Tag: ಅಪಹರಣ

  • ನಟಿಯ ನಗ್ನ ಫೋಟೋ, ವಿಡಿಯೋ ಬಯಸಿದ್ದ ನಟ ದಿಲೀಪ್

    ನಟಿಯ ನಗ್ನ ಫೋಟೋ, ವಿಡಿಯೋ ಬಯಸಿದ್ದ ನಟ ದಿಲೀಪ್

    ತಿರುವನಂತಪುರ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂನ ಖ್ಯಾತ ನಟ ದಿಲೀಪ್ ಜೈಲು ಪಾಲಾಗಿದ್ದಾರೆ. ದಿಲೀಪ್ ನಟಿಯ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಮೇಲಿನ ದೌರ್ಜನ್ಯದ ದೃಶ್ಯ ಹಾಗೂ ನಗ್ನ ಫೋಟೋವನ್ನ ಬಯಸಿದ್ದರು ಎಂದು ವರದಿಯಾಗಿದೆ.

    ನಾಲ್ಕು ವರ್ಷಗಳ ಹಿಂದೆಯೇ ಅಂದರೆ 2013ರಲ್ಲಿ ದಿಲೀಪ್ ಈ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅದಕ್ಕಾಗಿ 1.5 ಕೋಟಿ ರೂಪಾಯಿ ಮೊತ್ತದ ಸುಪಾರಿಗೆ ಒಪ್ಪಂದವಾಗಿತ್ತು. ಅದಕ್ಕಿಂತಲೂ ಭಯಾನಕ ಎಂದರೆ ನಟ ದಿಲೀಪ್ ತನ್ನ ಟಾರ್ಗೆಟ್ ಆಗಿದ್ದ ಆ ನಟಿಯ ಬೆತ್ತಲೆ ಫೋಟೋ ಮತ್ತು ದೌರ್ಜನ್ಯದ ವೀಡಿಯೋ ಬೇಕು ಎಂದು ಪ್ರಮುಖ ಆರೋಪಿ ಪಲ್ಸರ್ ಸುನಿಲ್‍ನಿಗೆ ಹೇಳಿದ್ರು ಎಂದು ಪೊಲೀಸರು ತಿಳಿಸಿದ್ದಾರೆ.

    ತಮ್ಮ ಮೊದಲ ಪತ್ನಿ ಮಂಜು ವಾರಿಯರ್ ಜೊತೆಗಿನ ಸಂಬಂಧ ಮುರಿದು ಬೀಳೋದಕ್ಕೆ ನಟಿಯೇ ಕಾರಣ ಅನ್ನೋ ಸಿಟ್ಟು ನಟ ದಿಲೀಪ್‍ಗೆ ಇತ್ತು. ಅದಕ್ಕಾಗಿ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಆದ್ರೆ ಇದನ್ನೆಲ್ಲಾ ತಳ್ಳಿ ಹಾಕಿರುವ ದಿಲೀಪ್ ಪರ ವಕೀಲರಾದ ಕೆ. ರಾಮ್‍ಕುಮಾರ್, ದಿಲೀಪ್ ಸುಮಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಇದಂತೂ ನಿಜಕ್ಕೂ ಅದ್ಭುತ ಕಲ್ಪನೆಯುಳ್ಳ ಸ್ಕ್ರಿಪ್ಟ್ ನಂತಿದೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ದಿಲೀಪ್‍ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಾಯಿದೆ ಎಂದಿದ್ದಾರೆ.

    ಇದನ್ನೂ ಓದಿ: ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ- ಮಲೆಯಾಳಂ ನಟ ದಿಲೀಪ್ ಬಂಧನವಾಗಿದ್ದು ಯಾಕೆ?

    ದಿಲೀಪ್ ಮತ್ತು ಪಲ್ಸರ್ ಸುನಿ ತುಂಬಾ ಆತ್ಮೀಯತೆ ಹೊಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದ್ರೆ ದಿಲೀಪ್ ಮಾತ್ರ ಪಲ್ಸರ್ ಸುನಿ ಯಾರೆಂಬುದೇ ಗೊತ್ತಿಲ್ಲ ಎಂದಿದ್ದಾರೆ. ಕಳೆದ ವರ್ಷ ನವೆಂಬರ್‍ನಲ್ಲಿ ನಡೆದ ದಿಲೀಪ್ ಅವರ ತ್ರಿಸ್ಸೂರ್ ಚಿತ್ರದ ಚಿತ್ರೀಕರಣದ ಸೆಟ್‍ನಲ್ಲಿ ಪಲ್ಸರ್ ಸುನಿ ಇದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಚಿತ್ರೀಕರಣದ ವೇಳೆ ಪಲ್ಸರ್ ಸುನಿ ಇದ್ದ ಫೋಟೋವನ್ನ ಕೆಲವು ಮಾಧ್ಯಮಗಳು ಪ್ರಸಾರ ಮಾಡಿವೆ. ಆದ್ರೆ ನಟ ದಿಲೀಪ್ ಪರ ವಕೀಲರು ಈ ವಾದಕ್ಕೆ ಸವಾಲೆಸೆದಿದ್ದು, ದಿಲೀಪ್ ಅವರು ಒಬ್ಬ ಸೂಪರ್ ಸ್ಟಾರ್. ಚಿತ್ರೀಕರಣದ ವೇಳೆ ಅವರನ್ನು ನೋಡಲು ಸಾಕಷ್ಟು ಅಭಿಮಾನಿಗಳು ಬರ್ತಿರ್ತಾರೆ. ಅವರಿಗೆ ಎಲ್ಲರೂ ಗೊತ್ತಿರಲ್ಲ ಎಂದು ವಾದಿಸಿದ್ದಾರೆ.

    ದಿಲೀಪ್ ಅವರ ಜಾಮೀನು ಅರ್ಜಿಯನ್ನು ಎರಡು ದಿನಗಳ ಬಳಿಕ ವಿಚಾರಣೆ ಮಾಡುವುದಾಗಿ ಕೋರ್ಟ್ ಹೇಳಿದೆ. ಪೊಲೀಸರು 3 ದಿನಗಳವರೆಗೆ ದಿಲೀಪ್ ಅವರನ್ನ ವಶಕ್ಕೆ ನೀಡಬೇಕೆಂದು ಕೇಳಿದ್ದರು. ಆದ್ರೆ ಕೋರ್ಟ್ ವಿಚಾರಣೆಗಾಗಿ 2 ದಿನಗಳ ನ್ಯಯಾಂಗ ಬಂಧನ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರರಂಗದ ಇತರರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

  • ವಿಡಿಯೋ ವಿಚಾರಕ್ಕೆ ಬಿಎಸ್‍ವೈ ಪಿಎಯಿಂದ ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್‍ಗೆ ಸುಪಾರಿ?

    ವಿಡಿಯೋ ವಿಚಾರಕ್ಕೆ ಬಿಎಸ್‍ವೈ ಪಿಎಯಿಂದ ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್‍ಗೆ ಸುಪಾರಿ?

    ಬೆಂಗಳೂರು: ಬಿಎಸ್‍ವೈ ಈಶ್ವರಪ್ಪ ನಡುವಿನ ಸಮರ ಆಯ್ತು, ಈಗ ಇಬ್ಬರು ನಾಯಕರ ಪಿಎಗಳ ನಡುವೆ ವಾರ್ ಆರಂಭವಾಗಿದೆ. ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್ ಮಾಡಲು ಸುಪಾರಿ ಕೊಟ್ಟಿದ್ದೆ ಬಿಎಸ್ ಯಡಿಯೂರಪ್ಪ ಅವರ ಪಿಎ ಎನ್ನುವ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಮಾಡೆಲ್ ಒಬ್ಬಳ ಜೊತೆ ಬಿಎಸ್‍ವೈ ಪಿಎ ಸಂತೋಷ್ ಗೆ ಸಂಬಂಧವಿತ್ತು. ಸಂತೋಷ್ ಜೊತೆಗಿನ ಕೆಲವೊಂದು ರಹಸ್ಯ ವಿಡಿಯೋ ಹಾಗೂ ವಾಟ್ಸಾಪ್ ಮೆಸೇಜ್‍ಗಳನ್ನು ಮಾಡೆಲ್ ಹೊಂದಿದ್ದಳು. ಈ ವಿಡಿಯೋ ಮತ್ತು ಮೆಸೇಜ್ ಗಳನ್ನು ಈಶ್ವರಪ್ಪ ಪಿಎ ವಿನಯ್ ಗೆ ಮಾಡೆಲ್ ಕೊಟ್ಟಿದ್ದಳು.

    ಈ ವಿಚಾರ ತಿಳಿದ ಸಂತೋಷ್ ವಿನಯ್ ಅವರನ್ನು ಕಿಡ್ನಾಪ್ ಮಾಡುವಂತೆ ಬಿಜೆಪಿ ಯುವ ಮೋರ್ಚಾದ ನಾಯಕ ರಾಜೇಂದ್ರಗೆ ಸೂಚನೆ ನೀಡಿದ್ದರು. ರಾಜೇಂದ್ರ ರೌಡಿಗಳನ್ನ ಸಂಪರ್ಕಿಸಿ ವಿನಯ್ ಕಿಡ್ನ್ಯಾಪ್ ಮಾಡಿ, ಪೆನ್‍ಡ್ರೈವ್ ಮತ್ತು ಮೊಬೈಲ್ ಕಿತ್ತುಕೊಳ್ಳುವಂತೆ ಸೂಚಿಸಿದ್ದರು.

    ಕೃತ್ಯಕ್ಕೆ ಸಹಕರಿಸಿದರೆ ಮುಂದೆ ನಿಮ್ಮ ರೌಡಿಶೀಟರ್ ತೆಗೆಸುವುದಾಗಿ ಭರವಸೆಯ ಮಾತುಕತೆ ನಡೆದಿತ್ತು. ಆದರೆ ರೌಡಿಗಳಿಗೆ ಕಿಡ್ನ್ಯಾಪ್ ಮಾಡಲು ಪುಡಿಗಾಸು ಕೂಡ ನೀಡಿರಲಿಲ್ಲ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

    ಆರ್‍ಎಸ್‍ಎಸ್‍ಗೆ ಗೊತ್ತಿತ್ತು: ಬಿಎಸ್‍ವೈ ಆಪ್ತ ಸಹಾಯಕ ಸಂತೋಷ್ ಪ್ರಕರಣ ಆರ್‍ಎಸ್‍ಎಸ್ ನಾಯಕರಿಗೆ ತಿಳಿದಿದೆ ಎನ್ನುವ ವಿಚಾರ ಈಗ ಲಭ್ಯವಾಗಿದೆ. 15 ದಿನಗಳ ಹಿಂದೆ ಆರ್‍ಎಸ್‍ಎಸ್ ನಾಯಕರು ಮತ್ತು ಬಿಎಸ್‍ವೈ ನಡುವೆ ಸಭೆ ನಡೆದಿತ್ತು. ಈ ಸಭೆಯಲ್ಲಿ ಬಿಎಸ್‍ವೈಗೆ ಆಪ್ತ ಸಹಾಯಕ ಸಂತೋಷ್ ಬದಲಾಯಿಸುವಂತೆ ಸಲಹೆ ನೀಡಲಾಗಿತ್ತು. ಕಾ.ಪು.ಸಿದ್ದಲಿಂಗಸ್ವಾಮಿ ಅವರು ಚುನಾವಣೆಗೆ ನಿಲ್ಲುವುದು ಬೇಡ. ಅವರನ್ನು ಮತ್ತೆ ಆಪ್ತ ಸಹಾಯಕನಾಗಿ ನೇಮಕ ಮಾಡಿಕೊಳ್ಳುವಂತೆ ಆರ್‍ಎಸ್‍ಎಸ್ ನಾಯಕರು ಸಲಹೆ ನೀಡಿದ್ದರು ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    2018ರ ನಂತರ ಕಾ.ಪು.ಸಿದ್ದಲಿಂಗಸ್ವಾಮಿಗೆ ಯಾವುದಾದರೂ ಸ್ಥಾನಮಾನ ನೀಡೋಣ ಅಲ್ಲಿ ತನಕ ನಿಮ್ಮ ಆಪ್ತ ಸಹಾಯಕನಾಗಿ ಇರಲಿ ಎಂದು ಆರ್‍ಎಸ್‍ಎಸ್ ಸಲಹೆ ನೀಡಿದ್ದರೂ ಈ ವಿಚಾರದ ಬಗ್ಗೆ ಬಿಎಸ್‍ವೈ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

    ಈ ವಿಚಾರದ ಬಗ್ಗೆ ವಿನಯ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದು, ನನ್ನ ಬಳಿ ಯಾವುದೇ ವಿಡಿಯೋಗಳು ಇಲ್ಲ. ನನ್ನನ್ನು ಕಿಡ್ನಾಪ್ ಮಾಡಿದ್ದು ಯಾರು ಎನ್ನುವುದು ತಿಳಿದಿಲ್ಲ. ವಿಡಿಯೋ ಬಗ್ಗೆ ಬಿಎಸ್‍ವೈ ಪಿಎ ಸಂತೋಷ್ ಅವರನ್ನೇ ಕೇಳಬೇಕು ಎಂದು ಹೇಳಿದ್ದಾರೆ.

    ಏನಿದು ಪ್ರಕರಣ?
    ಮೇ 11ರಂದು ಮಹಾಲಕ್ಷ್ಮೀ ಲೇಔಟ್ ಬಳಿ ವಿನಯ್ ಅವರ ಮೇಲೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಏಕಾಏಕಿ ಸುತ್ತುವರಿದು ಅಪಹರಿಸಲು ಯತ್ನಿಸಿತ್ತು. ಬೈಕ್ ನಲ್ಲಿ ಬಂದಿದ್ದ ಇಬ್ಬರು ವಿನಯ್ ಮೇಲೆ ಹಲ್ಲೆ ನಡೆಸಿದ್ದರು. ಅಪಹರಣಕ್ಕೆ ಯತ್ನಿಸಲು ಮುಂದಾದಾಗ ವಿನಯ್ ರಕ್ಷಣೆಗಾಗಿ ಕೂಗಿಕೊಂಡಿದ್ದರು.

    ಇದನ್ನೂ ಓದಿ: ಬಿಜೆಪಿ ಯುವ ಮೋರ್ಚಾ ಲೀಡರ್ ಆದೇಶದ ಮೇರೆಗೆ ಈಶ್ವರಪ್ಪ ಪಿಎ ಕಿಡ್ನಾಪ್?

  • ಬಿಜೆಪಿ ಯುವ ಮೋರ್ಚಾ ಲೀಡರ್ ಆದೇಶದ ಮೇರೆಗೆ ಈಶ್ವರಪ್ಪ ಪಿಎ ಕಿಡ್ನಾಪ್?

    ಬಿಜೆಪಿ ಯುವ ಮೋರ್ಚಾ ಲೀಡರ್ ಆದೇಶದ ಮೇರೆಗೆ ಈಶ್ವರಪ್ಪ ಪಿಎ ಕಿಡ್ನಾಪ್?

    ಬೆಂಗಳೂರು: ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ ಅವರ ಪಿಎ ವಿನಯ್ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಈ ಅಪಹರಣದ ಹಿಂದೆ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಅರಸ್ ಕೈವಾಡ ಇದೆ ಎನ್ನುವ ಆರೋಪ ಕೇಳಿ ಬಂದಿದೆ.

    ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ರಾಜೇಂದ್ರ ಅರಸ್ ಆಣತಿಯಂತೆ ನಾವು ವಿನಯ್ ಅವರನ್ನು ಕಿಡ್ನಾಪ್ ಮಾಡಲು ಮುಂದಾಗಿದ್ದು ಎಂದು ವಿಚಾರಣೆ ವೇಳೆ ಹೇಳಿದ ಹಿನ್ನೆಲೆಯಲ್ಲಿ ಪೊಲೀಸರು ರಾಜೇಂದ್ರ ಅರಸ್ ಅವರನ್ನು ಎ1 ಆರೋಪಿಯನ್ನಾಗಿಸಿ ತನಿಖೆ ಮುಂದುವರಿಸುತ್ತಿದ್ದಾರೆ.

    ಪೊಲೀಸರ ಹುಡುಕಾಟದ ಬೆನ್ನಲ್ಲೇ ಕೋರ್ಟ್ ನಿಂದ ರಾಜೇಂದ್ರ ಅರಸ್ ಜಾಮೀನು ಪಡೆದುಕೊಂಡಿದ್ದಾರೆ. ಈ ವೇಳೆ ಕೋರ್ಟ್ ಎರಡು ದಿನದ ಒಳಗಡೆ ವಿಚಾರಣೆಗೆ ಹಾಜರಾಗುವಂತೆ ರಾಜೇಂದ್ರಗೆ ಸೂಚಿಸಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬುಧವಾರ ವಿಚಾರಣೆಗೆ ಹಾಜರಾಗುವುದಾಗಿ ರಾಜೇಂದ್ರ ಅರಸ್ ಪೊಲೀಸರಿಗೆ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮೇ 11ರಂದು ಮಹಾಲಕ್ಷ್ಮೀ ಲೇಔಟ್ ಬಳಿ ವಿನಯ್ ಅವರ ಮೇಲೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಏಕಾಏಕಿ ಸುತ್ತುವರಿದು ಅಪಹರಿಸಲು ಯತ್ನಿಸಿತ್ತು. ಬೈಕ್ ನಲ್ಲಿ ಬಂದಿದ್ದ ಇಬ್ಬರು ವಿನಯ್ ಮೇಲೆ ಹಲ್ಲೆ ನಡೆಸಿದ್ದರು. ಅಪಹರಣಕ್ಕೆ ಯತ್ನಿಸಲು ಮುಂದಾದಾಗ ವಿನಯ್ ರಕ್ಷಣೆಗಾಗಿ ಕೂಗಿಕೊಂಡಿದ್ದರು.

     

  • ಯುವಕನನ್ನ ಅಪಹರಿಸಿ ಪೆಟ್ರೋಲ್ ಸುರಿದು ಬೆಂಕಿ- ಚಿಕಿತ್ಸೆ ಫಲಕಾರಿಯಾಗದೇ ಸಾವು

    ಯುವಕನನ್ನ ಅಪಹರಿಸಿ ಪೆಟ್ರೋಲ್ ಸುರಿದು ಬೆಂಕಿ- ಚಿಕಿತ್ಸೆ ಫಲಕಾರಿಯಾಗದೇ ಸಾವು

    ಕಲಬುರಗಿ: ದುಷ್ಕರ್ಮಿಗಳಿಂದ ಬೆಂಕಿ ದಾಳಿಗೆ ಒಳಗಾಗಿದ್ದ ಯುವಕ ಸಾವನ್ನಪ್ಪಿದ್ದಾರೆ.

    22 ವರ್ಷದ ಶೇಕ್ ನೂರುದ್ದೀನ್ ಮೃತ ಯುವಕ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಪೋಷಕರು ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿ ಕಲಬುರಗಿಯ ರಿಂಗ್‍ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

    ಜುಲೈ 5ರಂದು ನಗರದ ಇನಾಂದಾರ್ ಕಾಲೇಜು ಬಳಿ ಶೇಕ್‍ರನ್ನು ಅಪಹರಿಸಿದ್ದ ನಾಲ್ವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಯುವಕನ ಕೊಲೆಗೆ ಯತ್ನಿಸಿದ್ದರು. ಶೇಕ್ ನೂರುದ್ದೀನ್ ಕಲಬುರಗಿ ನಗರದ ಮಿಲ್ಲತ್ ನಗರದ ನಿವಾಸಿಯಾಗಿದ್ದು, ಸಾಮಿಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದರು.

    ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೊರಟಿದ್ದರು. ಅಂತೆಯೇ ಜಬ್ಬಾರ್ ಪನಶೆನ್ ಹಾಲ್ ಬಳಿ ಆಟೋಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆ ಎರಡು ಬೈಕ್ ನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ನೂರುದ್ದೀನ್ ಅವರನ್ನು ತಮ್ಮ ಬೈಕಿನಲ್ಲಿ ಅಪಹರಿಸಿ, ನಂತರ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಘಟನೆಯಿಂದ ನರಳಾಡುತ್ತಿದ್ದ ನೂರುದ್ದೀನ್ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

    ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೇಕ್ ನೂರುದ್ದೀನ್, ಮೈತುಂಬಾ ಸುಟ್ಟಗಾಯಗಳಿಂದ ನರಳಾಡುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

  • ಕಾರಿನ ಲೋನ್ ಹಣ ತೀರಿಸಲು 4 ವರ್ಷದ ಬಾಲಕಿಯನ್ನ ಕಿಡ್ನ್ಯಾಪ್ ಮಾಡಿ ಕೊಲೆ ಮಾಡ್ದ

    ಕಾರಿನ ಲೋನ್ ಹಣ ತೀರಿಸಲು 4 ವರ್ಷದ ಬಾಲಕಿಯನ್ನ ಕಿಡ್ನ್ಯಾಪ್ ಮಾಡಿ ಕೊಲೆ ಮಾಡ್ದ

    ಮುಂಬೈ: ಕಾರಿನ ಲೋನ್ ಹಣ ತೀರಿಸುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಮಾಲೀಕನ 4 ವರ್ಷದ ಮಗಳನ್ನೇ ಅಪಹರಣ ಮಾಡಿ ಕೊಲೆ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ.

    4 ವರ್ಷದ ತನಿಷ್ಕಾ ಕೊಲೆಯಾದ ಬಾಲಕಿ. ತನಿಷ್ಕಾ ಶವ ಅಕೋಲಾದಲ್ಲಿ ಪತ್ತೆಯಾಗಿದ್ದು, ಆರೋಪಿಗಳಾದ ಶುಭಂ ಜಮ್ನಿಕ್ ಹಾಗೂ ಆತನ ಸ್ನೇಹಿತ ಪ್ರತೀಕ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ಬಾಲಕಿ ತನಿಷ್ಕಾ ಕಿರಾಣಿ ಅಂಗಡಿ ಮಾಲೀಕರಾದ ಅಮೋಲ್ ಅರುಡೆ ಎಂಬವರ ಮಗಳು. ಇವರು ಕೆಲವು ಮನೆಗಳನ್ನ ಬಾಡಿಗೆಗೂ ಕೊಟ್ಟಿದ್ರು. ಆರೋಪಿ ಶುಭಂ ಕಾರ್‍ವೊಂದನ್ನ ಖರೀದಿಸಿದ್ದು ಅದರ ಲೋನ್ ಹಣ ತೀರಿಸಲಾಗಿರಲಿಲ್ಲ. ಹೀಗಾಗಿ 5 ಲಕ್ಷ ರೂ. ಹಣ ಹೊಂದಿಸಲು ತನ್ನ ಸ್ನೇಹಿತನ ಜೊತೆಗೂಡಿ ಈ ಕಿಡ್ನ್ಯಾಪ್ ಪ್ಲಾನ್ ರೂಪಿಸಿದ್ದ. ಜೂನ್ 28ರಂದು ತನ್ನ ಮಾಲೀಕನ ಮಗಳಾದ ತನಿಷ್ಕಾಳನ್ನ ದಿಗಿ ನಗರದ ಮನೆಯಿಂದ ಕಿಡ್ನ್ಯಾಪ್ ಮಾಡಿದ್ದ.

    ನನ್ನ ಮಗಳು ಬುದ್ಧಿವಂತೆ. ಆಕೆ ಅಪರಿಚಿತರು ಕರೆದರೆ ಹೋಗುವಂತವಳಲ್ಲ. ಆದ್ದರಿಂದ ಆಕೆ ಕಾಣೆಯಾದಾಗ ಇದು ಅಪರಿಚಿತರ ಕೃತ್ಯವಲ್ಲ ಎಂದು ನನಗೆ ತಿಳಿದಿತ್ತು. ಆದ್ದರಿಂದ ನಾನು ಕೂಡಲೇ ಪೊಲೀಸ್ ಠಾಣೆಗೆ ಹೋದೆ. ಆದ್ರೆ ಅಕೆಯನ್ನ ಉಳಿಸಿಕೊಳ್ಳಲು ಆಗಲಿಲ್ಲ. ಆರೋಪಿಗಳು ಈಗಾಗಲೇ ಬಂಧಿತರಾಗಿದ್ದಾರೆ. ಆದ್ರೆ ಇದು ಶುಭಂನ ಕೆಲಸ ಎಂದು ತಿಳಿದು ನನಗೆ ಶಾಕ್ ಆಯಿತು. ತನಿಷ್ಕಾ ಕಾಣೆಯಾದಾಗ ಆಕೆಯನ್ನು ಪತ್ತೆಹಚ್ಚಲು ಅವನೂ ಕೂಡ ನಮ್ಮೊಂದಿಗಿದ್ದ. ಆದರೆ ಈಗ ಅವನೇ ನನ್ನ ಮಗಳ ಕೊಲೆಗಾರನಾಗಿದ್ದಾನೆ. ನಾನು ಅಸಹಾಯಕನಾಗಿದ್ದೇನೆ. ಅವನನ್ನ ಎಷ್ಟೆಲ್ಲಾ ಚೆನ್ನಾಗಿ ನೋಡಿಕೊಂಡೆವು. ಆದ್ರೆ ಅವನು ನಮಗೆ ಈ ರೀತಿ ಮಾಡಿದ್ದಾನೆ ಎಂದು ತನಿಷ್ಕಾ ತಂದೆ ದುಃಖಿತರಾಗಿದ್ದಾರೆ.

    ದಿಗಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹರೀಶ್ ಮಾನೆ ಈ ಬಗ್ಗೆ ಹೇಳಿಕೆ ನೀಡಿದ್ದು, ನಾವು ಎಲ್ಲಾ ಕಡೆ ಹುಡುಕಾಡಿದ ನಂತರ ಹಾಗೂ ಬಾಲಕಿಯ ತಂದೆ ಅಂದುಕೊಂಡಂತೆ ಇದು ಅಪರಿಚಿತರ ಕೃತ್ಯವಲ್ಲ ಎಂಬ ಭರವಸೆ ಇದ್ದಿದ್ದರಿಂದ ನಮಗೆ ಶುಭಂ ಮೇಲೆ ಅನುಮಾನ ಮೂಡಿತು. ನಾಲ್ಕು ದಿನಗಳ ಕಾಲ ಆತ ನಮ್ಮ ದಿಕ್ಕು ತಪ್ಪಿಸಿದ್ದ. ಆದ್ರೆ ನಂತರ ಒಂದೊಂದೇ ವಿಚಾರ ಬಾಯ್ಬಿಟ್ಟ. ಆತ ಕಾರ್‍ವೊಂದನ್ನ ಖರೀದಿಸಿದ್ದು, ಲೋನ್ ಹಣ ತೀರಿಸಿರಲಿಲ್ಲ. ಹೀಗಾಗಿ ತನ್ನ ಸ್ನೇಹಿತನ ಜೊತೆಗೂಡಿ ಕಿಡ್ನ್ಯಾಪ್ ಪ್ಲಾನ್ ಮಾಡಿ 5 ಲಕ್ಷ ರೂ.ಗಾಗಿ ಬೇಡಿಕೆ ಇಡಬೇಕು ಎಂದುಕೊಂಡಿದ್ದ. ಆದ್ರೆ ತನಿಷ್ಕಾಳನ್ನ ಕಿಡ್ನ್ಯಾಪ್ ಮಾಡಿದ ನಂತರ ಆಕೆ ಗಲಾಟೆ ಮಡಿದ್ದಳು. ಹೀಗಾಗಿ ಇವರು ಪ್ಲಾಸ್ಟಿಕ್ ಬ್ಯಾಗ್‍ವೊಂದನ್ನ ಆಕೆಯ ಮುಖದ ಮೇಲೆ ಹಾಕಿ ಆಕೆಯ ಬಾಯಿ ಮುಚ್ಚಿಸಿದ್ದರು. ನಂತರ ಮುರ್ತಿಜಾಪುರಕ್ಕೆ ಕೊಂಡೊಯ್ದು ಒಂದು ಗೋಣಿಚೀಲದಲ್ಲಿ ಬಾಲಕಿಯನ್ನ ಹಾಕಿ ಬೆಂಕಿ ಹಚ್ಚಿದ್ದರು. ನಂತರ ಅರೆಬೆಂದ ದೇಹವನ್ನ ಅಲ್ಲೇ ಒಂದು ನಿರ್ಜನ ಪ್ರದೇಶದಲ್ಲಿ ಗುಂಡಿ ತೋಡಿ ಮುಚ್ಚಿದ್ದರು ಎಂದು ತಿಳಿಸಿದ್ದಾರೆ.

  • 9ನೇ ಕ್ಲಾಸ್ ವಿದ್ಯಾರ್ಥಿಯನ್ನ ಯಾದಗಿರಿಯಲ್ಲಿ ಕಿಡ್ನಾಪ್ ಮಾಡಿ ರಾಯಚೂರಲ್ಲಿ ಬಿಟ್ಟು ಹೋದ್ರಂತೆ!

    9ನೇ ಕ್ಲಾಸ್ ವಿದ್ಯಾರ್ಥಿಯನ್ನ ಯಾದಗಿರಿಯಲ್ಲಿ ಕಿಡ್ನಾಪ್ ಮಾಡಿ ರಾಯಚೂರಲ್ಲಿ ಬಿಟ್ಟು ಹೋದ್ರಂತೆ!

    ರಾಯಚೂರು: ಯಾದಗಿರಿಯ ನಾಗರಬೆಟ್ಟದಲ್ಲಿ ಅಪಹರಣಕ್ಕೊಳಗಾಗಿದ್ದ ಬಾಲಕನನ್ನ ಅಪಹರಣಕಾರರು ರಾಯಚೂರಿನ ರೈಲ್ವೇ ನಿಲ್ದಾಣದ ಬಳಿ ಬಿಟ್ಟು ಪರಾರಿಯಾಗಿದ್ದಾರೆ.

    ಇಂದು ಬೆಳಗಿನ ಜಾವ ಯಾದಗಿರಿಯ ನಾರಾಯಣಪುರದಿಂದ ನಾಗರಬೆಟ್ಟಕ್ಕೆ ಶಾಲೆಗೆ ತೆರಳುತ್ತಿದ್ದ 9ನೇ ತರಗತಿ ವಿದ್ಯಾರ್ಥಿ ಶರತ್‍ನನ್ನ ನಾಲ್ಕು ಜನ ಓಮಿನಿ ವ್ಯಾನ್‍ನಲ್ಲಿ ಅಪಹರಿಸಿದ್ದರು. ಕೈಕಾಲಿಗೆ ಹಗ್ಗ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ರಾಯಚೂರು ವರೆಗೆ ಶರತ್‍ನನ್ನ ಕರೆದುಕೊಂಡು ಬಂದಿದ್ದಾರೆ. ಆದ್ರೆ ಅದೇನಾಯಿತೋ ರಾಯಚೂರು ರೈಲ್ವೇ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾರೆ ಅಂತ ಬಾಲಕ ಶರತ್ ಹೇಳಿದ್ದಾನೆ.

    ಆಟೋ ಚಾಲಕನೊಬ್ಬನ ಸಹಾಯದಿಂದ ಪರಿಚಿತರೊಬ್ಬರ ವಿಳಾಸಕ್ಕೆ ಶರತ್ ಬಂದಿದ್ದಾನೆ. ಆದ್ರೆ ನಿಜಕ್ಕೂ ಅಪಹರಣಕಾರರು ಬಾಲಕನನ್ನ ಅಪಹರಿಸಿದ್ದರಾ ಅನ್ನೋ ಅನುಮಾನ ಕೂಡ ಮೂಡಿದೆ.

    ಶರತ್ ತಂದೆ ಶ್ರೀನಿವಾಸ್ ಗುತ್ತಿಗೆದಾರರಾಗಿದ್ದು ಸ್ಥಿತಿವಂತರಿದ್ದಾರೆ. ಆದ್ರೆ ಯಾಕೆ ಅಪಹರಿಸಿದರು, ಯಾಕೆ ಬಿಟ್ಟು ಹೋದರು? ಅಪಹರಿಸಿದವರು ಯಾರು? ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಒಟ್ನಲ್ಲಿ ಮಗ ಕಾಣೆಯಾಗಿದ್ದರಿಂದ ಗಾಬರಿಗೊಂಡಿದ್ದ ಶರತ್ ಪೋಷಕರು ಈಗ ನಿಟ್ಟುಸಿರು ಬಿಟ್ಟಿದ್ದಾರೆ.

  • ಕಿಡ್ನ್ಯಾಪ್ ಪ್ರಕರಣದಲ್ಲಿ `ಎರಡು ಕನಸು’ ಚಿತ್ರದ ನಿರ್ದೇಶಕ ಸೇರಿ ಐವರ ಬಂಧನ

    ಕಿಡ್ನ್ಯಾಪ್ ಪ್ರಕರಣದಲ್ಲಿ `ಎರಡು ಕನಸು’ ಚಿತ್ರದ ನಿರ್ದೇಶಕ ಸೇರಿ ಐವರ ಬಂಧನ

    ಬೆಂಗಳೂರು: ರವಿ ಅಕ್ಷಯ ಅಡ್ವರ್ಟೈಸಿಂಗ್ ಮಾಲೀಕ ಪರಮೇಶ್‍ರನ್ನು ಬಸವೇಶ್ವರ ನಗರದ ಮನೆಯಿಂದ ಕಿಡ್ನ್ಯಾಪ್ ಮಾಡಿದ ಆರೋಪದ ಮೇಲೆ ಎರಡು ಕನಸು ಚಿತ್ರದ ನಿರ್ದೇಶಕ ಮದನ್‍ರನ್ನು ಪೊಲೀಸರು ಬಂಧಿಸಿದ್ದಾರೆ.

    ಚಿತ್ರದ ಪ್ರಮೋಷನ್‍ಗಾಗಿ ನಿರ್ದೇಶಕ ಮದನ್, ಪರಮೇಶ್‍ಗೆ 16.3 ಲಕ್ಷ ಹಣ ಕೊಟ್ಟಿದ್ದರು. ಚಿತ್ರದ ಪ್ರಮೋಷನ್ ಸರಿಯಾಗಿ ಮಾಡದ ಹಿನ್ನೆಲೆಯಲ್ಲಿ 8 ಲಕ್ಷ ರೂ. ಹಣ ವಾಪಸ್ ನೀಡುವಂತೆ ಕೇಳಿದ್ದರು. ಈ ನಡುವೆ ನಿರ್ದೇಶಕ ಮದನ್‍ರಿಂದ ಪರಮೇಶ್ ಅಂತರ ಕಾಯ್ದುಕೊಂಡಿದ್ದರು. ಪರಮೇಶ್ ಹಣ ಕೊಡಲು ನಿರಾಕರಿಸಿದಾಗ ಮದನ್ ತನ್ನ ಸಹಚರರಾದ ಚಲಪತಿ, ಕಿರಣ್, ಮೂರ್ತಿ ಮತ್ತು ಮೋಹನ್ ಜೊತೆಗೂಡಿ ಕಿಡ್ನ್ಯಾಪ್ ಪ್ಲಾನ್ ಮಾಡಿದ್ದಾರೆ.

    ಮೂರು ದಿನಗಳ ಹಿಂದೆ ಪರಮೇಶ್‍ರನ್ನು ಕಿಡ್ನ್ಯಾಪ್ ಮಾಡಿದ್ದ ಆರೋಪಿಗಳು, ಬಳಿಕ ಬ್ಯಾಟ್ ಮತ್ತು ಬೆಲ್ಟ್‍ನಿಂದ ಪರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ದೇವನಹಳ್ಳಿ ಹತ್ತಿರ ಡೈರೆಕ್ಟರ್ ಮದನ್ ಸೇರಿದಂತೆ ಐವರು ಆರೋಪಿಗಳನ್ನು ಶುಕ್ರವಾರ ರಾತ್ರಿ ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ.

  • ಮಗಳ ಕಿಡ್ನಾಪ್ ದೂರು ದಾಖಲಿಸಲು ಹೋದ್ರೆ ಒಳ್ಳೆ ಬುದ್ಧಿ ಕಲಿಸಿಲ್ಲವೆಂದು ಕೇಸ್ ಹಾಕ್ತೀನಿ ಎಂದ ಸಿಪಿಐ ವಿರುದ್ಧ ಕ್ರಮಕ್ಕೆ ಆದೇಶ

    ಮಗಳ ಕಿಡ್ನಾಪ್ ದೂರು ದಾಖಲಿಸಲು ಹೋದ್ರೆ ಒಳ್ಳೆ ಬುದ್ಧಿ ಕಲಿಸಿಲ್ಲವೆಂದು ಕೇಸ್ ಹಾಕ್ತೀನಿ ಎಂದ ಸಿಪಿಐ ವಿರುದ್ಧ ಕ್ರಮಕ್ಕೆ ಆದೇಶ

    ಕಾರವಾರ: ತಮ್ಮ ಮಗಳ ಅಪಹರಣವಾಗಿದೆಯೆಂದು ಠಾಣೆಗೆ ದೂರು ನೀಡಲು ಹೋಗಿದ್ದ ಪೋಷಕರಿಗೆ ಠಾಣಾಧಿಕಾರಿ ಬಂಧಿಸುವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ವಿರುದ್ಧ ಕ್ರಮ ಕಗೊಳ್ಳುವಂತೆ ಬೆಳಗಾವಿ ಪೊಲೀಸ್ ದೂರು ಪ್ರಾಧಿಕಾರ ಆದೇಶಿಸಿದೆ.

    ಉತ್ತರ ಕನ್ನಡ ಜಿಲ್ಲೆಯ ಶಹರಾ ಠಾಣೆಯ ಪಿಎಸ್‍ಐ ಆಗಿದ್ದ ಆಂಜನೇಯ ಪ್ರಸ್ತುತ ಕಾರವಾರದ ಡಿಎಸ್‍ಆರ್‍ಬಿಯ ಸಿಪಿಐ ಆಗಿದ್ದಾರೆ. ಆಂಜನೇಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆದೇಶ ನೀಡಲಾಗಿದೆ.

    ಏನಿದು ಪ್ರಕರಣ?2015ರಲ್ಲಿ ಬೈತಕೂಲ್‍ನ ನಿವಾಸಿ ಶಶಿಕಾಂತ್ ರೇವಲ್ಕರ್ ಹಾಗೂ ಟ್ರೀಜಾ ದಂಪತಿ ತಮ್ಮ ಅಪ್ರಾಪ್ತ ಮಗಳ ಅಪಹರಣವಾಗಿದೆಯೆಂದು ದೂರು ನೀಡಲು ಹೋಗಿದ್ದರು. ಆದ್ರೆ ಅಂದಿನ ಠಾಣೆಯ ಪಿಎಸ್‍ಐ ಆಗಿದ್ದ ಆಂಜನೇಯ, ನಿಮ್ಮ ಮಗಳಿಗೆ ಉತ್ತಮ ಸಂಸ್ಕಾರ ನೀಡದ ಕಾರಣ ಅಪಹರಣವಾಗಿದ್ದು ನಿಮ್ಮ ವಿರುದ್ಧ ದೂರು ದಾಖಲಿಸಲು ನಮಗೆ ಅಧಿಕಾರವಿದೆ. ಮಕ್ಕಳು ಓಡಿಹೋದರೆ ಪೋಷಕರಿಗೆ ಶಿಕ್ಷೆ ನೀಡುವ ಕಾನೂನು ಇದೆ ಎಂದು ಸುಳ್ಳು ಹೇಳಿ ದೂರು ನೀಡದಂತೆ ಬೆದರಿಸಿ ಕಳಿಸಿದ್ದರು.

    ಈ ಸಂಬಂಧ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವನಾಯ್ಕ ಬೆಳಗಾವಿ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಇದೀಗ ಎರಡು ವರ್ಷಗಳ ನಂತರ ಅಂದಿನ ಪಿಎಸ್‍ಐ ಆಗಿದ್ದ ಆಂಜನೇಯ ಕರ್ತವ್ಯಲೋಪವೆಸಗಿದ್ದು ಸಾಬೀತಾಗಿದ್ದು ಕ್ರಮ ಜರುಗಿಸಲು ಆದೇಶ ಮಾಡಲಾಗಿದೆ.

  • ತಾಯಿಯ ಮಡಿಲು ಸೇರಿದ ಪುಟಾಣಿ- ದುಷ್ಕರ್ಮಿಗಳು ಎಸ್ಕೇಪ್

    ತಾಯಿಯ ಮಡಿಲು ಸೇರಿದ ಪುಟಾಣಿ- ದುಷ್ಕರ್ಮಿಗಳು ಎಸ್ಕೇಪ್

    ಬೆಂಗಳೂರು: ಇಲ್ಲಿನ ಸಿದ್ದಾಪುರದಲ್ಲಿ ಅಪಹರಣವಾಗಿದ್ದ ಹೆಣ್ಣು ಮಗು ಕೊನೆಗೂ ಹೆತ್ತವರ ಕೈಸೇರಿದೆ. ಮೂರು ದಿನಗಳ ಹಿಂದೆ ಗುಟ್ಟೆಪಾಳ್ಯ ನಿವಾಸಿ ಶಬನಮ್ ಹಾಗೂ ಸೈಯದ್ ದಂಪತಿಯ ಮೂರು ವರ್ಷದ ಮಗು ಕತೀಜಾರನ್ನು ಯಾರೋ ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿದ್ರು.

    ಮನೆಯ ಪಕ್ಕದ ಅಂಗಡಿಗೆ ಐಸ್ ತರಲು ಹೋದ ಮಗುವನ್ನು ಎತ್ತಿಕೊಂಡೋಗಿದ್ರು. ಸಿಸಿಟಿವಿಯಲ್ಲಿ ಆ ದೃಶ್ಯ ಸೆರೆಯಾಗಿತ್ತು. ಸಿದ್ದಾಪುರ ಪೊಲೀಸರು ಮಗುಗಾಗಿ ಹುಡುಕಾಟ ನಡೆಸ್ತಿದ್ರು. ಆದ್ರೆ ಸೋಮವಾರ ಮಧ್ಯಾಹ್ನ ಮಡಿವಾಳದ ದರ್ಗಾ ಬಳಿ ಬಂದ ಮಹಿಳೆಯೊಬ್ಬಳು ಮಗುವನ್ನು ಬಿಟ್ಟು ಎಸ್ಕೇಪ್ ಆಗಿದ್ದಾಳೆ.

    ಇತ್ತ ಮಾಧ್ಯಮಗಳಲ್ಲಿ ಮಗು ನಾಪತ್ತೆ ಸುದ್ದಿ ನೋಡಿದ್ದ ವ್ಯಕ್ತಿ ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬಂದ ಮಡಿವಾಳ ಪೊಲೀಸ್ರು ಮಗುವನ್ನು ಹೆತ್ತವರಿಗೆ ಹಸ್ತಾಂತರ ಮಾಡಿದ್ದಾರೆ. ಇನ್ನೂ, ಆರೋಪಿಗಳು ಮಗುವನ್ನು ಕಿಡ್ನಾಪ್ ಮಾಡಿ ಬಸ್ಸಿನಲ್ಲಿ ಬೇರೆ ಕಡೆಗೆ ಕರೆದೊಯ್ದಿದ್ದರಂತೆ. ಒರ್ವ ಮಹಿಳೆಯ ಜತೆ ಮನೆಯೊಂದರಲ್ಲಿ ಬಚ್ಚಿಡಲಾಗಿತ್ತಂತೆ. ಆದ್ರೆ ಮಾಧ್ಯಮಗಳಲ್ಲಿ ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿರುವುದು ನೋಡಿದ ಅರೋಪಿಗಳು ಮಗು ಬಿಟ್ಟು ಪರಾರಿಯಾಗಿರಬಹುದು ಎನ್ನಲಾಗುತ್ತಿದೆ.

    ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    https://www.youtube.com/watch?v=3AexHtfodPM

  • ಆನೇಕಲ್ ಪ್ರೇಮಿಗಳ ವೈರಲ್ ವಿಡಿಯೋ: ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದ ಆರೋಪಿ ಅರೆಸ್ಟ್

    ಆನೇಕಲ್ ಪ್ರೇಮಿಗಳ ವೈರಲ್ ವಿಡಿಯೋ: ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದ ಆರೋಪಿ ಅರೆಸ್ಟ್

    ಬೆಂಗಳೂರು: ಅಪ್ರಾಪ್ತೆಯನ್ನು ಕಿಪಡ್ ಮಾಡಿ, ತಮ್ಮ ಪ್ರೇಮಕ್ಕೆ ಪೊಲೀಸರು ಅಡ್ಡಿಪಡಿಸಿದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಂದು ವಿಡಿಯೋ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹೊಸಕೋಟೆ ಪೊಲೀಸರು ಯಶ್ವಸಿಯಾಗಿದ್ದಾರೆ.

    ವೇಣು ಬಂಧಿತ ಆರೋಪಿ. ಮೂರು ದಿನಗಳ ಹಿಂದೆ ಅಪ್ರಾಪ್ತ ಯುವತಿಯನ್ನು ವೇಣು ಎಂಬಾತ ಅಪಹರಣ ಮಾಡಿದ್ದಾನೆ ಎಂದು ಬಾಲಕಿಯ ಪೋಷಕರು ನಗರದ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ವೇಣುಗೆ ಕರೆಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

    ಇದನ್ನೂ ಓದಿ: ಮನೆ ಬಿಟ್ಟು ಓಡಿ ಹೋಗಿ, ನಮ್ಮನ್ನ ಹುಡ್ಕಬೇಡಿ ಎಂದು ಪೊಲೀಸರಿಗೆ ವಾಟ್ಸಪ್ ವಿಡಿಯೋ ಕಳಿಸಿದ್ರು-ವಿಡಿಯೋ ತಲುಪವ ಮುನ್ನ ಲವ್ ಸ್ಟೋರಿಗೊಂದು ಟ್ವಿಸ್ಟ್

    ಪೊಲೀಸರ ವಿಚಾರಣೆಗೆ ಹೆದರಿದ ವೇಣು ಅಪ್ರಾಪ್ತ ಯುವತಿಗೆ ಪುಸಲಾಯಿಸಿ ತಮ್ಮ ಪ್ರೀತಿಗೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಮತ್ತು ನಮ್ಮನ್ನು ದೂರ ಮಾಡಲು ಯತ್ನಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

    ಸೋಮವಾರ ತಡರಾತ್ರಿ ಹೊಸಕೋಟೆ ಪೊಲೀಸರು ವೇಣುನನ್ನು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಪೋಷಕರ ವಶಕ್ಕೆ ನೀಡಿದ್ದಾರೆ. ಇನ್ನು ವೇಣು ವಿರುದ್ಧ ಪೂಕ್ಸೋ ಕಾಯ್ದೆ ಅಡಿ, ಅಪಹರಣ ಹಾಗು ಆತ್ಮಹತ್ಯೆ ಪ್ರಚೋದನೆ ಕೇಸು ದಾಖಲಿಸಿದ್ದಾರೆ.

    https://www.youtube.com/watch?v=mHzsyglE0is