Tag: ಅಜೇಯ್ ರಾವ್

  • ಅಜೇಯ್ ರಾವ್ ಈಗ ಶೋಕಿವಾಲ

    ಅಜೇಯ್ ರಾವ್ ಈಗ ಶೋಕಿವಾಲ

    ಬೆಂಗಳೂರು: ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಅವರು ನಿರ್ಮಿಸುತ್ತಿರುವ, ಅಜೇಯ್ ರಾವ್ ನಾಯಕರಾಗಿ ಅಭಿನಯಿಸುತ್ತಿರುವ ಪ್ರೊಡಕ್ಷನ್ ನಂ.7 ಚಿತ್ರಕ್ಕೆ ‘ಶೋಕಿವಾಲ’ ಎಂದು ಹೆಸರಿಡಲಾಗಿದೆ. ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಚನ್ನಪಟ್ಟಣ, ಮಾಗಡಿ, ಮಂಡ್ಯ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

     

    View this post on Instagram

     

    Watch the motion poster of SHOKIWALA on YouTube released today

    A post shared by Krishna Ajai Rao (@krishna_ajai_rao) on


    ಜಾಕಿ (ಬಿ.ತಿಮ್ಮೇಗೌಡ) ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಭಾಗ್ಯದ ಬಳೆಗಾರ’, ‘ತಮಸ್ಸು’ ‘ದೇವರು ಕೊಟ್ಟ ತಂಗಿ’ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ, ಲಕ್ಕಿ, ಅಧ್ಯಕ್ಷ, ರನ್ನ, ವಿಕ್ಟರಿ, ಕೆಜಿಎಫ್ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ತಿಮ್ಮೇಗೌಡ ಈ ಚಿತ್ರದ ಮೂಲಕ ಜಾಕಿ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರ.

    ಈ ಚಿತ್ರಕ್ಕೆ ಪ್ರಶಾಂತ್ ರಾಚಪ್ಪ ಸಂಭಾಷಣೆ ಬರೆದಿದ್ದಾರೆ. ನವೀನ್ ಕುಮಾರ್ ಅವರ ಛಾಯಾಗ್ರಹಣವಿರುವ ಶೋಕಿವಾಲನಿಗೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನವಿದೆ. ಜಯಂತ ಕಾಯ್ಕಿಣಿ, ಡಾ.ವಿ.ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ಗೌಸ್‍ಪೀರ್ ಹಾಡುಗಳನ್ನು ರಚಿಸಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಬಾಲು ಕುಮುಟ ಅವರ ನಿರ್ಮಾಣ ಮೇಲ್ವಿಚಾರಣೆಯಿದೆ.

    ಅಜೇಯ್ ರಾವ್ ಅವರಿಗೆ ನಾಯಕಿಯಾಗಿ ಸಂಜನ ಆನಂದ್ ಅಭಿನಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಗಿರಿ ಮುನಿರಾಜು, ಪ್ರಮೋದ್ ಶೆಟ್ಟಿ, ತಬಲ ನಾಣಿ, ಅರುಣ ಬಾಲರಾಜ್, ನಾಗರಾಜಮೂರ್ತಿ, ಲಾಸ್ಯ, ವಾಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಬಿಡುಗಡೆಯಾಯ್ತು ರೈನ್ ಬೋ ಮೋಷನ್ ಪೋಸ್ಟರ್!

    ಬಿಡುಗಡೆಯಾಯ್ತು ರೈನ್ ಬೋ ಮೋಷನ್ ಪೋಸ್ಟರ್!

    ಬೆಂಗಳೂರು: ರಾಜಾಹುಲಿ ಖ್ಯಾತಿಯ ನಿರ್ದೇಶಕ ಗುರುದೇಶಪಾಂಡೆ ನಿರ್ಮಾಪಕರಾಗಿ ರೈನ್ ಬೋ ಚಿತ್ರದ ಮೂಲಕ ಎರಡನೇ ಹೆಜ್ಜೆಯಿಟ್ಟಿದ್ದಾರೆ. ಕೃಷ್ಣ ಅಜೇಯ್ ರಾವ್ ಸೂಪರ್ ಕಾಪ್ ಆಗಿ ಮಿಂಚಲಿರೋ ಈ ಸಿನಿಮಾ ಮುಹೂರ್ತ ಸಮಾರಂಭ ಕೆಲದಿನಗಳ ಹಿಂದಷ್ಟೇ ನಡೆದಿತ್ತು. ಆ ಸಂದರ್ಭದಲ್ಲಿ ಈ ಚಿತ್ರದ ಬಗ್ಗೆ ಕೆಲ ಇಂಟರೆಸ್ಟಿಂಗ್ ವಿಚಾರಗಳೂ ಜಾಹೀರಾಗಿದ್ದವು. ಇದೀಗ ರೈನ್ ಬೋ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.

    ರೈನ್ ಬೋ ಕ್ರೈಂ ಥ್ರಿಲ್ಲರ್ ಜಾನರಿನ ಚಿತ್ರ. ಇದನ್ನು ಎಸ್. ರಾಜವರ್ಧನ್ ನಿರ್ದೇಶನ ಮಾಡಿದ್ದಾರೆ. ಗುರುದೇಶಪಾಂಡೆಯವರ ಗರಡಿಯಲ್ಲಿ ಹಲವಾರು ವರ್ಷಗಳ ಕಾಲ ಪಳಗಿಕೊಂಡಿರುವ ರಾಜವರ್ಧನ್ ಪಾಲಿಗಿದು ಮೊದಲ ಚಿತ್ರ. ಈ ಆರಂಭಿಕ ಹೆಜ್ಜೆಯಲ್ಲಿಯೇ ತಾಂತ್ರಿಕವಾಗಿಯೂ ಮಹತ್ವ ಹೊಂದಿರುವ, ಈವರೆಗೆ ಯಾರೂ ಗಮನಹರಿಸದಂಥಾ ಅಪರೂಪದ ಕಥೆಯೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈಗ ವಿಶ್ವವನ್ನೇ ವ್ಯಾಪಿಸಿಕೊಂಡಿರೋ ಸೈಬರ್ ಕ್ರೈಂನ ಬೆಚ್ಚಿ ಬೀಳಿಸೋ ವೃತ್ತಾಂತಕ್ಕೆ ಈ ಸಿನಿಮಾ ಕನ್ನಡಿಯಾಗಲಿದೆ ಅನ್ನೋದಕ್ಕೆ ಸಾಕ್ಷಿಯೆಂಬಂತೆ ಈ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.

    ಕೃಷ್ಣ ಅಜೇಯ್ ರಾವ್ ಆರಂಭದಿಂದ ಒಂದು ಹಂತದವರೆಗೂ ಲವರ್ ಬಾಯ್ ಆಗಿಯೇ ಕಂಗೊಳಿಸಿದ್ದವರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಆಕ್ಷನ್ ಸ್ವರೂಪದ ಚಿತ್ರಗಳತ್ತಲೇ ವಾಲಿಕೊಂಡಿದ್ದಾರೆ. ರೈನ್ ಬೋದಲ್ಲಂತೂ ಅವರು ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರಂತೆ. ಈವತ್ತಿಗೆ ಜನಸಾಮಾನ್ಯರ ಅರಿವಿಗೆ ಬಾರದಂತೆ ಅನಾಹುತ ಸೃಷ್ಟಿಸುತ್ತಿರುವ ಸೈಬರ್ ಕ್ರೈಂನ ಕರಾಳ ಮುಖವೊಂದನ್ನು ಈ ಸಿನಿಮಾ ಪ್ರೇಕ್ಷಕರೆದುರು ಬಿಚ್ಚಿಡಲು ಮುಂದಾಗಿದೆ. ಈಗ ಬಿಡುಗಡೆಯಾಗಿರೋ ಮೋಷನ್ ಪೋಸ್ಟರ್ ಕುತೂಹಲಕಾರಿಯಾಗಿ ಮೂಡಿ ಬಂದಿರೋದರಿಂದ ಪ್ರೇಕ್ಷಕರೆಲ್ಲ ರೈನ್ ಬೋದತ್ತ ಆಕರ್ಷಿತರಾಗಿದ್ದಾರೆ.

  • ಕೃಷ್ಣ ಅಜೇಯ್ ರಾವ್ ನಟನೆಯ ‘ರೈನ್‍ಬೋ’ ಗೆ ಮುಹೂರ್ತ

    ಕೃಷ್ಣ ಅಜೇಯ್ ರಾವ್ ನಟನೆಯ ‘ರೈನ್‍ಬೋ’ ಗೆ ಮುಹೂರ್ತ

    ಲವರ್ ಬಾಯ್, ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದ ಕೃಷ್ಣ ಅಜೇಯ್ ರಾವ್ ಮೊದಲ ಬಾರಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ‘ರೈನ್‍ಬೋ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆಯ ಕೆಳಗೆ ಕಲರ್ಸ್ ಆಫ್ ಕ್ರೈಂ ಎನ್ನುವ ಅಡಿಬರಹವನ್ನು ನೀಡಲಾಗಿದೆ. ಸೈಬರ್‌ಗೆಸಂಬಂಧಿಸಿದಂತೆ ಸಾಕಷ್ಟು ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಆದರೆ ರೈನ್‍ಬೋ ಸಿನಿಮಾದಲ್ಲಿ ಈವರೆಗೆ ಯಾರೂ ಗಮನಿಸದ, ಅನಾಹುತಕಾರಿ ಅಪರಾಧದ ಸುತ್ತ ಕಥೆ ರಚಿಸಲಾಗಿದೆ.


    ಯಾವುದೇ ಒಂದು ಮೆಸೇಜ್ ಕಳುಹಿಸಿದರೆ, ಅದು ಮೊದಲು ಸ್ಯಾಟಲೈಟ್ ಸ್ಟೋರ್‌ಗೆ ತಲುಪುತ್ತದೆ. ನಂತರ ಸಂಬಂಧಪಟ್ಟವರಿಗೆ ಅದು ರವಾನೆಯಾಗುತ್ತದೆ. ಸ್ವೀಕೃತಿ ಮಾಡುವವನು ಹ್ಯಾಕ್ ಮಾಡಿ ಅದನ್ನು ದುರುಪಯೋಗ ಮಾಡಿಕೊಂಡರೆ ಅದರ ಪರಿಣಾಮವನ್ನು ಗ್ರಾಹಕ ಎದುರಿಸಬೇಕಾಗುತ್ತದೆ. ಇಂತಹುದನ್ನು ನಾಯಕ ನಟ ಹೇಗೆ ತನಿಖೆ ಮಾಡುತ್ತಾನೆ ಎಂಬುದು ಈ ಸಿನಿಮಾದ ಒಂದು ಎಳೆಯ ಸಾರಾಂಶವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.


    ಇಲಾಖೆಯಲ್ಲಿ ನೇಮಕಗೊಂಡು, ಪರೀಕ್ಷಾ ಅವಧಿಯಲ್ಲಿ ಉನ್ನತ ಅಧಿಕಾರಿಗಳ ಅನುಮತಿಯನ್ನು ಹೇಗೆ ಪಡೆಯುತ್ತಾನೆ, ಯಾವ ರೀತಿಯಲ್ಲಿ ಅಪರಾಧಿಗಳನ್ನು ಹಿಡಿಯುತ್ತಾನೆ ಎನ್ನುವ ಪಾತ್ರದಲ್ಲಿ ಕೃಷ್ಣ ಅಜೇಯ್ ರಾವ್ ನಟಿಸಲಿದ್ದಾರೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಾ, ಅನಾಥಳಾಗಿ ಪಿಜಿಯಲ್ಲಿ ಇದ್ದುಕೊಂಡು ತನಿಖೆಯಲ್ಲಿ ಸಹಕಾರ ನೀಡುವ ಮಾನ್ವಿತಾ ಹರೀಶ್ ನಾಯಕಿ. ಮುಖ್ಯ ಖಳನಾಯಕ ಮತ್ತು ತಾರಾಗಣ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೇ ಮುಗಿಯಲಿದೆ. ಹೊಸತನ ಎನ್ನುವಂತೆ ಪ್ರತಿ ಪಾತ್ರ ಬಂದಾಗ ಅದಕ್ಕೊಂದು ಅರ್ಥಪೂರ್ಣ ಹಿನ್ನೆಲೆ ಸಂಗೀತವನ್ನು ಒದಗಿಸುತ್ತಿರುವುದು ಸಂಗೀತ ನಿರ್ದೇಶಕ ಎಮಿಲ್. ಚಿತ್ರಕತೆ ಜಡೇಶ್ ಕುಮಾರ್-ಜಾಯ್ ಜಾರ್ಸ್-ಎಸ್.ರಾಜವರ್ಧನ್, ಛಾಯಾಗ್ರಹಣ ಆರೂರು ಸುಧಾಕರಶೆಟ್ಟಿ, ಕಾರ್ಯಕಾರಿ ನಿರ್ಮಾಪಕ ವೈಭವ್ ನಾಗರಾಜ್.


    ಸೋಷಿಯಲ್ ಮೀಡಿಯಾವನ್ನು ಸನ್ಮಾರ್ಗದಲ್ಲಿ ಉಪಯೋಗಿಸಿದರೆ ಯಾವ ಕೆಡುಕೂ ಆಗುವುದಿಲ್ಲ. ಅದನ್ನು ಅನ್ಯ ಮಾರ್ಗಗಳಿಗಾಗಿ ಬಳಸಿದರೆ ಯಡವಟ್ಟು ಕಟ್ಟಿಟ್ಟ ಬುತ್ತಿ ಅನ್ನೋದನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ. ಕ್ರಿಯೇಟಿವ್ ಹೆಡ್ ಮತ್ತು ನಿರ್ಮಾಣ ಮಾಡುತ್ತಿರುವ ಗುರುದೇಶಪಾಂಡೆ ಅವರು ಶಿಷ್ಯ ಎಸ್.ರಾಜವರ್ಧನ್ ಅವರಿಗೆ ನಿರ್ದೇಶನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ವರಮಹಾಲಕ್ಷೀ ಹಬ್ಬದಂದು ನಡೆದ ಮಹೂರ್ತ ಸಮಾರಂಭಕ್ಕೆ ನಿರ್ಮಾಪಕರಾದ ರಮೇಶ್‍ರೆಡ್ಡಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಸಮೃದ್ಧಿ ಮಂಜುನಾಥ್ ಕ್ಯಾಮೆರಾ ಆನ್ ಮಾಡಿ ತಂಡಕ್ಕೆ ಶುಭಹಾರೈಸಿದರು. ರೈನ್‍ಬೋ ಚಿತ್ರತಂಡ ಮುಂದಿನ ತಿಂಗಳಿನಿಂದ ಚಿತ್ರೀಕರಣ ನಡೆಸಲಿದೆ.

  • ದುಷ್ಟರ ಎದೆ ಅದುರಿಸೋ ‘ತಾಯಿಗೆ ತಕ್ಕ ಮಗ’!

    ದುಷ್ಟರ ಎದೆ ಅದುರಿಸೋ ‘ತಾಯಿಗೆ ತಕ್ಕ ಮಗ’!

    ಬೆಂಗಳೂರು: ಶಶಾಂಕ್ ನಿರ್ದೇಶನ ಮಾಡಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿರೋ ಚಿತ್ರ ತಾಯಿಗೆ ತಕ್ಕ ಮಗ. ಅಗಾಧವಾದ ನಿರೀಕ್ಷೆಗಳ ಒಡ್ಡೋಲಗದಲ್ಲಿ ಈ ಚಿತ್ರ ತೆರೆ ಕಂಡಿದೆ. ಪ್ರೇಕ್ಷಕರು ಯಾವ ಕುತೂಹಲವಿಟ್ಟುಕೊಂಡು ಕಾತರರಾಗಿದ್ದರೋ ಅದನ್ನು ಈ ಚಿತ್ರ ತಣಿಸುವಂತೆಯೇ ಮೂಡಿ ಬಂದಿದೆ.

    ಆಕೆ ವಕೀಲ ವೃತ್ತಿಯನ್ನು ನ್ಯಾಯಕ್ಕಾಗಿಯೇ ಮುಡಿಪಾಗಿಟ್ಟ ತಾಯಿ. ಎಂಥಾ ಸಂದರ್ಭದಲ್ಲಿಯಾದರೂ ಅನ್ಯಾಯದ ವಿರುದ್ಧ ಕಾನೂನು ಸಮರ ನಡೆಸುವ ಗಟ್ಟಿಗಿತ್ತಿಯಾದ ಆಕೆಗೊಬ್ಬ ಮಗ. ಅವನು ಮೋಹನದಾಸ. ಅಮ್ಮ ಅಂದರೆ ಈತನ ಪ್ರಪಂಚ. ನ್ಯಾಯ, ನೀತಿಯ ವಿಚಾರದಲ್ಲಿ ಮಾತ್ರವಲ್ಲದೇ ಎಲ್ಲದರಲ್ಲಿಯೂ ಈತ ತಾಯಿಗೆ ತಕ್ಕ ಮಗ.

    ಇಂಥಾ ವಕೀಲೆ ತನ್ನ ವೃತ್ತಿಯ ನಿಮಿತ್ತವಾಗಿಯೇ ದುಷ್ಟ, ಭ್ರಷ್ಟ ರಾಜಕಾರಣಿಯೋರ್ವನನ್ನ ಎದುರು ಹಾಕಿಕೊಳ್ಳಬೇಕಾದ ಸಂದರ್ಭ ಸೃಷ್ಟಿಯಾಗುತ್ತೆ. ಆ ರಾಜಕಾರಣಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಿ ಬಿಡಬಲ್ಲ ಕಿರಾತಕ. ಆತನ ಮಗ ತಂದೆಯ ಅಧಿಕಾರದ ಅಮಲಿನಲ್ಲಿ ಬೇಡದ್ದನ್ನೇ ಮಾಡುತ್ತಾ ಸಮಾಜ ಕಂಟಕನಾಗಿರುತ್ತಾನೆ. ಸದಾ ಅಮ್ಮನ ರಕ್ಷಣೆಗೆ ನಿಲ್ಲುತ್ತಾ ದುಷ್ಟರನ್ನು ಬಗ್ಗು ಬಡಿಯುವ ಜಾಯಮಾನದ ಮೋಹನದಾಸ ಆ ರಾಜಕಾರಣಿ ಮತ್ತು ಮಗನ ವಿರುದ್ಧವೂ ಸೆಣಸಬೇಕಾಗಿ ಬರುತ್ತದೆ. ಈ ನ್ಯಾಯ ಪಥದ ಹೋರಾಟದಲ್ಲಿ ತಾಯಿ ಮತ್ತು ಮಗ ಗೆಲ್ಲುತ್ತಾರಾ? ಅವರ ಕಥೆ ಏನಾಗುತ್ತೆ ಎಂಬುದೇ ಅಸಲಿ ಕುತೂಹಲ.

    ಈ ಕಥಾ ಎಳೆ ತುಸು ಗಂಭೀರವಾಗಿ ಕಾಣಿಸೋದರಲ್ಲಿ ಅಚ್ಚರಿಯೇನಿಲ್ಲ. ಆದರೆ ಅದನ್ನು ಎಲ್ಲಿಯೂ ಹಾಗನ್ನಿಸದಂತೆ ನಿರ್ದೇಶಕ ಶಶಾಂಕ್ ಕಟ್ಟಿ ಕೊಟ್ಟಿದ್ದಾರೆ. ಸಾಧು ಕೋಕಿಲಾ ಸಮರ್ಥವಾಗಿ ನಗಿಸುತ್ತಾರೆ. ಭಜರಂಗಿ ಲೋಕಿ ಖಳನಾಗಿ ವಿಜೃಂಭಿಸಿದರೆ ಆತನ ಎದುರಿಗೆ ಅಜೇಯ್ ರಾವ್ ಅಕ್ಷರಶಃ ಅಬ್ಬರಿಸಿದ್ದಾರೆ. ಈ ಮೂಲಕವೇ ಅವರು ಆಕ್ಷನ್ ಹೀರೋ ಆಗಿ ನೆಲೆ ನಿಲ್ಲುವ ಸೂಚನೆಯನ್ನೂ ನೀಡುತ್ತಾರೆ. ಸುಮಲತಾ ಅವರದ್ದೂ ಕೂಡಾ ನೆನಪಲ್ಲುಳಿಯುವಂಥಾ ನಟನೆ. ಇದೆಲ್ಲದಕ್ಕೆ ಹಾಡು ಮತ್ತು ಹಿನ್ನೆಲೆ ಸಂಗೀತಗಳೂ ಸಾಥ್ ನೀಡಿವೆ.

    ಹಾಗಂತ ಇಡೀ ಚಿತ್ರದಲ್ಲಿ ಯಾವ ಕೊರತೆಯೂ ಇಲ್ಲ ಅನ್ನುವಂತಿಲ್ಲ. ಆದರೆ ಶಶಾಂಕ್ ಇಲ್ಲಿ ಅನುಸರಿಸಿರೋ ಮನೋರಂಜನೆಯ ಕಮರ್ಷಿಯಲ್ ಮಾರ್ಗ ಅಂಥಾ ಕುಂದು ಕೊರತೆಗಳನ್ನು ದೊಡ್ಡದಾಗಿ ಕಾಡದಂತೆ ಮಾಡುವಲ್ಲಿ ಯಶ ಕಂಡಿದೆ. ಈ ಮೂಲಕ ತಾಯಿಗೆ ತಕ್ಕ ಮಗ ಪ್ರೇಕ್ಷಕರನ್ನು ನಿರೀಕ್ಷೆಯಂತೆಯೇ ಹಿಡಿದಿಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ತಾಯಿಗೆ ತಕ್ಕ ಮಗನ ವಿಶೇಷತೆ ಮೊಗೆದಷ್ಟೂ ಮುಗಿಯೋದಿಲ್ಲ!

    ತಾಯಿಗೆ ತಕ್ಕ ಮಗನ ವಿಶೇಷತೆ ಮೊಗೆದಷ್ಟೂ ಮುಗಿಯೋದಿಲ್ಲ!

    ಬೆಂಗಳೂರು: ಶಶಾಂಕ್ ಸಿನಿಮಾಸ್ ಅಡಿಯಲ್ಲಿ ಶಶಾಂಕ್ ಅವರೇ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರೋ ಚಿತ್ರ ತಾಯಿಗೆ ತಕ್ಕ ಮಗ. ಈಗಾಗಲೇ ಮಾಧುರ್ಯದ ಹಾಡುಗಳು ಮತ್ತು ಎನರ್ಜೆಟಿಕ್ ಟ್ರೇಲರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಈ ಚಿತ್ರ ಈ ವಾರ ತೆರೆ ಕಾಣುತ್ತಿದೆ.

    ‘ತಾಯಿಗೆ ತಕ್ಕ ಮಗ’ ಶಶಾಂಕ್ ಅವರ ಸ್ವಂತ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿರೋ ಮೊದಲ ಚಿತ್ರ. ಆದ್ದರಿಂದಲೇ ಆರಂಭವೇ ಅದ್ಧೂರಿಯಾಗಿರಬೇಕೆಂಬ ಮಹದಾಸೆಯಿಂದ ಪ್ರತಿಯೊಂದರಲ್ಲಿಯೂ ನಿಗಾ ವಹಿಸಿಯೇ ಈ ಚಿತ್ರವನ್ನು ರೂಪಿಸಿದ್ದಾರೆ. ಶಶಾಂಕ್ ಈ ಕಥೆಯನ್ನೂ ಕೂಡಾ ಅದಕ್ಕೆ ತಕ್ಕುದಾಗಿಯೇ ಹೊಸೆದಿದ್ದಾರಂತೆ. ಆದ್ದರಿಂದಲೇ ಬಿಡುಗಡೆಯ ಹೊಸ್ತಿಲಲ್ಲಿಯೇ ಗೆಲುವಿನ ಸೂಚನೆ ಮಿರುಗಲಾರಂಭಿಸಿದೆ.

    ಇದು ಶಶಾಂಕ್ ಮತ್ತು ಅಜೇಯ್ ರಾವ್ ಒಟ್ಟಾಗಿ ರೂಪಿಸಿದ ಮೂರನೇ ಚಿತ್ರ. ಅಜೇಯ್ ರಾವ್ ಅವರ ವೃತ್ತಿ ಜೀವನದಲ್ಲಿದು ಇಪ್ಪತೈದನೇ ಚಿತ್ರ. ಬಹಳಷ್ಟು ಕಷ್ಟಪಟ್ಟು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅಜೇಯ್ ರಾವ್ ಈ ಹಾದಿಯಲ್ಲಿ ಹದಿನೈದು ವರ್ಷ ಸಾಗಿ ಬಂದಿದ್ದಾರೆ. ಅದನ್ನು ತಾಯಿಗೆ ತಕ್ಕ ಮಗ ಚಿತ್ರ ಸಾರ್ಥಕಗೊಳಿಸಲಿದೆ ಎಂಬ ಭರವಸೆಯನ್ನೂ ಹೊಂದಿದ್ದಾರೆ.

    ಕಳೆದ ಹದಿನೈದು ವರ್ಷದ ಅಜೇಯ್ ರಾವ್ ಬಣ್ಣದ ಬದುಕನ್ನೊಮ್ಮೆ ಅವಲೋಕಿಸಿದರೆ ಅವರು ಈವರೆಗೂ ಲವರ್ ಬಾಯ್ ಪಾತ್ರಗಳಲ್ಲಿಯೇ ಮಿಂಚುತ್ತಾ ಬಂದಿದ್ದಾರೆ. ಆದರೆ ಅವರ ಪ್ರಧಾನ ಆಸಕ್ತಿ ಆಕ್ಷನ್‍ನತ್ತಲೇ ಇತ್ತೆಂಬುದು ಅಚ್ಚರಿಯಾದರೂ ಸತ್ಯ. ಅಷ್ಟಕ್ಕೂ ಅಜೇಯ್ ರಾವ್ ಶಾಲಾ ದಿನಗಳಿಂದಲೇ ಕರಾಟೆ ಚಾಂಪಿಯನ್. ಈ ಚಿತ್ರದಲ್ಲಿ ಕರಾಟೆ ಪಟ್ಟುಗಳನ್ನೂ ಕೂಡಾ ಅಜೇಯ್ ಪ್ರದರ್ಶಿಸಿದ್ದಾರಂತೆ!

    ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ. ಗಿರಿ ಮಹೇಶ್ ಸಂಕಲನ ಹಾಗೂ ಕೆ.ರವಿವರ್ಮ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೃಷ್ಣ ಅಜೇಯ್ ರಾವ್, ಸುಮಲತಾ ಅಂಬರೀಶ್, ಆಶಿಕಾ ರಂಗನಾಥ್, ಅಚ್ಯುತಕುಮಾರ್, ಸಾಧುಕೋಕಿಲ, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳೆ ಮುಂತಾದವರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ತಾಯಿಗೆ ತಕ್ಕ ಮಗ – ಅಮ್ಮನ ಜೊತೆ ಸೆಲ್ಫಿ ಕಳಿಸಿ 50,000 ರೂ. ಗೆಲ್ಲಿ!

    ತಾಯಿಗೆ ತಕ್ಕ ಮಗ – ಅಮ್ಮನ ಜೊತೆ ಸೆಲ್ಫಿ ಕಳಿಸಿ 50,000 ರೂ. ಗೆಲ್ಲಿ!

    ಬೆಂಗಳೂರು: ತಾಯಿಗೆ ತಕ್ಕ ಮಗ ಚಿತ್ರ ಬಿಡುಗಡೆಗೆ ವಾರವಷ್ಟೇ ಬಾಕಿ ಉಳಿದಿದೆ. ಇದೀಗ ಪ್ರೇಕ್ಷಕರಿಗಾಗಿಯೇ ಚಿತ್ರತಂಡ ವಿನೂತನವಾದೊಂದು ಸ್ಪರ್ಧೆಯನ್ನು ಏರ್ಪಡಿಸಿದೆ. ಇದಕ್ಕೆ ತಾಯಿಗೆ ತಕ್ಕ ಮಗ ಸೆಲ್ಫಿ ಕಂಟೆಸ್ಟ್ ಎಂದೂ ಹೆಸರಿಟ್ಟಿದೆ.

    ಇದು ಅಮ್ಮ ಮಗನ ಪ್ರೀತಿಗೆ ಪೂರಕವಾದ ಸ್ಪರ್ಧೆ. ಯಾರೇ ಯಾದರೂ ತಮ್ಮ ಅಮ್ಮನ ಜೊತೆ ಸೆಲ್ಫಿ ತೆಗೆದುಕೊಂಡು 7338259619ಗೆ ವಾಟ್ಸಪ್ ಮಾಡಬಹುದು. ನಿಮ್ಮ ಫೋಟೋ ಮೊದಲ ಬಹುಮಾನಕ್ಕೆ ಪಾತ್ರವಾದರೆ ಐವತ್ತು ಸಾವಿರ ರೂಪಾಯಿಗಳನ್ನು ಗೆಲ್ಲ ಬಹುದು!

    ಮೊದಲನೆ ಬಹುಮಾನ 50 ಸಾವಿರ, ಎರಡನೆಯ ಬಹುಮಾನ 25 ಸಾವಿರ, ಮೂರನೇ ಬಹುಮಾನ 15 ಸಾವಿರ ಮತ್ತು ನಾಲಕ್ಕನೇ ಬಹುಮಾನ 10 ಸಾವಿರವೆಂದು ಚಿತ್ರ ತಂಡ ನಿಗದಿ ಮಾಡಿದೆ. ಅಂದಹಾಗೆ ಈ ಸ್ಪರ್ಧೆಗೆ ಫೋಟೋ ಕಳಿಸಲು ನವೆಂಬರ್ 2 ಕಡೆಯ ದಿನಾಂಕ. ನವೆಂಬರ್ 3ರಂದು ಲಕ್ಕಿ ಡ್ರಾ ನಡೆಯಲಿದೆ. ಆ ಬಳಿಕ ಫೇಸ್ ಬುಕ್ ಲೈವ್ ಮೂಲಕ ವಿಜೇತರನ್ನು ಆರಿಸಲಾಗುತ್ತದೆ. ಚಿತ್ರತಂಡಕ್ಕೆ ಸಂಬಂಧಪಟ್ಟವರಿಗೆ ಯಾವ ಕಾರಣಕ್ಕೂ ಈ ಸ್ಪರ್ಧೆಯಲ್ಲಿ ಪ್ರವೇಶವಿಲ್ಲ ಎಂಬ ಸೂಚನೆಯನ್ನೂ ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಾಯಿಗೆ ತಕ್ಕ ಮಗ ಪ್ರೇಕ್ಷಕರ ಮುಂದೆ ಬರೋದ್ಯಾವಾಗ ಗೊತ್ತಾ?

    ತಾಯಿಗೆ ತಕ್ಕ ಮಗ ಪ್ರೇಕ್ಷಕರ ಮುಂದೆ ಬರೋದ್ಯಾವಾಗ ಗೊತ್ತಾ?

    ಜೇಯ್ ರಾವ್ ಅಂದ್ರೆ ಲವರ್ ಬಾಯ್ ಲುಕ್ಕೇ ಕಣ್ಮುಂದೆ ಬರುತ್ತದಲ್ಲಾ? ಅದನ್ನು ಸಂಪೂರ್ಣವಾಗಿ ಅದಲು ಬದಲು ಮಾಡೋ ಸಕಾರಾತ್ಮಕ ಸೂಚನೆಗಳಿರೋ ಚಿತ್ರ ತಾಯಿಗೆ ತಕ್ಕ ಮಗ. ಶಶಾಂಕ್ ತಮ್ಮದೇ ಬ್ಯಾನರಿನಲ್ಲಿ ನಿರ್ಮಾಣ ಮಾಡಿ, ನಿರ್ದೇಶನವನ್ನೂ ಮಾಡಿರುವ ಈ ಚಿತ್ರ ಅಜೇಯ್ ರಾವ್ ಅವರ 25ನೇ ಚಿತ್ರವೂ ಹೌದು. ಈ ಚಿತ್ರವೀಗ ಬಿಡುಗಡೆಯಾಗೋ ಮುಹೂರ್ತ ನಿಗದಿಯಾಗಿದೆ.

    ಟ್ರೈಲರ್ ಮತ್ತು ಹಾಡುಗಳ ಮೂಲಕವೇ ಕುತೂಹಲದ ಜ್ವರ ಏರಿಸಿರುವ ಈ ಚಿತ್ರ ನವೆಂಬರ್ 16ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ.

    ಸುಮಲತಾ ಅಂಬರೀಶ್ ಅವರು ಬಹು ಕಾಲದ ನಂತರ ಈ ಚಿತ್ರದ ಮೂಲಕ ಅಜೇಯ್ ರಾವ್ ಅಮ್ಮನಾಗಿ, ವಿಶೇಷವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಜೇಯ್ ರಾವ್ ಅಭಿನಯಿಸಿದ್ದ ಎಕ್ಸ್‍ಕ್ಯೂಸ್ ಮಿ ಚಿತ್ರದಲ್ಲಿ ಸುಮಲತಾ ಅಮ್ಮನಾಗಿ ನಟಿಸಿದ್ದರು. ಆ ಪಾತ್ರ ಮನ ಮಿಡಿಯುವಂತಿತ್ತು. ಈ ಚಿತ್ರದಲ್ಲಿಯೂ ಕೂಡಾ ಈ ಅಮ್ಮ ಮಗನ ಜೋಡಿ ಸಖತ್ತಾಗಿಯೇ ಮೋಡಿ ಮಾಡುವ ಎಲ್ಲ ಲಕ್ಷಣಗಳೂ ಇವೆ.

    ಈಗಾಗಲೇ ಈ ಚಿತ್ರದ ಹಾಡುಗಳು ಹಿಟ್ ಆಗಿವೆ. ಟ್ರೈಲರ್ ಸೂಪರಾಗಿದೆ. ಇದರಲ್ಲಿ ಅಜೇಯ್ ರಾವ್ ಅವರ ಮಾಸ್ ಲುಕ್ಕಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ ಈ ಚಿತ್ರ ತೆರೆ ಕಾಣೋದ್ಯಾವಾಇಉಗ ಎಂಬ ಪ್ರಶ್ನೆ ಮಾತ್ರ ಎಲ್ಲರನ್ನೂ ಕೊರೆಯುತ್ತಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮ್ಮನ ಪ್ರೀತಿಸೋರು ಕೇಳಲೇಬೇಕಾದ ಹಾಡಿದು!

    ಅಮ್ಮನ ಪ್ರೀತಿಸೋರು ಕೇಳಲೇಬೇಕಾದ ಹಾಡಿದು!

    ಅಜೇಯ್ ರಾವ್ ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಂಡಿರೋ ಶಶಾಂಕ್ ನಿರ್ದೇಶನದ ಚಿತ್ರ ತಾಯಿಗೆ ತಕ್ಕ ಮಗ. ಟ್ರೈಲರ್, ಪೋಸ್ಟರ್ ಗಳ ಮೂಲಕವೇ ಭಾರೀ ಸದ್ದು ಮಾಡಿದ್ದ ಈ ಚಿತ್ರ ಇತ್ತೀಚೆಗೆ ಪ್ರೇಕ್ಷಕರನ್ನು ಆವರಿಸಿಕೊಂಡಿರೋದು ಹಾಡುಗಳಿಂದಾಗಿ. ಇತ್ತೀಚೆಗೆ ಬಿಡುಗಡೆಯಾಗಿದ್ದ ಎರಡು ಹಾಡುಗಳ ಮೆಲೋಡಿಯಿನ್ನೂ ರಿಂಗಣಿಸುತ್ತಿರುವಾಗಲೇ ಮತ್ತೊಂದು ಹಾಡನ್ನು ಬಿಡುಗಡೆಗೊಳಿಸಲಾಗಿದೆ.

    ಇದು ಅಮ್ಮ ಮಗನ ಬಾಂಧವ್ಯವನ್ನು ಸಾರುವ, ಮಗನೊಬ್ಬ ಅಮ್ಮನನ್ನು ಆರಾಧಿಸುವಂಥಾ ಹಾಡು. ಅಮ್ಮನೆಡೆಗಿನ ಸೆಂಟಿಮೆಂಟಿನ ಅಮ್ಮ ನಿನ್ನ ಮಗನೆಂಬ ಹೆಮ್ಮೆ ಎಂಬ ಹಾಡೀಗ ಅನಾವರಣಗೊಂಡಿದೆ. ಈ ಹಾಡು ಅಮ್ಮನ ಬಗ್ಗೆ ಬಂದಿರೋ ಎವರ್ ಗ್ರೀನ್ ಹಾಡುಗಳ ಸಾಲಿನಲ್ಲಿ ಸ್ಥಾನ ಪಡೆದು ಎಲ್ಲರನ್ನೂ ಆವರಿಸಿಕೊಳ್ಳೋ ಲಕ್ಷಣಗಳೂ ದಟ್ಟವಾಗಿವೆ.

    ಕೆಲ ದಿನಗಳ ಹಿಂದಷ್ಟೇ ಈ ಚಿತ್ರದ ಹೃದಯಕೆ ಹೆದರಿಕೆ ನೀ ಹೀಗೆ ನೋಡಿದರೆ ಎಂಬ ಹಾಡು ಬಿಡುಗಡೆಯಾಗಿ ಯುವ ಮನಸುಗಳನ್ನು ಹುಚ್ಚೆಬ್ಬಿಸಿತ್ತು. ಇದೀಗ ಈ ಅಮ್ಮನ ಹಾಡು ರಿಲೀಸಾಗಿದೆ. ಇದು ತಾಯಿಗೆ ತಕ್ಕ ಮಗ ಚಿತ್ರದ ಮೂರನೇ ಹಾಡು. ಇದು ಎಲ್ಲರ ಮೂಡು ಅಮ್ಮನ ಪ್ರೀತಿಯ ಮೂಡಿನ ಮಡಿಲಿಗೆ ಜಾರಿಸುವಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಾಯಿಗೆ ತಕ್ಕ ಮಗ ಲಿರಿಕಲ್ ಸಾಂಗ್ ವೀಡಿಯೋ ರಿಲೀಸ್

    ತಾಯಿಗೆ ತಕ್ಕ ಮಗ ಲಿರಿಕಲ್ ಸಾಂಗ್ ವೀಡಿಯೋ ರಿಲೀಸ್

    ಬೆಂಗಳೂರು: ಚಿತ್ರದ ಫಸ್ಟ್ ಲುಕ್ ಮೂಲಕವೇ ಭರವಸೆ ಮೂಡಿಸಿದ್ದ ನಟ ಅಜಯ್ ರಾವ್ ಅಭಿನಯದ `ತಾಯಿಗೆ ತಕ್ಕ ಮಗ’ ಚಿತ್ರ ಮೊದಲ ಹಾಡಿನ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ.

    `ಹೃದಯಕೆ ಹೆದರಿಕೆ ಹೀಗೆ ನೋಡಿದರೆ’ ಎಂದು ಸಾಗುವ ಹಾಡು ಸಾಹಿತಿ ಜಯಂತ್ ಕಾಯ್ಕಿಣಿ ಲೇಖನದಲ್ಲಿ ಮೂಡಿ ಬಂದಿದ್ದು, ಸರಿಗಮಪ ಖ್ಯಾತಿಯ ಸಂಜಿತ್ ಹೆಗ್ಡೆ ಹಾಗೂ ರವೀಂದ್ರನಾಥ್ ಅವರು ಧ್ವನಿ ನೀಡಿದ್ದು ಕೇಳುಗರಲ್ಲಿ ಹೊಸ ಭಾವನೆಯನ್ನು ಮೂಡಿಸುತ್ತಿದೆ.

    ಅಜಯ್ ರಾವ್‍ರ 25 ಸಿನಿಮಾವಾಗಿ ತೆರೆಗೆ ಬರುತ್ತಿರುವ ತಾಯಿಗೆ ತಕ್ಕ ಮಗ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸಖತ್ ಮೆಚ್ಚುಗೆ ಪಡೆದುಕೊಂಡಿತ್ತು. ಚಿತ್ರ ಶಶಾಂಕ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಜುದಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ಅಜಯ್‍ರಾವ್ ಹಾಗೂ ನಾಯಕಿ ಆಶಿಕಾ ರಂಗನಾಥ್ ನಡುವಿನ ರೊಮ್ಯಾಟಿಂಕ್ ಸನ್ನಿವೇಶಕ್ಕೆ ತಕ್ಕಂತೆ ಮೂಡಿಬಂದಿರುವ ಈ ಹಾಡು ಕುತೂಹಲ ಮೂಡಿಸುತ್ತಿದೆ. ಈ ಹಿಂದಿನ ಚಿತ್ರದಲ್ಲಿ ಅಜಯ್ ರಾವ್ ಲುಕ್ ಬದಲಾಗಿದ್ದರೂ ಹಾಡಿನಲ್ಲಿ ಅದೇ ಲವ್ ಬಾಯ್ ಇಮೇಜ್ ನೋಡುಗರಿಗೆ ಕಾಣಸಿಗುತ್ತಿದೆ.

    ಪ್ರೇಕ್ಷಕರ ನಡುವೆ ಲವ್ವರ್ ಬಾಯ್ ಆಗಿಯೇ ನೆಲೆ ನಿಂತ ನಟ ಅಜಯ್ ರಾವ್ ಏಕಾಏಕಿ ಮಾಸ್ ಲುಕ್ಕಿನಲ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಸಚಿತ್ರದ ವಿಶೇಷವಾಗಿ ಎಕ್ಸ್ ಕ್ಯೂಸ್ ಮಿ ಚಿತ್ರದ ಬಳಿಕ ಸುಮಲತಾ ಅಂಬರೀಶ್ ಮತ್ತೆ ಅಜಯ್ ರಾವ್‍ಗೆ ತಾಯಿ ತೆರೆಮೇಲೆ ಬರುತ್ತಿರುವುದು ಎಲ್ಲರಲ್ಲೂ ಮತ್ತಷ್ಟು ಕುತೂಹಲ ಮೂಡಿಸಿದೆ. ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾ ಬಳಿಕ ಮತ್ತೆ ಶಂಶಾಕ್, ಅಜಯ್ ರಾವ್ ಜೋಡಿ ಒಂದಾಗಿದ್ದು ಅಕ್ಟೋಬರ್ ವೇಳೆಗೆ ಚಿತ್ರ ತೆರೆಗೆ ಅಪ್ಪಳಿಸಲಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

     

  • ತಾಯಿಗೆ ತಕ್ಕ ಮಗನ ಪಕ್ಕಾ ಮಾಸ್ ಲುಕ್!

    ತಾಯಿಗೆ ತಕ್ಕ ಮಗನ ಪಕ್ಕಾ ಮಾಸ್ ಲುಕ್!

    ಬೆಂಗಳೂರು: ಪ್ರೇಕ್ಷಕರ ನಡುವೆ ಲವರ್ ಬಾಯ್ ಆಗಿಯೇ ನೆಲೆ ನಿಂತ ನಟ ಏಕಾಏಕಿ ಮಾಸ್ ಲುಕ್ಕಿನಲ್ಲಿ ಅಭಿಮಾನಿಗಳ ಮನ ಗೆಲ್ಲೋದೊಂದು ಸಾಹಸ. ಆದರೆ ಅಜೇಯ್ ರಾವ್ ಈಗಾಗಲೇ ಅದರಲ್ಲಿ ಗೆದ್ದಿದ್ದಾರೆ. ಈ ಹಿಂದೆ ಧೈರ್ಯಂ ಚಿತ್ರದಲ್ಲಿ ಬೇರೆಯದ್ದೇ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದ ಅಜೇಯ್ ರಾವ್ ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಪಕ್ಕಾ ಮಾಸ್ ಲುಕ್ಕಿನಲ್ಲಿ ಮಿಂಚಿದ್ದಾರೆ!

    ಇತ್ತೀಚೆಗಷ್ಟೇ ತಾಯಿಗೆ ತಕ್ಕ ಮಗ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತಲ್ಲಾ? ಅದಕ್ಕೆ ಸಿಕ್ಕಿರುವ ಭರಪೂರ ಮೆಚ್ಚುಗೆ ಮತ್ತು ವ್ಯಾಪಕ ಪ್ರತಿಕಿಯೆಗಳಾ ಅಭಿಮಾನಿಗಳಿಗೆ ಈ ಗೆಟಪ್ಪು ಇಷ್ಟವಾಗಿರೋದರ ಸಂಕೇತ. ಶಶಾಂಕ್ ಅವರು ಈ ಚಿತ್ರದ ಮೂಲಕ ಮೊದಲ ಬಾರಿ ನಿರ್ಮಾಪಕರಾಗಿದ್ದಾರೆ. ಅವರೇ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರೋ ಈ ಚಿತ್ರದ ಟ್ರೇಲರ್ ಗೆ ದೊರೆತಿರೋ ಮನ್ನಣೆಯೇ ಗೆಲುವಿನ ಲಕ್ಷಣದಂತೆಯೂ ಗೋಚರಿಸುತ್ತಿದೆ.

    ಅಮ್ಮ ಮಗನ ಬಾಂಧವ್ಯದೊಂದಿಗೇ ದುಷ್ಟರ ವಿರುದ್ಧ ಬಡಿದಾಡುವ ಕಥಾ ಹಂದರದ ತಾಯಿಗೆ ತಕ್ಕ ಮಗನ ಬಗ್ಗೆ ಪ್ರೇಕ್ಷಕರು ಕುತೂಹಲಗೊಂಡಿದ್ದಾರೆ. ಒಂದು ಟ್ರೇಲರ್ ಮೂಲಕವೇ ಇಡೀ ಚಿತ್ರವನ್ನು ಕೌತುಕದ ಕೇಂದ್ರ ಬಿಂದುವಿಗೆ ತಂದು ನಿಲ್ಲಿಸುವಲ್ಲಿ ನಿರ್ದೇಶಕ ಶಶಾಂಕ್ ಅವರೂ ಗೆದ್ದಿದ್ದಾರೆ. ಇಡೀ ಟ್ರೈಲರಿನಲ್ಲಿ ಎಲ್ಲರನ್ನು ಅಚ್ಚರಿಗೀಡು ಮಾಡಿರುವುದು ಅಜೇಯ್ ರಾವ್ ಅವರ ಗೆಟಪ್. ಈ ಹಿಂದಿನ ಲವರ್ ಬಾಯ್ ಇಮೇಜ್, ಆ ಮುಗ್ಧ ಛಾಯೆಯಿಂದ ಸಂಪೂರ್ಣವಾಗಿ ಹೊರ ಬಂದಂತೆ ಕಾಣಿಸುತ್ತಿರೋ ಅಜೇಯ್ ರಾವ್ ಈ ಚಿತ್ರದ ಮೂಲಕ ಮತ್ತಷ್ಟು ಅಭಿಮಾನಿ ಬಳಗವನ್ನು ಸಂಪಾದಿಸೋದರಲ್ಲಿ ಯಾವ ಸಂಶಯವೂ ಇಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv