Tag: ಅಡಲ್ಟ್

  • ಅಡಲ್ಟ್ ಸಿನಿಮಾ ನಟನೊಂದಿಗೆ ಮತ್ತೆ ಕಾಣಿಸಿಕೊಂಡ ರಣವೀರ್ ಸಿಂಗ್

    ಅಡಲ್ಟ್ ಸಿನಿಮಾ ನಟನೊಂದಿಗೆ ಮತ್ತೆ ಕಾಣಿಸಿಕೊಂಡ ರಣವೀರ್ ಸಿಂಗ್

    ಖ್ಯಾತ ಅಡಲ್ಟ್ ಫಿಲ್ಮ್ ನಟ ಜಾನಿ ಸಿನ್ಸ್ (Johnny Sins) ಜೊತೆ ಮತ್ತೆ ಕಾಣಿಸಿಕೊಂಡಿದ್ದಾರೆ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh). ಈ ಹಿಂದೆ ಲೈಂಗಿಕ ಆರೋಗ್ಯದ ಕುರಿತಾದ ಜಾಹೀರಾತಿನಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದರು. ಹೆಂಡತಿಯ ಲೈಂಗಿಕ ತೃಪ್ತಿ ಪಡಿಸುವಂತಹ ವಸ್ತುವಿನ ಜಾಹೀರಾತು ಅದಾಗಿತ್ತು.

    ಈಗ ಮತ್ತೆ ಅದೇ ಜೋಡಿ, ಅದೇ ಕಂಪನಿಯ ಉತ್ಪನ್ನಕ್ಕೆ ರೂಪದರ್ಶಿಗಳಾಗಿದ್ದಾರೆ. ಶೀ‍ಘ್ರ ಸ್ಖಲನಕ್ಕೆ ಸಂಬಂಧಿಸಿದ ಜಾಹೀರಾತು ಅದಾಗಿದ್ದು, ಫನ್ನಿಯಾಗಿ ಅದು ಮೂಡಿ ಬಂದಿದೆ. ಆ ಉತ್ಪನ್ನವನ್ನು ಬಳಸಿಕೊಂಡು ಜಾನಿ ಸಿನ್ಸ್ ಶೀಘ್ರ ಸ್ಖಲನದಿಂದ ಪಾರಾಗಿದ್ದಾರೆ. ಅವರನ್ನು ಕಂಡ ರಣವೀರ್, ಇವರು ನಮ್ಮ ಸಂತೃಪ್ತ ಗ್ರಾಹಕ ಎಂದು ಪರಿಚಯಿಸುತ್ತಾರೆ. ಒಂದು ರೀತಿಯಲ್ಲಿ ಜಾಹೀರಾತು ಫನ್ನಿಯಾಗಿದೆ.

     

    ಒಂದು ಕಡೆ ಜಾನಿ ಅಡಲ್ಟ್ ಚಿತ್ರಗಳಲ್ಲಿ ಮುಳುಗಿ ಹೋಗಿದ್ದಾರೆ. ಮತ್ತೊಂದು ಕಡೆ ರಣವೀರ್ ಸಿಂಗ ಬೆತ್ತಲೆ ಫೊಟೋಶೂಟ್ ಮಾಡಿಸಿಕೊಂಡು ಸಖತ್ ಸದ್ದು ಮಾಡಿದ್ದರು. ಈ ಕಾರಣದಿಂದಾಗಿಯೇ ಅವರು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಬೇಕಾಗಿತ್ತು. ಇದೀಗ ಬೇರೆ ಮಾರ್ಗದ ಮೂಲಕ ಲೈಂಗಿಕ ಅರಿವನ್ನು ಮೂಡಿಸುತ್ತಿದ್ದಾರೆ.

  • ಅಡಲ್ಟ್ ಕಂಟೆಂಟ್ ವಿರುದ್ಧ ಗರಂ ಆದ ಸಲ್ಮಾನ್ ಖಾನ್

    ಅಡಲ್ಟ್ ಕಂಟೆಂಟ್ ವಿರುದ್ಧ ಗರಂ ಆದ ಸಲ್ಮಾನ್ ಖಾನ್

    ದೇ ಮೊದಲ ಬಾರಿಗೆ ಅಚ್ಚರಿಯ ಮಾತುಗಳನ್ನೂ ಆಡಿದ್ದಾರೆ ಬಾಲಿವುಡ್ (Bollywood) ನಟ ಸಲ್ಮಾನ್ ಖಾನ್ (Salman Khan). ಚಿತ್ರೋದ್ಯಮದ ಅನೇಕರಿಗೆ ವರದಾನವಾಗಿರುವ ಓಟಿಟಿ ಬಗ್ಗೆ ಅವರು ಗರಂ ಆಗಿದ್ದಾರೆ. ಈ ವೇದಿಕೆಯಲ್ಲಿ ಬರುವ ಸಿನಿಮಾ, ಸಾಕ್ಷ್ಯಚಿತ್ರ, ವೆಬ್ ಸಿರೀಸ್ ಗಳಿಗೆ ಸೆನ್ಸಾರ್ ಮಾಡಿಸಬೇಕು ಎಂದು ಅವರು ಮಾತನಾಡಿದ್ದಾರೆ. ಅದರಲ್ಲೂ ಅಡಲ್ಟ್ (Adult) ಕಂಟೆಂಟ್ ನಿಂದ ತುಂಬಿರುವ ಓಟಿಟಿಗಳನ್ನು ಕೂಡಲೇ ಭಾರತದಲ್ಲಿ ನಿಲ್ಲಿಸಬೇಕು ಎಂದು ಸಲಹೆ ಮಾಡಿದ್ದಾರೆ.

    ಕಿಸ್ಸಿಂಗ್ (Kissing), ಎಕ್ಸ್ ಪೋಸ್, ವಯಸ್ಕರ ಚಿತ್ರಗಳು, ನೀಲಿ ಚಿತ್ರಗಳು, ಅತಿಯಾದ ರೊಮ್ಯಾನ್ಸ್ ಹೊಂದಿದ ದೃಶ್ಯಗಳು ಓಟಿಟಿಯಲ್ಲಿ ಹೇರಳವಾಗಿ ಸಿಗುತ್ತಿವೆ. ನಮ್ಮ ಸುಸಂಸ್ಕೃತ ರಾಷ್ಟ್ರ, ನಾವು ಭಾರತದಲ್ಲಿ ಬದುಕುತ್ತಿದ್ದೇವೆ ಎನ್ನುವುದನ್ನು ಮರೆತು ಅಂತಹ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಅದು ಆಗಬಾರದು. ಕೂಡಲೇ ಅಂತಹ ಕಂಟೆಂಟ್ ಅನ್ನು ತಗೆದು ಹಾಕಬೇಕು ಎಂದಿದ್ದಾರೆ ಸಲ್ಲು. ಇದನ್ನೂ ಓದಿ: ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಹಿಂದೆ ಕಾರು ಡ್ರೈವರ್ ಇರುವ ಶಂಕೆ

    ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಡಿಜಿಟಲ್ ಯುಗದ ಜೊತೆಗೆ ಯುವ ನಟರ ಬಗ್ಗೆಯೂ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಚಿತ್ರೋದ್ಯಮಕ್ಕೆ ಯುವ ಪ್ರತಿಭೆಗಳು ಬರುತ್ತಿವೆ. ಅವರೂ ಕಷ್ಟ ಪಡುತ್ತಿದ್ದಾರೆ. ಆದರೂ, ನಾವು ಐದಾರು ಜನ ಅವರಿಗೆ ಸ್ಪರ್ಧೆ  ಕೊಡುತ್ತಲೇ ಇರುತ್ತೇವೆ. ಈ ಹೊತ್ತಿನ ನಟರು ಒಂದೋ ಎರಡೋ ಸಿನಿಮಾ ಹಿಟ್ ಆದ ತಕ್ಷಣವೇ ಸಂಭಾವನೆ ಜಾಸ್ತಿ ಮಾಡಿಕೊಳ್ಳುತ್ತಾರೆ. ನಮ್ಮದು ಹಾಗಿರಲಿಲ್ಲ’ ಎಂದಿದ್ದಾರೆ.

    salman

    ಸಿನಿಮಾದಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವ ವಿವೇಕವು ಎಲ್ಲರಿಗೂ ಇರಬೇಕು. ಸಮಾಜವನ್ನು ಹಾಳು ಮಾಡುವಂತಹ, ಜನರಿಗೆ ಮೋಸವಾಗದಂತಹ ವಿಷಯಗಳನ್ನು ಎತ್ತಿಕೊಂಡು ಸಿನಿಮಾ ಮಾಡಬೇಕಿದೆ. ಅದರಲ್ಲೂ ದೇಶಭಕ್ತಿ ಸಾರುವಂತಹ, ಸಮಾಜಗಳನ್ನು ಒಂದಾಗಿಸುವಂತಹ ಕಥೆಗಳು ಹೆಚ್ಚಾಗಿ ಬರಲಿ ಎಂದಿದ್ದಾರೆ ಸಲ್ಮಾನ್ ಖಾನ್.