Tag: ಅಗ್ನಿಕೊಂಡ

  • ಅದ್ಧೂರಿ ಕರಗ ಮಹೋತ್ಸವ – ಅಗ್ನಿಕೊಂಡ ಹಾಯ್ದ ದೇವಿಯ ಪ್ರಧಾನ ಅರ್ಚಕ

    ಅದ್ಧೂರಿ ಕರಗ ಮಹೋತ್ಸವ – ಅಗ್ನಿಕೊಂಡ ಹಾಯ್ದ ದೇವಿಯ ಪ್ರಧಾನ ಅರ್ಚಕ

    ರಾಮನಗರ: ಐತಿಹಾಸಿಕ ಹಾಗೂ ಆಷಾಢ ಮಾಸದಲ್ಲಿ ನಡೆಯುವ ಕರಗ ಮಹೋತ್ಸವಗಳಲ್ಲಿ ಒಂದಾದ ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ.

    ನಾಡದೇವತೆ ಚಾಮುಂಡೇಶ್ವರಿ ದೇವಿಯ ಪ್ರಧಾನ ಅರ್ಚಕ ದೇವಿಪ್ರಸಾದ್ ಸಿಂಗ್ ಅಗ್ನಿಕೊಂಡವನ್ನು ಹಾಯ್ದರು. ಆಷಾಢ ಮಾಸದಲ್ಲಿ ನಡೆಯುವ ಚಾಮುಂಡೇಶ್ವರಿ ಕರಗ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ನಗರದ ಏಳು ದೇವತೆಗಳ ಕರಗಮಹೋತ್ಸವವೂ ಕೂಡ ಆಷಾಢದಲ್ಲಿಯೇ ನಡೆಯುತ್ತದೆ.

    ಮಂಗಳವಾರ ರಾತ್ರಿ ಚಾಮುಂಡೇಶ್ವರಿ ಕರಗ ಸಮಿತಿ ವತಿಯಿಂದ ಗಾಯಕ ವಿಜಯ್ ಪ್ರಕಾಶ್ ನೇತೃತ್ವದಲ್ಲಿ ಮ್ಯೂಸಿಕಲ್ ನೈಟ್ಸ್ ನಡೆಸಲಾಯಿತು. ಸಂಗೀತ ರಸಸಂಜೆಯಲ್ಲಿ ಗಾಯಕರ ಗೀತೆಗೆ ಸಾರ್ವಜನಿಕರು ಹುಚ್ಚೆದ್ದು ಸ್ಟೆಪ್ಸ್ ಹಾಕಿದರು.

    ಇಂದು ಬೆಳಗ್ಗೆ ನಡೆದ ಅಗ್ನಿಕೊಂಡವನ್ನ ನೋಡಲು ಜಿಲ್ಲೆಯ ವಿವಿಧ ಕಡೆಗಳಿಂದ ಜನಸಾಗರವೇ ಹರಿದು ಬಂದಿತ್ತು.

  • ರಾಮನಗರದಲ್ಲಿ ಮತ್ತೊಂದು ಅಗ್ನಿಕೊಂಡ ದುರಂತ – ಬೆಂಕಿ ಕೆಂಡದಲ್ಲಿ ಬಿದ್ದ ಅರ್ಚಕನಿಗೆ ಗಂಭೀರ ಗಾಯ

    ರಾಮನಗರದಲ್ಲಿ ಮತ್ತೊಂದು ಅಗ್ನಿಕೊಂಡ ದುರಂತ – ಬೆಂಕಿ ಕೆಂಡದಲ್ಲಿ ಬಿದ್ದ ಅರ್ಚಕನಿಗೆ ಗಂಭೀರ ಗಾಯ

    ರಾಮನಗರ: ಜಿಲ್ಲೆಯಲ್ಲಿ ಮತ್ತೊಂದು ಅಗ್ನಿಕೊಂಡ ದುರಂತ ಜರುಗಿದ್ದು, ಅಗ್ನಿಕೊಂಡ ಹಾಯುವ ವೇಳೆ ಅರ್ಚಕ ಬೆಂಕಿ ಕೆಂಡದಲ್ಲಿ ಬಿದ್ದು ಗಾಯಗೊಂಡಿರುವ ಘಟನೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರ ಸ್ವಗ್ರಾಮದಲ್ಲಿ ನಡೆದಿದೆ.

    ಅರ್ಚಕ ಬಸವರಾಜ್ ಅಗ್ನಿಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸವರಾಜ್ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಅರ್ಚರಾಗಿ ಕೆಲಸ ಮಾಡುತ್ತಿದ್ದಾರೆ. ಸಚಿವ ಡಿ.ಕೆ ಶಿವಕುಮಾರ್ ಸ್ವಗ್ರಾಮ ದೊಡ್ಡ ಆಲಹಳ್ಳಿಯಲ್ಲಿ ಇಂದು ಬಸವೇಶ್ವರ ದೇವರ ಅಗ್ನಿಕೊಂಡ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ರಾತ್ರಿ ಗ್ರಾಮದಲ್ಲೆಲ್ಲ ಎಳವಾರವನ್ನು ವಿಜೃಂಭಣೆಯಿಂದ ನಡೆಸಲಾಗಿತ್ತು. ಬೆಳಗ್ಗೆ ಗ್ರಾಮದ ಜನರಲ್ಲದೇ ಅಕ್ಕಪಕ್ಕದ ಗ್ರಾಮದ ನೂರಾರು ಜನರು ಅಗ್ನಿಕೊಂಡ ಮಹೋತ್ಸವ ನೋಡಲು ಆಗಮಿಸಿದ್ರು. ಕಳೆದ ನಾಲ್ಕು ವರ್ಷಗಳಿಂದ ಬಸವೇಶ್ವರ ದೇವರ ಅಗ್ನಿಕೊಂಡ ಹಾಯುತ್ತಿದ್ದ ಬಸವರಾಜ್ ಇಂದು ಕೂಡ ಅಗ್ನಿಕೊಂಡ ಹಾಯುವ ಕಾರ್ಯದಲ್ಲಿದ್ರು.

    ರಾತ್ರಿಯೆಲ್ಲಾ ಕಟ್ಟಿಗೆಗಳನ್ನಾಕಿ ಸುಟ್ಟು ಬೆಂಕಿ ಕೆಂಡವನ್ನು ಮಾಡಲಾಗಿತ್ತು. ಬೆಳಗ್ಗಿನ ವೇಳೆ ಅಗ್ನಿಕೊಂಡ ಹಾಯುವ ವೇಳೆ ಅರ್ಚಕ ನಾಲ್ಕು ಹೆಜ್ಜೆಗಳನ್ನಿಟ್ಟು ಓಡುವ ವೇಳೆ ಅಗ್ನಿಕೊಂಡದಲ್ಲಿ ಮುಗ್ಗರಿಸಿ ಬಿದ್ದಿದ್ದಾರೆ. ನಂತರ ತಡಬಡಿಸಿ ಎದ್ದು ಅಗ್ನಿಕೊಂಡದಿಂದ ಹೊರಗೆ ಓಡಿ ಬಂದಿದ್ದು ಬೆಂಕಿ ಕೆಂಡದಲ್ಲಿ ಬಿದ್ದ ರಭಸಕ್ಕೆ ಮೈ-ಕೈ ಎಲ್ಲವೂ ಸಹ ಬೆಂಕಿ ಕೆಂಡದಿಂದ ಸುಟ್ಟಿದೆ. ಇನ್ನೂ ಗಂಭೀರವಾಗಿ ಗಾಯಗೊಂಡಿರುವ ಅರ್ಚಕ ಬಸವರಾಜ್‍ರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ.

    ಇದೇ ತಿಂಗಳ 2ರಂದು ಮಾಗಡಿ ತಾಲೂಕಿನ ಕುದೂರಿನ ಕುದೂರಮ್ಮ ದೇವಿ ಅಗ್ನಿಕೊಂಡ ಮಹೋತ್ಸವದಲ್ಲಿ ಹರಕೆಯೊತ್ತು ದೇವಿಯ ಅಗ್ನಿಕೊಂಡೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತನೋರ್ವ ಅಗ್ನಿಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ನಡೆದಿತ್ತು. ದೇವಿಭಕ್ತ ರಮೇಶ್ ಅಗ್ನಿಕೊಂಡ 52ನೇ ಭಕ್ತನಾಗಿ ಅಗ್ನಿಕೊಂಡ ಹಾಯುವ ವೇಳೆ ಆಯ ತಪ್ಪಿ ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡಿದ್ದರು. ಅಲ್ಲದೇ ಬಿದ್ದ ಬಳಿಕ ಅಗ್ನಿಕೊಂಡದಲ್ಲಿ ಎದ್ದು ಮತ್ತೆ ಓಡುವ ವೇಳೆ ಎರಡು ಬಾರಿ ಬೆಂಕಿ ಕೆಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಸುಟ್ಟಗಾಯಗಳಿಗೆ ಒಳಗಾಗಿರುವ ರಮೇಶ್‍ರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  • ವಿಡಿಯೋ: ಅಗ್ನಿಕೊಂಡ ಹಾಯುವ ವೇಳೆ ಬಿದ್ದ ಅರ್ಚಕ

    ವಿಡಿಯೋ: ಅಗ್ನಿಕೊಂಡ ಹಾಯುವ ವೇಳೆ ಬಿದ್ದ ಅರ್ಚಕ

    ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮದ ಮಾರಮ್ಮ ದೇವಿ ಜಾತ್ರೆಯಲ್ಲಿ ಕೊಂಡ ಹಾಯುವ ವೇಳೆ ಅರ್ಚಕರು ಬಿದ್ದಿದ್ದಾರೆ.

    ರವಿ ಪೂಜಾರಿ ಕೊಂಡದಲ್ಲಿಯೇ ಬಿದ್ದ ಅರ್ಚಕ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೊಂಡದಲ್ಲಿ ಓಡಿ ಬರುತ್ತಿರುವಾಗ ರವಿ ಅಲ್ಲಿಯೇ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರೆಲ್ಲಾ ರವಿ ಅವರನ್ನು ಮೇಲೆಕ್ಕೆತ್ತಿದ್ದಾರೆ. ರವಿ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಒಂದು ತಿಂಗಳ ಹಿಂದೆ ಸಾತನೂರಿನ ಮಾರಮ್ಮದೇವಿ ಜಾತ್ರೆಯಲ್ಲಿಯೂ ಅಗ್ನಿಕೊಂಡ ಹಾಯಲು ಮುಂದಾದ ವ್ಯಕ್ತಿ ಬಿದ್ದು ಗಾಯಗೊಂಡಿದ್ದರು. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    https://youtu.be/kuyfjS55nPI