Tag: ಅಟೋ

  • ಬೆಂಗಳೂರು ಹಿಟ್‌ ಆಂಡ್‌ ರನ್‌ ಕೇಸ್‌ – ಪರಾರಿಯಾಗಿದ್ದ ಟೆಕ್ಕಿ ಬಂಧನ

    ಬೆಂಗಳೂರು ಹಿಟ್‌ ಆಂಡ್‌ ರನ್‌ ಕೇಸ್‌ – ಪರಾರಿಯಾಗಿದ್ದ ಟೆಕ್ಕಿ ಬಂಧನ

    ಬೆಂಗಳೂರು: ಮೇಡಹಳ್ಳಿ ಫ್ಲೈ ಓವರ್ ಬಳಿ ಹಿಟ್ ಅಂಡ್ ರನ್ (Hit and Run) ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಟೆಕ್ಕಿಯನ್ನು (Techie) ಬಂಧಿಸಲಾಗಿದೆ.

    ಹೊಸಕೋಟೆಯ ಸಂತೋಷ್ ಬಂಧಿತ ಆರೋಪಿ. ಆರೋಪಿ ವೈಟ್‌ಫೀಲ್ಡ್‌ನಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆತನ ಮೊಬೈಲ್‌ ನಂಬರ್‌ ಆಧಾರದ ಹಿನ್ನೆಲೆಯಲ್ಲಿ ಕೆ.ಆರ್.ಪುರಂ ಸಂಚಾರಿ ಪೊಲೀಸರು (KR Puram Traffic Police)  ಬಂಧಿಸಿದ್ದಾರೆ. ಇದನ್ನೂ ಓದಿ: 6ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

    ಏನಿದು ಪ್ರಕರಣ?
    ಶುಕ್ರವಾರ ರಾತ್ರಿ ವೇಗವಾಗಿ ಬಂದ ಕಾರೊಂದು ಎದುರು ಬಂದ ಆಟೋರಿಕ್ಷಾಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಅಪಘಾತದ ಭೀಕರತೆ ಎಷ್ಟಿತ್ತು ಅಂದರೆ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಜಖಂ ಆಗಿದ್ದು ಆಟೋ ರಿಕ್ಷಾದಲ್ಲಿದ್ದ ಹಸೀನಾ ಹಾಗೂ ಸುಮಯ್ಯ ಸ್ಥಳದಲ್ಲಿ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದರು.

    ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕೆ.ಆರ್.ಪುರಂ ಸಂಚಾರಿ ಪೊಲೀಸರು ಮೃತರನ್ನು ಹಾಗೂ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಾಳು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಹಿಟ್ ಮಾಡಿ ಇಬ್ಬರನ್ನ ಬಲಿ ಪಡೆದು ಪರಾರಿಯಾಗಿದ್ದ ಕಾರನ್ನು ಪತ್ತೆ ಮಾಡಲು ಆರಂಭಿಸಿದ್ದರು.

    ಕಾರು ಹೊಸಕೋಟೆ ಮಾರ್ಗವಾಗಿ ತೆರಳಿದ್ದು, ಟೋಲ್ ಬಳಿ‌ ಸಿಸಿಟಿವಿ ಚೆಕ್ ಮಾಡಿದ್ದರು. ಆ ವೇಳೆ ಮುಂದುಗಡೆ ಹೆಡ್‌ಲೈಟ್‌ ಜಾಗದಲ್ಲಿ ಸ್ವಲ್ಪ ಜಖಂಗೊಂಡಿದ್ದ ಆಲ್ಟೋ ಕಾರು ಪಾಸ್‌ ಆಗಿತ್ತು. ಈ ಕಾರಿನ ಚಾಲಕನೇ ಕೃತ್ಯ ಎಸಗಿದ್ದು ಎನ್ನುವುದು ದೃಢಪಟ್ಟಿತ್ತು.

    ಟೋಲ್ ಫೀಸ್ ಕಟ್ಟಿದ್ದ ವೇಳೆ ಚಾಲಕನ ಮೊಬೈಲ್ ನಂಬರ್ ಸಿಕ್ಕಿದೆ. ನಂಬರ್ ಆಧಾರದ ಮೇಲೆ ತನಿಖೆ ಮುಂದುವರೆಸಿದ ಪೊಲೀಸರು ಹೊಸಕೋಟೆಯ ಮನೆಯಲ್ಲೇ ಇದ್ದ ಕಾರು ಚಾಲಕನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅನಗತ್ಯ ಓಡಾಟ – ಆಟೋ, ಬೈಕ್ ಸೇರಿ 20 ಕ್ಕೂ ಹೆಚ್ಚು ವಾಹನ ಪೊಲೀಸ್ ವಶಕ್ಕೆ

    ಅನಗತ್ಯ ಓಡಾಟ – ಆಟೋ, ಬೈಕ್ ಸೇರಿ 20 ಕ್ಕೂ ಹೆಚ್ಚು ವಾಹನ ಪೊಲೀಸ್ ವಶಕ್ಕೆ

    ಕೋಲಾರ: ಮಹಾಮಾರಿ ಕೊರೊನಾ 2ನೇ ಅಲೆ ತಡೆಗಟ್ಟುವ ಹಿನ್ನೆಲೆ ರಾಜ್ಯ ಸರ್ಕಾರ ಹೊರಡಿಸಿರುವ ಜನತಾ ಕರ್ಫ್ಯೂಗೆ ಕೋಲಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ 10 ಗಂಟೆ ಬಳಿಕ ಅನಗತ್ಯವಾಗಿ ಸಂಚಾರ ಮಾಡುತ್ತಿದ್ದ ಆಟೋ ಮತ್ತು ಬೈಕ್‍ಗಳನ್ನು ವಶಕ್ಕೆ ಪಡೆಯುವ ಮೂಲಕ ಸವಾರರಿಗೆ ಪೊಲೀಸರು ಚುರುಕು ಮುಟ್ಟಿಸಿದ್ದಾರೆ.

    11 ಗಂಟೆಯಾದರೂ ಕೂಡ ರಸ್ತೆಯಲ್ಲಿ ಬೇಕಾ ಬಿಟ್ಟಿ ಓಡಾಟ ಮಾಡಿದ 20 ಕ್ಕೂ ಹೆಚ್ಚು ಬೈಕ್, ಆಟೋ ಮತ್ತು ಕಾರುಗಳನ್ನು ವಶಕ್ಕೆ ಪಡೆದಿರುವ ಕೋಲಾರ ನಗರದ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಪ್ರತಿ ವಾಹನವನ್ನು ತಪಾಸಣೆ ಮಾಡಿ ಕಳುಹಿಸುತ್ತಿದ್ದ ಪೊಲೀಸರು ಅನಗತ್ಯವಾಗಿ ಓಡಾಟ ಮಾಡುವ ವಾಹನ ಸವಾರರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

    ಇದು ಮಾತ್ರವಲ್ಲದೆ ಕೋಲಾರ ಪೊಲೀಸರಿಂದ ಕಟ್ಟು ನಿಟ್ಟಿನ ಜನತಾ ಕರ್ಫ್ಯೂ ಜಾರಿ ಮಾಡಲಾಗುತ್ತಿದ್ದು, ಈ ಮಧ್ಯೆ ಕೋಲಾರದ ಕೆಜಿಎಫ್‍ನಲ್ಲಿ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಕೆಜಿಎಫ್ ಪೊಲೀಸರು, ಅನಗತ್ಯವಾಗಿ ಸಂಚಾರ ಮಾಡುತ್ತಿದ್ದ 10 ಕ್ಕೂ ಹೆಚ್ಚು ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ. 11 ಗಂಟೆಯಾದ್ರು ಓಡಾಟ, ಪ್ರಯಾಣಿಕರನ್ನು ಕರೆ ತರುತ್ತಿದ್ದ ಆಟೋಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ದಂಡ ಕಟ್ಟಿ ತೆರಳುವಂತೆ ಅಟೋ ಚಾಲಕರಿಗೆ ಸೂಚಿಸಿದ್ದಾರೆ.

  • ಈಗ ಕೊರೊನಾದಿಂದ ನಷ್ಟವಾದ್ರೂ ಮುಂದೆ ದೇಶದ ಅಟೋಮೊಬೈಲ್ ಕಂಪನಿಗಳಿಗೆ ಲಾಭ

    ಈಗ ಕೊರೊನಾದಿಂದ ನಷ್ಟವಾದ್ರೂ ಮುಂದೆ ದೇಶದ ಅಟೋಮೊಬೈಲ್ ಕಂಪನಿಗಳಿಗೆ ಲಾಭ

    ನವದೆಹಲಿ: ಕೋವಿಡ್ 19 ನಿಂದಾಗಿ ವಿಶ್ವಾದ್ಯಂತ ಸಮಸ್ಯೆಗಳು ಸೃಷ್ಟಿಯಾಗಿವೆ. ಅಟೋಮೊಬೈಲ್ ಕಂಪನಿಗಳಿಗೆ ಕಾರುಗಳು ಮಾರಾಟವಾಗದ ಕಾರಣ ಬಹಳ ನಷ್ಟ ಅನುಭವಿಸಿದೆ. ಆದರೆ ಈಗ ಅಟೋ ವಲಯ ನಷ್ಟ ಅನುಭವಿಸಿದ್ರೂ ಮುಂದಿನ ದಿನಗಳಲ್ಲಿ ಸಿಹಿ ಸುದ್ದಿ ಸಿಗುವ ಲಕ್ಷಣ ಕಾಣಿಸಲಾರಂಭಿಸಿದೆ.

    ಹೌದು. ಕೋವಿಡ್ 19 ತಡೆಗಟ್ಟಲು ಸದ್ಯಕ್ಕೆ ಸಾಮಾಜಿಕ ಅಂತರವೇ ‘ಔಷಧಿ’ ಯಾಗಿದೆ. ಲಾಕ್‍ಡೌನ್ ತೆರವಾಗಿ ಸಾರ್ವಜನಿಕ ಸಾರಿಗೆ ಆರಂಭಗೊಂಡರೂ ಜನ ಈ ಸೇವೆ ಬಳಸಲು ಹಿಂದೇಟು ಹಾಕುತ್ತಿದ್ದು ಮುಂದಿನ ದಿನಗಳಲ್ಲಿ ಸ್ವಂತ ವಾಹನ ಖರೀದಿಸಲು ಮುಂದಾಗುತ್ತಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.

    ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸಿದರೆ ರಿಸ್ಕ್ ಜಾಸ್ತಿ. ಹೀಗಾಗಿ ಪ್ರಯಾಣಕ್ಕೆ ವಾಹನವೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಭಾರತದಲ್ಲಿ ಕಾರುಗಳ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ.

    ಮಾರಾಟವಾಗುವ ಕಾರುಗಳ ಪೈಕಿ ಕಡಿಮೆ ಬೆಲೆಯ ಕಾರುಗಳಿಗೆ ಹೆಚ್ಚಿನ ಬೇಡಿಕೆ ಸಿಗುವ ನಿರೀಕ್ಷೆಯಿದೆ ಎಂದು ಮಾರುತಿ ಸುಜುಕಿ ಇಂಡಿಯಾ(ಎಂಎಸ್‍ಐ) ಹೇಳಿದೆ.

    ಮಾರುತಿ ಸುಜುಕಿ ಕಂಪನಿಯ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವತ್ಸವ್ ಪ್ರತಿಕ್ರಿಯಿಸಿ, ನಾವು ನಡೆಸಿದ ಗ್ರಾಹಕರ ಸಮೀಕ್ಷೆಯಲ್ಲಿ ಜನರು ಸಾರ್ವಜನಿಕ ಸಾರಿಗೆಗಿಂತ ಹೆಚ್ಚು ವೈಯಕ್ತಿಕ ವಾಹನಗಳತ್ತ ಒಲವು ತೋರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಈ ಪೈಕಿ ಮೊದಲ ಬಾರಿಗೆ ಖರೀದಿ ಮಾಡುವ ಗ್ರಾಹಕರು ಸಣ್ಣ ಕಾರುಗಳತ್ತ ಒಲವು ತೋರಿಸಿದ್ದಾರೆ. 1,800 ಡೀಲರ್ ಶಿಪ್ ಗಳಿಂದಾಗಿ ನಮಗೆ ಈ ಟ್ರೆಂಡ್ ಗೊತ್ತಾಗಿದೆ ಎಂದು ಅವರು ತಿಳಿಸಿದ್ದಾರೆ.

  • ಮಂಡ್ಯ: ಹಳ್ಳಕ್ಕೆ ಉರುಳಿ ಬಿದ್ದ ಆಟೋ- 20 ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಗಾಯ

    ಮಂಡ್ಯ: ಹಳ್ಳಕ್ಕೆ ಉರುಳಿ ಬಿದ್ದ ಆಟೋ- 20 ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಗಾಯ

    ಮಂಡ್ಯ: ಶಾಲಾ ಮಕ್ಕಳನ್ನ ಕರೆದುಕೊಂಡು ಹೋಗುತ್ತಿದ್ದ ಆಟೋ ಪಲ್ಟಿಯಾಗಿ 20 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ಮಂಡ್ಯದ ಕೆಆರ್ ಪೇಟೆಯಲ್ಲಿ ನಡೆದಿದೆ.

    ತಾಲೂಕಿನ ಚೌಡೇನಹಳ್ಳಿ ಗ್ರಾಮದ ಬಳಿ ಆಟೋ ಉರುಳಿ ಬಿದ್ದಿದೆ. ಇಂದು ಪಟ್ಟಣದ ಸರ್ಕಾರಿ ಶತಮಾನದ ಶಾಲೆಗೆ ಮಕ್ಕಳನ್ನ ಆಟೋದಲ್ಲಿ ಕರೆದುಕೊಂಡು ಬರಲಾಗುತ್ತಿತ್ತು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಹಾಕಿದ್ದ ಹುಲ್ಲು ಆಟೋದ ಹಿಂಭಾಗದ ಚಕ್ರಕ್ಕೆ ಸಿಲುಕಿಕೊಂಡಿದೆ. ಪರಿಣಾಮ ನಿಯಂತ್ರಣ ತಪ್ಪಿದ ಆಟೋ ಹಳ್ಳಕ್ಕೆ ಉರಳಿ ಬಿದ್ದಿದೆ. ಇದ್ರಿಂದ ಆಟೋದಲ್ಲಿದ್ದ 20 ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿದೆ.

    ಆಟೋ ಉರುಳಿಬಿದ್ದ ತಕ್ಷಣ ಭಯದಿಂದ ಮಕ್ಕಳು ಕಿರುಚಿಕೊಂಡಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಗಾಯಗೊಂಡ ಮಕ್ಕಳನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಮಕ್ಕಳಿಗೆ ಕೆಆರ್ ಪೇಟೆ ಪಟ್ಟಣ್ಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.