Tag: ಅಥ್ಲೆಟಿಕ್

  • ಜಾವೆಲಿನ್‍ನಲ್ಲಿ ಪಂಜಾಬ್, ಹರಿಯಾಣ ಹಿಂದಿಕ್ಕಿ ಕರ್ನಾಟಕಕ್ಕೆ ಚಿನ್ನ ತಂದು ಕೊಟ್ಟ ಕರಿಷ್ಮಾ

    ಜಾವೆಲಿನ್‍ನಲ್ಲಿ ಪಂಜಾಬ್, ಹರಿಯಾಣ ಹಿಂದಿಕ್ಕಿ ಕರ್ನಾಟಕಕ್ಕೆ ಚಿನ್ನ ತಂದು ಕೊಟ್ಟ ಕರಿಷ್ಮಾ

    ಉಡುಪಿ: ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ಚಾಂಪಿಯನ್ ಶಿಪ್ ನಲ್ಲಿ ಉಡುಪಿ ಜಿಲ್ಲೆಯ ಕರಿಷ್ಮಾ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಪಂಜಾಬ್ ಹರಿಯಾಣವನ್ನು ಹಿಂದಿಕ್ಕಿ ಕರುನಾಡಿನ ಯುವತಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.

    Karishma

    ಬ್ರಹ್ಮಾವರ ತಾಲೂಕಿನ ಬಾರ್ಕೂರು ನಿವಾಸಿಯಾಗಿರುವ ಕರಿಷ್ಮಾ ಸನಿಲ್, ಎಲ್‍ವಿಡಿ ಕಾಲೇಜು ರಾಯಚೂರಿನಲ್ಲಿ ಬಿಎಸ್‍ಸಿ ಅಂತಿಮ ವರ್ಷ ಪದವಿ ಕಲಿಯುತ್ತಿದ್ದಾರೆ. ಸುದರ್ಶನ್ ಅನಿಲ್ ಮತ್ತು ಇಂದಿರಾ ದಂಪತಿ ಪುತ್ರಿ ಕರಿಷ್ಮಾ ಸನಿಲ್, ಬ್ರಹ್ಮಾವರ ಬೋರ್ಡ್ ಸಂಸ್ಥೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾರೆ. ದೆಹಲಿಯಲ್ಲಿ 23 ವಯೋಮಿತಿ ಒಳಗಿನ ಮೊದಲ ಚಾಂಪಿಯನ್ ಶಿಪ್ ನಡೆಯುತ್ತಿದ್ದು, ಅಂತರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಕರೀಷ್ಮಾ ಪಾಲ್ಗೊಂಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ನೀರಜ್ ಚೋಪ್ರಾ ಅವರ ಟ್ರೈನರ್ ಕಾಶಿನಾಥ್ ನಾಯಕ್ ಕರಿಷ್ಮಾಗೆ ಆನ್ ಲೈನ್ ಟ್ರೈನಿಂಗ್ ಕೊಡುತ್ತಿದ್ದಾರೆ. ಇದನ್ನೂ ಓದಿ: ಎಂಎಲ್‍ಸಿ ಸಂದೇಶ್ ನಾಗರಾಜ್ ಜೆಡಿಎಸ್‍ಗೆ ಗುಡ್ ಬೈ- ಬಿಜೆಪಿ ಸೇರಲು ಒಲವು

    ಕರಿಷ್ಮಾ ಬಾರಾಳಿ ಹೈಸ್ಕೂಲ್ ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದು, ದೆಹಲಿ ಚಾಂಪಿಯನ್ ಶಿಪ್ ನಲ್ಲಿ 46.52 ಮೀಟರ್ ದೂರಕ್ಕೆ ಈಟಿ ಎಸೆದು ಸಾಧನೆ ಮಾಡಿದ್ದಾರೆ. ಪಂಜಾಬ್ ಮತ್ತು ರಾಜಸ್ಥಾನದ ಅಥ್ಲೆಟ್ ಗಳನ್ನು ಹಿಂದಿಕ್ಕಿದ ಕರ್ನಾಟಕದ ಕರಿಷ್ಮಾ, ಮುಂದೆ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಉತ್ಸಾಹ ತೋರಿದ್ದಾರೆ. ದೇಶಕ್ಕೆ ಪದಕ ತಂದುಕೊಡುವ ನಿರೀಕ್ಷೆ ಹುಟ್ಟಿಸಿದ್ದಾರೆ. ಅಥ್ಲೆಟಿಕ್ಸ್‌ಗಾಗಿ ಸಂಪೂರ್ಣವಾಗಿ ಕರಿಷ್ಮಾ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ – ಮಾತೃ ಸಂಸ್ಥೆಗೆ ಮಾರಾಟ

    Karishma

    ದಿನಪೂರ್ತಿ ಮೈದಾನದಲ್ಲಿ ತರಬೇತಿ ಮಾಡುವ ಕರಿಷ್ಮಾ, ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸುವ ಎಲ್ಲ ನಿರೀಕ್ಷೆಗಳು ಇವೆ ಎಂದು ಶಿಕ್ಷಕ ರಾಜಾರಾಮ್ ಬಾರಾಳಿ ಹೇಳಿದ್ದಾರೆ. ಸರ್ಕಾರ- ಖಾಸಗಿ ಸಂಸ್ಥೆಗಳು ಆರ್ಥಿಕ ಸಹಾಯ ಮಾಡಿದರೆ, ಗ್ರಾಮೀಣ ಪ್ರತಿಭೆ ವಿಶ್ವಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

  • ರಾಷ್ಟ್ರೀಯ ಅಥ್ಲೆಟಿಕ್‍ನಲ್ಲೂ ಕಂಬಳದ ಓಟಗಾರ ಆನಂದ ಶೆಟ್ಟಿ ಸಾಧನೆ- 7 ಬಾರಿ ಚಾಂಪಿಯನ್

    ರಾಷ್ಟ್ರೀಯ ಅಥ್ಲೆಟಿಕ್‍ನಲ್ಲೂ ಕಂಬಳದ ಓಟಗಾರ ಆನಂದ ಶೆಟ್ಟಿ ಸಾಧನೆ- 7 ಬಾರಿ ಚಾಂಪಿಯನ್

    ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳದ ಚಿರತೆಮರಿ ಎಂದೇ ಪ್ರಸಿದ್ಧಿಯಾದ ಶ್ರೀನಿವಾಸ ಗೌಡ ಸಾಧನೆ ಬಳಿಕ ಒಂದೊಂದೇ ರೆಕಾರ್ಡ್ ಗಳು ಹೊರಬರುತ್ತಿವೆ. 1980ರಲ್ಲೇ ಕಂಬಳದ ಪ್ರಸಿದ್ಧ ಓಟಗಾರೊಬ್ಬರು ರಾಷ್ಟ್ರೀಯ ಅಥ್ಲೆಟಿಕ್‍ನಲ್ಲಿ ಭಾಗವಹಿಸಿ ಸತತ 7 ವರ್ಷಗಳ ಕಾಲ ಚಾಂಪಿಯನ್ ಆಗಿ ಹೊರಹೊಮ್ಮಿರುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

    ಕಂಬಳದ ಗದ್ದೆಯಲ್ಲಿ ಓಡಿದ ಓಟಗಾರನಿಗೆ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ಓಡುವುದು ಕಷ್ಟ ಎಂಬ ವಾದಕ್ಕೆ ಅಪವಾದ ಎಂಬಂತೆ ನಲ್ವತ್ತು ವರ್ಷಗಳ ಹಿಂದೆಯೇ ಸಾಧಿಸಿ ತೋರಿಸಿದ್ದಾರೆ. ಹಾರುವ ಬಂಟ ಎಂದೇ ಪ್ರಸಿದ್ಧಿ ಪಡೆದಿದ್ದ ದಿವಂಗತ ಆನಂದ ಶೆಟ್ಟಿ ಅವರ ರೆಕಾರ್ಡ್ ಈಗ ಬೆಳಕಿಗೆ ಬಂದಿದೆ. 80ರ ದಶಕದಲ್ಲಿ ಕಂಬಳದ ಓಟಗಾರರಾಗಿದ್ದ ಆನಂದ ಶೆಟ್ಟಿ, ರಾಷ್ಟ್ರೀಯ ಅಥ್ಲೆಟಿಕ್‍ನಲ್ಲಿ ಭಾಗವಹಿಸಿ 100 ಮತ್ತು 200 ಮೀಟರ್ ವಿಭಾಗದಲ್ಲಿ ಸತತ 7 ವರ್ಷಗಳ ಕಾಲ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

    ನೇಪಾಳದ ಕಾಠ್ಮಂಡುವಿನಲ್ಲಿ ದಕ್ಷಿಣ ಏಷ್ಯಾ ಗೇಮ್ಸ್ ನಲ್ಲಿ ಚಿನ್ನ ಸೇರಿ ಅನೇಕ ಪ್ರಶಸ್ತಿಗಳಿಗೂ ಆನಂದ ಶೆಟ್ಟಿ ಭಾಜನರಾಗಿದ್ದರು. ಬಂಟ್ವಾಳ ತಾಲೂಕಿನ ಮಾಣಿ ಮೂಲದರಾದ ಆನಂದ ಶೆಟ್ಟಿ ಕಂಬಳದ ಹೆಸರಾಂತ ಓಟಗಾರಾಗಿದ್ದರು. ಕಂಬಳದ ಗದ್ದೆಯಲ್ಲಿ ಮಿಂಚಿನ ಓಟದ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. ಅವರ ಪ್ರತಿಭೆ ಗಮನಿಸಿ ರಾಷ್ಟ್ರೀಯ ಅಥ್ಲೆಟಿಕ್‍ನಲ್ಲಿ ಭಾಗವಹಿಸಲು ಅವಕಾಶ ಸಿಕ್ಕ ಬಳಿಕ ಶಿಖರದಷ್ಟು ಸಾಧನೆ ಮಾಡಿದ್ದರು.

    ಕೆಸರು ಗದ್ದೆಯಲ್ಲಿ ಓಡಿದ್ದ ಆನಂದ ಶೆಟ್ಟಿ ಸಿಂಥೆಟಿಕ್ ಟ್ರ್ಯಾಕ್‍ನಲ್ಲೂ ಸಾಧನೆ ಮಾಡಿ ತೋರಿಸಿದ್ದರು. ಕಂಬಳದ ಓಟಗಾರರ ಸಾಮಥ್ರ್ಯದ ಬಗ್ಗೆ ಚರ್ಚೆಯಾಗುತ್ತಿರುವ ಸಂಧರ್ಭದಲ್ಲೇ ಕರಾವಳಿಯ ಹಳೇ ಹುಲಿಯ ಸಾಧನೆ ಮುನ್ನಲೆಗೆ ಬಂದಿದೆ. ಕಂಬಳದ ಗದ್ದೆಯಲ್ಲಿ ಓಡಿದವರು ಸಿಂಥೆಟಿಕ್ ಟ್ಯ್ಯಾಕ್‍ನಲ್ಲೂ ಓಡಬಹುದು ಎಂಬ ವಾದಕ್ಕೆ ಬಲ ಸಿಕ್ಕಿದೆ. ಕಂಬಳದ ಹುಸೇನ್ ಬೋಲ್ಟ್ ಶ್ರೀನಿವಾಸ ಗೌಡ, ಸಿಂಥೆಟಿಕ್ ಟ್ಯ್ಯಾಕ್‍ನಲ್ಲಿ ದೇಶವನ್ನು ಪ್ರತಿನಿಧಿಸಬೇಕೆಂಬ ದೇಶದ ಜನರ ಆಸೆಗೆ ಪುಷ್ಠಿ ಬಂದಿದೆ.