Tag: ಅಪಹರಣ

  • ಬೆಳ್ಳಂಬೆಳಗ್ಗೆ ಕೆ.ಆರ್.ಪೇಟೆಯ ತಹಶೀಲ್ದಾರ್ ಅಪಹರಣ?

    ಬೆಳ್ಳಂಬೆಳಗ್ಗೆ ಕೆ.ಆರ್.ಪೇಟೆಯ ತಹಶೀಲ್ದಾರ್ ಅಪಹರಣ?

    ಮೈಸೂರು: ಕೆ.ಆರ್. ನಗರ ತಾಲೂಕಿನ ಚಿಕ್ಕವಡ್ಡರಗುಡಿ ಗ್ರಾಮದ ಹಾಸನ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಕೆ.ಆರ್.ಪೇಟೆಯ ತಹಶೀಲ್ದಾರ್ ರವರು ಅಪಹರಣಕ್ಕೊಳಗಾಗಿದ್ದಾರೆ.

    ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಮಹೇಶ್ ಚಂದ್ರ ನಿಗೂಢವಾಗಿ ಅಪಹರಣಗೊಂಡಿದ್ದಾರೆ. ಇಂದು ಮುಂಜಾನೆ ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಗ್ರಾಮದ ಹಾಸನ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಮಹೇಶ್ ಚಂದ್ರರವರ ಓಮ್ನಿ ಕಾರು ಹಾಗೂ ಶೂಗಳು ಪತ್ತೆಯಾಗಿದ್ದು, ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ.

    ಇಂದು ಬೆಳಗ್ಗೆ ವಾಹನವನ್ನು ಗಮನಿಸಿದ ಚಿಕ್ಕವಡ್ಡರಗುಡಿ ಗ್ರಾಮಸ್ಥರು ಪೊಲೀಸರಿಗೆ ವಿಷಯವನ್ನು ಮುಟ್ಟಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪರಿಶೀಲನೇ ವೇಳೆ ಓಮ್ನಿ ವಾಹನವು ಕೆ.ಆರ್.ಪೇಟೆಯ ತಹಶೀಲ್ದಾರರಾದ ಮಹೇಶ್ ಚಂದ್ರ ಎಂಬವರದ್ದು ಎಂದು ತಿಳಿದು ಬಂದಿದೆ. ಅಲ್ಲದೇ ಸ್ಥಳದಲ್ಲಿ ಸಿಕ್ಕ ಶೂ ಹಾಗೂ ಹರಿದ ಬಟ್ಟೆ ಚೂರಿನಿಂದಾಗಿ ಅವರನ್ನು ಯಾರಾದರೂ ಅಪಹರಿಸಬಹುದೆಂಬ ಅನುಮಾನಕ್ಕೆ ಕಾರಣವಾಗಿದೆ.

    ತಹಶೀಲ್ದಾರ್ ನಾಪತ್ತೆ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲೆಯ ಹೆಚ್ಚುವರಿ ಜಿಲ್ಲಾವರಿಷ್ಠಾಧಿಕಾರಿಯಾದ ಅರುಣಾಂಶಿ ಗಿರಿಯವರು, ಮಹೇಶ್ ಚಂದ್ರರವರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಹಶೀಲ್ದಾರ್ ಆಗಿದ್ದು, ಕಳೆದ ವಾರವಷ್ಟೇ ಅಧಿಕಾರ ಸ್ವೀಕರಿಸಿದ್ದರು. ಮಹೇಶ್ ರವರು ಈ ಹಿಂದೆ ಕೆ.ಆರ್. ನಗರದಲ್ಲಿ ತಹಶೀಲ್ದಾರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಹೀಗಾಗಿ ಅವರ ಕುಟುಂಬದವರು ಕೆ.ಆರ್. ನಗರದಲ್ಲೇ ವಾಸವಾಗಿದ್ದರು. ಎಂದಿನಂತೆ ಗುರುವಾರ ರಾತ್ರಿ 7.30 ಕ್ಕೆ ಕೆ.ಆರ್.ಪೇಟೆಯಲ್ಲಿ ಸಕಾಲ ಸಭೆ ಮುಗಿಸಿ ಹಿಂತಿರುಗುವಾಗ ನಿಗೂಢವಾಗಿ ನಾಪತ್ತೆಯಾಗಿದ್ದಾರೆಂದು ತಿಳಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ದಕ್ಷಿಣ ವಲಯ ಐಜಿಪಿ ಸೌಮೇಂದ್ರ ಮುಖರ್ಜಿಯವರು, ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಆದರೆ ತಹಶೀಲ್ದಾರ್ ಮಹೇಶ್ ಚಂದ್ರ ನಾಪತ್ತೆಯಾಗಿರುವುದು ನಿಜ. ಈ ಹಿನ್ನೆಲೆಯಲ್ಲಿ ಏಳು ತಂಡಗಳಿಂದ ಪತ್ತೆ ಕಾರ್ಯ ನಡೆಯುತ್ತಿದ್ದು, ಮೈಸೂರು, ಮಂಡ್ಯಗಳಲ್ಲಿ ತಲಾ ಮೂರು ತಂಡಗಳು ಹಾಗೂ ಬೆಂಗಳೂರಿನಲ್ಲಿ ಒಂದು ತಂಡ ತನಿಖೆ ನಡೆಸುತ್ತಿದೆ. ಮಹೇಶ್ ಚಂದ್ರರವರ ಕುಟುಂಬಸ್ಥರು ಬೆಂಗಳೂರಿನಲ್ಲಿ ವಾಸವಿದ್ದು, ಅವರು ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಕೆಲ ಹೊತ್ತಿನಲ್ಲಿ ಪ್ರಕರಣದ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ವಿದ್ಯಾರ್ಥಿನಿಯ ರೇಪ್ ಯತ್ನ, ಕಗ್ಗೊಲೆ ಪ್ರಕರಣ- ಆರೋಪಿಯ ಬಂಧನ

    ವಿದ್ಯಾರ್ಥಿನಿಯ ರೇಪ್ ಯತ್ನ, ಕಗ್ಗೊಲೆ ಪ್ರಕರಣ- ಆರೋಪಿಯ ಬಂಧನ

    ಕೋಲಾರ: ವಿದ್ಯಾರ್ಥಿನಿ ಅತ್ಯಾಚಾರ ಯತ್ನ ಹಾಗೂ ಕೊಲೆ ಪ್ರಕರಣವನ್ನು ಮಾಲೂರು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಯುವಕ ರಂಜಿತ್ (22) ಬಂಧಿತ ಆರೋಪಿಯಾಗಿದ್ದು, ಜಿಲ್ಲೆಯ ಮಾಲೂರು ತಾಲೂಕಿನ ಗ್ರಾಮದವನು. ಈತ ಮೃತ ವಿದ್ಯಾರ್ಥಿನಿ ಮನೆಯ ಬಳಿ ಗಾರೆ ಕೆಲಸ ಮಾಡಲು ಬರುತ್ತಿದ್ದನು. ಆದ್ರೆ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ಸಂಬಂಧಿಸಿದಂತೆ ಆರೋಪಿಯನ್ನು ಇಂದು ನ್ಯಾಯಾಲಯದ ಮುಂದೆ ಮಾಲೂರು ಪೊಲೀಸರು ಹಾಜರುಪಡಿಸಲಿದ್ದಾರೆ.

    ಏನಿದು ಪ್ರಕರಣ?:
    ಬುಧವಾರ ಸಂಜೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ರಕ್ಷಿತಾ (15) ಎಂಬ ವಿದ್ಯಾರ್ಥಿನಿಯನ್ನು ಅಪಹರಿಸಿ ಜಿಲ್ಲೆಯ ಮಾಲೂರು ಪಟ್ಟಣದ ಪಟ್ಟಣದ ರೈಲ್ವೇ ಅಂಡರ್ ಪಾಸ್ ಬಳಿಯ ನಿರ್ಜನ ಪ್ರದೇಶದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಮಾಲೂರು ಪಟ್ಟಣದ ಇಂದಿರಾನಗರದ ನಿವಾಸಿಯಾಗಿದ್ದ ರಕ್ಷಿತಾ, ಬಿಜಿಎಸ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಬುಧವಾರ ಸಂಜೆ 4.30ರ ವೇಳೆ ಶಾಲೆಯಿಂದ ಸ್ನೇಹಿತೆಯೊಂದಿಗೆ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳಿಬ್ಬರು ಅಪಹರಣ ಮಾಡಿದ್ದರು. ಬಳಿಕ ಅದೇ ಮಾರ್ಗದಲ್ಲಿದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿರುವ ಶಂಕೆ ವ್ಯಕ್ತವಾಗಿತ್ತು. ಅಲ್ಲದೇ ವಿದ್ಯಾರ್ಥಿನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು.

    ಘಟನೆ ವೇಳೆ ರಕ್ಷಿತಾ ಜೊತೆಗಿದ್ದ ಸ್ನೇಹಿತೆ, ದುಷ್ಕರ್ಮಿಗಳಿಂದ ತಪ್ಪಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ಬಳಿಕ ವಿದ್ಯಾರ್ಥಿನಿ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರು ಸ್ಥಳಕ್ಕೆ ತಲುಪುವ ವೇಳೆಗೆ ರಕ್ಷಿತಾಳನ್ನು ಕೊಲೆ ಮಾಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಘಟನೆ ನಡೆದ ಬಳಿಕ ರಕ್ಷಿತಾಳನ್ನು ಅಪಹರಣ ಮಾಡಲು ಆರೋಪಿಗಳು ಬಳಸಿದ್ದ ಬೈಕ್ ಸ್ಥಳದಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದರು. ಘಟನೆ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಉದ್ಯಮಿ ಪುತ್ರನ ಅಪಹರಿಸಿ 1 ಕೋಟಿ ರೂ.ಗೆ ಡಿಮಾಂಡ್ ಮಾಡಿದವ್ರು ಜೈಲು ಸೇರಿದ್ರು!

    ಉದ್ಯಮಿ ಪುತ್ರನ ಅಪಹರಿಸಿ 1 ಕೋಟಿ ರೂ.ಗೆ ಡಿಮಾಂಡ್ ಮಾಡಿದವ್ರು ಜೈಲು ಸೇರಿದ್ರು!

    ಹುಬ್ಬಳ್ಳಿ: 7ನೇ ತರಗತಿ ಬಾಲಕನ್ನು ಅಪಹರಿಸಿ 1 ಕೋಟಿ ರೂ. ಬೇಡಿಕೆಯಿಟ್ಟಿದ್ದ ಘಟನೆ ರಾಜ್ಯ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಪ್ರತಿಷ್ಠಿತ ಉದ್ಯಮಿ ಹಾಗೂ ರಿಯಲ್ ಎಸ್ಟೇಟ್ ವ್ಯಾಪಾರಿ ಅಹ್ಮದ್ ಅತ್ತರ್ ಅವರ ಪುತ್ರನನ್ನು ಜುಲೈ 30ರಂದು ದುಷ್ಕರ್ಮಿಗಳು ಅಪಹರಿಸಿ 1 ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದರು. ಬಳಿಕ ನಡೆದ ಮಾತುಕತೆಯಲ್ಲಿ 40 ಲಕ್ಷ ರೂ. ಪಡೆಯಲು ಒಪ್ಪಿಗೆ ನೀಡಿದ್ದರು. ಇದರಂತೆ ಅಹ್ಮದ್ 40 ಲಕ್ಷ ರೂ. ನೀಡಿ ತಮ್ಮ ಮಗನನ್ನು ದುಷ್ಕರ್ಮಿಗಳಿಂದ ಬಿಡಿಸಿಕೊಂಡು ಬಂದಿದ್ದರು.

    ಏನಿದು ಪ್ರಕರಣ?: ಹುಬ್ಬಳ್ಳಿಯ ವಿದ್ಯಾನಗರದ ಸೇಂಟ್ ಅಂಥೋನಿ ಶಾಲೆಯಲ್ಲಿ ಅಹ್ಮದ್ ಅವರ ಪುತ್ರ 7ನೇ ತರಗತಿ ಓದುತ್ತಿದ್ದ. ಇದನ್ನು ಗಮನಿಸಿದ್ದ ಆರೋಪಿಗಳು ಶಾಲೆಯ ಬಳಿಯಿಂದ ಬಾಲಕನನ್ನು ಅಪಹರಣ ಮಾಡಿದ್ದರು. ಬಳಿಕ ಅಹ್ಮದ್ ಅವರಿಂದ ಹಣ ಪಡೆದು ಮರುದಿನ ಅಂದರೆ ಜುಲೈ 31 ಸಂಜೆ ಬಾಲಕನನ್ನು ಗದಗ ಜಿಲ್ಲೆಯ ಕದಂಪೂರ ಗ್ರಾಮದಲ್ಲಿ ಬಿಡುಗಡೆ ಮಾಡಿದ್ದರು. ಪುತ್ರನನ್ನು ಅಪಹರಣ ಮಾಡಿದ್ದ ಆರೋಪಿಗಳಿಂದ ಅಹ್ಮದ್ ತಮ್ಮ ಮಗನನ್ನು ಬಿಡಿಸಿಕೊಂಡು ಬಂದ ಬಳಿಕ ಜುಲೈ 31ರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿತ್ತು.

    ಬಾಲಕನ ಸುಳಿವು: ಪ್ರಕರಣದ ಕುರಿತು ಅಹ್ಮದ್ ರಿಂದ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಅಪಹರಣಕ್ಕೆ ಒಳಗಾಗಿದ್ದ ಬಾಲಕ ನೀಡಿದ ಸುಳಿವು ಆರೋಪಿಗಳ ಪತ್ತೆಗೆ ಸಹಾಯವಾಗಿತ್ತು.

    ಅಂದಹಾಗೇ ಹುಬ್ಬಳ್ಳಿ ನಗರದ ಶಾಲೆಯಿಂದ ಬಾಲಕನ್ನು ಅಪಹರಣ ಮಾಡಿದ್ದ ಆರೋಪಿಗಳು ಅಂದು ಆಟೋವೊಂದರಲ್ಲಿ ನಗರವನ್ನು ಸುತ್ತಿದ್ದರು. ಈ ವೇಳೆ ಅಹ್ಮದ್ ಅವರೊಂದಿಗೆ ಫೋನ್ ಮೂಲಕ ಸಂಪರ್ಕಿಸಿ ಹಣದ ವ್ಯವಹಾರ ನಡೆಸಿದ್ದರು. ಈ ವೇಳೆ ಬಾಲಕ ತಾನು ಪ್ರಯಾಣಿಸಿದ್ದ ಆಟೋ ಸಂಖ್ಯೆಯನ್ನು ಗಮನಿಸಿ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದ.

    ಬಾಲಕನಿಂದ ಪಡೆದ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆ ನಡೆಸಿದ್ದರು. ಹುಬ್ಬಳ್ಳಿ ನಗರದಲ್ಲಿ ಸಂಚಾರಿಸುವ ಎಲ್ಲಾ ಆಟೋಗಳ ಮಾಹಿತಿ ಪೊಲೀಸರ ಬಳಿ ಇದ್ದು, ಈ ದಾಖಲೆ ಅನ್ವಯ ಆಟೋ ಚಾಲಕನ್ನು ಅಬ್ದುಲ್ ಶಿರೂರ ಹಾಗೂ ಅಹ್ಮದ ಆಜಾದ್‍ರನ್ನು ಬಂಧಿಸಿದ್ದರು. ಬಳಿಕ ಆರೋಪಿಗಳ ವಿಚಾರಣೆ ನಡೆಸಿದ ವೇಳೆ ಪ್ರಕರಣ ಇತರೇ 8 ಆರೋಪಿಗಳು ಸಿಕ್ಕಿಬಿದ್ದರು. ಆದರೆ ವಿಚಾರಣೆ ವೇಳೆ ಪೊಲೀಸರಿಗೆ ಮತ್ತೊಂದು ಶಾಕಿಂಗ್ ಸಂಗತಿ ತಿಳಿದು ಬಂದಿದ್ದು, ಅಹ್ಮದ್ ಅವರ ಮನೆಯಲ್ಲಿ ಪ್ಲಂಬರ್ ಕೆಲಸ ಮಾಡುತ್ತಿದ್ದ ಅಜಾದ್ ಅಪಹರಣಕ್ಕೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯಾಗಿದ್ದ.

    ಬಾಲಕನನ್ನು ಅಪಹರಣ ಮಾಡಿದ ಬಳಿಕ 11 ಮಂದಿಯೂ ಅಹ್ಮದ್ ಚಲನವಲನವನ್ನು ಗಮನಿಸಿದ್ದರು. ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡಿದ್ದ ವೇಳೆಯೂ ಫೋನ್ ಮಾಡಿ ಪೊಲೀಸರಿಗೆ ದೂರು ನೀಡಿದರೆ ಬಾಲಕನ್ನು ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು.

    ಸದ್ಯ ಕೃತ್ಯದಲ್ಲಿ ಭಾಗಿಯಾಗಿದ್ದ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಬಂಧಿತರ ಕೈಯಲ್ಲಿದ್ದ 26 ಲಕ್ಷ ರೂ. ಹಣ, ಕೃತ್ಯಕ್ಕೆ ಬಳಸಿದ್ದ ಆಟೋ, ಬೈಕ್ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಪ್ರಮುಖ ಆರೋಪಿ ಅಜಾದ್‍ನನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ.

  • ಪಕ್ಕದ್ಮನೆ ಆಂಟಿ ಮೇಲೆ ಲವ್-ಮದ್ವೆಗಾಗಿ 4 ವರ್ಷದ ಕಂದಮ್ಮನನ್ನೇ ಅಪಹರಿಸಿದ!

    ಪಕ್ಕದ್ಮನೆ ಆಂಟಿ ಮೇಲೆ ಲವ್-ಮದ್ವೆಗಾಗಿ 4 ವರ್ಷದ ಕಂದಮ್ಮನನ್ನೇ ಅಪಹರಿಸಿದ!

    ಘಜಿಯಾಬಾದ್: 4 ವರ್ಷದ ಮಗುವಿನ ತಾಯಿಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ 28 ವರ್ಷದ ಯುವಕನೊಬ್ಬ ಆಕೆಯ ಕಂದನನ್ನು ಅಪಹರಣ ಮಾಡಿರುವ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್ ನಗರದಲ್ಲಿ ನಡೆದಿದೆ.

    28 ವರ್ಷದ ಮೌನು ತ್ಯಾಗಿ ಮಗುವನ್ನು ಅಪಹರಣ ಮಾಡಿದ್ದ ಆರೋಪಿ. ಸದ್ಯ ಆರೋಪಿ ಅಪಹರಣ ಮಾಡಿದ್ದ ಮಗುವನ್ನು ದೆಹಲಿಯಿಂದ ಸಹರಾನ್ಪುರ್ ಮಾರ್ಗವಾಗಿ ಬಸ್ಸಿನಲ್ಲಿ ತೆರಳುತ್ತಿದ್ದ ವೇಳೆ ಪೊಲೀಸರು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ.

    ಆರೋಪಿ ಮೌನು ತ್ಯಾಗಿ ಕೂಲಿ ಕಾರ್ಮಿಕನಾಗಿದ್ದು, ಮಹಿಳೆ ವಾಸಿಸುತ್ತಿದ್ದ ಮನೆಯ ಬಳಿಯೇ ವಾಸಿಸುತ್ತಿದ್ದ. ಅಲ್ಲದೇ ಕಳೆದ ಒಂದು ವರ್ಷದಿಂದ ಮಹಿಳೆಗೂ ಪರಿಚಯವಿದ್ದ. ಆದರೆ ಜುಲೈ 24 ರಂದು ಮಗು ಶಾಲೆಗೆ ತೆರಳಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ತ್ಯಾಗಿ ಅಪಹರಣ ಮಾಡಿದ್ದ. ಮಗು ಕಾಣೆಯಾದ ಬಗ್ಗೆ 25 ರಂದು ಮಹಿಳೆ ದೂರು ದಾಖಲಿಸಿದ್ದರು.

    ಅಂದಹಾಗೇ ಕುಡಿತದ ದಾಸನಾಗಿದ್ದ ಪತಿಯನ್ನು ತೊರೆದಿದ್ದ ಮಹಿಳೆ ಕಳೆದ ಕೆಲ ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದರು. ಇದನ್ನೇ ಅನುಕೂಲ ಮಾಡಿಕೊಂಡ ತ್ಯಾಗಿ ತನ್ನೊಂದಿಗೆ ಮದುವೆಯಾಗುವಂತೆ ಮಹಿಳೆಗೆ ಒತ್ತಾಯ ಮಾಡಿದ್ದ. ಆದರೆ ಈಗಾಗಲೇ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಮೌನು ತ್ಯಾಗಿಯನ್ನು ಮದುವೆಯಾಗಲು ಮಹಿಳೆ ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಆರೋಪಿ ಮಗುವನ್ನು ಅಪಹರಣ ಮಾಡಿದ್ದ.

    ಮೌನು ತ್ಯಾಗಿ ಹಲವು ದಿನಗಳಿಂದ ಕುಟುಂಬಕ್ಕೆ ಪರಿಚಯವಿದ್ದ ಕಾರಣ ಮಗು ಸಹ ಆತ ಕರೆದ ತಕ್ಷಣ ಜೊತೆ ತೆರಳಿದೆ. ಮಗುವನ್ನು ಕರೆದುಕೊಂಡ ಆರೋಪಿ ಮೊದಲು ಮೀರತ್ ಗೆ ತೆರಳಿದ್ದು, ಬಳಿಕ ಮಗುವಿನ ತಾಯಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಅಲ್ಲದೇ ತನ್ನನ್ನು ಮದುವೆಯಾಗದಿದ್ದರೆ ಮಗುವನ್ನು ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ. ಈ ವೇಳೆ ಆತಂಕಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಪ್ರಕರಣ ಕುರಿತು ದೂರು ಪಡೆದ ಪೊಲೀಸರು ಆರೋಪಿಯ ಫೋನ್ ಮಾಹಿತಿ ಪಡೆದು ಆತ ಇರುವ ಸ್ಥಳವನ್ನು ಪತ್ತೆಮಾಡಿ ಮಗುವನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ. ಅಲ್ಲದೇ ಆರೋಪಿ ಶಾಲೆಯ ಬಳಿಯಿಂದ ಮಗುವನ್ನು ಅಪಹರಣ ಮಾಡಲು ಬಳಕೆ ಮಾಡಿದ್ದ ಬೈಕನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆತನ ವಿರುದ್ಧ ಅಪಹರಣ ದೂರಿನ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

  • ಅಪ್ರಾಪ್ತೆಯನ್ನು ಮನೆಯಿಂದ್ಲೇ ಅಪಹರಿಸಿ 3 ತಿಂಗ್ಳು ನಿರಂತರ ಅತ್ಯಾಚಾರ!

    ಅಪ್ರಾಪ್ತೆಯನ್ನು ಮನೆಯಿಂದ್ಲೇ ಅಪಹರಿಸಿ 3 ತಿಂಗ್ಳು ನಿರಂತರ ಅತ್ಯಾಚಾರ!

    ಚಿಕ್ಕೋಡಿ: ಕಾಮುಕನೊಬ್ಬ ಅಪ್ತಾಪ್ತ ಬಾಲಕಿಯನ್ನು ಮನೆಯಿಂದಲೇ ಅಪಹರಿಸಿ ಸತತ ಮೂರು ತಿಂಗಳು ಅತ್ಯಾಚಾರ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈಗ ಆರೋಪಿ ಸುನೀಲ್ ಬಿಳ್ಳೂರ್ (23) ನನ್ನು ಪೊಲೀಸರು ಬಂಧಿಸಿದ್ದಾರೆ.

    ಘಟನೆ ವಿವರ:
    ಸುನೀಲ್ ಮೇ 4 ರಂದು ಬಾಲಕಿಯನ್ನು ಅವರ ಮನೆಯಿಂದಲೇ ಅಪಹರಿಸಿದ್ದಾನೆ. ಬಳಿಕ ವಿಜಯಪುರದ ಅಜ್ಞಾತ ಸ್ಥಳದಲ್ಲಿರಿಸಿ ಬಾಲಕಿ ಮೇಲೆ ಮೂರು ತಿಂಗಳು ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಇತ್ತ ಮನೆಯಿಂದ ಕಾಣೆಯಾಗಿದ್ದ ಮಗಳ ಬಗ್ಗೆ ಪೋಷಕರು ಪೊಲೀಸರಿಗೆ ನಾಪತ್ತೆ ದೂರನ್ನು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಆರೋಪಿ ಇರುವ ಬಗ್ಗೆ ಸುಳಿವೂ ಸಿಕ್ಕಿರಲಿಲ್ಲ. ಆದರೆ ಶುಕ್ರವಾರ ಆರೋಪಿ ಸ್ನೇಹಿತನ ಬಳಿ ಹಣ ಕೇಳಲು ಕೊಕಟನೂರಿಗೆ ಬಂದಾಗ ಐಗಳಿ ಪೊಲೀಸರು ಬಂಧಿಸಿದ್ದಾರೆ.

    ಸದ್ಯಕ್ಕೆ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆಂದು ಜಿಲ್ಲಾಸ್ಪತ್ರೆಗೆ ಪೊಲೀಸರು ರವಾನಿಸಿದ್ದಾರೆ. ಆರೋಪಿ ಸುನೀಲ್ ಬಿಳ್ಳೂರ್ ವಿರುದ್ಧ 376 ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

    ಈ ಘಟನೆ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಪೊಲೀಸ್ ಪೇದೆಯನ್ನು ಅಪಹರಿಸಿ ಗುಂಡಿಟ್ಟು ಕೊಂದ ಉಗ್ರರು!

    ಪೊಲೀಸ್ ಪೇದೆಯನ್ನು ಅಪಹರಿಸಿ ಗುಂಡಿಟ್ಟು ಕೊಂದ ಉಗ್ರರು!

    ಶ್ರೀನಗರ: ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಿಂದ ಅಪಹರಿಸಲ್ಪಟ್ಟಿದ್ದ ಪೊಲೀಸ್ ಪೇದೆಯ ಮೃತದೇಹ ಪತ್ತೆಯಾಗಿದ್ದು, ಉಗ್ರರು ಗುಂಡಿಟ್ಟು ಪೊಲೀಸ್ ಪೇದೆಯನ್ನು ಕೊಲೆ ಮಾಡಿ ವಿಕೃತಿ ತೋರಿದ್ದಾರೆ.

    ಸಲೀಮ್ ಶಾಹ್ ಮೃತ ಪೊಲೀಸ್ ಪೇದೆ. ರಜೆಯಲ್ಲಿದ್ದ ಪೊಲೀಸ್ ಪೇದೆಯನ್ನು ಶುಕ್ರವಾರ ರಾತ್ರಿ ಅಪಹರಣ ಮಾಡಲಾಗಿತ್ತು. ಶನಿವಾರ ಸಂಜೆ ವೇಳೆಗೆ ಮೃತ ದೇಹ ಪತ್ತೆಯಾಗಿದೆ.

    ಪೊಲೀಸ್ ಪೇದೆ ಅಪಹರಣಗೊಂಡ ಮಾಹಿತಿ ತಿಳಿದ ತಕ್ಷಣ ಪೇದೆಯ ಪತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ ಈ ವೇಳೆಗೆ ಉಗ್ರರು ಪೇದೆಯನ್ನು ಕೊಲೆ ಮಾಡಿದ್ದಾರೆ. ಮೃತ ದೇಹದ ಮೇಲೆ ಕೆಲ ಗಾಯದ ಗುರುತು ಪತ್ತೆಯಾಗಿದ್ದು, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಸೇನೆ ವಕ್ತಾರರು ತಿಳಿಸಿದ್ದಾರೆ.

    ಶಾಹ 2016 ರಲ್ಲಿ ತರಬೇತಿ ಬಳಿಕ ಪೊಲೀಸ್ ಕರ್ತವ್ಯಕ್ಕೆ ಸೇರಿದ್ದು, ಪುಲ್ವಾಮ ಡಿಪಿಎಲ್ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ವೃದ್ಧ ಪೋಷಕರಿದ್ದು, ಇಬ್ಬರು ಸಹೋದದರು ಹಾಗೂ ಸಹೋದರಿ ಹೊಂದಿದ್ದಾರೆ. ಈ ಕುಟುಂಬಲ್ಲಿ ಶಾಹ ಒಬ್ಬರೇ ದುಡಿದು ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದರು.

    ಸದ್ಯ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆ ಮಾಡಿದ ದುಷ್ಕರ್ಮಿಗಳಿಗಾಗಿ ತನಿಖೆ ನಡೆಸಿದ್ದಾರೆ. ನಿಷೇಧಿತ ಭಯೋತ್ಪಾದನಾ ಸಂಘಟನೆ ಕೃತ್ಯ ನಡೆಸಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಮೃತ ಪೇದೆಯ ಸಾವಿಕೆ ನ್ಯಾಯ ನೀಡುತ್ತೇವೆ ಎಂದು ತಿಳಿಸಿದ್ದಾರೆ.

    ಘಟನೆಯನ್ನು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಖಂಡಿಸಿ ಟ್ವೀಟ್ ಮಾಡಿದ್ದು, ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಮೃತ ಪೇದೆಯ ಕುಟುಂಬಕ್ಕೆ ನೋವು ಬರಿಸುವ ಶಕ್ತಿ ದೇವರು ನೀಡಲಿ ಎಂದು ಬರೆದುಕೊಂಡಿದ್ದಾರೆ.

  • ನಾಲ್ಕು ಜನರ ಗುಂಪಿನಿಂದ ಅಪಹರಣವಾಗಿದ್ದ ಮಹಿಳೆ ಗ್ರೇಟ್ ಎಸ್ಕೇಪ್!

    ನಾಲ್ಕು ಜನರ ಗುಂಪಿನಿಂದ ಅಪಹರಣವಾಗಿದ್ದ ಮಹಿಳೆ ಗ್ರೇಟ್ ಎಸ್ಕೇಪ್!

    ಚೆನ್ನೈ: ಮಹಿಳೆಯೊಬ್ಬರನ್ನು ನಾಲ್ಕು ಜನರ ಗುಂಪೊಂದು ಅಪಹರಿಸಿತ್ತು. ಆದ್ರೆ ಇದೀಗ ಮಹಿಳೆ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದಿರುವ ಘಟನೆ ತಿರುವಲೂರು ಜಿಲ್ಲೆಯ ಪೂನಮಲ್ಲಿ ನಗರದಲ್ಲಿ ನಡೆದಿದೆ.

    ಈ ಘಟನೆ ಶುಕ್ರವಾರದಂದು ಕುಂದ್ರಥೂರು ಬಳಿ ನಡೆದಿದೆ. ಇಲ್ಲಿನ ಸಿರುಕಲಥೂರು ಗ್ರಾಮದ ನಿವಾಸಿ 25 ವರ್ಷದ ಇಳ್ಯಾರಾಣಿ ಅಪಹರಣಗೊಂಡ ಮಹಿಳೆ. ಇವರು ಖಾಸಗಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

    ಕಾರಿನಲ್ಲಿ ಬಂದ ಆರೋಪಿಗಳು ಮಹಿಳೆಯ ಬಳಿ ವಿಳಾಸ ಕೇಳುವ ನೆಪದಲ್ಲಿ ಅವರನ್ನು ಅಪಹರಿಸಿ, ತ್ರೀಚಿ ಮಾರ್ಗಕ್ಕೆ ಕೊಂಡೊಯ್ದಿದ್ದರು. ಮಾರ್ಗ ಮಧ್ಯೆ ಆರೊಪಿಗಳ ಕಾರು ಕೆಟ್ಟು ಹೋಗಿದ್ದರಿಂದ ಮಧುರಂತಕಂ ಬಳಿ ನಿಲ್ಲಿಸಿದ್ದರು. ಈ ವೇಳೆ ಆರೋಪಿಗಳು ತನ್ನನ್ನು ಅವರ ಜೊತೆಗೆ ಕರೆದೊಯ್ದು ಮಧುರಂತಕಂ ಬಳಿ ಆಶ್ರಯ ಪಡೆದಿದ್ದರು. ಆಗ ತಾನು ದುಷ್ಕರ್ಮಿಗಳಿಂದ ತಪ್ಪಿಕೊಂಡು ಬಂದೆ ಎಂದು ಮಹಿಳೆ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ.

    ಕೆಲವು ದಿನದಿಂದ ತನಗೆ ಅಪರಿಚಿತ ವ್ಯಕ್ತಿಗಳಿಂದ ಕರೆಗಳು ಬರುತ್ತಿತ್ತು ಎಂದು ಇಳ್ಯಾರಾಣಿ ತಮ್ಮ ಪ್ರಿಯಕರನ ಬಳಿ ಹೇಳಿದ್ದರು. ಸದ್ಯ ಪೂನಮಲ್ಲಿ ಪೊಲೀಸರು ಮಹಿಳೆಯ ಕಾಲ್ ಲಾಗ್ ವಿವರವನ್ನು ಪರಿಶೀಲಿಸುತ್ತಿದ್ದಾರೆ.

    ಸದ್ಯ ಸಂತ್ರಸ್ತೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕಾಗಿ ವಿಶೇಷ ಜಾಲ ಬೀಸಿದ್ದಾರೆ.

  • ಬೈಕಿನಲ್ಲಿ ಬಂದು ಮಹಿಳೆಯನ್ನ ಅಪಹರಿಸಿ, ಅತ್ಯಾಚಾರಕ್ಕೆ ಯತ್ನ!

    ಬೈಕಿನಲ್ಲಿ ಬಂದು ಮಹಿಳೆಯನ್ನ ಅಪಹರಿಸಿ, ಅತ್ಯಾಚಾರಕ್ಕೆ ಯತ್ನ!

    ಬೆಂಗಳೂರು: ನಗರದ ಮೆಜೆಸ್ಟಿಕ್ ಬಸ್ಸು ನಿಲ್ದಾಣದಲ್ಲಿ ಮಹಿಳೆಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸಂತ್ರಸ್ತ ಮಹಿಳೆ ಸೋಮವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದು, ಮತ್ತೊಂದು ಬಸ್ಸಿಗಾಗಿ ಕಾಯುತ್ತಿದ್ದರು. ರಾತ್ರಿ 11 ಗಂಟೆ ಆಗಿದ್ದರಿಂದ ಮಹಿಳೆ ನಿಂತಿದ್ದ ಪ್ರದೇಶಕ್ಕೆ  ಇಬ್ಬರು ವ್ಯಕ್ತಿಗಳು ಆಗಮಿಸಿ ಲೈಂಗಿಕ ಕಿರುಕುಳ ಕೊಡಲು ಪ್ರಾರಂಭಿಸಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಮಹಿಳೆಯು ರಸ್ತೆ ದಾಟಿ ರೈಲ್ವೇ ನಿಲ್ದಾಣದ ಕಡೆ ನಡೆದುಕೊಂಡು ಹೋಗುತ್ತಿದ್ದಾಗ, ಬೈಕಿನಲ್ಲಿ ಬಂದ ಇಬ್ಬರು ಆಕೆಯನ್ನು ಅಪಹರಿಸಿ ಬಾಯಿ ಮುಚ್ಚಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.

    ನಿರ್ಜನ ಪ್ರದೇಶದಲ್ಲಿ ಅಂಗಾಂಗಳನ್ನು ಮುಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಬಾಯಿಗೆ ಕಟ್ಟಿದ ಬಟ್ಟೆಯನ್ನು ತೆಗೆದು  ಕಾಪಾಡಿ ಕಾಪಾಡಿ ಎಂದು ಮಹಿಳೆ ಜೋರಾಗಿ ಕಿರುಚಾಡಿದ್ದಾರೆ. ಗಾಬರಿಗೊಂಡ ಸವಾರರು ತಕ್ಷಣವೇ ಆಕೆಯನ್ನು ಅಲ್ಲಿಯೇ ಬಿಟ್ಟು ಬೈಕ್ ಏರಿ ಪರಾರಿಯಾಗಿದ್ದಾರೆ. ಸಂತ್ರಸ್ತ ಮಹಿಳೆಯು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಬೈಕ್ ನಂಬರ್ ಸಹಿತ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

  • ಒಂದೇ ಗ್ಯಾಂಗ್, 2ಕಡೆ ನಾಲ್ವರ ಅಪಹರಣ – 7ಲಕ್ಷ ರೂ. ದೋಚಿ ಪರಾರಿ

    ಒಂದೇ ಗ್ಯಾಂಗ್, 2ಕಡೆ ನಾಲ್ವರ ಅಪಹರಣ – 7ಲಕ್ಷ ರೂ. ದೋಚಿ ಪರಾರಿ

    ಶಿವಮೊಗ್ಗ: ಒಂದೇ ಗ್ಯಾಂಗ್‍ನಿಂದ ಎರಡು ಕಡೆ ನಾಲ್ವರನ್ನು ಅಪಹರಿಸಿ ಏಳು ಲಕ್ಷ ದೋಚಿ ಪೊಲೀಸರಿಗೆ ಪಿಸ್ತೂಲ್ ತೋರಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ರೌಡಿ ಶೀಟರ್ ಜಮೀರ್ ಅಲಿಯಾಸ್ ಟೈಲ್ಸ್ ಬಚ್ಚ ಮತ್ತು ಗ್ಯಾಂಗ್ ಈ ಕೃತ್ಯ ಎಸಗಿದೆ. ಶಿವಮೊಗ್ಗದ ಪ್ರತಿಷ್ಠಿತ ಉದ್ಯಮಿ ಹಾಗೂ ಜೆಡಿಎಸ್ ಮುಖಂಡ ಅಬಿಬ್ ಅಳಿಯ ಸಮಿ, ಮತ್ತವರ ಗೆಳೆಯ ಗ್ರಾನೈಟ್ ವ್ಯಾಪಾರಿ ಅನ್ಸರ್ ಸೇರಿ ನಾಲ್ವರ ಅಪಹರಣ ಮಾಡಲಾಗಿದೆ.

    ಚಾಲುಕ್ಯ ನಗರದಲ್ಲಿ ನಾಲ್ವರನ್ನು ಅಪಹರಿಸಿ, ನಾನಾ ಕಡೆ ಸುತ್ತಾಡಿಸಿ ದುಡ್ಡು ದೋಚಿ ಕೊನೆಗೆ ಅನುಪಿನ ಕಟ್ಟೆ ಬಳಿ ಬಿಟ್ಟು ಹೋಗಿದ್ದಾರೆ. ಪೊಲೀಸರು ಎಲ್ಲಾ ಕಡೆ ನಾಕಾಬಂಧಿ ಹಾಕಿದ್ದಾರೆ ಅನ್ನೋದು ಅರಿವಾದ ಕೂಡಲೇ ತಮ್ಮನ್ನು ಬೆನ್ನತ್ತಿದ ಪೊಲೀಸರಿಗೆ ಪಿಸ್ತೂಲ್ ತೋರಿಸಿ ಲಕ್ಷ್ಮೀ ಟಾಕೀಸ್ ಬಳಿ ಇನ್ನೋವಾ ಕಾರು ಬಿಟ್ಟು ಪಾತಕಿಗಳು ಪರಾರಿಯಾಗಿದ್ದಾರೆ.

    ಈ ಸಂಬಂಧ ದೊಡ್ಡಪೇಟೆ ಹಾಗೂ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಆಸ್ಪತ್ರೆಯಿಂದ ಹೆಣ್ಣು ಶಿಶುವನ್ನು ಕದ್ದಿದ್ದ ಮಹಿಳೆಯ ಬಂಧನ

    ಆಸ್ಪತ್ರೆಯಿಂದ ಹೆಣ್ಣು ಶಿಶುವನ್ನು ಕದ್ದಿದ್ದ ಮಹಿಳೆಯ ಬಂಧನ

    ಬೀದರ್: ಹೈದ್ರಾಬಾದ್ ನ ಕೊಟಿ ಆಸ್ಪತ್ರೆಯಿಂದ ಹೆಣ್ಣು ಮಗುವನ್ನು ಅಪಹರಿಸಿದ್ದ ಮಹಿಳಾ ಆರೋಪಿಯನ್ನು ತೆಲಂಗಾಣ ಹಾಗೂ ಬೀದರ್ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಯನ(34) ಮಗು ಅಪಹರಿಸಿದ್ದ ಆರೋಪಿ. ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್ ಸ್ವಗ್ರಾಮದಲ್ಲಿ ಆರೋಪಿಯನ್ನ ಬಂಧಿಸಿಲಾಗಿದೆ. ಬೀದರ್ ತಾಲೂಕಿನ ಕಾಶಂಪೂರ್ (ಬಿ) ಗ್ರಾಮದ ನಿವಾಸಿಯಾಗಿರುವ ನಯನ ಕಳೆದ ಎರಡು ದಿನಗಳ ಹಿಂದೆ ಹೈದ್ರಾಬಾದ್ ನ ಕೊಟಿ ಆಸ್ಪತ್ರೆಯಿಂದ ಹೆಣ್ಣುಮಗು ಅಪಹರಿಸಿ ಬೀದರ್ ಜಿಲ್ಲಾಸ್ಪತ್ರೆಯ ನಲ್ಲಿ ಮಗು ಬಿಟ್ಟು ಪರಾರಿಯಾಗಿದ್ದಳು. ಇದನ್ನೂ ಓದಿ: ಹೈದರಾಬಾದ್‍ನಲ್ಲಿ ಕಾಣೆಯಾಗಿದ್ದ ಮಗು ಬೀದರ್ ನಲ್ಲಿ ಪತ್ತೆ

    ಮದುವೆ ಬಳಿಕ ಹೈದ್ರಾಬಾದ್ ನಲ್ಲಿಯೇ ವಾಸವಾಗಿದ್ದ ನಯನಾಗೆ ಎರಡು ಬಾರಿ ಗರ್ಭಪಾತವಾಗಿತ್ತು. ಇದರಿಂದ ಮನನೊಂದು ನಯನ ಮಗುವನ್ನು ಅಪಹರಿಸಿದ್ದಳು ಎನ್ನಲಾಗಿದೆ.

    ಈ ಕುರಿತು ಹೈದ್ರಾಬಾದ್ ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಮಗುವಿನ ಪೋಷಕರಿಂದ ಅಪಹರಣ ಪ್ರಕರಣ ದಾಖಲಾಗಿತ್ತು.