Tag: ಅಪಹರಣ

  • ಪ್ರಿಯಕರನ ಜೊತೆಗೂಡಿ ಸಹಪಾಠಿಯನ್ನೇ ಅಪಹರಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿನಿ

    ಪ್ರಿಯಕರನ ಜೊತೆಗೂಡಿ ಸಹಪಾಠಿಯನ್ನೇ ಅಪಹರಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿನಿ

    ಬೆಳಗಾವಿ: ಹಣಕ್ಕಾಗಿ ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಸಹಪಾಠಿಯನ್ನೇ ಅಪಹರಿಸಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ವಿದ್ಯಾರ್ಥಿನಿಯನ್ನು ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬೆಳಗಾವಿಯ ಜಿಐಟಿ ಕಾಲೇಜಿನ 23 ವರ್ಷದ ವಿದ್ಯಾರ್ಥಿನಿ ಅರ್ಪಿತಾ ನಾಯಕ್ ಕಿಡ್ನಾಪ್ ಆಗಿದ್ದ ವಿದ್ಯಾರ್ಥಿನಿ. 17ನೇ ತಾರೀಖಿನಂದು ರಾತ್ರಿ ಅರ್ಪಿತಾ ಊಟಕ್ಕೆಂದು ಸ್ನೇಹಿತೆ ದಿವ್ಯಾ ಮಲಘಾಣ ಜೊತೆ ತೆರಳಿದ್ದರು. ಈ ವೇಳೆ ದಿವ್ಯಾ ಹಾಗೂ ಆಕೆಯ ಪ್ರಿಯತಮನಾದ ಗದಗ ಮೂಲದ ಕೇಧಾರಿ ಇಬ್ಬರೂ ಸೇರಿ ಅರ್ಪಿತಾರನ್ನ ಕಿಡ್ನ್ಯಾಪ್ ಮಾಡಿದ್ದರು.

    ಎಳನೀರಲ್ಲಿ ನಿದ್ದೆ ಮಾತ್ರೆ ಹಾಕಿ ಕುಡಿಸಿ, ಕ್ಲೋರೋಫಾರ್ಮ್ ಮೂಗಿಗೆ ಒತ್ತಿ ಅರ್ಪಿತಾ ಪ್ರಜ್ಞೆ ತಪ್ಪುವಂತೆ ಮಾಡಿ ಅಪಹರಿಸಿದ್ದರು. ನಂತರ ಟಾಟಾ ಇಂಡಿಕಾ ಕಾರಿನಲ್ಲಿ ಅರ್ಪಿತಾರನ್ನು ಕರೆದುಕೊಂಡು ಹೋಗಿ ಗದಗದಲ್ಲಿ ಆಕೆಯನ್ನು ಬಚ್ಚಿಟ್ಟಿದ್ದರು. ಎಚ್ಚರವಾದಾಗ ತಾಯಿಗೆ ಕರೆ ಮಾಡಿ ತನ್ನನ್ನು ಅಪಹರಿಸಲಾಗಿದೆ ಅಂತ ಅರ್ಪಿತಾ ಹೇಳಿದ್ದರು. ಬಳಿಕ ಅರ್ಪಿತಾ ಮನೆಯವರು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಐವರು ಪೊಲೀಸರ ವಿಶೇಷ ತಂಡದಿಂದ ಯುವತಿಯ ಪತ್ತೆ ಕಾರ್ಯ ನಡೆದಿತ್ತು. ಇದೀಗ ಗದಗದಲ್ಲಿ ಯುವತಿ ಪತ್ತೆಯಾಗಿದ್ದು, ಆಕೆಯನ್ನು ರಕ್ಷಿಸಿ ಪೊಲೀಸರು ಬೆಳಗಾವಿಗೆ ಕರೆತರುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದಿವ್ಯಾ, ಕೇಧಾರಿ, ಕಾರು ಚಾಲಕ ಸುಮೀತ ಗಂಗಪ್ಪ ಅಲಿಯಾಸ್ ಬಬ್ಲುವನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 5 ಕೋಟಿ ರೂ. ಹಣ ವಸೂಲಿ ಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಅಪಹರಣಕ್ಕೆ ಬಳಸಿದ ಇಂಡಿಕಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  • ಎಟಿಎಂನಿಂದ ಹಣ ಡ್ರಾ ಮಾಡಿ ಹೊರಬಂದ ವ್ಯಕ್ತಿ ಅಪಹರಣ!

    ಎಟಿಎಂನಿಂದ ಹಣ ಡ್ರಾ ಮಾಡಿ ಹೊರಬಂದ ವ್ಯಕ್ತಿ ಅಪಹರಣ!

    ಬೆಂಗಳೂರು: ಪೊಲೀಸ್ ಸ್ಟೇಷನ್ ಕೂಗಳತೆ ದೂರದಲ್ಲೇ ವ್ಯಕ್ತಿಯನ್ನು ಅಪಹರಣ ಮಾಡಿರೋ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

    ಮಾರುತಿ ಅಪಹರಣಕ್ಕೊಳಗಾದ ವ್ಯಕ್ತಿ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಮೆಕ್ಯಾನಿಕ್ ಆಗಿ ಮಾರುತಿ ಕೆಲಸ ಮಾಡ್ತಾ ಇದ್ದರು. ಸ್ನೇಹಿತ ಹಣ ಕೇಳಿದ್ದರಿಂದ ಹಣ ಡ್ರಾ ಮಾಡಲೆಂದು ಎಟಿಎಂಗೆ ಹೋಗಿದ್ದರು. ಅಂತೆಯೇ ಹಣ ಡ್ರಾ ಮಾಡಿ ಹೊರ ಬರುತ್ತಿದ್ದಂತೆಯೇ ಕಾರಲ್ಲಿ ಬಂದ ದುಷ್ಕರ್ಮಿಗಳು ಮಾರುತಿ ಅವರನ್ನು ಅಪಹರಣ ಮಾಡಿದ್ದಾರೆ.

    ಕಾರಿನಲ್ಲಿ ನಾಲ್ವರು ಅಪಹರಣಕಾರರು ಇದ್ದರು ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಡ್ಡಹೆಸರಿನಿಂದ ಎಡವಟ್ಟು: ಅಮಾಯಕ ಯುವಕನನ್ನ ಅಪಹರಿಸಿ ಹಲ್ಲೆ!

    ಅಡ್ಡಹೆಸರಿನಿಂದ ಎಡವಟ್ಟು: ಅಮಾಯಕ ಯುವಕನನ್ನ ಅಪಹರಿಸಿ ಹಲ್ಲೆ!

    ಬೆಳಗಾವಿ: ಅಡ್ಡಹೆಸರಿನ ತಪ್ಪು ಗ್ರಹಿಕೆಯಿಂದ ಯುವಕನೊಬ್ಬನನ್ನು ಅಪಹರಿಸಿ ಹಲ್ಲೆ ನಡೆಸಿದ ಘಟನೆಯೊಂದು ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.

    ಹಲ್ಲೆಗೊಳಗಾದವನನ್ನು ಟಿಳಕವಾಡಿಯ ರೋಷನ್ ಅಲಿಯಾಸ್ ಟವರ್ ಎಂದು ಗುರುತಿಸಲಾಗಿದೆ. ಟಿಳಕವಾಡಿಯಲ್ಲಿ ಟವರ್ ಅನ್ನೋ ಅಡ್ಡಹೆಸರು ಇರುವ ಇಬ್ಬರು ವ್ಯಕ್ತಿಗಳಿದ್ದಾರೆ. ಬೇರೊಬ್ಬ ಟವರ್ ಹೆಸರಿನ ಯುವಕನನ್ನು ಅಪಹರಿಸಲು ಸ್ಕೇಚ್ ರೂಪಿಸಿದ್ದ ದುಷ್ಕರ್ಮಿಗಳು ಇದೇ ಅಡ್ಡಹೆಸರು ಇರೋ ಅಮಾಯಕ ಯುವಕ ರೋಷನ್‍ನನ್ನು ಬೆಳಗಾವಿಯ ಆರ್.ಪಿ.ಡಿ ಕಾಲೇಜು ಬಳಿಯಿಂದ ಅಪಹರಿಸಿ ಹಲ್ಲೆ ಮಾಡಿದ್ದಾರೆ.

    ಸದ್ಯ ಹಲ್ಲೆಗೊಳಗಾದ ಟವರ್ ಅಲಿಯಾಸ್ ರೋಷನ್ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಘಟನೆ ಸಂಬಂಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಿಮ್ಸ್ ನಲ್ಲಿ ನಾಪತ್ತೆಯಾಗಿದ್ದ ನವಜಾತ ಗಂಡು ಮಗು ಪತ್ತೆ

    ರಿಮ್ಸ್ ನಲ್ಲಿ ನಾಪತ್ತೆಯಾಗಿದ್ದ ನವಜಾತ ಗಂಡು ಮಗು ಪತ್ತೆ

    ರಾಯಚೂರು: ನಗರದ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ನಾಪತ್ತೆಯಾಗಿದ್ದ ನವಜಾತ ಗಂಡು ಶಿಶು ಕೊನೆಗೂ ಪತ್ತೆಯಾಗಿದೆ. ಹಣದ ಆಸೆಗೆ ಶಿಶುವನ್ನ ಕದ್ದಿದ್ದ ಹಾಗೂ ಮಗುವನ್ನ ಪಡೆದಿದ್ದ ಆರೋಪಿಗಳನ್ನ ಬಂಧಿಸಲಾಗಿದೆ.

    ಮಾರ್ಚ್ 28 ರಂದು ಆಸ್ಪತ್ರೆಯಲ್ಲಿ ಕಾಣೆಯಾಗಿದ್ದ ಮಗು ಒಂದು ವಾರದ ಬಳಿಕ ನಗರದ ಜಲಾಲನಗರದಲ್ಲಿ ಪತ್ತೆಯಾಗಿದೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವನ್ನ ಬಂಡವಾಳ ಮಾಡಿಕೊಂಡ ಆಟೋಚಾಲಕ ಚಾಂದ್ ಪಾಶ, ಶಿಶುವನ್ನ ಕದ್ದು 50 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ. ಸುಮಾರು ವರ್ಷಗಳಿಂದ ಮಕ್ಕಳಾಗದ ಜಲಾಲನಗರದ ಇಂದ್ರಮ್ಮ ಗಂಡು ಮಗುವನ್ನ ಖರೀದಿ ಮಾಡಿದ್ದರು. ಈಗ ಈ ಇಬ್ಬರೂ ಪೊಲೀಸರ ಅಥಿತಿಗಳಾಗಿದ್ದಾರೆ. ಆದ್ರೆ ಆಸ್ಪತ್ರೆಯಲ್ಲಿ ಮಗುವನ್ನ ಚಾಂದ್‍ಪಾಶ ಕೈಗೆ ಯಾರು ಕೊಟ್ಟರು ಅನ್ನೋ ಬಗ್ಗೆ ತನಿಖೆ ಮುಂದುವರೆದಿದೆ.

    ದೇವದುರ್ಗದ ಮಲ್ಲಾಪುರ ಗ್ರಾಮದ ಯಲ್ಲಮ್ಮ ತಿಮ್ಮಣ್ಣ ದಂಪತಿಯ ಮೂರು ದಿನದ ನವಜಾತ ಶಿಶುವನ್ನ ಆಸ್ಪತ್ರೆಯಿಂದಲೇ ಕಳ್ಳತನ ಮಾಡಲಾಗಿತ್ತು. ಘಟನೆ ಹಿನ್ನೆಲೆಯಲ್ಲಿ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಶಿಶು ಅಪಹರಣದ ಬಗ್ಗೆ ಪ್ರಕರಣ ದಾಖಲಾಗಿತ್ತು.

    ಈಗ ಪತ್ತೆಯಾಗಿರುವ ಶಿಶು ಆರೋಗ್ಯವಾಗಿದ್ದು ರಿಮ್ಸ್ ಆಸ್ಪತ್ರೆಯ ಸೂಕ್ಷ್ಮ ನಿಗಾ ಘಟಕದಲ್ಲಿಡಲಾಗಿದೆ.

    https://www.youtube.com/watch?v=aIVf7pjbNXQ

  • ವೀಡಿಯೋ: ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಬಾಲಕನನ್ನು ಬಿಟ್ಟು ಮತ್ತೊಬ್ಬ ಬಾಲಕನ ಅಪಹರಣ

    ವೀಡಿಯೋ: ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಬಾಲಕನನ್ನು ಬಿಟ್ಟು ಮತ್ತೊಬ್ಬ ಬಾಲಕನ ಅಪಹರಣ

    ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬಂದ ಅಪ್ತಾಪ್ತ ಬಾಲಕನನ್ನು ಆಟೋ ಡ್ರೈವರ್ ವೇಷದಲ್ಲಿ ಬಂದ ವ್ಯಕ್ತಿ, ಮತ್ತೊಂದು ಮಗುವನ್ನು ಬಳಸಿ ಅಪಹರಿಸಿಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಮಾರ್ಚ್ 21 ರಂದು ಕಿಮ್ಸ್ ಹೊರರೋಗಿಗಳ ವಿಭಾಗದಲ್ಲಿ ಈ ಘಟನೆ ನಡೆದಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದ 5 ವರ್ಷದ ಬಾಲಕ ಮೆಹಬೂಬ್ ಸಾಬ್ ಕಣಕೆ ಎಂಬಾತನೇ ಅಪಹರಣಕ್ಕೊಳಗಾಗಿರುವ ಬಾಲಕ.

    ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಕನನ್ನ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದ್ರೆ ಚೀಟಿ ಮಾಡಿಸುವಾಗ ಬಾಲಕ ಆಟವಾಡುತ್ತಾ ಆಸ್ಪತ್ರೆಯಿಂದ ಹೊರಗಡೆ ಬಂದಿದ್ದಾನೆ. ಆಗ ಅಟೋ ಚಾಲಕನ ವೇಷದಲ್ಲಿ ಬಂದ ವ್ಯಕ್ತಿ ಮತ್ತೊಬ್ಬ ಬಾಲಕನನ್ನು ಕರೆತಂದು ಮೆಹಬೂಬ್ ಸಾಬ್‍ನನ್ನು ಅಪಹರಿಸಿದ್ದಾನೆ.

    ಮೊದಲು ಆಟೋ ಚಾಲಕನ ಜೊತೆ ಬಂದ ಬಾಲಕ ಮೆಹಬೂಬ್ ಸಾಬ್ ಜೊತೆಗೆ ಆಟವಾಡಿದ್ದಾನೆ. ಬಳಿಕ ಹೊರ ರೋಗಿಗಳ ವಿಭಾಗದಿಂದ ಮೆಹಬೂಬ್ ಸಾಬ್‍ನ ಕೈ ಹಿಡಿದುಕೊಂಡು ಹೊರಗಡೆ ಕರೆದುಕೊಂಡು ಬಂದಿದ್ದಾನೆ. ಬಳಿಕೆ ಅದೇ ಆಟೋ ಚಾಲಕ ಮಗುವನ್ನು ಕರೆದುಕೊಂಡು ಹೋಗಿದ್ದಾನೆ. ಬಾಲಕ ಮೆಹಬೂಬ್‍ನನ್ನ ಆಟೋ ಚಾಲಕನ ವೇಷಧಾರಿ ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ವಿದ್ಯಾನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೆÇಲೀಸರು ಬಾಲಕನಿಗಾಗಿ ಹಡುಕಾಟ ಆರಂಭಿಸಿದ್ದಾರೆ.

    ಈ ಘಟನೆಗೆ ಕಿಮ್ಸ್ ಆಸ್ಪತ್ರೆಯ ಭದ್ರತೆಯ ಕೊರತೆಯೇ ಕಾರಣ ಎಂದು ಆರೋಪಿಸಲಾಗುತ್ತಿದೆ. ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ನರ್ಸ್ ಸೋಗಿನಲ್ಲಿ ಬಂದ ಮಹಿಳೆಯೊಬ್ಬಳು ನವಜಾತ ಶಿಶುವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಳು. ಇದೀಗ 5 ವರ್ಷದ ಬಾಲಕನನ್ನು ಅಪಹರಿಸಿಕೊಂಡು ಹೋಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    https://www.youtube.com/watch?v=zgFE8ASevDI

  • ಸೋದರಮಾವನಿಂದಲೇ ಅಪ್ರಾಪ್ತೆಯ ಅಪಹರಣ!

    ಸೋದರಮಾವನಿಂದಲೇ ಅಪ್ರಾಪ್ತೆಯ ಅಪಹರಣ!

    ಯಾದಗಿರಿ: ಶಹಾಪೂರ ತಾಲೂಕಿನ ಗೊಂದೆನೂರು ಗ್ರಾಮದಲ್ಲಿ ಸೋದರಮಾವನೇ ಅಪ್ರಾಪ್ತ ಬಾಲಕಿಯನ್ನು ಅಪಹರಣಗೈದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

    ಕೊಂಕಲ ಗ್ರಾಮದ ನಿವಾಸಿ ಬಸವರಾಜ(45) ಬಾಲಕಿಯನ್ನು ಅಪಹರಿಸಿದ ವ್ಯಕ್ತಿ. ಗೊಂದೆನೂರು ಗ್ರಾಮದ ಜಮೀನಿನ ಮನೆಯೊಂದರಲ್ಲಿ ಕಳೆದ ಎರಡು ವರ್ಷಗಳಿಂದ ವಾಸವಾಗಿದ್ದ ಬಸವರಾಜನಿಗೆ ಈಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳು ಇವೆ. ಬಾಲಕಿಯನ್ನು ಪ್ರೀತಿಯ ಜಾಲದಲ್ಲಿ ಹಾಕಿ ಅಪಹರಿಸಿಕೂಂಡು ಹೋಗಿದ್ದಾನೆ ಅಂತ ಬಾಲಕಿಯ ಪೋಷಕರ ಹೇಳಿದ್ದಾರೆ.

    ಬಾಲಕಿಯು ಶಹಾಪೂರದಲ್ಲಿ ಪ್ರಥಮ ಪಿಯುಸಿ ಓದು ತ್ತಿದ್ದಳು, ಫೆಭ್ರುವರಿ 18 ರಂದು ಕಾಲೇಜಿಗೆ ಬಂದಾಗ ಶಹಾಪೂರದಿಂದಲೇ ಕಿಡ್ನಾಪ್ ಮಾಡಿಕೂಂಡು ಹೋಗಿದ್ದಾನೆ ಅಂತ ಬಾಲಕಿಯ ಪೋಷಕರು ದೂರಿದ್ದಾರೆ. ಇನ್ನು ಅಪಹರಣ ಮುನ್ನಾದಿನವೇ ನಿನ್ನನ್ನು ಇಷ್ಟಪಟ್ಟಿದೆನೆ. ನಾನೇ ಮದುವೆ ಮಾಡಿಕೂಳ್ಳುತ್ತೇನೆ ಅಂತಾ ಸೋದರಮಾವ ಬಸವರಾಜ ಬಾಲಕಿಗೆ ಹೇಳಿದ್ದಾನೆ. ಮಾರನೆ ದಿನವೆ ಬಾಲಕಿಯನ್ನು ಅಪಹರಿಸಿಕೂಂಡು ಹೋಗಿದ್ದಾನೆ. ಈ ಕುರಿತು ಬಾಲಕಿಯ ತಂದೆ ಫೆಬ್ರವರಿ 18 ರಂದು ವಡಗೇರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಆರಂಭದಲ್ಲಿ ಪೊಲೀಸರು ಕಿಡ್ನಾಪ್ ಪ್ರಕರಣದ ದೂರು ದಾಖಲು ಮಾಡಿಕೂಂಡಿರಲಿಲ್ಲ. ಬಾಲಕಿಯನ್ನು ಹುಡಿಕಿ ಕೂಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಭರವಸೆ ನೀಡಿದಂತೆ ಪೊಲೀಸರು ಹುಡುಕಾಡಿದರೂ ಬಾಲಕಿ ಬಗ್ಗೆ ಸುಳಿವು ಸಿಗಲಿಲ್ಲ. ಹೀಗಾಗಿ ಮಾರ್ಚ್ 17 ರಂದು ವಡಗೇರಾ ಪೊಲಿಸರು ಕಿಡ್ನಾಪ ಪ್ರಕರಣ ದಾಖಲಿಸಿಕೂಂಡು ಆರೋಪಿ ಬಂಧನಕ್ಕೆ ವ್ಯಾಪಕವಾಗಿ ಜಾಲ ಬಿಸಿದ್ದಾರೆ. ಈ ಪ್ರಕರಣದಲ್ಲಿ ಇದು ಒನ್ ಸೈಡ್ ಲವ್ ಅಥವಾ ಬಾಲಕಿಯು ಕೂಡ ಆತನನ್ನು ಪ್ರೀತಿ ಮಾಡುತ್ತಿದ್ದಾಳಾ ಎಂಬುವದು ಪೊಲೀಸರು ತನಿಖೆ ಬಳಿಕ ಗೊತ್ತಾಗಲಿದೆ.

    ಮಗಳನ್ನು ಪತ್ತೆ ಹಚ್ಚಿ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ವಿಳಂಬವಾದ್ರೆ ಕುಟುಂಬ ಸಮೇತ ವಡಗೆರಾ ಪೊಲೀಸ್ ಠಾಣೆ ಎದರುಗಡೆ ಅಮರಣಾಂತ ಸತ್ಯಾಗ್ರಹ ಮಾಡುವದಾಗಿ ಎಚ್ಚರಿಕೆ ನೀಡಿದೆ.

  • ಉಡುಪಿ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಪ್ರಕರಣ- ಏಳು ಮಂದಿ ಚಿನ್ನ ಚೋರರು ಅಂದರ್!

    ಉಡುಪಿ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಪ್ರಕರಣ- ಏಳು ಮಂದಿ ಚಿನ್ನ ಚೋರರು ಅಂದರ್!

    ಉಡುಪಿ: ಭಾರೀ ಕುತೂಹಲ ಕೆರಳಿಸಿದ್ದ ಇಲ್ಲಿನ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಮತ್ತು ದರೋಡೆ ಕೇಸನ್ನು ಪೊಲೀಸರು ಬೇಧಿಸಿದ್ದಾರೆ. ಒಂದೂವರೆ ಕೆಜಿ ಚಿನ್ನದ ಜೊತೆ ಎರಡೂವರೆ ಲಕ್ಷ ರೂಪಾಯಿ ದೋಚಿ ತಲೆಮರೆಸಿಕೊಂಡಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಚಿನ್ನದ ವ್ಯಾಪಾರಿ ಅಂತ ಪೊಲೀಸರ ಎದುರು ಪೋಸು ನೀಡಿದ್ದ ವ್ಯಕ್ತಿ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಿನ್ನದೊಂದಿಗೆ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಪ್ರಕರಣಕ್ಕೆ ಪೊಲೀಸರು ಅಂತ್ಯ ಹಾಡಿದ್ದಾರೆ. ಕೇರಳದ ತ್ರಿಶೂರ್ ನ ಚಿನ್ನದ ವ್ಯಾಪಾರಿ ದಿಲೀಪ್ ದರೋಡೆ ಮಾಡಿದ ಕೇಸಲ್ಲಿ ಏಳು ಮಂದಿ ಆರೋಪಿಗಳು ಅಂದರ್ ಆಗಿದ್ದಾರೆ.

    ಏನಿದು ಪ್ರಕರಣ?: ಮಾರ್ಚ್ 17ರಂದು ಉಡುಪಿಯ ಪೆರ್ಡೂರಿನ ಗಾಯತ್ರಿ ಜ್ಯುವೆಲ್ಲರ್ಸ್‍ಗೆ ಚಿನ್ನದ ಆಭರಣಗಳನ್ನು ಕೊಟ್ಟು ಚಿನ್ನದ ವ್ಯಾಪಾರಿ ಉಡುಪಿ ನಗರಕ್ಕೆ ಬರ್ತಾಯಿದ್ರು. ದಿಲೀಪ್ ಪ್ರಯಾಣ ಮಾಡುತ್ತಿದ್ದ ಬಸ್ಸನ್ನು ಹತ್ತಿದ ದುಷ್ಕರ್ಮಿಗಳು ತಲೆಗೆ ಪಿಸ್ತೂಲ್ ಹಿಡಿದು ಬಸ್ಸಿನಿಂದ ಕೆಳಗೆ ಇಳಿಸಿದ್ದಾರೆ. ಬಳಿಕ ಸುಮಾರು 40 ಕಿಲೋಮೀಟರ್ ದೂರದ ಪಡುಬಿದ್ರೆ ಎಂಬಲ್ಲಿಗೆ ದಿಲೀಪ್‍ರನ್ನು ಕರೆದುಕೊಂಡು ಹೋಗಿ ಚಿನ್ನದ ಜೊತೆ ಸುಮಾರು ಎರಡೂವರೆ ಲಕ್ಷ ರೂಪಾಯಿಯನ್ನು ಕಸಿದುಕೊಂಡು ವ್ಯಾಪಾರಿಯನ್ನು ಪೊದೆಗೆ ಎಸೆದು ಪರಾರಿಯಾಗಿದ್ದರು. ಚಿನ್ನದ ಜೊತೆ ಹಣವನ್ನು ಕಳೆದುಕೊಂಡ ದಿಲೀಪ್ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಚಿನ್ನ ದೋಚಿ ಬಿಟ್ಟು ಪರಾರಿಯಾದ ಸ್ಥಳವನ್ನು ಪಡುಬಿದ್ರೆ ಮತ್ತು ಕಾಪು ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೆರ್ಡೂರಿನ ಹರಿಕೃಷ್ಣ ಭಟ್ ದರೋಡೆಯ ಪ್ರಮುಖ ಆರೋಪಿ ಆರೋಪಿಯಾಗಿದ್ದು, ಕಿಡ್ನ್ಯಾಪ್‍ಗೆ ಸಹಕರಿಸಿದ ಕುಂದಾಪುರದ ಜಾವೆದ್, ಅಶ್ರಫ್, ಇಲಾಹಿತ್, ರವಿಚಂದ್ರ, ಸುಮಂತ್ ನನ್ನು ಅರೆಸ್ಟ್ ಮಾಡಿದ್ದಾರೆ.

    ಹರಿಕೃಷ್ಣ ಎಂಬುವವನ ಜ್ಯುವೆಲ್ಲರಿ ಶಾಪ್‍ಗೆ ದಿಲೀಪ್ ಹಲವಾರು ವರ್ಷಗಳಿಂದ ಚಿನ್ನದಾಭರಣಗಳನ್ನು ಸಪ್ಲೈ ಮಾಡ್ತಾಯಿದ್ದ. ಈ ಬಾರಿ ಆತನನ್ನೇ ದರೋಡೆ ಮಾಡಲು ಯತ್ನಿಸಲಾಯ್ತು. ಆದ್ರೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಪ್ರಕರಣ ಹೊರಗೆ ಬಂತು. ಇದರ ಜೊತೆ ಕಾನೂನು ಬಾಹಿರವಾಗಿ ಯಾವುದೇ ಬಿಲ್ ಇಲ್ಲದ, ಟ್ಯಾಕ್ಸ್ ಕಟ್ಟದ ಚಿನ್ನಾಭರಣಗಳನ್ನು ಮಾರಾಟ ಮಾಡುವುದು ಅಪರಾಧ. ಹೀಗಾಗಿ ಕೇರಳ ಮೂಲದ ವ್ಯಕ್ತಿಯ ಮೇಲೂ ಪ್ರಕರಣ ದಾಖಲು ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ ಬಾಲಕೃಷ್ಣ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಕೂತಲ್ಲೇ ಸುಲಭದಲ್ಲಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ಬಹುದು ಎಂಬ ಉದ್ದೇಶದಿಂದ ಆರೋಪಿಗಳೆಲ್ಲಾ ಸ್ಕೆಚ್ ಹೆಣೆದಿದ್ದರು. ಪ್ರಕರಣದಲ್ಲಿ ಇನ್ನಷ್ಟು ಮಂದಿ ಕೈವಾಡವಿದ್ದು ಐಡಿಯಾ ಕೊಟ್ಟು ಪ್ಲ್ಯಾನ್ ರೂಪಿಸಿದ್ದ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರ ತಂಡ ಆ ವ್ಯಕ್ತಿಗಾಗಿ ಬಲೆ ಬೀಸಿದ್ದಾರೆ.

     

  • ನವವಿವಾಹಿತೆ ಅಪಹರಣ: ಆರೋಪಿ ಮನೆಗೆ ನುಗ್ಗಿ ಯುವತಿ ಪೋಷಕರಿಂದ ಹಲ್ಲೆ

    ನವವಿವಾಹಿತೆ ಅಪಹರಣ: ಆರೋಪಿ ಮನೆಗೆ ನುಗ್ಗಿ ಯುವತಿ ಪೋಷಕರಿಂದ ಹಲ್ಲೆ

    ರಾಯಚೂರು: ನವವಿವಾಹಿತೆಯನ್ನ ಅಪಹರಿಸಿರುವ ಪ್ರಕರಣ ಹಿನ್ನೆಲೆ ಯುವತಿ ಮನೆಯವರು ಆರೋಪಿ ಮನೆಗೆ ನುಗ್ಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಕರಡಚಿಲಮಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಐವರಿಗೆ ಗಾಯಗಳಾಗಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ.

    ಗ್ರಾಮದ ಹನುಮಂತ್ ಎಂಬ ಯುವಕ ಮದುವೆಯಾಗಿ 9 ದಿನಗಳ ಕಳೆದಿದ್ದ ನವವಿವಾಹಿತೆ ಸಿದ್ದಮ್ಮಳನ್ನ ಅಪಹರಿಸಿರುವ ಕುರಿತು ತುರವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ ಮೂರು ದಿನಗಳಿಂದ ಹನುಮಂತ ಹಾಗೂ ಯುವತಿಯ ಸುಳಿವು ಸಿಗದ ಹಿನ್ನೆಲೆಯಲ್ಲಿ ಯುವತಿ ಮನೆಯವರು ಆಕ್ರೋಶಗೊಂಡು ಸುಮಾರು 8 ಜನರ ತಂಡದೊಂದಿಗೆ ಹನುಮಂತನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ.

    ಘಟನೆಯಲ್ಲಿ ಹನುಮಂತನ ಕುಟುಂಬಸ್ಥರಾದ ಮಹಾಲಿಂಗರಾಯ ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಲಿಂಗಮ್ಮ, ಸರಸ್ವತಿ ಎಂಬುವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಮುಂದುವರೆದಿದೆ. ತುರವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

     

  • ಶಾಕಿಂಗ್: ಅಪಹರಣ, ಅತ್ಯಾಚಾರಕ್ಕೆ ಸುಪಾರಿ? ಬಹುಭಾಷಾ ನಟಿ ಹೇಳಿದ್ದೇನು?

    ಶಾಕಿಂಗ್: ಅಪಹರಣ, ಅತ್ಯಾಚಾರಕ್ಕೆ ಸುಪಾರಿ? ಬಹುಭಾಷಾ ನಟಿ ಹೇಳಿದ್ದೇನು?

    ಕೊಚ್ಚಿ: ಕೇರಳ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರಕ್ಕೆ ಸುಪಾರಿ ನೀಡಲಾಗಿತ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಫೆಬ್ರವರಿ 17ರ ಶುಕ್ರವಾರ ರಾತ್ರಿ ತನ್ನ ಮೇಲಾದ ಪಾತಕ ಕೃತ್ಯದ ಬಗ್ಗೆ ಕಳಮಶೇರಿ ಮ್ಯಾಜಿಸ್ಟ್ರೇಟರ್ ಮುಂದೆ ನೀಡಿದ ಹೇಳಿಕೆಯಲ್ಲಿ ಸ್ವತಃ ನಟಿಯೇ ಈ ಭಯಾನಕ ಸಂಗತಿಯನ್ನು ಹೊರಹಾಕಿದ್ದಾರೆ ಎಂದು ಸ್ಥಳಿಯ ವಾಹಿನಿಯೊಂದು ಸೋಮವಾರ ಮಧ್ಯಾಹ್ನ ವರದಿ ಮಾಡಿದೆ.

    “ನಿನ್ನ ಮೇಲೆ ಕೃತ್ಯ ಎಸಗುವುದಕ್ಕೆ ನಮಗೆ ಸುಪಾರಿ ನೀಡಲಾಗಿದೆ. ಆ ಕಾರಣದಿಂದ ನೀನು ನಮ್ಮೊಂದಿಗೆ ಸಹಕರಿಸಬೇಕು. ಒಂದು ವೇಳೆ ಪ್ರತಿರೋಧಿಸಿದರೆ ಅದರಿಂದಾಗುವ ಕೆಟ್ಟ ಪರಿಣಾಮಗಳಿಗೆ ನಾವು ಹೊಣೆಯಲ್ಲ. ನೀನು ಈ ರೀತಿ ಪ್ರತಿರೋಧಿಸಿದರೆ ನಿನ್ನನ್ನು ಹತ್ತಿರದಲ್ಲೇ ಇರುವ ತಮ್ಮನಂ ಫ್ಲಾಟ್‍ಗೆ ಎತ್ತಿಕೊಂಡು ಹೋಗಿ ಡ್ರಗ್ಸ್ ಚುಚ್ಚುಬೇಕಾಗುತ್ತದೆ. ಅಲ್ಲಿ 20 ಜನ ನಿನ್ನ ಮೇಲೆ ದೌರ್ಜನ್ಯ ಎಸಗಲು ಕಾಯುತ್ತಿದ್ದಾರೆ” ಎಂದು ಅವರು ಬೆದರಿಕೆ ಹಾಕಿದ್ದ ವಿಚಾರವನ್ನು ನಟಿ ಮ್ಯಾಜಿಸ್ಟ್ರೇಟರ್ ಮುಂದೆ ಹೇಳಿಕೆ ನೀಡಿದ್ದಾರೆ.

    ನಿರ್ಮಾಪಕನಿಗೆ ನಂಟು: ಕೃತ್ಯ ನಡೆದ ರಾತ್ರಿಯೇ ಪ್ರಮುಖ ಆರೋಪಿಯಾಗಿರುವ ಪಲ್ಸರ್ ಸುನಿಗೆ ಪ್ರಮುಖ ನಿರ್ಮಾಪಕರೊಬ್ಬರು ಕರೆ ಮಾಡಿ ಮಾತಾಡಿದ್ದಾರೆ. ಬಳಿಕ ಆ ನಂಬರ್ ಸ್ವಿಚ್ ಆಫ್ ಆಗಿದೆ. ನಿರ್ಮಾಪಕರು ಮಾತ್ರವಲ್ಲದೇ ಸಿನಿಮಾ ಇಂಡಸ್ಟ್ರಿಯ ಉಳಿದ ಐವರೊಂದಿಗೂ ಈತನಿಗೆ ಉತ್ತಮ ನಂಟಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಸುನಿ ಎಸ್ಕೇಪ್: ಪೊಲೀಸರ ಬಲೆಯಿಂದ ಕೂದಲೆಳೆ ಅಂತರದಲ್ಲಿ ಸುನಿ ಎಸ್ಕೇಪ್ ಆಗಿದ್ದಾನೆ. ಆತನ ಮೊಬೈಲ್ ಟ್ರೇಸ್ ಮಾಡಿದ್ದ ಪೊಲೀಸರು ಅಳಪುಜ್ಜಾದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಬಂಧನಕ್ಕೆ ಹೋಗ್ತಿದ್ದಂತೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ.

    ಜಾಮೀನಿಗೆ ಮೊರೆ: ನಿರೀಕ್ಷಣಾ ಜಾಮೀನಿಗಾಗಿ ಪಲ್ಸರ್ ಸುನಿ, ಮಣಿಕಂಠನ್ ಮತ್ತು ವಿಜ್ಞೇಶ್ ಹೈಕೋರ್ಟ್ ಕದ ತಟ್ಟಿದ್ದಾರೆ. ಸೋಮವಾರ ಮಧ್ಯಾಹ್ನ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಮಂಗಳವಾರ ಈ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ಬರಲಿದೆ.

  • ಜಾಕಿ ಖ್ಯಾತಿಯ ನಟಿ ಭಾವನಾ ಕಿಡ್ನ್ಯಾಪ್ – ಕಾರಿನಲ್ಲೇ ದುಷ್ಕರ್ಮಿಗಳಿಂದ ಲೈಂಗಿಕ ಕಿರುಕುಳ

    ಜಾಕಿ ಖ್ಯಾತಿಯ ನಟಿ ಭಾವನಾ ಕಿಡ್ನ್ಯಾಪ್ – ಕಾರಿನಲ್ಲೇ ದುಷ್ಕರ್ಮಿಗಳಿಂದ ಲೈಂಗಿಕ ಕಿರುಕುಳ

    ಬೆಂಗಳೂರು: ಖ್ಯಾತ ಬಹುಭಾಷಾ ನಟಿ ಭಾವನಾರನ್ನು ಅಪಹರಿಸಿ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ

    ಕೇರಳದ ಎರ್ನಾಕುಲಂನಲ್ಲಿ ಶೂಟಿಂಗ್ ಮುಗಿಸಿ ರಾತ್ರಿ 1.30ರ ವೇಳೆ ಮನೆಗೆ ಮರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ಅಪರಿಚಿತರು ಭಾವನಾ ಅವರನ್ನ ಅಪಹರಿಸಿದ್ದಾರೆ. ಮಾಜಿ ಕಾರು ಡ್ರೈವರ್‍ನಿಂದಲೇ ಅಪಹರಣ ನಡೆದಿದೆ ಎಂದು ಹೇಳಲಾಗಿದೆ.

    ನಡೆದಿದ್ದೇನು?: ಈ ಹಿಂದೆ ಭಾವನಾ ಕಾರಿನ ಚಾಲಕನಾಗಿದ್ದ ಮಾರ್ಟಿನ್ ಎಂಬಾತ ಐವರು ಸ್ನೇಹಿತರ ಜೊತೆ ಸೇರಿ ತನ್ನನ್ನು ಅಪಹರಿಸಿದ್ದಾಗಿ ಭಾವನಾ ಪೊಲೀಸರಿಗೆ ಕೊಟ್ಟ ದುರಿನಲ್ಲಿ ತಿಳಿಸಿದ್ದಾರೆ. ತ್ರಿಶೂರ್‍ನಿಂದ ಎರ್ನಾಕುಲಂಗೆ ಭಾವನಾ ಬರುತ್ತಿದ್ದ ವೇಳೆ ಅಂಗಮಾಲಿ ಎಂಬಲ್ಲಿ ಟೆಂಪೋ ಟ್ರಾವೆಲರ್‍ನಲ್ಲಿ ಬಂದ ಐವರು, ಭಾವನಾ ಕಾರಿಗೆ ಅಡ್ಡಹಾಕಿ ಕಾರು ನಿಲ್ಲಿಸಿದ್ದಾರೆ. ನಂತರ ಡ್ರೈವರ್‍ನನ್ನು ಹೊರಕ್ಕೆ ಎಳೆದು ಕಾರಿನಲ್ಲಿದ್ದ ಭಾವನಾರನ್ನು ನಗರದಲ್ಲಿ ಸುತ್ತಾಡಿಸಿದ್ದಾರೆ. 1 ಗಂಟೆಗಳ ಕಾಲ ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಭಾವನಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಕಾಕ್ಕನಾಡ್‍ನಲ್ಲಿ ಭಾವನಾರನ್ನು ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನಿರ್ದೇಶಕ ಲಾಲ್‍ಗೆ ಫೋನ್ ಮಾಡಿ ಅವರ ನೆರವಿನಿಂದ ಈಗ ಭಾವನಾ ದೂರು ದಾಖಲಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಭಾವನಾ ಕನ್ನಡದ ಜಾಕಿ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರೊಂದಿಗೆ ಅಭಿನಯಿಸಿದ್ದಾರೆ. ಅಲ್ಲದೆ ಯಾರೆ ಕೂಗಾಡಲಿ, ಬಚ್ಚನ್, ಮೈತ್ರಿ ಹೀಗೆ ಹಲವಾರು ಕನ್ನಡ ಸಿನಿಮಾದಲ್ಲಿ ಭಾವನಾ ನಟಿಸಿದ್ದಾರೆ.