Tag: ಅತ್ತೆ-ಮಾವ

  • ನನಗಿಂತ ಅತ್ತೆ, ಮಾವನ್ನೇ ಹೆಚ್ಚು ಇಷ್ಟಡುತ್ತಾನೆ ಎಂದು ಮಗನನ್ನೇ ಕೊಂದ್ಳು

    ನನಗಿಂತ ಅತ್ತೆ, ಮಾವನ್ನೇ ಹೆಚ್ಚು ಇಷ್ಟಡುತ್ತಾನೆ ಎಂದು ಮಗನನ್ನೇ ಕೊಂದ್ಳು

    – 6 ವರ್ಷದ ಮಗನಿಗೆ ಇರಿದು ಮನೆಯಿಂದ ಕೆಳಗೆ ಹಾರಿದ ತಾಯಿ

    ಚಂಡೀಗಢ: ನನಗಿಂತ ನಮ್ಮ ಅತ್ತೆ-ಮಾವನನ್ನೇ ಜಾಸ್ತಿ ಇಷ್ಟ ಪಡುತ್ತಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ತಾಯಿಯೊಬ್ಬಳು ತನ್ನ ಮಗನನ್ನೇ ಇರಿದು ಕೊಲೆ ಮಾಡಿರುವ ಘಟನೆ ಪಂಜಾಬ್‍ನ ಜಲಂಧರ್ ನಗರದಲ್ಲಿ ನಡೆದಿದೆ.

    ಮಗನನ್ನೇ ಕೊಂದ ತಾಯಿಯನ್ನು 30 ವರ್ಷದ ಕುಲ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ. ಈಕೆ ತನ್ನ ಆರು ವರ್ಷದ ಮಗು ಅರ್ಷ್‍ಪ್ರೀತ್‍ನನ್ನು ಅಡುಗೆ ಮನೆಯ ಚಾಕುವಿನಿಂದ ಎರಡು ಬಾರಿ ಇರಿದು ಕೊಲೆ ಮಾಡಿದ್ದಾಳೆ. ನಂತರ ಮನೆಯ ಮೇಲಿಂದ ಹಾರಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    ಕೌರ್ ಪತಿ ಇಟಲಿಯಲ್ಲಿ ಕೆಲಸ ಮಾಡುತ್ತಿದ್ದು, ಆಕೆ ತನ್ನ ಅತ್ತೆ-ಮಾವ ಮತ್ತು ಮಗುವಿನೊಂದಿಗೆ ಜಲಂಧರ್ ನಗರದಲ್ಲಿ ವಾಸವಾಗಿದ್ದಳು. ಈ ವೇಳೆ ಅತ್ತೆ-ಮಾವನನ್ನು ಕಂಡರೆ ಕೌರ್ ಗೆ ಆಗುತ್ತಿರಲ್ಲಿ. ಆದರೆ ತಾತ-ಅಜ್ಜಿಯನ್ನು ಬಹಳ ಇಷ್ಟ ಪಡುತ್ತಿದ್ದ ಅರ್ಷ್‍ಪ್ರೀತ್ ಬಹಳ ಸಮಯ ತಾತ-ಅಜ್ಜಿಯ ಜೊತೆಯಲ್ಲೇ ಇರುತ್ತಿದ್ದ. ಇದನ್ನು ಕಂಡ ಕೌರ್ ನನ್ನ ಮಗನನ್ನು ಇವರು ನನ್ನಿಂದ ದೂರು ಮಾಡುತ್ತಿದ್ದಾರೆ ಎಂದು ಜಗಳವಾಡುತ್ತಿದ್ದಳು.

    ಕಳೆದ ಸೋಮವಾರ ಮನೆಯಲ್ಲಿ ಕುಳಿತು ಎಲ್ಲರೂ ಊಟ ಮಾಡುತ್ತಿದ್ದರು. ಈ ವೇಳೆ ಅರ್ಷ್‍ಪ್ರೀತ್ ಊಟ ಮುಗಿದ ನಂತರ ತಾತ-ಅಜ್ಜಿಯ ಬಳಿ ಹೋಗಿದ್ದಾನೆ. ಇದರಿಂದ ಕೋಪಗೊಂಡ ಕೌರ್ ಅವನನ್ನು ಎಳೆದುಕೊಂಡು ಆಕೆಯ ರೂಮಿಗೆ ಹೋಗಿದ್ದಾಳೆ. ಅಲ್ಲಿ ಅಡುಗೆ ಮನೆಯ ಚಾಕುವಿನಿಂದ ಅರ್ಷ್‍ಪ್ರೀತ್‍ಗೆ ಎರಡು ಬಾರಿ ಚುಚ್ಚಿದ್ದಾರೆ. ಈ ವೇಳೆ ಮನೆಯಲ್ಲಿ ಇದ್ದ ತಾತ-ಅಜ್ಜಿ ರೂಮಿಗೆ ಹೋಗಿದ್ದಾರೆ.

    ರೂಮಿಗೆ ಅತ್ತೆ-ಮಾವ ಬಂದ ತಕ್ಷಣ ಕೌರ್ ಮನೆಯ ಕಿಟಿಕಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾಳೆ. ಆದರೆ ಅವಳು ಪಾರಾಗಿದ್ದಾಳೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದಾಳೆ. ಆದರೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅರ್ಷ್‍ಪ್ರೀತ್ ಮಾತ್ರ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದ್ದಾನೆ. ಈಗ ಕೌರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

  • ವೃದ್ಧ ಅತ್ತೆ-ಮಾವನ ಕತ್ತು ಹಿಸುಕಿ, ಮುಖವನ್ನು ಚಾಕುವಿನಿಂದ ಕಟ್ ಮಾಡಿದ ಸೊಸೆ

    ವೃದ್ಧ ಅತ್ತೆ-ಮಾವನ ಕತ್ತು ಹಿಸುಕಿ, ಮುಖವನ್ನು ಚಾಕುವಿನಿಂದ ಕಟ್ ಮಾಡಿದ ಸೊಸೆ

    – ಮಗನೂ ಭಾಗಿಯಾಗಿರುವ ಶಂಕೆ

    ನವದೆಹಲಿ: ಲಾಕ್‍ಡೌನ್ ವೇಳೆ ಮನೆಯಲ್ಲಿ ಇದ್ದ ಅತ್ತೆ-ಮಾವನನ್ನು ಸೊಸೆಯೋರ್ವಳು ಕತ್ತು ಹಿಸುಕಿ ಮುಖವನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿರುವ ಘಟನೆ ಪಶ್ಚಿಮ ದೆಹಲಿಯ ಚಾವ್ಲಾ ಪ್ರದೇಶದಲ್ಲಿ ನಡೆದಿದೆ.

    ಕೊಲೆಯಾದ ವೃದ್ಧ ಅತ್ತೆ-ಮಾವನನ್ನು ರಾಜ್ ಸಿಂಗ್ (61), ಓಂವತಿ (58) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಸೊಸೆಯನ್ನು ಕವಿತಾ ಎಂದು ಗುರುತಿಸಲಾಗಿದೆ. ಇದರಲ್ಲಿ ಕವಿತಾ ಗಂಡ ಸತೀಶ್ ಸಿಂಗ್ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆ ನಡೆದಾಗ ಕವಿತಾ, ಸತೀಶ್ ಮತ್ತು ಅವರ 6 ವರ್ಷ ಹಾಗೂ 8 ವರ್ಷದ ಇಬ್ಬರು ಮಕ್ಕಳು ಮನೆಯಲ್ಲೇ ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ನಮ್ಮ ಪೊಲೀಸ್ ಕಂಟ್ರೋಲ್ ರೂಮ್‍ಗೆ ಕೊಲೆಯ ಬಗ್ಗೆ ಇಂದು ಬೆಳಗ್ಗೆ 11 ಗಂಟೆಗೆ ಕರೆ ಬಂತು. ಆಗ ತಕ್ಷಣ ನಾವು ಸ್ಥಳಕ್ಕೆ ಹೋದೆವು. ಈ ವೇಳೆ ಮನೆಯ ಬೆಡ್ ರೂಮ್ ಒಳಗೆ ವೃದ್ಧ ದಂಪತಿಯ ಮೃತದೇಹಗಳು ಪತ್ತೆಯಾದವು. ಜೊತೆಗೆ ಮೃತದೇಹಗಳ ಮುಖವನ್ನು ಚಾಕುವಿನಿಂದ ಕಟ್ ಮಾಡಲಾಗಿತ್ತು ಎಂದು ಹೇಳಿದ್ದಾರೆ.

    ಪೊಲೀಸರ ಪ್ರಾಥಮಿಕ ತನಿಖೆಯ ನಂತರ ಆಸ್ತಿ ವಿವಾದದ ಕಾರಣದಿಂದ ಈ ಕೊಲೆಗಳು ನಡೆದಿದೆ ಎನ್ನಲಾಗಿದೆ. ಆದರೆ ಈ ಕೊಲೆಯಲ್ಲಿ ಮೃತ ದಂಪತಿಯ ಮಗನ ಪಾತ್ರ ಇದೆ ಎಂಬುದರ ಬಗ್ಗೆ ಸ್ಪಷ್ಟೀಕರಣ ಸಿಕ್ಕಿಲ್ಲ. ಆದರೆ ಕೊಲೆ ನಡೆದಾಗ ಆತನೂ ಮನೆಯಲ್ಲೇ ಇದ್ದ ಕಾರಣ ಅವರ ಮೇಲೆ ಅನುಮಾನ ಬಂದಿದೆ. ಕೊಲೆಯ ನಂತರ ಕುಟುಂಬ ನಾಪತ್ತೆಯಾಗಿದ್ದು, ಈವರೆಗೂ ಯಾರನ್ನೂ ಅರೆಸ್ಟ್ ಮಾಡಿಲ್ಲ. ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

  • ಕಾಲಿಗೆ ಸರಪಳಿ ಕಟ್ಟಿ ಮಹಿಳೆ ಬಂಧನ- ಸಂಬಂಧಿಕರಿಂದ್ಲೇ ರೇಪ್

    ಕಾಲಿಗೆ ಸರಪಳಿ ಕಟ್ಟಿ ಮಹಿಳೆ ಬಂಧನ- ಸಂಬಂಧಿಕರಿಂದ್ಲೇ ರೇಪ್

    ಜೈಪುರ್: ಅತ್ತೆ-ಮಾವ ಸರಪಳಿಯಿಂದ ಕಟ್ಟಿಹಾಕಿದ್ದ ಮಹಿಳೆಯ ಮೇಲೆ ಸಂಬಂಧಿಕರೇ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ರಾಜಸ್ಥಾನದ ಪ್ರತಾಪ್‍ಗಢ್‍ನಲ್ಲಿ ನಡೆದಿದೆ.

    ಸಂತ್ರಸ್ತೆಯನ್ನು ಪ್ರತಾಪ್‍ಗಢ್ ಜಿಲ್ಲಾಧಿಕಾರಿ ರಕ್ಷಿಸಿದ್ದಾರೆ. ಮಹಿಳೆಯ ಕಾಲಿಗೆ ಕಟ್ಟಲಾಗಿದ್ದ ಸರಪಳಿಯನ್ನು ಬಿಚ್ಚಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿಯಾಗಿದೆ.

    ಸಂತ್ರಸ್ತೆಯು ಪ್ರತಾಪ್‍ಗಢ್ ಜಿಲ್ಲೆಯ ಪೀಪಲ್ ಖುಂಟ್ ಗ್ರಾಮದ ನಿವಾಸಿ. ಆಕೆಗೆ ಐವರು ಮಕ್ಕಳಿದ್ದು, ಅತ್ತೆ-ಮಾವ ಹಾಗೂ ಪತಿಯ ಜೊತೆಗೆ ವಾಸವಾಗಿದ್ದಳು. ಆದರೆ ಪತಿ ಮದ್ಯ ವ್ಯಸನಿಯಾಗಿದ್ದು, ನಿತ್ಯವೂ ಕುಡಿದು ಬಂದು ಹೊಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಅತ್ತೆ-ಮಾವನ ಸಂಬಂಧಿಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮನೆಯಿಂದ ತಪ್ಪಿಸಿಕೊಂಡು ಹೋಗಿದ್ದ ನನ್ನನ್ನು ಹಿಡಿದುಕೊಂಡು ಬಂದು ಸರಪಳಿಯಿಂದ ಕಟ್ಟಿ ಹಾಕಿದ್ದಾರೆ ಎಂದು ಮಹಿಳೆ ದೂರಿದ್ದಾಳೆ. ಆಕೆಯ ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪ್ರತಾಪ್‍ಗಢ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

    ಈ ಸಂಬಂಧ ಪ್ರತಾಪ್‍ಗಢ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಆರಂಭಿಸಿರುವ ಪೊಲೀಸರು ಇನ್ನು ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ.