Tag: ಅಪ್ಪ

  • ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ ಅಪ್ಪ-ಮಗ!

    ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ ಅಪ್ಪ-ಮಗ!

    ಲಕ್ನೋ: ಮನೆಗೆ ಹೋಗುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಂತರ ಅಪ್ಪ-ಮಗ ಆಕೆಗೆ ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಮಿಶ್ರಿತ್ ಪ್ರದೇಶದಲ್ಲಿ ನಡೆದಿದೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಮಹಿಳೆಯನ್ನು ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಕುರಿತಂತೆ ಮಾತನಾಡಿದ ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಆರ್ ಪಿ ಸಿಂಗ್, ನೈಮಿಶರಣ್ಯದ ಮಿಶ್ರಿಖ್ ಪ್ರದೇಶದಲ್ಲಿ 30 ವರ್ಷದ ಮಹಿಳೆ ಮೇಲೆ ವ್ಯಕ್ತಿಗಳಿಬ್ಬರು ಅತ್ಯಾಚಾರ ನಡೆಸಿ ಬೆಂಕಿ ಹಚ್ಚಿದ್ದಾರೆ ಎಂದು 112 ತುರ್ತು ಸೇವೆ ಮಾಹಿತಿ ನೀಡಿದೆ. ಮಹಿಳೆ ಸಿಧೌಲಿ ಪ್ರದೇಶದಲ್ಲಿರುವ ತಾಯಿ ಮನೆಯಿಂದ ಹಿಂದಿರುಗಿ ಹೋಗುತ್ತಿದ್ದ ವೇಳೆ ಆರೋಪಿಯೊಬ್ಬನ ಬಳಿ ಲಿಫ್ಟ್ ಪಡೆದಿದ್ದಾಳೆ. ಈ ವೇಳೆ ಘಟನೆ ಸಂಭವಿಸಿದ್ದು, ಸದ್ಯ ಮಹಿಳೆಯನ್ನು ಚಿಕಿತ್ಸೆಗೆ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವೇಳೆ ಮಹಿಳೆಯ ದೇಹ ಶೇ.30ರಷ್ಟು ಹ ಬೆಂಕಿಗಾಹುತಿಯಾಗಿದ್ದು, ಪ್ರಾಣಾಪಾಯದಿಂದ ಮಹಿಳೆ ಪಾರಾಗಿದ್ದಾಳೆ ಎಂದು ಹೇಳಿದ್ದಾರೆ.

    ಸದ್ಯ ಪ್ರಕರಣ ಸಂಬಂಧಿಸಿದಂತೆ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

  • ನಾನು ಹೇಡಿಯಲ್ಲ, ನನ್ನಿಂದ ಬದುಕಲು ಆಗ್ತಿಲ್ಲ- ವಿದ್ಯಾರ್ಥಿ ಆತ್ಮಹತ್ಯೆ

    ನಾನು ಹೇಡಿಯಲ್ಲ, ನನ್ನಿಂದ ಬದುಕಲು ಆಗ್ತಿಲ್ಲ- ವಿದ್ಯಾರ್ಥಿ ಆತ್ಮಹತ್ಯೆ

    – ಸಾರಿ ಅಪ್ಪ, ಅಮ್ಮ: ಪುತ್ರನ ಭಾವನಾತ್ಮಕ ಪತ್ರ
    – ನನ್ನ ನಿರ್ಧಾರ ಸರಿ ಇದೆಯೋ ಗೊತ್ತಾಗ್ತಿಲ್ಲ

    ಲಕ್ನೋ: ನಾನು ಹೇಡಿಯಲ್ಲ, ನನ್ನಿಂದ ಬದುಕಲು ಆಗುತ್ತಿಲ್ಲ ಎಂದು ಡೆತ್ ನೋಟ್ ಬರೆದಿಟ್ಟ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಉತ್ತರ ಪ್ರದೇಶದ ಪ್ರತಾಪಗಢದ ಲಾಲ್‍ಗಂಜ್ ವ್ಯಾಪ್ತಿಯ ಬೆಲ್ಹಾ ಗ್ರಾಮದ ಐಟಿಐ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಧೀರೇಂದ್ರ ಶರ್ಮಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮೃತ ಧೀರೇಂದ್ರ ಪ್ರತಾಪಘಢನಲ್ಲಿ ಐಟಿಐ ಓದುತ್ತಿದ್ದನು. ರಜೆ ಹಿನ್ನೆಲೆ ಶನಿವಾರ ಗ್ರಾಮಕ್ಕೆ ಆಗಮಿಸಿದ್ದನು. ಮನೆಗೆ ಬಂದವನು ಎರಡನೇ ಮಹಡಿಯಲ್ಲಿರುವ ಕೋಣೆ ಸೇರಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಾಹ್ನ ತಾಯಿ ಊಟಕ್ಕೆ ಕರೆದಾಗಲೂ ಕೋಣೆಯಿಂದ ಉತ್ತರ ಬಂದಿಲ್ಲ. ಬಾಗಿಲು ತಟ್ಟಿದ್ರೂ ಮಗ ಉತ್ತರಿಸಿದರಿಂದ ಆತಂಕಗೊಂಡ ತಾಯಿ ಬೆಳಕಿನ ಕಿಂಡಿಯಲ್ಲಿ ಇಣುಕಿದಾಗ ಮಗನ ಶವ ನೇತಾಡುತ್ತಿರುವ ಭಯಾನಕ ದೃಶ್ಯ ಕಂಡಿದೆ.

    ತಾಯಿಯ ಕಿರುಚಾಟ ಕೇಳಿ ಆಗಮಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಧೀರೇಂದ್ರ ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ತನ್ನ ಸಾವಿಗೆ ಪ್ರದೀಪ್ ಸಿಂಗ್ ಮತ್ತು ಆತನ ಸೋದರಳಿಯ ಕಾರಣ ಎಂದು ಬರೆದಿದ್ದಾನೆ. ಹಾಗೆ ತಂದೆ-ತಾಯಿಗೂ ಕ್ಷಮೆ ಕೇಳಿದ್ದಾನೆ.

    ಪ್ರೀತಿಯ ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ. ಸಾಯುತ್ತಿದ್ದೆನೆಂದು ನಾನೇನು ಹೇಡಿಯಲ್ಲ. ಆ ಇಬ್ಬರು ನನಗೆ ಬ್ಲ್ಯಾಕ್‍ಮೇಲ್ ಮಾಡಿ ಕಿರುಕುಳ ನೀಡುತ್ತಿದ್ದಾರೆ. ನಾನು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನಾ ಎಂಬುವುದು ನನಗೆ ಗೊತ್ತಾಗುತ್ತಿಲ್ಲ. ಆದ್ರೆ ನನ್ನಿಂದ ಬದುಕಲು ಆಗುತ್ತಿಲ್ಲ. ನನ್ನ ಸಾವಿಗೆ ಪ್ರದೀಪ್ ಸಿಂಗ್ ಮತ್ತು ಆತನ ಸೋದರಳಿಯ ಕಾರಣ ಎಮದು ಧೀರೇಂದ್ರ ಹೇಳಿದ್ದಾನೆ.

     

  • ಒಲೆ ಪಕ್ಕದಿಂದ ಎದ್ದಿಲ್ಲವೆಂದು ಸೌದೆಯಿಂದ ಹೊಡೆದ ಮಗ – ಊಟ ಮಾಡಿ ಮಲಗಿದ್ದ ತಂದೆ ಬೆಳಗ್ಗೆ ಸಾವು

    ಒಲೆ ಪಕ್ಕದಿಂದ ಎದ್ದಿಲ್ಲವೆಂದು ಸೌದೆಯಿಂದ ಹೊಡೆದ ಮಗ – ಊಟ ಮಾಡಿ ಮಲಗಿದ್ದ ತಂದೆ ಬೆಳಗ್ಗೆ ಸಾವು

    ಚಿಕ್ಕಮಗಳೂರು: ಅಡುಗೆ ಮಾಡುವ ಒಲೆ ಪಕ್ಕ ಮಲಗಿದ್ದ ಅಪ್ಪ ಹೇಳಿದ ಕೂಡಲೇ ಎದ್ದೇಳಲಿಲ್ಲ ಎಂದು ಒಲೆಯಲ್ಲಿ ಉರಿಯುತ್ತಿದ್ದ ಸೌದೆಯನ್ನ ತೆಗೆದು ಅಪ್ಪನಿಗೆ ಹೊಡೆದು ಮಗನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬೆಳಗೋಡು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಸಯ್ಯ (63) ಎಂದು ಗುರುತಿಸಲಾಗಿದೆ. 33 ವರ್ಷದ ಮಂಜುನಾಥ್ ಅಪ್ಪನನ್ನೇ ಕೊಲೆಗೈದಿರುವ ಪುತ್ರ.

    ಮೃತ ಬಸಯ್ಯನಿಗೆ ಇಬ್ಬರು ಪುತ್ರರು. ಹಿರಿಯ ಮಗ ಮದುವೆಯಾಗಿ ಬಣಕಲ್ ಬಳಿ ಹಳ್ಳಿಯೊಂದರಲ್ಲಿ ಬೇರೆ ವಾಸವಿದ್ದಾನೆ. ಕಿರಿಯ ಮಗ ಮಂಜುನಾಥ್‍ಗೆ ಮದುವೆಯಾಗಿಲ್ಲ. ಬಸಯ್ಯನ ಪತ್ನಿಗೆ ಕಳೆದೊಂದು ವರ್ಷದಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಆದ್ದರಿಂದ ಅಪ್ಪ-ಮಗನೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು. ಗುರುವಾರ ಸಂಜೆ ಇಬ್ಬರು ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ.

    ಬಸಯ್ಯ ಅಡುಗೆ ಮಾಡುವ ಒಲೆ ಪಕ್ಕದಲ್ಲಿ ಮಲಗಿದ್ದರು. ತಡವಾಗಿ ಮನೆಗೆ ಬಂದ ಮಗ ಅಪ್ಪನನ್ನ ಅಡುಗೆ ಮಾಡಬೇಕು ಎದ್ದೇಳು ಎಂದು ಹೇಳಿದ್ದಾನೆ. ಆದರೆ ಅಪ್ಪ ಬಸಯ್ಯ ಎದ್ದೇಳಿಲ್ಲ. ಕೂಡಲೇ ಕುಡಿದ ಅಮಲಿನಲ್ಲಿದ್ದ ಮಗ ಒಲೆಯಲ್ಲಿ ಉರಿಯುತ್ತಿದ್ದ ಸೌದೆಯಲ್ಲಿ ಅಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ಅಪ್ಪ ಎದ್ದು ಹೋಗಿದ್ದಾರೆ. ಆದರೆ ರಾತ್ರಿ ಬಸಯ್ಯಗೆ ಏನು ಆಗಿರಲ್ಲ, ಚೆನ್ನಾಗಿದ್ದರು. ಬಳಿಕ ಮಗನೇ ಅಡುಗೆ ಮಾಡಿ ಅಪ್ಪನಿಗೆ ಊಟ ಹಾಕಿ ಮಲಗಿಸಿದ್ದಾನೆ.

    ಶುಕ್ರವಾರ ಬೆಳಗ್ಗೆ ಎದ್ದು ನೋಡಿದಾಗ ಅಪ್ಪ ಬಸಯ್ಯನ ತಲೆಯಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿದ್ದ. ಬಳಿಕ ಮಗನೇ ನಡೆದ ಘಟನೆಯ ಬಗ್ಗೆ ಗ್ರಾಮದ ಜನರಿಗೆ ತಿಳಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಂದು ಆರೋಪಿ ಮಂಜುನಾಥ್‍ನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪತ್ನಿಯ ಕುತ್ತಿಗೆ ಕೊಯ್ದು ಕುಲದೇವತೆಗೆ ಬಲಿ ನೀಡಿದ ಗಂಡ

    ಪತ್ನಿಯ ಕುತ್ತಿಗೆ ಕೊಯ್ದು ಕುಲದೇವತೆಗೆ ಬಲಿ ನೀಡಿದ ಗಂಡ

    -ತಂದೆಯಿಂದ ಮಗನಿಗೆ ಜೀವ ಬೆದರಿಕೆ
    -ಅಪ್ಪನ ಕೃತ್ಯ ಬಿಚ್ಚಿಟ್ಟ ಮಗ

    ಭೋಪಾಲ್: ವ್ಯಕ್ತಿಯೋರ್ವ ಮೂಢನಂಬಿಕೆಯಿಂದ ಪತ್ನಿಯ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇದ ಸಿಂಗರೌಲಿಯ ಬಸೌಡಾ ಗ್ರಾಮದಲ್ಲಿ ನಡೆದಿದೆ. ಕೊಲೆಯ ಬಳಿಕ ಕುಲದೇವತೆಯ ಪ್ರಸನ್ನಗೊಳಿಸಲು ಪತ್ನಿಯ ಕುತ್ತಿಗೆ ಕೊಯ್ದುರೋದಾಗಿ ಹೇಳಿಕೊಂಡಿದ್ದಾನೆ.

    ಬ್ರಿಜೇಶ್ ಕೆವಟ್ ಪತ್ನಿ ಬಿಟ್ಟಿದೇವಿಯನ್ನ ಕೊಲೆಗೈದ ಪತಿ. ಅಪ್ಪನ ಕೃತ್ಯಕ್ಕೆ ಮಗನೇ ಪೊಲೀಸರ ಮುಂದೆ ಸಾಕ್ಷಿ ಹೇಳಿದ್ದಾನೆ. ತಂದೆ-ತಾಯಿ ಕುಲದೇವತೆಗೆ ಪೂಜೆ ಸಲ್ಲಿಸಿದ ಬಳಿಕ ನಾವೆಲ್ಲ ಮಲಗಿದೆವು. ತಡರಾತ್ರಿ ಒಳಗೆ ಅಪ್ಪ-ಅಮ್ಮ ಜಗಳ ಆಡುತ್ತಿರುವ ಧ್ವನಿ ಕೇಳಿದ್ದರಿಂದ ನನಗೆ ಎಚ್ಚರವಾಯ್ತು. ಇಬ್ಬರ ಜಗಳ ಆಡುತ್ತಾ ಜೋರು ಜೋರಾಗಿ ಮಾತಾಡುತ್ತಿದ್ದರು. ನಾನು ಅಪ್ಪನನ್ನ ತಡೆಯಲು ಹೋದಾಗ, ನೀವು ಮಧ್ಯ ಬರಬೇಡ ಅಂತಾ ನನ್ನನ್ನು ಹೊರಗೆ ಕಳಿಸಿದ್ರು.

    ಹೊರಗೆ ಬಂದ ಕೂಡಲೇ ಮನೆಯ ಬಾಗಿಲು ಹಾಕಲಾಯ್ತು. ತಂದೆ ಅಮ್ಮನನ್ನ ಕೊಂದು ಶವದ ಜೊತೆ ಹೊರ ಬಂದ್ರು. ತದನಂತರ ರುಂಡ ಮತ್ತು ಶವವನ್ನ ಹೂತರು. ನಾನು ಭಯದಿಂದ ಅಳಲು ಶುರು ಮಾಡಿದಾಗ ಕಿರುಚಾಡಬೇಡ, ಇಲ್ಲವಾದಲ್ಲಿ ನಿನ್ನನ್ನು ಕೊಂದು ಬಿಡ್ತೀನಿ ಅಂದು ಧಮ್ಕಿ ಹಾಕಿದರು.

    ಮಗುವಿನ ಅಳು ಶಬ್ಧ ಕೇಳಿ ಬಂದನೆರೆಹೊರೆಯವರು ಒಂದು ಕ್ಷಣ ಶಾಕ್ ಆಗಿದ್ದಾರೆ. ಕೂಡಲೇ ಪೊಲೀಸರಿಗೆ ಫೋನ್ ಮಾಡಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಸ್‍ಪಿ ವೀರೇಂದ್ರ ಪ್ರತಾಪ್ ಸಿಂಗ್, ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನ ವಶಕ್ಕೆ ಪಡೆದು ಪೂಜೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

  • ಅನಾರೋಗ್ಯದಿಂದ ಮಡದಿ ಸಾವು – ಮಕ್ಕಳೊಂದಿಗೆ ಕಾಲುವೆಗೆ ಹಾರಿದ ಪತಿ

    ಅನಾರೋಗ್ಯದಿಂದ ಮಡದಿ ಸಾವು – ಮಕ್ಕಳೊಂದಿಗೆ ಕಾಲುವೆಗೆ ಹಾರಿದ ಪತಿ

    ಬಳ್ಳಾರಿ: ಅನಾರೋಗ್ಯಕ್ಕೆ ತುತ್ತಾಗಿ ಮಡದಿ ಸಾವನ್ನಪ್ಪಿದ್ದರಿಂದ ಬೇಸತ್ತು ತಂದೆಯೊಬ್ಬ ತನ್ನಿಬ್ಬರ ಮಕ್ಕಳೊಂದಿಗೆ ಕಾಲುವೆಗೆ ಹಾರಿದ ಘಟನೆ ಗಣಿನಗರಿ ಬಳ್ಳಾರಿಯಲ್ಲಿ ನಡೆದಿದೆ.

    ಬೆಂಗಳೂರು ರಸ್ತೆಯಲ್ಲಿರುವ ಕಬರ್‍ಸ್ತಾನ್ ಎದುರಿನ ಪೆಟ್ರೋಲ್ ಬಂಕ್‍ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ್ ಅಚಾರಿ, ಗುರುವಾರ ಮಧ್ಯಾಹ್ನ ಹಲಕುಂದಿಯಿಂದ ಹೆಚ್‍ಎಲ್‍ಸಿ ಉಪಕಾಲುವೆ ಬಳಿ ಹೋಗಿ ತನ್ನಿಬ್ಬರು ಮಕ್ಕಳು ಎಳೆದುಕೊಂಡು ಕಾಲುವೆ ಹಾರಿದ್ದಾರೆ.

    ಗಣೇಶ್ ಆಚಾರಿಯವರ 12 ವರ್ಷದ ಮಗಳು ಸ್ಫೂರ್ತಿ ಕಾಲುವೆ ನೀರಿಗೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಆದರೆ 15 ವರ್ಷದ ಹಿರಿಯ ಮಗಳು ಕೀರ್ತನಾ ಸಾವು ಬದುಕಿನ ಮಧ್ಯೆ ಹೋರಾಡುತ್ತಿರೋದನ್ನು ಗಮನಿಸಿದ ಗೃಹರಕ್ಷಕ ದಳದ ಸಿಬ್ಬಂದಿ ಸುದರ್ಶನ್ ಮತ್ತವರ ತಂಡ ಬಾಲಕಿಯನ್ನು ಜೀವಂತವಾಗಿ ರಕ್ಷಿಸಿ ಮಾನವೀಯತೆ ಮರೆದಿದ್ದಾರೆ. ಗಣೇಶ ಆಚಾರಿ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

    ಜೀವಂತವಾಗಿ ಬದುಕುಳಿದ ಬಾಲಕಿ ಕೀರ್ತನಾರನ್ನು ಹಲಕುಂದಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಇರಿಸಲಾಗಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಯುಡು ಮನೆಗೆ ಹೊಸ ಅತಿಥಿಯ ಆಗಮನ

    ರಾಯುಡು ಮನೆಗೆ ಹೊಸ ಅತಿಥಿಯ ಆಗಮನ

    ಮುಂಬೈ: ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ಅಂಬಟಿ ರಾಯುಡು ದಂಪತಿಗೆ ಹೆಣ್ಣು ಮಗು ಜನಿಸಿದೆ.

    ರಾಯುಡು ಪತ್ನಿ ಚೆನ್ನುಪಲ್ಲಿ ವಿದ್ಯಾ ಅವರು ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಐಪಿಎಲ್‌ನಲ್ಲಿ ರಾಯುಡು ಚೆನ್ನೈ ಸೂಪರ್‌ ಕಿಂಗ್ಸ್ ಪರವಾಗಿ ಆಡುತ್ತಿದ್ದು, ರಾಯುಡು ತಂದೆಯಾದ ವಿಚಾರವನ್ನು, ಸಿಎಸ್‌ಕೆ ತಂಡ ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

    ರಾಯುಡು ದಂಪತಿಗೆ ಹೆಣ್ಣು ಮಗು ಜನಿಸಿದೆ ಎಂಬ ವಿಚಾರ ತಿಳಿಯುತ್ತಿದಂತೆ ಅವರ ಅಭಿಮಾನಿಗಳು ಮತ್ತು ಸಾವಿರಾರು ನೆಟ್ಟಿಗರು ಸಾಮಾಜಿಕ ಜಾಲತಾಣದ ಮೂಲಕ ವಿಶ್‌ ಮಾಡುತ್ತಿದ್ದಾರೆ. ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಈಗ ಡ್ಯಾಡೀಸ್‌ ಆರ್ಮಿಯಿಂದ ಆಫ್-ಫೀಲ್ಡ್ ಪಾಠಗಳನ್ನು ಬಳಸಲಾಗುವುದು. ವಿಸಿಲ್ ಪೋಡು ಎಂದು ಬರೆದು ಅಂಬಟಿ ರಾಯುಡು ಮತ್ತು ಅವರು ಮಗಳು ಹಾಗೂ ಅವರ ಪತ್ನಿ ಜೊತೆಗಿರುವ ಮುದ್ದಾದ ಸೆಲ್ಫಿಯನ್ನು ಹಂಚಿಕೊಂಡಿದೆ.

    ತನ್ನ ತಂಡದ ಸಹ ಆಟಗಾರ ಅಂಬಟಿ ರಾಯುಡು ಅವರಿಗೆ ವಿಶ್‌ ಮಾಡಿರುವ ಸುರೇಶ್‌ ರೈನಾ ಅವರು, ಮಗಳ ಜನನವಾಗಿದ್ದಕ್ಕೆ ಅಂಬಟಿ ರಾಯುಡು ಹಾಗೂ ವಿದ್ಯಾ ಅವರಿಗೆ ಶುಭಾಶಯಗಳು. ನಿಮ್ಮ ಮುದ್ದು ಮಗಳ ಜೊತೆಗೆ ಪ್ರತಿ ಕ್ಷಣವನ್ನು ಆನಂದಿಸಿ. ನಿಮಗೆ ದೇವರು ಹೆಚ್ಚಿನ ಖುಷಿ ಕೊಡಲಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ರಾಯಡು ಅವರು, ಧನ್ಯವಾದಗಳು ಸಹೋದರ ಎಂದು ರೈನಾ ಅವರಿಗೆ ತಿಳಿಸಿದ್ದಾರೆ.

    ರಾಯುಡು ಅವರು ಭಾರತ ತಂಡದ ಮಿಡಲ್‌ ಆರ್ಡರ್ ಬ್ಯಾಟ್ಸ್‌ ಮ್ಯಾನ್‌ ಆಗಿದ್ದು, ಭಾರತದ ಪರವಾಗಿ 55 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಮೂರು ಸೆಂಚುರಿಗಳನ್ನು ಹೊಡೆದಿದ್ದಾರೆ. ಭಾರತದ ಪರವಾಗಿ ಅಂಬಟಿ ರಾಯುಡು ಅವರು, ಆರು ಟಿ-೨೦ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಅಂಬಟಿ 2010ರಲ್ಲಿ ಮುಂಬೈ ಇಂಡಿಯನ್ಸ್‌ ತಂಡದಿಂದ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಈವರೆಗೂ ಸುಮಾರು 147 ಐಪಿಎಲ್‌ ಪಂದ್ಯಗಳನ್ನು ರಾಯುಡು ಆಡಿದ್ದಾರೆ.

    ಕಾಲೇಜು ಗೆಳತಿ ಚೆನ್ನುಪಲ್ಲಿ ವಿದ್ಯಾ ಅವರನ್ನು 2009ರ ಫೆಬ್ರವರಿ14ರಂದು ಹೈದರಾಬಾದಿನಲ್ಲಿ ಅಂಬಟಿ ರಾಯುಡು ವರಿಸಿದ್ದರು.

  • ಅಮ್ಮಾ ಎದ್ದೇಳು ಎಂದು ಕಣ್ಣೀರಿಟ್ಟ ಮಗಳು- ಅಪ್ಪನ ಮಡಿಲಲ್ಲಿ ಕಂದನ ಸಾವು-ಬದುಕಿನ ಹೋರಾಟ

    ಅಮ್ಮಾ ಎದ್ದೇಳು ಎಂದು ಕಣ್ಣೀರಿಟ್ಟ ಮಗಳು- ಅಪ್ಪನ ಮಡಿಲಲ್ಲಿ ಕಂದನ ಸಾವು-ಬದುಕಿನ ಹೋರಾಟ

    – ಚರಂಡಿ, ನಡು ರಸ್ತೆಯಲ್ಲೇ ಬಿದ್ದ ನೂರಾರು ಜನರು

    ವಿಶಾಖಪಟ್ಟಣಂ: ‘ಅಮ್ಮಾ ಎದ್ದೇಳು,  ಅಮ್ಮಾ ಎದ್ದೇಳು’… ‘ಪಾಪು ನಿನಗೇನೂ ಆಗಲ್ಲ, ಕಣ್ಣು ಬೀಡೋ, ಎದ್ದೇಳೋ’ ಎಂದು ನೂರಾರು ಮಕ್ಕಳು-ಪೋಷಕರು ಕಣ್ಣೀರಿಟ್ಟರು. ಅಮ್ಮನನ್ನ ಹಿಡಿದು ಮಗಳು ಗೋಳೋ ಅಂತ ಅತ್ತಳು. ಅಂಗೈಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಂದಮ್ಮನ ಸ್ಥಿತಿ ಕಂಡು ಅಪ್ಪ ಅಸಹಾಯಕರಂತೆ ಚಡಪಡಿಸಿದ ಮನಕಲುಕುವ ದೃಶ್ಯಗಳು ವಿಶಾಖಪಟ್ಟಣಂನಲ್ಲಿ ಕಂಡು ಬಂದವು.

    ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಕಾರ್ಖಾನೆಯಿಂದ ಗುರುವಾರ ನಸುಕಿನ ಜಾವ ಅನಿಲ ಸೋರಿಕೆಯಾಗಿದೆ. ಎಲ್‍ಜಿ ಪಾಲಿಮರ್ಸ್ ಇಂಡಸ್ಟ್ರಿಯ ಸ್ಥಾವರದಲ್ಲಿ 2:30 ಗಂಟೆಗೆ ಅಪಘಾತ ಸಂಭವಿಸಿದ್ದು, ಬೆಳಗ್ಗೆ 5:30ರ ಸುಮಾರಿಗೆ ನ್ಯೂಟ್ರಾಲೈಜರ್ ಗಳನ್ನು ಬಳಸಿದ ನಂತರ ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿತು. ಅಷ್ಟೊತ್ತಿಗೆ ಅನಿಲವು 4 ಕಿ.ಮೀ ವ್ಯಾಪ್ತಿಯಲ್ಲಿ 5 ಸಣ್ಣ ಹಳ್ಳಿಗಳಿಗೆ ಹರಡಿತ್ತು. ಅಪಘಾತದಲ್ಲಿ ಈವರೆಗೆ 2 ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಿಶಾಖಪಟ್ಟಣಂ ದುರಂತ- 2 ಟ್ಯಾಂಕಿನ ಒಟ್ಟು 10 ಟನ್ ವಿಷಾನಿಲ ಸೋರಿಕೆ

    ಎನ್‍ಡಿಆರ್‌ಎಫ್, ಎಸ್‍ಡಿಆರ್‌ಎಫ್, ಎನ್‍ಡಿಎಂಎ ಮತ್ತು ನೌಕಾಪಡೆಯ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿದವು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎನ್‍ಡಿಆರ್‌ಎಫ್ ಡಿಜಿ ಎಸ್‍ಎನ್ ಪ್ರಧಾನ್ ಹೇಳಿದ್ದಾರೆ.  ಇದನ್ನೂ ಓದಿ: ಲಾಕ್‍ಡೌನ್ ಬಳಿಕ ತೆರೆದ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆ- ಸಾವಿನ ಸಂಖ್ಯೆ 8ಕ್ಕೆ ಏರಿಕೆ

    ವಿಶಾಖಪಟ್ಟಣಂನಿಂದ 30 ಕಿ.ಮೀ ದೂರದಲ್ಲಿರುವ ವೆಂಕಟಪುರಂ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಪರಿಣಾಮ ಸಾವಿರಕ್ಕೂ ಹೆಚ್ಚು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. 300 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 25 ಜನರು ವೆಂಟಿಲೇಟರ್ ಗಳಲ್ಲಿದ್ದಾರೆ. 15 ಮಕ್ಕಳ ಸ್ಥಿತಿ ಗಂಭೀರವಾಗಿದೆ.

    https://twitter.com/gunjanm_/status/1258256034222620674

    ಪರಿಸ್ಥಿತಿ ಎಷ್ಟರ ಮಟ್ಟಿಗೆ ಕರಾಳವಾಗಿತ್ತು ಎಂದರೆ ಮೃತ 11 ಜನರಲ್ಲಿ ಇಬ್ಬರು ಭಯದಿಂದಲೇ ಪ್ರಾಣಬಿಟ್ಟಿದ್ದಾರೆ. ಓರ್ವ ಕಂಪನಿಯ ಎರಡನೇ ಮಹಡಿಯಿಂದ ಬಿದ್ದರೆ, ಇನ್ನೊಬ್ಬ ಬಾವಿಗೆ ಹಾರಿ ಸಾವನ್ನಪ್ಪಿದ್ದಾನೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಜನರು ಮಕ್ಕಳು, ವೃದ್ಧರನ್ನು ಕರೆದುಕೊಂಡು ಗ್ರಾಮವನ್ನು ಬಿಡಲು ಆರಂಭಿಸಿದರು. ಆದರೆ ಅನೇಕರು ಮಾರ್ಗಮಧ್ಯದಲ್ಲೇ ಪ್ರಜ್ಞೆ ತಪ್ಪಿದರು. ಕೆಲವರು ಚರಂಡಿಗೆ ಬಿದ್ದರೆ, ಇನ್ನೂ ಕೆಲವರು ಬೈಕ್ ನಿಯಂತ್ರಣ ಕಳೆದುಕೊಂಡು ನಡುರಸ್ತೆಯಲ್ಲೇ ಬಿದ್ದಿದ್ದರು. ಇದನ್ನೂ ಓದಿ: ನನ್ನಮ್ಮ ಕೂಡ ಏಕಾಏಕಿ ಕೆಳಗೆ ಬಿದ್ರು, ಕೂಡ್ಲೇ ಆಸ್ಪತ್ರೆಗೆ ಕರೆದೊಯ್ದೆ- ಪ್ರತ್ಯಕ್ಷದರ್ಶಿ ವಿವರಣೆ

    ಕಾರ್ಖಾನೆಯ ಸುತ್ತಲೂ ಗೊಂದಲ ನಿರ್ಮಾಣವಾಗಿತ್ತು. ಜನರು ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡುತ್ತಿದ್ದರು. ಪೊಲೀಸರು, ಭದ್ರತಾ ಸಿಬ್ಬಂದಿ ಜನರ ಸಹಾಯಕ್ಕೆ ನಿಂತರು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ತಮ್ಮ ಜೀವ ಉಳಿಸಲು ಪ್ರಯತ್ನಿಸುತ್ತಿದ್ದರು. ಅನೇಕ ಜನರು ತಲೆತಿರುಗಿ ನೆಲಕ್ಕೆ ಬಿದ್ದಿದ್ದರು.

    ರಸ್ತೆ ಪಕ್ಕದಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ತಾಯಿ ನೋಡಿ ಮಗಳು ಕಣ್ಣೀರಾದಳು. ಅಮ್ಮಾ ಎದ್ದೇಳು… ಏಳ್ ಅಮ್ಮಾ ಎಂದು ಹಿಡಿದು ತಾಯಿಯನ್ನ ಎಚ್ಚರಗೊಳಿಸಲು ಯತ್ನಿಸಿದಳು. ಬಳಿಕ ವಿಷವನ್ನು ಕಕ್ಕುವಂತೆ ಎದೆಯನ್ನು ಒತ್ತಿ ಕಣ್ಣೀರಿಟ್ಟಳು. ಆಗ ಪ್ರಜ್ಞೆ ತಪ್ಪಿ ಬಿದ್ದಿದ್ದ ತಾಯಿ ಎಚ್ಚರಗೊಂಡಳು.

    ಮತ್ತೊಂದು ಕಡೆ ತಂದೆಯೊಬ್ಬ ತನ್ನ ಪುಟ್ಟ ಮಗುವನ್ನು ಅಂಗೈಯಲ್ಲಿ ಹಿಡಿದು ಕಣ್ಣೀರಿಡುತ್ತಿದ್ದ. ‘ಏ ಎದ್ದೇಳೋ… ಲೇ ಪುಟ್ಟಾ ನಿಮಗೆ ಏನೂ ಆಗಲ್ಲ’ ಎಂದು ಧೈರ್ಯ ಹೇಳುತ್ತ ಮಗುವನ್ನು ಹಿಡಿದು ಅಂಬುಲೆಂನ್ಸ್ ಹತ್ತಿ ಆಸ್ಪತ್ರೆಗೆ ಸಾಗಿದರು.

    1984ರ ಡಿಸೆಂಬರ್ 3ರಂದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‍ನಲ್ಲಿರುವ ಅಮೆರಿಕನ್ ಕಂಪನಿ ಯೂನಿಯನ್ ಕಾರ್ಬೈಡ್‍ನ ಕಾರ್ಖಾನೆಯಲ್ಲಿ 42 ಸಾವಿರ ಕೆಜಿ ವಿಷಕಾರಿ ಅನಿಲ ಸೋರಿಕೆಯಾಗಿತ್ತು. ಈ ಘಟನೆಯಲ್ಲಿ 3,500 ಜನರು ಬಲಿಯಾಗಿದ್ದರು ಎಂದು ಸರ್ಕಾರ ತಿಳಿಸಿತ್ತು. ಆದರೆ ಈ ಅಪಘಾತದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ.

  • ವಿದ್ಯುತ್ ಲೈನ್ ಕಟ್ ಮಾಡಿದ ಸಿಬ್ಬಂದಿ ಕೈ ಮುರಿದ ಅಪ್ಪ, ಮಗ

    ವಿದ್ಯುತ್ ಲೈನ್ ಕಟ್ ಮಾಡಿದ ಸಿಬ್ಬಂದಿ ಕೈ ಮುರಿದ ಅಪ್ಪ, ಮಗ

    ಮಡಿಕೇರಿ: ಬಿಲ್ ಬಾಕಿ ಇರಿಸಿದ್ದ ಹಿನ್ನೆಲೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಲೈನ್ ಮ್ಯಾನ್ ಮೇಲೆ ಅಪ್ಪ, ಮಗ ಹಲ್ಲೆ ನಡೆಸಿ, ಸಿಬ್ಬಂದಿ ಕೈ ಮುರಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ.

    ಅಮ್ಮತ್ತಿ ಗ್ರಾಮದಲ್ಲಿ ಲೈನ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ನಿವಾಸಿ ಈರಪ್ಪ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಸೋಮವಾರ ಈರಪ್ಪ ಅಮ್ಮತ್ತಿ ಗ್ರಾಮದ ನಿವಾಸಿ ಬಿ.ಎಸ್ ಅಮಾನುಲ್ಲಾ ಖಾನ್ ಮನೆಗೆ ಹೋಗಿ ಬಿಲ್ ಬಾಕಿ ಇರಿಸಿಕೊಂಡಿದಕ್ಕೆ ವಿದ್ಯುತ್ ಕಡಿತಗೊಳಿಸಿದ್ದರು. ಅಮಾನುಲ್ಲಾ ಖಾನ್ ಅವರು ವಿದ್ಯುತ್ ಬಿಲ್‍ನಲ್ಲಿ 22,612 ರೂ. ಬಾಕಿ ಉಳಿಸಿಕೊಂಡಿದ್ದರು. ಆದ್ದರಿಂದ ಇಲಾಖೆಯ ಆದೇಶದಂತೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಖಾನ್ ಅವರ ಮನೆಗೆ ಬರುವ ವಿದ್ಯುತ್ ಸಂಪರ್ಕವನ್ನು ಲೈನ್ ಮ್ಯಾನ್ ಕಡಿತಗೊಳಿಸಿದ್ದರು.

    ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರುವ ವಿಚಾರ ತಿಳಿದ ಅಮಾನುಲ್ಲಾ ಖಾನ್ ಹಾಗೂ ಪುತ್ರ ಜೀಯಾ ಉಲ್ಲಾ ಖಾನ್ ಕರ್ತವ್ಯ ನಿರತರಾಗಿದ್ದ ಈರಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಈರಪ್ಪ ಅವರ ಎಡಗೈ ಮೂಳೆ ಮುರಿದಿದೆ. ಹಲ್ಲೆಯಿಂದ ತೀವ್ರ ಗಾಯಗೊಂಡ ಈರಪ್ಪ ಅವರನ್ನು ಅಮ್ಮತ್ತಿ ಗ್ರಾಮದ ಆರ್‌ಐಹೆಚ್‌ಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಭಂದಿಸಿದಂತೆ ಅಮ್ಮತ್ತಿ ಪೋಲಿಸರಿಗೆ ದೂರು ನೀಡಲಾಗಿದ್ದು, ಕರ್ತವ್ಯ ನಿರತ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ಮೇಲೆ ಕ್ರಮ ಜರುಗಿಸುವಂತೆ ಇಲಾಖೆಯ ಸಿಬ್ಬಂದಿ ಒತ್ತಾಯಿಸಿದ್ದಾರೆ.

  • ಅಮ್ಮನ ಕಳೆದುಕೊಂಡ ನಾಲ್ಕನೇ ತರಗತಿ ಬಾಲಕಿ- ಅಪ್ಪನಿಂದ್ಲೇ ನಿರಂತರ ಅತ್ಯಾಚಾರ!

    ಅಮ್ಮನ ಕಳೆದುಕೊಂಡ ನಾಲ್ಕನೇ ತರಗತಿ ಬಾಲಕಿ- ಅಪ್ಪನಿಂದ್ಲೇ ನಿರಂತರ ಅತ್ಯಾಚಾರ!

    ಚಂಡೀಗಢ: ತನ್ನ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ ಪಾಪಿ ತಂದೆಯನ್ನು ಹರಿಯಾಣದ ಗುರುಗ್ರಾಮ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

    ಬಾಲಕಿಗೆ 8 ವರ್ಷವಾಗಿದ್ದು, ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. ದಿನದಿಂದ ದಿನಕ್ಕೆ ಬಾಲಕಿಯ ವರ್ತನೆಯಲ್ಲಿ ಬದಲಾವಣೆ ಕಂಡ ಪಕ್ಕದ ಮನೆಯವರು ಬಾಲಕಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ತಂದೆಯ ಕೃತ್ಯ ಬೆಳಕಿಗೆ ಬಂದಿದೆ.

    ಐದು ದಿನಗಳಿಂದ ಬಾಲಕಿಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತು. ಪ್ರತಿನಿತ್ಯ ಚುರುಕಿನಿಂದ ಓಡಾಡುತ್ತಿದ್ದ ಬಾಲಕಿಯನ್ನು ಗಮನಿಸಿದ ನೆರೆಹೊರೆಯವರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಬಾಲಕಿ ತನ್ನ ಮೇಲೆ ಲೈಂಗಿಕ ಶೋಷಣೆ ನಡೆಯುತ್ತಿರುವುದರ ಬಗ್ಗೆ ಬಿಚ್ಚಿಟ್ಟಿದ್ದಾಳೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಪರಾಧ ವಿಭಾಗದ ಎಸಿಪಿ ಶಂಶೀರ್ ಸಿಂಗ್ ಹೇಳಿದ್ದಾರೆ.

    ಬಾಲಕಿ ತನ್ನ ತಂದೆಯ ಜೊತೆ ಪಟೌಡಿ ಪ್ರದೇಶದಲ್ಲಿ ವಾಸವಾಗಿದ್ದಳು. ಈಕೆ ತನ್ನ ತಾಯಿಯನ್ನು ಕಳೆದುಕೊಂಡಿದ್ದು, ಅಪ್ಪನ ಜೊತೆ ವಾಸ ಮಾಡುತ್ತಿದ್ದಳು. ಇದನ್ನೇ ದುರುಪಯೋಗಪಡಿಸಿಕೊಂಡ ತಂದೆ ಕಳೆದ ಎರಡು ತಿಂಗಳಿನಿಂದ ತನ್ನ ಪುಟ್ಟ ಕಂದಮ್ಮಳ ಮೇಲೆಯೇ ನಿರಂತರವಾಗಿ ಅತ್ಯಾಚಾರ ಮಾಡುವ ಮೂಲಕ ಮೃಗೀಯ ವರ್ತನೆ ತೋರಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಅಪ್ಪ ಕುಡಿದು ಬಂದು ಪ್ರತಿ ದಿನ ರಾತ್ರಿ ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಕಳೆದ ವಾರವೂ ಅವರು ಎರಡು ಬಾರಿ ರೇಪ್ ಮಾಡಿದ್ದರು ಎಂದು ಬಾಲಕಿ ಹೇಳಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.

    ಘಟನೆ ಸಂಬಂಧಿಸಿದಂತೆ ಬಾಲಕಿಯ ತಂದೆಯನ್ನು ಬಂಧಿಸಲಾಗಿದ್ದು, ಸದ್ಯ ಬಾಲಕಿಯನ್ನು ಆಕೆಯ ಅಪ್ಪನ ಕೈಯಿಂದ ರಕ್ಷಣೆ ಮಾಡಿದ್ದು, ಆಕೆಯನ್ನು ಕೌನ್ಸಿಲಿಂಗ್ ಮಾಡಲು ಕಳುಹಿಸಲಾಗಿದೆ.

  • `ಅಪ್ಪ’ ಆಗಲಿದ್ದಾರೆ ವಿಜಯ್ ದೇವರಕೊಂಡ

    `ಅಪ್ಪ’ ಆಗಲಿದ್ದಾರೆ ವಿಜಯ್ ದೇವರಕೊಂಡ

    ಹೈದರಾಬಾದ್: ಅರ್ಜುನ್ ರೆಡ್ಡಿ ಖ್ಯಾತಿಯ ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಅವರು ಸದ್ಯ `ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದ ನಂತರ ಅವರು ಈಗಾಗಲೇ ಸಹಿ ಹಾಕಿರುವ `ಕ್ರಾಂತಿ ಮಾಧವ್’ ಚಿತ್ರ ಸೆಟ್ಟೆರಲಿದೆ. ಈ ಚಿತ್ರದಲ್ಲಿ ವಿಜಯ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇಂಟರೆಸ್ಟಿಂಗ್ ವಿಷಯ.

    ಹೌದು. ವಿಜಯ್ ಮೊದಲ ಬಾರಿಗೆ ಇಂತಹ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಅಭಿಮಾನಿಗಳು ಅವರು ಹೇಗೆ ಈ ಪಾತ್ರದಲ್ಲಿ ಮಿಂಚಲಿದ್ದಾರೆ ಎಂದು ನೋಡಲು ಕಾರರದಿಂದಿದ್ದಾರೆ. ಸದ್ಯ `ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ `ಗೀತ ಗೋವಿಂದಂ’ ಖ್ಯಾತಿಯ ರಶ್ಮಿಕಾ ಮಂದಣ್ಣ ನಟಿಸುತ್ತಿರುವುದು ಸಿನಿರಂಗದಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. ಈ ಚಿತ್ರದ ಶೂಟಿಂಗ್ ಇನ್ನೇನೂ ಮುಗಿಯುವ ಹಂತಕ್ಕೆ ಬಂದಿದ್ದು, ಈ ಚಿತ್ರದ ನಂತರ ವಿಜಯ್ ದೇವರಕೊಂಡ ಅಪ್ಪನ ಪಾತ್ರದಲ್ಲಿ ನಟಿಸಲು ರೆಡಿಯಾಗಲಿದ್ದಾರೆ.

    `ಡಿಯರ್ ಕಾಮ್ರೆಡ್’ ನಂತರ `ಕ್ರಾಂತಿ ಮಾಧವ್’ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ವಿಜಯ್ ಎಂಟು ವರ್ಷದ ಮಗುವಿನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಕ್ರಾಂತಿ ಮಾಧವ್ ಸದ್ಯಕ್ಕೆ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಗ್ಗೆ ವಿಜಯ್ ದೇವರಕೊಂಡ ಅವರಿಗೆ ಕೆಲವು ನಿರೀಕ್ಷೆಗಳಿವೆ. ಯಾಕೆಂದರೆ ಅರ್ಜುನ್ ರೆಡ್ಡಿ ಬಳಿಕ ಗೀತ ಗೋವಿಂದಂ ಚಿತ್ರ ಬಿಟ್ಟರೆ ವಿಜಯ್ ದೇವರಕೊಂಡ ನಟಿಸಿದ್ದ ಇತರೇ ಚಿತ್ರಗಳು ಅಷ್ಟೇನೂ ಸದ್ದು ಮಾಡಿರಲಿಲ್ಲ. ಆದ್ದರಿಂದ ಇತ್ತೀಚಿಗೆ ವಿಜಯ್ ಪಾತ್ರಗಳ ಆಯ್ಕೆ ಹಾಗೂ ಸಿನಿಮಾ ಟೀಮ್ ಬಗ್ಗೆ ಬಹಳಷ್ಟು ಯೋಚಿಸಿ ಆಯ್ಕೆ ಮಾಡುತ್ತಿದ್ದಾರಂತೆ.

    ಕ್ರಾಂತಿ ಮಾಧವ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರಿಗೆ ನಾಯಕಿಯರಾಗಿ ರಾಶಿ ಖನ್ನ, ಐಶ್ವರ್ಯ ರಾಜೇಶ್ ಹಾಗೂ ಈಜಾಬೆಲ್ಲೆ ಲೈಟೇ ಆಯ್ಕೆಯಾಗಿದ್ದಾರೆ. ಅಂದುಕೊಂಡಂತೆ ಚಿತ್ರದ ಶೂಟಿಂಗ್ ಮುಗಿದರೆ ಈ ವರ್ಷದ ಕೊನೆಯಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv