Tag: ಅಪ್ಪು

  • ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

    ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

    ನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ‘ಬೆಳ್ಳಿ ಪರದೆಗೆ ಹೊಸದೊಂದು ಪರ್ವ’ ಎನ್ನುವ ಹೊಸ ಪೋಸ್ಟರ್ ವೊಂದನ್ನು ತನ್ನ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿ ಕುತೂಹಲ ಮೂಡಿಸಿತ್ತು. ಏ.27 ರಂದು ಬೆಳಗ್ಗೆ 9.50ಕ್ಕೆ ಹೊಸ ಪರ್ವದ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿತ್ತು. ಈ ಸುದ್ದಿಯ ಜಾಡು ಹಿಡಿದು ಹೊರಟ ಪಬ್ಲಿಕ್ ಟಿವಿ ಡಿಜಿಟಲ್ ತಂಡಕ್ಕೆ ಹಲವು ಮಾಹಿತಿಗಳೂ ದೊರೆತವು. ಹಾಗಾಗಿ ನೆನ್ನೆಯೇ ಪಬ್ಲಿಕ್ ಟಿವಿಯಲ್ಲಿ ಯುವರಾಜ್ ಕುಮಾರ್ ಲಾಂಚ್ ಮಾಡುತ್ತಿರುವ ಕುರಿತು ಎರಡು ವರದಿಗಳನ್ನು ಮಾಡಲಾಗಿತ್ತು. ಅದೀಗ ನಿಜವಾಗಿದೆ.  ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಪುನೀತ್ ರಾಜ್ ಕುಮಾರ್ ಅವರ ನಿನ್ನೆಂದಲೇ ಸಿನಿಮಾದ ಮೂಲಕ ಹೊಂಬಾಳೆ ಫಿಲ್ಮ್ಸ್ ಲಾಂಚ್ ಆಗಿತ್ತು. ಈಗ ಪುನೀತ್ ಅವರ ಸಹೋದರನ ಪುತ್ರ ಯುವರಾಜ್ ಕುಮಾರ್ ಲಾಂಚ್ ಮಾಡುವ ಮೂಲಕ ಆ ಪ್ರೀತಿಯ ಕೊಡುಕೊಳ್ಳುವಿಕೆ ಅರ್ಥಪೂರ್ಣ ಮುನ್ನುಡಿ ಬರೆದಿದೆ ಹೊಂಬಾಳೆ ಫಿಲ್ಮ್ಸ್. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ಪುನೀತ್ ರಾಜ್ ಕುಮಾರ್ ಉತ್ತರಾಧಿಕಾರಿ ಎಂದೇ ಬಿಂಬಿತವಾಗುತ್ತಿರುವ, ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಲಾಂಚ್ ಮಾಡುವ ಮೂಲಕ ಹೊಸ ಪರ್ವವನ್ನು ಹೊಂಬಾಳೆ ಫಿಲ್ಮ್ಸ್ ಮಾಡಿದೆ. ಈ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾಹಿತಿಯನ್ನೂ ಅದು ನೀಡಿದೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಯುವರಾಜ್ ಕಾಂಬಿನೇಷನ್ ನಲ್ಲಿ ಹೊಂಬಾಳೆ ಫಿಲ್ಮ್ಸ್ ಹಲವು ಸಿನಿಮಾಗಳನ್ನು ಮಾಡಲಿದೆ ಎನ್ನುವ ಸುದ್ದಿಯಿತ್ತು. ಅದು ಈಗ ನಿಜವಾಗಿದೆ.  ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 24 ರಂದು ಡಾ.ರಾಜ್ ಹುಟ್ಟು ಹಬ್ಬದಂದೇ ಈ ಹೊಸ ಸಿನಿಮಾದ ಘೋಷಣೆ ಆಗಲಿದೆ ಎಂದು ಸುದ್ದಿಯಿತ್ತು. ಅದು ಏ.27ಕ್ಕೆ ಆಗಿದೆ.

  • ಹೊಂಬಾಳೆ ಫಿಲ್ಮ್ಸ್: ಡಾ.ರಾಜ್ ಸ್ಮಾರಕ ಮುಂದೆ ಯುವರಾಜ್ ಕುಮಾರ್ ಲಾಂಚ್?

    ಹೊಂಬಾಳೆ ಫಿಲ್ಮ್ಸ್: ಡಾ.ರಾಜ್ ಸ್ಮಾರಕ ಮುಂದೆ ಯುವರಾಜ್ ಕುಮಾರ್ ಲಾಂಚ್?

    ‘ಬೆಳ್ಳಿ ಪರದೆಗೆ ಹೊಸದೊಂದು ಪರ್ವ’ ಎನ್ನುವ ಹೊಸ ಪೋಸ್ಟರ್ ವೊಂದನ್ನು ತನ್ನ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿಕೊಳ್ಳುವ ಮೂಲಕ ಹೊಂಬಾಳೆ ಫಿಲ್ಮ್ಸ್ ಕುತೂಹಲ ಮೂಡಿಸಿದೆ.  ನಾಳೆ ಬೆಳಗ್ಗೆ 9.50ಕ್ಕೆ ಹೊಸ ಪರ್ವದ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದೆ. ಅದಕ್ಕೂ ಮುನ್ನ ಯುವರಾಜ್ ಕುಮಾರ್ ಫ್ಯಾನ್ಸ್ ಪೇಜ್ ನಲ್ಲಿ ಹಲವು ವಿಚಾರಗಳು ಹರಿದಾಡುತ್ತಿವೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಈ ಪೋಸ್ಟರ್ ಅನ್ನು ಅವರು ಪೋಸ್ಟ್ ಮಾಡುತ್ತಿದ್ದಂತೆಯೇ ನಾನಾ ರೀತಿಯ ಕಾಮೆಂಟ್ ಗಳು ಬರುತ್ತಿವೆ. ಹೊಸ ಪರ್ವ ಅಂದರೆ ಏನು? ಎನ್ನುವ ಚರ್ಚೆ ಕೂಡ ಮಾಡಲಾಗುತ್ತಿದೆ. ಈಗಿರುವ ಸಿನಿಮಾಗಳ ಮಾಹಿತಿಯನ್ನೇ ಅದು ಹಂಚಿಕೊಳ್ಳಲಿದೆಯಾ ಅಥವಾ ಕೆಜಿಎಫ್ 3 ಸಿನಿಮಾದ ಮಾಹಿತಿ ಏನಾದರೂ ಕೊಡಲಿದ್ದಾರೆ ಅನ್ನುವ ಕುತೂಹಲವನ್ನೂ ಹಲವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ಹೊಸ ಪರ್ವ ಎಂಬ ಪದವನ್ನು ಬಳಸಿರುವ ಕಾರಣಕ್ಕಾಗಿ ಹೊಸ ವಿಷಯವನ್ನೇ ಅಥವಾ ಹೊಸದಾಗಿ ಯಾರನ್ನಾದರೂ ಲಾಂಚ್ ಮಾಡುತ್ತಾರಾ ಎನ್ನುವ ಕುತೂಹಲ ಕೂಡ ಶುರುವಾಗಿದೆ. ಹಲವು ತಿಂಗಳುಗಳಿಂದ ಹೊಂಬಾಳೆ ಫಿಲ್ಮ್ಸ್ ಪುನೀತ್ ರಾಜ್ ಕುಮಾರ್ ಉತ್ತರಾಧಿಕಾರಿ ಎಂದೇ ಬಿಂಬಿತವಾಗುತ್ತಿರುವ, ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಗಾಗಿ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಬಹುಶಃ ಯುವರಾಜ್ ಕುಮಾರ್ ಲಾಂಚ್ ಮಾಡುವ ಕುರಿತಾಗಿ ಸುದ್ದಿ ಸಿಗಬಹುದಾ ಎನ್ನುವ ನಿರೀಕ್ಷೆ ಮಾಧ್ಯಮ ವಲಯದ್ದು. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಯುವರಾಜ್ ಕಾಂಬಿನೇಷನ್ ನಲ್ಲಿ ಹೊಂಬಾಳೆ ಫಿಲ್ಮ್ಸ್ ಹಲವು ಸಿನಿಮಾಗಳನ್ನು ಮಾಡಲಿದೆ ಎನ್ನುವ ಸುದ್ದಿಯಿದೆ. ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 24 ರಂದು ಡಾ.ರಾಜ್ ಹುಟ್ಟು ಹಬ್ಬದಂದೇ ಈ ಹೊಸ ಸಿನಿಮಾದ ಘೋಷಣೆ ಆಗಲಿದೆ ಎಂದು ಸುದ್ದಿಯಿತ್ತು. ಅದು ಏ.27ರಂದು ನಿಜವಾಗಲಿದೆ ಎಂದೂ ಹೇಳಲಾಗುತ್ತಿದೆ. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

    ಅದಕ್ಕೂ ಮುನ್ನ ಯುವರಾಜ್ ಕುಮಾರ್ ಫ್ಯಾನ್ಸ್ ಪೇಜ್ ನಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ಯುವರಾಜ್ ಕುಮಾರ್ ಹೊಸ ಸಿನಿಮಾದ ಲಾಂಚ್ ಅನ್ನು ಡಾ.ರಾಜ್ ಕುಮಾರ್ ಸ್ಮಾರಕದ ಮುಂದೆ ಮಾಡಲಾಗುವುದು ಎಂದು ಪೋಸ್ಟ್ ಮಾಡಲಾಗುತ್ತಿದೆ. ಅಭಿಮಾನಿಗಳ ಈ ನಡೆ ಮತ್ತಷ್ಟು ಕುತೂಹಲ ಹುಟ್ಟುಹಾಕಿದೆ.

  • `ಅಪ್ಪು’ ಸಿನಿಮಾಗೆ 20 ವರ್ಷ: ಪುನೀತ್ ನೆನಪಿನಲ್ಲಿ ಕ್ರೇಜಿ ಕ್ವೀನ್

    `ಅಪ್ಪು’ ಸಿನಿಮಾಗೆ 20 ವರ್ಷ: ಪುನೀತ್ ನೆನಪಿನಲ್ಲಿ ಕ್ರೇಜಿ ಕ್ವೀನ್

    ಪುನೀತ್ ರಾಜ್‌ಕುಮಾರ್ ಮತ್ತು ರಕ್ಷಿತಾ ನಟನೆಯ `ಅಪ್ಪು’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡಿತ್ತು. ಪುನೀತ್ ನಟಿಸಿದ ಮೊದಲ ಚಿತ್ರದಲ್ಲೇ ಸೈ ಎನಿಸಿಕೊಂಡಿದ್ರು. ಇದೀಗ `ಅಪ್ಪು’ ಸಿನಿಮಾ ತೆರೆಕಂಡು ಇಂದಿಗೆ 20 ವರ್ಷಗಳಾಗಿದೆ. ಇದೇ ವೇಳೆ ನಟಿ ರಕ್ಷಿತಾ ಪುನೀತ್ ನಪಿನಲ್ಲಿ `ಅಪ್ಪು’ ಚಿತ್ರದ ಕುರಿತು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಪವರ್ ಸ್ಟಾರ್ ಪುನೀತ್ `ಅಪ್ಪು’ ಚಿತ್ರದ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ವಿಭಿನ್ನ ಪ್ರೇಮಕಥೆಯೊಂದಿಗೆ ಸಿನಿಪ್ರಿಯರಿಗೆ ಪುನೀತ್ ಮತ್ತು ರಕ್ಷಿತಾ ಮೋಡಿ ಮಾಡಿದ್ರು. ಪುರಿ ಜಗನ್ನಾಥ್ ನಿರ್ದೇಶನದ `ಅಪ್ಪು’ ಚಿತ್ರ ತೆರೆಕಂಡು ಬರೋಬ್ಬರಿ ಇಂದಿಗೆ 20 ವರ್ಷಗಳು ಕಳೆದಿದೆ. ಇದೇ ವೇಳೆ ‌ʻಅಪ್ಪುʼ ಚಿತ್ರದ ನೆನಪಿನ ಬುತ್ತಿಯನ್ನ ಬರವಣಿಗೆಯ ಮೂಲಕ ನಟಿ ರಕ್ಷಿತಾ  ಎಮೋಷನಲ್ ಆಗಿ ಪೋಸ್ಟ್‌ವೊಂದನ್ನು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Rakshitha ???? (@rakshitha__official)

    `ಅಪ್ಪು’ ಸಿನಿಮಾ ಎಂತಹ ಸುಂದರ ಮತ್ತು ಅದ್ಭುತ ಸಿನಿಮಾ, ಈ ಮೂಲಕ ಎಂತಹ ಸ್ಟ್ರಾಂಗ್ ಮತ್ತು ಮಾದರಿ ವ್ಯಕ್ತಿಯನ್ನ  ಪಾರ್ವತಮ್ಮ ರಾಜ್‌ಕುಮಾರ್ ಭೇಟಿಯಾದೆ, ಅವರಿಲ್ಲದೇ ನಾನಿಲ್ಲ. ಇಂದು ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ಪುನೀತ್ ಅವರ ನಗು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್: ಯುವರಾಜ್ ಕುಮಾರ್ ಹೊಸ ಸಿನಿಮಾ ಘೋಷಣೆ?

    ಇನ್ನೂ ಈ ವೇಳೆ ನಿರ್ದೇಶಕ ಪುರಿ ಜಗನ್ನಾಥ್‌ ಮತ್ತು ಅಸೋಸಿಯೇಟ್‌ ಆಗಿದ್ದ ದಿನೇಶ್ ಬಾಬು ಅವರಿಗೆ ನನ್ನ ಕಲಿಕೆಗೆ ನೆರವಾಗಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇನ್ನು ಈ ಚಿತ್ರ ಅರ್ಧ ಜೀವನದ ಅನುಭವ ತಿಳಿಸಿಕೊಟ್ಟಿದೆ. ನನ್ನ ಅಭಿಮಾನಿಗಳಿಗೂ, ಸ್ನೇಹಿತರಿಗೂ ಧನ್ಯವಾದಗಳು ಎಂದು ಎಮೋಷನಲ್ ಆಗಿ `ಅಪ್ಪು’ ಚಿತ್ರದ ಕುರಿತು ಪುನೀತ್ ಅವರ ನೆನಪಿನಲ್ಲಿ ನಟಿ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  • ಹೊಂಬಾಳೆ ಫಿಲ್ಮ್ಸ್:  ಯುವರಾಜ್ ಕುಮಾರ್ ಹೊಸ ಸಿನಿಮಾ ಘೋಷಣೆ?

    ಹೊಂಬಾಳೆ ಫಿಲ್ಮ್ಸ್: ಯುವರಾಜ್ ಕುಮಾರ್ ಹೊಸ ಸಿನಿಮಾ ಘೋಷಣೆ?

    ಕೆಜಿಎಫ್ 2 ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಹೊಂಬಾಳೆ ಫಿಲ್ಮ್ಸ್ ನಾಳೆ (ಏ.27) ಹೊಸ ಘೋಷಣೆಯೊಂದನ್ನು ಮಾಡಲು ಮುಹೂರ್ತ ಫಿಕ್ಸ್ ಮಾಡಿದೆ. ‘ಬೆಳ್ಳಿ ಪರದೆಗೆ ಹೊಸದೊಂದು ಪರ್ವ’ ಎನ್ನುವ ಹೊಸ ಪೋಸ್ಟರ್ ವೊಂದನ್ನು ತನ್ನ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿಕೊಂಡಿದೆ. ನಾಳೆ ಬೆಳಗ್ಗೆ 9.50ಕ್ಕೆ ಹೊಸ ಪರ್ವದ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಈ ಪೋಸ್ಟರ್ ಅನ್ನು ಅವರು ಪೋಸ್ಟ್ ಮಾಡುತ್ತಿದ್ದಂತೆಯೇ ನಾನಾ ರೀತಿಯ ಕಾಮೆಂಟ್ ಗಳು ಬರುತ್ತಿವೆ. ಹೊಸ ಪರ್ವ ಅಂದರೆ ಏನು? ಎನ್ನುವ ಚರ್ಚೆ ಕೂಡ ಮಾಡಲಾಗುತ್ತಿದೆ. ಈಗಿರುವ ಸಿನಿಮಾಗಳ ಮಾಹಿತಿಯನ್ನೇ ಅದು ಹಂಚಿಕೊಳ್ಳಲಿದೆಯಾ ಅಥವಾ ಕೆಜಿಎಫ್ 3 ಸಿನಿಮಾದ ಮಾಹಿತಿ ಏನಾದರೂ ಕೊಡಲಿದ್ದಾರೆ ಅನ್ನುವ ಕುತೂಹಲವನ್ನೂ ಹಲವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ಹೊಸ ಪರ್ವ ಎಂಬ ಪದವನ್ನು ಬಳಸಿರುವ ಕಾರಣಕ್ಕಾಗಿ ಹೊಸ ವಿಷಯವನ್ನೇ ಅಥವಾ ಹೊಸದಾಗಿ ಯಾರನ್ನಾದರೂ ಲಾಂಚ್ ಮಾಡುತ್ತಾರಾ ಎನ್ನುವ ಕುತೂಹಲ ಕೂಡ ಶುರುವಾಗಿದೆ. ಹಲವು ತಿಂಗಳುಗಳಿಂದ ಹೊಂಬಾಳೆ ಫಿಲ್ಮ್ಸ್ ಪುನೀತ್ ರಾಜ್ ಕುಮಾರ್ ಉತ್ತರಾಧಿಕಾರಿ ಎಂದೇ ಬಿಂಬಿತವಾಗುತ್ತಿರುವ, ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಗಾಗಿ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಬಹುಶಃ ಯುವರಾಜ್ ಕುಮಾರ್ ಲಾಂಚ್ ಮಾಡುವ ಕುರಿತಾಗಿ ಸುದ್ದಿ ಸಿಗಬಹುದಾ ಎನ್ನುವ ನಿರೀಕ್ಷೆ ಮಾಧ್ಯಮ ವಲಯದ್ದು.  ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಯುವರಾಜ್ ಕಾಂಬಿನೇಷನ್ ನಲ್ಲಿ ಹೊಂಬಾಳೆ ಫಿಲ್ಮ್ಸ್ ಹಲವು ಸಿನಿಮಾಗಳನ್ನು ಮಾಡಲಿದೆ ಎನ್ನುವ ಸುದ್ದಿಯಿದೆ. ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 24 ರಂದು ಡಾ.ರಾಜ್ ಹುಟ್ಟು ಹಬ್ಬದಂದೇ ಈ ಹೊಸ ಸಿನಿಮಾದ ಘೋಷಣೆ ಆಗಲಿದೆ ಎಂದು ಸುದ್ದಿಯಿತ್ತು. ಅದು ಏ.27ರಂದು ನಿಜವಾಗಲಿದೆ ಎಂದೂ ಹೇಳಲಾಗುತ್ತಿದೆ. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

    ಯುವರಾಜ್ ಗಾಗಿಯೇ ಮೂರು ಸಿನಿಮಾಗಳನ್ನು ಹೊಂಬಾಳೆ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಮಾಡಲಿದ್ದಾರೆ ಎನ್ನುವುದು ಗಾಂಧಿನಗರದ ಮೂಲಗಳ ಮಾಹಿತಿ. ಈ ಎಲ್ಲ ಊಹಾಪೋಹಗಳಿಗೆ ನಾಳೆ ತೆರೆಬೀಳಲಿದೆ.

  • ಪುನೀತ್ ಬ್ಯಾನರ್ ಗಾಗಿ ನಡೆಯಿತು ಮಾರಾಮಾರಿ : ರಾಡ್ ಹಿಡಿದುಕೊಂಡು ಗಲಾಟೆ

    ಪುನೀತ್ ಬ್ಯಾನರ್ ಗಾಗಿ ನಡೆಯಿತು ಮಾರಾಮಾರಿ : ರಾಡ್ ಹಿಡಿದುಕೊಂಡು ಗಲಾಟೆ

    ದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಬ್ಯಾನರ್ ಕಟ್ಟಿದ ಸಲುವಾಗಿ ಗ್ರಾಮಸ್ಥರು ಮತ್ತು ಅಪ್ಪು ಫ್ಯಾನ್ಸ್ ನಡುವೆ ಗಲಾಟೆ ನಡೆದಿದೆ. ಈ ಘಟನೆಯ ಕುರಿತಂತೆ ಅನೇಕ ಅಪ್ಪು ಅಭಿಮಾನಿಗಳು ನೊಂದುಕೊಂಡಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 : ನಾಲ್ಕೇ ದಿನಕ್ಕೆ 550 ಕೋಟಿ ಬಾಚಿದ ರಾಕಿಭಾಯ್

    ಪುನೀತ್ ರಾಜ್ ಕುಮಾರ್ ಸಾವಿನ ನಂತರ ದೇಶಾದ್ಯಂತ ಅವರ ಫೋಟೋ ಮತ್ತು ಬ್ಯಾನರ್ಸ್ ಕಟ್ಟಿ ಅಭಿಮಾನ ತೋರಲಾಯಿತು. ಅನೇಕ ಕಡೆ ಪುನೀತ್ ಅವರ ಪುತ್ಥಳಿಗಳು ತಲೆಯೆತ್ತಿವೆ. ಪುನೀತ್ ಅವರಿಗಾಗಿ ದೇವಸ್ಥಾನ ಕಟ್ಟಿದ ಉದಾಹರಣೆ ಕೂಡ ಇದೆ. ರಸ್ತೆ, ಸೇತು, ವಾರ್ಡ್ ಹೀಗೆ ಅನೇಕ ಕಡೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಇಡಲಾಗಿದೆ. ಇಷ್ಟೊಂದು ಪ್ರೀತಿ, ಅಭಿಮಾನ ತೋರುತ್ತಿರುವಾಗ ಆ ಗ್ರಾಮದಲ್ಲಿ ಬ್ಯಾನರ್ ಗಾಗಿ ಗಲಾಟೆ ನಡೆದು ಬಿಟ್ಟಿದೆ. ಇದನ್ನೂ ಓದಿ : ಕ್ಷಮಿಸಿ ಬಿಡು ಬಸವಣ್ಣ : ವಿಡಿಯೋ ರಿಲೀಸ್ ಮಾಡಿದ ಹಂಸಲೇಖ

    ಪುನೀತ್ ಜೀವಂತವಿರುವಾಗಲೇ ಯಾವತ್ತೂ ಬ್ಯಾನರ್ ಕಟ್ಟಿ, ಹಾಲಿನ ಅಭಿಷೇಕ ಮಾಡಿ ಎಂದು ಹೇಳಿದವರಲ್ಲ. ಎಷ್ಟೋ ಬಾರಿ ಆ ಹಣವನ್ನು ಅನಾಥಾಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಕೊಡಿ ಎಂದು ಹೇಳಿದ್ದೂ ಇದೆ. ಆದರೆ, ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಅಭಿಮಾನ ತೋರಿಸುತ್ತಾ ಬಂದಿದ್ದಾರೆ. ಹಾಗೆಯೇ ಈ ಗ್ರಾಮದ ಅಭಿಮಾನಿಗಳು ಕೂಡ ಅದೇ ರೀತಿಯಲ್ಲಿ ಅಭಿಮಾನ ತೋರಿಸಿದ್ದಾರೆ. ಆದರೆ, ಅಲ್ಲೊಂದು ಯಡವಟ್ಟು ಆಗಿ ಬಿಟ್ಟಿದೆ. ಇದನ್ನೂ ಓದಿ: ಬಾಲಿವುಡ್‌ 3ನೇ ದಿನದ ಕಲೆಕ್ಷನ್‌ನಲ್ಲೂ ಹವಾ ಕ್ರಿಯೇಟ್‌ ಮಾಡಿದ ʻಕೆಜಿಎಫ್‌ 2ʼ

    ಭಾನುವಾರ (ಏ.17) ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ಸಲುವಾಗಿ ಬೆಂಗಳೂರಿನ ಯಲಹಂಕದ ಅರಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೈರಾಪುರದಲ್ಲಿ ಗಲಾಟೆ ನಡೆದಿದ್ದು, ಊರಿಗ ಗ್ರಾಮಸ್ಥರು ಮತ್ತು ಅಪ್ಪು ಅಭಿಮಾನಿಗಳು ರಾಡ್ ಹಿಡಿದುಕೊಂಡು ಕೈ ಕೈ ಮಿಲಾಯಿಸಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪೊಲೀಸ್ ಸಮ್ಮುಖದಲ್ಲಿ ಬ್ಯಾನರ್ ತೆರೆವುಗೊಳಿಸಿದ್ದು, ಮತ್ತೆ ಬ್ಯಾನರ್ ಹಾಕುವಂತೆ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: `ಚಂದ್ರಲೇಖ ರಿಟರ್ನ್ಸ್’ ಅಂತಿದ್ದಾರೆ ನಿರ್ದೇಶಕ ಓಂಪ್ರಕಾಶ್ ರಾವ್

    ಪುನೀತ್ ರಾಜ್ ಕುಮಾರ್ ಬ್ಯಾನರ್ ಅನ್ನು ಭೈರಾಪುರದಲ್ಲಿ ಹಾಕಲಾಗಿತ್ತು. ಅದು ಜನರಿಗೆ ಓಡಾಡಲು ತೊಂದರೆ ಮಾಡುತ್ತಿದೆ ಎನ್ನುವ ಕಾರಣಕ್ಕಾಗಿ ಪೋಸ್ಟರ್ ತಗೆಯುವಂತೆ ಗ್ರಾಮಸ್ಥರು ಕೇಳಿದ್ದಾರೆ. ಅದಕ್ಕೆ ಅಭಿಮಾನಿಗಳು ಒಪ್ಪಿಲ್ಲ. ಹೀಗಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

  • ಅಭಿಮಾನಿಗಳಲ್ಲಿ ಲವ್ಲಿಸ್ಟಾರ್ ಪ್ರೇಮ್ ಕಳಕಳಿಯ ಮನವಿ

    ಅಭಿಮಾನಿಗಳಲ್ಲಿ ಲವ್ಲಿಸ್ಟಾರ್ ಪ್ರೇಮ್ ಕಳಕಳಿಯ ಮನವಿ

    ವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರರಂಗದ ಆಸ್ತಿ. ಅಪ್ಪು ನಿಧನದಿಂದ ಇಡೀ ಚಿತ್ರರಂಗವೇ ತತ್ತರಿಸಿದೆ. ಇನ್ನು ಪುನೀತ್‌ ಅಗಲಿಕೆಯ ನೋವಿನಿಂದ ಚಿತ್ರರಂಗದ ಸ್ನೇಹಿತರು, ಕುಟುಂಬಸ್ಥರು, ನೋವಿನಲ್ಲಿದ್ದಾರೆ. ಈ ವೇಳೆ ನೆನಪಿರಲಿ ಪ್ರೇಮ್ ತಮ್ಮ ಹುಟ್ಟುಹಬ್ಬದ ವಿಚಾರವಾಗಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

    ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ವ್ಯಕ್ತಿತ್ವದಿಂದ, ಅಮೋಘ ನಟನೆಯಿಂದ ಮನೆಮಾತಾಗಿರೋ ನಟ ಪ್ರೇಮ್‌ಗೆ ಏಪ್ರಿಲ್ 18ರಂದು ಹುಟ್ಟುಹಬ್ಬದ ಸಂಭ್ರಮ. ಇದೀಗ ಒಂದು ದಿನ ಮುಂಚಿತವಾಗಿ ಅಭಿಮಾನಿಗಳಿಗೆ ಮನವಿ ಪತ್ರವೊಂದನ್ನು ತಮ್ಮ ಇನ್ಸ್ಟಾಗಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಪ್ಪು ಅಗಲಿಕೆಯ ಹಿನ್ನಲೆ ಹುಟ್ಟು ಹಬ್ಬದ ಸೆಲೆಬ್ರೇಶನ್ ಬೇಡ ಅಂತಾ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

     

    View this post on Instagram

     

    A post shared by Prem Nenapirali (@premnenapirali)

    ಪ್ರತಿ ವರ್ಷ ನನ್ನ ಹುಟ್ಟು ಹಬ್ಬವನ್ನು ನಿಮ್ಮದೇ ಎಂಬಂತೆ ಸಂಭ್ರಮಿಸುತ್ತಿದ್ದಿರಿ. ನಮ್ಮೆಲ್ಲರ ಪ್ರೀತಿಯ ಅಪ್ಪು ಸರ್, ಹಾಗೂ ನನ್ನ ಜೀವದ ಗೆಳೆಯ ಸುನೀಲ್ ದೂರವಾಗಿದ್ದಾರೆ, ಆದ ಕಾರಣ ಈ ವರ್ಷ ಬರ್ತಡೇ ಸೆಲೆಬ್ರೇಶನ್ ಬೇಡ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಲು ದೇವಸ್ಥಾನಕ್ಕೆ ಹೋಗುತ್ತಿರುವ ಕಾರಣ ಮನೆಯಲ್ಲಿ ಇರುವುದಿಲ್ಲ. ಆದರೆ ನಿಮ್ಮ ಫೋನ್ ಕರೆಗಳಿಗೆ ಕಾಯುತ್ತಿರುತ್ತೇನೆ ಎಂದು ಇನ್ಸ್ಟಾಗಾಂ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:`ಕೆಜಿಎಫ್ 2′ ಸಕ್ಸಸ್ ಅಲೆಗೆ ಬೆದರಿದ ಬಾಲಿವುಡ್: ಚಿತ್ರರಂಗಕ್ಕೆ ಮತ್ತೆ ಶಕ್ತಿ ತುಂಬಲು ಶಾರುಖ್ ಖಾನ್ ಪ್ಲ್ಯಾನ್‌

    ನಟ ಪ್ರೇಮ್ ಮತ್ತು ಅಪ್ಪು ಮಧ್ಯೆ ಒಳ್ಳೆಯ ಬಾಂಧವ್ಯವಿತ್ತು. ಅಪ್ಪು ಮತ್ತು ಪ್ರಾಣ ಸ್ನೇಹಿತ ಸುನೀಲ್ ಅಗಲಿಕೆಯ ನೋವಿನಿಂದ ಹೊರಬರಲಾಗುತ್ತಿಲ್ಲ. ಇಡೀ ಚಿತ್ರರಂಗವೇ ಅಪ್ಪು ನಿಧನದ ನೋವಿನಲ್ಲಿರಬೇಕಾದರೆ ನೆನಪಿರಲಿ ಪ್ರೇಮ್ ಸೆಲೆಬ್ರೇಶನ್ ಬೇಡ ಅಂತಾ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ನೀವು ಎಲ್ಲಿದ್ದಿರೋ ಅಲ್ಲಿಂದಲೇ ಶುಭ ಹಾರೈಸಿ ಎಂದು ಕೇಳಿಕೊಂಡಿದ್ದಾರೆ.

  • ಅಪ್ಪು ನೆನಪಿನಲ್ಲಿ ಧೀರೇನ್ ರಾಮ್‌ಕುಮಾರ್: ಅಪ್ಪು ಭಾವಚಿತ್ರವಿರೋ ಹೆಡ್‌ಪೋನ್ ವಿಡಿಯೋ ವೈರಲ್

    ಅಪ್ಪು ನೆನಪಿನಲ್ಲಿ ಧೀರೇನ್ ರಾಮ್‌ಕುಮಾರ್: ಅಪ್ಪು ಭಾವಚಿತ್ರವಿರೋ ಹೆಡ್‌ಪೋನ್ ವಿಡಿಯೋ ವೈರಲ್

    ಸ್ಯಾಂಡಲ್‌ವುಡ್ ನಟ ಧೀರೇನ್ ರಾಮ್‌ಕುಮಾರ್ ಅಭಿನಯದ `ಶಿವ 143′ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈ ಚಿತ್ರದ ಸಾಂಗ್ಸ್, ಟ್ರೇಲರ್‌ನಿಂದ ಅಣ್ಣಾವ್ರ ಮೊಮ್ಮಗ ಸಿನಿಪ್ರಿಯರನ್ನ ಇಂಪ್ರೈಸ್ ಮಾಡಿದ್ದಾರೆ. ಸದ್ಯ ಅಪ್ಪು ನೆನಪಿನಲ್ಲಿರೋ ಧೀರೇನ್ ರಾಮ್‌ಕುಮಾರ್, ಪುನೀತ್ ಫೋಟೋಯಿರೋ ಹೆಡ್ ಫೋನ್ ಧರಿಸಿರುವ ಫೋಟೋ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ.

    ಅಣ್ಣಾವ್ರ ಮೊಮ್ಮಗ ಧೀರೇನ್‌ಗೆ ಅಪ್ಪು ಜೊತೆ ಒಡನಾಟವಿತ್ತು. ಈ ಹಿಂದೆ ಪುನೀತ್ ಅಣ್ಣಾವ್ರ ನೆನಪಿಗಾಗಿ ನೀ ಕಂಗಳ ಬಿಸಿಯ ಹನಿಗಳು ಅಂತಾ ಅಪ್ಪಾಜಿಗಾಗಿ ಹಾಡಿದ್ರು. ಆ ಹಾಡಿನಲ್ಲಿ ಅಪ್ಪು ಧರಿಸಿರುವ ಹೆಡ್‌ಫೋನ್ ಅಣ್ಣಾವ್ರ ಭಾವಚಿತ್ರವಿತ್ತು. ಈಗ ಅದೇ ರೀತಿ ನಟ ಧೀರೇನ್ ಧರಿಸಿರುವ ಹೆಡ್‌ಪೋನ್‌ನಲ್ಲಿ ಅಪ್ಪು ಫೋಟೋವಿದ್ದು, ಸಧ್ಯ ಈ ವಿಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಇದನ್ನೂ ಓದಿ:ಬಣ್ಣದ ಲೋಕದಲ್ಲಿ `ಏಕ್ ಲವ್ ಯಾ’ ನಟಿ ರೀಷ್ಮಾ ಮಿಂಚಿಂಗ್

     

    View this post on Instagram

     

    A post shared by Dheeren Ramkumar (@dheerenrk)

    ಪುನೀತ್ ಫೋಟೋಯಿರೋ ಹೆಡ್ ಫೋನ್ ಧರಿಸಿರುವ ಧೀರೇನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಸೂರ್ಯನೊಬ್ಬ ಚಂದ್ರನೊಬ್ಬ, ಈ ರಾಜನೂ ಒಬ್ಬ ಎಂದು ಬರೆದು ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಅಬಿಮಾನಿಗಳು ಖುಷಿಪಟ್ಟಿದ್ದಾರೆ.

  • ಅನಾವಶ್ಯಕವಾಗಿ ಥಿಯೇಟರ್‌ನಿಂದ ಜೇಮ್ಸ್ ಸಿನಿಮಾ ತೆಗೆಯುವಂತಿಲ್ಲ: ಸಿಎಂ ಸ್ಪಷ್ಟನೆ

    ಅನಾವಶ್ಯಕವಾಗಿ ಥಿಯೇಟರ್‌ನಿಂದ ಜೇಮ್ಸ್ ಸಿನಿಮಾ ತೆಗೆಯುವಂತಿಲ್ಲ: ಸಿಎಂ ಸ್ಪಷ್ಟನೆ

    ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ದಿ. ಡಾ. ಪುನೀತ್ ರಾಜ್ ಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ದಿ ಕಾಶ್ಮೀರ್‌ ಫೈಲ್ಸ್ ಸಿನಿಮಾಗಾಗಿ ಜೇಮ್ಸ್ ಎತ್ತಂಗಡಿಗೆ ಕುತಂತ್ರ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಅನಾವಶ್ಯಕವಾಗಿ ಜೇಮ್ಸ್ ಸಿನಿಮಾವನ್ನು ಥಿಯೇಟರ್ ನಿಂದ ತೆಗೆಯುವಂತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಮಾತಾಡಿದ್ದೀನಿ. ಶಿವರಾ‌ಜ್ ಕುಮಾರ್ ಜೊತೆಯೂ ಮಾತಾಡಿದ್ದೀನಿ, ನನ್ನ ಗಮನಕ್ಕೆ ತನ್ನಿ ಎಂದಿದ್ದೇನೆ. ಏನೇ ಸಮಸ್ಯೆ ಇದ್ದರೂ ಗಮನಕ್ಕೆ ತಂದು ಕೂಡಲೇ ಸರಿಪಡಿಸಿ ಅಂತಾ ಸೂಚಿಸಿರುವುದಾಗಿ ತಿಳಿಸಿದರು. ಇದನ್ನೂ ಓದಿ: Exclusive Details- ಕೆಜಿಎಫ್ 2 ರಿಲೀಸ್: ಮಾ.27ಕ್ಕೆ ಟ್ರೇಲರ್ ಲಾಂಚ್, 7 ಸಾವಿರ ಚಿತ್ರಮಂದಿರಗಳಲ್ಲಿ ರಿಲೀಸ್, ಯಾರೆಲ್ಲ ಗೆಸ್ಟ್?

    ಅನಾವಶ್ಯಕವಾಗಿ ಥಿಯೇಟರ್ ನಿಂದ ಜೇಮ್ಸ್ ಸಿನಿಮಾ ತೆಗೆಯುವಂತಿಲ್ಲ. ಸಂಬಂಧಪಟ್ಟ ವಿತರಕರು, ನಿರ್ಮಾಪಕರಿಗೆ ಅಧಿಕಾರ ಇದೆ, ನೀವೇ ಇದನ್ನ ಸರಿಪಡಿಸಬೇಕು ಅಂತಾ ಹೇಳಿದ್ದೇನೆ. ಬಿಜೆಪಿ ಶಾಸಕರು ಎತ್ತಂಗಡಿ ಮಾಡಿಸ್ತಿದ್ದಾರೆ ಅನ್ನೋದೆಲ್ಲ ಸುಳ್ಳು. ಕಾಂಗ್ರೆಸ್ ಅವರು ಸಿನಿಮಾದಲ್ಲೂ ರಾಜಕೀಯ ಮಾಡ್ತಿದ್ದಾರೆ. ಈ ಮೂಲಕ ಎಷ್ಟು ಕೆಳಮಟ್ಟದಲ್ಲಿ ಹೋಗ್ತಿದೆ ನೋಡಿ, ಬೇರೆ ಏನೂ ಇಲ್ಲವಲ್ಲ ಅವರಿಗೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಆರ್.ಆರ್.ಆರ್ ಬೈಕಾಟ್ : ಕನ್ನಡ ಪರ ಹೋರಾಟಗಾರರಿಗೇ ಜವಾಬ್ದಾರಿ ಕೊಟ್ಟ ರಾಜಮೌಳಿ ಟೀಮ್

    ದಿ ಕಾಶ್ಮೀರ್ ಫೈಲ್ಸ್, ಜೇಮ್ಸ್ ಸಿನಿಮಾ ನಡುವಿನ ಕದನ ಇದು ಎಂದು ಅಪ್ಪು ಫ್ಯಾನ್ಸ್ ನಂಬಿದ್ದಾರೆ. ಅದಕ್ಕಾಗಿಯೇ ಅವರು ಜೇಮ್ಸ್ ಚಿತ್ರದ ಬೆನ್ನಿಗೆ ನಿಂತಿದ್ದಾರೆ. ಈಗಾಗಲೇ ಜೇಮ್ಸ್ ಚಿತ್ರವನ್ನು ಎತ್ತಂಗಡಿ ಮಾಡಬೇಡಿ ಎಂದು ಅಭಿಮಾನಿಗಳು ಧರಣಿ ಮಾಡುತ್ತಿದ್ದಾರೆ. ಅಲ್ಲದೆ ಥಿಯೇಟರ್ ಗೆ ಮುತ್ತಿಗೆ ಹಾಕಲು ಸಜ್ಜಾಗುತ್ತಿದ್ದಾರೆ. ಮಲ್ಟಿಫ್ಸೆಕ್ಸ್ ಗಳಲ್ಲಿ ಜೇಮ್ಸ್ ಚಿತ್ರವನ್ನು ತೆಗೆದರೆ ನಾವು ಥಿಯೇಟರ್ ಒಳಗೆ ನುಗ್ಗಿ ಪ್ರತಿಭಟನೆ ಮಾಡುತ್ತೇವೆ ಎಂದು ಕೆಲವು ಕನ್ನಡ ಸಂಘಟನೆಗಳು ಎಚ್ಚರಿಕೆ ಕೊಟ್ಟಿವೆ.

  • ಅಮ್ಮನ ಬಗ್ಗೆ ಅಪ್ಪು ಮಾತನಾಡಿದ್ದ ಸ್ಫೂರ್ತಿದಾಯಕ ಮಾತುಗಳು ವೈರಲ್

    ಅಮ್ಮನ ಬಗ್ಗೆ ಅಪ್ಪು ಮಾತನಾಡಿದ್ದ ಸ್ಫೂರ್ತಿದಾಯಕ ಮಾತುಗಳು ವೈರಲ್

    ಸ್ಯಾಂಡಲ್‍ವುಡ್ ಪವರ್ ಸ್ಟಾರ್ ದಿ. ಡಾ. ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ತಿಂಗಳುಗಳೇ ಕಳೆದರೂ ಅವರ ಮೇಲಿನ ಅಭಿಮಾನ ಇನ್ನೂ ಕರಗಿಲ್ಲ. ಈ ಮಧ್ಯೆ ಪುನೀತ್ ಸಿನಿಮಾ ಡೈಲಾಗ್‍ಗಳು, ಕಾರ್ಯಕ್ರಮದಲ್ಲಿ ಅವರು ಮಾತಾಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಅದೇ ರೀತಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ಪು, ಅಲ್ಲಿ ತಮ್ಮ ಅಮ್ಮನ ಬಗ್ಗೆ ಮಾತಾನಾಡಿರುವ ಸ್ಫೂರ್ತಿದಾಯಕ ಮಾತುಗಳು ವೈರಲ್ ಆಗುತ್ತಿದೆ.

    ಹೌದು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಬಗ್ಗೆ ಮಾತಾನಾಡುತ್ತಾ ಅಪ್ಪು ಹೆಮ್ಮೆ ವ್ಯಕ್ತಪಡಿಸಿದರು. ನಾನು ನನ್ನ ಅಮ್ಮನಂತೆ ಆಗಬೇಕು. ಕೈಯಲ್ಲಿ ಪರ್ಸ್ ಇಟ್ಟುಕೊಂಡರೆ ತುಂಬಾ ಹಣ ಇದೆ ಅಂತ ಅನಿಸೋದು. ಅಮ್ಮನಂತೆ ಚೆನ್ನಾಗಿ ಸಂಪಾದನೆ ಮಾಡ್ಬೇಕು. ನಮ್ಮಮ್ಮ ಸಂಪಾದನೆ ಅನ್ನೋದಕ್ಕಿಂತ ಹೆಚ್ಚಾಗಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಅಲ್ಲದೆ ಹಲವಾರು ಮಂದಿಯನ್ನು ಇಂಡಸ್ಟ್ರಿಗೆ ಪರಿಚಯಿಸಿದ್ದಾರೆ ಎಂದಿದ್ದರು.  ಇದನ್ನೂ ಓದಿ: 88 ವರ್ಷಗಳ ಕನ್ನಡ ಚಿತ್ರರಂಗದ ಎಲ್ಲ ದಾಖಲೆ ಮುರಿದ ಜೇಮ್ಸ್ : 100 ಕೋಟಿ, ಅಧಿಕೃತ ಹೇಳಿಕೆ

    ನನಗೆ ಇಬ್ಬರು ಹೆಣ್ಣುಮಕ್ಕಳು. ಆದರೆ ಇಲ್ಲಿ ಹೆಣ್ಣು ಬೇರೆ ಅಲ್ಲ, ಗಂಡು ಬೇರೆ ಅಲ್ಲ, ಇಲ್ಲಿ ಎಲ್ಲಾರು ಸಮಾನರು ಎಂದು ಹೇಳಿದರು. ಸಮಾಜಕ್ಕೆ ಹೆಣ್ಣು ಮಗಳು ಅಂತ ಬಂದಾದ ಬಳಿಕ ಅವರೂ ಕೆಲಸ ಮಾಡಲೇಬೇಕು. ನಮ್ಮ ಅಮ್ಮನೂ ಕೆಲಸ ಮಾಡುತ್ತಿದ್ದರು. ಅದಕ್ಕೆ ನಾನು ಯಾರನ್ನು ನೋಡಿದರೂ ಯಾವಾಗ್ಲೂ ಕೆಲಸ ಮಾಡಿ, ಜೀವನದಲ್ಲಿ ಚೆನ್ನಾಗಿರಿ ಅಂತ ಹೇಳುತ್ತೇನೆ. ಇದಕ್ಕೆ ನಮ್ಮ ಅಮ್ಮನೇ ಸ್ಫೂರ್ತಿ ಅಂತ ಅಪ್ಪು ಸಂತಸ ವ್ಯಕ್ತಪಡಿಸಿದ್ದರು.

    ನಾನೆಷ್ಟು ಒಳ್ಳೆಯ ಕೆಲಸ ಮಾಡುರುತ್ತೀನೋ, ಅಷ್ಟು ಕೆಟ್ಟ ಕೆಲಸನೂ ಮಾಡಿರುತ್ತೇನೆ. ಯಾಕೆಂದರೆ ಇದು ಜೀವನ ಎಂದ ಅವರು, ಈ ಜೀವನದಲ್ಲಿ ನನ್ನ ತಿದ್ದಿ, ಬೆಳೆಸಿರುವವರೆಂದರೆ ನನ್ನ ತಾಯಿ ಎಂದಿದ್ದರು. ಅಪ್ಪು ಅವರ ಈ ಮಾತುಗಳು ಇದೀಗ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಬರಲಿವೆ ಪುನೀತ್ ನಟನೆಯ ‘ಯುವರತ್ನ’ ಸಿನಿಮಾದ ಅನ್ ಕಟ್ ಸೀನ್ಸ್ : ನಿರ್ದೇಶಕ ಸಂತೋಷ್ ಆನಂದ್

    ಮಾರ್ಚ್ 17ರಂದು ಅಪ್ಪು ಹುಟ್ಟುಹಬ್ಬವಾಗಿದ್ದು, ಅಂದೇ ಪುನೀತ್ ನಟನೆಯ ಕೊನೆಯ ಚಿತ್ರ ಜೇಮ್ಸ್ ರಿಲೀಸ್ ಆಗಿದೆ. ಅದ್ಯ ಚಿತ್ರ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರು ಕಣ್ಣೀರು ಹಾಕಿದ್ದಾರೆ.

  • 88 ವರ್ಷಗಳ ಕನ್ನಡ ಚಿತ್ರರಂಗದ ಎಲ್ಲ ದಾಖಲೆ ಮುರಿದ ಜೇಮ್ಸ್ : 100 ಕೋಟಿ, ಅಧಿಕೃತ ಹೇಳಿಕೆ

    88 ವರ್ಷಗಳ ಕನ್ನಡ ಚಿತ್ರರಂಗದ ಎಲ್ಲ ದಾಖಲೆ ಮುರಿದ ಜೇಮ್ಸ್ : 100 ಕೋಟಿ, ಅಧಿಕೃತ ಹೇಳಿಕೆ

    ಸಾಮಾನ್ಯವಾಗಿ ಕನ್ನಡ ಸಿನಿಮಾ ರಂಗದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಹೇಳುವುದು ಕಡಿಮೆ. 50 ಕೋಟಿ, 100 ಕೋಟಿ ಅಂತ ಗಾಳಿಯಲ್ಲಿ ಗುಂಡು ಹಾರಿಸಿದ್ದೆ ಹೆಚ್ಚು. ಬೆರಳೆಣಿಕೆಯ ಚಿತ್ರ ನಿರ್ಮಾಪಕರು ಮಾತ್ರ ತಮ್ಮ ಸಿನಿಮಾದಿಂದ ಇಂತಿಷ್ಟು ದುಡ್ಡು ಆಗಿದೆ, ಇಂತಿಷ್ಟು ಲಾಭ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಮಾಧ್ಯಮಗಳ ಮುಂದೆ ಬಂದು, ಅದಕ್ಕಾಗಿ ಒಂದು ಜಾಹೀರಾತೂ ಕೊಟ್ಟು, ನಮ್ಮ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಇಷ್ಟು ದುಡ್ಡು ಮಾಡಿದೆ ಎಂದು ಹೇಳುವುದು ತೀರಾ ಕಡಿಮೆ. ಅಂತಹ ಕೆಲಸವನ್ನು ಮಾಡಿದ ಜೇಮ್ಸ್ ಚಿತ್ರತಂಡ.

    ಈವರೆಗೂ ಜೇಮ್ಸ್ ಇಷ್ಟು ದುಡ್ಡು ಮಾಡಿದೆ, ಅಷ್ಟು ಮಾಡಿದೆ ಎಂದು ಸುದ್ದಿಗಳನ್ನು ಓದಿದ್ದಿದೆ. ಆದರೆ, ಇದೇ ಮೊದಲ ಬಾರಿಗೆ ತಮ್ಮ ಸಿನಿಮಾ 100 ಕೋಟಿ ಕ್ಲಬ್ ಸೇರಿದೆ ಎಂದು ಅಧಿಕೃತವಾಗಿ ಸಿನಿಮಾ ತಂಡವೇ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿದೆ. ಅದರಲ್ಲಿ “88 ವರ್ಷದ ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಮುರಿದು, ಹೊಸ ಇತಿಹಾಸ ಬರೆದ ಜೇಮ್ಸ್’ ಎಂದು ಟಿಪ್ಪಣಿ ಹಾಕಿಕೊಂಡಿದೆ. ಇದನ್ನೂ ಓದಿ : ತಮಿಳಲ್ಲ, ಬಾಲಿವುಡ್ ಗೆ ಹಾರಿದ ರಜನಿಕಾಂತ್ ಪುತ್ರಿ ಐಶ್ವರ್ಯಾ

    ಜೇಮ್ಸ್ ನೂರು ಕೋಟಿ ಕ್ಲಬ್ ಸೇರಲು ಹೆಚ್ಚು ದಿನಗಳನ್ನು ತಗೆದುಕೊಂಡಿಲ್ಲ. ಕೇವಲ 4 ದಿನದಲ್ಲೇ ಈ ಸಾಧನೆ ಮಾಡಿದೆ. ಅತೀ ಕಡಿಮೆ ದಿನದಲ್ಲೇ ನೂರು ಕೋಟಿ ಬಾಚಿದ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಬರೀ ನೂರು ಕೋಟಿಯಲ್ಲ, ನೂರು ಕೋಟಿಯನ್ನೂ ದಾಟಿ ಮುನ್ನುಗ್ಗುತ್ತಿದೆ ಎಂದಿದ್ದಾರೆ ನಿರ್ಮಾಪಕರು.  ಇದನ್ನೂ ಓದಿ : ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?

    ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಎರಡು ಶೇಡ್ ಇರುವಂತಹ ಪಾತ್ರವನ್ನು ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪುನೀತ್ ಮತ್ತು ಅವರ  ಇಬ್ಬರು ಸಹೋದರರು ನಟಿಸಿದ ಸಿನಿಮಾ ಇದಾಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಈ ಸಿನಿಮಾ ದಾಖಲೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ.