Tag: ಅನಂತರಾಜು

  • ಸಂಬಂಧದ ವಿಚಾರ ಗೊತ್ತಾಗಿ ನೋವಿನಿಂದ ಗಲಾಟೆ ಮಾಡಿದ್ದು ನಿಜ, ಆದ್ರೆ ಕೊಲೆ ಮಾಡಿಲ್ಲ: ಅನಂತರಾಜು ಪತ್ನಿ

    ಸಂಬಂಧದ ವಿಚಾರ ಗೊತ್ತಾಗಿ ನೋವಿನಿಂದ ಗಲಾಟೆ ಮಾಡಿದ್ದು ನಿಜ, ಆದ್ರೆ ಕೊಲೆ ಮಾಡಿಲ್ಲ: ಅನಂತರಾಜು ಪತ್ನಿ

    ಬೆಂಗಳೂರು: ರೇಖಾ ಜೊತೆ ಪತಿ, ಬಿಜೆಪಿ ಮುಖಂಡ ಅನಂತರಾಜುಗೆ ಸಂಬಂಧ ಇದೆ ಎಂಬ ವಿಚಾರ ಗೊತ್ತಾಗಿ ನೋವಿನಿಂದ ಗಲಾಟೆ ಮಾಡಿದ್ದು ನಿಜ. ಆದರೆ ನಾನು ಅವರನ್ನು ಕೊಲೆ ಮಾಡಿಲ್ಲ ಎಂದು ಪತ್ನಿ ಸುಮಾ ಹೇಳಿದ್ದಾರೆ.

    ಬ್ಯಾಡರಹಳ್ಳಿಯಲ್ಲಿರುವ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೇಖಾ ಆರೋಪದ ಬಗ್ಗೆ ತಿಳಿಸಿದರು. ಮಾರ್ಚ್ 22ಕ್ಕೆ ನನಗೆ ವಿಚಾರ ಗೊತ್ತಾಗಿದ್ದು. ಹೋಮ್ ಅರೆಸ್ಟ್ ಆರೋಪ ಸುಳ್ಳು. ಗಂಡನಿಗೆ ಯಾವುದೇ ಕಿರುಕುಳ ಕೊಟ್ಟಿಲ್ಲ. ಬ್ಲ್ಯಾಕ್‍ಮೇಲ್ ಮೆಸೇಜ್ ಕಳಿಸಿದ ಬಳಿಕ ನಾನು ಕೋಪ ಬಂದು ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡರು.

    Anantaraju

    ನನ್ನ ಗಂಡನನ್ನ ನಾನು ಕೊಲೆ ಮಾಡಿಲ್ಲ. ನನ್ನ ಗಂಡನ ಸಾಯಿಸೋ ಅಷ್ಟು ಕೆಟ್ಟವಳಲ್ಲ. ನನ್ನ ಮಕ್ಕಳಿಗೆ ಅಪ್ಪ ಇಲ್ಲ ಅನ್ನೋ ನೋವು ಇದೇ. ಮೆಂಟಲಿ ಟಾರ್ಚರ್ ಆಗ್ತಿದೆ. ಕೆಲವೊಂದು ಕ್ಲಿಪ್ಪಿಂಗ್ ಅಷ್ಟೇ ರೇಖಾ ಕೊಟ್ಟಿದ್ದಾಳೆ. ಅನಂತರಾಜು ನನಗೆ ಇಲ್ಲ ಅಂದ್ರೆ ನಿನಗೂ ಸಿಗಬಾರದು ಅಂತ ರೇಖಾ ಧಮ್ಕಿ ಹಾಕ್ತಾ ಇದ್ದಳು. ಅನಂತರಾಜುಗೆ ರೇಖಾ ಟಾರ್ಚರ್ ಕೊಡ್ತಾ ಇದ್ದಳು ಎಂದು ಸುಮ ಹೇಳಿದರು. ಇದನ್ನೂ ಓದಿ: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ – 2 ಬಾರಿ ಅಬಾರ್ಷನ್ ಮಾಡಿಸಿದ್ದ ರೇಖಾ

    ಗಂಡನ ಕೈ ನಾನು ಮುರಿದಿಲ್ಲ. ನಾನು ಈ ರೀತಿಯಾಗಿ ಎದುರಿಸಿದ್ರೆ ಅವಳು ಬಿಡ್ತಾಳೆ ಅಂತ ಈ ರೀತಿ ಮಾತನಾಡಿದ್ದು. ಆತ್ಮಹತ್ಯೆ ದಿನ ನಾನು ಮನೆಯಲ್ಲಿ ಇರಲಿಲ್ಲ. ನಾವು ಇಬ್ಬರು ಫಂಕ್ಷನ್ ಹೋಗಿ ಬಂದ್ವಿ. ಬಳಿಕ ಅವರು ಮೇಲೆ ಮನೆಯಲ್ಲಿ ಮಲಗಿರುವಾಗ ಆತ್ಮಹತ್ಯೆ ಮಾಡಿಕೊಂಡಿದ್ರು. ಗಂಡನ ಫೋಟೋ ವೀಡಿಯೋ ಇಟ್ಕೊಂಡು ರೇಖಾ ಟಾರ್ಚರ್ ಕೊಡ್ತಾ ಇದ್ದಳು. ರೇಖಾ ಮಗಳ ಮೇಡಿಕಲ್ ಸೀಟ್ ಆಗುವಷ್ಟು ಹಣ ಕೊಡಬೇಕೆಂದು ಡಿಮಾಂಡ್ ಮಾಡ್ತಾ ಇದ್ದಳು. ಈ ಹಿಂದೆ ಡಿಪ್ರೇಷನ್ ನಲ್ಲಿದ್ದ ಆನಂತ್ ರಾಜು ನಿದ್ದೆ ಮಾತ್ರೆ ತಗೆದುಕೊಂಡಿದ್ದರು. ಇತ್ತೀಚಿಗೆ ಆನಂತರಾಜುಗೆ ಎದೆನೋವು ಇತ್ತು ಎಂದು ಹೇಳಿದರು.

    ಘಟನೆ ನಡೆದ ದಿನ ಲಾಂಗ್ ಡ್ರೈವ್ ಹೋಗೋಣ ಅಂತ ಕರೆದುಕೊಂಡು ಹೋಗಿದ್ದರು. ಗ್ಯಾಸ್ಟ್ರೀಕ್ಟ್ ಅಂತಾ ಒಳಗಡೆ ಮಲಗಿದ್ದರು. ಅಡುಗೆ ಮಾಡಿಕೊಂಡು ಹೋಗಿ ರೂಂ ಬಾಗಿಲು ತಗೆಸಿದಾಗ ಆನಂತರಾಜು ಹ್ಯಾಂಗ್ ಮಾಡಿಕೊಂಡಿದ್ದರು. ಅನಂತರಾಜು ಆತ್ಮಹತ್ಯೆಗೆ ಕಾರಣ ನಮಗೂ ಗೊತ್ತಿಲ್ಲ ಎಂದು ಸುಮಾ ವಿವರಿಸಿದರು. ಇದನ್ನೂ ಓದಿ: RSSಗೆ ಗೊತ್ತಾಗಿದೆ ಈ ಹೋರಾಟದಲ್ಲಿ ಸೋಲಾಗುತ್ತೆ ಅಂತಾ ಹಾಗಾಗಿ ಭಾಗವತ್ ಈ ಹೇಳಿಕೆ ನೀಡಿದ್ದಾರೆ: ಅಬ್ದುಲ್ ರಜಾಕ್

  • ಅನಂತ ರಾಜು ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್- ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ ರೇಖಾ..?

    ಅನಂತ ರಾಜು ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್- ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ ರೇಖಾ..?

    ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗ್ತಿದೆ. ಈ ಕೇಸ್‌ನಲ್ಲಿ ಮತ್ತೊಂದು ಆಡಿಯೋ ಬಹಿರಂಗವಾಗಿದೆ. ಇನ್ನು ಅನಂತರಾಜು ಸ್ನೇಹಿತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.

    ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ತಿದೆ. ಇದು ನಿಜಕ್ಕೂ ಆತ್ಮಹತ್ಯೆಯೋ..? ಪ್ರಚೋದನೆಯೋ..? ಎನ್ನುವ ಕುರಿತು ಪ್ರಕರಣದ ತನಿಖೆ ನಡೀತಾ ಇದೆ. ಆದ್ರೆ ತನಿಖೆ ಮಾಡಬೇಕಾದ ಪೊಲೀಸ್ರು ಪ್ರಭಾವಕ್ಕೆ ಒಳಗಾದಂತೆ ಕಾಣ್ತಿದೆ. ಯಾಕಂದ್ರೆ ಪ್ರಕರಣದಲ್ಲಿ ಜೈಲು ಪಾಲಾಗಿ ಬೇಲ್ ಮೇಲೆ ಹೊರಗೆ ಬಂದಿರೋ ಅನಂತರಾಜು ಸ್ನೇಹಿತೆ ರೇಖಾ ಕೆಲವೊಂದು ಸಂಗತಿಗಳನ್ನ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಗಂಗಾ ನದಿಯಲ್ಲಿ ಮೀನಿನ ವೈವಿಧ್ಯತೆ ಶೇ.36 ರಷ್ಟು ಹೆಚ್ಚಳ

    ಅನಂತರಾಜುಗೆ ಪತ್ನಿ ಟಾರ್ಚರ್ ಇತ್ತು ಅಂತ ರೇಖಾ ಆರೋಪಿದ್ದಾರೆ. ಈ ಬಗ್ಗೆ ಆಡಿಯೋಗಳನ್ನ ಪೊಲೀಸ್ರಿಗೆ ಕೊಟ್ಟೆ. ಆದ್ರೆ ಸಾಕ್ಷಿ ಕೊಟ್ಟರೂ ಸಹ ಪೊಲೀಸರು ನನ್ನನ್ನೇ ಜೈಲಿಗೆ ಕಳಿಸಿದ್ರು. ಇದರಿಂದ ಮನನೊಂದು ಜೈಲಲ್ಲಿ ನಾನೂ ಆತ್ಮಹತ್ಯೆಗೆ ಯತ್ನಿಸಿದೆ. ನಾನು ಹನಿಟ್ರ್ಯಾಪ್‌ ಮಾಡಿದ್ರೆ ಶೂಟೌಟ್ ಮಾಡಿಕೊಳ್ತೇನೆ ಅಂತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ರಜೆ ಬೇಕೆಂದ್ರೆ ಲಾಡ್ಜ್‌ಗೆ ಬನ್ನಿ – ಮಹಿಳಾ ನೌಕರರಿಗೆ ಎಸ್‌ಪಿ ಕಚೇರಿ ಅಧಿಕಾರಿಯಿಂದ ಕಿರುಕುಳ

    ಗೃಹಬಂಧನದಲ್ಲಿದ್ರಾ ಅನಂತ ರಾಜು?: 45 ದಿನಗಳ ಕಾಲ ಅನಂತರಾಜು ನನ್ನ ಪತ್ನಿ ಸುಮಾ ಗೃಹ ಬಂಧನದಲ್ಲಿರಿಸಿದ್ದರಂತೆ. ಈ ಹಿಂದೆಯೇ ಅನಂತರಾಜು ಆತ್ಮಹತ್ಯೆಗೆ ಯತ್ನಿಸಿ ಜಿಎಮ್ ಆಸ್ಪತ್ರೆಗೆ ಸೇರಿಸಿದ್ದರು. ಆಗಲೇ ಡೆತ್ ನೋಟ್ ಬರೆಸಿಟ್ಟುಕೊಂಡಿದ್ರು ಅಂತ ರೇಖಾ ಟ್ವಿಸ್ಟ್ ಕೊಟ್ಟಿದ್ದಾರೆ. 45 ದಿನಗಳ ಕಾಲ ಅನಂತನನ್ನು ಗೃಹ ಬಂಧನದಲ್ಲಿರಿಸಿದ್ರು. ಬಟ್ಟೆ ಕೊಡದೇ ಇದ್ದಿದ್ದರಿಂದ ಹೊರಗೆ ಬಂದಿರಲಿಲ್ಲ. ಈ ಹಿಂದೆಯೇ ಅನಂತ್ ನಿದ್ರೆ ಮಾತ್ರೆ ತಿಂದು ಆತ್ಮಹತ್ಯೆಗೆ ಯತ್ನಿಸಿ ಜಿಎಮ್ ಆಸ್ಪತ್ರೆಗೆ ಸೇರಿಸಿದ್ದರು. ಆಗ ಡೆತ್ ನೋಟ್ ಬರೆಸಿಟ್ಟುಕೊಂಡಿದ್ದರು. ಹನಿಟ್ರ್ಯಾಪ್‌ ಮಾಡೋದಾಗಿದ್ರೆ 6 ವರ್ಷ ಸಂಬಂಧದಲ್ಲಿ ಇರಬೇಕಾಗಿರಲಿಲ್ಲ. ನನ್ನ ಮಗಳಿಗೆ ಮೆಡಿಕಲ್ ಮಾಡಿಸೊ ಭರವಸೆ ಒಂದನ್ನ ಕೊಟ್ಟಿದ್ರು ಅಷ್ಟೆ. ನಾನು ಹನಿಟ್ರಾಪ್ ಮಾಡಿಲ್ಲ, ಹಣಕ್ಕೆ ಬೇಡಿಕೆ ಇಟ್ಟಿಲ್ಲ ಪಬ್ಲಿಕ್ ಟಿವಿಯೊಂದಿಗೆ ಹೇಳಿಕೊಂಡಿದ್ದಾರೆ.

    ಈ ಮಧ್ಯೆ ಸುಮಾ-ರೇಖಾ ನಡುವಿನ ಸಂಭಾಷಣೆ ತನಿಖೆಗೆ ಮತ್ತೊಂದು ಆಯಾಮ ಕೊಟ್ಟಿದೆ. ಡೆತ್‌ನೋಟ್ ಇಟ್ಟುಕೊಂಡು ರೇಖಾಗೆ ಅನಂತರಾಜು ಪತ್ನಿ ಸುಮಾ ಧಮ್ಕಿ ಹಾಕಿರುವ ಆಡಿಯೋ ಲಭ್ಯ ಆಗಿದೆ. ಅದ್ಯಾಕೊ ಗೊತ್ತಿಲ್ಲ ಬ್ಯಾಡರಹಳ್ಳಿ ಪೊಲೀಸ್ರು ಈ ಕೇಸಲ್ಲಿ ಎಲ್ಲವನ್ನೂ ಮರೆಮಾಚುವ ಕೆಲಸ ಮಾಡ್ತಿದ್ದಾರೆ. ಅನಂತ್‌ರಾಜ್ ಸಾವು ಆತ್ಮಹತ್ಯೆಯೋ..? ಪ್ರಚೋದನೆಯೋ..? ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯ ಬಯಲಿಗೆಳೆಯಬೇಕಿದೆ.

  • ಬಿಜೆಪಿ ಮುಖಂಡ ಆತ್ಮಹತ್ಯೆ ಪ್ರಕರಣ – ಅನಂತರಾಜು ಜೊತೆಗಿನ ಖಾಸಗಿ ವೀಡಿಯೋ ಇದೆ ಎಂಬ ಗೆಳತಿ ಚಾಟಿಂಗ್ ವೈರಲ್

    ಬಿಜೆಪಿ ಮುಖಂಡ ಆತ್ಮಹತ್ಯೆ ಪ್ರಕರಣ – ಅನಂತರಾಜು ಜೊತೆಗಿನ ಖಾಸಗಿ ವೀಡಿಯೋ ಇದೆ ಎಂಬ ಗೆಳತಿ ಚಾಟಿಂಗ್ ವೈರಲ್

    ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಯ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ಗೆಳತಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

    ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ದೊರಕ್ಕಿದ್ದು, ಅನಂತರಾಜು ಗೆಳತಿ ಹಾಗೂ ಇನ್ನುಳಿದ ಇಬ್ಬರು ಆರೋಪಿಗಳಾದ ಸ್ಪಂದನಾ ಹಾಗೂ ವಿನೋದ್‍ಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಅನಂತರಾಜು ಇದೇ ತಿಂಗಳು 12 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಇಂದು ರಾಜ್ಯಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ

    court order law

    ಇದೀಗ ಅನಂತರಾಜು ಆತ್ಮಹತ್ಯೆ ಪ್ರಕರಣವು ಮತ್ತೊಂದು ತಿರುವು ಪಡೆದುಕೊಂಡಿದೆ. ಅನಂತರಾಜು ಗೆಳತಿ ಅಪರಿಚಿತ ವ್ಯಕ್ತಿಯೊಂದಿಗೆ ಚಾಟಿಂಗ್ ಮಾಡಿರುವುದು ವೈರಲ್ ಆಗಿದೆ. ಇದನ್ನೂ ಓದಿ: ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

    ವೈರಲ್ ಆದ ಚಾಟಿಂಗ್‍ನಲ್ಲೇನಿದೆ?
    ಅನಂತರಾಜು ನನಗೆ ಮೋಸ ಮಾಡಿದ್ದಾನೆ. ನನ್ನ ಮಾನ ಮರ್ಯಾದೆಗೆ ಧಕ್ಕೆ ತಂದಿದ್ದಾನೆ. ನನ್ನ ಮಕ್ಕಳಿಗಾಗಿ ನಾನು ಯಾರ ಮಾರ್ಯಾದೆ ಕಳೆಯೋದಕ್ಕೂ ಸಿದ್ಧ. ಅನಂತರಾಜು ನನ್ನ ಜೊತೆ ಕಳೆದ ಖಾಸಗಿ ವಿಡಿಯೋಗಳು ನನ್ನ ಬಳಿ ಇವೆ. ಅದನ್ನು ಅವನ ಹೆಂಡ್ತಿಗೆ ಕಳುಹಿಸಿದರೆ ಅವಳೇ ಅನಂತರಾಜುನ ಸಾಯಿಸ್ತಾಳೆ. ಅಷ್ಟೊಂದು ಅಶ್ಲೀಲವಾಗಿವೆ ಆ ವೀಡಿಯೋಗಳು. ಆ ರೀತಿ ಆಗಬಾರದು ಅನ್ನೋದಾದರೆ ಅನಂತರಾಜು ಮೇ 15ರ ಒಳಗೆ ನನ್ನ ಭೇಟಿ ಮಾಡಬೇಕು. ಸೆಟಲ್ಮೆಂಟ್ ಮಾಡಿಕೊಂಡು ಅನಂತರಾಜು ನೆಮ್ಮದಿಯಾಗಿರಲಿ ಎಂದು ಅನಂತರಾಜು ಗೆಳತಿ ಚಾಟಿಂಗ್ ಮಾಡಿದ್ದಳು. ಇದರ ಜೊತೆಗೆ ಅನಂತರಾಜು ಗೆಳತಿ ತನ್ನ ಇತರೆ ಗೆಳತಿಯರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿರುವ ವೀಡಿಯೋ ಕೂಡ ವೈರಲ್.

    https://youtu.be/WlJqcDTsNiE

  • ಪತ್ನಿ ಕ್ಷಮಿಸಿ ಬಿಡು, ನಿನಗೆ ಮೋಸ ಮಾಡಿದ್ದೇನೆ – ಬಿಜೆಪಿ ಮುಖಂಡನ ಆತ್ಮಹತ್ಯೆ ಸೀಕ್ರೆಟ್ ರಿವೀಲ್

    ಪತ್ನಿ ಕ್ಷಮಿಸಿ ಬಿಡು, ನಿನಗೆ ಮೋಸ ಮಾಡಿದ್ದೇನೆ – ಬಿಜೆಪಿ ಮುಖಂಡನ ಆತ್ಮಹತ್ಯೆ ಸೀಕ್ರೆಟ್ ರಿವೀಲ್

    ಬೆಂಗಳೂರು: ಪ್ರಿಯ ಪತ್ನಿ ಸುಮ ಕ್ಷಮಿಸಿ ಬಿಡು, ನಿನಗೆ ಮೋಸ ಮಾಡಿದ್ದೇನೆ ಎಂದು ನಗರದ ಹೇರೋಹಳ್ಳಿ ವಾರ್ಡ್‍ನ ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಗೂ ಮುನ್ನ ಬರೆದಿರುವ ಡೇತ್ ನೋಟ್‍ನಲ್ಲಿ ಆತ್ಮಹತ್ಯೆಗೆ ಕಾರಣವನ್ನು ಬಹಿರಂಗಪಡಿಸಿದ್ದಾರೆ.

    ಡೇತ್ ನೋಟ್‍ನಲ್ಲಿ ಏನಿದೆ?
    ಪ್ರಿಯ ಪತ್ನಿ ಸುಮ ಕ್ಷಮಿಸಿ ಬಿಡು, ನಿನಗೆ ಮೋಸ ಮಾಡಿದ್ದೇನೆ. ನಿನ್ನಲ್ಲಿ ಕ್ಷಮೆ ಕೇಳಲು ನಾನು ಅರ್ಹನಲ್ಲ. ಹೆಣ್ಣಿನ ಸಹವಾಸ ಮಾಡಿ ಅವಳಿಂದ ಪೋಟೋ ವೀಡಿಯೋಗಳ ಟ್ರ್ಯಾಪ್‍ಗೆ ಸಿಲುಕಿ, ಬ್ಲ್ಯಾಕ್‍ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗ್ತಿಲ್ಲ. ತೃಪ್ತಿ, ತನ್ಮಯ ಮತ್ತು ಅಭಯ್‍ನನ್ನು ಚೆನ್ನಾಗಿ ನೋಡಿಕೊ. ಇಂತಿ ನಿನ್ನ ಮೋಸಗಾರ. ಇದನ್ನೂ ಓದಿ: ಬೆಂಗಳೂರಿನ ಬಿಜೆಪಿ ಮುಖಂಡ ನೇಣಿಗೆ ಶರಣು

    ಅನಂತರಾಜು ಹನಿಟ್ರ್ಯಾಪ್‍ಗೆ ಸಿಲುಕಿ ಮೇ 12ರಂದು ಬ್ಯಾಡರಹಳ್ಳಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಡೇತ್ ನೋಟ್‍ನಲ್ಲಿ ರೇಖಾ, ವಿನೋದ್, ಸ್ಪಂದನ ಎಂಬುವರಿಂದ ಹನಿಟ್ರ್ಯಾಪ್‍ಗೆ ಒಳಗಾಗಿದ್ದೇನೆ. ಕೆಅರ್‌ಪುರದ ರೇಖಾ ಎಂಬಾಕೆ ಫೇಸ್‍ಬುಕ್ ಮುಖಾಂತರ ಪರಿಚಯವಾಗಿದ್ಲು. ಆ ಬಳಿಕ ಖಾಸಗಿ ವೀಡಿಯೋಗಳನ್ನು ಮಾಡಿಟ್ಟುಕೊಂಡು ಬೆದರಿಕೆ ಹಾಕ್ತಿದ್ಲು. ಹಣ ಕೊಡದಿದ್ರೆ ಮಾಧ್ಯಮಗಳಿಗೆ, ರಾಜಕೀಯ ನಾಯಕರಿಗೆ ಫೋಟೋ ವೀಡಿಯೋ ಕಳುಹಿಸಿಕೊಡುವುದಾಗಿ ಬ್ಲ್ಯಾಕ್‍ಮೇಲ್ ಮಾಡುತ್ತಾ ಈ ಮೂಲಕ ಮಾನ ಮರ್ಯಾದೆ ಕಳೆಯೋದಾಗಿ ಬೆದರಿಕೆ ಹಾಕಿದ್ದರು. ಸಾಕಷ್ಟು ಹಣ ಕೊಟ್ಟು ಸಾಕಾಗಿದೆ ಎಂದು ಅನಂತರಾಜು ಡೇತ್ ನೋಟ್‍ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮಗಳಿಗಾಗಿ 36 ವರ್ಷ ಪುರುಷನ ವೇಷದಲ್ಲಿದ್ದ ತಾಯಿ

    ಎರಡು ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಅನಂತರಾಜು ಈ ಬಾರಿ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿದ್ದರು. ಈ ನಡುವೆ ಹನಿಟ್ರ್ಯಾಪ್‍ಗೆ ಸಿಲುಕಿ ಆತ್ಮಹತ್ಯೆ ಶರಣಾಗಿದ್ದರು. ಇದೀಗ ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಅನಂತರಾಜು ಪತ್ನಿ ಸುಮ ದೂರು ದಾಖಲಿಸಿದ್ದಾರೆ.