Tag: ಅಪಾಯ

  • ಇಂಟರ್‌ನೆಟ್ ಸ್ಥಗಿತ ಅಪಾಯಕಾರಿ, ನಿರ್ಬಂಧ ಹೇರುವುದನ್ನು ನಿಲ್ಲಿಸಿ: ವಿಶ್ವಸಂಸ್ಥೆ

    ಇಂಟರ್‌ನೆಟ್ ಸ್ಥಗಿತ ಅಪಾಯಕಾರಿ, ನಿರ್ಬಂಧ ಹೇರುವುದನ್ನು ನಿಲ್ಲಿಸಿ: ವಿಶ್ವಸಂಸ್ಥೆ

    ನ್ಯೂಯಾರ್ಕ್: ಇಂಟರ್‌ನೆಟ್ ಸ್ಥಗಿತಗೊಳಿಸುವುದು ಅಥವಾ ಅಡೆತಡೆಗಳನ್ನು ಹೇರುವುದರಿಂದ ತೀವ್ರವಾದ ಪರಿಣಾಮಗಳು ಉಂಟಾಗಬಹುದು. ಹೀಗಾಗಿ ದೇಶಗಳು ಇಂಟರ್‌ನೆಟ್ ಮೇಲೆ ನಿರ್ಬಂಧ ಹೇರುವುದನ್ನು ಕೂಡಲೇ ನಿಲ್ಲಿಸಬೇಕೆಂದು ವಿಶ್ವಸಂಸ್ಥೆ ಕರೆ ನೀಡಿದೆ.

    ಇಂಟರ್‌ನೆಟ್ ಸ್ಥಗಿತಗೊಳಿಸುವಿಕೆಯಿಂದ ಲಕ್ಷಾಂತರ ಜನರ ಜೀವನ ಹಾಗೂ ಮಾನವ ಹಕ್ಕುಗಳ ಮೇಲೆ ಭೀಕರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಬೆಂಕಿಗಾಹುತಿ

    ಇಂಟರ್‌ನೆಟ್ ಹಾಗೂ ದೂರಸಂಪರ್ಕ ಸೇವೆಗಳು ಸ್ಥಗಿತಗೊಂಡರೆ, ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳು ತಮ್ಮ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗದಿರುವುದು, ಮತದಾರರು ಅಭ್ಯರ್ಥಿಗಳ ಮಾಹಿತಿಯಿಂದ ವಂಚಿತರಾಗುವುದು, ಕರಕುಶಲ ತಯಾರಕರು ಗ್ರಾಹಕರಿಂದ ದೂರ ಉಳಿಯುವುದು ಹಾಗೂ ಹಿಂಸಾತ್ಮಕ ದಾಳಿಯ ಸಂದರ್ಭ ಶಾಂತಿಯನ್ನು ಸ್ಥಾಪಿಸಲು ಸಹಾಯಕ್ಕೆ ಅಧಿಕಾರಿಗಳನ್ನು ಕರೆಸುವುದು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

    ಈ ಬಗ್ಗೆ ವಿಶ್ವಸಂಸ್ಥೆ ಹಕ್ಕುಗಳ ಮುಖ್ಯಸ್ಥ ಮಿಚೆಲ್ ಬ್ಯಾಚೆಲೆಟ್, ಡಿಜಿಟಲ್ ಜಗತ್ತು ಮಾನವ ಜಗತ್ತಿಗೆ ಅತ್ಯಗತ್ಯವಾಗಿದೆ. ಇಂತಹ ಸಮಯದಲ್ಲಿ ಸ್ಥಗಿತಗಳಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದಿದ್ದಾರೆ. ಇದನ್ನೂ ಓದಿ: ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾಗೆ ಝೆಡ್ ಶ್ರೇಣಿ ಭದ್ರತೆ

    ಇಂಟರ್‌ನೆಟ್ ಸ್ಥಗಿತಗೊಂಡರೆ, ಲೆಕ್ಕಿಸಲಾಗದಷ್ಟು ಹಾನಿ ಉಂಟಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಜಾಗತಿಕ ಗಮನವನ್ನು ಸೆಳೆದ ಮೊದಲ ಮುಖ್ಯ ಇಂಟರ್‌ನೆಟ್ ಸ್ಥಗಿತ 2011ರಲ್ಲಿ ಈಜಿಪ್ಟ್‌ನಲ್ಲಿ ನಡೆದಿತ್ತು. ತಹ್ರೀರ್ ಸ್ಕ್ವೇರ್ ಪ್ರದರ್ಶನದ ಸಮಯದಲ್ಲಿ ಇಂಟರ್‌ನೆಟ್ ಸ್ಥಗಿತಗೊಂಡು, ಹಿಂಸಾತ್ಮಕ ಘಟನೆಗಳು ನಡೆದವು. ಹಲವು ಹತ್ಯೆಗಳು ನಡೆದು, ನೂರಾರು ಜನರು ಬಂಧನಕ್ಕೊಳಗಾಗಿದ್ದರು ಎಂದು ತಿಳಿಸಿದರು.

    ಇಂತಹ ಸ್ಥಗಿತಗಳು ಸಂಭವಿಸಿತು ಎಂದಾದಲ್ಲಿ, ಜನರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ಇದರಿಂದ ಜನರನ್ನು ನಿಯಂತ್ರಿಸಲಾಗದಷ್ಟು ಮಟ್ಟದಲ್ಲಿ ಹಕ್ಕುಗಳ ಉಲ್ಲಂಘನೆ, ಹತ್ಯೆಗಳು ನಡೆಯಬಹುದು ಎಂದು ಹೇಳಿದ್ದಾರೆ.

    Live Tv

  • ಬೆಂಗ್ಳೂರಿಗರಿಗೆ ಶಾಕ್ – ಈ ಏರಿಯಾದ ಅಂತರ್ಜಲ ಸಹ ವಿಷ

    ಬೆಂಗ್ಳೂರಿಗರಿಗೆ ಶಾಕ್ – ಈ ಏರಿಯಾದ ಅಂತರ್ಜಲ ಸಹ ವಿಷ

    ಬೆಂಗಳೂರು: ಸಿಲಿಕಾನ್ ಸಿಟಿಯ ಜನರಿಗೆ ಶಾಂಕಿಂಗ್ ನ್ಯೂಸ್ ಕುಡಿಯುವ ನೀರಿನಲ್ಲಿ ಜೀವವನ್ನೇ ಕೊಲ್ಲುವ ವಿಷಕಾರಿ ಅಂಶವಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಹೌದು..ಬೆಂಗಳೂರಿನ ಪೀಣ್ಯ ಇಂಡಸ್ಟ್ರಿಯ ನೀರು ಸಂಪೂರ್ಣ ವಿಷವಾಗಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಬರೋಬ್ಬರಿ ಎಪ್ಪತ್ತು ಬೋರ್ ವೆಲ್‍ಗಳನ್ನು ಈಗ ಸೀಝ್ ಮಾಡಿ ಜನರಿಗೆ ಈ ನೀರು ಕುಡಿಯದಂತೆ ಆದೇಶಿಸಿದೆ.

    ಕುಡಿಯುವುದಕ್ಕೆ ಮಾತ್ರವಲ್ಲ, ಕೈಗಾರಿಕೆ ಉದ್ದೇಶ, ಗಾರ್ಡನಿಂಗ್‍ ಗೂ ಕೂಡ ಈ ನೀರು ಬಳಸುವಂತಿಲ್ಲ. ಮನುಷ್ಯನ ಜೀವಕ್ಕೆ ಅಪಾಯಕಾರಿಯಾಗಿರುವ ಕ್ರೋಮಿಯಂ, ಪ್ಲೋರೈಡ್ ಸೇರಿದಂತೆ ಮನುಷ್ಯನ ದೇಹಕ್ಕೆ ಮಾರಣಾಂತಿಕ ಕಾಯಿಲೆ ತರುವ ವಿಷ ಇಲ್ಲಿನ ನೀರಿನಲ್ಲಿ ಸೇರಿಕೊಂಡಿದ್ದು, ಜನ ಭೀತಿಗೊಂಡಿದ್ದಾರೆ.

    ಭೂಮಿಯ ಅಂತರ್ಜಲ ಎಷ್ಟು ವಿಷವಾಗಿದೆಯಂದರೆ ಶುದ್ಧೀಕರಣ ಮಾಡಿದರು ಈ ನೀರು ಬಳಕೆಗೆ ಯೋಗ್ಯವಲ್ಲ ಅಂತ ಮಾಲಿನ್ಯ ನಿಯಂತ್ರಣ ಮಂಡಳಿ ಅಭಿಪ್ರಾಯ ಪಟ್ಟಿದೆ. ಜಲಮಂಡಳಿಗೆ ಹೆಚ್ಚುವರಿ ಕಾವೇರಿ ನೀರನ್ನು ಪೀಣ್ಯ ಇಂಡಸ್ಟ್ರಿ ಏರಿಯಾಗೆ ಸರಬರಾಜು ಮಾಡುವುದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ.

    ಅತಿಯಾದ ಕೈಗಾರಿಕೆಗಳು, ಕೈಗಾರಿಕೆ ಬಳಕೆ ತ್ಯಾಜ್ಯ ನೀರನ್ನು ಶುದ್ಧೀಕರಿಸದೇ ಇರೋದು ಈ ದುರಂತಕ್ಕೆ ಕಾರಣವಾಗಿದೆ. ಸದ್ಯಕ್ಕೆ ಮುಂದೆ ಪರ್ಯಾಯ ನೀರಿನ ವ್ಯವಸ್ಥೆ ಮಾಡಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಾವಿನ ದವಡೆಯಿಂದ ಪಾರಾದ 1 ವರ್ಷದ ಕಂದಮ್ಮ – ಶಾಕಿಂಗ್ ವಿಡಿಯೋ

    ಸಾವಿನ ದವಡೆಯಿಂದ ಪಾರಾದ 1 ವರ್ಷದ ಕಂದಮ್ಮ – ಶಾಕಿಂಗ್ ವಿಡಿಯೋ

    ಲಕ್ನೋ: ಚಲಿಸುತ್ತಿರುವ ರೈಲಿನ ಅಡಿಯಲ್ಲಿ ಸಿಲುಕಿದ್ದ ಮಗು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮಗುವೊಂದು ರೈಲಿನ ಅಡಿಗೆ ತಾಯಿಯ ಕೈಯಿಂದ ಜಾರಿ ಹಳಿಯ ಮೇಲೆ ಬಿದ್ದ ಕೂಡಲೇ, ಹಳಿಯ ಮೇಲೆ ವೇಗವಾಗಿ ರೈಲೊಂದು ಹೋಗಿದೆ. ಇದರಿಂದ ಮಗುವು ಸಾವನ್ನಪ್ಪಿರಬಹುದು ಎಂದು ನಿಲ್ದಾಣದಲ್ಲಿ ಜನರು ಆತಂಕ ವ್ಯಕ್ತಪಡಿಸಿದ್ದರು. ಆದ್ರೆ ಹಳಿಯ ಗೋಡೆಯ ಸಿಲುಕಿದ್ದ ಮಗುವಿಗೆ ಯಾವುದೇ ಗಾಯಗಳಾಗದೇ ಪ್ರಾಣಪಾಯದಿಂದ ಪಾರಾಗಿರುವ ಘಟನೆ ಉತ್ತರಪ್ರದೇಶದ ಮಥುರಾ ರೈಲ್ವೆ ಸ್ಟೇಷನ್‍ನಲ್ಲಿ ನಡೆದಿದೆ.

    ತಾಯಿ ಒಂದು ವರ್ಷದ ಸಾಹಿಬಾ ಎಂಬ ಹೆಸರಿನ ಹೆಣ್ಣು ಮಗುವನ್ನ ಕೈಯಲ್ಲಿ ಎತ್ತುಕೊಂಡು ರೈಲು ನಿಲ್ದಾಣದ ಬಳಿ ನಿಂತಿದ್ದರು. ಈ ವೇಳೆ ಮಗು ತಾಯಿಯ ಕೈಯಿಂದ ರೈಲ್ವೆ ಹಳಿಯ ಮೇಲೆ ಬಿದ್ದಿದೆ. ಬಿದ್ದ ಮಗುವನ್ನ ಎತ್ತಲು ಹೋದಾಗ ಅದೇ ಸಮಯಕ್ಕೆ ವೇಗವಾಗಿ ರೈಲು ಬಂದಿದೆ. ರೈಲಿನ ಅಡಿಯಲ್ಲಿ ಸಿಲುಕಿದ್ದ ಮಗು ಸಾವನ್ನಪ್ಪಿರಬಹುದು ಎಂದು ಊಹಿಸುವಷ್ಟರಲ್ಲಿ, ಹಳಿಯ ಗೋಡೆಯ ಬದಿಯಲ್ಲಿ ಸಿಲುಕಿಕೊಂಡಿದ್ದ ಮಗು ಬದುಕುಳಿದಿರುವುದನ್ನ ಕಂಡ ಅಲ್ಲಿದ್ದ ಯುವಕರು ಕೂಡಲೇ ಕೆಳಗೆ ಜಿಗಿದು ಮಗುವನ್ನ ರಕ್ಷಿಸಿರುವುದನ್ನ ರೈಲು ನಿಲ್ದಾಣದಲ್ಲಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನ ಸೆರೆ ಹಿಡಿದ್ದಾರೆ.

    ಕೈ ಜಾರಿ ಮಗುವು ಹಳಿಯ ಮೇಲೆ ಬಿದ್ದದ್ದನ್ನ ಅಸಹಾಯಕವಾಗಿ ಪ್ರಯಾಣಿಕರು ಮತ್ತು ಮಗುವಿನ ಹೆತ್ತವರು ನೋಡುವ ಪರಿಸ್ಥಿತಿ ಎದುರಾಗಿತ್ತು. ಕಣ್ಣೆದುರೇ ಮಗುವಿನ ಪ್ರಾಣ ಹೋಯಿತೆಂದ ದುಃಖದಲ್ಲಿದ್ದ ತಾಯಿಗೆ ಮಗು ಪವಾಡದ ರೀತಿಯಲ್ಲಿ ಬದುಕುಳಿದ್ದನ್ನ ಕಂಡು ಸಂತಸವನ್ನ ವ್ಯಕ್ತಪಡಿಸಿದರು.

    ಈ ಘಟನೆಯಲ್ಲಿ ಮಗುವಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಈ ಪವಾಡವನ್ನ ನೋಡಿದ ಅಲ್ಲಿನ ಪ್ರಯಾಣಿಕರು ಮಗು ಬದುಕುಳಿದ್ದನ್ನ ನೋಡಿ ಹರೇ ರಾಮ್ ಹರೇ ರಾಮ್ ಎಂದು ಘೋಷಣೆಯನ್ನ ಕೂಗಿ ಸಂತಸ ವ್ಯಕ್ತಪಡಿಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಒಂದೇ ಒಂದು ಫೋಟೋಗಾಗಿ ಸಾವಿನ ಜೊತೆ ಸೆಣಸಾಟ..!

    ಒಂದೇ ಒಂದು ಫೋಟೋಗಾಗಿ ಸಾವಿನ ಜೊತೆ ಸೆಣಸಾಟ..!

    -ನಂದಿಗಿರಿಧಾಮದಲ್ಲಿ ಪ್ರವಾಸಿಗರ ಹುಚ್ಚಾಟ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿ ಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರವಾಸಿಗರು ಒಂದೇ ಒಂದು ಸೆಲ್ಫೀಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ.

    ಭೂಮಿ-ಬಾನು ಒಂದಾಗೋ ಆ ಜಾಗದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳೋಕೆ ತಮ್ಮ ಪ್ರಾಣದ ಜೊತೆ ಸೆಣಸಾಟ ನಡೆಸುತ್ತಿದ್ದಾರೆ. ಪ್ರವಾಸಿಗರ ಸುರಕ್ಷತೆಯ ಹಿತದೃಷ್ಠಿಯಿಂದ ನಿರ್ಮಿಸಿರುವ ಐರನ್ ಗ್ರಿಲ್ ಅನ್ನೇ ಹರಸಾಹಸ ಪಟ್ಟು ಹತ್ತುತ್ತಿರುವ ಯುವಕ-ಯುವತಿಯರು, ತಡೆ ಬೇಲಿಯನ್ನೇ ದಾಟಿ ಅಪಾಯಕಾರಿ ಸ್ಥಳಕ್ಕೆ ತಲುಪುತ್ತಿದ್ದಾರೆ. ಅಲ್ಲಿ ಫೋಟೋ, ಸೆಲ್ಫೀ ತೆಗೆದುಕೊಳ್ಳೋಕೆ ಇನ್ನಿಲ್ಲದ ಹುಚ್ಚು ಸಾಹಸಕ್ಕೆ ಮುಂದಾಗಿದ್ದಾರೆ ಎಂದು ಪ್ರವಾಸಿಗರು ಹೇಳಿದ್ದಾರೆ.

    ಈ ಹಿಂದೆ ದಟ್ಟ ಮಂಜಿನ ಮಧ್ಯೆ ಬೆಟ್ಟದ ಕೊನೆ ಆಳ-ಅಗಲ ತಿಳಿಯದೆ ಕೆಲವರು ಬೆಟ್ಟದಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ತೋಟಗಾರಿಕೆ ಇಲಾಖೆ, ಪ್ರವಾಸಿಗರ ಹಿತದೃಷ್ಠಿಯಿಂದ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಐರನ್ ಗ್ರಿಲ್ ಕಾಪೌಂಡು ನಿರ್ಮಿಸಿ ಅಪಾಯಕಾರಿ ವಯಲವೆಂದು ಘೋಷಣೆ ಮಾಡಿದೆ. ಆದರೂ ಇಲ್ಲಿಗೆ ಬರುವ ಪ್ರವಾಸಿಗರು ಪ್ರಕೃತಿ ಸೌಂದರ್ಯದ ಜೊತೆ ಫೋಟೋ ತೆಗೆದುಕೊಳ್ಳಲು ಇಲ್ಲಿರುವ ಐದಾರು ಅಡಿ ಎತ್ತರದ ಗ್ರಿಲ್ ನ್ನು ಹತ್ತಿ ಇಳಿದು ಅಪಾಯಕಾರಿ ಸ್ಥಳ ತಲುಪಿ ಹರಸಾಹಸ ಮಾಡುತ್ತಿದ್ದಾರೆ. ಅಪಾಯಕಾರಿ ಸ್ಥಳದಲ್ಲಿ ನಿಂತು ಫೋಟೋ ತೆಗೆದುಕೊಳ್ಳುವ ಹುಚ್ಚು ಸಾಹಸ ಹೆಚ್ಚಾಗಿದ್ದು, ನಂದಿಗಿರಿಧಾಮದ ಅಧಿಕಾರಿಗಳಿಗೆ ತಲೆನೋವಾಗಿದೆ ಎಂದು ವಿಶೇಷಾಧಿಕಾರಿ ರಮೇಶ್ ತಿಳಿಸಿದ್ದಾರೆ.

    ಅಸಲಿಗೆ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯಲು ಅಂತಾನೇ ಬರುತ್ತಾರೆ. ಕೆಲವೆಡೆ ವಿವ್ಯೂ ಪಾಯಿಂಟ್ ನಿರ್ಮಾಣ ಮಾಡಿದ್ದು, ಅಲ್ಲಿ ಫೋಟೋ ತೆಗೆದುಕೊಳ್ಳೋಕೆ ಅವಕಾಶವಿದೆ. ಆದರೆ ಅಪಾಯಕಾರಿ ಸ್ಥಳಗಳಲ್ಲಿ ಕಾಪೌಂಡ್ ನಿರ್ಮಾಣ ಮಾಡಿ ಪ್ರವಾಸಿಗರ ಪ್ರವೇಶ ನಿಷೇಧ ಮಾಡಿದ್ದರೂ ಕೆಲವು ಯುವಕ-ಯುವತಿಯರು ಒಂದೇ ಒಂದು ಫೋಟೊಗಾಗಿ ಆಪತ್ತನ್ನೇ ಮೈ ಮೇಲೆ ಎಳೆದುಕೊಳ್ಳುತ್ತಾ ಹುಚ್ಚು ಸಾಹಸ ಮಾಡುತ್ತಿರುವುದು ಸ್ಥಳೀಯ ಪೋಲಿಸರು ಹಾಗೂ ಗಿರಿಧಾಮದ ಅಧಿಕಾರಿಗಳಿಗಳಿಗೂ ತಲೆನೋವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಟ್ರಾಫಿಕ್ ನಿಂದ ಪಾರಾಗಲು ತೂಗು ಸೇತುವೆ- ಜೀವಕ್ಕೆ ಕುತ್ತು ತರುತ್ತಾ ಸಿಗ್ನೇಚರ್ ಬ್ರಿಡ್ಜ್..!

    ಟ್ರಾಫಿಕ್ ನಿಂದ ಪಾರಾಗಲು ತೂಗು ಸೇತುವೆ- ಜೀವಕ್ಕೆ ಕುತ್ತು ತರುತ್ತಾ ಸಿಗ್ನೇಚರ್ ಬ್ರಿಡ್ಜ್..!

    ನವದೆಹಲಿ: ಟ್ರಾಫಿಕ್ ಸಮಸ್ಯೆಯಿಂದ ಪಾರಾಗಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸಿಗ್ನೆಚರ್ ಬ್ರಿಡ್ಜ್ ತೂಗು ಸೇತುವೆ ಮೇಲೆ ಜನರು ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿರುವುದರಿಂದ ಜೀವಕ್ಕೆ ಅಪಾಯವಾಗುವ ಸಂಭವ ಜಾಸ್ತಿ ಇದೆ.

    ಹೊಸದಾಗಿ ನಿರ್ಮಾಣಗೊಂಡಿರುವ ಸೇತುವೆಯ ತುತ್ತ ತುದಿಯಲ್ಲಿ ಯುವಕರು ಸಾಹಸ ಮಾಡಿ, ತಮ್ಮ ಜೀವವನ್ನು ಒತ್ತೆಯಿಟ್ಟು ಸೆಲ್ಫಿ ತೆಗೆದುಕೊಳ್ಳುತ್ತಿರುವುರಿಂದ ಎಲ್ಲರಲ್ಲಿ ಆತಂಕ ಸೃಷ್ಠಿಯಾಗಿದೆ.

    ಸುಮಾರು 14 ವರ್ಷಗಳ ಸತತ ಪರಿಶ್ರಮದಿಂದ ಉತ್ತರ ಮತ್ತು ಈಶಾನ್ಯ ದೆಹಲಿಯನ್ನು ಸೇರಿಸಲು ಈ ತೂಗು ಸೇತುವೆಯನ್ನ ನಿರ್ಮಿಸಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಇದನ್ನ ಲೋಕಾರ್ಪಣೆ ಮಾಡಲಾಗಿದೆ. ಟ್ರಾಫಿಕ್ ಸಮಸ್ಯೆಯನ್ನ ಬಗೆಹರಿಸಲು ಈ ಸೇತುವೆ ನಿರ್ಮಿಸಲಾಗಿದ್ದರೂ, ಈಗ ಪ್ರವಾಸಿಗರ ತಾಣವಾಗಿ ಬದಲಾಗಿದೆ.

    ಈ ಹೊಸ ಸೇತುವೆಯ ಮೇಲೆ ಜನರು ಮುಗಿಬಿದ್ದು ಫೋಟೋಗಳನ್ನ ತೆಗೆದುಕೊಳ್ಳುತ್ತಿದ್ದು, ಸೇತುವೆಗೆ ಹಾಕಲಾಗಿರುವ ಕಂಬಿಗಳ ಮೇಲೆ ನಿಂತು ಪೋಸ್ ನೀಡುವ ಮೂಲಕ ಅವರ ಪ್ರಾಣಕ್ಕೆ ಅಪಾಯವನ್ನ ತಂದುಕೊಳ್ಳುತ್ತಿದ್ದಾರೆ. ಕೆಲವರು ವಾಹನ ಚಲಾಯಿಸುವಾಗಲೇ ಫೋಟೋ ತಗೆಯುವ ಸಾಹಸಕ್ಕೆ ಕೈಹಾಕಿದ್ದು ಇದರಿಂದ ಭಾರೀ ಪ್ರಮಾಣದ ಅಪಘಾತಗಳು ಸಂಭವಿಸಬಹುದಾಗಿದೆ.

    ಈ ವಿಚಾರವಾಗಿ ಮಾತನಾಡಿದ ಅಧಿಕಾರಿಗಳು, ಮುಂದಿನ ದಿನದಲ್ಲಿ ಈ ಸೇತುವೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಿ, ದೆಹಲಿ ನಗರದ ಸೌಂದರ್ಯ ಕಣ್ತುಂಬಿಕೊಳ್ಳಲು ಗಾಜಿನ ಕೋಣೆಗಳನ್ನು ನಿರ್ಮಿಸಲಾಗುವುದು. ಇದರೊಂದಿಗೆ ಸೆಲ್ಫಿ ಪ್ರಿಯರಿಗೆಂದೇ ಫೋಟೋ ತೆಗೆದುಕೊಳ್ಳುವುದಕ್ಕೆ ಪ್ರತ್ಯೇಕ ಸ್ಥಳಗಳನ್ನ ನಿರ್ಮಿಸಲಾಗುವುದು ಇದರಿಂದ ಅನಾಹುತಗಳನ್ನ ತಪ್ಪಿಸಬಹುದು ಎಂದು ಹೇಳಿದ್ದಾರೆ.

    ಈ ಕಾಮಗಾರಿ ಫೆಬ್ರವರಿ ಅಂತ್ಯಕ್ಕೆ ಜಾರಿಯಾಗಲಿದ್ದು, ಜನರು ಸೇತುವೆ ಮೇಲೆ ನಿಂತು ಫೋಟೋ ತೆಗೆಯುವುದರ ಬಗ್ಗೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    1997ರಲ್ಲಿ ವಜೀರಾಬಾದ್ ಸೇತುವೆಯಿಂದ ಶಾಲಾ ಬಸ್ ಉರುಳಿ, 22 ಮಕ್ಕಳು ಯಮುನಾ ನದಿಯಲ್ಲಿ ಕೊನೆಯುಸಿರೆಳೆದಿದ್ದರು. ಈ ದುರಂತ ನಡೆದ ಬಳಿಕ ಸರ್ಕಾರ ಬೃಹತ್ ತೂಗು ಸೇತುವೆ ಕಾಮಗಾರಿಯನ್ನ ಪ್ರಾರಂಭಿಸಿತ್ತು. 2010ರಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಹಣಕಾಸು ತೊಂದರೆಯಿಂದ ನಿಂತುಹೋಗಿತ್ತು. ಸುಮಾರು 1594 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆಯನ್ನ ಇದೇ ತಿಂಗಳ ನವೆಂಬರ್ 5 ಕ್ಕೆ ಲೋಕಾರ್ಪಣೆ ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮಧ್ಯರಾತ್ರಿಯ ಕಗತ್ತಲಲ್ಲಿ ಬೆಟ್ಟ ಸೇರಿದ್ದ ಯುವಕರು – ಟ್ರೆಕ್ಕಿಂಗ್‍ಗೆ ಬಂದು ಪಡಬಾರದ ಫಜೀತಿ ಪಟ್ಟರು

    ಮಧ್ಯರಾತ್ರಿಯ ಕಗತ್ತಲಲ್ಲಿ ಬೆಟ್ಟ ಸೇರಿದ್ದ ಯುವಕರು – ಟ್ರೆಕ್ಕಿಂಗ್‍ಗೆ ಬಂದು ಪಡಬಾರದ ಫಜೀತಿ ಪಟ್ಟರು

    ಚಿಕ್ಕಬಳ್ಳಾಪುರ: ಟ್ರೆಕ್ಕಿಂಗ್ ಬಂದ ಮೂವರು ಯುವಕರು ಮಧ್ಯರಾತ್ರಿಯ ಕಗ್ಗತ್ತಲ್ಲಿ ಬೃಹದಾಕರದ ಬೆಟ್ಟ ಹತ್ತಿ ಬೆಳಕಾಗುತ್ತಿದಂತೆ ಬೆಟ್ಟದಿಂದ ಕೆಳಗಿಳಿಯಲಾಗದೇ ಫಜೀತಿ ಪಟ್ಟ ಘಟನೆ ಚಿಕ್ಕಬಳ್ಳಾಪುರ ದಿವ್ಯ ಗಿರಿಧಾಮದಲ್ಲಿ ನಡೆದಿದೆ.

    ಬೆಂಗಳೂರು ಮೂಲದ ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಕರ್ ಕುಮಾರ್, ಐಷು ಹಾಗೂ ಖಾಸಗಿ ಕಂಪನಿಯ ಉದ್ಯೋಗಿ ದೀಪಾಂಶು ಟ್ರೆಕ್ಕಿಂಗ್‍ಗೆ ಆಗಮಿಸಿ ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿಯಿಂದಾಗಿ ಸುರಕ್ಷಿತವಾಗಿ ಇಳಿದಿದ್ದಾರೆ.


    ನಡೆದಿದ್ದೇನು?
    ಮೂವರು ಯುವಕರು ಪಡೆದು ಮಧ್ಯರಾತ್ರಿ ಕಾರಹಳ್ಳಿ ಕ್ರಾಸ್ ಮಾರ್ಗದ ಮುಖಾಂತರ ಕಡಿದಾದ ದಿವ್ಯಗಿರಿ ಬೆಟ್ಟದ ಅರ್ಧಭಾಗಕ್ಕೆ ತೆರಳಿದ್ದಾರೆ. ಆದರೆ ಬೆಳಕಾಗುತ್ತಿದಂತೆ ಬೆಟ್ಟದಿಂದ ಕೆಳಗಿಳಿಯಲು ಯತ್ನಿಸಿದ ವೇಳೆ ಅವರಿಗೆ ತಾವು ಆಗಮಿಸಿದ್ದ ಸ್ಥಳ ನೋಡಿ ಶಾಕ್ ಆಗಿದೆ. ಬೆಟ್ಟ ಹತ್ತಿ ಕಡಿದಾದ ಜಾಗದಲ್ಲಿ ಕೂತಿದ್ದ ಅವರಿಗೆ ಬೆಳಿಗ್ಗೆ ಇಳಿಯಲು ಹೆದರಿಕೆಯಾಗಿದೆ. ಏಕೆಂದರೆ ಬೆಟ್ಟದ ತೀರ ಕಡಿದಾದ ಜಾಗಕ್ಕೆ ತೆರಳಿದ್ದ ಯುವಕರು ಒಂದು ಹೆಜ್ಜೆ ಮುಂದಿಟ್ಟರೂ ಅಪಾಯ ಕಾದಿತ್ತು. ಅಪಾಯದ ತೀವ್ರತೆ ಅರಿತ ಯುವಕರು ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ. ಈ ಯುವಕರ ಕಿರುಚಾಟ ಕೇಳಿಸಿಕೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಜೊತೆಗೂಡಿ ಯುವಕರ ರಕ್ಷಣೆ ಮಾಡಿದ್ದಾರೆ.

    ಮೂವರಲ್ಲಿ ದೀಪಾಂಶು ಚಾರಣದ ವೇಳೆ ಬಿದ್ದು ಗಾಯಗೊಂಡಿದ್ದು, ಮೊಣಕಾಲಿಗೆ ಗಂಭೀರವಾದ ಗಾಯವಾಗಿ ತೀವ್ರತರವಾದ ರಕ್ತಸ್ರಾವವಾಗಿದೆ. ಇದರಿಂದ ನಡೆಯಲು ಸಾಧ್ಯವಾಗದೇ ಸ್ಥಿತಿಗೆ ತಲುಪಿದ್ದ ಯುವಕನನ್ನು ಸಿಬ್ಬಂದಿ ಹೊತ್ತುಕೊಂಡು ರಕ್ಷಣೆ ಮಾಡಿದ್ದಾರೆ.

    ಚಾರಣಿಗರ ಹಾಟ್ ಸ್ಪಾಟ್: ಪಂಚಗಿರಿಗಿಳ ನಾಡು ಎಂದೇ ಪ್ರಸಿದ್ಧಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಬೆಟ್ಟಗುಡ್ಡಗಳು ಇತ್ತೀಚೆಗೆ ಟ್ರೆಕ್ಕಿಂಗ್ ಪ್ರಿಯರ ಹಾಟ್ ಫೇವರಿಟ್ ತಾಣಗಳಾಗಿ ಮಾರ್ಪಾಡಾಗಿವೆ. ಬೆಂಗಳೂರು ನಗರದಿಂದ ಕೂಗಳತೆ ದೂರದ ನಂದಿಗಿರಿಧಾಮಕ್ಕೆ ಹೊಂದಿಕೊಂಡಿರುವ ಬ್ರಹ್ಮಗಿರಿ, ದಿವ್ಯಗಿರಿ, ಚನ್ನಗಿರಿ ಸೇರಿದಂತೆ ಸ್ಕಂದಗಿರಿಗಳು ಈಗ ಟ್ರೆಕ್ಕಿಂಗ್ ತಾಣಗಳಾಗಿ ಮಾರ್ಪಾಡಾಗಿವೆ. ಸರ್ಕಾರವೂ ಕೂಡ ಸ್ಕಂದಗಿರಿ ಬೆಟ್ಟಕ್ಕೆ ಅಧಿಕೃತವಾಗಿ ಚಾರಣ ಆರಂಭಿಸಿ ಹಣ ಕೂಡ ಗಳಿಸುತ್ತಿದೆ. ಆದರೆ ಸ್ಕಂದಗಿರಿ ಬಿಟ್ಟು ಬೇರೆ ಯಾವ ಬೆಟ್ಟದಲ್ಲೂ ಚಾರಣ ಮಾಡುವಂತಿಲ್ಲ. ಇದರ ನಡುವೆಯೂ ಈ ಮೂವರು ಯುವಕರು ದಿವ್ಯಗಿರಿ ಬೆಟ್ಟಕ್ಕೆ ಸಾಗಿ ಅಪಾಯ ಎದುರಿಸಿದ್ದಾರೆ.

    ಸದ್ಯ ಗಾಯಾಳು ದೀಪಾಂಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅಕ್ರಮವಾಗಿ ಚಾರಣ ಕೈಗೊಂಡ ಹಿನ್ನಲೆ ನಂದಿಗಿರಿಧಾಮ ಪೊಲೀಸ್ ಠಾಣೆ ಸೇರಿದ್ದಾರೆ. ಹೀಗಾಗಿ ಚಾರಣ ಎಂದು ಬೆಟ್ಟಕ್ಕೆ ಹೋಗುವ ಮುನ್ನ ಒಮ್ಮೆ ಯೋಚಿಸಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನಲ್ಲಿ ಮತ್ತೆ ಮುಂದುವರಿದ ಮಳೆ: ಭಾಗಮಂಡಲ ಸಂಪೂರ್ಣ ಜಲಾವೃತ

    ಕೊಡಗಿನಲ್ಲಿ ಮತ್ತೆ ಮುಂದುವರಿದ ಮಳೆ: ಭಾಗಮಂಡಲ ಸಂಪೂರ್ಣ ಜಲಾವೃತ

    ಕೊಡಗು: ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಶಾಂತನಾಗಿದ್ದ ವರುಣ ಮಂಗಳವಾರದಿಂದ ಮತ್ತೆ ತನ್ನ ಆರ್ಭಟ ಶುರು ಮಾಡಿದ್ದಾನೆ.

    ಜಿಲ್ಲೆಯಾದ್ಯಂತ ಮಂಗಳವಾರದ ಬೆಳಗ್ಗಿನಿಂದಲೇ ಸಾಧಾರಣವಾಗಿಯೇ ಸುರಿಯುತ್ತಿದ್ದ ಮಳೆ ಸಂಜೆಯಾಗುತ್ತಲೇ ಬಿರುಸುಗೊಂಡಿದ್ದು, ಭಾರೀ ಗಾಳಿಯೊಂದಿಗೆ ಧಾರಾಕಾರವಾಗಿ ಸುರಿಯುತ್ತಿದೆ. ಮಡಿಕೇರಿಯಲ್ಲಿ ರಾತ್ರಿಯಿಡೀ ಎಡೆಬಿಡದೆ ಸುರಿದ ಮಳೆ ಈಗಲೂ ತನ್ನ ಅಬ್ಬರ ಮುಂದುವರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.

    ಬ್ರಹ್ಮಗಿರಿ ತಪ್ಪಲಿನಲ್ಲಿ ರಾತ್ರಿಯಿಡೀ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಕಾವೇರಿ, ಕನ್ನಿಕೆ ಹಾಗೂ ಸುಜೋತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ನೀರಿನ ಪ್ರಮಾಣ ಹೆಚ್ಚಾದ್ದರಿಂದ ಭಾಗಮಂಡಲ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತವಾಗಿದ್ದು, ಭಾಗಮಂಡಲ- ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ.

    ಇದೇ ರೀತಿ ಮಳೆ ಮುಂದುವರಿದರೆ ಮಡಿಕೇರಿ ತಲಕಾವೇರಿ ರಸ್ತೆ ಸಂಪರ್ಕ ಕಡಿತ ಸಾಧ್ಯತೆ ಇದ್ದು, ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಭೂಕುಸಿತದಿಂದಾಗಿ ನದಿಯಲ್ಲಿ ಕೊಚ್ಚಿ ಹೋದ ಅಡಿಕೆ ಬೆಳೆ

    ಭೂಕುಸಿತದಿಂದಾಗಿ ನದಿಯಲ್ಲಿ ಕೊಚ್ಚಿ ಹೋದ ಅಡಿಕೆ ಬೆಳೆ

    ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದಲ್ಲಿ ಭೂಕುಸಿತದಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

    ಪಶ್ಚಿಮ ಘಟ್ಟಗಳ ಸಾಲಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜಿಲ್ಲೆಯ ಕೊಪ್ಪ, ಕಳಸ, ಹೊರನಾಡು ಹಾಗೂ ಕುದುರೆಮುಖದ ಗುಡ್ಡಗಾಡು ಪ್ರದೇಶಗಳಿಂದ ನೀರು ಹರಿದು ಬರುತ್ತಿವೆ. ಮಳೆ ನೀರಿನಿಂದಾಗಿ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

    ಮೂಡಿಗೆರೆ ತಾಲೂಕಿನಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ನಾಲ್ಕು ವರ್ಷಗಳ ಬಳಿಕ ಹೇಮಾವತಿ ಕಳೆದೊಂದು ತಿಂಗಳಿಂದಲೂ ಮೈದುಂಬಿ ಹರಿಯುತ್ತಿದ್ದಾಳೆ. ನೀರಿನ ಹರಿವಿನ ಪ್ರಮಾಣ ಯಥೇಚ್ಛವಾಗಿರುವುದರಿಂದ ನದಿಪಾತ್ರದ ಜಮೀನಿನಲ್ಲಿ ಭೂಕುಸಿತ ಉಂಟಾಗಿದೆ. ಭೂಕುಸಿತದಿಂದಾಗಿ 30 ಕ್ಕೂ ಹೆಚ್ಚು ಅಡಿಕೆ ಮರಗಳು ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿವೆ.

    ನೀರು ತೋಟದ ದಡದ ಮಣ್ಣನ್ನ ಕೊರೆಯುತ್ತಿರುವುದರಿಂದ ಅಡಿಕೆ, ಕಾಫಿ ಹಾಗೂ ಮೆಣಸು ಬೆಳೆಗಳು ನಾಶಹೊಂದಿ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ. ಇನ್ನು ಅಪಾಯದಮಟ್ಟ ಮೀರಿ ಹರಿಯುತ್ತಿರುವ ಹೇಮಾವತಿ ನದಿಯಿಂದಾಗಿ ತೋಟದ ಮಾಲೀಕರು ಹಾಗೂ ಸ್ಥಳಿಯರಲ್ಲಿ ಆತಂಕ ಹೆಚ್ಚಾಗಿದೆ.

  • ಚಿಕನ್ ಪ್ರಿಯರೇ, ನೀವು ಕೋಳಿ ಮಾಂಸ ತಿನ್ನೋ ಮೊದಲು ಈ ಸ್ಟೋರಿ ಓದಿ

    ಚಿಕನ್ ಪ್ರಿಯರೇ, ನೀವು ಕೋಳಿ ಮಾಂಸ ತಿನ್ನೋ ಮೊದಲು ಈ ಸ್ಟೋರಿ ಓದಿ

    ನವದೆಹಲಿ: ಚಿಕನ್ ಪ್ರಿಯರೇ, ನೀವು ತಿನ್ನುವ ಕೋಳಿ ಮಾಂಸ ತುಂಬಾ ಅಪಾಯಕಾರಿ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.

    ಕೋಳಿಯಿಂದ ತಯಾರಿಸುವ ಬಿರಿಯಾನಿ, ಕಬಾಬ್, ಮಾಂಸ ಎಲ್ಲವು ತುಂಬಾ ಡೇಂಜರ್ ಆಗಿವೆ. ಕೋಳಿಗಳ ಬೆಳವಣಿಗೆ ಬೇಗವಾಗಬೇಕೆಂದು ಅವುಗಳಿಗೆ ಕಾಲಿಸ್ಟಿನ್ ಎಂಬ ಆ್ಯಂಟಿಬಯಾಟಿಕ್ಸ್ ಔಷಧವನ್ನು ನೀಡಲಾಗುತ್ತದೆ. ಆದ್ದರಿಂದ ಕೋಳಿ ಮಾಂಸ ಸೇವಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ವರದಿ ತಿಳಿಸಿದೆ.

    ಏನಿದು ವರದಿ?
    `ದಿ ಬ್ಯೂರೋ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸಂ’ ಎಂದು ಸಂಸ್ಥೆಯೊಂದು ಭಾರತದಲ್ಲಿ ಕೋಳಿ ಉದ್ಯಮದ ಕುರಿತು ತನಿಖೆ ನಡೆಸಿ ವರದಿಯೊಂದನ್ನು ಸಿದ್ಧ ಪಡಿಸಿದೆ. ಅದರ ಪ್ರಕಾರ ಕೋಳಿಗಳು ತ್ವರಿತ ಗತಿಯಲ್ಲಿ ಬೆಳೆಯಲಿ, ಅಧಿಕ ಲಾಭ ತಂದುಕೊಡಲಿ ಎಂಬ ಉದ್ದೇಶದಿಂದ ಅವುಗಳಿ ಕಾಲಿಸ್ಟಿನ್ ಔಷಧಿ ಕೊಡಲಾಗುತ್ತದೆ.

    ಕಾಲಿಸ್ಟಿನ್ ನನ್ನು ನ್ಯುಮೋನಿಯಾ ಮತ್ತು ಇತರೆ ಸೋಂಕು ರೋಗಗಳಿಗೆ ಚಿಕಿತ್ಸೆ ಕೊಡಲು ಬಳಸುವ ಔಷಧವಾಗಿದೆ. ಬೇರೆ ಯಾವ ಔಷಧದಿಂದ ರೋಗ ಗುಣವಾಗದು ಎಂದು ತಿಳಿದು ಬಂದಾಗ ಈ ಔಷಧವನ್ನು ನೀಡುತ್ತಾರೆ. ಆದ್ದರಿಂದ ಈ ಔಷಧವನ್ನು ಕಾಯಿಲೆ ಬಂದಾಗ ಮಾತ್ರ ಉಪಯೋಗಿಸಬೇಕು. ಕೋಳಿಗಳು ವೇಗವಾಗಿ ಬೆಳೆಯಲು ಈ ಔಷಧಿ ಕೊಡುವುದರಿಂದ ಅವುಗಳನ್ನು ತಿನ್ನುವ ನಮಗೂ ಕೂಡ ಆರೋಗ್ಯದಲ್ಲಿ ತೀವ್ರ ಪರಿಣಾಮ ಬೀರುತ್ತದೆ.

    ತಜ್ಞರು ಹೇಳೋದು ಏನು?
    ಈ ಔಷಧಿಯನ್ನು ತುಂಬಾ ಗಂಭೀರವಾದ ಅನಾರೋಗ್ಯಸ್ಥರಿಗೆ ಮಾತ್ರ ಉಪಯೋಗಿಸುತ್ತಾರೆ. ಆದರೆ ಬೇರೆ ಸಂದರ್ಭದಲ್ಲಿ ಅದನ್ನು ಬಳಸಿದರೆ ಅದು ವಿಷವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆ ಔಷಧಿಯನ್ನು ದೇಶಾದ್ಯಂತ ಕೋಳಿಗಳಿಗಾಗಿ ರಫ್ತು ಮಾಡಲಾಗುತ್ತದೆ. ಅದನ್ನು ಮೊದಲು ತಡೆಗಟ್ಟಬೇಕು ಎಂದು ತಜ್ಞರು ಹೇಳಿದ್ದಾರೆ.

  • ಕಬ್ಬನ್ ಪಾರ್ಕ್ ಬಳಿ ಹೋಗುವಾಗ ಎಚ್ಚರ- ಡೇಂಜರ್ ಸ್ಪಾಟ್ ಗುರುತಿಸಿದೆ ತೋಟಗಾರಿಕಾ ಇಲಾಖೆ

    ಕಬ್ಬನ್ ಪಾರ್ಕ್ ಬಳಿ ಹೋಗುವಾಗ ಎಚ್ಚರ- ಡೇಂಜರ್ ಸ್ಪಾಟ್ ಗುರುತಿಸಿದೆ ತೋಟಗಾರಿಕಾ ಇಲಾಖೆ

    ಬೆಂಗಳೂರು: ಕಬ್ಬನ್ ಪಾರ್ಕ್ ಮತ್ತು ಸುತ್ತ ಮುತ್ತಲಿನ ಹಡ್ಸನ್ ರಸ್ತೆಯಲ್ಲಿ ಸಂಚರಿಸುವವರು ಇನ್ಮುಂದೆ ಎಚ್ಚರಿಕೆಯಿಂದ ಸಂಚರಿಸಿ. ಯಾಕಂದ್ರೆ ರಾಜ್ಯ ತೋಟಗಾರಿಕ ಇಲಾಖೆ ಈ ಸ್ಥಳವನ್ನು ಡೇಂಜರ್ ಸ್ಪಾಟ್ ಎಂದು ಗುರುತಿಸಿದೆ.

    ಕಬ್ಬನ್ ಪಾರ್ಕ್‍ನ ಸುತ್ತಲು ಸುಮಾರು 90ಕ್ಕೂ ಹೆಚ್ಚು ವಯಸ್ಸಾದ ಮರಗಳನ್ನು ಗುರುತಿಸಿದ್ದು, ಅವುಗಳ ತೆರವಿಗೆ ಅನುಮತಿಗಾಗಿ ಕಾದು ಕುಳಿತಿದೆ. ಆದರೆ ಅನುಮತಿ ಪತ್ರ ಮಾತ್ರ ಇನ್ನೂ ಲಭಿಸಿಲ್ಲ. ಮರ ಕಡಿಯೋದಕ್ಕೆ ಅನುಮತಿ ಇಲ್ಲದೆ ಕಬ್ಬನ್ ಪಾರ್ಕ್ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಎರಡು ತಿಂಗಳಿಂದ ಅನುಮತಿ ಗಾಗಿ ಬಿಬಿಎಂಪಿ ಅರಣ್ಯ ಇಲಾಖೆಗೆ ಪತ್ರ ಬರೆದಿದ್ರೂ ಇಲಾಖೆ ಸ್ಪಂದಿಸಿಲ್ಲ. ಅರಣ್ಯ ಇಲಾಖೆ ಮತ್ತು ತೋಟಗಾರಿಕಾ ಘಟಕಗಳ ನಡುವೆ ನಡೆಯುತ್ತಿರುವ ಶೀತಲ ಸಮರವೇ ಅನುಮತಿ ಪತ್ರ ತಡವಾಗಲು ಕಾರಣ ಎನ್ನಲಾಗಿದೆ.

    ವಯಸ್ಸಾದ ಹಾಗೂ ಅಪಾಯಕಾರಿ ಮರಗಳನ್ನು ಗುರುತಿಸಲು ಸಮಿತಿಯನ್ನು ನೇಮಕ ಮಾಡಲಾಗಿದ್ದು, ಈ ಕುರಿತು ವರದಿಯನ್ನು ನೀಡಲಾಗಿದೆ. ಪ್ರತಿ ದಿನ ಸಾವಿರಾರು ಜನ ಪಾರ್ಕ್‍ಗೆ ಭೇಟಿ ನೀಡುತ್ತಾರೆ. ಅಲ್ಲದೇ ಲಕ್ಷಾಂತರ ವಾಹನ ಸವಾರರು ಪಾರ್ಕ್‍ನ ಆರು ಗೇಟ್‍ಗಳ ಸುತ್ತಲು ಸಂಚಾರಿಸುತ್ತಾರೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ ಕಬ್ಬನ್ ಪಾರ್ಕ್ ಅಧಿಕಾರಿಗಳು.