Tag: ಅನೂಪ್ ಭಂಡಾರಿ

  • ವಿಶ್ವದಾದ್ಯಂತ ಕಿಚ್ಚನ ವಿಕ್ರಾಂತ್ ರೋಣ ರಿಲೀಸ್ – ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ

    ವಿಶ್ವದಾದ್ಯಂತ ಕಿಚ್ಚನ ವಿಕ್ರಾಂತ್ ರೋಣ ರಿಲೀಸ್ – ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.

    ಈಗಾಗಲೇ ಟ್ರೈಲರ್, ಸಾಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ವಿಕ್ರಾಂತ್ ರೋಣ ಸಿನಿಮಾ ನೋಡಲು ಇಂದು ಪ್ರೇಕ್ಷರು ಮುಂಜಾನೆಯಿಂದಲೇ ಚಿತ್ರಮಂದಿರಗಳಲ್ಲಿ ಜಮಾಯಿಸಿದ್ದರು. ಸಿನಿಮಾದಲ್ಲಿ ಕಿಚ್ಚನ ಸ್ಟೈಲಿಶ್ ಲುಕ್‌ ನೋಡಿ ಫಿದಾ ಆಗಿರುವ ಅಭಿಮಾನಿಗಳು ಸದ್ಯ ಸಿನಿಮಾ ನೋಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣ ಶೋ ಸಂಖ್ಯೆ ಹೆಚ್ಚಳ: ವಿಶ್ವದಾದ್ಯಂತ 9500 ಶೋ, 2500 ಸ್ಕ್ರೀನ್ ಗಳಲ್ಲಿ ಪ್ರದರ್ಶನ

    325 ಸಿಂಗಲ್ ಸ್ಕ್ರೀನ್‍ಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ತೆರೆಕಂಡಿದ್ದು, ಮೊದಲ ದಿನ ರಾಜ್ಯದಲ್ಲಿ ಬರೋಬ್ಬರಿ 2,500 ಶೋಗಳು ನಡೆಯಲಿದೆ. ಸುಮಾರು 900 ಸ್ಕ್ರೀನ್‍ಗಳಲ್ಲಿ 3ಡಿ ಹಾಗೂ 1,600 ಸ್ಕ್ರೀನ್‍ನಲ್ಲಿ 2ಡಿ ವರ್ಷನ್ ಬಿಡುಗಡೆಯಾಗಿದೆ. ಬೆಂಗಳೂರಿನ 40 ಮಲ್ಟಿಪ್ಲೆಕ್ಸ್‌ನಲ್ಲಿ 800 ಶೋ ಒಟ್ಟು 70 ಸಿಂಗಲ್ ಸ್ಕ್ರೀನ್‍ನಲ್ಲಿ 400 ಶೋ ಇದೆ. ಬೆಳಗ್ಗೆ 5.30ಕ್ಕೆ ಶಂಕರ್ ನಾಗ್ ಚಿತ್ರಮಂದಿರದಲ್ಲಿ ಮೊದಲ ಶೋ ಪ್ರಾರಂಭವಾಗಿದೆ.

    ಪ್ರಿಯಾ ಸುದೀಪ್ ಅವರು ಮುಂಜಾನೆಯೇ ಬೆಂಗಳೂರಿನ ಊರ್ವಶಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದು, ಅವರ ಜೊತೆ ಊರ್ವಶಿ ಥಿಯೇಟರ್‌ನಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಚಿತ್ರತಂಡ ಸಿನಿಮಾ ವೀಕ್ಷಿಸಿದ್ದಾರೆ. ಇದನ್ನೂ ಓದಿ: ಸಂಸದರಿಗೆ, ಸರಕಾರಿ ಅಧಿಕಾರಿಗಳಿಗಾಗಿ ‘ವಿಕ್ರಾಂತ್ ರೋಣ’ ಸ್ಪೆಷಲ್ ಶೋ

    ವೀರೇಶ್ ಥಿಯೇಟರ್‌ನಲ್ಲಿ ಕಿಚ್ಚನ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಕನ್ನಡ, ಇಂಗ್ಲೀಷ್ ಸೇರಿದಂತೆ 6 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಆಂಧ್ರ-ತೆಲಂಗಾಣ, ತಮಿಳುನಾಡು, ಕೇರಳ, ಉತ್ತರ ಭಾರತ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳಲ್ಲಿ ವಿಕ್ರಾಂತ್ ರೋಣ ಅಬ್ಬರಿಸುತ್ತಿದ್ದಾನೆ.

    ನಿರ್ದೇಶಕ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳಿರುವ ವಿಕ್ರಾಂತ್ ರೋಣ ಚಿತ್ರದಲ್ಲಿ ನಾಯಕ ನಟರಾಗಿ ಕಿಚ್ಚ ಸುದೀಪ್ ಅಭಿನಯಿಸಿದರೆ, ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕೆಲ್ವಿನ್ ಫರ್ನಾಂಡಿಸ್, ರವಿಶಂಕರ್ ಗೌಡ ಸೇರೆದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • 3500 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ : ಪಾಕಿಸ್ತಾನ ಸೇರಿ 27 ದೇಶಗಳಲ್ಲಿ ಚಿತ್ರ ಪ್ರದರ್ಶನ

    3500 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ : ಪಾಕಿಸ್ತಾನ ಸೇರಿ 27 ದೇಶಗಳಲ್ಲಿ ಚಿತ್ರ ಪ್ರದರ್ಶನ

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಇದೇ ವಾರ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಭಾರತವೂ ಸೇರಿದಂತೆ 27 ದೇಶಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, 3500 ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ನೋಡಬಹುದು ಎಂದಿದ್ದಾರೆ ನಿರ್ಮಾಪಕ ಜಾಕ್ ಮಂಜು.  ಈಗಾಗಲೇ ಬಹುತೇಕ ಕಡೆ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಬಹುತೇಕ ಕಡೆ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆಯಂತೆ.

    ವಿಕ್ರಾಂತ್ ರೋಣ ಸಿನಿಮಾ ವಿಶ್ವದಾದ್ಯಂತ 3500ಕ್ಕೂ ಹೆಚ್ಚು ಸ್ಕ್ರಿನ್ ಗಳಲ್ಲಿ ಬಿಡುಗಡೆ ಆಗುತ್ತಿದ್ದು, ಕರ್ನಾಟಕದಲ್ಲಿ 425ಕ್ಕೂ ಅಧಿಕ ಹೆಚ್ಚು ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ. ಬಾಲಿವುಡ್ ನಲ್ಲಿ 900 ಥಿಯೇಟರ್ಸ್, ಟಾಲಿವುಡ್ ನಲ್ಲಿ 350ಕ್ಕೂ ಹೆಚ್ಚು ಥಿಯೇಟರ್ಸ್ ವಿದೇಶಗಳಲ್ಲಿ 800 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಜಾಕ್ ಮಂಜು. ಇದನ್ನೂ ಓದಿ:ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್

    ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಮತ್ತು ಹಾಡುಗಳು ಸಖತ್ ವೈರಲ್ ಆಗಿವೆ. ರಾ ರಾ ರಕ್ಕಮ್ಮ ಹಾಡಂತೂ ಅಷ್ಟೂ ಭಾಷೆಗಳಲ್ಲೂ ಕ್ರೇಜ್ ಕ್ರಿಯೇಟ್ ಮಾಡಿದೆ. ಜುಲೈ 28ರಂದು 2 ಡಿ ಮತ್ತು 3 ಡಿಯಲ್ಲಿ ವಿಕ್ರಾಂತ್ ರೋಣ ತೆರೆಗೆ ಬರುತ್ತಿದೆ. ಮತ್ತೊಂದು ಕುತೂಹಲದ ಸಂಗತಿ ಅಂದರೆ, ಪಾಕಿಸ್ತಾನದಲ್ಲೂ ಈ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ ಚಿತ್ರತಂಡ.

    Live Tv
    [brid partner=56869869 player=32851 video=960834 autoplay=true]

  • ಜ್ವರದ ನಡುವೆಯೂ ಮುಂಬೈನಲ್ಲಿ ನಡೆದ ವಿಕ್ರಾಂತ್ ರೋಣ ಪ್ರಚಾರದಲ್ಲಿ ಭಾಗಿಯಾದ ಸುದೀಪ್

    ಜ್ವರದ ನಡುವೆಯೂ ಮುಂಬೈನಲ್ಲಿ ನಡೆದ ವಿಕ್ರಾಂತ್ ರೋಣ ಪ್ರಚಾರದಲ್ಲಿ ಭಾಗಿಯಾದ ಸುದೀಪ್

    ರಡ್ಮೂರು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು ಕಿಚ್ಚ ಸುದೀಪ್. ಮುಂದಿನ ವಾರದಲ್ಲೇ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಸಹಜವಾಗಿಯೇ ಅಭಿಮಾನಿಗಳಲ್ಲಿ ಆತಂಕ ಶುರುವಾಗಿತ್ತು. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ, ಹಲವು ಊರುಗಳಲ್ಲಿ ಚಿತ್ರದ ಪ್ರಚಾರವನ್ನೂ ಮಾಡಬೇಕಿತ್ತು. ಏಕಾಏಕಿ ಜ್ವರ ಕಾಣಿಸಿಕೊಂಡಿದ್ದರಿಂದ ಮುಂದೇನು ಅನ್ನುವ ಗೊಂದಲ ಸಹಜವಾಗಿ ಚಿತ್ರತಂಡಕ್ಕೆ ಮೂಡಿತ್ತು. ಆದರೆ, ಕಿಚ್ಚ ಈ ನೋವಿನ ನಡುವೆಯೂ ಮುಂಬೈಗೆ ತೆರಳಿದ್ದಾರೆ. ಈ ಮೂಲಕ ತಮ್ಮ ವೃತ್ತಿ ಬದ್ಧತೆ ತೋರಿದ್ದಾರೆ.

    ಕೊಚ್ಚಿ, ಚೆನ್ನೈ, ಮುಂಬೈ ಸೇರಿದಂತೆ ಹಲವು ಕಡೆ ಸಿನಿಮಾ ಪ್ರಚಾರದಲ್ಲಿ ಸುದೀಪ್ ಭಾಗಿಯಾಗಬೇಕಾಗಿತ್ತು. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಪತ್ರಿಕಾಗೋಷ್ಠಿಗಳನ್ನು ರದ್ದು ಮಾಡಿದ್ದರು. ಈ ಕುರಿತು ಕ್ಷಮೆ ಕೂಡ ಕೇಳಿದ್ದರು. ಆದಷ್ಟು ಬೇಗ ಮಾಧ್ಯಮ ಗೆಳೆಯರನ್ನು ಭೇಟಿ ಮಾಡುವುದಾಗಿಯೂ ತಿಳಿಸಿದ್ದರು. ಮಾತುಕೊಟ್ಟಂತೆ ಅವರು ಜ್ವರ ಕಡಿಮೆ ಆಗುತ್ತಿದ್ದಂತೆಯೇ ಮುಂಬೈ ವಿಮಾನ ಏರಿದ್ದಾರೆ. ಇವತ್ತು ಮುಂಬೈನಲ್ಲಿ ಸಿನಿಮಾ ಪ್ರಚಾರ ಮಾಡಲಿದ್ದಾರೆ. ಇದನ್ನೂ ಓದಿ:ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ

     ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ ನ ವಿಕ್ರಾಂತ್ ರೋಣ ಸಿನಿಮಾ ಜು.28ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲೂ ಸಿನಿಮಾ ಬಿಡುಗಡೆ ಆಗುತ್ತಿದ್ದು ದೇಶದ ನಾನಾ ಕಡೆ ಈಗಾಗಲೇ ಪ್ರಚಾರ ಆರಂಭವಾಗಿದೆ. ಅಭಿಮಾನಿಗಳು ಕೂಡ ಕಿಚ್ಚನ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. ಜ್ವರದ ನಡುವೆಯೂ ಕಿಚ್ಚ ಹಲವು ಕಡೆ ಪ್ರಚಾರದಲ್ಲಿ ತೊಡಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಿಸೆಂಬರ್ ನಿಂದ ಸುದೀಪ್ ನಟನೆಯ ಹೊಸ ಸಿನಿಮಾದ ಶೂಟಿಂಗ್ ಶುರು

    ಡಿಸೆಂಬರ್ ನಿಂದ ಸುದೀಪ್ ನಟನೆಯ ಹೊಸ ಸಿನಿಮಾದ ಶೂಟಿಂಗ್ ಶುರು

    ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಜು.28ಕ್ಕೆ ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಬಿಡುವಿಲ್ಲದೇ ಅವರು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆಯೇ ಅವರ ಅಭಿಮಾನಿಗಳಿಗೆ ಹೊಸ ಸುದ್ದಿಯನ್ನು ನೀಡಿದ್ದು, ತಮ್ಮ ಹೊಸ ಸಿನಿಮಾ ಇದೇ ಡಿಸೆಂಬರ್ ನಿಂದ ಚಿತ್ರೀಕರಣ ನಡೆಸಲಿದೆ ಎಂದು ಹೇಳಿಕೊಂಡಿದ್ದಾರೆ.

    ಅಂದುಕೊಂಡಂತೆ ಆಗಿದ್ದರೆ ವಿಕ್ರಾಂತ್ ರೋಣ ಸಿನಿಮಾಗೂ ಮುನ್ನ ಬಿಲ್ಲ ರಂಗ ಬಾಷಾ ಸಿನಿಮಾ ಸೆಟ್ಟೇರಬೇಕಿತ್ತು. ಪೈಲ್ವಾನ್ ಸಿನಿಮಾದ ವೇಳೆಯಲ್ಲೇ ಜೋರಾಗಿ ಈ ಸಿನಿಮಾದ ಬಗ್ಗೆ ಸುದ್ದಿ ಹಬ್ಬಿತ್ತು. ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್ ನ ಮೊದಲ ಸಿನಿಮಾ ಇದೇ ಆಗಬೇಕಿತ್ತು. ಆದರೆ, ಅದನ್ನು ಪಕ್ಕಕ್ಕಿಟ್ಟು ವಿಕ್ರಾಂತ್ ರೋಣ ಸಿನಿಮಾ ಮಾಡಿದರು ಕಿಚ್ಚ. ಇದೀಗ ಅದೇ ಸಿನಿಮಾದ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಇದನ್ನೂ ಓದಿ:ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರದ ಮತ್ತೊಂದು ಹಾಡು ರಿಲೀಸ್

    ಬಿಲ್ಲ ರಂಗ ಬಾಷಾ ಸಿನಿಮಾಗೆ ಮತ್ತೆ ಮರುಜೀವ ಬಂದಿದ್ದು, ಈ ಸಿನಿಮಾ ಡಿಸೆಂಬರ್ ನಿಂದ ಶೂಟಿಂಗ್ ಶುರುವಾಗಲಿದೆ ಎಂದು ಮಾತನಾಡಿದ್ದಾರೆ. ಈ ಸಿನಿಮಾಗೆ ಅನೂಪ್ ಭಂಡಾರಿ ಅವರೇ ನಿರ್ದೇಶಕರಾಗಿದ್ದು, ಹೆಚ್ಚಿನ ಮಾಹಿತಿಯನ್ನು ನವೆಂಬರ್ ಹೊತ್ತಿಗೆ ಸಿಗಬಹುದು ಎನ್ನಲಾಗುತ್ತಿದೆ. ಈ ಸಿನಿಮಾದ ಸ್ಕ್ರಿಪ್ಟ್ ವರ್ಕ್ ಬಹುತೇಕ ಮುಗಿದಿದ್ದು, ಅದೇ ಸಿನಿಮಾವನ್ನು ಮಾಡುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸುದೀಪ್‌ ನಟನೆಯ `ವಿಕ್ರಾಂತ್‌ರೋಣ’ ಚಿತ್ರದ ಮತ್ತೊಂದು ಸಾಂಗ್ ಔಟ್

    ಸುದೀಪ್‌ ನಟನೆಯ `ವಿಕ್ರಾಂತ್‌ರೋಣ’ ಚಿತ್ರದ ಮತ್ತೊಂದು ಸಾಂಗ್ ಔಟ್

    ನ್ನಡ ಚಿತ್ರರಂಗದಲ್ಲಿ ರಿಲೀಸ್‌ಗೂ ಮುನ್ನವೇ ಹೊಸ ಅಲೆ ಎಬ್ಬಿಸಿರುವ ಚಿತ್ರ ಸುದೀಪ್ ನಟನೆಯ `ವಿಕ್ರಾಂತ್‌ರೋಣ’. ತಂದೆ ಮತ್ತು ಮಗಳ ಸೆಂಟಿಮೆಂಟ್ ಸಾಂಗ್ ನಂತರ ಈಗ ಮತ್ತೊಂದು ಎಮೋಷನಲ್ ಸಾಂಗ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಿರೂಪ್ ಭಂಡಾರಿ ನಟಿಸಿರುವ ಈ ಸಾಂಗ್ ಸಖತ್ ವೈರಲ್ ಆಗುತ್ತಿದೆ.

    ಅನೂಪ್ ಭಂಡಾರಿ ನಿರ್ದೇಶನದ `ವಿಕ್ರಾಂತ್ ರೋಣ’ ಚಿತ್ರದಲ್ಲಿ ಕಿಚ್ಚ ಸುದೀಪ್ ಜತೆ ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿರೂಪ್ ಪಾತ್ರಕ್ಕೂ ಚಿತ್ರದಲ್ಲಿ ಸಿಕ್ಕಾಪಟ್ಟೆ ಪ್ರಾಮುಖ್ಯತೆಯಿದೆ. ಈಗ ನಿರೂಪ್ ನಟಿಸಿರುವ ನ್ಯೂ ಸಾಂಗ್ ರಿವೀಲ್ ಆಗಿದೆ. ಈಗಾಗಲೇ ಚಿತ್ರದ ಎರಡು ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದು, ಹೇ ಫಕಿರಾ ಅಭಿಮಾನಿಗಳ ಗಮನ ಸೆಳಡಯುತ್ತಿದೆ. ಇದನ್ನೂ ಓದಿ:`ಹೈಡ್ ಆ್ಯಂಡ್ ಸೀಕ್’ ಆಡಲು ರೆಡಿಯಾದ ಧನ್ಯಾ ರಾಮ್‌ಕುಮಾರ್‌

    ಕಳೆದ ಬಾರಿ ತಂದೆ ಮತ್ತು ಮಗಳ ಬಾಂಧವ್ಯ ಸಾರುವ ಸಾಂಗ್‌ನ್ನ ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಬೆನ್ನಲ್ಲೇ `ಹೇ ಫಕಿರಾ’ ಸಾಂಗ್‌ನಲ್ಲಿ ಮಗನಿಗಾಗಿ ಕಾಯುವ ತಾಯಿಯ ಎಮೋಷನಲ್‌ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದೆ. ಮನಮುಟ್ಟವ ಲಿರಿಕ್ಸ್‌ಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರೂಪ್ ಎಂಟ್ರಿ ಮತ್ತು ಹಾಡು ಎರಡನ್ನು ಫ್ಯಾನ್ಸ್ ನೋಡಿ ಮೆಚ್ಚಿಕೊಂಡಿದ್ದಾರತೆ. ಜುಲೈ 28ಕ್ಕೆ ತೆರೆಗೆ ಬರುತ್ತಿರುವ ವಿಕ್ರಾಂತ್‌ ರೋಣನನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಲ್ಲಿ ಕನ್ನಡದ ರಂಗಿತರಂಗ ಸಿನಿಮಾ ರಿಮೇಕ್

    ಬಾಲಿವುಡ್ ನಲ್ಲಿ ಕನ್ನಡದ ರಂಗಿತರಂಗ ಸಿನಿಮಾ ರಿಮೇಕ್

    ಳು ವರ್ಷಗಳ ಹಿಂದೆ ಕನ್ನಡದಲ್ಲಿ ಹೊಸ ಸಂಚಲನ ಮೂಡಿಸಿದ್ದ ರಂಗಿತರಂಗ ಸಿನಿಮಾ ಇದೀಗ ಬಾಲಿವುಡ್ ಅಂಗಳ ತಲುಪಿದೆ. ನೂರು ಕೋಟಿಗೂ ಹೆಚ್ಚು ಬಜೆಟ್ ನಲ್ಲಿ ನಿರ್ಮಾಣವಾದ ಬಾಹುಬಲಿ ಸಿನಿಮಾದ ಜೊತೆ ಜೊತೆಯಾಗಿಯೇ ಬಿಡುಗಡೆಯಾದ ರಂಗಿತರಂಗ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಗಿತ್ತು. ಈ ಸಿನಿಮಾದ ಮೂಲಕ ಅನೂಪ್ ಭಂಡಾರಿ ನಿರ್ದೇಶಕನಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟರೆ, ನಿರೂಪ್ ಭಂಡಾರಿ ಹೀರೋ ಆಗಿ ಲಾಂಚ್ ಆದರು. ಇದೀಗ ಈ ಸಿನಿಮಾ ಹಿಂದಿಯಲ್ಲಿ ರೀಮೇಕ್ ಆಗುತ್ತಿದೆ.

    ತನ್ನ ನಿರೂಪಣೆ ಮತ್ತು ಮೇಕಿಂಗ್ ಕಾರಣದಿಂದಾಗಿ ರಂಗಿತರಂಗಿ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ಕಡಿಮೆ ಬಜೆಟ್ ನಲ್ಲಿ ತಯಾರಾದ ಈ ಚಿತ್ರ ಹೆಚ್ಚು ದುಡ್ಡು ಮಾಡಿತ್ತು. ಅಲ್ಲದೇ, ಹೊಸ ಪ್ರೇಕ್ಷಕರನ್ನು ಅದು ಹುಟ್ಟು ಹಾಕಿತ್ತು. ಈ ಸಿನಿಮಾದಿಂದ ಸ್ಯಾಂಡಲ್ ವುಡ್ ಗೆ ಪರಿಚಯವಾದ ಅನೂಪ್ ಭಂಡಾರಿ ಆನಂತರ ಹಲವು ಸಿನಿಮಾಗಳನ್ನು ಮಾಡಿದರು. ಇದೀಗ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರಕ್ಕೂ ಇವರೇ ನಿರ್ದೇಶಕರು. ಇದನ್ನೂ ಓದಿ:ಚಂದ್ರಶೇಖರ್ ಗುರೂಜಿ ಹತ್ಯೆಗೆ ಕಂಬನಿ ಮಿಡಿದ ನಟ ಜಗ್ಗೇಶ್

    ಈಗಾಗಲೇ ಮುಂಬೈನ ಕಾರ್ಪೊರೇಟ್ ಕಂಪನಿಯೊಂದಿ ರೀಮೇಕ್ ರೈಟ್ಸ್ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಅಂದುಕೊಂಡಂತೆ ಆದರೆ, ನಿರೂಪ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಅಕ್ಷಯ್ ಕುಮಾರ್ ಮಾಡಲಿದ್ದಾರೆ ಎನ್ನುವ ಸುದ್ದಿಯಿದೆ. ಈ ಕುರಿತು ಅಧಿಕೃತ ಮಾಹಿತಿ ಹೊರ ಬೀಳದೇ ಇದ್ದರೂ, ಹಿಂದಿ ರೈಟ್ಸ್ ವಿಚಾರವಾಗಿ ಅನೂಪ್ ಭಂಡಾರಿ ಖಚಿತತೆಯನ್ನು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಕ್ರಾಂತ್ ರೋಣ ನನ್ನ 20 ವರ್ಷದ ಕನಸು : ನಿರ್ದೇಶಕ ಅನೂಪ್ ಭಂಡಾರಿ

    ವಿಕ್ರಾಂತ್ ರೋಣ ನನ್ನ 20 ವರ್ಷದ ಕನಸು : ನಿರ್ದೇಶಕ ಅನೂಪ್ ಭಂಡಾರಿ

    ಕಿಚ್ಚ ಸುದೀಪ್ ಅವರ ಜೊತೆ ಕೆಲಸ ಮಾಡಬೇಕು ಎನ್ನುವುದು ಹಲವು ನಿರ್ದೇಶಕರ ಕನಸಾಗಿರುತ್ತದೆ. ಅಂತಹ ಕನಸನ್ನು ನಿರ್ದೇಶಕ ಅನೂಪ್ ಭಂಡಾರಿಗೆ 20 ವರ್ಷಗಳ ಹಿಂದಿಯೇ ಕಂಡಿದ್ದರಂತೆ. 20 ವರ್ಷಗಳ ನಂತರ ಅದೀಗ ಈಡೇರಿದೆ. ‘ವಿಕ್ರಾಂತ್ ರೋಣ’ ಸಿನಿಮಾದ ಮೂಲಕ ಆ ಕನಸು ಈಡೇರಿದೆ ಎಂದಿದ್ದಾರೆ ಅನೂಪ್. ಈ ಕುರಿತು ಅವರು ಮಾತನಾಡಿದ್ದಾರೆ.

    “ವಿಕ್ರಾಂತ್ ರೋಣ ನನ್ನ ೨೦ ವರ್ಷದ ಕನಸು, ಸುದೀಪ್ ಸರ್ ಜೊತೆ ಕೆಲಸ ಮಾಡಲು. ೨೬ ವರ್ಷದ ಹಿಂದೆ ನಾನು ಸುದೀಪ್ ಸರ್‌ನ ಒಂದು ಫೋಟೋದಲ್ಲಿ ನೋಡಿದ್ದೆ. ನನ್ನ ತಂದೆ ಡ್ರಾಯರ್‌ನಲ್ಲಿ ಒಂದು ಫೋಟೋ ಇತ್ತು. ಅದರಲ್ಲಿದ್ದ ಯುವಕನಿಗೆ ಮೀಸೆ, ಗಡ್ಡ ಏನೂ ಇರಲಿಲ್ಲ, ನಾನು ಯಾರುದು ಎಂದು ನನ್ನ ತಂದೆಯನ್ನು ಕೇಳಿದಾಗ ಅವರು ಸುದೀಪ್ ನಮ್ಮದೊಂದು ಸೀರಿಯಲ್ ಮಾಡ್ತಾ ಇದ್ದಾರೆ ಅಂತ ಹೇಳಿದ್ರು. ಇವರನ್ನು ಹಾಕೊಂಡು ಸಿನಿಮಾನೇ ಮಾಡಬಹುದಲ್ಲ ಇಷ್ಟು ಸ್ಮಾರ್ಟಾಗಿ ಇದ್ದಾರೆ ಅಂತ ಹೇಳಿದ್ದೆ ಅವತ್ತು. ನಮ್ಮ ತಂದೆಗೆ ಸಿನಿಮಾ ಮಾಡುವಂತಹ ಅವಕಾಶ ಬಂದಿಲ್ಲ, ಇವತ್ತು ನನಗೆ ಬಂದಿದೆ’ ಎಂದಿದ್ದಾರೆ ಅನೂಪ್. ಇದನ್ನೂ ಓದಿ:ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ

    ಇದೀಗ ಕಿಚ್ಚ ಮತ್ತು ಅನೂಪ್ ಕಾಂಬಿನೇಷನ್ ನ ವಿಕ್ರಾಂತ್ ರೋಣ ಸಿನಿಮಾ ಟ್ರೈಲರ್ ಬಗ್ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೂಪ್ ಕೆಲಸದ ಬಗ್ಗೆಯೇ ಅನೇಕರು ಮಾತನಾಡಿದ್ದಾರೆ. ಈ ತಿಂಗಳು ಕೊನೆಯಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಸುದೀಪ್, “ಕನ್ನಡ ಚಿತ್ರರಂಗದ ಒಂದು ಭಾಗ ಆಗೋಕೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಮೇಕಪ್ ಹಾಕಿದಾಗ ಒಂದೇ ಆಸೆ ಇದ್ದಿದ್ದು, ಹೀರೋ ಆಗ್ಬೇಕು ಅಂತ. ಹೀರೋ ಆದ್ಮೇಲೆ ಆಸೆ ಇದ್ದಿದ್ದು ಒಂದು ಹೌಸ್‌ಫುಲ್ ಆಗ್ಬೇಕು ಅಂತ. ಇವತ್ತಿಗೂ ಅದಕ್ಕಿಂದ ಮೇಲೆ ನಾನು ಹೋಗೇ ಇಲ್ಲ. ನಾನು ಸಿನಿಮಾನ ಪ್ರೀತಿಸಿದ್ದೇನೆ, ಅದನ್ನು ಬಿಟ್ಟು ಬೇರೆ ಏನನ್ನೂ ಮಾಡಿಲ್ಲ. ಸಿನಿಮಾ ಇವತ್ತಿಗೂ ಕೈ ಹಿಡಿದಿದೆ. ಚಿತ್ರರಂಗದ ಹಿರಿಯರು, ಸ್ನೇಹಿತರು ಇರಲಿಲ್ಲ ಎಂದರೆ ನಾನು ಕಲಾವಿದನಾಗಿ ಬೆಳೆಯುತ್ತಿರಲಿಲ್ಲ, ಸ್ನೇಹಿತನಾಗಿ ಬೆಳೆಯುತ್ತಿರಲಿಲ್ಲ. ಮನುಷ್ಯನಾಗಿ ಮುಂದೆ ಹೋಗುತ್ತಾ ಇರಲಿಲ್ಲ. ನಾವೇನಾದ್ರೂ ಮನೆಗೆ ವಾಪಸ್ ತೆಗೆದುಕೊಂಡು ಹೋಗೋದೆಂದ್ರೆ ಸ್ಟಾರ್ಡಮ್ ಅಲ್ಲ, ಕೇವಲ ಜನರ, ಅಭಿಮಾನಿಗಳ ಪ್ರೀತಿಯಷ್ಟೇ. ಅದಕ್ಕಿಂತ ಸುಂದರವಾದದ್ದು ಏನೂ ಇಲ್ಲ’ ಅನ್ನುತ್ತಾರೆ ಸುದೀಪ್.

    Live Tv
    [brid partner=56869869 player=32851 video=960834 autoplay=true]

  • ವಿಕ್ರಾಂತ್ ರೋಣ ಸಿನಿಮಾದ ಮತ್ತೊಂದು ಹಾಡು ರಿಲೀಸ್ : ಸೊಗಸಾದ ಲಾಲಿ ಹಾಡು

    ವಿಕ್ರಾಂತ್ ರೋಣ ಸಿನಿಮಾದ ಮತ್ತೊಂದು ಹಾಡು ರಿಲೀಸ್ : ಸೊಗಸಾದ ಲಾಲಿ ಹಾಡು

    ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ‘ರಾ ರಾ ರಕ್ಕಮ್ಮ’ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಲಕ್ಷಾಂತರ ಕೇಳುಗರು ಮೆಚ್ಚಿಕೊಂಡಿದ್ದಾರೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲ, ಸಿಲಿಬ್ರಿಟಿಗಳು ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರೀಲ್ಸ್ ನಲ್ಲೂ ರಾ ರಾ ರಕ್ಕಮ್ಮ ಧೂಳ್ ಎಬ್ಬಿಸಿದೆ. ಇನ್ನೂ ಈ ಹಾಡು ಕಿವಿಯಲ್ಲಿ ಗುನುಗುತ್ತಿರುವಾಗಲೇ ಮತ್ತೊಂದು ಸಾಂಗ್ ರಿಲೀಸ್ ಮಾಡಿದೆ ಚಿತ್ರತಂಡ.

    ಇಂದು ಸಂಜೆ 5. 02ಕ್ಕೆ ರಿಲೀಸ್ ಆಗಿರುವ ‘ತಣ್ಣನೆ ಬೀಸೋ ಗಾಳಿ’ ಗೀತೆಯು ಲಾಲಿ ಹಾಡಾಗಿದ್ದು, ವಿಜಯ್ ಪ್ರಕಾಶ್ ಸೊಗಸಾಗಿ ಹಾಡಿದ್ದಾರೆ. ಹಾಡು ಕೇಳುತ್ತಾ ರಾಜಕುಮಾರಿ ಎಷ್ಟೊಂದು ಗಾಢನಿದ್ರೆಗೆ ಜಾರಿರಬಹುದು ಎನ್ನುವಷ್ಟರ ಮಟ್ಟಿಗೆ ಗೀತೆ ಇಂಪಾಗಿದೆ. ಸ್ವತಃ ಅನೂಪ್ ಭಂಡಾರಿಯವರೇ ಈ ಗೀತೆಯನ್ನು ಬರೆದಿದ್ದು ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದೆ. ಸಂಗೀತ ಮತ್ತು ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಕಂಠ ಮತ್ತಷ್ಟು ಜೀವ ತುಂಬಿದೆ. ಇದನ್ನೂ ಓದಿ : ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಿಗೆ ಲೆಕ್ಕ ಕೇಳಿದೆ ಆಡಳಿತಾಧಿಕಾರಿ

    ‘ತಣ್ಣನೆ ಬೀಸೋ ಗಾಳಿ, ಹಾಡಿದೆ ಜೋಜೋ ಲಾಲಿ. ಈ ನನ್ನ ಮಡಿಲೆ ನಿನ್ನಾ ತೂಗೋ ಉಯ್ಯಾಲೆ, ತೂಗೋ ಉಯ್ಯಾಲೆ’ ಎಂದು ಶುರುವಾಗುವ ಗೀತೆಯು, ‘ಕಣ್ಣಿನ ರೆಪ್ಪೆ ಮುಚ್ಚಿ, ನಿದ್ದೆಗೆ ಬೇಗ ಜಾರಿ, ಮಲಗೆ ಮಲಗೆ ನನ್ನ ಮುದ್ದು ಬಂಗಾರಿ, ಮುದ್ದು ಬಂಗಾರಿ’ ಎನ್ನುವಲ್ಲಿಗೆ ಕೊನೆಗೊಳ್ಳುತ್ತದೆ.

    Live Tv

  • ವಿಕ್ರಾಂತ್ ರೋಣ ಸಿನಿಮಾ ಆಗೋಕೆ ಇವರೇ ಸ್ಪೂರ್ತಿ: ಕಿಚ್ಚ ಹೀಗಂದಿದ್ದು ಯಾರ ಬಗ್ಗೆ?

    ವಿಕ್ರಾಂತ್ ರೋಣ ಸಿನಿಮಾ ಆಗೋಕೆ ಇವರೇ ಸ್ಪೂರ್ತಿ: ಕಿಚ್ಚ ಹೀಗಂದಿದ್ದು ಯಾರ ಬಗ್ಗೆ?

    ಚಂದನವನದಲ್ಲಿ ಸದ್ಯ ಸಖತ್‌ ಹೈಪ್‌ ಸೃಷ್ಠಿಸಿರುವ `ವಿಕ್ರಾಂತ್ ರೋಣ’ ಇದೇ ಜುಲೈ 28ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಪ್ರಚಾರ ಕೂಡ ಭರ್ಜರಿಯಾಗಿ ಮಾಡಲಾಗುತ್ತಿದೆ. ಇದೀಗ ವಿಕ್ರಾಂತ್ ರೋಣ ಚಿತ್ರದ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ನಟ ಸುದೀಪ್ `ವಿಕ್ರಾಂತ್ ರೋಣ’ ಸಿನಿಮಾ ಆಗೋಕೆ ಸ್ಫೂರ್ತಿ ಮತ್ತು ಕಿಚ್ಚನ ಹಿಂದಿನ ಶಕ್ತಿ ಯಾರು ಅಂತಾ ರಿವೀಲ್ ಮಾಡಿದ್ದಾರೆ.

    ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ `ವಿಕ್ರಾಂತ್ ರೋಣ’ ಸದ್ಯದಲ್ಲೇ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಕಿಚ್ಚ ಸುದೀಪ್ ಕೂಡ ಸಿನಿಮಾಗಾಗಿ ಭರ್ಜರಿ ಪ್ರಚಾರ ಮಾಡ್ತಿದ್ದಾರೆ. ಸದ್ಯ ಚಿತ್ರದ ಕುರಿತು ಪಬ್ಲಿಕ್ ಟಿವಿಯಲ್ಲಿ ಮಾತನಾಡಿರುವ ಸುದೀಪ್ ಇಂಟರೆಸ್ಟಿಂಗ್ ಸಮಾಚಾರವೊಂದನ್ನು ರಿವೀಲ್ ಮಾಡಿದ್ದಾರೆ. `ವಿಕ್ರಾಂತ್ ರೋಣ’ ಸಿನಿಮಾ ಆಗೋಕೆ ಕಾರಣ ತಮ್ಮ ಪತ್ನಿ ಪ್ರಿಯಾ ಎಂದು ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಸಂಜನಾ ಗಲ್ರಾನಿ ಮಗುವಿನ ನಾಮಕರಣ: ಹೆಸರೇನು ಗೊತ್ತಾ?

    ನಿರ್ದೇಶಕ ಅನೂಪ್ ಭಂಡಾರಿ ಮೊದಲು ಬೇರೆಯೊಂದು ಕಥೆ ರೆಡಿ ಮಾಡಿಕೊಂಡಿದ್ದರಂತೆ. ಬಳಿಕ ನಿರ್ಮಾಪಕ ಜಾಕ್ ಮಂಜು ಮತ್ತು ಪ್ರಿಯಾ ಸುದೀಪ್ ಅವರ ಬಳಿ ಬೇರೆ ಕಥೆಯ ಬಗ್ಗೆ ಸಹಜವಾಗಿ ಮಾತನಾಡಿದ್ದರು.

    ಪ್ರಿಯಾ ಅವರಿಗೆ ಕಥೆ ಇಷ್ಟವಾಗಿ ಈ ಸಿನಿಮಾವನ್ನು ಸುದೀಪ್ ಅವರೇ ಯಾಕೆ ಮಾಡಬಾರದು ಎಂದೆನಿಸಿ, ಪತಿ ಸುದೀಪ್ ಬಳಿ ಹೇಳಿಕೊಂಡಿದ್ದರು. ನಂತರ ಕಿಚ್ಚನಿಗೂ ಕಂಟೆಂಟ್ ಇಷ್ಟವಾಗಿ, ವಿಕ್ರಾಂತ್ ರೋಣ ಚಿತ್ರ ಶುರುವಾಯಿತು. ಸಣ್ಣ ಬಜೆಟ್ ಸಿನಿಮಾ ಮಾಡೋಕೆ ಹೊರಟಿದ್ದ ಚಿತ್ರತಂಡ ದೊಡ್ಡದಾಗಿ ಆಲೋಚನೆ ಮಾಡಿ ಮುಂದೆ ಹೆಜ್ಜೆ ಇಟ್ರು ಅಂತಾ ನಟ ಸುದೀಪ್ ಪತ್ನಿ ತನ್ನ ಹಿಂದಿನ ಶಕ್ತಿ ಅಂತಾ ಹೇಳಿಕೊಂಡಿದ್ದಾರೆ.

    ವಿಕ್ರಾಂತ್ ರೋಣನಾಗಿ ಸುದೀಪ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ರಾ ರಾ ರಕ್ಕಮ್ಮ ಆಗಿ ಜಾಕ್ವೆಲಿನ್ ಹೆಜ್ಜೆ ಹಾಕಿದ್ದಾರೆ. ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿದ ಸಿನಿಮಾ ಇದೇ ಜುಲೈ 28ಕ್ಕೆ ಬಹುಭಾಷೆಗಳಲ್ಲಿ ತೆರೆ ಕಾಣಲು ರೆಡಿಯಾಗಿದೆ.

    Live Tv

  • ಬಾಲಿವುಡ್ ನೆಲದಲ್ಲೂ ಕನ್ನಡ ಬಿಟ್ಟು ಕೊಡದ ಕಿಚ್ಚ ಸುದೀಪ್

    ಬಾಲಿವುಡ್ ನೆಲದಲ್ಲೂ ಕನ್ನಡ ಬಿಟ್ಟು ಕೊಡದ ಕಿಚ್ಚ ಸುದೀಪ್

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ಭಾರತಾದ್ಯಂತ ನಡೆಯುತ್ತಿದೆ. ಮುಂಬೈ, ಕೊಚ್ಚಿ, ಹೈದರಾಬಾದ್, ಚೆನ್ನೈ ಹೀಗೆ ಹಲವು ಕಡೆ ಸುದೀಪ್ ಅಂಡ್ ಟೀಮ್ ಪತ್ರಿಕಾಗೋಷ್ಠಿ ನಡೆಸುತ್ತಿದೆ. ಈ ಸಂದರ್ಭದಲ್ಲಿ ಸುದೀಪ್ ಅವರಿಗೆ ನಾನಾ ರೀತಿಯ ಪ್ರಶ್ನೆಗಳು ಎದುರಾಗುತ್ತಿವೆ. ಅದರಲ್ಲೂ ಬಾಲಿವುಡ್ ನಲ್ಲಿ ಸುದೀಪ್ ವಿಚಿತ್ರ ಪ್ರಶ್ನೆಯೊಂದನ್ನು ಎದುರಿಸಬೇಕಾಯಿತು. ಅದಕ್ಕೆ ಸಮರ್ಥವಾಗಿ, ತಣ್ಣಗೆ ಉತ್ತರ ಕೊಟ್ಟು ಭೇಷ್ ಅನಿಸಿಕೊಂಡರು ಕಿಚ್ಚ.

    ಹಿಂದಿ ವಿಚಾರದಲ್ಲಿ ಈಗಾಗಲೇ ಸುದೀಪ್ ಒಂದು ರೀತಿಯಲ್ಲಿ ಬಿಸಿ ಮುಟ್ಟಿಸಿದ್ದಾಗಿದೆ. ಕನ್ನಡದ ಮೇಲೆ ಹಿಂದಿ ಹೇರಿಕೆ ವಿಚಾರ, ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ಸಿನಿಮಾಗಳನ್ನು ಎಳೆತಂದ ದೊಡ್ಡದೊಂದು ಚರ್ಚೆಗೆ ಕಾರಣವಾಗಿತ್ತು. ಆಗಲೂ ಸುದೀಪ್, ತಾಯ್ನುಡಿಯನ್ನು ಬಿಟ್ಟು ಕೊಡಲಿಲ್ಲ. ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲೂ ಸುದೀಪ್ ಅದನ್ನು ಮುಂದುವರಿಸಿದರು. ನಮ್ಮ ನೆಲದ ಕಥೆಯನ್ನು ನಾವು ಹೇಳುತ್ತಿದ್ದೇವೆ. ಬೇರೆಯವರು ತಮ್ಮ ನೆಲದ ಕಥೆಯನ್ನು ಹೇಳುತ್ತಾರೆ. ಕನ್ನಡದಲ್ಲಿ ಯಾವ ರೀತಿಯ ಸಿನಿಮಾಗಳು ಬರುತ್ತಿವೆ ಎನ್ನುವುದನ್ನು ನೋಡುವುದಕ್ಕಾಗಿ ನಿಮಗೆ ಸ್ವಾಗತ ಎಂದು ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಸುದೀಪ್ ಆಹ್ವಾನಿಸಿದರು.

    ತೆಲುಗಿನಲ್ಲಿ ಒಳ್ಳೊಳ್ಳೆ ಕಮರ್ಷಿಯಲ್ ಸಿನಿಮಾಗಳು ಬರುತ್ತಿವೆ. ಅವು ಪ್ಯಾನ್ ಇಂಡಿಯಾ ಸಿನಿಮಾಗಳು ಆಗಿವೆ. ತಮಿಳಿನಲ್ಲೂ ಅಂಥದ್ದೇ ಪ್ರಯೋಗವಿದೆ. ಕನ್ನಡದಲ್ಲಿ ಯಾಕಿಲ್ಲ ಎನ್ನುವ ಪ್ರಶ್ನೆಯೊಂದನ್ನು ಪತ್ರಕರ್ತ ಕೇಳಿದಾಗ, ಬಹುಶಃ ನಿಮಗೆ ಕನ್ನಡದ ಬಗ್ಗೆ ತಿಳುವಳಿಕೆ ಕಡಿಮೆಯಿದೆ ಅನಿಸುತ್ತದೆ. ನಮ್ಮಲ್ಲೂ ಅದ್ಭುತ ಸಿನಿಮಾಗಳು ಬಂದಿವೆ. ಯಾವ ರೀತಿಯ ಚಿತ್ರಗಳು ಬಂದಿವೆ ಎಂದು ತಿಳಿದುಕೊಳ್ಳಲು ನಾನು ನಿಮಗೆ ಸ್ವಾಗತ ಮಾಡುತ್ತೇನೆ ಎಂದು ಹೇಳುವ ಮೂಲಕ ಬಿಟೌನ್ ನಲ್ಲೂ ಕನ್ನಡದ ಪ್ರೇಮ ಮೆರೆದಿದ್ದಾರೆ ಸುದೀಪ್. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್ ನ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ದಾಖಲೆ ಮಟ್ಟದಲ್ಲಿ ಅದು ಜನರನ್ನು ತಲುಪಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ಟ್ರೈಲರ್ ರಿಲೀಸ್ ಆಗಿದೆ. ಎಲ್ಲ ಭಾಷೆಯಲ್ಲೂ ಟ್ರೈಲರ್ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ.

    Live Tv