ, ನೀವ್ ಯಾವ ಸೀಮೆ ಅಧಿಕಾರಿ : ಶೃಂಗೇರಿ ತಹಶೀಲ್ದಾರ್‌ಗೆ ಗ್ರಾಮಸ್ಥರ ಕ್ಲಾಸ್

    ಕಷ್ಟಪಟ್ಟಿರೋ ದುಡ್ಡು, ಹಡಬೆ ದುಡ್ಡಲ್ಲ, ನೀವ್ ಯಾವ ಸೀಮೆ ಅಧಿಕಾರಿ : ಶೃಂಗೇರಿ ತಹಶೀಲ್ದಾರ್‌ಗೆ ಗ್ರಾಮಸ್ಥರ ಕ್ಲಾಸ್

    ಚಿಕ್ಕಮಗಳೂರು: ಮೇಡಮ್…. ನಾವು ನಿಮಗೆ ಕೊಟ್ಟಿರೋದು ಕಷ್ಟಪಟ್ಟಿರೋ ದುಡ್ಡು. ಯಾವ್ದೋ ಹಡಬೆ ದುಡ್ಡಲ್ಲ. ಹಣ ತೆಗೆದುಕೊಳ್ಳುವಾಗ ನಿಮಗೆ ಜ್ಞಾನ ಇರಬೇಕಿತ್ತು. ಹಣ ತೆಗೆದುಕೊಂಡ ಮೇಲೆ ಕೆಲಸ ಮಾಡಿಕೊಡಬೇಕೆಂಬ ಪರಿಜ್ಞಾನ ಇರಬೇಕೆಂದು ಜಿಲ್ಲೆಯ ಶೃಂಗೇರಿ ತಾಲೂಕಿನ ಜನ ತಹಶೀಲ್ದಾರ್ ಅಂಬುಜಾ ಅವರಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಶೃಂಗೇರಿಯ ತಹಶೀಲ್ದಾರ್ ಅಂಬುಜಾ ಜಮೀನು, ಮನೆ, ನಿವೇಶನದ ಹಕ್ಕುಪತ್ರ ನೀಡುತ್ತೇನೆಂದು ಸ್ಥಳಿಯರಿಂದ ಹಣ ಪಡೆದುಕೊಂಡಿದ್ದರು. ಆದರೆ, ಅವರು ಕೊಟ್ಟ ಹಕ್ಕುಪತ್ರಗಳು ಬರೀ ಬೋಗಸ್ ಹಕ್ಕುಪತ್ರಗಳಾಗಿದ್ದವು. ತಾಲೂಕಿನ ಓರ್ವ ವ್ಯಕ್ತಿಯ ಬಳಿ ಹಕ್ಕುಪತ್ರ ನೀಡಲು ಹಣ ಪಡೆದಿದ್ದರು. ಆದರೆ ಹಕ್ಕು ಪತ್ರ ನೀಡಿರಲಿಲ್ಲ. ಅಷ್ಟು ಹೊತ್ತಿಗಾಗಲೇ ಎಸಿಬಿ ರೇಡ್ ಆಗಿ ಅಂದರ್ ಆಗಿದ್ದರು. ಇದೀಗ, ಬೇಲ್ ಮೇಲೆ ಹೊರಬಂದಿದ್ದಾರೆ. ಆದರೆ, ಈಗ ಆ ಅಧಿಕಾರಿಗೆ ಕರೆ ಮಾಡಿರುವ ಹಣ ನೀಡಿದ ವ್ಯಕ್ತಿ ಸಖತ್‌ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ನಾವು ಕೊಟ್ಟಿರೋದು ಕಷ್ಟಪಟ್ಟಿರೋ ದುಡ್ಡು. ಯಾವ್ದೋ ಹಡಬೆ ದುಡ್ಡು ಕೊಟ್ಟಿಲ್ಲ. ಹಣ ತೆಗೆದುಕೊಂಡ ಮೇಲೆ ಕೆಲಸ ಮಾಡಿಕೊಬೇಕು ಅನ್ನೋ ಜ್ಞಾನ ಇರಬೇಕು ಎಂದು ತಹಶೀಲ್ದಾರ್‌ಗೆ ಮೈಚಳಿ ಬಿಡಿಸಿದ್ದಾರೆ. ಅದಕ್ಕೆ ತಹಶೀಲ್ದಾರ್ ಮೇಡಂ, ಅಯ್ಯೋ. ಎಸಿಬಿ ರೇಡ್ ಆಯ್ತು, ನಾನೇನ್ ಮಾಡೋಣ ಎಂದಿದ್ದಾರೆ. ಅದಕ್ಕೆ ಆ ವ್ಯಕ್ತಿ ಅದಕ್ಕೆ ನಾವ್ ಏನ್ ಮಾಡೋಣ. ಎಸಿಬಿ ರೇಡ್ ಆಗದ ಹಾಗೇ ನೀವು ಮಾಡಬೇಕಿತ್ತು. ಅದು ನಿಮ್ಮ ಹಣೆಬರಹ. ದುಡ್ ತೆಗೆದುಕೊಳ್ಳುವಾಗ ಅರಿವಿರಬೇಕಿತ್ತು. ದುಡ್ ಇಸ್ಕಂಡ್ ಮೇಲೆ ಕೆಲಸ ಮಾಡಿಕೊಡಬೇಕು ಅನ್ನೋ ಜ್ಞಾನ ಇರಬೇಕು ಎಂದು ರೆಬೆಲ್ ಆಗಿದ್ದಾರೆ. ಆಡಳಿತದಲ್ಲಿ ಹೋಲ್ಡಿಂಗ್ ಇಲ್ಲ ಅಂದ್ರೆ ನೀವ್ ಯಾವ ಸೀಮೆ ತಹಶೀಲ್ದಾರ್ ಎಂದು ತಹಶೀಲ್ದಾರ್ ಪದದ ಮರ್ಯಾದೆ ಕಳೆದಿದ್ದಾರೆ.

    ತಹಶೀಲ್ದಾರ್ ಅಂಬುಜಾ ಶೃಂಗೇರಿಯಲ್ಲಿ ಹತ್ತಿಪ್ಪತ್ತಲ್ಲ ಬರೋಬ್ಬರಿ 700ಕ್ಕೂ ಅಧಿಕ ಜನರಿಗೆ ಫಾರಂ 94ಸಿ, 94ಸಿಸಿಯ ನಕಲಿ ಹಕ್ಕುಪತ್ರ ನೀಡಿ ಲಕ್ಷಾಂತರ ರೂಪಾಯಿಗಳನ್ನ ಗುಳುಂ ಮಾಡಿದ್ದಾರೆ ಎಂದು ಶೃಂಗೇರಿಯ ಜನ ಹೇಳುತ್ತಿದ್ದಾರೆ. ನ್ಯಾಯದ ಕುರ್ಚಿ ಮೇಲೆ ಕೂತ ಇವ್ರ ಅನ್ಯಾಯದ ಕಣ್ಣಾಮುಚ್ಚಾಲೆ ಆಟ ಎಂದು ಅತಿಯಾಯ್ತೋ ಎಸಿಬಿ ದಾಳಿ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ರು. ಜೈಲಿಗೆ ಹೋಗಿ ಬಂದಿದ್ದರು. ಮುಗ್ಧ ಹಳ್ಳಿಗರಿಗೆ ಆವಾಗಲೇ ಗೊತ್ತಾಗಿದ್ದು ಇವ್ರು ಅಂಗೈಯಲ್ಲಿ ಆಕಾಶ ತೋರಿಸಿದ ಕಥೆ. ಇದನ್ನೂ ಓದಿ: ಹೆಲಿಕಾಪ್ಟರ್‌ನ್ನು ವೈದ್ಯಕೀಯ ಸೇವೆಗೆ ದಾನ ಮಾಡಿದ ಪದ್ಮಶ್ರೀ ಪುರಸ್ಕೃತ

    1, 2, 3 ಲಕ್ಷ ಹೀಗೆ ಲಕ್ಷಗಟ್ಟಲೇ ಹಣ ಪಡೆದು ನಕಲಿ ಹಕ್ಕುಪತ್ರ ನೀಡಿ, ನಾವ್ ಸೇಫ್ ಅಂತ ಸೈಲೆಂಟಾಗಿದ್ರು. ನಮಗೆ ಸಿಕ್ಕಿರೋದು ನಕಲಿ ಹಕ್ಕುಪತ್ರ ಗೊತ್ತಾಗುತ್ತಿದ್ದಂತೆ ಜನ ತಹಶೀಲ್ದಾರ್‌ಗೆ ಫೋನ್ ಕ್ಲಾಸ್ ತೆಗೆದುಕೊಳ್ತಿದ್ದಾರೆ. ಈ ಮಧ್ಯೆ ವಾರದ ಹಿಂದಷ್ಟೆ ತಹಶೀಲ್ದಾರ್ ಕಚೇರಿಯಲ್ಲಿ ಕೆಲ ದಾಖಲೆಗಳ ಕಳ್ಳತನವಾಗಿದೆ. ಕಡತ ಕಳ್ಳತನ ಬೆನ್ನಲ್ಲೇ ತಹಶೀಲ್ದಾರ್ ಕಾರು ಚಾಲಕ ವಿಜೇತ್ ಕೂಡ ಆತ್ಮಹತ್ಯೆ ಶರಣಾದ. ಈ ಆತ್ಮಹತ್ಯೆ ಹಿಂದೆ ಅಧಿಕಾರಿಗಳ ಹಾಗೂ ಬ್ರೋಕರ್‌ಗಳು ಇದ್ದಾರೆಂಬ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ: ಮನೆಯ ಮೇಲೆ ಲ್ಯಾಂಡಿಂಗ್‌ – ಅಮೆರಿಕ ಸೇನೆಗೆ ಹೆದರಿ ಐಸಿಸ್‌ ಮುಖ್ಯಸ್ಥ ಆತ್ಮಾಹುತಿ

    ಮೃತ ವಿಜೇತ್ ಡೆತ್ ನೋಟ್‍ನಲ್ಲಿ ಬರೆದಿಟ್ಟ ಮೂವರ ಮೇಲೆ ಎಫ್‍ಐಆರ್ ಕೂಡ ಆಗಿದೆ. ತಹಶೀಲ್ದಾರ್ ನಕಲಿ ಹಕ್ಕುಪತ್ರದ ಆಳ-ಅಂತರ ಅರಿತಿದ್ದ ಕೆಲವರು ಹಕ್ಕುಪತ್ರ ನಕಲಿಯೋ? ಅಸಲಿಯೋ? ಅಂತ ಮಾಹಿತಿ ಕೇಳಿದ್ದಾರೆ. ಈಗ ತಹಶೀಲ್ದಾರ್ ಅಂಬುಜಾ ಪರಮಾಪ್ತರ ಮೂಲಕ ಮಾಹಿತಿ ಕೇಳಿದವರಿಗೆ ತಹಶೀಲ್ದಾರ್ ಪವರ್ ನಿಮಗೆ ಗೊತ್ತಿಲ್ಲ ಎಂದು ಬೆದರಿಕೆ ಕೂಡ ಹಾಕಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

  • ನಟ ದ್ವಾರಕೀಶ್ ಪತ್ನಿ ವಿಧಿವಶ

    ನಟ ದ್ವಾರಕೀಶ್ ಪತ್ನಿ ವಿಧಿವಶ

    ಬೆಂಗಳೂರು: ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್ ಅವರ ಪತ್ನಿ ಅಂಬುಜಾ ದ್ವಾರಕೀಶ್(80) ಅವರು ವಿಧಿವಶರಾಗಿದ್ದಾರೆ.

    ಅಂಬುಜಾ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತಿದ್ದರು. ಇಂದು ಮಧ್ಯಾಹ್ನ ಹೆಚ್‍ಎಸ್‍ಆರ್ ಲೇಔಟ್‍ನ ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ದ್ವಾರಕೀಶ್ ಅವರ ಕುಟುಂಬ ದುಃಖದ ಮಡುವಿನಲ್ಲಿದೆ.

    ದ್ವಾರಕೀಶ್ ಹಾಗೂ ಅಂಬುಜಾ ಅವರು ಪ್ರೀತಿಸಿ ವಿವಾಹವಾಗಿದ್ದರು. ಇತ್ತೀಚೆಗಷ್ಟೇ ಅಂಬುಜಾ ಅವರು ತಮ್ಮ 80ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬಸ್ಥರು ಹಾಗೂ ಹಿತೈಶಿಗಳೊಂದಿಗೆ ಆಚರಿಸಿಕೊಂಡಿದ್ದರು.

  • ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕನನ್ನ ನಗ್ನವಾಗಿ ಮೆರವಣಿಗೆ ಮಾಡಿದ್ರು

    ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕನನ್ನ ನಗ್ನವಾಗಿ ಮೆರವಣಿಗೆ ಮಾಡಿದ್ರು

    ಅಬುಜಾ: ವ್ಯಕ್ತಿಯೊಬ್ಬ ಗರ್ಭಿಣಿ ಮೇಕೆಯೊಂದರ ಮೇಲೆ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆ ನೈಜೀರಿಯಾದ ಉಗೋ ಎಂಬಲ್ಲಿ ನಡೆದಿದೆ

    ಆರೋಪಿ ಕಾಮುಕನನ್ನು ಶೀನಾ ರ್‍ಯಾಂಬೋ ಎಂದು ಗುರುತಿಸಿದ್ದು, ತನ್ನ ಮನೆಯಲ್ಲಿಯೇ ಈ ಹೀನ ಕೃತ್ಯ ಎಸಗಿದ್ದಾನೆ. ಮೇಕೆ ಕಿರುಚಾಟ ಕೇಳಿ ಸ್ಥಳೀಯರು ಆತನ ಮನೆಗೆ ಬಂದು ಬಾಗಿಲು ಬಡಿದ್ದಾರೆ. ಆದರೆ ಬಾಗಿಲು ತೆಗೆಯಲಿಲ್ಲ. ನಂತರ ಗ್ರಾಮಸ್ಥರು ಬಾಗಿಲು ಮುರಿದು ಓಳಗೆ ಹೋಗಿ ನೋಡಿದರೆ ಆಗ ಆರೋಪಿ ಮೂಕಪ್ರಾಣಿಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನು ನೋಡಿದ್ದಾರೆ.

     

    ಉಗೋದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಅದಕ್ಕೂ ಮುಂಚೆ ಸ್ಥಳೀಯರು ಆರೋಪಿ ಕಾಮುಕನನ್ನ ನಗ್ನಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಮೇಕೆಯನ್ನ ಆರೋಪಿಯ ಕುತ್ತಿಗೆಗೆ ಕಟ್ಟಿ ಮೆರವಣಿಗೆ ಮಾಡಿದ್ದು, ಈ ವೇಳೆ ಜೋರಾಗಿ ಆತನನ್ನು ಅಪಹಾಸ್ಯ ಮಾಡಿ ಬೈದಿದ್ದಾರೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ.

    ಆರೋಪಿ ಹಾಗೂ ಆತನ ಕುಟುಂಬದವರನ್ನ ಊರು ಬಿಟ್ಟು ಹೋಗುವಂತೆ ಗ್ರಾಮಸ್ಥರು ಹೇಳಿದ್ದಾರೆ. 20 ವರ್ಷ ವಯಸ್ಸಿನವನಾದ ಆರೋಪಿ ಶೀನಾ ರ್‍ಯಾಂಬೋ ಈ ಹಿಂದೆಯೂ ಅನೇಕ ಅಪರಾಧಗಳನ್ನ ಎಸಗಿದ್ದಾನೆ ಎಂದು ಸಮುದಾಯದ ಮುಖ್ಯಸ್ಥರು ಹೇಳಿದ್ದಾರೆ. ಈತ ಈ ಹಿಂದೆ ಇದ್ದ ಗ್ರಾಮಗಳಲ್ಲೂ ಈ ರೀತಿಯ ಕೃತ್ಯವೆಸಗಿದ್ದು ಇತರೆ ಸಮುದಾಯಗಳು ಈತನನ್ನು ಊರುಗಳಿಂದ ಹೊರಹಾಕಿದ್ದವು. ಆತನ ತಂದೆ ಮೇಲಿನ ಗೌರವದಿಂದ ಹಿಂದಿನ ಪ್ರಕರಣಗಳಲ್ಲಿ ಸುಮ್ಮನೆ ಬಿಟ್ಟು ಕಳಿಸಿದ್ದರು. ಆದ್ರೆ ಈಗ ಆತ ಊರಿನಿಂದ ಹೊರಹೋಗೋ ಮುನ್ನ ಏನಾದರೂ ತ್ಯಾಗ ಮಾಡಬೇಕು ಎಂದು ಅವರು ಹೇಳಿದ್ದಾರೆ.