Tag: ಅಪಹರಣ

  • 10 ವರ್ಷದ ಬಾಲಕನನ್ನು ಅಪಹರಿಸಿದ್ದ 6 ಆರೋಪಿಗಳು ವಶ

    10 ವರ್ಷದ ಬಾಲಕನನ್ನು ಅಪಹರಿಸಿದ್ದ 6 ಆರೋಪಿಗಳು ವಶ

    ಚಿತ್ರದುರ್ಗ: 10 ವರ್ಷದ ಬಾಲಕನೊಬ್ಬನನ್ನು ಅಪಹರಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಶನಿವಾರ ಬೆಳಿಗ್ಗೆ ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆ ಗ್ರಾಮದ ಬಳಿ ಜಗದೀಶ್(10) ಹೊಲಕ್ಕೆ ಹೋಗಿ ವಾಪಸ್ಸಾಗುವಾಗ ದುಷ್ಕರ್ಮಿಗಳು ವಾಹನವೊಂದರಲ್ಲಿ ಬಾಲಕನನ್ನು ಅಪಹರಿಸಿದ್ದಾರೆ. ಬಳಿಕ ಬಾಲಕನ ಪೋಷಕರು ಅಪಹರಣದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಂತೆಯೇ ಪೊಲೀಸರು ಅಪಹರಣಕಾರರಿಗೆ ಬಲೆಬೀಸಿದ್ದರು.

    ಬಾಲಕ ಆಂಧ್ರದ ರಾಯದುರ್ಗದಲ್ಲಿ ಪತ್ತೆಯಾಗಿದ್ದಾನೆ. ಬಾಲಕನನ್ನು ಅಪಹರಿಸಿದ್ದ ಆಂಧ್ರ ಮೂಲದ ನಾನಾಜಿ, ದುರ್ಗಾ ಪ್ರಸಾದ್, ಚಪ್ಪತಲಬಾಲು ರಾಜು, ಗುರ್ತಿ ನಾನಾಜಿ, ನಾಗಿರೆಡ್ಡಿ ಹಾಗೂ ದಮ್ಮು ಶಿವ ಈ ಆರು ಜನ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಅಪಹರಣಕಾರರನ್ನು ವಶಕ್ಕೆ ಪಡೆದ ಮೊಳಕಾಲ್ಮೂರು ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಅಪಹರಣದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.

  • ಮಗ ಕೊಲೆಯಾದ ಸುದ್ದಿ ಕೇಳಿ ತಾಯಿಗೆ ಹೃದಯಾಘಾತ

    ಮಗ ಕೊಲೆಯಾದ ಸುದ್ದಿ ಕೇಳಿ ತಾಯಿಗೆ ಹೃದಯಾಘಾತ

    ಕಲಬುರಗಿ: ಮಗನ ಕೊಲೆ ಸುದ್ದಿ ಕೇಳಿ ತಾಯಿಯೂ ಕೂಡ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ.

    ಕೆಇಬಿಯಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಮೊನಪ್ಪ (42) ಕೊಲೆಯಾದ ದುರ್ದೈವಿ. ಲಲಿತಾಬಾಯಿ (70) ಹೃದಯಾಘಾತದಿಂದ ಸಾವನ್ನಪ್ಪಿರುವ ತಾಯಿ.

    ಅಕ್ಟೋಬರ್ 7 ರಂದು ಹಣಕ್ಕಾಗಿ ಮೊನಪ್ಪನನ್ನ ದುಷ್ಕರ್ಮಿಗಳು ಅಪಹರಣ ಮಾಡಿದ್ದರು. ಕುಟುಂಬಸ್ಥರಿಂದ 6 ಲಕ್ಷ ರೂ. ಹಣ ಕೇಳಿ ಕೊಡದಿದ್ದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು. ನಂತರ ಕುಟುಂಬದವರು ಹಣವನ್ನು ನೀಡಿದ್ದಾರೆ. ಆದರೆ ಪಾಪಿ ದುಷ್ಕರ್ಮಿಗಳು ಹಣ ಪಡೆದರೂ ಸಹ ಮೊನಪ್ಪನನ್ನು ಬಿಡದೇ ಕೊಲೆ ಮಾಡಿ ಜಿಲ್ಲೆಯ ಸೈಯದ್ ಚಿಂಚೋಳಿ-ನರೋಣ ಮಾರ್ಗ ಮಧ್ಯೆ ಶವವನ್ನು ಬಿಸಾಕಿದ್ದಾರೆ.

    ಮೊನ್ನಪ್ಪನ ಶವ ಪತ್ತೆಯಾದ ತಕ್ಷಣ ಕುಟುಂಬಕ್ಕೆ ಬಂದು ವಿಷಯ ತಿಳಿಸಿದ್ದಾರೆ. ಆದರೆ ತಾಯಿ ಈ ಸುದ್ದಿಯನ್ನು ಕೇಳಿದ ತಕ್ಷಣ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಈ ಘಟನೆ ಕುರಿತು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಚಯಸ್ಥರಿಂದಲೇ ಈ ಕೃತ್ಯ ನಡೆದಿದೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

  • ಬೆಂಗ್ಳೂರಲ್ಲಿ ಮೂವರ ಕಿಡ್ನಾಪ್, ಚಿಕ್ಕಬಳ್ಳಾಪುರದಲ್ಲಿ ಓರ್ವನ ಬರ್ಬರ ಹತ್ಯೆ- ಮಳೆಯಿಂದ ಸಿಕ್ಕಿಬಿದ್ರು ಆರೋಪಿಗಳು

    ಬೆಂಗ್ಳೂರಲ್ಲಿ ಮೂವರ ಕಿಡ್ನಾಪ್, ಚಿಕ್ಕಬಳ್ಳಾಪುರದಲ್ಲಿ ಓರ್ವನ ಬರ್ಬರ ಹತ್ಯೆ- ಮಳೆಯಿಂದ ಸಿಕ್ಕಿಬಿದ್ರು ಆರೋಪಿಗಳು

    ಚಿಕ್ಕಬಳ್ಳಾಪುರ: ಬೆಂಗಳೂರು ನಗರದ ನಿವಾಸಿಗಳನ್ನು ಅಪಹರಿಸಿ ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಬಂದು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ನಡೆದಿದೆ.

    ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿರಟೆಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೂರ್ ಅಹಮದ್ ಕೊಲೆಯಾದ ದುರ್ದೈವಿ. ಜುನೈದ್ ಕೊಲೆಯ ಮೂಲ ಸೂತ್ರಧಾರನಾಗಿದ್ದು ತನ್ನ ಹಲವು ಸಹಚರರೊಂದಿಗೆ ನೂರ್ ಅಹಮದ್, ಮುಬಷೀರ್ ಮತ್ತು ಕಾಳು ಎಂಬವರು ಕೊಲೆಗೆ ಸಂಚು ರೂಪಿಸಿದ್ದನು. ಈ ಮೂವರನ್ನು ಜುನೈದ್ ಅಂಡ್ ಟೀಂ ಬೆಂಗಳೂರಿನ ಜೆ.ಸಿ.ನಗರದಲ್ಲಿ ಕಿಡ್ನಾಪ್ ಮಾಡಿತ್ತು.

    ಅಪಹರಣದ ಬಳಿಕ ಜುನೈದ್ ಮೂವರನ್ನು ಚಿಗಟಗೇರೆ ಗ್ರಾಮದಲ್ಲಿಯ ಸ್ನೇಹಿತ ಆಶ್ರಫ್‍ನ ಫಾರಂನಲ್ಲಿ ಇರಿಸಿದ್ದನು. ಫಾರಂನಲ್ಲಿ ನೂರ್ ಅಹಮದ್ ನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಇನ್ನೂ ಕಾಳು ಮತ್ತು ಮುಬಷೀರ್ ಎಂಬವರ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮಳೆಯಿಂದ ಸಿಕ್ಕಿಬಿದ್ರು: ಇತ್ತ ನೂರ್ ಅಹಮದ್, ಮುಬಷಿರ್ ಮತ್ತು ಕಾಳು ಅಪಹರಣದ ಬಳಿಕ ಮೂವರ ಕುಟುಂಸ್ಥರು ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯಚರಣೆಗೆ ಇಳಿದ ಪೊಲೀಸರು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸುವ ವೇಳೆಗೆ ದುಷ್ಕರ್ಮಿಗಳು ಕಾರಿನಲ್ಲಿ ಎಸ್ಕೇಪ್ ಆಗಿದ್ದರು. ಸೋಮವಾರ ಭಾರೀ ಮಳೆಯಾಗಿದ್ದರಿಂದ ಕಾರಿನ ಚಕ್ರಗಳು ಮಣ್ಣಿನಲ್ಲಿ ಸಿಲುಕಿವೆ. ಕೊನೆಗೆ ವಿಧಿಯಲ್ಲದೇ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.

    ಕೊಲೆಗೆ ಕಾರಣ: ಮೂರು ದಿನಗಳ ಹಿಂದೆ ಹಣಕಾಸಿನ ವಿಚಾರದ ಸಂಬಂಧ ಜುನೈದ್ ಮೇಲೆ ಈ ಮೂವರು ಹಲ್ಲೆ ನಡೆಸಿದ್ದರು. ಜುನೈದ್ ಹೆಂಡತಿ ಹಾಗೂ ತಾಯಿ ಮುಂದೆಯೇ ಜುನೈದ್‍ನನ್ನ ಅರೆಬೆತ್ತಲೆ ಮಾಡಿ ಹಲ್ಲೆ ನಡೆಸಲಾಗಿತ್ತು. ಹಾಗಾಗಿ ಮನೆಯವರ ಮುಂದೆ ಅವಮಾನಿತನಾದ ಜುನೈದ್  ಮೂವರ ಕೊಲೆಗೆ ಸಂಚು ರೂಪಿಸಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಘಟನೆ ಸಂಬಂಧ ಪೊಲೀಸರು ಈಗಾಗಲೇ 21 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕಿಡ್ನ್ಯಾಪ್ ಆಗಿದ್ದ ಮಗುವನ್ನ 15 ಗಂಟೆಯಲ್ಲಿ ರಕ್ಷಿಸಿದ ಪೊಲೀಸರು- ಕಂದಮ್ಮನ ನಗುವಿನ ಫೋಟೋ ವೈರಲ್

    ಕಿಡ್ನ್ಯಾಪ್ ಆಗಿದ್ದ ಮಗುವನ್ನ 15 ಗಂಟೆಯಲ್ಲಿ ರಕ್ಷಿಸಿದ ಪೊಲೀಸರು- ಕಂದಮ್ಮನ ನಗುವಿನ ಫೋಟೋ ವೈರಲ್

    ಹೈದರಾಬಾದ್: ಅಪಹರಣಕ್ಕೊಳಗಾಗಿದ್ದ ನಾಲ್ಕು ತಿಂಗಳ ಮಗುವನ್ನು 15 ಗಂಟೆಯೊಳಗೆ ನಗರದ ಸಿಟಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅದರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

    ನಾಂಪಲ್ಲಿಯಲ್ಲಿ ಪಾದಚಾರಿ ಮಾರ್ಗದಲ್ಲಿ ತನ್ನ ತಾಯಿಯ ಪಕ್ಕದಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದ ಸಂದರ್ಭದಲ್ಲಿ 4 ತಿಂಗಳ ಫೈಝಾನ್ ಖಾನ್ ಎಂಬ ಗಂಡು ಮಗುವನ್ನು ಅಪಹರಣ ಮಾಡಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಪಹರಣಕಾರರನ್ನು ಟ್ರ್ಯಾಕ್ ಮಾಡಿ ಆರೋಪಿಗಳಾದ ಮುಷ್ತಾಕ್ ಮತ್ತು ಮೊಹಮ್ಮದ್ ಯೂಸುಫ್‍ನನ್ನು ಬಂಧಿಸಿದ್ದಾರೆ. ಮಗುವನ್ನ ಪೋಷಕರಿಗೆ ಒಪ್ಪಿಸಿದ್ದಾರೆ.

    ಪೊಲೀಸರು ಮಗುವನ್ನು ಎತ್ತಿಕೊಂಡಿರುವ ಫೋಟೋಗಳನ್ನು ಹೆಚ್ಚುವರಿ ಕಮಿಷನರ್ ಸ್ವಾತಿ ಲಕ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 14 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಫೋಟೋದಲ್ಲಿ 4 ತಿಂಗಳ ಮಗು ಮುದ್ದಾಗಿ ನಗುತ್ತಿದ್ದು, ಅದರ ಜೊತೆ ಪೊಲೀಸರು ಕೂಡ ನಗುತ್ತಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    https://twitter.com/AddlCPCrimesHyd/status/916685135885377536

  • ಮಗನ ಸಾವಿಗೆ ಪ್ರತೀಕಾರವಾಗಿ ಅಣ್ಣನ ಮಗನನ್ನೇ ಕೊಂದ!

    ಮಗನ ಸಾವಿಗೆ ಪ್ರತೀಕಾರವಾಗಿ ಅಣ್ಣನ ಮಗನನ್ನೇ ಕೊಂದ!

    ಹೈದರಾಬಾದ್: ತನ್ನ ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಅಣ್ಣನ ಮಗನನ್ನೇ ಅಪಹರಣ ಮಾಡಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್‍ನಲ್ಲಿ ಶುಕ್ರವಾರ ನಡೆದಿದ್ದು, ಆರೋಪಿ ಚಿಕ್ಕಪ್ಪನ್ನು ಪೊಲೀಸರು ಬಂಧಿಸಿದ್ದಾರೆ.

    ಹೈದರಾಬಾದ್‍ನ ದಾದೀಪುರದಲ್ಲಿ ಈ ಘಟನೆ ನಡೆದಿದ್ದು, 7 ವರ್ಷದ ಅಬ್ಬಾಸ್ ಹುಸೈನ್ ರಿಜ್ವಿ ಹತ್ಯೆಯಾದ ಬಾಲಕ. ಚಿಕ್ಕಪ್ಪ ಜಾದವ್ ಅಲಿ ಕೊಲೆ ಆರೋಪಿಯಾಗಿದ್ದು, ಹಳೆ ವೈಷಮ್ಯವೆ ಬಾಲಕನ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. 2008ರಲ್ಲಿ ಅಬ್ಬಾಸ್ ಹುಸೈನ್ ರಿಜ್ವಿಯ ಪೋಷಕರು ಜಾವದ್ ಅಲಿ ಮಗನ ಸಾವಿಗೆ ಕಾರಣರಾಗಿದ್ದರು. ಹೀಗಾಗಿ ಪೋಷಕರ ಮೇಲಿನ ದ್ವೇಷದಿಂದ ಸೇಡು ತೀರಿಸಿಕೊಳ್ಳಲು ಬಾಲಕನನ್ನು ಅಪಹರಣ ಮಾಡಿ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಕೆಲ ದಿನಗಳ ಹಿಂದೆ ಬಾಲಕ ತನ್ನ ಪೋಷಕರ ಜೊತೆ ಮೊಹರಂ ಹಬ್ಬಕ್ಕೆಂದು ದಾದೀಪುರದಲ್ಲಿರುವ ತನ್ನ ಅಜ್ಜ ಖಮರ್ ಹುಸೈನ್ ರಿಜ್ವಿ ಮನೆಗೆ ಹೋಗಿದ್ದನು. ಶುಕ್ರವಾರದಂದು ಮೊಹರಂ ಮೊದಲ ದಿನವಾದ್ದರಿಂದ ಅಲಮ್ ಕೂರಿಸಲು ತಯಾರಿ ನಡೆಸುತ್ತಿದ್ದ. ಇದೇ ಸಂದರ್ಭದಲ್ಲಿ ಚಿಕ್ಕಪ್ಪ ಜಾವಿದ್ ಅಲಿ ಬಾಲಕನನ್ನು ಉಪಾಯದಿಂದ ಕರೆದೊಯ್ದು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಇಲ್ಲಿನ ರೇನ್ ಬಜಾರ್ ಪ್ರದೇಶದ ನಾಗಾಬೌಲಿ ಸ್ಮಶಾನದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.

    ಆರೋಪಿ ಜಾವದ್ ಅಲಿ ತನ್ನ ಮಗನ ಸಾವಿಗೆ ಬಾಲಕನ ಅಜ್ಜನನ್ನು ಹೊಣೆಯಾಗಿಸಿದ್ದಾನೆ. ಜಾವದ್ ಸೌದಿ ಅರೇಬಿಯಾದಲ್ಲಿದ್ದಾಗ ತನ್ನ ಮಗನನ್ನು ಖಮರ್ ಹುಸೇನ್ ರಿಜ್ವಿಯ ಆಶ್ರಯದಲ್ಲಿ ಬಿಟ್ಟಿದ್ದ. ಹೀಗಾಗಿ ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ಅಬ್ಬಾಸ್ ಹುಸೇನ್ ರಿಜ್ವಿಯನ್ನ ಕೊಲೆ ಮಾಡಿದ್ದಾನೆ.

    ರಿಜ್ವಿ ಅಜ್ಜ ಇಲ್ಲಿನ ಬಿಬಿ ಕಾ ಆಲಮ್‍ನಲ್ಲಿ ಅಲಮ್ ಬಾರ್ದರ್ ಆಗಿ ಕೆಲಸ ಮಾಡುತ್ತಿದ್ದು, ಅಜ್ಜನಂತೆ ಬಾಲಕ ಕೂಡ ಅಲಮ್ ಬಾರ್ದರ್ ಆಗಬಹುದು ಎಂದು ಜಾವದ್ ಭಾವಿಸಿದ್ದ. ಹೀಗಾಗಿ ಆತನನ್ನು ಕೊಲ್ಲಲು ನಿರ್ಧರಿಸಿದ್ದ. ಈ ಸಂಬಂಧ ಆರೋಪಿ ಜಾವದ್ ಅಲಿ ವಿರುದ್ಧ ಐಪಿಸಿ ಸೆಕ್ಷನ್ 363 ಮತ್ತು 302ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ವಿ. ಸತ್ಯನಾರಾಯಣ ತಿಳಿಸಿದ್ದಾರೆ.

  • ಬೆಂಗ್ಳೂರಲ್ಲಿ ಖತರ್ನಾಕ್ ಕಿಡ್ನಾಪ್ ಗ್ಯಾಂಗ್-ಅಪಹರಣಕ್ಕೊಳಾಗದ ಯುವಕನಿಂದಲೇ ವಾಟ್ಸಪ್ ವಿಡಿಯೋ

    ಬೆಂಗ್ಳೂರಲ್ಲಿ ಖತರ್ನಾಕ್ ಕಿಡ್ನಾಪ್ ಗ್ಯಾಂಗ್-ಅಪಹರಣಕ್ಕೊಳಾಗದ ಯುವಕನಿಂದಲೇ ವಾಟ್ಸಪ್ ವಿಡಿಯೋ

    ಬೆಂಗಳೂರು: ನಗರದಲ್ಲೊಂದು ಖತರ್ನಾಕ್ ಕಿಡ್ನಾಪ್ ಗ್ಯಾಂಗ್ ಪತ್ತೆಯಾಗಿದೆ. ಕಿಡ್ನಾಪ್ ಗ್ಯಾಂಗ್ ಅಪಹರಣ ಮಾಡಿದ ಯುವಕನಿಂದಲೇ ವಾಟ್ಸಪ್ ವಿಡಿಯೋ ಆತನ ಪೋಷಕರಿಗೆ ಕಳುಹಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದೆ.

    19 ವರ್ಷದ ಶರತ್ ಅಪಹರಣಕ್ಕೊಳಾಗದ ಯುವಕ. ಶರತ್ ತಂದೆ ಆದಾಯ ತೆರಿಗೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಶರತ್ ನಿನ್ನೆ ತನ್ನ ಬುಲೆಟ್ ಬೈಕ್ ಖರೀದಿ ಮಾಡಿ ರೌಂಡ್ಸ್ ಹೋಗಿದ್ದನು. ಈ ವೇಳೆ ಶರತ್ ಅಪಹರಣಕ್ಕೊಳಗಾಗಿದ್ದು, ರಾತ್ರಿ 11 ಗಂಟೆಗೆ ಆತನಿಂದಲೇ ವಾಟ್ಸಪ್ ವಿಡಿಯೋ ಮಾಡಿ ಪೋಷಕರಿಗೆ ಕಳುಹಿಸಿ ಹಣದ ಬೇಡಿಕೆ ಇಟ್ಟಿದ್ದಾರೆ

    ವಾಟ್ಸಪ್ ವಿಡಿಯೋದಲ್ಲೇನಿದೆ?:
    ಹಲೋ ಅಪ್ಪ,
    ನಿನ್ನಿಂದ ಅನುಭವಿಸಿದವರು ನನ್ನನ್ನು ಕಿಡ್ನಾಪ್ ಮಾಡಿದ್ದಾರೆ. ನನಗೆ ತುಂಬಾ ಟಾರ್ಚರ್ ಕೊಡುತ್ತಿದ್ದಾರೆ. 50 ಲಕ್ಷ ರೂ. ಬೇಕೆಂದು ಡಿಮ್ಯಾಂಡ್ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ಹಣವನ್ನು ತಂದುಕೊಡಿ ನಾನಿವರ ಜೊತೆಗೆ ಇರುತ್ತೇನೆ. ಪೊಲೀಸ್ ಕಂಪ್ಲೇಂಟ್ ಮಾಡಬೇಡಿ, ಇವರ ಹತ್ತಿರ ತುಂಬಾ ವೆಪನ್ ಗಳಿದ್ದು, ತುಂಬಾ ಟೆರರ್ ಆಗಿದ್ದಾರೆ. ಪೊಲೀಸ್ ಕಂಪ್ಲೇಂಟ್ ಮಾಡಿದರೆ ನಮ್ಮ ಫ್ಯಾಮಿಲಿಗೂ ಮತ್ತು ನನಗೂ ತೊಂದರೆಯಾಗುತ್ತದೆ. ಇವರು ನಮ್ಮ ಅಕ್ಕಳನ್ನು ಸಹ ಫಾಲೋ ಮಾಡುತ್ತಿದ್ದಾರೆ. ಆಕೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹೇಳಿದ್ದಾರೆ. ಅವರು ಹೇಳಿದ ಮಾಹಿತಿಗಳೆಲ್ಲಾ ಕರೆಕ್ಟ್ ಆಗಿದೆ. ಪ್ಲೀಸ್ ಫ್ಯಾಮಿಲಿ ಜೊತೆ ನನ್ನನ್ನು ಉಳಿಸಿಕೊಳ್ಳಿ. ಇವತ್ತು ನಾನು ಸಿಕ್ಕಿದ್ದೇನೆ, ನಾಳೆ ನಮ್ಮ ಅಕ್ಕ ಸಿಕ್ಕಿ ಹಾಕಿಕೊಳ್ಳಬಹುದು ಹಾಗಾಗಿ ನನ್ನಿಂದಲೇ ಈ ತೊಂದರೆ ಮುಗಿಯಲಿ. ಪ್ಲೀಸ್ ಫ್ಯಾಮಿಲಿ ಸೇಫ್ ಮಾಡ್ಕೋಳ್ಳಿ. ದುಡ್ಡು ಆದಷ್ಟು ಬೇಗ ತಂದುಕೊಡಿ.

    ಈ ಸಂಬಂಧ ಶರತ್ ಪೋಷಕರು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಶರತ್ ಮೊಬೈಲ್ ನೆಟ್ ವರ್ಕ್ ಆಧಾರದ ಮೇಲೆ ಆರೋಪಿಗಳ ಪತ್ತೆಗಾಗಿ ವಿಶೇಷ ಜಾಲ ಬೀಸಿದ್ದಾರೆ.

    https://youtu.be/u3Fk-_h04H0

     

  • ಹುಡುಗಿಯ ಅಪಹರಣಕ್ಕೆ ಯತ್ನಿಸಿದ್ದ ಮೂವರನ್ನು ಮಂಡ್ಯ ಗ್ರಾಮಸ್ಥರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ರು!

    ಹುಡುಗಿಯ ಅಪಹರಣಕ್ಕೆ ಯತ್ನಿಸಿದ್ದ ಮೂವರನ್ನು ಮಂಡ್ಯ ಗ್ರಾಮಸ್ಥರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ರು!

    ಮಂಡ್ಯ: ಹುಡುಗಿಯ ಅಪಹರಣಕ್ಕೆ ಯತ್ನಿಸಿದ್ದ ಮೂವರು ಯುವಕರಿಗೆ ಗ್ರಾಮಸ್ಥರೇ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿರೋ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ತೊರೆಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಬೆಂಗಳೂರಿನ ಗೊಲ್ಲರಹಟ್ಟಿಯ ಬಾಲಾಜಿ, ರಮೇಶ್, ಗುರು ಎಂಬವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಮೂವರುನ ಶುಕ್ರವಾರ ರಾತ್ರಿಯೇ ಗ್ರಾಮಕ್ಕೆ ಬಂದು ಅನುಮಾನಸ್ಪದಾಗಿ ಗ್ರಾಮದಲ್ಲಿ ಓಡಾಡುತ್ತಿದ್ದರು.

    ಈ ಮೂವರ ಬಗ್ಗೆ ಅನುಮಾನಗೊಂಡು ಗ್ರಾಮಸ್ಥರು ಬೆಳಗ್ಗೆ ವಿಚಾರಿಸಿದ್ದಾರೆ. ಪ್ರಾರಂಭದಲ್ಲಿ ಸರಿಯಾಗಿ ಉತ್ತರಿಸದ ಕಾರಣ ಏಟು ತಿಂದ ನಂತ್ರ ಅಪಹರಣಕ್ಕೆ ಬಂದಿರೋದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಕೂಡಲೇ ಗ್ರಾಮಸ್ಥರು ಆ ಮೂವರನ್ನು ಹಿಡಿದು ಕೊಠಡಿಯೊಂದ್ರಲ್ಲಿ ಕೂಡಿಹಾಕಿ ಧರ್ಮದೇಟು ಕೊಟ್ಟಿದ್ದಾರೆ. ಜೊತೆಗೆ ಅವರು ತಂದಿದ್ದ ಕಾರನ್ನು ಜಖಂಗೊಳಿಸಿದ್ದಾರೆ.

    ಕಾರ್ಯನಿಮಿತ್ತ ಗ್ರಾಮಕ್ಕೆ ಆಗಮಿಸಿದ ಶಾಸಕ ಚಲುವರಾಯಸ್ವಾಮಿ ಘಟನೆಯ ಮಾಹಿತಿ ತಿಳಿದು ಕೂಡಲೇ ವಶಕ್ಕೆ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆಯಲ್ಲಿ ಮಲಗಿದ್ದ 9 ವರ್ಷದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರವೆಸಗಿ ಕೊಲೆಗೈದ ಕಾಮುಕರು

    ಮನೆಯಲ್ಲಿ ಮಲಗಿದ್ದ 9 ವರ್ಷದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರವೆಸಗಿ ಕೊಲೆಗೈದ ಕಾಮುಕರು

    ಚಿಕ್ಕಬಳ್ಳಾಪುರ: ಮನೆಯಲ್ಲಿ ಮಲಗಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿರುವ ಕಾಮುಕರು, ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಗ್ರಾಮದ 9 ವರ್ಷದ ಬಾಲಕಿಯನ್ನ ಅಪಹರಿಸಿರುವ ದುಷ್ಕರ್ಮಿಗಳು, ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮನೆಯಲ್ಲಿ ಮಲಗಿದ್ದ ಬಾಲಕಿ ನಾಪತ್ತೆಯಾದ ನಂತರ ಬಾಲಕಿಯ ಪೋಷಕರು ಹಾಗೂ ಸಂಬಂಧಿಕರು ಹುಡುಕಾಟ ನಡೆಸಿದ್ರೂ ಪತ್ತೆಯಾಗಿರಲಿಲ್ಲ. ರಾತ್ರಿ ನಾಪತ್ತೆಯಾದ ಬಾಲಕಿ ಬೆಳಗ್ಗೆ ಗ್ರಾಮದ ಹೊರವಲಯದ ತೋಟವೊಂದರ ಬಳಿಯ ಪೊದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

    ಅರೆ ನಗ್ನ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿಯ ಮೈ ಮೇಲೆ ತರಚಿದ ಗಾಯಗಾಳಗಿದ್ದು, ಕತ್ತು ಹಿಸುಕಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸರು ಸೇರಿದಂತೆ ಎಸ್ಪಿ ಕಾರ್ತಿಕ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.

  • ಸಿನಿಮೀಯ ರೀತಿಯಲ್ಲಿ ಯುವತಿಯ ಕಿಡ್ನ್ಯಾಪ್, ಅತ್ಯಾಚಾರಕ್ಕೆ ಯತ್ನ- ಅರ್ಧಗಂಟೆಯಲ್ಲಿ ಪ್ರಕರಣ ಬೇಧಿಸಿದ ಪೊಲೀಸರು

    ಸಿನಿಮೀಯ ರೀತಿಯಲ್ಲಿ ಯುವತಿಯ ಕಿಡ್ನ್ಯಾಪ್, ಅತ್ಯಾಚಾರಕ್ಕೆ ಯತ್ನ- ಅರ್ಧಗಂಟೆಯಲ್ಲಿ ಪ್ರಕರಣ ಬೇಧಿಸಿದ ಪೊಲೀಸರು

    ಬೆಂಗಳೂರು: ಯವತಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಅದ್ರೆ ಕೇವಲ ಅರ್ಧಗಂಟೆಯಲ್ಲಿ ಪ್ರಕರಣವನ್ನು ಬೇಧಿಸಿ ಯುವತಿಯನ್ನು ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಯುವತಿ ಚಿತ್ರದುರ್ಗದಿಂದ ದೊಡ್ಡಪ್ಪನ ಮಗ ರಾಜೀವ್ ಜೊತೆ ಬೆಂಗಳೂರಿನ ಹೊಸೂರು ರಸ್ತೆಯ ಸಂಬಂಧಿಕರ ಮನೆಗೆ ಬಂದಿದ್ದರು. ಆದ್ರೆ ಸಂಬಂಧಿಕರ ಮನೆ ಸಿಗದ ಕಾರಣ ಯುವತಿ ಮತ್ತು ಅಕೆಯ ಅಣ್ಣ ವಾಪಸ್ಸು ಊರಿಗೆ ಹೋಗಲು ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ರಾತ್ರಿ 1.30ರ ಸಮಯಕ್ಕೆ ಬಂದಿದ್ರು. ಆ ಸಂದರ್ಭದಲ್ಲಿ ಅಂಡರ್ ಪಾಸ್ ಬಳಿ ಇವ್ರನ್ನ ಅಡ್ಡಗಟ್ಟಿದ ಮೂರು ಜನ ಪುಂಡರು ಯುವತಿಯ ಅಣ್ಣನಿಗೆ ಥಳಿಸಿ ಯುವತಿಯನ್ನ ಅಪಹರಿಸಿದ್ರು. ಇದನ್ನ ಕಂಡ ಆಟೋ ಚಾಲಕರೊಬ್ಬರು ಕೂಡಲೇ ಯಶವಂತಪುರ ಪೋಲಿಸ್ರಿಗೆ ವಿಷಯ ತಿಳಿಸಿದ್ದಾರೆ.

    ಕಡಿಗೇಡಿಗಳು ಯುವತಿಯನ್ನ ಗೋಡೌನ್ ಒಂದ್ರಲ್ಲಿ ರೇಪ್ ಮಾಡಲು ಪ್ರಯತ್ನ ಪಟ್ಟಿದ್ರು. ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸ್ರು, ಕಿಡ್ನ್ಯಾಪ್ ಆದ ಅರ್ಧಗಂಟೆಯಲ್ಲೇ ಟ್ರಾವೆಲ್ ಆಫೀಸಿನ ಗೋಡೌನ್‍ನಲ್ಲಿ ಯುವತಿಯನ್ನ ರಕ್ಷಿಸಿ ಕರೆತಂದಿದ್ದಾರೆ. ಅಪಹರಣ ಮಾಡಿದ ಮೂವರಲ್ಲಿ ಫಯಾಜ್ ಎಂಬವನನ್ನು ಬಂಧಿಸಿರುವ ಪೊಲೀಸ್ರು ಇನ್ನಿಬ್ಬರಾದ ಝಬೇರ್ ಹಾಘು ಫತಾಕಿ ಬಾಬುಗಾಗಿ ಬಲೆ ಬೀಸಿದ್ದಾರೆ.

  • ವಿಕಲಚೇತನ ಅಪ್ರಾಪ್ತೆಯ ಅಪಹರಣ: ಮಗಳನ್ನು ಹುಡುಕಿಕೊಡುವಂತೆ ಕುಟುಂಬ ಡಿಎಸ್‍ಪಿ ಮೊರೆ

    ವಿಕಲಚೇತನ ಅಪ್ರಾಪ್ತೆಯ ಅಪಹರಣ: ಮಗಳನ್ನು ಹುಡುಕಿಕೊಡುವಂತೆ ಕುಟುಂಬ ಡಿಎಸ್‍ಪಿ ಮೊರೆ

    ಕೊಪ್ಪಳ: ಬಯಲು ಶೌಚಕ್ಕೆ ಹೋದ ವಿಕಲಚೇತನ ಅಪ್ರಾಪ್ತ ಬಾಲಕಿಯನ್ನ ಅಪಹರಣ ಮಾಡಿರೋ ಘಟನೆ ಕೊಪ್ಪಳದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೊಪ್ಪಳ ತಾಲೂಕಿನ ಮತ್ತೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾತು ಬಾರದ, ಶ್ರವಣದೋಷವುಳ್ಳ 16 ವರ್ಷದ ಬಸಮ್ಮ ಅಪಹರಣಕ್ಕೊಳಗಾದ ಬಾಲಕಿ.

    ಜುಲೈ 28 ರಂದು ರಾತ್ರಿ ಬಹಿರ್ದೆಸೆಗೆ ಹೋದಾಗ ಮತ್ತೂರು ಗ್ರಾಮದ ನಾಗರಾಜ (23) ಎನ್ನುವ ಯುವಕ ಅಪಹರಣ ಮಾಡಿದ್ದಾನೆಂದು ಬಸಮ್ಮ ತಂದೆ ಕೊಟ್ರಪ್ಪ ಅಳವಂಡಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

    ಈ ಬಗ್ಗೆ ದೂರು ದಾಖಲಾದರೂ ಆರೋಪಿಯನ್ನ ಬಂಧಿಸಲು ಪೊಲೀಸರು ವಿಳಂಬ ಮಾಡ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮಗಳನ್ನ ಹುಡುಕಿಕೊಡಿ, ಆರೋಪಿಯನ್ನು ಬಂಧಿಸಿ ಅಂತ ಕೊಪ್ಪಳ ಡಿಎಸ್‍ಪಿ ಶ್ರೀಕಾಂತ ಕಟ್ಟಿಮನಿಯವರಿಗೆ ನೊಂದ ಕುಟುಂಬ ಮೊರೆ ಹೋಗಿದೆ.