Tag: ಅಧ್ಯಕ್ಷರು

  • 23 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಿದ ಬಿಜೆಪಿ – ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು?

    23 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಿದ ಬಿಜೆಪಿ – ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು?

    ಬೆಂಗಳೂರು: 23 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿ ಬಿಜೆಪಿ (BJP) ಪಟ್ಟಿ ಬಿಡುಗಡೆ ಮಾಡಿದೆ.

    ಯಾವ ಜಿಲ್ಲೆಗೆ ಯಾರು?
    ಮೈಸೂರು ನಗರಕ್ಕೆ ಎಲ್.ನಾಗೇಂದ್ರ, ಚಾಮರಾಜನಗರ-ಸಿ.ಎಸ್.ನಿರಂಜನ್‌ಕುಮಾರ್, ದಕ್ಷಿಣ ಕನ್ನಡ-ಸತೀಶ್ ಕುಂಪಲಿ, ಚಿಕ್ಕಮಗಳೂರು-ದೇವರಾಜ ಶೆಟ್ಟಿ, ಶಿವಮೊಗ್ಗ-ಎನ್.ಕೆ.ಜಗದೀಶ್, ಉತ್ತರ ಕನ್ನಡ-ನಾರಾಯಣ ಶ್ರೀನಿವಾಸ ಹೆಗಡೆ, ಹುಬ್ಬಳ್ಳಿ-ಧಾರವಾಡ- ತಿಪ್ಪಣ್ಣ ಮಜ್ಜಗಿ, ಧಾರವಾಡ ಗ್ರಾಮಾಂತರ-ನಿಂಗಪ್ಪ ಡಿ.ಸುತಗಟ್ಟಿ, ಬೆಳಗಾವಿ ನಗರ-ಗೀತಾ ಸುತಾರ್, ಬೆಳಗಾವಿ ಗ್ರಾಮಾಂತರ-ಸುಭಾಷ್ ದುಂಡಪ್ಪ ಪಾಟೀಲ್, ಚಿಕ್ಕೋಡಿ-ಸತೀಶ್ ಅಪ್ಪಾಜಿಗೋಲ್, ಬೀದರ್-ಸೋಮನಾಥ್ ಪಾಟೀಲ್, ಕಲಬುರಗಿ ನಗರ-ಚಂದ್ರಕಾಂತ ಬಿ.ಪಾಟೀಲ್, ಕಲಬುರಗಿ ಗ್ರಾಮಾಂತರ-ಅಶೋಕ ಶಾಂತಪ್ಪ ಬಗಲಿ, ಯಾದಗಿರಿ-ಬಸವರಾಜ ವಿಭೂತಿಹಳ್ಳಿ, ಕೊಪ್ಪಳ-ದಡಸುಗೂರು ಬಸವರಾಜ್, ಬಳ್ಳಾರಿ-ಅನಿಲ್ ಕುಮಾರ್ ಮೋಕಾ, ವಿಜಯನಗರ-ಸಂಜೀವರೆಡ್ಡಿ ಎಸ್, ಚಿಕ್ಕಬಳ್ಳಾಪುರ-ಬಿ.ಸಂದೀಪ್, ಕೋಲಾರ-ಓಂ ಶಂಕ್ತಿ ಛಲಪತಿ, ಬೆಂಗಳೂರು ಗ್ರಾಮಾಂತರ-ಎಸ್.ಹರೀಶ್, ಬೆಂಗಳೂರು ಕೇಂದ್ರ-ಎ.ಆರ್.ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ-ಸಿ.ಕೆ.ರಾಮಮೂರ್ತಿ.

    ಮರು ನೇಮಕ ಮುಂದುವರಿಕೆ (16):
    ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉತ್ತರ ಕನ್ನಡ, ಹುಬ್ಬಳ್ಳಿ- ಧಾರವಾಡ, ಧಾರವಾಡ ಗ್ರಾಮಾಂತರ, ಬೆಳಗಾವಿ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ, ಬೀದರ್, ಕಲಬುರಗಿ, ಬಳ್ಳಾರಿ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ.

    ಹೊಸ ನೇಮಕ (7):
    ಶಿವಮೊಗ್ಗ, ಕಲಬುರಗಿ ಗ್ರಾಮಾಂತರ, ಯಾದಗಿರಿ, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರ

    ತೀರ್ಮಾನ ಬಾಕಿ ಇರುವ ಜಿಲ್ಲೆಗಳು (16):
    ಮೈಸೂರು ಗ್ರಾಮಾಂತರ, ಮಂಡ್ಯ, ಹಾಸನ, ಕೊಡಗು, ಉಡುಪಿ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ರಾಯಚೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮಧುಗಿರಿ, ರಾಮನಗರ, ಬೆಂಗಳೂರು ಗ್ರಾಮಾಂತರ.

  • 10 ಸ್ಥಾಯಿ ಸಮಿತಿಗೆ ಅಧ್ಯಕ್ಷರ ಪಟ್ಟ- ಗೊಂದಲವಾಗಿ ಉಳಿದ 2 ಸಮಿತಿ

    10 ಸ್ಥಾಯಿ ಸಮಿತಿಗೆ ಅಧ್ಯಕ್ಷರ ಪಟ್ಟ- ಗೊಂದಲವಾಗಿ ಉಳಿದ 2 ಸಮಿತಿ

    ಬೆಂಗಳೂರು: ಬಿಬಿಎಂಪಿಯ ಹನ್ನೆರಡು ಸ್ಥಾಯಿ ಸಮಿತಿಗಳಲ್ಲಿ ಹತ್ತು ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇನ್ನೆರಡು ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಗೊಂದಲವಿರೋದರಿಂದ ಮತ್ತೆ ಮುಂದೂಡಲಾಗಿದೆ.

    ನಗರದ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಯನ್ನು ನಾಮಪತ್ರ ಸಲ್ಲಿಕೆ ಮಾಡುವ ಮೂಲಕ, ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ತೋಟಗಾರಿಕೆ ಸ್ಥಾಯಿ ಸಮಿತಿಯಲ್ಲಿ ಹನ್ನೊಂದು ಜನ ಸದಸ್ಯರಿದ್ದರೂ ಅಧ್ಯಕ್ಷರಾಗಿ ಯಾರನ್ನು ಮಾಡಬೇಕು ಎಂಬ ಗೊಂದಲದಿಂದ ಮುಂದೂಡಲಾಗಿದೆ. ವಿಜಯನಗರದ ಕಾರ್ಪೋರೇಟರ್ ಮಹಾಲಕ್ಷ್ಮಿ ಹಾಗೂ ಉಮಾದೇವಿ ಅವರ ಮಧ್ಯೆ ಪೈಪೋಟಿ ಇರುವುದರಿಂದ ಇಂದು ಆಯ್ಕೆಯಾಗಲಿಲ್ಲ.

    ಲೆಕ್ಕಪತ್ರ ಸ್ಥಾಯಿ ಸಮಿತಿಯಲ್ಲಿ ಹತ್ತು ಮಂದಿ ಮಾತ್ರ ಸದಸ್ಯರು ಇರುವುದರಿಂದ ಸದಸ್ಯರ ಆಯ್ಕೆ ಬಳಿಕ ಅಧ್ಯಕ್ಷರ ಆಯ್ಕೆ ಆಗಲಿದೆ. ಮುಂದಿನ ವಾರ ಈ ಎರಡು ಸ್ಥಾಯಿ ಸಮಿತಿಗಳಿಗೆ ಆಯ್ಕೆ ಮಾಡುವ ಸಾಧ್ಯತೆ ಇದೆ.

    ಈ ಬಗ್ಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್ ಅವರು, ಕೆಲವು ಟೆಕ್ನಿಕಲ್ ಸಮಸ್ಯೆಯಿಂದ ಮುಂದೂಡಲಾಗಿದೆ. ಆಯುಕ್ತರಿಗೆ ಸದಸ್ಯರು ಮನವಿ ಮಾಡಿರುವುದರಿಂದ ಮುಂದೆ ಚುನಾವಣೆ ಯಾವಾಗ ನಡೆಯಲಿದೆ ಎಂದು ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ನಿರ್ಧರಿಸಲಿದ್ದಾರೆ ಎಂದರು.

    ಪಕ್ಷದೊಳಗೆ ಗೊಂದಲವಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇಯರ್, ಗೊಂದಲವೇನಿಲ್ಲ. ಪಾಲಿಕೆ ಸದಸ್ಯರ ಮನವಿ ಮೇರೆಗೆ ಮುಂದೂಡಲಾಗಿದೆ ಎಂದರು. ಇದೇ ವೇಳೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಮಾತನಾಡಿ, ಲೆಕ್ಕಪತ್ರ ಹಾಗೂ ತೋಟಗಾರಿಕೆ ಎರಡೂ ಸ್ಥಾಯಿ ಸಮಿತಿಯಲ್ಲಿ ಆಂಜನಪ್ಪ ಅವರ ಹೆಸರು ಇದೆ. ಹಾಗಾಗಿ ಗೊಂದಲ ಆಗಿದೆ. ಮುಂದಿನ ವಾರ ಮತ್ತೆ ಚುನಾವಣೆ ನಡೆಸಿ ಅಂತಿಮಗೊಳಿಸಲಾಗುತ್ತದೆ ಎಂದರು.

    ಎಲ್ಲಾ ಸ್ಥಾಯಿ ಸಮಿತಿಗಳಿಗೆ ಅವಿರೋಧವಾಗಿ ಹನ್ನೊಂದು ಸದಸ್ಯರ ಆಯ್ಕೆಯಾಗಿದ್ದಾರೆ. ಬಾಕಿ ಇರುವ ಅಧ್ಯಕ್ಷರ ಹೆಸರು ಮೇಯರ್ ಅವರು, ಮುಂದಿನ ವಾರ ಘೋಷಣೆ ಮಾಡಲಿದ್ದಾರೆ.

    ಅಧ್ಯಕ್ಷರ ಪಟ್ಟಿ ಹೀಗಿದೆ:
    1) ಶಿಕ್ಷಣ ಸ್ಥಾಯಿ ಸಮಿತಿ- ಮಂಜುಳಾ ನಾರಾಯಣಸ್ವಾಮಿ
    2) ನಗರಯೋಜನೆ- ಆಶಾ ಸುರೇಶ್
    3) ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ – ಎಲ್ ಶ್ರೀನಿವಾಸ್
    4) ಅಪೀಲು ಸ್ಥಾಯಿ ಸಮಿತಿ- ಗುಂಡಣ್ಣ (ಲಕ್ಷ್ಮೀನಾರಾಯಣ)
    5) ಸಾಮಾಜಿಕ ನ್ಯಾಯ ಸಮಿತಿ-ಹನುಮಂತಯ್ಯ
    6) ವಾರ್ಡ್ ಕಾಮಗಾರಿ ಸಮಿತಿ- ಜಿಕೆ ವೆಂಕಟೇಶ್
    7) ಬೃಹತ್ ರಸ್ತೆ ಕಾಮಗಾರಿ- ಮೋಹನ್ ಕುಮಾರ್
    8) ಆರೋಗ್ಯ ಸ್ಥಾಯಿ ಸಮಿತಿ -ಮಂಜುನಾಥ್ ರಾಜು
    9) ಸಿಬ್ಬಂದಿ ಸುಧಾರಣೆ ಸ್ಥಾಯಿ ಸಮಿತಿ- ಅರುಣಾ ರವಿ
    10) ಮಾರುಕಟ್ಟೆ ಸ್ಥಾಯಿ ಸಮಿತಿ- ಪದ್ಮಾವತಿ

    ಇಂದು ಆಯ್ಕೆಯಾದ ಹನ್ನೆರಡು ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರ ಪಟ್ಟಿ:
    1.ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ
    ಅಧ್ಯಕ್ಷರು: ಶ್ರೀ ಎಲ್.ಶ್ರೀನಿವಾಸ್
    ಸದಸ್ಯರು: ಮಹಾಲಕ್ಷ್ಮೀ ಹೆಚ್. ರವೀಂದ್ರ, ಸತೀಶ್.ಎಂ, ಬಿ.ಎನ್.ನಿತೀಶ್ ಪುರುಷೋತ್ತಮ, ಕೆ.ದೇವದಾಸ, ಭಾಗ್ಯಲಕ್ಷ್ಮೀ ಮುರಳಿ, ಎಸ್. ಉದಯ್ ಕುಮಾರ್, ಕೇಶವಮೂರ್ತಿ.ಎಸ್, ಆರ್.ವಸಂತಕುಮಾರ್, ಅನ್ಸರ್ ಪಾಷಾ.ಎಸ್, ಭದ್ರೇಗೌಡ.

    2. ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ
    ಅಧ್ಯಕ್ಷರು: ಮಂಜುನಾಥ್ ರಾಜು.ಜಿ
    ಸದಸ್ಯರು: ಪ್ರತಿಮ.ಆರ್, ಎಂ.ಎನ್.ಶ್ರೀಕಾಂತ್, ಶಿಲ್ಪ ಶ್ರೀಧರ್, ಪ್ರಮಿಳಾ.ಎಂ, ಮಧುಕುಮಾರಿ ವಾಗೀಶ್, ಇರ್ಷಾದ್ ಬೇಗಂ, ಮೀನಾಕ್ಷಿ, ರೂಪ.ಆರ್, ಶಿಲ್ಪ ಅಭಿಲಾಷ್, ಶೋಭ ಜಗದೀಶ್‍ಗೌಡ.

    3. ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ
    ಅಧ್ಯಕ್ಷರು: ಶ್ರೀಮತಿ ಆಶಾ ಸುರೇಶ್
    ಸದಸ್ಯರು: ಪಿ.ವಿ.ಮಂಜುನಾಥ(ಬಾಬು), ಆನಂದಕುಮಾರ್.ಎಸ್, ಟಿ.ರಾಮಚಂದ್ರ, ಎಂ.ಚಂದ್ರಪ್ಪ, ಡಿ.ಹೆಚ್.ಲಕ್ಷ್ಮೀ, ರಾಜಣ್ಣ, ಶಶಿರೇಖಾ.ಎಂ, ಮಮತಾ ಶರವಣ, ಭಾಗ್ಯಮ್ಮ ಕೃಷ್ಣಯ್ಯ, ರಾಜಶೇಖರ್.ಎನ್.

    4. ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ
    ಅಧ್ಯಕ್ಷರು: ಮೋಹನ್ ಕುಮಾರ್
    ಸದಸ್ಯರು: ಎ.ಸಿ.ಹರಿಪ್ರಸಾದ್, ಡಿ.ಪ್ರಮೋದ್, ಚಂದ್ರಕಲಾ ಗಿರೀಶ್ ಲಕ್ಕಣ್ಣ, ಡಿ.ಜಿ.ತೇಜಸ್ವಿನಿ, ಸೀತಾರಾಮಯ್ಯ, ಪಲ್ಲವಿ.ಸಿ, ಕುಮಾರಿ ಪಳನಿಕಾಂತ್, ಸರಳ ಸಿ. ಮಹೇಶ್ಬಾಬು, ಹೆಚ್.ಎ.ಕೆಂಪೇಗೌಡ, ಪಳನಿ ಅಮ್ಮಾಳ್.ವಿ, ಕೆ.ವಿ.ರಾಜೇಂದ್ರ ಕುಮಾರ್.

    5. ವಾರ್ಡ್ ಮಟ್ಟಡ ಸಾರ್ವಜನಿಕರ ಕಾಮಗಾರಿ ಸ್ಥಾಯಿ ಸಮಿತಿ
    ಅಧ್ಯಕ್ಷರು: ಜಿ.ಕೆ.ವೆಂಕಟೇಶ್(ಎನ್.ಟಿ.ಆರ್)
    ಸದಸ್ಯರು: ಐಶ್ವರ್ಯ.ಬಿ.ಎನ್, ಎನ್.ಶಾಂತಕುಮಾರಿ, ನಳನಿ ಎಂ.ಮಂಜು, ಮಹದೇವ.ಎಂ, ಗುರುಮೂರ್ತಿ ರೆಡ್ಡಿ, ಗಾಯಿತ್ರಿ.ಎಂ, ಮಂಜುಳಾ ವಿಜಯ್ ಕುಮಾರ್, ರಾಧಮ್ಮ ವೆಂಕಟೇಶ್, ನೌಶೀರ್ ಅಹ್ಮದ್, ಸವಿತ ವಿ.ಕೃಷ್ಣ.

    6. ಶಿಕ್ಷಣ ಸ್ಥಾಯಿ ಸಮಿತಿ
    ಅಧ್ಯಕ್ಷರು: ಮಂಜುಳ ಎನ್.ಸ್ವಾಮಿ
    ಸದಸ್ಯರು: ಇಮ್ರಾನ್ ಪಾಷಾ, ಎಸ್.ಲೀಲಾ ಶಿವಕುಮಾರ್, ಹೇಮಲತಾ ಸತೀಶ್ ಶೇಟ್, ಎನ್.ಭವ್ಯಾ, ವಿ.ವಿ.ಸತ್ಯನಾರಾಯಣ, ಸರ್ವಮಂಗಳ, ಮಮತಾ.ಕೆ.ಎಂ, ಶಶಿಕಲಾ.ಜಿ.ವಿ, ಬಿ.ಎನ್.ಮಂಜುನಾಥ ರೆಡ್ಡಿ, ಶಾಂತಬಾಬು.

    7. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ
    ಅಧ್ಯಕ್ಷರು: ಹನುಮಂತಯ್ಯ
    ಸದಸ್ಯರು: ಆರ್.ವಿ.ಯುವರಾಜ್, ಲತಕುವರ್ ರಾಥೋಡ್.ಆರ್.ಜೆ, ಎನ್.ಮಂಜುನಾಥ್, ಆನಂದ್ ಕುಮಾರ್, ರಾಜೇಶ್ವರಿ ಚೋಳರಾಜ.ಕೆ, ಸರಸ್ವತಮ್ಮ, ಡಿ.ಮುನಿಲಕ್ಷ್ಮಮ್ಮ, ಎ.ಕೋದಂಡರೆಡ್ಡಿ, ಪುಷ್ಪ ಮಂಜುನಾಥ್.ಬಿ.ಎಂ, ನಾಜೀಮ್ ಖಾನಮ್.

    8. ಅಪೀಲುಗಳ ಸ್ಥಾಯಿ ಸಮಿತಿ
    ಅಧ್ಯಕ್ಷರು: ಸಿ.ಆರ್.ಲಕ್ಷ್ಮಿನಾರಾಯಣ್
    ಸದಸ್ಯರು: ಎಂ.ವೇಲುನಾಯಕರ್, ಜಯಪಾಲ.ಎನ್, ಕೆ.ವೀಣಾಕುಮಾರಿ, ವಾಣಿ ವಿ.ರಾವ್, ಅಜ್ಮಲ್ ಬೇಗ್, ಆರ್.ಸಂಪತ್ ರಾಜ್, ಅಬ್ದುಲ್ ರಕೀಬ್ ಝಾಕೀರ್, ಶಕೀಲ್ ಅಹಮದ್, ಸುಮಂಗಲ.ಬಿ, ಉಮೇಸಲ್ಮಾ.

    9. ಮಾರುಕಟ್ಟೆ ಸ್ಥಾಯಿ ಸಮಿತಿ
    ಅಧ್ಯಕ್ಷರು: ಎಂ.ಪದ್ಮಾವತಿ ಶ್ರೀನಿವಾಸ
    ಸದಸ್ಯರು: ಎನ್.ನಾಗರಾಜು, ಜಿ.ಮಂಜುನಾಥ್, ಸೈಯ್ಯದ್ ಸಾಜೀದಾ, ವಿ.ವಿ.ಪಾತೀಬರಾಜನ್, ಉಮಾವತಿ ಪದ್ಮರಾಜ್, ದೀಪಿಕಾ ಎಲ್. ಮಂಜುನಾಥ ರೆಡ್ಡಿ, ಆರ್.ಪ್ರಭಾವತಿ ರಮೇಶ್, ಭಾರತಿ ರಾಮಚಂದ್ರ, ಕೆ.ಗಣೇಶ್ ರಾವ್ ಮಾನೆ, ಆರ್.ಪದ್ಮಾವತಿ ಅಮರನಾಥ್.

    10. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ
    ಅಧ್ಯಕ್ಷರು: ಅರುಣ ರವಿ
    ಸದಸ್ಯರು: ಜಿ.ಪದ್ಮಾವತಿ, ಎಂ.ಶಿವರಾಜು, ಆರ್.ಎಸ್.ಸತ್ಯನಾರಾಯಣ, ಮೊಹಮ್ಮದ್ ರಿಜ್ವಾನ್ ನವಾಬ್, ಎಂ.ಬಿ.ದ್ವಾರಕನಾಥ್ (ದಾಲು), ದೀಪಾ ನಾಗೇಶ್, ಇಂದಿರಾ.ಜಿ, ನಾಗರಾಜ್, ಪ್ರತಿಭಾ ಧನರಾಜ್, ಗಂಗಮ್ಮ.

  • ತಾ.ಪಂ ಅಧ್ಯಕ್ಷರ ಕೊಠಡಿಯಲ್ಲಿ ಬಿಯರ್ ಬಾಟಲ್ ಒಡೆದ ಕಿಡಿಗೇಡಿಗಳು

    ತಾ.ಪಂ ಅಧ್ಯಕ್ಷರ ಕೊಠಡಿಯಲ್ಲಿ ಬಿಯರ್ ಬಾಟಲ್ ಒಡೆದ ಕಿಡಿಗೇಡಿಗಳು

    ಯಾದಗಿರಿ: ತಾಲೂಕು ಪಂಚಾಯತ್ ಅಧ್ಯಕ್ಷರ ಕೊಠಡಿಯಲ್ಲಿ ಕಿಡಿಗೇಡಿಗಳು ಬಿಯರ್ ಬಾಟಲ್ ಒಡೆದಿರುವ ಘಟನೆ ನಡೆದಿದೆ. ಕೊಠಡಿ ತುಂಬೆಲ್ಲ ಬಿಯರ್ ಬಾಟಲ್ ಗ್ಲಾಸ್ ಹಾಗೂ ಕಲ್ಲುಗಳು ಬಿಸಾಕಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

    ತಾ.ಪಂ ಅಧ್ಯಕ್ಷೆ ಭಿಮ್ಮವ್ವ ಅಚ್ಚೋಲಾ ಮತ್ತು ಸದಸ್ಯರ ನಡುವೆ ಮುಸುಕಿನ ಗುದ್ದಾಟ ಹಿನ್ನೆಲೆಯಲ್ಲಿ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ. ಒಂದೇ ತಿಂಗಳಲ್ಲಿ ಎರಡು ಬಾರಿ ಇದೇ ರೀತಿಯ ಘಟನೆ ನಡೆದಿದ್ದು ಗೊಂದಲಕ್ಕೆ ಕಾರಣವಾಗಿದೆ. ಅಧ್ಯಕ್ಷರ ಹೆಸರಿಗೆ ಕಳಂಕ ತರಲು ತಾ.ಪಂ ಸದಸ್ಯರೇ ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಒಂದೇ ತಿಂಗಳಲ್ಲಿ ಎರಡು ಬಾರಿ ಈ ರೀತಿಯ ಘಟನೆ ನಡೆದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪೊಲೀಸರಿಗೆ ದೂರು ಕೊಟ್ಟು ಕಿಡಿಗೇಡಿಗಳ ಪತ್ತೆಗೆ ಮುಂದಾಗುವುದಾಗಿ ತಿಳಿಸಿದ್ದಾರೆ. ಅಲ್ಲದೆ ಇನ್ನುಮುಂದೆ ಕಚೇರಿಯಲ್ಲಿ ಸಿಸಿಟಿವಿ ಅಳವಡಿಸುವುದಾಗಿ ತಿಳಿಸಿದ್ದಾರೆ.

  • ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನೇಮಕಕ್ಕೆ ತೀವ್ರ ವಿರೋಧ

    ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನೇಮಕಕ್ಕೆ ತೀವ್ರ ವಿರೋಧ

    ಚಿಕ್ಕಮಗಳೂರು: ಜನವರಿ 10 ಮತ್ತು 11ರಂದು ಜಿಲ್ಲೆಯ ಶೃಂಗೇರಿಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಲ್ಕುಳಿ ವಿಠಲ್ ಹೆಗ್ಡೆ ವಿರುದ್ಧ ತೀವ್ರ ಅಸಾಮಾಧಾನ ವ್ಯಕ್ತವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಕಲ್ಕುಳಿ ವಿಠಲ್ ಹೆಗ್ಡೆ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದೆ.

    ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗುವವರು ವಿವಾದಗಳಿಂದ ದೂರವಿದ್ದು, ರಾಜಕೀಯಕ್ಕೂ ಅಂಟಿಕೊಂಡಿರದೆ ಸಾಹಿತ್ಯ ಕೃಷಿ ಮಾಡಿದ ಸರ್ವಮಾನ್ಯ ವ್ಯಕ್ತಿಗಳಾಗಿ ಕ್ರಿಮಿನಲ್ ಆರೋಪಗಳಿಂದ ಮುಕ್ತರಾಗಿರಬೇಕು. ಆದರೆ ಕಲ್ಕುಳಿ ವಿಠಲ್ ಹೆಗ್ಡೆ ವಿವಾದಿತ ವ್ಯಕ್ತಿಯಾಗಿದ್ದು, ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಯ ಎಲ್ಲಾ ಅಂಶಗಳನ್ನ ಗಾಳಿಗೆ ತೂರಿ ಏಕಪಕ್ಷೀಯವಾಗಿ ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ ಎಂದು ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಆರೋಪಿಸಿದೆ.

    ಕನ್ನಡ ರಾಜ್ಯೋತ್ಸವದಂದು ತಾಲೂಕು ಸಾಹಿತ್ಯ ಪರಿಷತ್ ಸನ್ಮಾನಕ್ಕಾಗಿ ಕಲ್ಕುಳಿ ವಿಠಲ್ ಹೆಗ್ಡೆ ಹೆಸರನ್ನು ಸೂಚಿಸಿತ್ತು. ಆದರೆ ಇವರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಇವರ ಹೆಸರನ್ನ ಕೈಬಿಡಲಾಗಿತ್ತು. ಈಗ ಮತ್ತೆ ಅವರನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸಿ ಮತ್ತೊಂದು ವಿವಾದ ಸೃಷ್ಟಿಸುತ್ತಿರುವುದು ವಿಪರ್ಯಾಸ ಎಂದು ವೇದಿಕೆ ಹೇಳಿದೆ. ಇವರದ್ದು ನಕ್ಸಲ್ ಚಟುವಟಿಕೆಗಳನ್ನು ಬೆಂಬಲಿಸುವ ಪ್ರವೃತ್ತಿ ಎಂದು ಪೊಲೀಸ್ ವರದಿಗಳು ಸ್ಪಷ್ಟಪಡಿಸಿವೆ. ಇವರೊಂದಿಗೆ ಪ್ರಮುಖ ಹೋರಾಟಗಳಲ್ಲಿ ಭಾಗಿಯಾದವರು ಭೂಗತರಾಗಿ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಪ್ರಮುಖ ನಕ್ಸಲೈಟ್‍ಗಳೆಂದು ಪೊಲೀಸ್ ಇಲಾಖೆ ಘೋಷಿಸಿರುವ ವ್ಯಕ್ತಿಗಳೊಂದಿಗೆ ಇವರ ಸಂಬಂಧ ಹೊಂದಿದ್ದರು ಎಂದು ರಾಜ್ಯಕ್ಕೆ ಗೊತ್ತಿದೆ ಅಂತಿದೆ ವೇದಿಕೆ.

    2006-07ನೇ ಇಸವಿಯಲ್ಲಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ನಕ್ಸಲ್ ನಿಗ್ರಹ ದಳ ಹೊರತಂದ ‘ಮಲೆನಾಡಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ನಕ್ಸಲೀಯರ ವಿವರಗಳು’ ಎಂಬ ಕೈಪಿಡಿಯಲ್ಲಿ ಮಲೆನಾಡಿನಲ್ಲಿ ನಕ್ಸಲರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿರುವ ವ್ಯಕ್ತಿಗಳ ವಿವರಗಳು ಎಂಬ ತಲೆಬರಹದಲ್ಲಿ ಇವರ ಹೆಸರೇ ಮೊದಲಿನಲ್ಲಿದೆ. ಅಷ್ಟೇ ಅಲ್ಲದೆ, ದಲಿತ ವಿರೋಧಿ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಆಸ್ತಿಯನ್ನ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಬಗ್ಗೆ ಮೊಕದ್ದಮೆಗಳು ದಾಖಲಾಗಿದ್ದು, ನ್ಯಾಯಾಲಯದ ಕಟಕಟ್ಟೆ ಕೂಡ ಏರಿದೆ. ಆದ್ದರಿಂದ ಕೂಡಲೇ ಇವರನ್ನು ಬದಲಾವಣೆ ಮಾಡಬೇಕು ಹಾಗೂ ಸಾಹಿತ್ಯ ಸಮ್ಮೇಳನವನ್ನು ಮುಂದಕ್ಕೆ ಹಾಕಬೇಕೆಂದು ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಸದಸ್ಯರಾದ ಸಂತೋಷ್ ಕೋಟ್ಯಾನ್, ಸುಮಂತ್, ರಂಜಿತ್ ಶೆಟ್ಟಿ, ನೂತನ್, ಕಿಶೋರ್, ಜ್ಞಾನೇಂದ್ರ ಹಾಗೂ ಕಾರ್ತಿಕ್ ಎಂಬುವರು ಎಸ್‍ಪಿ ಹರೀಶ್ ಪಾಂಡೆಗೆ ಮನವಿ ಸಲ್ಲಿದ್ದಾರೆ.

  • 16 ಅಕಾಡೆಮಿ/ ಪ್ರಾಧಿಕಾರಕ್ಕೆ ಅಧ್ಯಕ್ಷರು, ಸದಸ್ಯರ ನೇಮಕ

    16 ಅಕಾಡೆಮಿ/ ಪ್ರಾಧಿಕಾರಕ್ಕೆ ಅಧ್ಯಕ್ಷರು, ಸದಸ್ಯರ ನೇಮಕ

    ಬೆಂಗಳೂರು: ಅಧಿಕಾರಕ್ಕೆ ಬರುತ್ತಿದಂತೆ ಮೈತ್ರಿ ಸರ್ಕಾರ ನೇಮಕ ಮಾಡಿದ್ದ ಅಕಾಡೆಮಿ/ಪ್ರಾಧಿಕಾರಿಗಳ ಅಧ್ಯಕ್ಷರು, ಸದಸ್ಯರನ್ನು ರದ್ದು ಮಾಡಿದ್ದ ಬಿಎಸ್ ಯಡಿಯೂರಪ್ಪ ಸರ್ಕಾರ ಹೊಸ ಸಮಿತಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

    ತಕ್ಷಣದಿಂದ ಜಾರಿ ಬರುವಂತೆ ಸರ್ಕಾರ ಆದೇಶವನ್ನು ನೀಡಿದ್ದು, ಸದ್ಯ ನೇಮಕವಾಗಿರುವ ಅಧ್ಯಕ್ಷರು, ಸದಸ್ಯರ ಅವಧಿ ಮುಂದಿನ ಆದೇಶ ಅಥವಾ ಮುಂಬರುವ ಮೂರು ವರ್ಷಗಳ ಅವಧಿಯವರೆಗೆ ನೇಮಕ ಮಾಡಲಾಗಿದೆ.

    1)ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಅಧ್ಯಕ್ಷರು – ಟಿ.ಎಸ್.ನಾಗಾಭರಣ
    ಸದಸ್ಯರು – ಕಬ್ಬಿನಾಲೆ ವಸಂತ ಭಾರದ್ವಾಜ, ಡಾ:ವಿಜಯಲಕ್ಷ್ಮೀ ಬಾಳೆಕುಂದ್ರಿ, ರೋಹಿತ್ ಚಕ್ರತೀರ್ಥ, ಅಬ್ದುಲ್ ರಹಮಾನ್ ಪಾಷಾ, ರಮೇಶ್ ಗುಬ್ಬಿಗೂಡ, ಸುರೇಶ್ ಬಡಿಗೇರ, ಎನ್.ಆರ್. ವಿಶುಕುಮಾರ್.

    2)ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಅಧ್ಯಕ್ಷರು – ಅಜರ್ಕಳ ಗಿರೀಶ್ ಭಟ್
    ಸದಸ್ಯರು – ಅಜ್ಜಂಪುರ ಮಂಜುನಾಥ, ಡಾ:ಮಾಧವ ಪೆರಾಜೆ, ಡಾ:ಷಣ್ಮುಖ, ಡಾ:ಎಂ.ಎಸ್.ಚೈತ್ರ, ಡಾ:ಡಂಕಿನ್ ಜಳಕಿ, ಸ.ಗಿರಿಜಾಶಂಕರ್.

    3)ಕನ್ನಡ ಪುಸ್ತಕ ಪ್ರಾಧಿಕಾರ: ಅಧ್ಯಕ್ಷರು – ಡಾ:ಎಂ.ಎನ್.ನಂದೀಶ್ ಹಂಜೆ
    ಸದಸ್ಯರು – ಅಶೋಕ್ ರಾಯ್ಕರ್, ಡಾ:ಪುರುಷೋತ್ತಮ ಗೌಡ, ಟಿ.ಎ.ಎನ್.ಖಂಡಿಗೆ, ಸಂಗಮೇಶ್ ಪೂಜಾರ್, ಪ್ರಕಾಶ ಕಂಬತ್ತಹಳ್ಳಿ, ಪ್ರೊ.ಗದ್ದಗಿಮಠ, ಎ.ವಿ.ನಾವಡ, ಎಚ್.ಬಿ.ಬೋರಲಿಂಗಯ್ಯ.

    4)ಕನ್ನಡ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರು – ಡಾ:ಬಿ.ವಿ.ವಸಂತಕುಮಾರ್
    ಸದಸ್ಯರು – ಜಿನದತ್ತ ಹಡಗಲಿ, ಛಾಯಾ ಭಗವತಿ, ರೋಹಿಣಾಕ್ಷ ಶಿರ್ಲಾಲು, ಸಂತೋಷ್ ತಮ್ಮಯ್ಯ, ಡಾ:ಬಿ.ಎಂ.ಶರಭೇಂದ್ರ ಸ್ವಾಮಿ, ಪಾರ್ವತಿ ಪಿಟಗಿ, ಪ್ರೊ.ಕೃಷ್ಣೇಗೌಡ, ಡಾ:ಎನ್.ಎಸ್.ತಾರಾನಾಥ ಮೈಸೂರು, ಡಾ.ವೈ.ಸಿ.ಭಾನುಮತಿ.

    5)ಕರ್ನಾಟಕ ನಾಟಕ ಅಕಾಡೆಮಿ: ಅಧ್ಯಕ್ಷರು – ಭೀಮಸೇನೆ
    ಸದಸ್ಯರು – ಎಂ.ಕೆ.ಮಠ, ಪ್ರೇಮ ಬದಾಮಿ, ಪ್ರಭುದೇವ ಕಪ್ಪಗಲ, ವಿನೋದ ಅಂಬೇಕರ್, ಶಿವಪ್ಪ ಭರಮಪ್ಪ ಅದರಗುಂಚಿ, ಜೋಸೆಫ್, ಡಾ:ಎಂ.ಗುಣಶೀಲನ್, ಕೆ.ಆರ್.ಪ್ರಕಾಶ್, ಟಿ.ಎ.ರಾಶಿವಯ್ಯ ತುಮಕೂರು, ನಾಗರಾಜ ರಾವ್ ಕಲ್ಕಟ್ಟೆ ಚಿಕ್ಕಮಗಳೂರು, ಯಶವಂತರಾವ್ ಸರ್ ದೇಶಪಾಂಡೆ, ವೈದ್ಯನಾಥ್ ಬಿರಾದಾರ್ (ಬೀದರ್), ಟಿ.ರಾಜರಾಮ್.

    6)ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ: ಅಧ್ಯಕ್ಷರು – ಆನೂರು ಅನಂತಕೃಷ್ಣ ಶರ್ಮ
    ಸದಸ್ಯರು – ಡಾ:ವೀರಣ್ಣ ಪತ್ತರ್, ಡಾ:ನಿರುಪಮಾ ರಾಜೇಂದ್ರ, ಶಂಕರ ಶಾನುಭಾಗ್, ಸುಜೇಂದ್ರ ಬಾಬು, ರಾಜಗೋಪಾಲ್, ಹೊಸಹಳ್ಳಿ ವೆಂಕಟರಾಮ್, ಶಾರದಾಮಣಿ ಶೇಖರ್, ರಮ್ಯ ಸೂರಜ್, ಹೇಮಾ ವಾಗ್ಮೋರೆ, ರೇಖಾ ಪ್ರೇಮಕುಮಾರ್, ಪದ್ಮನಿವೋಕ್, ಕಿಕ್ಕೇರಿ ಕೃಷ್ಣಮೂರ್ತಿ.

    7)ಕರ್ನಾಟಕ ಶಿಲ್ಪಕಲಾ ಅಕಾಡೆಮಿ: ಅಧ್ಯಕ್ಷರು – ವೀರಣ್ಣ ಅರ್ಕಸಾಲಿ
    ಸದಸ್ಯರು – ರಾಜೇಶ್ ಪತ್ತಾರ್, ಸುರೇಶ್ ಗುಡಿಗಾರ್, ಅಣ್ಣಪ್ಪ ಆಚಾರ್ಯ, ಚಂದ್ರಶೇಖರ್ ನಾಯ್ಕ, ನಟರಾಜ್, ಶ್ರೀಧರ ಕಾಶಿನಾಥ್, ಕೃಷ್ಣಪ್ಪ ಬಡಿಗೇರ, ಸುರೇಶ್ ಎಸ್.ಕಮ್ಮಾರ್, ಮಂಜುನಾಥ್ ಆಚಾರ್, ಜಗದೀಶ್ ಎಸ್.ದೊಡ್ಡಮನಿ, ಮನೋಹರ್ ಕಾಳಪ್ಪ ಪತ್ತಾರ್,

    8)ಕರ್ನಾಟಕ ಲಲಿತಕಲಾ ಅಕಾಡೆಮಿ: ಅಧ್ಯಕ್ಷರು – ಡಿ.ಮಹೇಂದ್ರ
    ಸದಸ್ಯರು – ರಮೇಶ್ ಚೌಹಾಣ್, ಬಿ.ಆರ್.ಉಪ್ಪಳ, ಗಣೇಶ್ ಧ್ವಾರೇಶ್ವರ, ನರಸಿಂಹಮೂರ್ತಿ, ವಿನೋದ್ ಕುಮಾರ್, ಲಕ್ಷ್ಮೀ ಮೈಸೂರು, ಸೂರ್ಯಪ್ರಕಾಶ್, ಆತ್ಮಾನಂದ ಎಚ್.ಎ, ಅನೀಸ್ ಫಾತೀಮ, ಜಯಾನಂದ ಮಾದರ.

    9)ಕರ್ನಾಟಕ ಯಕ್ಷಗಾನ ಅಕಾಡೆಮಿ: ಅಧ್ಯಕ್ಷರು – ಎಂ.ಎ.ಹೆಗ್ಡೆ
    ಸದಸ್ಯರು – ಮಾಧವ ಭಂಡಾರಿ, ನವನೀತ ಶೆಟ್ಟಿ, ಆರತಿ ಪಟ್ರಮೆ, ರಾಧಾಕೃಷ್ಣ ಕಲ್ಚಾರು, ರಮೇಶ್ ಬೇಗಾರು, ದಿವಾಕರ ಹೆಗಡೆ, ಕೆ.ಎಂ.ಶೇಖರ್, ಶ್ರೀನಿವಾಸ್ ಸಾಸ್ತಾನ್, ಯೋಗೇಶ್ ರಾವ್, ಜಿ.ಎಸ್.ಭಟ್ (ಮೈಸೂರು), ನಿರ್ಮಲಾ ಮಂಜುನಾಥ್ ಹೆಗಡೆ.

    10)ಕರ್ನಾಟಕ ಜಾನಪಡ ಅಕಾಡೆಮಿ: ಅಧ್ಯಕ್ಷರು – ಮಂಜಮ್ಮ ಜೋಗತಿ
    ಸದಸ್ಯರು – ಲಿಂಗಪ್ಪ, ಶಂಕರ ಅರ್ಕಸಾಲಿ, ಚಟ್ಟಿಕುಟ್ಟಡ ಡಾ.ಅನಂತಸುಬ್ಬಯ್ಯ, ಕುಡಿಯರ ಖೋಜಕ್ಕಿ, ಅಮರಯ್ಯ ಸ್ವಾಮಿ, ಡಾ:ವೇಮಗಲ್ ನಾರಾಯಣಸ್ವಾಮಿ, ಡಾ:ರಾಜೇಂದ್ರ ಯರನಾಳ, ಡಾ.ಪಿ.ಕೆ.ರಾಜಶೇಖರ್, ಪುಷ್ಪಲತಾ, ಎಸ್.ಜಿ.ಲಕ್ಷ್ಮೀದೇವಮ್ಮ, ಬೂದ್ಯಪ್ಪ.

    11)ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ: ಅಧ್ಯಕ್ಷರು – ದಯಾನಂದ ಕತ್ತಲಸರ
    ಸದಸ್ಯರು – ಲೀಲಾಕ್ಷ ಕರ್ಕೇರ, ರವೀಂದ್ರ ಶೆಟ್ಟಿ ಬಳಂಜ, ಡಾ:ಸಾಯಿಗೀತ ಹೆಗಡೆ, ನಾಗೇಶ್ ಕುಲಾಲ್, ವಿಜಯಲಕ್ಷ್ಮೀ ರೈ, ಮಲ್ಲಿಕಾ ಶೆಟ್ಟಿ, ಕಡಬ ದಿನೇಶ್ ರೈ, ಡಾ:ವೈ.ಎನ್.ಶೆಟ್ಟಿ, ತಾರಾ ಉಮೇಶ್, ನಿಟ್ಟೆ ಶಶಿಧರ ಶೆಟ್ಟಿ, ಆಕಾಶ್‍ರಾಜ್ ಜೈನ್.

    12)ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರು – ಡಾ:ಪಾರ್ವತಿ ಅಪ್ಪಯ್ಯ
    ಸದಸ್ಯರು – ಗೌರಮ್ಮ ಮದಮ್ಮಯ್ಯ, ಜಾನಕಿ ಮಾಚಯ್ಯ, ಬಬ್ಬಿರ ಸರಸ್ವತಿ, ಶಂಬಯ್ಯ, ಪಂಡಿರಂಡ ಪ್ರಭುಕುಮಾರ್, ರವಿ ಕಾಳಪ್ಪ, ಮೆಚ್ಚಿರ ಸುಭಾಷ್ ನಾಣಯ್ಯ.

    13)ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರು – ಡಾ: ಜಗದೀಶ್ ಪೈ
    ಸದಸ್ಯರು – ಗುರುಮೂರ್ತಿ ಶೇಟ್, ಗೋಪಿ ಭಟ್, ನವೀನ್ ನಾಯ್ಕ, ಚಿದಾನಂದ ಹರಿಭಂಡಾರಿ, ಭಾಸ್ಕರ ನಾಯಕ್, ಸುರೇಂದ್ರ ವಿ.ಬಾಲಂಕರ್, ಪ್ರಮೋದ್ ಸೇಟ್, ಪೂರ್ಣಿಮಾ ಸುರೇಶ್ ನಾಯ್ಕ, ಕೆ.ನಾರಾಯಣ ಕಾರ್ವಿ, ಡಾ: ವಸಂತ ಬಾಂದೇಕರ್, ಅರುಣ್ ಜಿ.ಸೇಟ್.

    14)ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರು – ರಹೀಂ ಉಚ್ಚಿಲ
    ಸದಸ್ಯರು – ರೂಪೇಶ್ ಕುಮಾರ್, ಮುರಳಿ ರಾಜ್, ಡಾ:ಮುನೀರ್ ಬಾವ, ಸುರೇಖ, ಚಂಚಲಾಕ್ಷಿ, ಫಸಲ್ ಹಸ್ಸಿಗೋಳಿ, ಸಿರಾಜ್ ಮುಡುಪು.

    15)ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ: ಅಧ್ಯಕ್ಷರು – ಲಕ್ಷ್ಮೀನಾರಾಯಣ ಕಜೆಗದ್ದೆ
    ಸದಸ್ಯರು – ಜಾನಕಿ ಬೈತಡ್ಕ, ಸ್ಮಿತಾ ಅಮೃತರಾಜ್, ಪ್ರೇಮಾ ರಾಘವಯ್ಯ, ಎ.ಪಿ.ಧನಂಜಯ, ಆನಂದ ದಂಬೆಕೊಡಿ, ಸೋಮಣ್ಣ ಆರ್.ಸೂರ್ತಲೆ.

    16)ಕರ್ನಾಟಕ ಬಯಲಾಟ ಅಕಾಡೆಮಿ (ಬಾಗಲಕೋಟೆ): ಅಧ್ಯಕ್ಷರು – ಸೊರಬಕ್ಕನವರ್ ಹಾವೇರಿ
    ಸದಸ್ಯರು – ಎನ್.ಎಸ್.ರಾಜು, ಡಾ:ಕರಿಶೆಟ್ಟಿ ರುದ್ರಪ್ಪ ಬಳ್ಳಾರಿ, ಗಂಗವ್ವ, ಬಿರಾದಾರ್ ಹಳಿಯಾಳ, ಶಿವಲಿಂಗಪ್ಪ ಪೂಜಾರಿ, ಕೆ.ಸತ್ಯನಾರಾಯಣ, ಮಂಜುಗುರುಲಿಂಗ, ಡಾ:ಅನುಪಮ ಹೊಸಗೆರೆ, ಚರಚೋಗಿ ಬಸವರಾಜು, ಶಿವಾನಂದ ಶೆಲ್ಲಿಕೇರಿ.

  • ಅಕಾಡೆಮಿಗಳ ಅಧ್ಯಕ್ಷ, ಸದಸ್ಯರ ನೇಮಕಾತಿ ರದ್ದು

    ಅಕಾಡೆಮಿಗಳ ಅಧ್ಯಕ್ಷ, ಸದಸ್ಯರ ನೇಮಕಾತಿ ರದ್ದು

    ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 15 ವಿವಿಧ ಅಕಾಡೆಮಿಗಳ ಅಧ್ಯಕ್ಷರ ಮತ್ತು ಸದಸ್ಯರ ನೇಮಕಾತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.

    ಇತ್ತೀಚೆಗಷ್ಟೇ ಎಲ್ಲ ಪ್ರಾಧಿಕಾರ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಆಡಳಿತ ಮಂಡಳಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 15 ವಿವಿಧ ಅಕಾಡೆಮಿಗಳ ಅಧ್ಯಕ್ಷರುಗಳ ನೇಮಕಾತಿಯನ್ನು ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಹಿಂದಿನ ಸರ್ಕಾರದ ಎಲ್ಲ ಯೋಜನೆಗಳನ್ನು ಬದಲಾಯಿಸುತ್ತಿರುವ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ಸಹ ರದ್ದುಗೊಳಿಸಿತ್ತು. ಹಿಂದಿನ ಸರ್ಕಾರದ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳಲ್ಲಿ ಕೆಲವನ್ನು ರದ್ದುಗೊಳಿಸುತ್ತಿದೆ. ಕೆಲವನ್ನು ಮಾರ್ಪಾಡು ಮಾಡಲು ಹಾಗೂ ಹೆಸರು ಬದಲಾಯಿಸಲು ಚಿಂತನೆ ನಡೆಸಿದೆ.

  • ಸರ್ಕಾರಿ ದುಡ್ಡಲ್ಲಿ ಜಿ.ಪಂ ಅಧ್ಯಕ್ಷರ ದರ್ಬಾರ್- ಕಾರಿಗೆ ಇರಲೇಬೇಕಂತೆ ಸೌಂಡ್ ಸಿಸ್ಟಮ್!

    ಸರ್ಕಾರಿ ದುಡ್ಡಲ್ಲಿ ಜಿ.ಪಂ ಅಧ್ಯಕ್ಷರ ದರ್ಬಾರ್- ಕಾರಿಗೆ ಇರಲೇಬೇಕಂತೆ ಸೌಂಡ್ ಸಿಸ್ಟಮ್!

    ಬೆಳಗಾವಿ: ರಸ್ತೆ ಕಾಮಗಾರಿಗೆ, ನೀರಿನ ವ್ಯವಸ್ಥೆ, ಚರಂಡಿ, ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಸರ್ಕಾರಿ ಕಾಮಗಾರಿಗಳಿಗೆ ಟೆಂಡರ್ ಕರೆಯೋದನ್ನ ಕೇಳಿದ್ದೀವಿ. ಆದರೆ ಬೆಳಗಾವಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಕಾರಿಗೆ ಸೌಂಡ್ ಸಿಸ್ಟಮ್ ಕೊಡಿಸುವ ಸಲುವಾಗಿ ಟೆಂಡರ್ ಕರೆದಿದ್ದಾರೆ.

    ಬೆಳಗಾವಿಯಲ್ಲಿ ಆಶಾ ಐಹೊಳೆ ಅಂಧದರ್ಬಾರ್ ನಡೆಸುತ್ತಿದ್ದಾರೆ. ಇವರು ಕಾರಿನಲ್ಲಿ ಕುಳಿತರೆ ಸಾಕು ಸೌಂಡ್ ಸಿಸ್ಟಮ್ ಆನ್ ಆಗ್ಲೇಬೇಕಂತೆ. ಒಂದು ವರ್ಷದ ಹಿಂದೆ ಹೊಸ ಕಾರನ್ನು ಸರ್ಕಾರ ಇವರಿಗೆ ನೀಡಿದೆ. ಅದರಲ್ಲಿ ಸೌಂಡ್ ಸಿಸ್ಟಮ್ ಇಲ್ಲದ್ದಕ್ಕೆ ಮೇಡಂ ಅವರು ಆರು ತಿಂಗಳ ಬಳಿಕ ಸುಮಾರು 60 ಸಾವಿರ ರೂ. ಸ್ವಂತ ಹಣ ಖರ್ಚು ಮಾಡಿ ಕಾರಿಗೆ ಸೌಂಡ್ ಸಿಸ್ಟಮ್ ಅಳವಡಿಸಿದ್ದಾರೆ. ಆದ್ರೆ ಇದೀಗ ಆ ಹಣವನ್ನ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಕೇಳುತ್ತಿದ್ದಾರೆ.

    ಅಧ್ಯಕ್ಷರು ಸಿಇಒ ಬಳಿ ಬಿಲ್ ಪಾಸ್ ಮಾಡಿಸುವಂತೆ ಕೇಳಿದಾಗ ಬಿಲ್ ಪಾಸ್ ಮಾಡುವ ಬದಲು ಸಿಇಒ ಟೆಂಡರ್ ಕರೆದಿದ್ದಾರೆ. ಅದು ಕೇವಲ 60 ಸಾವಿರ ರೂಪಾಯಿಗೆ ಟೆಂಡರ್ ಕರೆದಿದ್ದಾರೆ. ಸರ್ಕಾರಿ ನಿಯಮಗಳನುಸಾರ ಯಾವುದೇ ಕಾಮಗಾರಿ ಟೆಂಡರ್ ಕರೆಯಬೇಕೆಂದರೆ ಅದು ಒಂದು ಲಕ್ಷ ರೂಪಾಯಿ ದಾಟಿರಬೇಕು. ಆದರೆ ಅಧ್ಯಕ್ಷರ ಕಾರ್ ಮ್ಯೂಸಿಕ್ ಸಿಸ್ಟಮ್ ಸಲುವಾಗಿಯೇ ಸರ್ಕಾರಿ ನಿಯಮಗಳನ್ನ ಗಾಳಿಗೆ ತೂರಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಟೆಂಡರ್ ಕರೆದಿದ್ದಾರೆ. ಈ ಟೆಂಡರ್ ಗೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ನಾನು ಕಾರಿಗೆ ಸೌಂಡ್ ಸಿಸ್ಟಮ್ ಮೂರು ತಿಂಗಳ ಹಿಂದೆಯೇ ಹಾಕಿಸಿದ್ದು, ಅದರ ಹಣ ನೀಡಿ ಎಂದು ಕೇಳಿದ್ದೇನೆ ಎಂದು ಜಿ.ಪಂ ಅಧ್ಯಕ್ಷರು ಹೇಳುತ್ತಿದ್ದಾರೆ.

    10 ರಿಂದ 20 ಸಾವಿರ ರೂ.ಗೆ ಬರುವ ಮ್ಯೂಸಿಕ್ ಸಿಸ್ಟಮ್ ಗೆ 60 ಸಾವಿರ ಗಟ್ಟಲೆ ಖರ್ಚು ಮಾಡುವ ಅವಶ್ಯಕತೆ ಏನಿತ್ತು ಅಂತಾ ಕೇಳಿದ್ರೆ, ಚೀನಾ ಮಾಡಲ್ ಗಳಿಗೆ ಬಿಲ್ ಕೊಡುವುದಿಲ್ಲ. ಅವು ಗ್ಯಾರಂಟಿ ಕೂಡ ಇರುವುದಿಲ್ಲ. ಹೀಗಾಗಿ ಒಳ್ಳೆಯ ಕ್ವಾಲಿಟಿ ಸಿಸ್ಟಮ್ ಅಳವಡಿಸಿದ್ದೇನೆ. ಆದರೆ ಪೂರ್ತಿ ಹಣವನ್ನ ಒಂದೇ ಬಾರಿ ಕೊಡಿ ಅಂತಾನು ನಾನು ಹೇಳಿಲ್ಲ ಹಂತ ಹಂತವಾಗಿ ಕೊಟ್ಟರೆ ಸಾಕು ಎಂಬುದು ಅಧ್ಯಕ್ಷರ ಮಾತಾಗಿದೆ.

    ಅಧ್ಯಕ್ಷರ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ನಡೆಗೆ ಸದ್ಯ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಆಕ್ರೋಶ ಕೇಳಿಬರುತ್ತಿದೆ. ನಿಯಮಗಳನ್ನ ಗಾಳಿಗೆ ತೂರಿದ ಅಧಿಕಾರಿಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಜೊತೆಗೆ ಅಧ್ಯಕ್ಷರು ತಮಗೆ ಹೊಂದಿಕೆಯಾಗಿಲ್ಲವೆಂದಲ್ಲಿ ತಮ್ಮ ಸ್ವಂತ ವಾಹನದಲ್ಲಿ ಓಡಾಡಲಿ. ಈ ರೀತಿಯಾಗಿ ಸರ್ಕಾರಿ ಹಣವನ್ನ ಬೇಕಾಬಿಟ್ಟಿ ಖರ್ಚು ಮಾಡುವುದನ್ನ ಬಿಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

    ಅಧ್ಯಕ್ಷರಿಗೆ ಕಂಪರ್ಟ್ ಆಗಿಲ್ಲ ಅನ್ನುವ ಕಾರಣಕ್ಕೆ ಮ್ಯೂಸಿಕ್ ಸಿಸ್ಟಮ್ ಅಳವಡಿಸಿದ್ದು ಒಂದು ಕಡೆಯಾದರೆ, ಸರ್ಕಾರಿ ಕಾರುಗಳಲ್ಲಿ ದುಬಾರಿ ಸಿಸ್ಟಮ್ ಕೂಡಿಸುವ ಅವಶ್ಯಕತೆ ಏನಿತ್ತು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಪ್ರಕರಣದ ಕುರಿತು ಅಧಿಕಾರಿಗಳನ್ನ ಸಂಪರ್ಕಿಸಿದರೆ ಇದಕ್ಕೂ ನಮಗೂ ಎನೂ ಸಂಬಂಧ ಇಲ್ಲ ಎನ್ನುವ ನಿಟ್ಟಿನಲ್ಲಿ ವರ್ತಿಸುತ್ತಿದ್ದಾರೆ ಅಂತ ಜನಸಾಮಾನ್ಯರು ದೂರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುನಾವಣೆಯಲ್ಲಿ ನಾವು ಸೋತಿದ್ದು ಹೇಗೆ: ಕೆಪಿಸಿಸಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಆತ್ಮಾವಲೋಕನ

    ಚುನಾವಣೆಯಲ್ಲಿ ನಾವು ಸೋತಿದ್ದು ಹೇಗೆ: ಕೆಪಿಸಿಸಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಆತ್ಮಾವಲೋಕನ

    ಬೆಂಗಳೂರು: ಬಿಜೆಪಿಯವರು ಹಿಂದುತ್ವವನ್ನು ಇಟ್ಟುಕೊಂಡು ಮಾಡಿದ ಅಪಪ್ರಚಾರಕ್ಕೆ ಸರಿಯಾಗಿ ಕೌಂಟರ್ ಕೊಡಲು ಸಾಧ್ಯವಾಗದ ಕಾರಣ ಚುನಾವಣೆಯಲ್ಲಿ ನಮಗೆ ಸೋಲಾಯಿತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಮಾತನಾಡಿದ ಮಾಜಿ ಸಿಎಂ, ಬಿಜೆಪಿಯವರ ಸುಳ್ಳು ಪ್ರಚಾರವನ್ನು ಹತ್ತಿಕ್ಕುವಲ್ಲಿ ನಾವು ವಿಫಲವಾದೆವು. ಇದರಿಂದಾಗಿ ಕರಾವಳಿಯಲ್ಲಿ ಕಳೆದ ಬಾರಿ 19ರಲ್ಲಿ ನಾವು 13 ಕ್ಷೇತ್ರಗಳಲ್ಲಿ ಜಯಗಳಿಸಿದ್ದೇವು. ಆದರೆ ಈ ಬಾರಿ ಕೇವಲ 3 ಸ್ಥಾನ ಗೆಲುವು ಸಾಧಿಸಬೇಕಾಯಿತು ಎಂದು ಹೇಳಿದರು.

    ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯವರು 30 ಮತದಾರರಿಗೆ ಒಬ್ಬ ಏಜೆಂಟರ್ ಅನ್ನು ನೇಮಿಸಿದ್ದರು. ಅವರ ಕಾಯಕ ಮತದಾರರಿಗೆ ಸುಳ್ಳು ಹೇಳುವುದೇ ಆಗಿತ್ತು. ಅವರ ತಂತ್ರಕ್ಕೆ ನಾವು ಪ್ರಭಲ ಸ್ಪರ್ಧೆ ನೀಡಲಿಲ್ಲ. ಇದೇ ನಮಗೆ ಮುಳುವಾಯಿತು. 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಸಜ್ಜಾಗಬೇಕು. ಕೇಂದ್ರ ಬಿಜೆಪಿ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಕಳೆದ ನಾಲ್ಕು ವರ್ಷದಿಂದ ಬಿಜೆಪಿಯವರು ಹಿಂದುತ್ವದ ವಿಚಾರ ಇಟ್ಟುಕೊಂಡು ಜನರನ್ನು ಯಮಾರಿಸುತ್ತಿದ್ದಾರೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ಬಿಜೆಪಿ ಮತ್ತೇ ಅಧಿಕಾರಕ್ಕೆ ಬರಬಾರದು. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 20 ಸ್ಥಾನಗಳನ್ನು ನಾವು ಗೆಲ್ಲಲೇಬೇಕು ಎಂದು ಕರೆ ಕೊಟ್ಟರು.

    ಅನ್ನಭಾಗ್ಯದ ಅಕ್ಕಿ 7 ಕೆಜಿಯಿಂದ 5 ಕೆಜಿಗೆ ಇಳಿಸಲಾಗಿದೆ. ಅದನ್ನು ಮತ್ತೇ 7 ಕೆಜಿಗೆ ಹೆಚ್ಚಿಸಬೇಕು. ಪೆಟ್ರೋಲ್ ಹಾಗೂ ಡೀಸೆಲ್ ತೆರಿಗೆಯನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವೆ ಎಂದು ಈ ವೇಳೆ ತಿಳಿಸಿದರು.

    ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಯುವ ನಾಯಕರು. ಈಶ್ವರ್ ಖಂಡ್ರೆ ಅವರ ಆಯ್ಕೆಯಿಂದ ಉತ್ತರ ಕರ್ನಾಟಕ್ಕೆ ಮಹತ್ವ ಸಿಕ್ಕಿದೆ. ಹೀಗಾಗಿ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ. ಅಚ್ಚೇದಿನ್ ಆಯೇಗಾ ಮರೆಯಾಗಲಿದೆ. ಕೇಂದ್ರ ಸರ್ಕಾರ ನಾಲ್ಕು ವರ್ಷದಿಂದ ಮಾಡಿದ್ದೇನು? ರೈತರ ಅಭಿವೃದ್ಧಿಗೆ ಬಗ್ಗೆ ಕೇಂದ್ರ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ. ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದರು.

    ಸದ್ಯದಲ್ಲಿಯೇ ಆಂಧ್ರಪ್ರದೇಶ, ಮಿಜೋರಾಂ, ಛತ್ತೀಸ್‍ಘಡ್ ಗಳಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. ಈ ವೇಳೆ ಬಿಜೆಪಿಗೆ ಮತದಾರರು ಬುದ್ಧಿ ಕಲಿಸಲಿದ್ದಾರೆ. ದೇಶವನ್ನು ಒಡೆದು ಆಳುವವರಿಗೆ ಅವಕಾಶ ನೀಡಬಾರದು ಎಂದು ಅವರು ಕಿಡಿಕಾರಿದರು.

    https://youtu.be/qPQ96qS9Bs0

    ನಾಡಗೀತೆ ಹಾಡುವಾಗ ಎಡವಟ್ಟು:
    ಸಮಯ ಉಳಿಸಲು ಎಲ್ಲರೂ ವೇದಿಕೆಗೆ ಆಗಮಿಸಿದ್ದರು. ಈ ವೇಳೆ ಯಾವುದೇ ಸೂಚನೆ ನೀಡದೇ, ಕಾರ್ಯಕ್ರಮ ಆರಂಭಕ್ಕು ಮುನ್ನವೆ ಏಕಾಏಕಿ ನಾಡಗೀತೆ ಆರಂಭಿಸಲಾಯಿತು. ಇದರಿಂದಾಗಿ ಸ್ವಲ್ಪ ಸಮಯದ ನಂತರ ಒಬ್ಬೊಬ್ಬರಾಗಿ ನಾಯಕರು ಎದ್ದು ನಿಂತರು. ಅಷ್ಟೇ ಅಲ್ಲದೆ ನಾಡಗೀತೆಯ ಮಧ್ಯೆದಲ್ಲಿಯೇ ಮೈಕಿನಲ್ಲಿ ಎಲ್ಲರೂ ಎದ್ದು ನಿಲ್ಲಿ, ಎದ್ದು ನಿಲ್ಲಿ ಎಂದು ಪ್ರಕಟಣೆ ಮಾಡಲಾಯಿತು. ಆದರೆ ಕೆಲವರು ಮೊಬೈಲ್ ನಲ್ಲಿಯೇ ಮಾತನಾಡುತ್ತ ನಿಂತಿದ್ದರು.

    ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಆಗಮನಕ್ಕು ಮುನ್ನವೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯಿತು.

  • ಕೆಪಿಸಿಸಿ ಅಧ್ಯಕ್ಷರಾಗಿ 7 ವರ್ಷ ಪೂರೈಸಿದ ಸಂತಸದಲ್ಲಿ ಪರಮೇಶ್ವರ್ ಹೇಳಿದ್ದೇನು?

    ಕೆಪಿಸಿಸಿ ಅಧ್ಯಕ್ಷರಾಗಿ 7 ವರ್ಷ ಪೂರೈಸಿದ ಸಂತಸದಲ್ಲಿ ಪರಮೇಶ್ವರ್ ಹೇಳಿದ್ದೇನು?

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ 7 ವರ್ಷ ಪೂರೈಸಿದ ಪರಮೇಶ್ವರ್‍ಗೆ ಕಾಂಗ್ರೆಸ್ ಮುಖಂಡರು ಶುಭಾಶಯ ಕೋರಿದ್ದಾರೆ.

    ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪರಮೇಶ್ವರ್ ಹಾಗೂ ರಾಜ್ಯ ಕಾಂಗ್ರೆಸ್ ಪದಾಧಿಕಾರಿಗಳ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪರಮೇಶ್ವರ್, ನಾನು ಕೆಪಿಸಿಸಿ ಅಧ್ಯಕ್ಷನಾಗಿ 7 ವರ್ಷ ಪೂರೈಸಲು ಸಹಕರಿಸಿದ ಎಲ್ಲಾ ಮುಖಂಡರಿಗೂ ಧನ್ಯವಾದಗಳು. ಹಾಗೂ ದೆಹಲಿಯಿಂದ ಬಂದ ಎಲ್ಲ ಪ್ರಧಾನ ಕಾರ್ಯದರ್ಶಿಗಳು ನನಗೆ ಸಾಥ್ ನೀಡಿದ್ದಾರೆ. ನನ್ನ ನಂಬಿ ಜವಾಬ್ದಾರಿ ಕೊಟ್ಟ ಹೈಕಮಾಂಡ್‍ಗೆ ನಾನು ಋಣಿಯಾಗಿರುತ್ತೇನೆಂದು ಧನ್ಯವಾದ ತಿಳಿಸಿದರು.

    ಕಷ್ಟದಲ್ಲಿದ್ದ ಪಕ್ಷವನ್ನ 2013 ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ತಂದಿದ್ದೇವೆ. 2018 ಕ್ಕೂ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದೇ ನನ್ನ 8 ನೇ ವರ್ಷದ ಸಂಕಲ್ಪ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    2018ರ ಚುನಾವಣೆಯಲ್ಲಿ ಬಿಜೆಪಿ ರೀತಿ ನಮಗೆ ಮಿಷನ್ ಬೇಕಿಲ್ಲ. ಅಧಿಕಾರಕ್ಕೆ ಬರುವುದೇ ನಮಗೆ ಮುಖ್ಯ ಗುರಿ ಎಂದರು. 2018 ಕ್ಕೆ ಚುನಾವಣೆ ಸ್ಪರ್ಧೆ ನಿಶ್ಚಿತ ಆದರೆ ನಾನು ಎಲ್ಲಿ ನಿಲ್ಲಬೇಕು ಅನ್ನೋದನ್ನ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಪರಮೇಶ್ವರ್ ಹೇಳಿದರು.

  • ಚರಂಡಿ, ಬಚ್ಚಲ ನೀರನ್ನು ಬಕೆಟ್ ನಲ್ಲಿ ತುಂಬಿ ಹೊರಹಾಕ್ತಿದ್ದಾರೆ ಜನ!

    ಚರಂಡಿ, ಬಚ್ಚಲ ನೀರನ್ನು ಬಕೆಟ್ ನಲ್ಲಿ ತುಂಬಿ ಹೊರಹಾಕ್ತಿದ್ದಾರೆ ಜನ!

    ಗದಗ: ನಗರದ ಕುಂಬಾರೇಶ್ವರ ಕಾಲೋನಿ ನಿವಾಸಿಗಳ ಜೀವನ ಒಂದು ರೀತಿ ನರಕಮಯವಾಗಿದೆ. ತಾವು ಸ್ನಾನ ಮಾಡಿದ ಬಚ್ಚಲು ನೀರನ್ನ ನಂತರ ತಾವೇ ತುಂಬಿ ಹೊತ್ತು ಹೊರಹಾಕುತ್ತಿದ್ದಾರೆ. ಕುಂಬಾರ ಕಲೋನಿಯಲ್ಲಿ ಅನೇಕ ವರ್ಷಗಳಿಂದ ರಸ್ತೆ, ಚರಂಡಿ, ಒಳಚರಂಡಿ, ಶೌಚಾಲಯ ಇಲ್ಲದ ಕಾರಣ ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ರಸ್ತೆಗಳೆಲ್ಲಾ ಕೆಸರು ಗದ್ದೆಯಾಗಿವೆ.

     

    ಶಾಲಾ ಮಕ್ಕಳು, ವಯೋವೃದ್ಧರು, ಮಹಿಳೆಯರು ಸುಲಭವಾಗಿ ನಡೆದಾಡಲಾಗುವುದಿಲ್ಲ. ಇದು ಒಂದೆರಡು ದಿನಗಳ ಪರಸ್ಥಿತಿ ಅಲ್ಲ. ಸ್ನಾನ ಮಾಡಿದ ನಂತರ ಬಂದ ನೀರನ್ನ ಬುಟ್ಟಿ ಅಥವಾ ಬಕೆಟ್‍ನಲ್ಲಿ ತುಂಬಿ ರಸ್ತೆ ಮಧ್ಯೆ ಇಲ್ಲವೇ ಬೇರೆ ಕಡೆ ಹಾಕುವ ಪದ್ಧತಿ ಇಲ್ಲಿ ಅನೇಕ ವರ್ಷಗಳಿಂದ ನಡೆದು ಬಂದಿದೆ. ಸುಮಾರು 20 ವರ್ಷಗಳಿಂದ ಅನೇಕ ಸಮಸ್ಯೆಗಳನ್ನು ಇಲ್ಲಿಯ ಜನ ಎದುರಿಸುತ್ತಿದ್ದಾರೆ.

    ಈ ಸಮಸ್ಯೆ ಬಗ್ಗೆ ನಗರಸಭೆ ಸದಸ್ಯರು, ಅಧ್ಯಕ್ಷರು, ಅಧಿಕಾರಿಗಳ ಗಮನಕ್ಕೆ ತಂದರು ಕ್ಯಾರೆ ಅಂತಿಲ್ಲ. ಅನೇಕ ಜನ ಕಾಯಿಲೆಗೆ ತುತ್ತಾಗಿದ್ದು ಕಾಲೋನಿಯ ಜನರು ನಮ್ಮದು ನರಕದ ಜೀವನ ಅಂತ ನಗರಸಭೆ, ಜನ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.